Monday, May 12, 2025

Vaisaka Pournami

 

ವೈಶಾಖ ಪೂರ್ಣಿಮೆ / ವೈಶಾಖ ಹುಣ್ಣಿಮೆ


Vaisaka Pournami / Vaisaka Full Moon

 


                                  Vaisaka Pournami

 

ಮಾಸಗಳಲ್ಲಿ ಎರಡನೆಯದು ವೈಶಾಖ ಮಾಸ. ಚಂದ್ರನು ಹುಣ್ಣಿಮೆ ದಿನ ವಿಶಾಖ ನಕ್ಷತ್ರಕ್ಕೆ ಬಂದಾಗ ವೈಶಾಖಮಾಸ ಆರಂಭವಾಗುತ್ತದೆ.ಈ ಮಾಸವನ್ನು ‘ಮಾಧವ’ ಮಾಸ ಎಂದೂ ಕರೆಯುತ್ತಾರೆ. ಏಕೆಂದರೆ ಇದು ಶ್ರೀಹರಿಗೆ ಪ್ರೀತಿಪಾತ್ರವಾಗಿದ್ದರಿಂದ ಈ ಮಾಸದಲ್ಲಿ ಬೆಲ್ಲ, ಎಳ್ಳು ಹಾಗೂ ವಸ್ತ್ರ ದಾನ ಮಾಡಿದರೆ ಫಲ ಹೆಚ್ಚು. ಹಾಗೆಯೇ ಛತ್ರಿ ದಾನ ಮಾಡಿದರೆ ಅಧಿಕ ಫಲ ಪಡೆಯಬಹುದು ಎಂದು ಶಾಸ್ತ್ರದಲ್ಲಿ ಹೇಳಿದೆ. ಈ ಮಾಸದಲ್ಲಿ ಅಧಿಕ ಬಿಸಿಲು ಇರುತ್ತದೆ. ವೈಶಾಖಮಾಸದ ಶುಕ್ಲ ಪಕ್ಷದ ತದಿಗೆ ದಿನವನ್ನು ಅಕ್ಷಯ ತದಿಗೆ ಎನ್ನುತ್ತಾರೆ. ಆ ದಿನ ಚಿನ್ನ, ಬೆಳ್ಳಿ ಹಾಗೂ ಹಣಕ್ಕೆ ಪೂಜೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಸಂಪತ್ತು ಹೆಚ್ಚಾಗುವುದು ಎಂಬ ನಂಬಿಕೆ.


ಅದೇ ದಿನ ಹಿಮಾಲಯದ ಗಂಗೋತ್ರಿ, ಬದರಿ, ಕೇದಾರ ಹಾಗೂ ಯಮನೋತ್ರಿಗಳಲ್ಲಿ ದೇವಾಲಯದ ಬಾಗಿಲು ತೆರೆಯುತ್ತಾರೆ. ಅಂದಿನಿಂದ ಆರು ತಿಂಗಳ ಕಾಲ ದರ್ಶನದ ಭಾಗ್ಯ ಇರುತ್ತದೆ.

ವೈಶಾಖಮಾಸದ ಶುದ್ಧ ಸಪ್ತಮಿ ಎಂದರೆ ಗಂಗಾವತಾರದ ದಿನ. ಅಂದರೆ ಗಂಗೆ ಹುಟ್ಟಿದ ದಿನ. ಅಂದು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ವಿಶೇಷ ಫಲ ಸಿಗುವುದು. ಗಂಗಾ ನದಿ ಹರಿಯುವ ಸ್ಥಳಗಳಲ್ಲಿ ಗಂಗಾ ಜಯಂತಿಯನ್ನು ಆಚರಿಸಿ ಗಂಗಾ ಆರತಿಯನ್ನು ಮಾಡುವರು. ವೈಶಾಖಮಾಸದ ಹುಣ್ಣಿಮೆ ದಿನ ಅಹಿಂಸಾ ಮಾರ್ಗದ ಪ್ರವರ್ತಕನಾದ ಗೌತಮ ಬುದ್ಧನ ಜಯಂತಿ. ಬಹುಳ ದಶಮಿಯಂದು ವಾಯು ಪುತ್ರ ಆಂಜನೇಯನ ಜಯಂತಿಯನ್ನು ಆಚರಿಸಲಾಗುವುದು. ವೀರಶೈವ ಪಂಥ ಪ್ರವರ್ತಕ ಹಾಗೂ ಪರಶುರಾಮನು ಜನನವಾಗಿದ್ದು ಈ ವೈಶಾಖಮಾಸದಲ್ಲಿಯೇ. ಆದ್ದರಿಂದ ವೈಶಾಖಮಾಸವನ್ನು ಜಯಂತಿಗಳ ಮಾಸ ಎಂದು ಕರೆಯಬಹುದು.

ಬುದ್ಧ ಪೂರ್ಣಿಮೆ, ವೈಶಾಖ ಪೂರ್ಣಿಮೆ


ಹಿಂದೂ ಧರ್ಮದಲ್ಲಿ ಪೂರ್ಣಿಮಾಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಧರ್ಮದಲ್ಲಿನ ಕ್ಯಾಲೆಂಡರ್ ಮತ್ತು ಹಿಂದೂ ಪಂಚಾಗದ ದಿನಾಂಕವು ಚಂದ್ರನ ಪ್ರಕಾರ ಬದಲಾಗುತ್ತದೆ. ಹುಣ್ಣಿಮೆ ಎಂದರೇನು? ಇದು ಚಂದ್ರನು ಸಂಪೂರ್ಣವಾಗಿ ಗೋಚರಿಸುವ ರಾತ್ರಿ. 30 ದಿನಕ್ಕೊಮ್ಮೆ ಹುಣ್ಣಿಮೆ ರಾತ್ರಿ ಬರುತ್ತದೆ, ತಿಂಗಳಿಗೊಮ್ಮೆ ಹುಣ್ಣಿಮೆ ಬರುತ್ತದೆ ಎಂದು ಹೇಳಬಹುದು. ಚಂದ್ರನ ಕಡಿಮೆಯಾಗುವ ಮತ್ತು ಹೆಚ್ಚುತ್ತಿರುವ ಭಾಗವನ್ನು ಎರಡು ವಿಧ ಎಂದು ಕರೆಯಲಾಗುತ್ತದೆ:


ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ .ವೈಶಾಖ ಪೂರ್ಣಿಮೆಯ ದಿನ, ಸೂರ್ಯ ಮತ್ತು ಚಂದ್ರನ ಸ್ಥಾನವು ಒಂದೇ ಆಗಿರುತ್ತದೆ, ಈ ಕಾರಣದಿಂದಾಗಿ ಈ ದಿನದ ಪ್ರಾಮುಖ್ಯತೆಯು ಹೆಚ್ಚಾಗುತ್ತದೆ. ಈ ದಿನದಿಂದಲೇ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ.ಹಿಂದೂ ಆಚರಣೆಗಳಲ್ಲಿ ಹುಣ್ಣಿಮೆಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಕೆಲವೊಂದು ಹುಣ್ಣಿಮೆಗಳು ಇತರವೆಲ್ಲಕ್ಕಿಂತ ಹೆಚ್ಚು ವಿಶೇಷ. ಅಂಥದೊಂದು ವಿಶೇಷ ಹುಣ್ಣಿಮೆ ಈ ಬಾರಿ ಬರುತ್ತಿದೆ. ಅದೇ ವೈಶಾಖ ಹುಣ್ಣಿಮೆ. ವೈಶಾಖ ಮಾಸದ ಈ ಹುಣ್ಣಿಮೆಯ ದಿನವೇ ಭಗವಾನ್ ಬುದ್ಧ ಜನಿಸಿದ್ದು. ಹಾಗಾಗಿ ಇದನ್ನು ಬುದ್ಧ ಪೂರ್ಣಿಮಾ(ಬುದ್ಧ ಜಯಂತಿ) ಎಂದೂ ಬುದ್ಧನ ಅನುಯಾಯಿಗಳು ಆಚರಣೆ ಮಾಡುತ್ತಾರೆ. ಇದಲ್ಲದೆ, ಇದನ್ನು ವೈಶಾಖ ಸ್ನಾನ ಎಂದೂ ಕರೆಯುತ್ತಾರೆ.

ಪ್ರತಿ ಹುಣ್ಣಿಮೆಯನ್ನು ವಿಶೇಷವೆಂದು ಪರಿಗಣಿಸಲಾಗಿದ್ದರೂ, ಕಾರ್ತಿಕ ಮಾಸದಲ್ಲಿನ ಕಾರ್ತಿಕ ಪೂರ್ಣಿಮಾವನ್ನು ಮತ್ತು ವೈಶಾಖ ತಿಂಗಳ ವೈಶಾಖ ಹುಣ್ಣಿಮೆಯನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಈ ಬಾರಿ ವೈಶಾಖ ತಿಂಗಳ ಹುಣ್ಣಿಮೆ ಮೇ 12 ರಂದು ಬಂದಿದೆ ಮತ್ತು ಈ ದಿನದ ವಿಷ್ಣು ಮತ್ತು ಚಂದ್ರ ಪೂಜೆಯನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ವರ್ಷದ ಮೊದಲ ಚಂದ್ರ ಗ್ರಹಣ ಸಹ ಹುಣ್ಣಿಮೆಯಂದು ನಡೆಯಲಿದೆ, ಈ ಕಾರಣದಿಂದಾಗಿ ಈ ಹುಣ್ಣಿಮೆಯ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗಿದೆ.

 

                                                                 another Picture

 

ವೈಶಾಖ ಪೌರ್ಣಮಿ ಪೂಜೆ ವಿಧಾನ:


ಹುಣ್ಣಿಮೆ ಮತ್ತು ಅಮಾವಾಸ್ಯೆ ತಿಥಿಯಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮಹತ್ವವನ್ನು ತಿಳಿಸಲಾಗಿದೆ. ಆದರೆ ಕರೋನಾ ಅವಧಿಯಲ್ಲಿ ಮನೆಯಿಂದ ನದಿಗಳಿಗೆ ಹೋಗಲು ಸಾಧ್ಯವಾಗದಿದ್ದರೆ, ಈ ಬಾರಿ ಕೆಲವು ಹನಿ ಗಂಗಾ ನೀರನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಬೇಕು. ಇದು ಪವಿತ್ರ ನದಿಗಳ ನೀರಿನಲ್ಲಿ ಸ್ನಾನ ಮಾಡಿದಷ್ಟೇ ಪಾವಿತ್ರತೆಯನ್ನು ನೀಡುತ್ತದೆ.


ಮನೆಯ ದೇವರ ಕೋಣೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಗಂಗಾ ನೀರನ್ನು ದೇವರ ಕೋಣೆಯಲ್ಲಿ ಸಾಧ್ಯವಾದರೆ ಸಂಪೂರ್ಣ ಮನೆಯಲ್ಲಿ ಸಿಂಪಡಿಸಿ.
ಪೂಜೆಗೆ ದೇವರುಗಳನ್ನು ಆಹ್ವಾನಿಸಲು, ಎಲ್ಲಾ ದೇವರು ಮತ್ತು ದೇವತೆಗಳಿಗೆ ನಮಸ್ಕಾರವನ್ನು ಮಾಡಿ.


ಮೊದಲನೆಯದಾಗಿ, ವಿಷ್ಣುವಿನ ಚಿತ್ರವನ್ನು ಅಥವಾ ಪ್ರತಿಮೆಯನ್ನು ಪೀಠದ ಮೇಲೆ ಅಥವಾ ಮರದ ಹಲಗೆಯ ಮೇಲಿಟ್ಟು, ವಿಷ್ಣುವನ್ನು ಅರಿಶಿನದಿಂದ ಅಭಿಷೇಕಿಸಿ.


ವಿಷ್ಣುವಿನ ಪೂಜೆಯಲ್ಲಿ ತಪ್ಪದೇ ತುಳಸಿ ಸಸ್ಯವನ್ನು ಇಡಬೇಕು. ತುಳಸಿಯು ವಿಷ್ಣುವಿಗೆ ಅತ್ಯಂತ ಪ್ರಿಯವಾದ್ದರಿಂದ ತಪ್ಪದೇ ತುಳಸಿಯನ್ನು ವಿಷ್ಣು ದೇವರಿಗೆ ಅರ್ಪಿಸಬೇಕು.


ಪೌರ್ಣಮಿ ದಿನವು ಲಕ್ಷ್ಮಿ ದೇವಿಯ ಪೂಜೆಗೆ ವಿಶೇಷತೆಯನ್ನು ಹೊಂದಿದೆ. ಪೌರ್ಣಮಿ ದಿನವು ಪ್ರತ್ಯೇಕವಾಗಿ ಲಕ್ಷ್ಮಿಯ ದಿನವಾಗಿದೆ. ಆದ್ದರಿಂದ ಈ ದಿನ ಭಗವಾನ್‌ ವಿಷ್ಣುವನ್ನು ಪೂಜಿಸುವುದರೊಂದಿಗೆ ಲಕ್ಷ್ಮಿ ದೇವಿಯನ್ನು ಕೂಡ ಪೂಜಿಸಬೇಕು. ಮತ್ತು ಲಕ್ಷ್ಮಿ ಆರತಿಯನ್ನು ಪಠಿಸಬೇಕು.


ಈ ದಿನ ವ್ರತವನ್ನು ಮಾಡುವವರು ಕೇವಲ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು ಮತ್ತು ಈ ದಿನ ವಿಷ್ಣು ಹಾಗೂ ಲಕ್ಷ್ಮಿಗೂ ಕೂಡ ಸಾತ್ವಿಕ ಆಹಾರವನ್ನೇ ಅರ್ಪಿಸಬೇಕು.
ಈ ದಿನದಂದು, ಚಂದ್ರನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದ್ದರಿಂದ, ರಾತ್ರಿಯಲ್ಲಿ ಚಂದ್ರನು ಉದಯಿಸಿದ ನಂತರ, ಚಂದ್ರನಿಗೆ ನೀರನ್ನು ಅರ್ಪಿಸಿ ಮತ್ತು ಉಪವಾಸವನ್ನು ಆಚರಿಸಿ.



ವೈಶಾಖ ಪೌರ್ಣಮಿ ದಿನದಂದು ನಾವು ಈ ಮೇಲಿನಂತೆ ಲಕ್ಷ್ಮಿ ದೇವಿಯನ್ನು ಮತ್ತು ವಿಷ್ಣುವನ್ನು ಪೂಜಿಸುವುದರಿಂದ ಹಣದ ಸಮಸ್ಯೆ ದೂರಾಗುವುದು, ಸಂಪತ್ತು ಅಭಿವೃದ್ಧಿಯಾಗುವುದು, ಮನೆಯಲ್ಲಿನ ನಕಾರಾತ್ಮಕ ಅಂಶಗಳು ದೂರಾಗಿ ಮನೆಯಲ್ಲಿ ಸಕಾರಾತ್ಮಕತೆ ರೂಪುಗೊಳ್ಳಲು ಆರಂಭವಾಗುತ್ತದೆ. ಈ ದಿನ ತುಳಸಿಯನ್ನು, ವಿಷ್ಣುವನ್ನು ಮತ್ತು ಲಕ್ಷ್ಮಿ ದೇವಿಯನ್ನು ಕೂಡ ಪೂಜಿಸುವುದರಿಂದ ಮೂರು ಪ್ರಮುಖ ಶಕ್ತಿಗಳ ಆಶೀರ್ವಾದ ಸಿಗುವುದು.

 

-------------- Hari Om ------------




No comments:

Post a Comment