Wednesday, January 24, 2024

GURU Pushya Yoga

 

Guru Pushya Yoga


ಗುರು ಪುಷ್ಯ ಯೋಗ: ಈ ದಿನ ಯಾವೆಲ್ಲ ಕೆಲಸ ಕಾರ್ಯಗಳಿಗೆ ಶುಭದಿನ ಗೊತ್ತಾ ? Guru Pushya Yoga –  Thursday ---- 25th January 2024.

 

ಭಾರತೀಯ ಜ್ಯೋತಿಷ್ಯದ ಪ್ರಕಾರ ಕೆಲವು ತಿಥಿ, ನಕ್ಷತ್ರ ಹಾಗೂ ದಿನಗಳ ಸಂಯೋಜನೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಶುಭ ದಿನದಂದು ಕೆಲವು ಕಾರ್ಯಗಳನ್ನು ಕೈಗೊಂಡರೆ ಅಥವಾ ಹೊಸದನ್ನು ಪ್ರಾರಂಭಿಸಿದರೆ ಶುಭವೆಂದು ಹೇಳಲಾಗುತ್ತದೆ.


ಈ ಶುಭ ಸಮಯ ಅಥವಾ ಶುಭ ಮುಹೂರ್ತವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ಅಂತಹ ಶುಭ ದಿನದಲ್ಲಿ ಗುರು ಪುಷ್ಯ ಯೋಗವೂ ಒಂದು. ಪುಷ್ಯಾ ನಕ್ಷತ್ರವು ಗುರುವಾರದಂದು ಬಂದರೆ ಅದನ್ನು ಗುರು ಪುಷ್ಯ ಯೋಗವೆಂದು ಕರೆಯಲಾಗುತ್ತದೆ. ಈ ಯೋಗದ ಮಹತ್ವ ಹಾಗೂ ಈ ತಿಂಗಳಲ್ಲಿ ಗುರು ಪುಷ್ಯ ಯೋಗ ಯಾವಾಗ ಬರಲಿದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.


ಗುರು ಪುಷ್ಯ ಯೋಗ ಎಂದರೆ ?

ಯಾವಾಗ ಪುಷ್ಯಾ ನಕ್ಷತ್ರವು ಗುರುವಾರದ ದಿನ ಬೀಳುತ್ತದೆಯೋ ಆ ಶುಭ ಯೋಗವನ್ನು ಗುರು ಪುಷ್ಯ ಯೋಗವೆಂದು ಕರೆಯುತ್ತಾರೆ. ಈ ಯೋಗವನ್ನು ಗುರು ಪುಷ್ಯ ಅಮೃತ ಯೋಗವೆಂದೂ ಕರೆಯುತ್ತಾರೆ. ಗುರುಗ್ರಹವು ಜ್ಞಾನದ ಸಂಕೇತವಾಗಿದೆ. ಇದಲ್ಲದೇ ಗುರುವನ್ನು ಅತ್ಯಂತ ಶುಭಗ್ರಹವೆಂದು ಕರೆಯುತ್ತಾರೆ. ಇದಲ್ಲದೇ ಪುಷ್ಯಾ ನಕ್ಷತ್ರವನ್ನೂ ಮೃದು ಹಾಗೂ ಶುಭವೆಂದು ಪರಿಗಣಿಸಲಾಗಿದೆ.


ಇದನ್ನು ಮಹಾನಕ್ಷತ್ರವೆಂದೂ ಕರೆಯುತ್ತಾರೆ. ಈ ಗುರು ಗ್ರಹ ಹಾಗೂ ಪುಷ್ಯಾ ನಕ್ಷತ್ರ ಸೇರಿದಾಗ ಉತ್ತಮ ಅವಧಿ ಪ್ರಾರಂಭಗೊಳ್ಳುತ್ತದೆ. ಈ ಅವಧಿಯಲ್ಲಿ ಕೈಗೊಂಡ ಯಾವುದೇ ಚಟುವಟಿಕೆಯು ಶುಭವಾಗಿ ಪರಿಣಮಿಸುತ್ತದೆ. ಇದೇ ಪುಷ್ಯಾ ನಕ್ಷತ್ರವು ಭಾನುವಾರ ಬಂದರೆ ಅದನ್ನು ರವಿಪುಷ್ಯ ಯೋಗವೆಂದು ಕರೆಯುತ್ತಾರೆ. ಈ ತಿಂಗಳ ಜನವರಿ 25 ರಂದು ಗುರುವಾರ ಶುಭಯೋಗವಾದ ಗುರು ಪುಷ್ಯ ಯೋಗ ಉಂಟಾಗಲಿದೆ.

ದೀರ್ಘಾವಧಿಯ ಫಲ ನೀಡುವ ಈ ಯೋಗ

ಯಾವುದೇ ಶುಭ ಕಾರ್ಯವನ್ನು ಈ ದಿನ ಪ್ರಾರಂಭಿಸಬಹುದು. ಆದರೆ ಈ ಶುಭ ಯೋಗದಲ್ಲಿ ಮದುವೆಯ ಆಚರಣೆಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಯೋಗವು ಮದುವೆಯ ವಿಚಾರದಲ್ಲಿ ಶಾಪಗ್ರಸ್ತ ಯೋಗವಾಗಿದೆ. ವಿಶೇಷ ಲಾಭವನ್ನು ಪಡೆಯಲು ಮಾಡುವಂತಹ ಹವನಗಳಿಗೆ ಈ ದಿನ ಅತ್ಯಂತ ಶುಭ ಹಾಗೂ ಫಲದಾಯಕ.


ಗುರು ಪುಷ್ಯ ಯೋಗದಂದು ಗುರು ಮಂತ್ರವನ್ನು ಪಠಿಸಬಹುದು. ವ್ಯವಹಾರಕ್ಕೆ ಸಂಬಂಧಪಟ್ಟ ಮಾತುಕತೆಗೂ ಇದು ಶುಭದಿನ. ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವಂತೆ ಶನಿ ಮತ್ತು ಗುರು ಇಬ್ಬರೂ ಈ ಯೋಗದ ಮೇಲೆ ಶುಭ ಪರಿಣಾಮವನ್ನು ಬೀರುತ್ತಾರೆ. ಆದ್ದರಿಂದ ದೀರ್ಘಕಾಲದವರೆಗೆ ಪ್ರಯೋಜನ ಪಡೆಯುವಂತಹ ಕೆಲಸಗಳನ್ನು ಈ ಯೋಗದಲ್ಲಿ ಪ್ರಾರಂಭಿಸಬೇಕು.

ಯಾವ ಕಾರ್ಯಗಳನ್ನು ಮಾಡಬಹುದು ಗೊತ್ತಾ ?

ಗುರುಪುಷ್ಯಯೋಗವು ಈ ಕೆಳಗೆ ಹೇಳಿರುವಂತಹ ಕಾರ್ಯಗಳ ಆರಂಭಕ್ಕೆ ಅತ್ಯಂತ ಶುಭದಿನವಾಗಿದೆ.

ಹೊಸ ಕಟ್ಟಡ ನಿರ್ಮಾಣಕ್ಕೆ ಶಿಲಾಕಲ್ಲು ಹಾಕಲು
ಮಂತ್ರ-ತಂತ್ರವನ್ನು ಕಲಿಯಲು ಹಾಗೂ ತಂದೆ, ಅಜ್ಜ, ಗುರುವು ಕಲಿತ ಜ್ಞಾನವನ್ನು ಸಂಪಾದಿಸಲು.
ಹೊಸ ಅಂಗಡಿ-ಕಚೇರಿಯ ಉದ್ಘಾಟನೆಗೆ
ಚಿನ್ನ ಮತ್ತು ಆಭರಣಗಳ ಖರೀದಿಗೆ ಶುಭ ದಿನ
ಹೊಸ ಮನೆ ಖರೀದಿಗೆ ಅಥವಾ ಹೊಸ ಮನೆ ಸ್ಥಳಾಂತರಕ್ಕೆ ಶುಭದಿನ
ದೊಡ್ಡ ವ್ಯವಹಾರಗಳನ್ನು ಆರಂಭಿಸಲೂ ಗುರು ಪುಷ್ಯ ಯೋಗವು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.


ಗುರು ಪುಷ್ಯ ಯೋಗದಲ್ಲಿ ಮದುವೆಯು ಅಶುಭ


ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮನು ತನ್ನ ಪುತ್ರಿಯಾದ ಸರಸ್ವತಿಯ ಮದುವೆ ಮಾಡಲು ನಿರ್ಧರಿಸುತ್ತಾನೆ. ಮದುವೆ ದಿನ ಬ್ರಹ್ಮನು ತನ್ನ ಮಗಳ ಅಪ್ರತಿಮ ಸೌಂದರ್ಯವನ್ನು ನೋಡಿ, ಆಕರ್ಷಿತನಾಗುತ್ತಾನೆ. ಮನಸ್ಸು ಗೊಂದಲಕ್ಕೊಳಗಾಗುತ್ತದೆ. ತಾನೇ ತನ್ನ ಸ್ವಂತ ಪುತ್ರಿಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಬ್ರಹ್ಮನ ಈ ಮೋಹವು ಭಂಗವಾಗುತ್ತದೆ.

 

ಇದರಿಂದ ಕೋಪಿಷ್ಠನಾದ ಬ್ರಹ್ಮನು ಪುಷ್ಯಾ ನಕ್ಷತ್ರವನ್ನು ಶಾಪಕ್ಕೀಡು ಮಾಡುತ್ತಾನೆ. ಅದೇನೆಂದರೆ ಯಾರು ಪುಷ್ಯಾ ನಕ್ಷತ್ರದಲ್ಲಿ ಮದುವೆಯಾಗುತ್ತಾರೋ ಅವರ ವೈವಾಹಿಕ ಜೀವನವು ವಿಫಲವಾಗಲಿ ಎಂದು ಈ ನಕ್ಷತ್ರಪುಂಜವನ್ನು ಶಪಿಸಿದನು. ಅಂದಿನಿಂದ ಪುಷ್ಯಾ ನಕ್ಷತ್ರದಲ್ಲಿ ವಿವಾಹ ವಿಧಿಗಳನ್ನು ನೆರವೇರಿಸಲಾಗುವುದಿಲ್ಲ.



ಹೊಸ ಯೋಜನೆಗಳಿಗೆ ಸಕಾಲ ಈ ತಿಂಗಳಲ್ಲಿ ಗುರು ಮತ್ತು ಶನಿಯ ವಕ್ರ ಚಲನೆಯು ಸ್ವಲ್ಪ ಸಮಾಧಾನಕರವಾಗಿರುತ್ತದೆ. ಅನೇಕ ಸ್ಥಗಿತಗೊಂಡಿರುವ ಯೋಜನೆ ಗಳು ಮತ್ತು ಕಾರ್ಯಗಳು ಆರಂಭಗೊಳ್ಳುವುದು.


ವೈದ್ಯಕೀಯ ಕ್ಷೇತ್ರದಲ್ಲೂ ಉತ್ತಮ ಫಲಿತಾಂಶಗಳು ಸಿಗುವುದು. ಜನರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇದರ ಪ್ರತಿಫಲವು ಮುಂದಿನ ದಿನಗಳನ್ನು ಉತ್ತಮವಾಗಿರಿಸುವುದು.

 

----------------- Hari Om ----------------

Guru Pushya Amrita Siddi Yoga

 

                                                                        Guru Pushya Yoga

 

 

ಗುರು-ಪುಷ್ಯ ಅಮೃತ ಸಿದ್ಧಿ ಯೋಗ / Guru Pushya Amrita Siddi 

Yoga


‌ ‌ ಇದೇ ಜನವರಿ 25, ಗುರುವಾರ. ಪುಷ್ಯ ನಕ್ಷತ್ರ ಗುರುವಾರದ ದಿನ ಬಂದಿದೆ.


 ‌ ನಕ್ಷತ್ರ ಪ್ರಾರಂಭ ಸಮಯ : ಗುರುವಾರ ಹಗಲು 08:15 ಗಂಟೆಯಿಂದ


ನಕ್ಷತ್ರ ಮುಗಿಯುವ ಸಮಯ : ಶುಕ್ರವಾರ ಹಗಲು 10:27 ಗಂಟೆಯವರೆಗೆ ‌‌ 

 

‌ ‌ 👉 ಈ ದಿನ ಗುರು ದತ್ತಾತ್ರೇಯ, ದಕ್ಷಿಣಾಮೂರ್ತಿ, ಬೃಹಸ್ಪತಿ, ರಾಘವೇಂದ್ರ, ಸಾಯಿಬಾಬಾ ಮಂತ್ರ ಅಥವಾ ಸ್ತೋತ್ರ ಗಳನ್ನು ಜಪ - ಪಾರಾಯಣ ಮಾಡಿ. ಈ ದೇವರ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯಿರಿ. ‌

‌ 👉 ಜಾತಕದಲ್ಲಿ ಗುರು ಪೀಡಿತನಾಗಿದ್ದರೆ ಅಥವಾ ಬಲಹೀನನಾಗಿದ್ದರೆ ಅಥವಾ ಪ್ರಸ್ತುತ ಗುರುಬಲ ಇಲ್ಲದ ರಾಶಿಗಳು (ಮೇಷ, ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ, ಕುಂಭ) ಪರಿಹಾರ ಮಾಡಿಕೊಳ್ಳುವುದು ಪರಿಣಾಮಕಾರಿ. ವಿಶೇಷವಾಗಿ ಮೇಷ, ವೃಷಭ, ಕಟಕ ಮತ್ತು ಮಕರ ರಾಶಿ ಸಂಜಾತರು

 

‌ ‌ 👉 ಗುರುವಿನ ಅನುಗ್ರಹ ಹೊಂದಲು ಈ ದಿನ - ಕಡಲೆಬೇಳೆ, ಹಳದಿ ಹೂವುಗಳು, ಹಳದಿ ಹಣ್ಣುಗಳು, ‌ಹಳದಿ ಅಥವಾ ಕೇಸರಿ ವಸ್ತ್ರ, ದೇವತಾ ಮೂರ್ತಿ ಅಥವಾ ಪೋಟೋ, ಧಾರ್ಮಿಕ ಗ್ರಂಥಗಳು, ಹಳದಿ ಸಿಹಿ ತಿನಿಸುಗಳು.... ಇತ್ಯಾದಿ ವಸ್ತುಗಳನ್ನು ದಕ್ಷಿಣೆ ಸಹಿತವಾಗಿ - ಗುರು ಅಥವಾ ಗುರು ಸಮಾನರಾದವರಿಗೆ ದಾನ ಮಾಡಿ. ‌ ‌

👉 ಈ ದಿನ ಗುರು ಸೇವೆ ಮಾಡಿ, ಗುರುಗಳ ಆಶೀರ್ವಾದ ಪಡೆಯಿರಿ.

 

-------------- Hari Om --------------

Sunday, January 7, 2024

Saphala Ekadasi

 

ಸಫಲಾ ಏಕಾದಶೀ Saphala Ekadasi -- 7th January 2024

 

                                                          Hari Smarane Mado Nirantara

 

ಇಂದಿನ ದಿನ ಇರುವ ಈ ಸಫಲಾ ಏಕಾದಶಿಯ ವಿಶೇಷ ಮಹತ್ತ್ವವನ್ನು ಗ್ರಂಥಗಳಲ್ಲಿ ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಈ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಮತ್ತು ಸಾವಿರಾರು ವರ್ಷಗಳ ತಪಸ್ಸಿಗೆ ಸಮಾನವಾದ ಪುಣ್ಯ ಫಲವನ್ನು ಪಡೆಯುತ್ತಾನೆ.


ಯುಧಿಷ್ಠಿರನ ಕೋರಿಕೆಯ ಮೇರೆಗೆ ಶ್ರೀಕೃಷ್ಣನು ಏಕಾದಶೀ ಉಪವಾಸದ ವಿಧಿ ವಿಧಾನಗಳು ತನಗೆ ತೃಪ್ತಿಯನ್ನು ನೀಡುವಷ್ಟು ಯಾವುದೇ ದೊಡ್ಡ ಯಜ್ಞಗಳೂ ನೀಡಲಾರವು ಎನ್ನುವುದನ್ನು ತಿಳಿಸುವನು. ಇದು ಪದ್ಮ ಪುರಾಣದ ವಚನ. ಸಫಲಾ ಏಕಾದಶಿಯು ಕಲ್ಯಾಣ ಮತ್ತು ಅದೃಷ್ಟವನ್ನು ದಯಪಾಲಿಸುತ್ತದೆ ಎಂದು ಪರಿಗಣಿಸಲಾಗಿದೆ ಮತ್ತು ಈ ದಿನದಂದು ಪ್ರಾಮಾಣಿಕ ಹೃದಯದಿಂದ ವಿಷ್ಣುವನ್ನು ಆರಾಧಿಸಿದರೆ ವೈಕುಂಠ ಧಾಮ ಪ್ರಾಪ್ತಿಯಾಗುತ್ತದೆ.


ಈ ಉಪವಾಸದ ಪರಿಣಾಮದಿಂದಾಗಿ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಮತ್ತು ನಕಾರಾತ್ಮಕ ವಿಚಾರಗಳು ಕೊನೆಗೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ.

 

                                                                  Saphala Ekadasi
 

ಸಫಲ ಏಕಾದಶಿ

ಸಫಲಾ ಏಕಾದಶಿ ವ್ರತ ವಿಧಾನ


ಸಫಲಾ ಏಕಾದಶಿಯ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶೌಚವಿಧಿಯನ್ನು ಪೂರೈಸಿ, ಪ್ರಾತಃ ಸ್ತೋತ್ರ ಪಠನಾನಂತರ ಸ್ನಾನ ಸಂಧ್ಯಾದಿಗಳ ಪೂರೈಸಿ ವಿಷ್ಣುವನ್ನು ಧ್ಯಾನಿಸಿ, ಉಪವಾಸ ವ್ರತವನ್ನು ಕೈಗೊಳ್ಳಿ.


ಪೂಜೆಗಾಗಿ, ವಿಷ್ಣುವನ್ನು ಪೂಜಿಸಬೇಕು.


ಏಕಾದಶಿಯಂದು ಯಾರು ಉಪವಾಸ ಇರುತ್ತಾರೋ ಅವರು ಸದಾ ಒಳ್ಳೆಯ ನಡತೆಯನ್ನು ಅನುಸರಿಸಬೇಕು. ವ್ರತವನ್ನು ಆಚರಿಸುವವರು ದಶಮಿಯ ದಿನದಿಂದ ವಿಷ್ಣುವನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು.ಅಂದೇ ದಿನತ್ರಯ ವ್ರತದ ಸಂಕಲ್ಪ ಮಾಡಬೇಕು.


ಏಕಾದಶಿಯ ದಿನ ಹಾಸಿಗೆಯ ಮೇಲೆ ಮಲಗದೇ ನೆಲದ ಮೇಲೆ ಮಲಗಿ ರಾತ್ರಿ ಜಾಗರಣೆ ಮಾಡಬೇಕು.
ದ್ವಾದಶೀ ಒಂದು ಭೋಜನ ಮಾತ್ರ. ರಾತ್ರಿ ದೇವರನ್ನು ಮಲಗಿಸಿ ಈ ದಿನತ್ರಯ ವ್ರತವನ್ನು ಪರಮಾತ್ಮನಿಗರ್ಪಿಸಬೇಕು.



ಶ್ರೀಮಧ್ವೇಶಾರ್ಪಣಮಸ್ತು    ------------- Hari Om --------------


Tuesday, January 2, 2024

Dhanur Masa

 

ಧನುರ್ಮಾಸ ಹಿನ್ನೆಲೆ, ಪೂಜಾ ವಿಧಾನ, ಮಹತ್ವ..!


Dhanur Masa 

 


                            Dhanurmasa - Importance

 

ಇದೇ ಧನುರ್ಮಾಸ ಡಿಸೆಂಬರ್ 17ರಂದು ಪ್ರಾರಂಭವಾಗುತ್ತದೆ ಮತ್ತು 2023 ಜನವರಿ 14 ರಂದು ಕೊನೆಗೊಳ್ಳುತ್ತದೆ. ಅಂದರೆ ಮಕರ ಸಂಕ್ರಾಂತಿಯಂದು ಕೊನೆಗೊಳ್ಳುತ್ತದೆ. ಬಹಳಷ್ಟು ಮಂದಿ ಮಾಸ, ದಿನ, ಗಳಿಗೆಯನ್ನು ಲೆಕ್ಕಿಸದೆ ತಮಗೆ ಬೇಕಾದ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ಪ್ರಾರಂಭಿಸುತ್ತಾರೆ.



ಶ್ರೀಕೃಷ್ಣನಿಗೆ ಪ್ರಿಯವಾದ ಮಾಸ:

ಕೃಷ್ಣನ ಪರಮ ಭಕ್ತರಿಗೆ ತುಂಬಾ ಪ್ರಿಯವಾದ ಮಾಸ. ಏಕೆಂದರೆ ಕೃಷ್ಣ ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ-ಆಂಡಾಳ್, ಒಬ್ಬ ಸಾಮಾನ್ಯ ಹುಡುಗಿಯಾಗಿ ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚನ್ನಾಗಿ ಕಾಣಿಸುತ್ತದೆ ಎಂದ ಮೇಲೆ ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು..

 

                                                                     Lord Vishnu   

 

ಧನುರ್ಮಾಸದ ಮಹತ್ವ:

 

ಧನುರ್ಮಾಸದ ಸಮಯದಲ್ಲಿ ಬರುವ ಏಕಾದಶಿಯನ್ನು ಅತ್ಯಂತ ಮಂಗಳಕರವೆಂದು ಭಾವಿಸಲಾಗಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಧನುರ್ಮಾಸದಲ್ಲಿ ಚಂದ್ರನ ಬೆಳವಣಿಗೆಯ ಹಂತದಲ್ಲಿ ಬರುವ ವೈಕುಂಠ ಏಕಾದಶಿಯು ಮೋಕ್ಷ ದ್ವಾರಂ ಎಂದೆ ಹೆಸರುವಾಸಿಯಾಗಿದೆ. ಈ ದಿನ ದೇವಾಲಯದ ಏಳು ಬಾಗಿಲುಗಳನ್ನು ಹಾದುಹೋಗಲು ಭಕ್ತರಿಗೆ ಮೋಕ್ಷ ದೊರಕದಂತೆ ಎಂಬ ನಂಬಿಕೆ ಇದೆ. ಧನುರ್ಮಾಸದಲ್ಲಿ ಬೆಳಗಿನಜಾವದಲ್ಲಿ ವಿಷ್ಣುವಿನ ಆರಾಧನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಲಾಗುತ್ತದೆ. ಪಠಿಸುವ ಇತರ ಪ್ರಮುಖ ಮಂತ್ರಗಳು ಲಕ್ಷ್ಮೀ ದೇವಿಗೆ ಸಮರ್ಪಿತವಾಗಿವೆ.. ಧನುರ್ ಸಂಕ್ರಮಣ ಎಂದು ಕರೆಯಲ್ಪಡುವ ಧನುರ್ ರಾಶಿಯಲ್ಲಿ ಸೂರ್ಯನ ಪ್ರವೇಶದಿಂದ ಧನುರ್ಮಾಸದ ಆರಂಭವನ್ನು ಗುರುತಿಸಲಾಗಿದೆ, ಆದ್ದರಿಂದ ಆ ಕಾಲಕ್ಕೆ ಧನುರ್ಮಾಸ ಎಂದು ಹೆಸರು.


ಈ ತಿಂಗಳಲ್ಲಿ ಸೂರ್ಯ ಧನುರ್ ರಾಶಿಯನ್ನು ತಿಂಗಳ ಕೊನೆಯಲ್ಲಿ ಮಕರ ರಾಶಿಯನ್ನು ಪ್ರವೇಶಿಸುವವರೆಗೆ ಧನುರ್ಮಾಸ ಇರುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು. ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ.



ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.



ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಬರುವ ಧನುರ್ಮಾಸ, ಧನುರ್ ಮಾಸವನ್ನು ಶೂನ್ಯ ಮಾಸಂ ಅಥವಾ ಕರ್ಮ ಎಂದು ಪರಿಗಣಿಸಲಾಗುತ್ತದೆ. ಧನುರ್ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳನ್ನು ಸಹ ಮಾಡುವುದಿಲ್ಲ..

 

                                                         Lord Ranganatha Swamy

 

ಮಾರ್ಗಶೀರ್ಷ ಮಾಸದಲ್ಲಿ ಯಮುನಾ ನದಿ ಸ್ನಾನ:

ಮಾರ್ಗಶೀರ್ಷ ತಿಂಗಳಲ್ಲಿ, ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಎಲ್ಲಾ ಆಸೆಗಳು ಈಡೇರುತ್ತದೆ. ಮಾರ್ಗಶೀರ್ಷ ಮಾಸದಲ್ಲಿ ಓರ್ವ ವ್ಯಕ್ತಿಯು ಯಮುನಾ ನದಿಯಲ್ಲಿ ಸ್ನಾನ ಮಾಡುವುದರಿಂದ ತನ್ನೆಲ್ಲಾ ಪಾಪಗಳಿಂದ ಮುಕ್ತಿಯನ್ನು ಹೊಂದಬಹುದೆಂದು ಶ್ರೀಕೃಷ್ಣನು ಗೋಪಿಗಳಿಗೆ ಹೇಳಿದ್ದನು. ಇದರ ನಂತರ ಮಾರ್ಗಶೀರ್ಷ ಮಾಸದಲ್ಲಿ ನದಿ ಸ್ನಾನದ ವಿಶೇಷ ಸಂಪ್ರದಾಯ ಆರಂಭವಾಯಿತು.



ಮಾರ್ಗಶೀರ್ಷದಲ್ಲಿ ವಿಷ್ಣು ಪೂಜೆ

 

ಮಾರ್ಗಶೀರ್ಷ ತಿಂಗಳಲ್ಲಿ ಸಾಧ್ಯವಾದಾಗಲೆಲ್ಲಾ, ಯಮುನಾ ನದಿಯಲ್ಲಿ ಒಮ್ಮೆ ಸ್ನಾನ ಮಾಡಿ, ಶ್ರೀಕೃಷ್ಣನನ್ನು ಆರಾಧಿಸಿದರೆ ಅದು ಫಲಪ್ರದವಾಗಿದೆ. ಈ ತಿಂಗಳಲ್ಲಿ ವಿಷ್ಣುವನ್ನು ಪೂಜಿಸಿ. ಅವರಿಗೆ ತುಳಸಿ ಎಲೆಗಳನ್ನು ತ್ಪಪದೇ ಅರ್ಪಿಸಿ. ನಂತರ ಅದನ್ನು ಪ್ರಸಾದ ಎಂದು ತೆಗೆದುಕೊಳ್ಳಿ. ಈ ಪವಿತ್ರ ಮಾರ್ಗಶೀರ್ಷ ತಿಂಗಳಲ್ಲಿ ಶಂಖವನ್ನು ಕೂಡ ಪೂಜಿಸಿ. ಅದರಲ್ಲಿ ಪವಿತ್ರ ನೀರನ್ನು ತುಂಬಿಸಿ ಅದರಿಂದ ಭಗವಾನ್‌ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ. ನಂತರ ಸಂಪೂರ್ಣ ಮನೆಯಲ್ಲಿ ಶಂಖದ ನೀರನ್ನು ಸಿಂಪಡಿಸಿ. ಇದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಗೆ ಕಾರಣವಾಗುತ್ತದೆ.


ಕಾತ್ಯಾಯಿನಿ ವ್ರತ ಭಾಗವತ ಪುರಾಣದಲ್ಲಿ ಧನುರ್ಮಾಸದ ಮುಂಜಾನೆ ಮಾಡುವ ವ್ರತದ ಫಲವು ಭಕ್ತರಿಗೆ ಸರ್ವವಿಧದ ಫಲಗಳನ್ನು ನೀಡುತ್ತದೆ ಎನ್ನುವ ಉಲ್ಲೇಖವಿದೆ. ನಂದಗೋಪನ ಮಗನಾದ ಶ್ರೀಕೃಷ್ಣನನ್ನು ಪತಿಯಾಗಿ ವರಿಸಲು ಗೋಪಿಯರೆಲ್ಲ ಸೇರಿ ಈ ವ್ರತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನನ್ನೇ ದೊರಕಿಸಿಕೊಡುವ ಪುಣ್ಯ ಮಾಸವಾದ್ದರಿಂದ ಧನು ಮಾಸದಲ್ಲಿ ಶೈವ, ಶ್ರೀವೈಷ್ಣವ, ಶಾಕ್ತರೆಲ್ಲರೂ ದೇಗುಲಗಳಲ್ಲಿ ಧನುರ್ಮಾಸದ ಆಚರಣೆಯನ್ನು ಮಾಡುತ್ತಾರೆ.

 


                                                         Lord Anantha Sayana Swamy

 

ಧನುರ್ಮಾಸದ ಆಚರಣೆ:

 

ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು. ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ.



1) ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು (ಪೊಂಗಲ್) ಅರ್ಪಿಸಬೇಕು.



2) ಶ್ರೀ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮತ್ತು ತಿರುಪ್ಪಾವೈ (30 ಅಧ್ಯಾಯ) ಪ್ರತಿ ದಿನ ಒಂದು ಅಧ್ಯಾಯ ವನ್ನು ಹೇಳಿಕೊಳ್ಳಬೇಕು. ನಂತರ ನೈವೇದ್ಯವನ್ನು ಅರ್ಪಣೆ ಮಾಡಬೇಕು.



3) ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು.

 

------------------     Hari Om ----------------