Friday, December 15, 2023

Margashira month -- Very Auspiocious & Sacred

ಮಾರ್ಗಶಿರ ಮಾಸ ಮಹತ್ವ


Importance of Margashira month /  Margashira month -- Very 

Auspiocious & Sacred

13-12-2023 ಬುಧವಾರ ಮಾರ್ಗಶಿರ ಮಾಸ ಆರಂಭ

ನಾನು ಮಾಸಗಳಲ್ಲಿ ಮಾರ್ಗಶಿರ, ಋತುಗಳಲ್ಲಿ ವಸಂತ” ಎನ್ನುತ್ತಾನೆ ಕೃಷ್ಣ.

"ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್ ।"
ಮಾಸಾನಾಂ ಮಾರ್ಗಶೀರ್ಷೋSಹಂ ಋತೂನಾಂ ಕುಸುಮಾಕರಃ ॥೩೫॥

ಮಾರ್ಗಶಿರಕ್ಕೆ ಅಗ್ರಾಯಣ ಎನ್ನುತ್ತಾರೆ. ಅಯಣ ಎಂದರೆ ಮಾಸ. ಅಗ್ರ ಅಂದರೆ ಮೊದಲನೆಯದು. .


(ಹಿಂದೆ ಮಾರ್ಗಶಿರ ಮಾಸದಿಂದ ಮಾಸಾರಂಭವಿತ್ತು )


ನಾವು ಗೀತಾಜಯಂತಿಯನ್ನು ಈ ಮಾಸದಲ್ಲಿ ಆಚರಿಸುತ್ತೇವೆ.


ಇದರಿಂದ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಮಾಸ ಕೂಡಾ ಮಾರ್ಗಶಿರ. ಈ ಮಾಸದಲ್ಲಿ ವಿಭೂತಿಯಾಗಿ ಕುಳಿತಿರುವ ಭಗವಂತನ ವಿಭೂತಿನಾಮ ‘ಮಾರ್ಗಶೀರ್ಷ’.


ಸಾಧನಾ ಮಾರ್ಗದಲ್ಲಿ ನಾವು ಸಾಗಬೇಕಾದ ಮಾರ್ಗದ ತುತ್ತತುದಿಯಾದ ಆ ಭಗವಂತ ‘ಮಾರ್ಗಶೀರ್ಷ’.

ಹೂ ಅರಳಿ ಗಿಡಮರಗಳು ಚಿಗುರುವ ವಸಂತ ಋತುವಿನಲ್ಲಿ ‘ಕುಸುಮಾಕರನಾಗಿ’ ನಾನಿದ್ದೇನೆ ಎನ್ನುತ್ತಾನೆ ಕೃಷ್ಣ. ಕೆಟ್ಟವರಿಗೆ ಕುಸ್ಸಿತವಾದ ಮತ್ತು ಸಜ್ಜನರಿಗೆ ಉತ್ತಮ ಜ್ಞಾನವನ್ನು ಕೊಡುವ ಭಗವಂತ ‘ಕುಸುಮಾಕರಃ’.

ಆಯಾ ತಿಂಗಳ ಹುಣ್ಣಿಮೆಯಂದು ಇರುವ ನಕ್ಷತ್ರದ ಆಧಾರದ ಮೇಲೆ ಮಾಸದ ಹೆಸರನ್ನು ನಿರ್ಣಯಿಸಲಾಗುತ್ತದೆ.


ಮಾರ್ಗಶಿರ ಮಾಸದಲ್ಲಿ ಹುಣ್ಣಿಮೆಯಂದು ಮೃಗಶಿರ ನಕ್ಷತ್ರ ಬರುತ್ತದೆ.ಅದಕ್ಕೆ ಇದು ಮಾರ್ಗಶಿರ ಹೆಸರು.

ಮಾರ್ಗಶಿರ ಮಾಸದ ಮಧ್ಯಭಾಗದಲ್ಲಿ ಸೂರ್ಯ ವೃಶ್ಚಿಕ ರಾಶಿಯಿಂದ ಧನುರಾಶಿಗೆ ಬದಲಾಗುತ್ತಾನೆ.
ಈ ಸಂದರ್ಭವನ್ನು ಧನುರ್‌ ಸಂಕ್ರಮಣ ಎಂದು ಕರೆಯುತ್ತಾರೆ. ಧನುರ್‌ ಸಂಕ್ರಮಣ ಕಾಲದಿಂದ ಧನುರ್‌ಮಾಸ ಪ್ರಾರಂಭವಾಗುತ್ತದೆ.



16-12-2023 ಶನಿವಾರ ಧನು ಸಂಕ್ರಮಣ -- ಧನುರ್ಮಾಸ ಆರಂಭ
18-12-2023
ಸೋಮವಾರ ಸುಬ್ರಹ್ಮಣ್ಯ ಷಷ್ಠಿ
23-12-2023
ವೈಕುಂಠ ಏಕಾದಶಿ ಗೀತಾ ಜಯಂತಿ


(
ಉತ್ತರಾಯಣ ಆರಂಭ)
24-12-2023
ಭಾನುವಾರ ಮುಕ್ಕೋಟಿ ದ್ವಾದಶಿ
26-12-2023
ಮಂಗಳವಾರ ಹುಣ್ಣಿಮೆ
30-12-2023
ಶನಿವಾರ ಸಂಕಷ್ಠಿ
07-01-2024
ಭಾನುವಾರ ಸರ್ವೈಕಾದಶಿ
11-01-2024
ಗುರುವಾರ ಅಮಾವಾಸ್ಯೆ
12-01-2024
ಶುಕ್ರವಾರ ಪುಷ್ಯ ಮಾಸ ಆರಂಭ

ಮಾರ್ಗಶಿರ ಮಾಸದ ಆರಂಭದೊಂದಿಗೆ ಹೇಮಂತ ಋುತು ಪ್ರಾರಂಭವಾಗುತ್ತದೆ.
ಹೇಮಂತ ಋತು ಚಳಿಗಾಲದ ಪರ್ವಕಾಲ.


ಸಾಮಾನ್ಯವಾಗಿ ಧನುರ್ಮಾಸವು ಡಿಸೆಂಬರ್‌ 16ರಿಂದ ಪ್ರಾರಂಭವಾಗುತ್ತದೆ.
ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೆ ಹೆಚ್ಚು ಪ್ರಾಶಸ್ತ್ಯ.


ಮುಕ್ಕೋಟಿ ದ್ವಾದಶಿ ಯ ಪೂಜಾ ವಿಶೇಷ. ಮುಕ್ಕೋಟಿ ದೇವತೆಗಳನ್ನು ಪೂಜಿಸುವ ಪರ್ವಮಾಸ.

ಕಾತ್ಯಾಯಿನೀ ವ್ರತ


ಭಾಗವತ ದಶಮ ಸ್ಕಂಧದಲ್ಲಿ ವೃಂದಾವನದ ಗೋಪಿಕೆಯರು ಶ್ರೀಕೃಷ್ಣನನ್ನು ಪತಿಯಾಗಿ ಪಡೆಯುವ ಉದ್ದೇಶದಿಂದ ಮಾರ್ಗಶಿರ ಮಾಸದಲ್ಲಿ ಕಾತ್ಯಾಯಿನೀ ದೇವಿಯನ್ನು ಪೂಜಿಸಿದ ಬಗ್ಗೆ ವಿವರಣೆ ಇದೆ.


ತ್ರಿಪುರಾರಹಸ್ಯ ಗ್ರಂಥದಲ್ಲಿ ಮನೋನುಕೂಲವಾದ ಪತಿಯನ್ನು ಹೊಂದಲು ಹಾಗೂ ವೈವಾಹಿಕ ಜೀವನ ಸುಖಮಯವಾಗಿರಲು ಕಾತ್ಯಾಯಿನೀ ದೇವಿಯನ್ನು ಪೂಜಿಸಲು ಮಾರ್ಗಶಿರ ಮಾಸ ಪ್ರಶಸ್ತವಾದ ಕಾಲವೆಂದು ವರ್ಣಿಸಲಾಗಿದೆ.

ಮಾರ್ಗಶಿರ ಮಾಸ ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದೆ.
ಈ ಮಾಸವು ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾಗಿದೆ. ಅದರಲ್ಲೂ ಮಾರ್ಗಶಿರ ಮಾಸ ಗುರುವಾರದಂದು ಮಹಾಲಕ್ಷ್ಮಿಯ ಆರಾಧನೆ ಶ್ರೇಷ್ಠವೆಂದು ಹೇಳುತ್ತಾರೆ.


--------------- Hari Om ------------

Sunday, December 10, 2023

ಧನ್ವಂತರಿ ಅಷ್ಟೋತ್ತರ ಶತನಾಮಾವಳಿ ‌ / Dhanvantari Astotara Satanamavali ‌

 

ಧನ್ವಂತರಿ ಅಷ್ಟೋತ್ತರ ಶತನಾಮಾವಳಿ ‌ / Dhanvantari Astotara 

Satanamavali ‌ 

 

                                       

                              Divine Names of Dhanvantari God
 

 

ಓಂ ಧನ್ವಂತರಯೇ ನಮ:
ಓಂ ಧರ್ಮಧ್ವಜಾಯ ನಮ:
ಓಂ ಧರಾವಲ್ಲಭಾಯ ನಮ:
ಓಂ ಧೀರಾಯ ನಮ:
ಓಂ ದಿಷಣವಂದ್ಯಾಯ ನಮ:
ಓಂ ಧಾರ್ಮಿಕಾಯ ನಮ:
ಓಂ ಧರ್ಮನಿಯಾಮಕಾಯ ನಮ:
ಓಂ ಧರ್ಮರೂಪಾಯ ನಮ:
ಓಂ ಧೀರೋದಾತ್ತ ಗುಣೋಜ್ಜ್ವಲಾಯ ನಮ:
ಓಂ ಧರ್ಮವಿದೇ ನಮ: || ೧೦ ||


ಓಂ ಧರಾಧರ ಧಾರಿಣೇ ನಮ:
ಓಂ ಧಾತ್ರೇ ನಮ:
ಓಂ ಧಾತೃಗರ್ವಚ್ಛೇದೇ ನಮ:
ಓಂ ಧಾತ್ರೇಡಿತಾಯ ನಮ;
ಓಂ ಧರಾಧರರೂಪಾಯ ನಮ:
ಓಂ ಧಾರ್ಮಿಕಪ್ರಿಯಾಯ ನಮ:
ಓಂ ಧಾರ್ಮೈಕ ವಂದ್ಯಾಯ ನಮ:
ಓಂ ಧಾರ್ಮಿಕ ಜನಧ್ಯಾತಾಯ ನಮ:
ಓಂ ಧನದಾದಿ ಸಮರ್ಚಿತಾಯ ನಮ:
ಓಂ ಧನಂಜಯ ರೂಪಾಯ ನಮ: || ೨೦ ||


ಓಂ ಧನಂಜಯ ವಂದ್ಯಾಯ ನಮ:
ಓಂ ಧನಂಜಯ ಸಾರಥಯೇ ನಮ:
ಓಂ ಧಿಷಣ ರೂಪಾಯ ನಮ:
ಓಂ ಧಿಷಣ ಸೇವ್ಯಾಯ ನಮ:
ಓಂ ಧಿಷಣ ದಾಯಕಾಯ ನಮ:
ಓಂ ಧಾರ್ಮಿಕ ಶಿಖಾಮಣಿಯೇ ನಮ:
ಓಂ ಧೀ ಪ್ರದಾಯ ನಮ:
ಓಂ ಧ್ಯಾನಗಮ್ಯಾಯ ನಮ:
ಓಂ ಧ್ಯಾನಧ್ಯಾತ್ರೇ ನಮ:
ಓಂ ಧ್ಯಾತೃ ಧ್ಯೇಯ ಪದಾಂಬುಜಾಯ ನಮ: || ೩೦ ||


ಓಂ ಧೀರ ಸಂಪೂಜ್ಯಾಯ ನಮ:
ಓಂ ಧೀರ ಸಮರ್ಚಿತಾಯ ನಮ:
ಓಂ ಧೀರ ರತ್ನಾಯ ನಮ: ಓಂ ಧುರಂಧರಾಯ ನಮ:
ಓಂ ಧೀ ರೂಪಾಯ ನಮ:
ಓಂ ಧಿಷಣಾಪೂಜ್ಯಾಯ ನಮ:
ಓಂ ಧೀರ ಸಮರ್ಚಿತಾಯ ನಮ:
ಓಂ ಧೀರಶಿಖಾಮಣಯೇ ನಮ:
ಓಂ ಧುರಂಧರಾಗ್ರಣಯೇ ನಮ:
ಓಂ ಧೂಪದೀಪಿತ ವಿಗ್ರಹಾಯ ನಮ: || ೪೦ ||


ಓಂ ಧೂಪದೀಪಾದಿ ಪೂಜಾಪ್ರಿಯಾಯ ನಮ:
ಓಂ ಧೂಮಾದಿ ಮಾರ್ಗದರ್ಶಕಾಯ ನಮ:
ಓಂ ಧೃಷ್ಟಾಯ ನಮ:
ಓಂ ಧೃಷ್ಟದ್ಯುಮ್ನಾಯ ನಮ:
ಓಂ ದೃಷ್ಟದ್ಯುಮ್ನಸ್ತುತಾಯ ನಮ:
ಓಂ ಧೇನುಕಾಸುರ ಸೂದನಾಯ ನಮ:
ಓಂ ಧೇನುಕವ್ರಜರಕ್ಷಕಾಯ ನಮ:
ಓಂ ಧೇನುಕಾಸುರ ವರಪ್ರದಾಯ ನಮ:
ಓಂ ಧೈರ್ಯಾಯ ನಮ:
ಓಂ ಧೈರ್ಯವತಾಮಗ್ರಣಯೇ ನಮ: || ೫೦ ||


ಓಂ ಧೈರ್ಯಪ್ರದಾಯಕಾಯ ನಮ:
ಓಂ ದೋಗ್ಧ್ರೇ ನಮ:
ಓಂ ಧೌಮ್ಯಾಯ ನಮ:
ಓಂ ಧೌಮ್ಯೇಡಿತಾಯ ನಮ:
ಓಂ ಧೌಮ್ಯಾದಿ ಮುನಿಸ್ತುತಾಯ ನಮ:
ಓಂ ಧೌಮ್ಯ ವರಪ್ರದಾಯ ನಮ:
ಓಂ ಧರ್ಮಸೇತವೇ ನಮ:
ಓಂ ಧರ್ಮಮಾರ್ಗ ಪ್ರವರ್ತಕಾಯ ನಮ:
ಓಂ ಧರ್ಮಮಾರ್ಗ ವಿಘ್ನಕೃತ್ಸೂದನಾಯ ನಮ:
ಓಂ ಧರ್ಮರಾಜಾಯ ನಮ: || ೬೦ ||


ಓಂ ಧರ್ಮಮಾರ್ಗ ಪರವಂದ್ಯಾಯ ನಮ:
ಓಂ ಧಾಮತ್ರಯ ಮಂದಿರಾಯ ನಮ:
ಓಂ ಧನುರ್ವಾತಾದಿ ರೋಗಘ್ನಾಯ ನಮ:
ಓಂ ಧುತಸರ್ವಾಘ ಬೃಂದಾಯ ನಮ:
ಓಂ ಧಾರಣಾ ರೂಪಾಯ ನಮ:
ಓಂ ಧಾರಣಾ ಮಾರ್ಗದರ್ಶಕಾಯ ನಮ:
ಓಂ ಧ್ಯಾನಮಾರ್ಗ ತತ್ಪರಾಯ ನಮ:
ಓಂ ಧ್ಯಾನಮಾರ್ಗೇ ದಾಯಕಗಮ್ಯಾಯ ನಮ:
ಓಂ ಧ್ಯಾನಮಾತ್ರ ಸುಲಭಾಯ ನಮ:
ಓಂ ಧ್ಯಾತೃ ಪಾಪ ಹರಾಯ ನಮ: || ೭೦ ||


ಓಂ ಧ್ಯಾತೃ ತಾಪತ್ರಯಹರಾಯ ನಮ:
ಓಂ ಧನಧಾನ್ಯ ಪ್ರದಾಯ ನಮ:
ಓಂ ಧನಧಾನ್ಯ ಮತ್ತಜನಸೂದನಾಯ ನಮ:
ಓಂ ಧೂಮಕೇತು ವರಪ್ರದಾಯ ನಮ:
ಓಂ ಧರ್ಮಾಧ್ಯಕ್ಷಾಯ ನಮ:
ಓಂ ಧೇನುರಕ್ಷಾಧುರಿಣಾಯ ನಮ:
ಓಂ ಧರಣೀ ರಕ್ಷಣಧುರಿಣಾಯ ನಮ:
ಓಂ ಧರಣೀಭಾರಾಪಹಾರಕಾಯ ನಮ:
ಓಂ ಧೀರಸಂರಕ್ಷಣಾಯ ನಮ:
ಓಂ ಧರ್ಮಾಭಿವೃದ್ಧಿಕರ್ತ್ರೇ ನಮ: || ೮೦ ||


ಓಂ ಧರ್ಮಗೋಪ್ತ್ರೇ ನಮ:
ಓಂ ಧರ್ಮಕರ್ತ್ರೇ ನಮ:
ಓಂ ಧರ್ಮಬಂಧವೇ ನಮ:
ಓಂ ಧರ್ಮಹೇತವೇ ನಮ:
ಓಂ ಧಾರ್ಮಿಕ ಪ್ರಜಾ ರಕ್ಷಾ ಧುರಿಣಾಯ ನಮ:
ಓಂ ಧನಂಜಯಾದಿ ವರಪ್ರದಾಯ ನಮ:
ಓಂ ಧನಂಜಯ ಸೇವಾ ತುಷ್ಟ್ಯಾಯ ನಮ:
ಓಂ ಧನಂಜಯ ಸಾಹ್ಯಕೃತೇ ನಮ:
ಓಂ ಧನಂಜಯ ಸ್ತೋತ್ರ ಪಾತ್ರಾಯ ನಮ:
ಓಂ ಧನಂಜಯ ಗರ್ವಹರ್ತ್ರೇ ನಮ: || ೯೦ ||


ಓಂ ಧನಂಜಯ ಸ್ತುತಿ ಹರ್ಷಿತಾಯ ನಮ:
ಓಂ ಧನಂಜಯ ವಿಯೋಗ ಖಿನ್ನಾಯ ನಮ:
ಓಂ ಧನಂಜಯ ಗೀತೋಪದೇಶ ಕೃತೇ ನಮ:
ಓಂ ಧರ್ಮಾಧರ್ಮ ವಿಚಾರ ಪರಾಯಣಾಯ ನಮ:
ಓಂ ಧರ್ಮ ಸಾಕ್ಷಿಣೇ ನಮ:
ಓಂ ಧರ್ಮ ನಿಯಾಮಕಾಯ ನಮ:
ಓಂ ಧನದೃಪ್ತಜನ ದೂರಗಾಯ ನಮ:
ಓಂ ಧರ್ಮಪಾಲಕಾಯ ನಮ:
ಓಂ ಧೈರ್ಯವತಾಂ ಧೈರ್ಯದಾಯ ನಮ:
ಓಂ ಧರ್ಮ ಮಾರ್ಗೋಪದೇಶಕಾಯ ನಮ: || ೧೦೦ ||


ಓಂ ಧರ್ಮಕೃದ್ ವಂದ್ಯಾಯ ನಮ:
ಓಂ ಧರ್ಮ ತನಯ ವಂದ್ಯಾಯ ನಮ:
ಓಂ ಧರ್ಮರೂಪ ವಿದುರ ವಂದ್ಯಾಯ ನಮ:
ಓಂ ಧರ್ಮತನಯ ಸ್ತುತ್ಯಾಯ ನಮ:
ಓಂ ಧರ್ಮತನಯ ಸ್ತೋತ್ರ ಪಾತ್ರಾಯ ನಮ:
ಓಂ ಧರ್ಮತನಯ ಸಂಸೇವ್ಯಾಯ ನಮ:
ಓಂ ಧರ್ಮತನಯ ಮಾನ್ಯಾಯ ನಮ:
ಓಂ ಧರಾಮೃತ ಹಸ್ತಾಯ ನಮ:
ಓಂ ಧರ್ಮತನಯ ವರಪ್ರದಾಯ ನಮ:
ಓಂ ಧನ್ವಂತರಯೇ ನಮ: || ೧೧೦ ||


|| ಇತಿ ಶ್ರೀ ಧನ್ವಂತರಿ ಅಷ್ಟೋತ್ತರ ಶತನಾಮಾವಲಿ ಸಂಪೂರ್ಣಂ ||

 

------------ Hari Om ------------

Dhanvantari Pooja - Benefits

ಧನ್ವಂತರಿ ಪೂಜೆಯ ಪ್ರಯೋಜನಗಳು: Benefits of Dhanvantari Pooja

 

                                          

                                                  Dhanvantari God

 

ಈ ಪೂಜೆಯು ಎಲ್ಲಾ ರೀತಿಯ ದೈಹಿಕ ಕಾಯಿಲೆಗಳನ್ನು ತೊಡೆದುಹಾಕಲು ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

 
ಈ ಪೂಜೆಯು ಮಾನವರಲ್ಲಿ ಚೈತನ್ಯ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.



ಇದು ಎಲ್ಲಾ ರೀತಿಯ ಮಾನಸಿಕ ಭಯ ಮತ್ತು ತೊಂದರೆಗಳನ್ನು ತೆಗೆದುಹಾಕುತ್ತದೆ ಮತ್ತು ಸ್ಪಷ್ಟವಾದ ಚಿಂತನೆಯ ಪ್ರಕ್ರಿಯೆಗೆ ಕಾರಣವಾಗುತ್ತದೆ.



ಯಾವುದೇ ರೀತಿಯ ದೀರ್ಘಕಾಲದ ಮತ್ತು ಗುಣಪಡಿಸಲಾಗದ ಕಾಯಿಲೆಗಳು ಈ ಪೂಜೆಯಿಂದ ಗುಣವಾಗುತ್ತವೆ.


 

ಈ ಪೂಜೆಯು ದೈವಿಕ ಶಕ್ತಿಯನ್ನು ನೀಡುತ್ತದೆ, ಇದು ಮೋಕ್ಷದ ಅಂತಿಮ ಗುರಿಗೆ ಕಾರಣವಾಗುತ್ತದೆ. ‌ ‌ ಅನಾರೋಗ್ಯದ ಸಮಸ್ಯೆಗಳು ದೂರವಾಗಿ, ವಿಶೇಷವಾಗಿ ಮಾನಸಿಕ ಒತ್ತಡಗಳು ನಿವಾರಣೆಯಾಗಬೇಕು ಎಂದರೆ ಪ್ರತಿನಿತ್ಯ ಮಹಾವಿಷ್ಣುವೇ ಹೇಳಿದಂತಹ ಈ ಒಂದು ಧನ್ವಂತರಿ ಮಂತ್ರವನ್ನು ಜಪಿಸಬೇಕು. ಇದರಿಂದ ಲಾಭ ಸಿಗಲಿದೆ ಎನ್ನಲಾಗಿದೆ.


"ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶ ಹಸ್ತಾಯ ವಜ್ರಜಲೌಕ ಹಸ್ತಾಯ ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ”


Above Dhanvantari Mantra is very Powerful Please recite it Daily to get Positive Energy & Positive Vibrations which in turn improves Health.


------------- Hari Om -------------


 

 

Dhanvantari - God of Medicine

 

ಧನ್ವಂತರಿ ಜಯಂತಿ / Dhanvantari Jayanthi   


                          

                                Dhanvantari - God of Medicine


 

Sunday-10th December 2023

ಇದೇ ಡಿಸೆಂಬರ್ 10, 2023 ರವಿವಾರ. ಕಾರ್ತಿಕ ಮಾಸದ ಕೃಷ್ಣ ಪಕ್ಷ ತ್ರಯೋದಶಿಯ ದಿನ ಧನ್ವಂತರಿ ಜಯಂತಿ ಆಚರಿಸಲಾಗುತ್ತದೆ.‌


ಆರೋಗ್ಯ : ಧನ್ವಂತರಿ ಆರಾಧನೆಯಿಂದ ಆರೋಗ್ಯ ವೃದ್ಧಿ

ಧನ್ವಂತರಿ ಹಿಂದೂ ಸಂಪ್ರದಾಯದಲ್ಲಿ ಮಹಾವಿಷ್ಣು ವಿನ ಅವತಾರ. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಆಯುರ್ವೇದದ ದೇವತೆ ಕೂಡ ಧನ್ವಂತರಿ. ಹಿಂದೂ ಸಂಪ್ರದಾಯದಲ್ಲಿ ಆಯುರಾರೋಗ್ಯ ಬಯಸುವವರು ಧನ್ವಂತರಿಯನ್ನು ಪ್ರಾರ್ಥಿಸುವುದು ಸಾಮಾನ್ಯ. ‌

ಧನ್ವಂತರಿಯು ಭಾರತೀಯ ವೈದ್ಯ ಪದ್ಧ ತಿಯ ಮೊದಲ ವೈದ್ಯನೆಂಬ ಪ್ರತೀತಿ ಹಾಗೂ ನಂಬಿಕೆ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿ ಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾ ರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ.


ಸಮುದ್ರ ಮಥನದ ಕಾಲದಲ್ಲಿ ಸುರಾ, ಕೌಸ್ತುಭ, ಅಪ್ಸರಾ ಉಚ್ಛೆಶ್ರವಸ್ಸು, ಕಲ್ಪವೃಕ್ಷ, ಕಾಮಧೇನು, ಐರಾವತ, ಪಾರಿಜಾತ ಲಕ್ಷ್ಮೀ, ಹಾಲಾಹಲ, ಚಂದ್ರ, ಅಮೃತ ಹಾಗೂ ಧನ್ವಂತರಿ ಉದ್ಭವ ಆಯಿತೆಂಬುದು ಪುರಾಣೇತಿಹಾಸ.



ಕ್ಷೀರೋದಮಥನೋದೂತಂ ದಿವ್ಯ ಗಂಧಾನು ಲೇಪಿತಂ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ


ಎಂಬ ಶ್ಲೋಕದಂತೆ ಕ್ಷೀರ ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ.

ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು, ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ.

 

                                                                   Lord Dhanvantari

 

ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ

1) ಧನು +ಏವ+ಅಂತಃ+ಅರಿ=ಧನ್ವಂತರಿ (ಸರ್ಜನ್‌), ಧನ್ವಂ ಈಯರ್ತಿ ಗತ್ಛತೀತಿ ಧನ್ವಂತರೀ ಎಂದೂ ಹೇಳಲಾಗಿದೆ. ಭಾರತೀಯ ವೈದ್ಯ ಪದ್ಧತಿಯ ಲ್ಲಿಯೂ ನಿಖರವಾಗಿ ಔಷಧ ಸಾಧ್ಯ ಹಾಗೂ ಶಸ್ತ್ರ ಸಾಧ್ಯ ರೋಗಗಳ ವಿವರಣೆ ಇದೆ. ಅವುಗಳಲ್ಲಿ ಶಸ್ತ್ರ ಚಿಕಿತ್ಸಾ ಪಿತಾಮಹನಾಗಿ ಧನ್ವಂತರಿಯನ್ನು ಉಲ್ಲೇಖಿಸಲಾಗಿದೆ. ಧನ್ವಂತರಿಯು ತನ್ನ ಶಿಷ್ಯ ವರ್ಗಗಳಿಗೆ ಶಸ್ತ್ರ ಚಿಕಿತ್ಸಾ ಸಹಿತ ಆಯುರ್ವೇದದ ಉಪದೇಶವನ್ನು ಮಾಡಿದ್ದನೆಂದೂ ಅವುಗಳಲ್ಲಿ ಸುಶ್ರುತಾಚಾರ್ಯರು ಶಸ್ತ್ರ ಚಿಕಿತ್ಸಾ ಪಾರಂಗತರಾದರೆಂದೂ ಹೇಳಲಾಗಿದೆ. ಅವರನ್ನು ಕಸಿ ಅಥವಾ ಪ್ಲಾಸ್ಟಿಕ್‌ ಸರ್ಜರಿಯ ಪಿತಾಮಹ ಎಂದೂ ಹೇಳ ಲಾಗಿದೆ.

2) ಧನುಷಾ+ತರತೇ+ತಾರಯತೇ +ಪಾಪಾತ್‌=ಧನ್ವಂತರಿ (ಪಾಪ ವಿಮುಕ್ತಿ) ಎಂಬುದು ಧನ್ವಂತರಿ ಪದದ ನಿಷ್ಪತ್ತಿಯಾಗಿದೆ.

 

                                                             Origin of Lord Dhanvantari 

 

ನಮಾಮಿ ಧನ್ವಂತರಿಮ್‌ ಆದಿದೇವಂ ಸುರಾ ಸುರೈರ್ವಂದಿತ ಪಾದಪದ್ಮಂ ಲೋಕೇಜರಾಋಗ್‌ ಭಯ ಮೃತ್ಯುನಾಶಂ ದಾತಾರಮೀಶಂ ವಿವಿಧೌಷಧೀನಾಂ ಧನ್ವಂತರೀ ರಮಾನಾಥಮ್‌ ಸರ್ವ ರೋಗ ವಿನಾಶಕಮ್‌. ಆಯುರ್ವೇದ ಪ್ರವಕ್ತಾರಮ್‌ ವಂದೇ ಪೀಯೂಷ ದಾಯಕಮ್‌.


ಎಂಬ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯುತ್ತದೆ ಎನ್ನಲಾಗಿದೆ. ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಗಿದೆ.


ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ಧನ್ವಂತರಿಯನ್ನು ಸದಾ ಭಜಿಸಿದರೆ ಯಾವುದೇ ರೋಗ ರುಜಿನಗಳೂ ಕಾಡುವುದಿಲ್ಲ. ಹಾಗೆಯೇ ಇನ್ನೊಂದೆಡೆ ಧನ್ವಂತರೀ ದಿವೋ ದಾಸನೆಂಬ ಕಾಶೀರಾಜನು ಸಹ ಧನ್ವಂತರಿ ಯಾಗಿದ್ದು ಮಹರ್ಷಿ ಭಾರಧ್ವಾಜರ ಶಿಷ್ಯನೆಂದೂ ಹೇಳಲಾಗಿದೆ.


ಒಟ್ಟಿನಲ್ಲಿ ಆರೋಗ್ಯ ಪರಿಪಾಲಕನಾಗಿ ಸಕಲ ಚಿಕಿತ್ಸಾ ಸೂತ್ರ ನೀಡಿದ ದೇವ ಧನ್ವಂತರಿಯ ಪೂಜಾ ಮಹೋತ್ಸವವು ತನ್ನದೇ ಆದ ಮಹತ್ವವನ್ನು ಹೊಂದಿದೆ.


ಈ ಧನ್ವಂತರಿ ಮಹೋತ್ಸವದ ದಿನ ಧನ್ವಂತರಿ ಹೋಮಹವನ ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರಸಾದ ರೂಪವಾಗಿ ಸುಮಧುರ ಗಂಧದ ಸಪಾದ ಭಕ್ಷ್ಯವನ್ನು ಹೋಲುವ ತಿನಿಸನ್ನು ಸಹ ಅರ್ಚಿಸಿ ಭಕ್ಷಿಸಲಾಗುತ್ತದೆ. ‌ ‌ 


 

ಭಗವಾನ್ ಧನ್ವಂತರಿ ಕಥೆ


ಧನ್ವಂತರಿ ಜಯಂತಿಯನ್ನು ಆಚರಿಸುವ ಹಿಂದೆ ಒಂದು ಪ್ರಮುಖವಾದ ಕಥೆಯಿದೆ. ಹಿಂದೆ ದೇವರಾಜ ಇಂದ್ರನ ಅಸಭ್ಯ ವರ್ತನೆಯ ಪರಿಣಾಮವಾಗಿ, ಮಹರ್ಷಿ ದೂರ್ವಾಸರು ಮೂರು ಲೋಕಗಳಿಗೆ ಅಮರವಾಗುವಂತೆ ಶಾಪ ನೀಡಿದ್ದರು, ಇದರಿಂದಾಗಿ ಅಷ್ಟಲಕ್ಷ್ಮಿ ಭೂಮಿಯಿಂದ ದೂರ ಹೋದಳು. ಇದರಿಂದ ವಿಚಲಿತರಾದ ದೇವತೆಗಳು ಮೂರು ಲೋಕಗಳಲ್ಲಿ ಶ್ರೀಗಳನ್ನು ಸ್ಥಾಪಿಸಲು ತ್ರಿದೇವರ ಬಳಿಗೆ ಹೋಗಿ ಈ ಬಿಕ್ಕಟ್ಟನ್ನು ಹೋಗಲಾಡಿಸಲು ಮಾರ್ಗವನ್ನು ಕೇಳಿದರು.


ಮಹಾದೇವನು ದೇವತೆಗಳಿಗೆ ಸಮುದ್ರ ಮಂಥನವನ್ನು ಸೂಚಿಸಿದನು, ಅದನ್ನು ದೇವತೆಗಳು ಮತ್ತು ರಾಕ್ಷಸರು ಸಂತೋಷದಿಂದ ಸ್ವೀಕರಿಸಿದರು. ಸಾಗರವನ್ನು ಮಂಥನ ಮಾಡುವ ಪಾತ್ರದಲ್ಲಿ ಮಂದಾರಚಲ ಪರ್ವತವನ್ನು ಮುಖ್ಯವಾಗಿಸಿ, ಸರ್ಪರಾಜನಾದ ವಾಸುಕಿಯನ್ನು ಹಗ್ಗವಾಗಿಸಲಾಯಿತು. ವಾಸುಕಿಯ ತಲೆಯನ್ನು ರಾಕ್ಷಸರಿಗೆ ನೀಡಲಾಯಿತು ಮತ್ತು ಬಾಲವನ್ನು ದೇವತೆಗಳು ಹಿಡಿದು ಮಥಿಸಲು ಪ್ರಾರಂಭಿಸಿದರು. ‌ 

 

ಸಾಗರದ ಮಂಥನದಿಂದ ಹದಿನಾಲ್ಕು ಪ್ರಮುಖ ರತ್ನಗಳು ಉತ್ಪತ್ತಿಯಾದವು, ಅದರಲ್ಲಿ ಭಗವಂತ ಧನ್ವಂತರಿಯು ಹದಿನಾಲ್ಕನೆಯ ರತ್ನದ ರೂಪದಲ್ಲಿ ಕಾಣಿಸಿಕೊಂಡನು. ಅವನು ತನ್ನ ಕೈಯಲ್ಲಿ ಅಮೃತದ ಮಡಕೆಯನ್ನು ಹಿಡಿದಿದ್ದನು. ಭಗವಾನ್ ವಿಷ್ಣುವು ಅವನನ್ನು ದೇವತೆಗಳ ವೈದ್ಯ ಮತ್ತು ಸಸ್ಯಗಳು ಮತ್ತು ಔಷಧಿಗಳ ಅಧಿಪತಿಯಾಗಿ ನೇಮಿಸಿದನು. ಇವುಗಳ ವರದಾನವಾಗಿ ಎಲ್ಲಾ ಮರ-ಗಿಡಗಳಿಗೂ ಚಿಕಿತ್ಸಾ ಶಕ್ತಿ ದೊರಕಿತು.


--------------- Hari Om -------------


 



 


Thursday, November 23, 2023

Deva Uthana Ekadasi

 

ದೇವೋತ್ಥಾನ ಏಕಾದಶಿ ‌

Deva Uthana Ekadasi   --- 23rd November 2023

 

‌ ‌ ‌ ‌ ನವೆಂಬರ್ 23ಕ್ಕೆ ದೇವೋತ್ಥಾನ ಏಕಾದಶಿ. ಈ ಏಕಾದಶಿ ವ್ರತ ಬಹಳ ವಿಶೇಷವಾದದ್ದು.

 

 ಈ ಏಕಾದಶಿಯನ್ನು ದೇವ ಉತ್ಥಾನ ಏಕಾದಶಿ ಅಥವಾ ಪ್ರಬೋದಿನಿ ಏಕಾದಶಿಯೆಂದು ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಈ ಏಕಾದಶಿಯನ್ನು ದೇವೋತ್ಥಾನ ಏಕಾದಶಿ ಎಂದು ಕರೆಯಲಾಗುವುದು, ಅಂದರೆ ಈ ದಿನ ವಿಷ್ಣು ನಿದ್ದೆಯಿಂದ ಎದ್ದೇಳುತ್ತಾನೆ ಎಂದು ಹೇಳಲಾಗುವುದು. ಈ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು? ಪೂಜೆಗೆ ಶುಭ ಸಮಯ ಯಾವಾಗ ಎಂದು ನೋಡೋಣ ಬನ್ನಿ: ‌ ‌ 

 ದೇವೋತ್ಥಾನ ಏಕಾದಶಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಪ್ರಬೋಧಿನಿ ಅಥವಾ ದೇವೋತ್ಥಾನ ಏಕಾದಶಿಯನ್ನು ಆಚರಿಸಲಾಗುವುದು. ಶ್ರೀ ವಿಷ್ಣುವು ಚಾತುರ್ಮಾಸದಲ್ಲಿ ದೀರ್ಘ ನಿದ್ದೆಯಲ್ಲಿರುತ್ತಾನೆ, ನಾಲ್ಕು ತಿಂಗಳು ನಿದ್ದೆ ಮಾಡುವ ಶ್ರೀ ವಿಷ್ಣುವು ಕಾರ್ತಿಕ ಏಕಾದಶಿಯಂದು ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ, ಆದ್ದರಿಂದ ಪ್ರಬೋಧಿನಿ ಏಕಾದಶಿಯನ್ನು ದೇವೋತ್ಥಾನ ಏಕಾದಶಿಯೆಂದು ಕರೆಯಲಾಗುವುದು. ‌ ‌

 

 ‌‌ ದೇವೋತ್ಥಾನ ಏಕಾದಶಿ ಪೂಜಾ ಸಮಯ

ಏಕಾದಶಿ ತಿಥಿ ಪ್ರಾರಂಭ: ನವೆಂಬರ್ 22 ರಾತ್ರಿ 11:03ಕ್ಕೆ

ಏಕಾದಶಿ ತಿಥಿ ಮುಕ್ತಾಯ: ನವೆಂಬರ್‌ 23 ರಾತ್ರಿ 09:01ರವರೆಗೆ ಪಾರಣ ಸಮಯ : ನವೆಂಬರ್‌ 24 ಬೆಳಗ್ಗೆ 06:22 ರಿಂದ 08:40 ರವರೆಗೆ ಪಾರಣ ಸಮಯದಲ್ಲಿ ಏಕಾದಶಿ ವ್ರತದ ಉಪವಾಸವನ್ನು ಮುರಿಯಿರಿ.

 

 ‌ ದೇವೋತ್ಥಾನ ಏಕಾದಶಿ ಆಚರಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು

‌ ‌ * ದೇವೋತ್ಥಾನ ಏಕಾದಶಿಯಂದು ಶ್ರೀ ವಿಷ್ಣುವನ್ನು ಆರಾಧನೆ ಮಾಡುವುದರಿಂದ ನಾವು ಬಹಳ ಶುಭ ಫಲ ಪಡೆಯುತ್ತೇವೆ.

 ‌ * ಎಲ್ಲಾ ಉಪವಾಸಕ್ಕಿಂತ ಶ್ರೇಷ್ಠವಾದದ್ದು ದೇವೋತ್ಥಾನಿಯಂದು ಮಾಡುವ ಉಪವಾಸ ಎಂದು ಹೇಳಲಾಗುವುದು

 * ಈ ದಿನ ತುಳಸಿ ವಿವಾಹ ಕೂಡ ಮಾಡಲಾಗುವುದು 

 * ಈ ದಿನ ಏಕಾದಶಿಯನ್ನು ಆಚರಣೆ ಮಾಡುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.

* ಈ ಏಕಾದಶಿ ಆಚರಣೆ ಮಾಡುವುದರಿಂದ ಕಷ್ಟಗಳು ದೂರಾಗುವುದು.

‌ ‌ ‌ ‌ ‌ ‌ ‌ ‌ ದೇವೋತ್ಥಾನ ಏಕಾದಶಿಯ ಪೌರಾಣಿಕ ಕತೆ 

 

‌ ‌ ‌ ‌ ಒಬ್ಬ ರಾಜನಿದ್ದ, ಅವನು ಏಕಾದಶಿ ವ್ರತವನ್ನು ತಪ್ಪದೇ ಮಾಡುತ್ತಿದ್ದ, ಅಲ್ಲದೇ ತನ್ನ ರಾಜ್ಯದಲ್ಲಿರುವ ಪ್ರಜೆಗಳೆಲ್ಲರೂ ಪಾಲಿಸಬೇಕೆಂದು ಆಜ್ಞೆ ನೀಡಿದ್ದ. ಈ ದಿನ ಪ್ರಾಣಿಗಳೂ ಕೂಡ ಉಪವಾಸದಿಂದ ಇರಬೇಕಿತ್ತು. ಹೀಗಿರುವಾಗ ಪಕ್ಕದ ರಾಜ್ಯದ ವ್ಯಕ್ತಿಯೊಬ್ಬ ಆ ರಾಜ್ಯಕ್ಕೆ ಬಂದು ಕೆಲಸ ಕೇಳುತ್ತಾನೆ, ರಾಜ ಅವನಿಗೂ ಏಕಾದಶಿಯ ವ್ರತದ ಬಗ್ಗೆ ತಿಳಸಿಪಾಲಿಸಲು ಹೇಳುತ್ತಾನೆ. ಅದರಂತೆ ಆತ ಭಕ್ತಿಯಿಂದ ಉಪವಾಸ ಮಾಡಿ, ಪಾರಣ ಸಮಯದಲ್ಲಿ ಊಟ ಮಾಡುವಾಗ ದೇವರನ್ನೂ ಊಟಕ್ಕೆ ಆಹ್ವಾನ ಮಾಡುತ್ತಾನೆ, ಅದರಂತೆ ದೇವರು ಬಂದು ಆಹಾರ ಸೇವಿಸುತ್ತಾನೆ. ಇದರಿಂದ ತುಂಬಾನೇ ಖುಷಿಯಾಗಿ ಇದನ್ನು ರಾಜನ ಬಳಿ ಹೇಳುತ್ತಾನೆ. ರಾಜ ಇದನ್ನು ನಂಬುವುದಿಲ್ಲ, ಆತನನ್ನು ಪರೀಕ್ಷೆ ಮಾಡಲು ರಾಜ ಮುಂದಾಗುತ್ತಾನೆ, ಆದರೆ ಆ ದೇವರು ಊಟ ಸೇವಿಸಲು ಬರುವುದಿಲ್ಲ, ಆಗ ಭಕ್ತನು ದೇವರು ನಾನು ಕರೆದರೂ ಬರಲಿಲ್ಲ ಎಂದು ಬೇಸರವಾಗಿ ನದಿಗೆ ಹಾರಲು ಮುಂದಾಗುತ್ತಾನೆ, ಆಗ ದೇವರು ಪ್ರತ್ಯಕ್ಷವಾಗಿ ಆ ಬಡ ಭಕ್ತನ ಜೊತೆ ಊಟ ಸೇವಿಸುತ್ತಾನೆ, ಆಗ ರಾಜನಿಗೆ ತನ್ನ ತಪ್ಪಿನ ಅರಿವು ಉಂಟಾಗುತ್ತೆ. ನಂತರ ಶುದ್ಧ ಮನಸ್ಸಿನಿಂದ ವಿಷ್ಣು ಪೂಜೆ ಮಾಡುತ್ತಾನೆ. ಆದ್ದರಿಂದ ಈ ದಿನ ಉಪವಾಸ ವ್ರತ ಮಾಡುವುದನ್ನು ಶುದ್ಧ ಮನಸ್ಸಿನಿಂದ ಮಾಡಬೇಕು

 

 ‌ ‌ ವ್ರತ ನಿಯಮಗಳು

* ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ

* ಪೂಜೆಗೆ ದೇವರಿಗೆ ಅಲಂಕರಿಸಿ

* ನಂತರ ಸಂಕಲ್ಪ ತೆಗೆದುಕೊಳ್ಳಿ

* ಇಡೀ ದಿನ ಶ್ರೀವಿಷ್ಣುವಿನ ಜಪ ಮಾಡಿ

* ವಿಷ್ಣು ಸಹಸ್ರನಾಮ ಪಠಿಸಿ 

*ತುಳಸಿ ಪೂಜೆ ಮಾಡಿ.

 

‌ ‌ ತುಳಸಿ ವಿವಾಹ ಪೂಜೆಗೆ ಶುಭ ಮುಹೂರ್ತ

ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ತಿಥಿ ನವೆಂಬರ್ 22 ರಂದು ರಾತ್ರಿ 11.03 ರಿಂದ ಪ್ರಾರಂಭವಾಗುವುದು ಏಕಾದಶಿ ತಿಥಿ ಮುಕ್ತಾಯ: ನವೆಂಬರ್ 23 ರಂದು ರಾತ್ರಿ 09.01 ಕ್ಕೆ ಕೊನೆಗೊಳ್ಳುತ್ತದೆ. ಏಕಾದಶಿ ದಿನಾಂಕದಂದು ರಾತ್ರಿ ಪೂಜೆಯ ಸಮಯವು ಸಂಜೆ 05.25 ರಿಂದ 08.46 ರವರೆಗೆ ಇರುತ್ತದೆ. ‌

‌ ‌ ‌ ‌

ತುಳಸಿ ವಿವಾಹದ ಪ್ರಯೋಜನ

* ತುಳಸಿ ವಿವಾಹವನ್ನು ಮಾಡುವುದರಿಂದ ವ್ಯಕ್ತಿ ಮೋಕ್ಷ ಪಡೆಯುತ್ತಾನೆ.

* ಕನ್ಯಾದಾನದ ಫಲ ದೊರೆಯುವುದು.

* ಮಕ್ಕಳ ಅಪೇಕ್ಷಿತ ದಂಪತಿಗೆ ಮಕ್ಕಳ ಭಾಗ್ಯ ದೊರೆಯುವುದು.

* ತುಳಸಿ ಮತ್ತು ಶಾಲಿಗ್ರಾಮವನ್ನು ಸರಿಯಾಗಿ ಪೂಜಿಸುವುದರಿಂದ ಇಷ್ಟಾರ್ಥಗಳು ಈಡೇರುವುದು.



---------------- Hari Om -------------- 

 

ದೇವ ಉತ್ಥಾನ ಏಕಾದಶಿ / Deva Uthana Ekadasi

 

ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ಚಾತುರ್ಮಾಸಗಳು ಸುಮಾರು 5 ತಿಂಗಳ ಅವಧಿಯನ್ನು ತೆಗೆದುಕೊಂಡಿತು. ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಈಗ ಎಲ್ಲಾ ದೇವರುಗಳು ನಿದ್ರೆಯಿಂದ ಎಚ್ಚರಗೊಳ್ಳುವ ಸಮಯ. ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ವಿಷ್ಣು ಸೇರಿದಂತೆ ಎಲ್ಲಾ ದೇವರುಗಳು ದೇವಪ್ರಭೋದಿನಿ ಏಕಾದಶಿ ದಿನದಂದು ಎಚ್ಚರಗೊಳ್ಳುತ್ತಾರೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಪ್ರಭೋದಿನಿ ಏಕಾದಶಿ ಅಥವಾ ದೇವ ಉತ್ಥಾನ ಏಕಾದಶಿ ಎಂದು ಆಚರಿಸಲಾಗುತ್ತದೆ. ಈ ದಿನದಿಂದ, ಮದುವೆ, ನಿಶ್ಚಿತಾರ್ಥ ಮತ್ತು ಇತರ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ.


ಸೃಷ್ಟಿಯ ಸಂಚಲನೆ ಆರಂಭವಾಗುವುದು:


ಭಗವಾನ್‌ ವಿಷ್ಣು ಕ್ಷೀರಸಾಗರದಲ್ಲಿ ಚಾತುರ್ಮಾಸಗಳ ವಿಶ್ರಾಂತಿ ಮಾಡಿದ ನಂತರ, ವಿಷ್ಣು ಮತ್ತೆ ಬ್ರಹ್ಮಾಂಡವನ್ನು ನಿರ್ವಹಿಸುವ ಕೆಲಸವನ್ನು ವಹಿಸಿಕೊಳ್ಳುತ್ತಾನೆ. ಭಗವಾನ್ ವಿಷ್ಣು ಆಷಾಢ ತಿಂಗಳಲ್ಲಿ ಬರುವ ದೇವಶಯನಿ ಏಕಾದಶಿ ದಿನದಿಂದ ಕ್ಷೀರ ಸಾಗರದಲ್ಲಿ 4 ತಿಂಗಳುಗಳ ಕಾಲ ನಿದ್ರಿಸಲು ಹೋಗುತ್ತಾನೆ. 4 ತಿಂಗಳಲ್ಲಿ ಶಿವನು ವಿಶ್ವವನ್ನು ನಡೆಸುತ್ತಾನೆ. ಆದರೆ ದೇವ ಉತ್ಥಾನ ಏಕಾದಶಿಯ ದಿನದಿಂದ, ಎಲ್ಲಾ ದೇವರು ಮತ್ತು ದೇವತೆಗಳು ಎಚ್ಚರಗೊಳ್ಳುತ್ತಾರೆ ಮತ್ತು ಎಲ್ಲರೂ ಮತ್ತೆ ತಮ್ಮ ಕರ್ತವ್ಯವನ್ನು ತೆಗೆದುಕೊಳ್ಳುತ್ತಾರೆ. ಸಾಲಿಗ್ರಾಮ ಮತ್ತು ತುಳಸಿ ದೇವ ಉತ್ಥಾನ ಏಕಾದಶಿ ದಿನದಂದು ಮೊದಲು ವಿವಾಹವಾದರು ಆದ್ದರಿಂದ ಈ ಆಚರಣೆಯ ನಂತರ ಅಂದರೆಮುಂತಾದವು ತುಳಸಿ ವಿವಾಹ ಮತ್ತು ದೇವ ಉತ್ಥಾನ ಏಕಾದಶಿ ನಂತರ ನಿಶ್ಚಿತಾರ್ಥ, ಮದುವೆ ಮುಂತಾದ ಶುಭ ಕಾರ್ಯಗಳು ಆರಂಭವಾಗುತ್ತದೆ.

ಮದುವೆ ಮತ್ತು ನಿಶ್ಚಿತಾರ್ಥಕ್ಕೆ ಶುಭ ಮುಹೂರ್ತ:

 
ದೇವ ಉತ್ಥಾನ ಏಕಾದಶಿಯನ್ನು ಅಬುಜಾ ಎಂದು ಪರಿಗಣಿಸಲಾಗಿದೆ. ಅಂದರೆ, ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನವು ಮದುವೆ ಮತ್ತು ನಿಶ್ಚಿತಾರ್ಥದಂತಹ ಶುಭ ಕಾರ್ಯಗಳಿಗೆ ಬಹಳ ಶುಭ ದಿನವಾಗಿದೆ. ಧರ್ಮಗ್ರಂಥಗಳಲ್ಲಿ ಇದನ್ನು ಅಬುಜಾ ಮುಹೂರ್ತ ಎಂದು ಸ್ವೀಕರಿಸಲಾಗಿದೆ. ಅಂದರೆ, ದೇವ ಉತ್ಥಾನ ಏಕಾದಶಿ ದಿನದಂದು, ನೀವು ಯಾವುದೇ ಶುಭ ಕಾರ್ಯವನ್ನು ಮಾಡಲು ಬಯಸಿದರೆ, ನೀವು ಪಂಚಾಂಗವನ್ನು ನೋಡುವ ಅಗತ್ಯವಿಲ್ಲ ಅಥವಾ ನೀವು ಯಾವುದೇ ಶುಭ ಸಮಯವನ್ನು ನಿರ್ವಹಿಸುವ ಅಗತ್ಯವಿಲ್ಲ. ತಮ್ಮ ಮದುವೆಗೆ ಉತ್ತಮ ದಿನವನ್ನು ಆಯ್ದುಕೊಳ್ಳಲು ಸಾಧ್ಯವಾಗದ ಹುಡುಗರು ಮತ್ತು ಹುಡುಗಿಯರು ಈ ದಿನವನ್ನೇ ತಮ್ಮ ಮದುವೆಯ ದಿನವಾಗಿ ಆಯ್ದುಕೊಳ್ಳಬಹುದು. ಈ ದಿನ ವಿವಾಹ, ನಿಶ್ಚಿತಾರ್ಥದಂತಹ ಮಂಗಳ ಕಾರ್ಯವನ್ನು ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರುವುದು.

ಈ ಸಮಯ ಶುಭ ಸಂಯೋಗದ ರೂಪವಾಗಿದೆ:


ಈ ಬಾರಿ ದೇವ ಉತ್ಥಾನ ಏಕಾದಶಿಯಂದು ಶುಭ ಸಂಯೋಗವು ರೂಪಗೊಂಡಿದೆ. ಈ ಬಾರಿ ಸಿದ್ಧ ಯೋಗ, ಮಹಾಲಕ್ಷ್ಮಿ ಮತ್ತು ರವಿ ಯೋಗದಂತಹ ಶುಭ ಯೋಗವನ್ನು ನಾವು ನೋಡಬಹುದು. ಈ ಯೋಗಗಳ ನಡುವೆ ಮಾಡುವ ಯಾವುದೇ ಶುಭ ಕಾರ್ಯವು ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಶುಭ ಕಾಕತಾಳೀಯಗಳ ಮಧ್ಯೆ, ಮನೆಯವರು ವಿಷ್ಣು, ಮಾ ಲಕ್ಷ್ಮಿ ಮತ್ತು ತುಳಸಿಯನ್ನು ಪೂಜಿಸಿದರೆ, ಅವರು ಅತ್ಯಂತ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಮನೆಯ ಸಂಪತ್ತು ಹೆಚ್ಚಾಗುತ್ತದೆ. ಹಲವು ವರ್ಷಗಳ ನಂತರ ದೇವ ಉತ್ಥಾನ ಏಕಾದಶಿ ಇಂತಹ ಶುಭ ಕಾಕತಾಳೀಯದೊಂದಿಗೆ ರೂಪುಗೊಂಡಿದೆ ಎನ್ನುವ ನಂಬಿಕೆಯಿದೆ.

 
ಈ ರೀತಿಯಾಗಿ ನೀವು ದಾನದ ಪುಣ್ಯವನ್ನು ಪಡೆಯಬಹುದು


ದೇವ ಉತ್ಥಾನ ಏಕಾದಶಿಯ ಸಂಜೆ ಪೂಜೆಯ ಸಮಯದಲ್ಲಿ ತಾಯಿ ತುಳಸಿ ಮತ್ತು ಸಾಲಿಗ್ರಾಮ ವಿವಾಹವಾದರು. ತುಳಸಿ ವಿವಾಹವನ್ನು ಈ ಏಕಾದಶಿಯಂದು ವಿಧಿ - ವಿಧಾನಗಳ ಮೂಲಕ ಮಾಡಲಾಗುತ್ತದೆ. ಈ ದಿನ ತುಳಸಿಯನ್ನು ಸುಮಂಗಲಿಯಂತೆ ಅಲಂಕರಿಸಲಾಗುತ್ತದೆ. ಹೆಣ್ಣು ಮಗುವನ್ನು ಹೊಂದಿರದ ದಂಪತಿಗಳು ಈ ದಿನ ತುಳಸಿ ಪೂಜೆಯನ್ನು ಮಾಡುವ ಮೂಲಕ ಕನ್ಯಾದಾನದ ಪುಣ್ಯದ ಫಲವನ್ನು ಪಡೆದುಕೊಳ್ಳಬಹುದು.

ದೇವ ಉತ್ಥಾನ ಏಕಾದಶಿ ದಿನವೂ ಎಷ್ಟೊಂದು ಶುಭ ದಿನವೆಂಬೂದು ನಿಮಗೀಗಾಲೇ ತಿಳಿದಿರಬಹುದು.

ಸಾಮಾನ್ಯವಾಗಿ ವಿವಾಹ, ನಿಶ್ಚಿತಾರ್ಥ ಮುಂತಾದ ಮಂಗಳ ಕಾರ್ಯವನ್ನು ಮಾಡುವಾಗ ಶುಭ ದಿನಕ್ಕಾಗಿ ತಿಂಗಳುಗಟ್ಟಲೇ ಕಾಯುತ್ತೇವೆ. ಆದರೆ ಈ ದಿನ ಯಾವುದೇ ಮುಹೂರ್ತಕ್ಕಾಗಲಿ, ಗಳಿಗೆಗಾಗಲಿ ಕಾಯಬೇಕೆಂದಿಲ್ಲ. ಯಾವುದೇ ಮಂಗಳಕಾರ್ಯವನ್ನಾದರೂ ನೀವು ಈ ದಿನ ಮಾಡಬಹುದು.


-------------- Hari Om ------------

 

Friday, November 3, 2023

Lifelong Companion Till Death --- It is Your BODY


Life-Long Companion till Death – It is Your BODY – Very True


ಈ ಜೀವನದಲ್ಲಿ ನಿಮ್ಮ ನಿಜವಾದ ಸಂಗಾತಿ ಯಾರು?


Who is your Life Partner ?????


ತಾಯಿ - Mother
ತಂದೆ - Father
ಹೆಂಡತಿ -- Wife
ಗಂಡ -- Husband
ಮಗ – Son
ಮಗಳು - Daughter
ಸ್ನೇಹಿತರು - Friends
ಸಂಬಂದಿಕರು - Relatives


ಇಲ್ಲ ಯಾರೂ ಇಲ್ಲ. None of the Above


ನಿಮ್ಮ ನಿಜವಾದ ಒಡನಾಡಿ ನಿಮ್ಮ ದೇಹವೇ! ಎಷ್ಟು ಕೋಟಿಗಳಿದ್ದರೂ, ಎಷ್ಟು ವೈದ್ಯರಿದ್ದರೂ, ಎಷ್ಟು ಜನರಿದ್ದರೂ, ನಿಮ್ಮ ವಿನಃ ಏನನ್ನೂ ಮಾಡಲು ಸಾಧ್ಯವಿಲ್ಲ.


ಒಮ್ಮೆ ನಿಮ್ಮ ದೇಹವು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದರೆ, ಯಾರೂ ನಿಮ್ಮೊಂದಿಗೆ ಇರುವುದಿಲ್ಲ --
ನೀವಿರಲಿ ಇಲ್ಲದಿರಲಿ ಇದು ಕಟುಸತ್ಯ.


ನೀವು ಮತ್ತು ನಿಮ್ಮ ದೇಹ ಮಾತ್ರ ಹುಟ್ಟಿನಿಂದ ಸಾಯುವವರೆಗೆ ಒಟ್ಟಿಗೆ ಇರುವಿರಿ.
ಈ ದೇಹವು ನಿಮ್ಮ ನಿಜವಾದ ಮನೆಯಾಗಿದೆ.


ನಿಮ್ಮ ದೇಹಕ್ಕೆ ನೀವು ಜವಾಬ್ದಾರಿಯುತವಾಗಿ ಏನು ಮಾಡುತ್ತೀರೋ ಅದು ಖಂಡಿತವಾಗಿಯೂ ನಿಮ್ಮ ಬಳಿಗೆ ಬರುತ್ತದೆ.


ನಿಮ್ಮ ದೇಹವ ನೀವು ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟು ನಿಮ್ಮ ದೇಹವು ನಿಮ್ಮನ್ನು ನೋಡಿಕೊಳ್ಳುತ್ತದೆ.


ನೀವು ಏನು ತಿನ್ನಬೇಕು
ನೀವೇನು ಮಾಡುಬೇಕು
ಒತ್ತಡವನ್ನು ಹೇಗೆ ಎದುರಿಸುವುದು?
ನಿಮಗೆ ವಿಶ್ರಾಂತಿ ಬೇಕೇ?

 

 

 

 

ಇವುಗಳು ಮಾತ್ರ ನಿಮ್ಮ ದೇಹದ ಪ್ರತಿಕ್ರಿಯೆಯನ್ನು ನಿರ್ಧರಿಸುತ್ತವೆ.
ಗುರುತಿಸಿ.????


ನಿಮ್ಮ ದೇಹವು ನೀವು ವಾಸಿಸುವ ಏಕೈಕ ವಿಳಾಸವಾಗಿದೆ!
ನಿಮ್ಮ ದೇಹವು ನಿಮ್ಮ ಆಸ್ತಿ ಮತ್ತು ಸಂಪತ್ತು.
ಅದಕ್ಕೆ ಬೇರೆ ಯಾವುದೂ ಹೋಲಿಕೆಯಾಗುವುದಿಲ್ಲ.
ನಿಮ್ಮ ದೇಹ ನಿಮ್ಮ ಜವಾಬ್ದಾರಿ...
ಹಣ ಬರಲಿದೆ. ಹೆೋಗುತ್ತದೆ
ಸಂಬಂಧಿಕರು ಮತ್ತು ಸ್ನೇಹಿತರು ಶಾಶ್ವತವಲ್ಲ.
ನೆನಪಿಡಿ.


ನಿಮ್ಮ ದೇಹಕ್ಕೆ ಯಾರೂ ಸಹಾಯ ಮಾಡಲಾರರು. ನಿಮ್ಮನ್ನು ಹೊರತುಪಡಿಸಿ…


ಶ್ವಾಸಕೋಶಗಳಿಗೆ- ಪ್ರಾಣಾಯಾಮ.
ಮನಸ್ಸಿಗೆ- ಧ್ಯಾನ
ದೇಹಕ್ಕೆ- ಯೋಗ.
ಹೃದಯಕ್ಕೆ- ನಡೆ.
ಕರುಳಿಗೆ- ಉತ್ತಮ ಆಹಾರ.
ಆತ್ಮಕ್ಕೆ- ಒಳ್ಳೆಯ ಆಲೋಚನೆಗಳು.
ಸಮಾಜಕ್ಕಾಗಿ- ಒಳ್ಳೆಯ ಕೆಲಸಗಳು.

 

 


ಎರಡು ಬಾರಿ ಓದಿ. ಈ ಒಳ್ಳೆಯ ಸಂದೇಶವನ್ನು ಎಲ್ಲರಿಗೂ ಕಳುಹಿಸಿ

Read Twice and Understand its inner meaning its Very Useful , Preserve it , needs to be Written in Golden Words and Valuable information on Human Body so Please circulate this to everyone.


--------------- Hari Om --------------

 

Wednesday, October 25, 2023

Seege Gowri Vritha

 

ಸೀಗೆ ಗೌರೀವ್ರತ / Seege Gowri Vritha


From 26th October 2023 to 30th October 2023 ( 5 Days )

 

 

Seege Gowri Vritha 

 

ಆಶ್ವಿನ - ಶುಕ್ಲ - ದ್ವಾದಶಿಯಿಂದ ಆರಂಭಿಸಿ ಪೂರ್ಣಿಮಾ ಪರ್ಯಂತವಾಗಿ ಐದು ದಿನಗಳವರೆಗೂ ಸೀಗೆ ಗೌರಿವ್ರತವನ್ನು ಆಚರಿಸುವ ಪದ್ಧತಿಯಿದೆ. ಇದೊಂದು ಸಾಂಪ್ರದಾಯಿಕ ವ್ರತವಾಗಿದೆ. ಇದನ್ನು ಆಚರಿಸುವ ಕ್ರಮವು ಹೀಗಿದೆ –



ಆಶ್ವಿನ-ದ್ವಾದಶಿಯಂದು ಮರದಿಂದ ಏಳು ಸುತ್ತುಗಳುಳ್ಳ ಗೋಪುರಾಕಾರವಾಗಿ (ಹನುಮನ ಬಾಲವನ್ನು ಒಂದರ ಮೇಲೊಂದು ಪೇರಿಸಿದಂತೆ) ತಯಾರಿಸಿದ್ದು, ಒಂಭತ್ತು ಸುತ್ತುಗಳುಳ್ಳ ಮತ್ತೊಂದನ್ನು ತಯಾರಿಸಿ. ಶಂಕರ, ಗೌರಿಯನ್ನು ಆವಾಹಿಸಬೇಕು. ಒಂಭತ್ತು ಹಾಗೂ ಏಳು ಸುತ್ತುಗಳಲ್ಲಿ ಒಂದು ಅರಷಿಣ ಇನ್ನೊಂದು ಕುಂಕುಮ ಬಣ್ಣವಿರಬೇಕು.  

 

ಇವುಗಳನ್ನು ಮಣ್ಣಿನಿಂದಲೂ ತಯಾರಿಸಿ ಪೂಜಿಸುವವರಿದ್ದಾರೆ. ಮರದಿಂದ ತಯಾರಿಸಿದರೆ ಪ್ರತಿವರ್ಷವೂ ತಯಾರಿಸುವ ತೊಂದರೆ ಇರುವುದಿಲ್ಲ. ಮರದಿಂದ ತಯಾರಿಸಿದ ಗೋಪುರಗಳ ಮೇಲೆ ಒಂದು ಕೊಂತಿಯನ್ನು ಇಟ್ಟಿರಬೇಕು. ಇವುಗಳ ಮುಂದೆ ಮಣ್ಣಿನಿಂದ ತಯಾರಾದ ಸಣ್ಣ ಸಣ್ಣ ಹೂಜೀ ಆಕಾರದ ಕೊಂತಿಗಳನ್ನು ಇಟ್ಟಿರಬೇಕು. ಇವುಗಳನ್ನು ಇಟ್ಟು ಗೌರೀ ಶಂಕರನನ್ನು ಆವಾಹಿಸಿ ಪೂಜಿಸಬೇಕು.



ಪ್ರತಿದಿನ ಸಂಜೆ ನೈವೇದ್ಯಕ್ಕಾಗಿ ತಿಂಡಿತಿನಿಸುಗಳನ್ನು ಮಾಡಿ, ಅದನ್ನು ಚಿಕ್ಕ ಚಿಕ್ಕ ಮಕ್ಕಳಿಗೆ ಕೊಡಬೇಕು. ಪ್ರತಿದಿವಸವೂ ಸಂಜೆ ಹಾಡು ಆರತಿಯಾಗಬೇಕು. ದೀಪದ ಆರತಿಯನ್ನು ಇಲ್ಲಿ ಎತ್ತಬಾರದು. ಕೊಬ್ಬರಿ ಸಕ್ಕರೆ, ಬೆಲ್ಲ ಕೊಬ್ಬರಿ, ಕಳ್ಳೆಹಿಟ್ಟು, ತುಪ್ಪ, ಸಕ್ಕರೆ ಇವುಗಳನ್ನು ತಟ್ಟೆಯಲ್ಲಿ ದೀಪದಾಕಾರ ಮಾಡಿ ಆರತಿಯನ್ನು ಎತ್ತಿ ಚಿಕ್ಕ ಮಕ್ಕಳಿಗೆ ಕೊಡುವುದು. ವಿವಾಹವಾದ ಮೇಲೆ ಮಂಗಳ ಗೌರಿಯು ವ್ರತವಿದ್ದಂತೆ ಮದುವೆಗೆ ಮುನ್ನ ಗೌರಿಯ ಅನುಗ್ರಹಕ್ಕಾಗಿ ಮಾಡುವ ವ್ರತವಿದು 

ಸೀಗೆ ಪೂರ್ಣಿಮೆ ದಿನ ನದಿಯ ತೀರ, ಬಾವಿ, ಸರೋವರ ಇವುಗಳಲ್ಲಿ ಯಾವುದಾದರೊಂದು ಸ್ಥಳಕ್ಕೆ ವಾದ್ಯ ಸಹಿತವಾಗಿ ಸೀಗೆ ಗೌರಿಯನ್ನು ಕರೆದುಕೊಂಡು ಹೋಗಿ ಅವಲಕ್ಕಿ ಮೊಸರು ನಿವೇದಿಸಿ, ವಿಶೇಷ ಪೂಜೆಯನ್ನು ಮಾಡಿ, ಮುತ್ತೈದೆಯರಿಗೆ ಅವಲಕ್ಕಿ ಪ್ರಸಾದವನ್ನು ನೀಡಿ, ಆ ಮಣ್ಣಿನ ಚಿಕ್ಕ ಚಿಕ್ಕ ಕೊಂತಿಗಳನ್ನು ನೀರಿನಲ್ಲಿ ವಿಸರ್ಜಿಸಬೇಕು. ಮರದ ಗೌರಿಯನ್ನು ನದಿಯಾದರೆ ಸ್ನಾನ ಮಾಡಿಸಿ ತರುವುದು.

 

--------------- Hari Om ---------------