Thursday, May 22, 2025

Raghavendra Moola Mantra

 

ಶ್ರೀ ರಾಘವೇಂದ್ರ ಮೂಲ ಮಂತ್ರ

Sri Raghavendra Moola Mantra

 


                               Sri Raghavendra Swamy

 

ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಜಪಿಸಲು ಉತ್ತಮ ದಿನಗಳು (ನಿಮಗೆ ಪ್ರತಿದಿನ ಜಪಿಸಲು ಸಾಧ್ಯವಾಗದಿದ್ದರೆ) ---- ಗುರುವಾರ


ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಪ್ರಾರಂಭಿಸಲು ಉತ್ತಮ ದಿನ: ಗುರುವಾರ (ಶುಕ್ಲ ಪಕ್ಷ / ಹುಣ್ಣಿಮೆ ಚಂದ್ರನ ಅವಧಿ) ಅಥವಾ ಪುಷ್ಯ ನಕ್ಷತ್ರ ಬಂದ ಗುರುವಾರ.

ಜಪಿಸಲು ಉತ್ತಮ ಸಮಯ: ಸೂರ್ಯೋದಯಕ್ಕೂ 48 ನಿಮಿಷದಿಂದ 1 ಗಂಟೆ ಮೊದಲು.

ಮಂತ್ರವನ್ನು ಎಷ್ಟು ಬಾರಿ ಪಠಿಸಬೇಕು..?: 9, 11, ಅಥವಾ 108 ಬಾರಿ.


ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಯಾರು ಪಠಿಸಬಹುದು..?: ಯಾವುದೇ ಲಿಂಗ ಮತ್ತು ವಯಸ್ಸಿನ ಭೇದ - ಭಾವವಿಲ್ಲದೇ ಯಾರು ಬೇಕಾದರೂ ಪಠಿಸಬಹುದು.

ಶ್ರೀ ರಾಘವೇಂದ್ರ ಮೂಲ ಮಂತ್ರದ ಪ್ರಯೋಜನಗಳು

ಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿರಬೇಕೇ..? ತುಳಸಿ ಪೂಜೆಯಲ್ಲಿ ಈ ಮಂತ್ರ ಪಠಿಸಿ..!

ಶ್ರೀ ರಾಘವೇಂದ್ರನನ್ನು ಪೂಜಿಸುವುದು ಹೇಗೆ..? ನೀವು ಶ್ರೀ ರಾಘವೇಂದ್ರರ ಫೋಟೋ ಅಥವಾ ಯಂತ್ರವನ್ನು ಬಳಸುವುದರ ಮೂಲಕ ಆತನನ್ನು ಪೂಜಿಸಬಹುದು. ನೀವು ಶ್ರೀ ರಾಘವೇಂದ್ರ ಸ್ವಾಮಿಯ ಪ್ರತಿಮೆಯನ್ನೂ ಬಳಸಬಹುದು.

ಮಂತ್ರ ಸಿದ್ಧಿಯನ್ನು ಪಡೆಯಲು: 48 ದಿನಗಳವರೆಗೆ ದಿನಕ್ಕೆ 1008 ಬಾರಿ ಪಠಿಸಬೇಕು.

ಜಪ ಮಾಲಾ: ತುಳಸಿಯಿಂದ ಮಾಡಿದ ಮಣಿ ಮಾಲೆಯನ್ನು ಬಳಸಬಹುದು (ತುಳಸಿ ಜಪ ಮಾಲಾ)

 

                                                              Sri Raghavendra Swamy

 

ಶ್ರೀ ರಾಘವೇಂದ್ರ ಮೂಲ ಮಂತ್ರವು ಕೆಳಕಂಡಂತಿದೆ:



"ಓಂ ಶ್ರೀ ರಾಘವೇಂದ್ರಾಯ ನಮಃ"


ಗುರವಾರ ರಾಘವೇಂದ್ರ ಸ್ವಾಮಿಯನ್ನು ಪೂಜಿಸುವ ವಿಧಾನ:


ರಾಘವೇಂದ್ರ ಸ್ವಾಮಿಯ ಪೂಜೆ ಸರಳವಾದರೂ ಸ್ವಚ್ಛವಾಗಿರಬೇಕು. 6 ಗುರುವಾರಗಳವರೆಗೆ ಸ್ವಾಮಿಯನ್ನು ಪೂಜಿಸಿ, 7ನೇ ಗುರುವಾರ ಪೂಜೆಯನ್ನು ಸಮಾಪ್ತಿ ಮಾಡಬೇಕು.

ಗುರುವಾರ ಮುಂಜಾನೆ ಬೇಗ ಎದ್ದು, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ರಂಗೋಲಿ ಹಾಕಿ ಅದರ ಮೇಲೆ ಮರದ ಮಣೆ ಇಟ್ಟು ಮಣೆಯನ್ನು ಸ್ವಚ್ಛಗೊಳಿಸಿ ಅದರ ಮೇಲೆ ರಂಗೋಲಿಯನ್ನು ಹಾಕಿ.

ಅದರ ಮೇಲೆ ಸ್ವಚ್ಛಗೊಳಿಸಿದ ರಾಯರ ಮೂರ್ತಿ ಅಥವಾ ಫೊಟೋವನ್ನಿಟ್ಟು ಕುಂಕುಮ, ಗಂಧವನ್ನು ಹಚ್ಚಿ. ನಂತರ ತುಳಸಿ ಹಾರವನ್ನು, ಇನ್ನಿತರ ಹೂಗಳ ಹಾರವನ್ನು ಅರ್ಪಿಸಿ.

ಆದಿ ಲಕ್ಷ್ಮಿ ಪೂಜೆಯಿಂದ ಮೋಕ್ಷ ಪ್ರಾಪ್ತಿ..! ನವರಾತ್ರಿ ಲಕ್ಷ್ಮಿ ಪೂಜೆಯ ಫಲವೇ ಅಪಾರ..


ರಾಯರ ಫೋಟೋದ ಮುಂದೆ 5 ಮುಖದ ದೀಪವನ್ನು ಬೆಳಗಿಸಿ.

ಉತ್ತಮ ಹಣ್ಣುಗಳು, ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ ಇತ್ಯಾದಿಗಳನ್ನು ಇಡಿ. ಮುಖ್ಯವಾಗಿ ರಾಯರ ಪೂಜೆಯಲ್ಲಿ ಅರಿಶಿನ ಬಳಸಬೇಕು.

ರಾಯರನ್ನು ಪೂಜಿಸುವ ಮುನ್ನ ಗಣೇಶನನ್ನು ಪೂಜಿಸಿ ಅವನಿಗೂ ಪ್ರತ್ಯೇಕವಾಗಿ ಹೂವು, ಹಣ್ಣುಗಳನ್ನು ಅರ್ಪಿಸಿ.

ನಂತರ ರಾಯರ ಮುಂದೆ ಕುಳಿತು ಮನಸ್ಸಿನಲ್ಲಿನ ಆಸೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿ ದೂಪ - ದೀಪವನ್ನು ಬೆಳಗಿ ನೈವೇದ್ಯವನ್ನು ಅರ್ಪಿಸಿ.

ಸುಮಾರು 2 ಅಥವಾ 3 ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನಮ್ಮ ಕೈಯಲ್ಲಿ ಮುಚ್ಚಿ ರಾಯರಿಗೆ 11 ಪ್ರದಕ್ಷಿಣೆಯನ್ನು ಹಾಕಿ. ಪ್ರದಕ್ಷಿಣೆ ಹಾಕುವಾಗ ಈ ಮಂತ್ರವನ್ನು ಪಠಿಸಿ.



"ಪೂಜ್ಯಾಯ ಶ್ರೀ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ|


ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||"



ಈ ಯಂತ್ರದಿಂದ ಸಂಪತ್ತು ಗ್ಯಾರೆಂಟಿ..! ಈ ಯಂತ್ರವನ್ನು ರಚಿಸುವುದು ಹೇಗೆ..?


11 ಪ್ರದಕ್ಷಿಣೆ ಮುಗಿಸಿದ ನಂತರ, ಶ್ರೀ ರಾಘವೇಂದ್ರರ ಮೇಲೆ ನಮ್ಮ ಕೈಯಲ್ಲಿರುವ ತುಳಸಿಯನ್ನು ಹರಡಿ ಅವನ ಕಡೆಗೆ ಪ್ರಾರ್ಥಿಸಿ. ಕೊನೆಗೆ ರಾಯರ ಕಡೆಗೆ "ಸಷ್ಟಾಂಗ ನಮಸ್ಕಾರ" ಮಾಡಿ ಪೂಜೆ ಮುಗಿಸಿ. ಕೇವಲ ಮಧ್ಯಾಹ್ನ ಒಂದು ಬಾರಿ ಆಹಾರವನ್ನು ತೆಗೆದುಕೊಂಡು ರಾತ್ರಿಯಲ್ಲಿ ಕೆಲವು ಹಣ್ಣುಗಳನ್ನು ಮತ್ತು ಹಾಲನ್ನು ಮಾತ್ರ ಸೇವಿಸಬೇಕು. ಮಲಗುವ ಚಾಪೆಯನ್ನು, ಮಂಚವನ್ನು ಬಳಸಬಾರದು.

ಈ ಮೇಲಿನ ಪೂಜಾ ವಿಧಾನಗಳನ್ನು ಮತ್ತು ಮಂತ್ರವನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಅನುಸರಿಸುವ ಮೂಲಕ, ನಿಮ್ಮ ಜೀವನದಲ್ಲಿ ಸಕಾರಾತ್ಮಕ ಮಾರ್ಗವನ್ನು ನೀವು ಸ್ಪಷ್ಟವಾಗಿ ನೋಡಬಹುದು.

ಶ್ರೀ ಗುರು ರಾಘವೇಂದ್ರ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ನೀಡುತ್ತಾನೆ.

 

                                                                 another Photo of Rayaru


 

--------------- Hari Om ---------------


No comments:

Post a Comment