Wednesday, December 24, 2025

ಶ್ರೀ ಲಕ್ಷ್ಮಿವರಾಹ ವೆಂಕಟೇಶ್ವರ ಸ್ವಾಮಿ ದೇವಸ್ಥಾನ - Shri Laxmi Varaha Venkateswara Swamy Temple

 

ಶ್ರೀ ಲಕ್ಷ್ಮಿವರಾಹ ವೆಂಕಟೇಶ್ವರ ಸ್ವಾಮಿ ದೇವಸ್ಥಾನ

ಇಟ್ಟಮಡು, ಬನಶಂಕರಿ 3ನೇ ಹಂತ, ಹೊಸಕೆರೆಹಳ್ಳಿ, -- ಬೆಂಗಳೂರು

Shri Laxmi Varaha Venkateswara Swamy Temple

 

                                    Sri Laxmi Varaha Swamy

 

                                    Sri Venkateswara swamy

 

                                          Main Gopuram

 

                                             Garuda Gamba

 

It is on the main Road adjacent to Ring Road in the heart of the City and the Temple is of several hundreds year old and it is Very Rare of this kind of 2 Lords with consorts are in one Sannidhana ( Temple ) . Sri Laxmi Varaha Swamy and Laxmi Venkateswara Swamy & never found anywhere under in one complex.

 

                                                              Naga Silas


 

                                                    Laxmi Varaha Swamy

 

                                                    Sri Padmavathi Devi

 

                                                   Sri Ranganatha Swamy

 

Also there is Lord Ranganatha Swamy , Lord Narasimha and Lord Anjaneya Shrines inside the Temple complex.

                                                                    Pic -1

 

                                                                 Pic -2
 

Temple is well maintained and regular Pujas , Homas and other Spiritual activities are being carried out and very Calm and Serene atmosphere place to sit and one can Meditate and get Blessings from the Lords.

 

                                                                 Pic -3

 

                                                                  Pic -4


 I
do not have more information on this Temple will Update as & when I get it. Shocking to note is that Many Devotees are Unaware of this Temple.

Contact Information

Ittamadu, Banashankari 3rd Stage, Hosakerehalli,

Bangaluru -- 560085 -- Karnataka

Phone: 099803 89688

Please Visit to this Temple once and Get Blessings.



---------- Hari Om ----------






 


 


 


 

 



 



Sunday, December 21, 2025

ಕಾಲ ಚಕ್ರ ---- Wheel of Time

 

ಕಾಲ ಚಕ್ರ ---- Wheel of Time

 


                                   Lord Vishnu

 

ಸೃಷ್ಟಿ ಹೇಗಾಯಿತು...?


ಸೃಷ್ಟಿಯ ಕಾಲ ಚಕ್ರ ಹೇಗೆ ನಡೆಯಿತು?. 

How did Creation happen..? How did the cycle of Creation 

happen?

 


                               Kaala Chakra-Wheel of Time

 

3. ಮಾನವನಲ್ಲಿ ಇರೋ ಸೃಷ್ಟಿಯ ತತ್ವಗಳು ಎಷ್ಟಿದೆ.

How many principles of creation are there in humans?

1. ಮೊದಲು ಪರಾತ್ಪರವು ಹುಟ್ಟಿ, ಇದರಿಂದ ಶಿವ ಹುಟ್ಟಿದ್ದು.
2. ಶಿವನಿಂದ ಶಕ್ತಿ.
3. ಶಕ್ತಿಯಿಂದ ನಾದ.
4. ನಾದದಿಂದ ಬಿಂದು.
5. ಬಿಂದುವಿನಿಂದ ಸದಾಶಿವಂ
6. ಸದಿಶಿವಂನಿಂದ ಮಹೇಶ್ವರ.
7. ಮಹೇಶ್ವರನಿಂದ ಈಶ್ವರಂ.
8. ಈಶ್ವರನಿಂದ ರುದ್ರ.
9. ರುದ್ರನಿಂದ ವಿಷ್ಣು.
10. ವಿಷ್ಣುವಿನಿಂದ ಬ್ರಹ್ಮ.
11. ಬ್ರಹ್ಮಾನಿಂದ ಆತ್ಮ.
12. ಆತ್ಮನಿಂದ ದಹರಾಕಾಶ.
13. ದಹರಾಕಾಶದಿಂದ ವಾಯು.
14. ವಾಯುವಿನಿಂದ ಅಗ್ನಿ.
15. ಅಗ್ನಿಯಿಂದ ಜಲ.
16. ಜಲದಿಂದ ಪೃಥ್ವಿಯಿಂದ ಓಷಧಗಳು.
17. ಓಷಧಗಳಿಂದ ಆಹಾರ.
18. ಇದರಿಂದಾಗಿ ನರ,ಮೃಗ, ಪಶು, ಪಕ್ಷಿ,ಸ್ಥಾವರ,ಜಂಗಮಗಳು ಹುಟ್ಟಿದವು.

ಸೃಷ್ಟಿಯ ಕಾಲ ಚಕ್ರ. ---- The cycle of Creation.

ಪರಾಶಕ್ತಿ ಆದಿಯಲ್ಲಿ ನಡೆದಿದೆ.
ಇದುವರೆಗೂ 50 ಶಿವ, ವಿಷ್ಣು, ಬ್ರಹ್ಮರು ಬಂದಿದ್ದಾರೆ . ಈಗ 51ನೇ ಬಾರಿ ನಡೀತಾ ಇದೆ.
1. ಕೃತಯುಗ.
2. ತ್ರೇತಾಯುಗ.
3. ದ್ವಾಪರಯುಗ.
4. ಕಲಿಯುಗ.

ನಾಲ್ಕು ಯುಗಕ್ಕೆ ಒಂದು ಮಹಾಯುಗ.

71ಮಹಾಯುಗಕ್ಕೆ ಒಂದು ಮನ್ವಂತರ.
14 ಮನ್ವಂತರ ಕ್ಕೆ ಒಂದು ಸೃಷ್ಟಿ, ಒಂದು ಕಲ್ಪ.
15 ಸಂಧಿಗೆ ಒಂದು ಪ್ರಳಯ, ಒಂದು ಕಲ್ಪ.
1000 ಯುಗ ಆದ್ರೆ ಬ್ರಹ್ಮನಿಗೆ ಒಂದು ಹಗಲು ಸೃಷ್ಟಿ.
1000 ಯುಗ ಆದ್ರೆ ಒಂದು ರಾತ್ರಿ ಪ್ರಳಯ.
2000 ಯುಗಕ್ಕೆ ಒಂದು ದಿನ.
ಬ್ರಹ್ಮನ ವಯಸ್ಸು 51 ಸಂವತ್ಸರ.
ಇದುವರೆಗೂ 27 ಮಹಾಯುಗಗಳು ಕಳೆದಿವೆ.
1 ಕಲ್ಪಕ್ಕೆ ಒಂದು ಹಗಲು 432 ಕೋಟಿ ಸಂವತ್ಸರಗಳು.
7200 ಕಲ್ಪಗಳಿಗೆ , ಬ್ರಹ್ಮನಿಗೆ 100 ಸಂವತ್ಸರಗಳು.
14 ಜನ ಮನುಗಳು.

ಈಗ ವೈವಸ್ವತ ಮನ್ವಂತರದ ಶ್ವೇತವಾರಹ ಯುಗದಲ್ಲಿ ಇದ್ದೇವೆ.


5 ಗುರು ಭಾಗದ ಕಾಲಕ್ಕೆ 60 ಸಂವತ್ಸರ.
1ಗುರು ಭಾಗದ ಕಾಲಕ್ಕೆ 12ಸಂವತ್ಸರ.
1 ಸಂವತ್ಸರ ಕ್ಕೆ 6 ಋತುಗಳು
1 ಸಂವತ್ಸರ ಕ್ಕೆ 3 ಕಾಲಗಳು.
1ದಿನಕ್ಕೆ 2 ಭಾಗದ ಹಗಲು ರಾತ್ರಿ.
1 ಸಂವತ್ಸರ ಕ್ಕೆ 12 ಮಾಸಗಳು.
1 ಸಂವತ್ಸರ ಕ್ಕೆ 2 ಆಯನಗಳು.
1ಸಂವತ್ಸರ ಕ್ಕೆ 27 ಕಾರ್ತಿಕ ಗಳು.
1ಮಾಸಕ್ಕೆ 30 ತಿಥಿ,27 ನಕ್ಷತ್ರಗಳು, ವಿವರಣೆ.
12 ರಾಶಿ
9 ಗ್ರಹ
8 ದಿಕ್ಕು
108 ಪಾದಗಳು.
1 ವಾರಕ್ಕೆ 7 ದಿನ, ಪಂಚಾಂಗದಲ್ಲಿ 1 ತಿಥಿ, 2 ವಾರ, 3 ನಕ್ಷತ್ರ 4 ಕರಣ, 5 ಯೋಗ


ಸೃಷ್ಟಿ ಯಾವತ್ತೂ ತ್ರಿಗುಣಗಳಿಂದನೆ ಇರುತ್ತೆ.

 

                                                   Indian Sages Calculating Manvantaras

 

ದೇವತೆಗಳು, ಜೀವಿಗಳು ಚರಾಚರ ವಸ್ತುಗಳು ಎಲ್ಲಾ ಈ ಮೂರು ಗುಣಗಳಿಂದ ಕೂಡಿದೆ.


1 ಸತ್ವಗುಣ
2 ರಜೋಗುಣ.
3 ತಮೋಗುಣ.

ಪಂಚಭೂತಗಳ ಅವಿರ್ಭಾವ.


1 ಆತ್ಮನಿಂದ ಆಕಾಶ.
2 ಆಕಾಶದಿಂದ ವಾಯು.
3 ವಾಯುವಿನಿಂದ ಅಗ್ನಿ.
4 ಅಗ್ನಿ ಯಿಂದ ಜಲ.
5 ಜಲದಿಂದ ಭೂಮಿ ಅವಿರ್ಭವಿಸಿದೆ.
5 ಜ್ಞಾನೇಂದ್ರಿಯಗಳು
5 ಪಂಚಪ್ರಾಣ ಗಳು
5 ಪಂಚತನ್ಮಾತ್ರಗಳು
5 ಅಂತರ ಇಂದ್ರಿಯಗಳು.5 ಕರ್ಮೇಂದ್ರಿಯ,25 ತತ್ವಗಳು.

1 ಆಕಾಶ ಹೇಗೆ ವಿಭಜಿಸಿದೆ.


ಆಕಾಶವು ಆಕಾಶದಲ್ಲಿ ಲೀನವಾದಲ್ಲಿ ಜ್ಞಾನ.
ಆಕಾಶವು ವಾಯುವಿನಲ್ಲಿ ಲೀನವಾದಲ್ಲಿ ಮನಸ್ಸು.
ಆಕಾಶವು ಅಗ್ನಿಯಲ್ಲಿ ಲೀನವಾದರೆ ಬುದ್ಧಿ.
ಆಕಾಶವು ಜಲದಲ್ಲಿ ಲೀನವಾದರೆ ಚಿತ್ತ.
ಆಕಾಶವು ಭೂಮಿಯಲ್ಲಿ ಲೀನವಾದರೆ ಅಹಂಕಾರ ಹುಟ್ಟುತ್ತಿದ್ದಾವೆ.

ವಾಯುವಿನ ವಿಭಜಿಕರಣ.


ವಾಯುವು ವಾಯುವಿನಲ್ಲಿ ಸೇರಿದರೆ ವ್ಯಾನ.
ವಾಯುವು ಆಕಾಶದಲ್ಲಿ ಸೇರಿದರೆ ಸಮಾನ.
ವಾಯುವು ಅಗ್ನಿ ಜೊತೆಗೆ ಸೇರಿದರೆ ಉದಾನ.
ವಾಯುವು ಜಲದಲ್ಲಿ ಸೇರಿದರೆ ಪ್ರಾಣ.
ವಾಯುವು ಭೂಮಿಯ ಜೊತೆಗೆ ಸೇರಿದರೆ ಅಪಾನವಾಯು ಹುಟ್ಟುತ್ತೆ.

ಅಗ್ನಿಯ ವಿಭಜನೆ


ಅಗ್ನಿ,ಆಕಾಶದ ಜೊತೆಗೆ ಸೇರಿದರೆ ಶ್ರೊತ್ರಂ.
ಅಗ್ನಿ ವಾಯುವಿನಲ್ಲಿ ಸೇರಿದರೆ ವಾಕ್ಕು.
ಅಗ್ನಿ , ಅಗ್ನಿ ಜೊತೆಗೆ ಸೇರಿದರೆ ಚಕ್ಷುವು.
ಅಗ್ನಿ, ಜಲದ ಜೊತೆಗೆ ಸೇರಿದರೆ ಜೀವ್ಹಾ.
ಅಗ್ನಿ, ಭೂಮಿಯ ಜೊತೆಗೆ ಸೇರಿದರೆ ಘ್ರಾಣಂ ಹುಟ್ಟಿದೆ.

ಜಲದ ವಿಭಜನೆ


ಜಲವು ಆಕಾಶದಲ್ಲಿ ಸೇರಿದರೆ ಶಬ್ದ.
ಜಲ ವಾಯುವಿನಲ್ಲಿ ಸೇರಿದರೆ ಸ್ಪರ್ಶ.
ಜಲ ಅಗ್ನಿ ಯಲ್ಲಿ ಸೇರಿದರೆ ರೂಪ.
ಜಲ ಜಲದಲ್ಲಿ ಸೇರಿದರೆ ರಸ.
ಜಲ, ಭೂಮಿಯಲ್ಲಿ ಸೇರಿದರೆ ಗಂಧವು ಹುಟ್ಟಿದೆ.

ಭೂಮಿಯ ವಿಭಜನೆ.


ಭೂಮಿ, ಆಕಾಶದಲ್ಲಿ ಸೇರಿದರೆ ವಾಕ್ಕು.
ಭೂಮಿ ವಾಯುವಿನಲ್ಲಿ ಸೇರಿದರೆ ಪಾಣಿ.
ಭೂಮಿ, ಅಗ್ನಿ ಜೊತೆಗೆ ಸೇರಿದರೆ ಪಾದ.
ಭೂಮಿ, ಜಲದೊಂದಿಗೆ ಸೇರಿದರೆ ಗೂಹ್ಯಂ.
ಭೂಮಿ, ಭೂಮಿಯ ಜೊತೆಗೆ ಸೇರಿದರೆ ಗುದಂ ಹುಟ್ಟಿದೆ.

 

                                                               Hinduism & Science
 

ಮಾನವ ದೇಹ ತತ್ವಗಳು.


1 ಶಬ್ದ
2 ಸ್ಪರ್ಷ
3 ರೂಪ
4 ರಸ
5 ಗಂಧ.

5. ಪಂಚಕರ್ಮೆಂದ್ರಿಯಗಳು


1 ಕಿವಿ.
2 ಚರ್ಮ.
3 ಕಣ್ಣು.
4 ನಾಲಿಗೆ.
5 ಮೂಗು.

ಪಂಚ ಪ್ರಾಣೇಂದ್ರಿಯಗಳು.


1. ಅಪಾನ
2 ಸಮಾನ
3 ಪ್ರಾಣ
4 ಉದಾನ
5 ವ್ಯಾನ.


5. ಅಂತರ್ಇಂದ್ರಿಯಗಳು.


1 ಮನಸ್ಸು
2 ಬುದ್ದಿ
3 ಚಿತ್ತ
4 ಜ್ಞಾನ

5ಅಹಂಕಾರ.


1 ವಾಕ್ಕು
2 ಪಾಣಿ
3 ಪಾದಂ
4 ಗುಹ್ಯಾಂ.
5 ಗುದಂ.

6 ಅರಿಷ್ಡವರ್ಗಗಳು


1 ಕಾಮ
2 ಕ್ರೋಧ
3 ಮೋಹ
4 ಲೋಭ
5 ಮದ
6 ಮಾತ್ಸರ್ಯ.

3 ಶರೀರದಲ್ಲಿ


1 ಸ್ಥೂಲ
2 ಸೂಕ್ಷ್ಮ
3 ಕಾರಣ.

ಅವಸ್ಥೆಗಳು.
1 ಜಾಗ್ರತ
2 ಸ್ವಪ್ನ
3 ಸುಷುಪ್ತಿ.

6 ಷಡ್ಭಾವ ವಿಕಾರಗಳು.


1 ಇರುವುದು.
2 ಹುಟ್ಟುವುದು
3 ಬೆಳೆಯುವುದು
4 ಪರಿಣಮಿಸುವುದು
5 ಕ್ಷೀಣಿಸುವುದು
6 ನಶಿಸುವುದು.

6 ಷಡ್ಕರ್ಮಗಳು


1 ಹಸಿವು
2 ಬಾಯಾರಿಕೆ
3 ಶೋಕ
4 ಮೋಹ
5 ಜರ
6 ಮರಣ.

7 ಸಪ್ತ ಧಾತುಗಳು.


1 ಚರ್ಮ
2 ರಕ್ತ
3 ಮಾಂಸ
4 ಮೇದಸ್ಸು
5 ಮಜ್ಜೆ
6 ಮೂಳೆ
7 ಶುಕ್ಲಂ.

3 ಜೀವಿಗಳು


1 ವಿಶ್ವ
2 ತೇಜ
3 ಪ್ರಜ್ಞಾ.

3 ತ್ರಿಕರ್ಮಗಳು


1 ಪ್ರಾರಬ್ಧ
2 ಆಗಾಮಿ
3 ಸಂಚಿತ.

5 ಕರ್ಮಗಳು


1 ಪಚನ
2 ಆದಾನ
3 ಗಮನ
4 ವಿಸ್ತರ
5 ಆನಂದ 

3 ಗುಣಗಳು


1 ಸತ್ವ
2 ರಜೋ
3 ತಮೋ

9 ಅನುಷ್ಠಾನಗಳು.


1 ಸಂಕಲ್ಪ
2 ಅಧ್ಯಾಸಾಯ
3 ಅಭಿಮಾನ
4 ಅವಧರಣ
5 ಮುದಿತ
6 ಕರುಣೆ
7 ಮೈತ್ರಿ
8 ಉಪೇಕ್ಷ
9 ತಿತಿಕ್ಷ

 

 

                                                   Life of Brahma

 

10 ಪಂಚಭೂತಗಳಲ್ಲಿ ಲೀನ ಆಗದೇ ಇರುವುದು, ಮತ್ತು ಪಂಚಭೂತಗಳಲ್ಲಿ ಲೀನ ಆಗುವಂತಹುದು.


1 ಆಕಾಶ
2 ವಾಯ
3 ಅಗ್ನಿ
4 ಜಲ
5 ಪೃಥ್ವಿ

14 ಅವಸ್ಥಾದೇವತೆ ಗಳು.


1 ದಿಕ್ಕು
2 ವಾಯುವು
3 ಸೂರ್ಯ
4 ವರುಣ
5 ಅಶ್ವಿನಿ ದೇವತೆಗಳು
6 ಅಗ್ನಿ
7 ಇಂದ್ರ
8 ಉಪೇಂದ್ರ
9 ಮೃತ್ಯು
10 ಚಂದ್ರ
11 ಚರ್ವಾಕ
12 ರುದ್ರ
13 ಕ್ಷೇತ್ರ ಪಾಲಕ
14 ಇಶಾನ್ಯ.

10 ನಾಡಿ,1 ಬ್ರಹ್ಮನಾಡಿ.

1 ಇಡಾ
2 ಪಿಂಗಳ
3 ಸುಷುಮ್ನಾ
4 ಗಾಧಾಂರಿ
5 ಪಮಶ್ವನಿ
6 ಪೂಷ
7 ಅಲಂಬನ
8 ಹಸ್ತಿ
9 ಶಂಖಿನಿ
10 ಕೂಹೋ
11 ಬ್ರಹ್ಮಾನಾಡಿ


10 ವಾಯು ಗಳು


1 ಅಪಾನ
2 ಸಮಾನ
3 ಪ್ರೋಣ
4 ಉದಾನ
5 ವ್ಯಾನ
6 ಕೂರ್ಮ
7 ಕೃಕರ
8 ನಾಗ್
9 ದೇವದತ್ತ
10 ಧನಂಜಯ

 

                                      The Concept of Kaala or Time

 

7 ಷಟ್ ಚಕ್ರಗಳು


1 ಮೂಲಾಧಾರ
2 ಸ್ವಾಧಿಷ್ಠಾನ
3 ಮಣಿಪೂರಕ
4 ಅನಾಹಾತ
5 ವಿಶುದ್ದಿ
6 ಆಜ್ಞಾ
7 ಸಹಸ್ರಾರು


ಮನುಷ್ಯನ ಪ್ರಾಣಗಳು

96 ಅಂಗುಳದಲ್ಲಿ
8 ದವಡೆ ಮೂಳೆ
4 ದವಡೆ ವಲಯ
33 ಕೋಟಿ ರೋಮ್
66 ಮೂಳೆ ಗಳು
72 ಸಾವಿರ ನಾಡಿ
62 ಕೀಲು
37 ನೂರು ಪಿರ್ರೆ
1 ಸೇರು ಹೃದಯ ಅರ್ದಾ ಸೇರು ರುಧಿರ
4 ಸೇರು ಮಾಂಸ
1 ಸೇರು ಪಿತ್ಥ ಅರ್ದಾ ಸೇರು ಶ್ಲೇಷಂ.



                                                                            Pic -1

 

ಮಾನವ ದೇಹದಲ್ಲಿರೋ ಹದಿನಾಲ್ಕು ಲೋಕಗಳು.


7 ಮೇಲಿನ ಲೋಕಗಳು
1 ಭೂಲೋಕ , ಪಾದದಲ್ಲಿ
2 ಭೂವರ್ಲ ಲೋಕ ಹೃದಯದಲ್ಲಿ
3 ಸುವರ್ಲ ಲೋಕ ನಾಭಿಯಲ್ಲಿ
4 ಮಹರ್ಲಲೋಕ ಮರ್ಮಾಂಗ ದಲ್ಲಿ
5 ಜನ ಲೋಕ ಕಂಠದಲ್ಲಿ
6 ತಪೋ ಲೋಕ ಭೃಮದ್ಯದಲ್ಲಿ
7 ಸತ್ಯ ಲೋಕ ಲಲಾಟದಲ್ಲಿ

ಅಧೋಲೋಕಗಳು


1 ಅತಲ ,ಹಿಮ್ಮಡಿಯಲ್ಲಿ
2 ವಿತಳ, ಉಗುರಿನಲ್ಲಿ
3 ಸುತಲ , ಮೀನಖಂಡ
4 ತಲಾತಲಂ, ಪಿರ್ರೆ
5 ರಸಾತಲ, ಮೊಣಕಾಲಿನಲ್ಲಿ
6 ಮಹಾತಲ ತೊಡೆ ಯಲ್ಲಿ
7 ಪಾತಾಳಂ ,ಪಾದದ ಅಂಗಳದಲ್ಲಿ.

 

                                                                            Pic -2
 

 

ಮಾನವ ದೇಹದಲ್ಲಿರೋ ಸಪ್ತ ಸಮುದ್ರಗಳು.


1 ಲವಣ ಸಮುದ್ರ , ಮೂತ್ರ
2 ಇಕ್ಷಿ ಸಮುದ್ರ , ಬೆವರು
3 ಸೂರ ಸಮುದ್ರ, ಇಂದ್ರಿಯ
4 ಸರ್ಪ ಸಮುದ್ರ, ದೋಷಗಳು
5 ದದಿ ಸಮುದ್ರ, ಶ್ಲೇಷಂ
6 ಕ್ಷೀರ ಸಮುದ್ರ, ಜೊಲ್ಲು
7 ಶುದ್ದೋದಕ ಸಮುದ್ರ, ಕಣ್ಣೀರು.



 

                                                                                Pic -3

 

 ಪಂಚಾಗ್ನಿ


1 ಕಾಲಾಗ್ನಿ, ಪಾದಗಳಲ್ಲಿ
2 ಕ್ಷುದಾಗ್ನಿ, ಪಾಳಿಯಲ್ಲಿ
3 ಶೀತಾಗ್ನಿ , ಹೃದಯದಲ್ಲಿ
4 ಕೋಪಾಗ್ನಿ,ನೇತ್ರದಲ್ಲಿ
5 ಜ್ಞಾನಾಗ್ನಿ, ಆತ್ಮದಲ್ಲಿ.

ಮಾನವ ದೇಹದಲ್ಲಿ ಸಪ್ತದ್ವೀಪಗಳು


1 ಜಂಬೂದ್ವೀಪ, ತಲೆಯಲ್ಲಿ
2 ಪ್ಲಕ್ಷ ದ್ವೀಪ,ಅಸ್ತಿಯಲ್ಲಿ
3 ಶಾಕ ದ್ವೀಪ, ಶಿರಸ್ಸಿನಲ್ಲಿ
4 ಶಾಲ್ಮಲ ದ್ವೀಪ, ಚರ್ಮದಲ್ಲಿ
5 ಪೂಷ್ಕಾರ ದ್ವೀಪ, ಕುತ್ತಿಗೆ ಯಲ್ಲಿ
6 ಕೂಶ ದ್ವೀಪ, ಮಾಂಸದಲ್ಲಿ
7 ಕೌಂಚ ದ್ವೀಪ, ಕೂದಲಿನಲ್ಲಿ.

10 ನಾಧಗಳು


1 ಲಾಲಾದಿ ಘೋಷ, ನಾಧಂ
2 ಭೇರಿ
3 ಛಣಿ
4 ಮೃದಂಗ
5 ಘಂಟಾ
6 ಕಿಲಕಿಣಿ
7 ಕಳಾ
8 ವೇಣು
9 ಬ್ರಮಣ
10 ಪ್ರಣವ.

 

                                                     
                                                                             Pic -4

 

PLEASE PRESERVE & STORE this Wonderful & Valuable ARTICLE since it has been Created with Pain & Utmost Careful Study & its intricacies & its Essence are just a Gist from the Ancient INDIAN Scriptures.

Please Permanently Store this article Since it Explains the Basic Creation of this WORLD and how Human Body is formed and many many of its Subsidiaries.


--------------- Hari Om ---------------


                                        

 

 

 
 

 


 




Friday, December 19, 2025

ಮಹಾಭಾರತದ ಸಾರ -- Essence of Mahabharata

 

ಮಹಾಭಾರತದ ಸಾರ ---- Essence of Mahabharata

 

                              
                                   Essence of Mahabharata

 

ಮಹಾಭಾರತದಿಂದ ನಮಗೆ ಸಿಗುವುದೇನು?

What do we get from Mahabharata?

 

ವೇದಗಳನ್ನು ವಿಂಗಡಿಸಿ ವೇದವ್ಯಾಸರಾದ ಕೃಷ್ಣ ದ್ವೈಪಾಯನರು, ಗಣೇಶನೊಂದಿಗೆ ಬರೆಯಲು ಕುಳಿತಿದ್ದು ಬರಿ ಮಹಾಕಾವ್ಯವಷ್ಟೇ ಅಲ್ಲ, ಕಲಿಯುಗಕ್ಕೂ ಅನ್ವಯಿಸುವಂಥ ಜೀವನ ಪಾಠಗಳನ್ನು.


ಮಹಾಭಾರತದ ಮಹಾಕಾವ್ಯವನ್ನು ಯುಗಗಳ ಹಿಂದೆ ಬರೆಯಲಾಗಿತ್ತಾದರೂ, ನಿರಂತರವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಲೇ ಸಾಗಿ ಇಂದಿನ ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.

ಮಹಾಭಾರತದ ಒಂದೊಂದು ಪಾತ್ರವೂ ಒಂದೊಂದು ಪಾಠ ಕಲಿಸಿದರೆ, ಪ್ರತಿ ಪ್ರಸಂಗದಿಂದ ಕಲಿಯಬೇಕಾದ್ದು ಕೂಡ ಇದೆ. ಕೆಲವು ಪಾತ್ರ-ಸನ್ನಿವೇಶಗಳು ವೈಪರಿತ್ಯಗಳಿಂದ ಕೂಡಿದ್ದಾದರೂ ಅದರಲ್ಲಿ ನಾವು ಕಲಿಯಬೇಕಾದ್ದೇನೆಂಬುದಷ್ಟೇ ಮುಖ್ಯ. ಈ ಮಹಾಕಾವ್ಯದಲ್ಲಡಗಿರುವ ಸಾತ್ವಿಕ-ತಾತ್ವಿಕ ವಿಚಾರಗಳು ನಮಗೆ ಜೀವನ ಪಾಠಗಳೇ.

1.
ಪ್ರತೀಕಾರದ ಪ್ರವೃತ್ತಿ ವಿನಾಶಕ್ಕೆ ಕಾರಣ:


ಮಹಾಭಾರತವು ಧರ್ಮ-ಅಧರ್ಮಗಳ ಸುತ್ತ ಸುತ್ತುತ್ತದೆ. ಆದರೆ ಎಲ್ಲರ ನಾಶದ ಹಿಂದಿನ ಪ್ರಮುಖ ಕಾರಣ ಪ್ರತೀಕಾರ ಎಂಬ ಅಂಶ ಎದ್ದು ಕಾಣುತ್ತದೆ. ಪಾಂಡವರನ್ನು ಹಾಳುಮಾಡುವ ಕುರುಡು ಬಯಕೆಯಿಂದ, ಕೌರವರು ಎಲ್ಲವನ್ನೂ ಕಳೆದುಕೊಂಡರು. ದ್ರೌಪದಿಯ ಐದು ಗಂಡು ಮಕ್ಕಳು ಮತ್ತು ಅಭಿಮನ್ಯು ಸೇರಿದಂತೆ ಅಮಾಯಕ ಮಕ್ಕಳನ್ನು ಸಹ ಯುದ್ಧವು ಬಿಡಲಿಲ್ಲ.

2.
ಸ್ನೇಹದ ಶಾಶ್ವತ ಬಂಧ :


ಕೃಷ್ಣ ಮತ್ತು ಅರ್ಜುನರ ನಡುವಿನ ಸ್ನೇಹವು ಅತ್ಯಪೂರ್ವವಾದುದು. ಕೃಷ್ಣನ ಪ್ರತಿಫಲಾಪೇಕ್ಷೆಯಿಲ್ಲದ ಬೆಂಬಲ, ಮಾರ್ಗದರ್ಶನ ಮತ್ತು ಪ್ರೇರಣೆಯಿಂದಾಗಿ ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಜಯಿಸಿದ್ದರು. ಮತ್ತೊಂದೆಡೆ, ಕರ್ಣ ಮತ್ತು ದುರ್ಯೋಧನರ ನಡುವಿನ ಸ್ನೇಹವು ಕಡಿಮೆ ಸ್ಪೂರ್ತಿದಾಯಕವಲ್ಲ. ಭಾನುಮತಿ-ಕರ್ಣರ ಪಗಡೆಯಾಟದ ಸಂದರ್ಭದಲ್ಲಿ ದುರ್ಯೋಧನ ತನ್ನ ಮಿತ್ರನ ಮೇಲೆ ತೋರಿದ ನಂಬಿಕೆ, ಸ್ನೇಹಕ್ಕೆ ಮತ್ತೊಂದು ಆಯಾಮವನ್ನೇ ನೀಡಿತು.

3. ಧರ್ಮವನ್ನು ಪಾಲಿಸಿ;


ಧರ್ಮದ ರಕ್ಷಣೆಗಾಗಿ ಅಗತ್ಯಬಿದ್ದರೆ ನಿಮ್ಮವರೊಂದಿಗೂ ಹೋರಾಡಿ:
ಅರ್ಜುನನು ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ತನ್ನ ಸಂಬಂಧಿಗಳ ವಿರುದ್ಧ ಯುದ್ಧ ಮಾಡಲು ಹಿಂಜರಿಯುತ್ತಿದ್ದನು. ಆದರೆ ಕೃಷ್ಣನು ಅವನಿಗೆ ಕರ್ತವ್ಯ ಎಂದು ನೆನಪಿಸಿದನು. ಆದ್ದರಿಂದ ಅರ್ಜುನನು ಧರ್ಮದ ಮಹಾನ್ ಯೋಧನಾಗಿ ತನ್ನ ಜವಾಬ್ದಾರಿಯನ್ನು ಪೂರೈಸಬೇಕಾಯಿತು.

4.
ನಾವು ಧರ್ಮದ ಜೊತೆಗಿದ್ದರೆ, ಪರಮಾತ್ಮನೇ ನಮ್ಮ ಜೊತೆಗಿರುವನು:


ಕೌರವರು ಏನೇ ಷಡ್ಯಂತ್ರ ಮಾಡಿದರೂ ಪಾಂಡವರು ವಿಚಲಿತರಾಗಿ ಧರ್ಮ ಬಿಡಲಿಲ್ಲ. ಚಿಕ್ಕಂದಿನಲ್ಲೇ ಭೀಮನನ್ನು ಕೊಲ್ಲಲು ಮಾಡಿದ ಸಂಚುಗಳು, ಲಕ್ಶ್ಯಾಗೃಹ ಕಟ್ಟಿ ಅದರಲ್ಲಿ ಪಾಂಡವರನ್ನು ಸುಡಲು ನೋಡಿದ್ದು, ದ್ಯೂತದಲ್ಲಿ ಮೋಸದಿಂದ ರಾಜ್ಯ ಕದ್ದು, ತುಂಬಿದ ಸಭೆಯಲ್ಲಿ ಅವಮಾನಮಾಡಿ, ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸಿ, ಪಾಂಡವರನ್ನು ೧೨ ವರ್ಷಗಳ ಕಾಲ ಕಾಡಿಗಟ್ಟಿ, ಅಲ್ಲೂ ಬಿಡದೆ ಹಿಂಬಾಲಿಸಿ ನಾನಾ ಕಷ್ಟಗಳನ್ನು ಕೊಟ್ಟು, ೧೩ ವರ್ಷಗಳ ನಂತರ ನ್ಯಾಯವಾಗಿ ಹಿಂತಿರುಗಿಸಬೇಕಿದ್ದ ರಾಜ್ಯವನ್ನೂ ಕೊಡದೆ ಸತಾಯಿಸಿ, ಕಡೆಗೆ ೫ ಹಳ್ಳಿಗಳನ್ನೂ ಕೊಡದೆ ಯುದ್ಧಕ್ಕೆ ನಿಂತರೂ ಪಾಂಡವರು ಯಾವಾಗಲೂ ಧರ್ಮ ಬಿಡಲಿಲ್ಲ. ಅಂತೆಯೇ ಶ್ರೀಕೃಷ್ಣ ಪರಮಾತ್ಮ ಕೂಡ ಸದಾ ಪಾಂಡವರ ತಲೆಕಾಯ್ದ.

 

                                                                             Pic -1

 

5. ಅರ್ಧ ಜ್ಞಾನವು ಅಪಾಯಕಾರಿ:


ಅರ್ಧ ಜ್ಞಾನವು ಹೇಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಜುನನ ಮಗ ಅಭಿಮನ್ಯು ನಮಗೆ ಕಲಿಸುತ್ತಾನೆ. ಅಭಿಮನ್ಯುವಿಗೆ ಚಕ್ರವ್ಯೂಹ ಪ್ರವೇಶಿಸುವುದು ಹೇಗೆಂದು ತಿಳಿದಿದ್ದರೂ, ಹೊರಬರುವ ದಾರಿ ತಿಳಿದಿರಲಿಲ್ಲ. ಹೀಗಾಗಿ ಅರ್ಧ ಜ್ಞಾನ ಅಪಾಯಕಾರಿ.

6.
ಇತರರು ಎಷ್ಟೇ ಪ್ರೇರೇಪಿಸಿದರೂ ದುರಾಸೆಗೆ ಒಳಗಾಗಬಾರದು:


ಪರರ ಉತ್ತೇಜನಕ್ಕೆ ಕಟ್ಟುಬಿದ್ದು ದುರಾಸೆಗೊಳಗಾದ ಯುಧಿಷ್ಠಿರನಿಗೆ ಸಿಕ್ಕಿದ್ದೇನು? ಶಕುನಿ-ದುರ್ಯೋಧನರ ಮೋಸದಿಂದ ನೀಡಿದ ಉತ್ತೇಜನಕ್ಕೆ ಬಲಿಪಶುವಾಗಿ ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡ, ಕಡೆಗೆ ಸಹೋದರರನ್ನೂ, ಪತ್ನಿಯನ್ನೂ ಪಣಕ್ಕಿಟ್ಟು ಸೋತ. ದುರಾಸೆ ಕೆಡುಕಿಗೆ ರಹದಾರಿ.

7.
ಜೀವನದುದ್ದಕ್ಕೂ ಕಲಿಯುವುದು ನಿಮಗೆ ನೀವೇ ನೀಡುವ ಅತ್ಯುತ್ತಮ ಕೊಡುಗೆ:


ಅರ್ಜುನ ಶ್ರೇಷ್ಠ ಧನುರ್ಧರನಾದರೂ, ಜೀವನದುದ್ದಕ್ಕೂ ಕಲಿಯುತ್ತಲೇ ಸಾಗಿದ. ಕಲಿಕೆಯ ಬಗ್ಗೆ ಅರ್ಜುನನಿಗಿದ್ದ ಈ ಆಸಕ್ತಿಯಿಂದಲೇ ದ್ರೋಣರ ಆತ್ಮೀಯ ಶಿಷ್ಯನಾದ ಮತ್ತು ಶ್ರೀಕೃಷ್ಣನ ಆಪ್ತನಾದ.

8.
ಸುಳ್ಳು ಹೇಳಿ ಸಂಪಾದಿಸಿದ್ದು ಕಡೆಗೆ ದಕ್ಕುವುದಿಲ್ಲ:

ಪರಶುರಾಮರಲ್ಲಿ ನಿಜವನ್ನು ಮುಚ್ಚಿಟ್ಟು ಪಡೆದ ಅಸ್ತ್ರಗಳೆಲ್ಲ ಕಡೆಗೆ ಕರ್ಣನಿಗೆ ದಕ್ಕದೇ ಹೋದವು. ಗುರುಗಳ ಕೆಂಗಣ್ಣಿಗೆ ಗುರಿಯಾದ ಕರ್ಣ, ಕೊನೆಗಾಲದಲ್ಲಿ ಅಸ್ತ್ರಗಳ ಮಂತ್ರವೇ ನೆನಪಿಗೆ ಬಾರದಿರುವಂತಾಗಿ, ಅವನ ಅವನತಿಗೆ ಕಾರಣವಾಯಿತು.

 
9.
ಯಾರು ಏನೇ ಕೇಳಿದರೂ ಯೋಚಿಸಿ ನೀಡಬೇಕು:

ದಾನಶೂರನೆಂದೇ ಹೆಸರವಾಸಿಯಾಗಿದ್ದ ಕರ್ಣ, ಯಾರು ಏನೇ ಕೇಳಿದರೂ ಹಿಂದೆ ಮುಂದೆ ಯೋಚಿಸದೆ ದಾನ ಮಾಡಿಬಿಡುತ್ತಿದ್ದ, ಕಡೆಗೆ ಇದು ಕರ್ಣನಿಗೇ ಮಾರಕವಾಯಿತು. ಕಡೆಗೆ ಜನ್ಮದಿಂದ ಬಂದಿದ್ದ ಕವಚ-ಕುಂಡಲಗಳನ್ನೂ ಇಂದ್ರನಿಗೆ ದಾನಮಾಡಿ, ಬೇರಾರಿಗೂ ಇಲ್ಲದ ವಿಶೇಷವೊಂದನ್ನು ಕಳೆದುಕೊಂಡ. ಹೀಗೆ ಯಾರೇನೇ ಕೇಳಿದರೂ, ಯಾಚಕರಿಗೆ ಆ ವಸ್ತುವಿನ ಅವಶ್ಯಕತೆ ನಿಜವಾಗಿ ಇದೆಯೇ, ಮತ್ತು ದಾನ ಮಾಡುವುದರಿಂದ ತನಗಾಗುವ ನಷ್ಟವೇನೆಂದು ಎಂದು ಕೂಲಂಕುಷವಾಗಿ ಪರಿಶೀಲಿಸಿ ನಂತರ ನೀಡಬೇಕು.

 

                                                                                Pic -2

  

10. ಪ್ರತಿಜ್ಞೆ, ವಚನಗಳನ್ನು ಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿ ನಡೆಯುವುದು:


ಭೀಷ್ಮ ಪಿತಾಮಹರು, ಮಹಾನ್ ತ್ಯಾಗಿಗಳು. ತಮ್ಮ ಪರಿವಾರ ಮತ್ತು ಇಷ್ಟ ಜನರ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದ ಜೀವ ಮತ್ತು ಕೊಟ್ಟ ಮಾತು, ಮಾಡಿದ ಪ್ರತಿಜ್ಞೆಗೆ ಸದಾ ಬದ್ಧರಾಗಿದ್ದರು. ಕಡೆಗೆ ಈ ಪ್ರತಿಜ್ಞೆ, ವಚನ , ತ್ಯಾಗಗಳೇ ಅವರನ್ನು ಧರ್ಮದ ಮತ್ತು ಪರಮಾತ್ಮನ ವಿರುದ್ಧವೇ ಸೆಣೆಸುವಂತೆ ಮಾಡಿತು. ಯಾವ ಹಸ್ತಿನಾಪುರದ ಪರಿವಾರದ ರಕ್ಷಣೆಗೆ ಪಣತೊಟ್ಟು ನಿಂತಿದ್ದರೋ, ಅದೇ ಪರಿವಾರದ ಅವನತಿ ನೋಡಬೇಕಾಯಿತು


ನಾವೂ ಕೂಡ ಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ನಮಗೆ ನಾವೇ ಹಾಕಿಕೊಂಡ ನಿಯಮಗಳನ್ನು ಬದಲಾಯಿಸುವ ಅವಶ್ಯಕತೆಯಿದ್ದರೆ, ಅದರಿಂದ ಒಳಿತಾಗಿವುದಾದರೆ ಬದಲಾಯಿಸಿಕೊಂಡು ನಡೆಯಬೇಕು.

11.
ಅಡುಗೆ, ಮನೆಕೆಲಸ ಕಲಿತಿರಬೇಕು; ಸಮಯ ಬಂದಾಗ ಉಪಯೋಗವಾಗುತ್ತೆ:


ಪಾಂಡವರು ವನವಾಸದ ನಂತರ, ಅಜ್ಞಾತವಾಸದಲ್ಲಿ ವಿರಾಟರಾಜನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಯುಧಿಷ್ಠಿರ ವಿರಾಟನ ಆಪ್ತನಾಗಿಯೂ, ಭೀಮ ಅಡುಗೆಯವನಾಗಿಯೂ, ಅರ್ಜುನ ಉತ್ತರೆಗೆ ನಾಟ್ಯಗುರುವಾಗಿಯೂ, ದ್ರೌಪದಿ ರಾಣಿಯ ದಾಸಿಯಾಗಿಯೂ, ನಕುಲ, ಸಹದೇವರು ಗೋ-ಅಶ್ವಗಳ ಆರೈಕೆ ಮಾಡುವಲ್ಲಿ ನಿರತರಾದರು. ಈ ಕೆಲಸಗಳೆಲ್ಲ ಅವರು ಮೊದಲೇ ಕಲಿತದ್ದರಿಂದ, ನಿರ್ವಹಣೆ ಸುಲಭವಾಯಿತು.

 

                                                                          Pic -3

 

12. ಜೀವನದಲ್ಲಿ ಮಹಿಳೆಯರ ಪ್ರಾಮುಖ್ಯತೆ:


ಮಹಾಭಾರತದಲ್ಲಿ ಸ್ತ್ರೀ ಪಾತ್ರಗಳಿಗೆ ತಮ್ಮದೇ ಆದ ಮಹತ್ವವಿದೆ. ಶಂತನುವನ್ನು ವರಿಸಿದ ಗಂಗಾಮಾತೆ ಮತ್ತು ಸತ್ಯವತಿಯರ ಕರ್ತವ್ಯಪ್ರಜ್ಞೆ, ಅಂಬೆಯ ತನಗಾದ ಅನ್ಯಾಯದ ವಿರುದ್ಧ ಪ್ರತೀಕಾರ ಸ್ವಭಾವ, ಅಂಧ ಧೃತರಾಷ್ಟ್ರನನ್ನು ಪತಿಯಾಗಿ ಸ್ವೀಕರಿಸಿದ ಗಾಂಧಾರಿಯ ತ್ಯಾಗ, ಎಂಥಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಧೃತಿಗೆಡದ ಕುಂತಿಯ ಸಹನೆ, ದ್ರೌಪದಿಯ ಛಲ, ಸ್ತ್ರೀ ಸಹಜ ವಿವಿಧ ಸನ್ನಿವೇಶಗಳನ್ನು ಎದುರಿಸುವ ಧೈರ್ಯ ಇವೆಲ್ಲಾ ಸ್ತ್ರೀಯರಿಗಿರುವ ಮಹತ್ವದ ಕೈಗನ್ನಡಿ. 'ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ' ಎಂಬುದಕ್ಕೆ ಪೂರಕ ದ್ರೌಪದಿಯ ಪಾತ್ರ. ದ್ರೌಪದಿಗೆ ಅವಮಾನ ಮಾಡಿದ, ಕಿರುಕುಳ ಕೊಟ್ಟ ಎಲ್ಲರೂ ದುರಂತ ಅಂತ್ಯ ಕಂಡಿದ್ದೇ ಇದಕ್ಕೆ ಸಾಕ್ಷಿ.


"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ"


ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ, ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ಮನುಸ್ಮೃತಿ ತಿಳಿಸುತ್ತದೆ.

ಹೀಗೆ, ಅನೇಕ ಜೀವನ ಮೌಲ್ಯಗಳನ್ನು ಇಂದಿಗೂ ಅನ್ವಯಿಸುವಂತೆ ತಿಳಿಸಿಕೊಟ್ಟ ಶ್ರೀ ವೇದವ್ಯಾಸರಿಗೆ ನಮನಗಳು.

ಕೃಷ್ಣo oದೇ ಜಗದ್ಗುರುo

 

------------------ Hari Om -----------------