Friday, September 10, 2021

Ganesha Aarathi song

 

                                                                        Lord Ganesha

 

ಶ್ರೀ ಗಣಪತಿ ಆರತಿ -- Sri Ganapati Aarathi Song


"
ಸುಖಕರ್ತಾ ದುಃಖಹರ್ತಾ" ಎಂಬ ಮರಾಠಿ ಭಾಷೆಯ ಈ ಆರತಿ ಹಾಡು ಸಮಸ್ತ ಭಾರತೀಯರನ್ನು ಧಾರ್ಮಿಕವಾಗಿ ಒಂದುಗೂಡಿಸಿದ ಹಾಡು. ಶ್ರೀಗಣೇಶೋತ್ಸವದಲ್ಲಿ ಈ ಆರತಿ ಇಲ್ಲದೇ ಪೂಜೆ ಪೂರ್ಣವಾಗಲಾರದು ಎಂಬ ಭಾವನೆ ಇದೆ. ತಿಲಕರು ಇದೇ ಆರತಿಯನ್ನು ಹೇಳುತ್ತಿದ್ದರು ಎಂಬ ಪ್ರತೀತಿ ಇದೆ. ಈ ಒಂದು ಪದ್ಯವನ್ನು ಜಗತ್ತಿನಾದ್ಯಂತ ಜಾತಿ-ಮತ-ಪಂಥವನ್ನು ಮೀರಿ ಎಲ್ಲರೂ ಹಾಡುತ್ತಾರೆ. ಇದು ಸಂಸ್ಕೃತಿಯ ಪ್ರತೀಕವಾಗಿದೆ. ಕೋಟ್ಯಾಂತರ ಜನ ಹೇಳುವದರ ಮೂಲಕ ಈ ಆರತಿಪದ ಮಂತ್ರಕ್ಕೆ ಸಮನಾದ ಪ್ರಾತಿನಿಧ್ಯವನ್ನು ಪಡೆದಿದೆ. ಭಕ್ತಿಯ ಸಂಕೇತವಾಗಿದೆ. ಈ ಪದದೊಂದಿಗೆ ಕೆಲವು ಮಂತ್ರಗಳನ್ನೂ ಸೇರಿಸಿ ಹಾಡುವದು ಸಂಪ್ರದಾಯ ಅಲ್ಲದೇ ಮನೆ-ಮಂದಿರಗಳಲ್ಲಿ ಪರಿವಾರದೊಂದಿಗೆ ಎಲ್ಲರೂ ಸೇರಿ ಹಾಡುವಾಗ ವಿಶೇಷ ಆನಂದವನ್ನು ಕೊಡುತ್ತದೆ. ಭಕ್ತಿಯ ತನ್ಮಯತೆಯನ್ನು ಮೂಡಿಸುತ್ತದೆ.

 

                                                                 Sri Vinayaka swamy

 

ಸುಖಕರ್ತಾ ದುಃಖಹರ್ತಾ ವಾರತಾ ವಿಘ್ನಾ ಚಿ | ನುರವಿ ಪುರವಿ ಪ್ರೇಮ ಕೃಪಾ ಜಯಾ ಚಿ |
ಸರ್ವಾಂಗಿ ಸುಂದರ ಉಟಿ ಶೇಂದುರಾಚಿ | ಕಂಠಿ ಝಳಕೆ ಮಾಳ ಮುಕ್ತಾಫಳಾ ಚಿ || 1 ||

ಜಯದೇವ ಜಯದೇವ ಜಯ ಮಂಗಲಮೂರ್ತಿ | ದರ್ಶನಮಾತ್ರೇ ಮನಃಕಾಮನಾ ಪೂರತಿ || ||

ರತ್ನಖಚಿತ ಫರಾ ತುಜ ಗೌರಿಕುವರಾ | ಚಂದನಾ ಚಿ ಉಟಿ ಕುಂಕುಮ ಕೇಶರಾ |
ಹೀರೆಜಡಿತ ಮುಗುಟ ಶೋಭತೋ ಬರಾ | ರುಣಝುಣತಿ ನೂಪೂರೆ ಚರಣೀ ಘಾಗರಿಯಾ || 2 ||

ಜಯದೇವ ಜಯದೇವ ಜಯ ಮಂಗಲಮೂರ್ತಿ | ದರ್ಶನಮಾತ್ರೇ ಮನಃಕಾಮನಾ ಪೂರತಿ |

ಲಂಬೋದರ ಪೀತಾಂಬರ ಫಣಿವರಬಂಧನಾ | ಸರಳ ಸೋಂಡ ವಕ್ರತುಂಡ ತ್ರಿನಯನಾ |
ದಾಸ ರಾಮಾ ಚಾ ವಾಟ ಪಾಹೆ ಸದನಾ | ಸಂಕಟಿ ಪಾವಾವೆ ನಿರ್ವಾಣೀ ರಕ್ಷಾವೆ ಸುರವರ ವಂದನಾ || 3 ||

ಜಯದೇವ ಜಯದೇವ ಜಯ ಮಂಗಲಮೂರ್ತಿ | ದರ್ಶನಮಾತ್ರೇ ಮನಃಕಾಮನಾ ಪೂರತಿ |

ಪ್ರಾರ್ಥನಾ

ಘಾಲೀನ ಲೋಟಾಂಗಣ ವಂದೀನ ಚರಣ | ಡೋಳ್ಯಾನಿ ಪಾಹೀನ ರೂಪ ತುಝೆ |
ಪ್ರೇಮೇ ಆಲಿಂಗಿನ ಆನಂದೇ ಪೂಜಿನ | ಭಾವೇ ಓವಾಳೀನ ಮ್ಹಣೇ ನಾಮಾ || 1 ||

 

                                                               Lord Ganesha

 

 

ತ್ವಮೇವ ಮಾತಾ ಪಿತಾ ತ್ವಮೇವ | ತ್ವಮೇವ ಬಂಧುಶ್ಚ ಸಖಾ ತ್ವಮೇವ |
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ | ತ್ವಮೇವ ಸರ್ವಂ ಮಮ ದೇವದೇವ || 2 ||

ಕಾಯೇನ ವಾಚಾ ಮನಸೇಂದ್ರಿಯೇರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ | ನಾರಾಯಣಾಯೇತಿ ಸಮರ್ಪಯಾಮಿ || 3 ||

ಅಚ್ಯುತಂ ಕೇಶವಂ ರಾಮನಾರಾಯಣಂ | ಕೃಷ್ಣ ದಾಮೋದರಂ ವಾಸುದೇವಂ ಹರಿಮ್ |
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ | ಜಾನಕೀ ನಾಯಕಂ ರಾಮಚಂದ್ರಂ ಭಜೇ || 4 ||

ಹರೇರಾಮ ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ||

ಹರೇರಾಮ ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ||

ಹರೇರಾಮ ಹರೇರಾಮ ರಾಮರಾಮ ಹರೇಹರೇ |
ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ||

 

                                                                   Another Picture


            

श्री गणेशजी की आरती

जय गणेश, जय गणेश, जय गणेश, देवा .
माता जाकी पारवती, पिता महादेवा ..

एकदन्त, दयावन्त, चारभुजाधारी,
माथे पर तिलक सोहे, मूसे की सवारी .
पान चढ़े, फूल चढ़े और चढ़े मेवा,
लड्डुअन का भोग लगे, सन्त करें सेवा ..



अंधे को आँख देत, कोढ़िन को काया,
बाँझन को पुत्र देत, निर्धन को माया .
सूर’ श्याम शरण आए, सफल कीजे सेवा,
जय गणेश जय गणेश जय गणेश देवा ..


Very Effective God for any Obstacles one face and pray with full Faith One will achieve anything Successfully with Ease.


            ---------- Hari Om -----------


                                                             

 

Saturday, August 28, 2021

Dharma & Karma

 

Dharma and Karma

 

 Your dharma never leaves you
Your karma never forgives you

As you sow So shall you reap

After Kurukshetra war,
Dhritrarashtra asked Krishna,
“I had 100 sons.
All of them were killed.
Why?

Krishna replied,
“50 lifetimes ago,
You were a hunter.
While hunting,
You tried to shoot a male bird.
It flew away.
In anger,
You ruthlessly slaughtered the 100 baby birds in the nest.
Father-bird had to watch in helpless agony.
Because you caused that father-bird the pain of seeing the death of his 100 children,
You too had to bear the pain of your 100 sons dying.

Dhritarastra said,
“Ok


But why did I have to wait for fifty lifetimes?”
Krishna answered, “You were accumulating
' Punya*' during the last
fifty lifetimes to get 100 sons -
Because that requires a lot of Punya .
Then you got the reaction for the 'Paap' (sin) that you have done fifty lifetimes ago.”

Krishna says in the Bhagavad-gita (4.17) "Gahana Karmano Gatih"
The way in which action and reaction works is very complex.
God knows best which reaction has to be given at what time in what condition.
Therefore, some reaction may come in this lifetime,
Some in the next and Some in a distant future lifetime.

There is a saying,
“The mills of God grind slow;
but,
They grind exceedingly fine.”
So, every single action will be accounted for, sooner or later.



Srimad Bhagavatam gives example:


If we have a cowshed with 1000 calves and
If we leave a mother cow there,
She will easily find out where her calf is among those thousands.
She has this Mystical Ability.

Similarly, our karma will find us among the millions on this planet. There may be thousands going on the road but only one meets with an accident.
It is not by chance, it’s by Karma.

Thus, the Law of Karma works exceedingly fine
it may be 'Slow to Act',
but No one can Escape 

 

------------- Hari Om ------------- 

Wednesday, July 14, 2021

Power of Copra or Dried Coconut

Power Of Copra or Dried Coconut


 


                                                          Copra or Dried Coconut


ಒಣ ಕೊಬ್ಬರಿ ತಿಂದು ಹಲವು ರೋಗಗಳಿಂದ ಮುಕ್ತಿ ಪಡೆಯಿರಿ, ಒಣ ಕೊಬ್ಬರಿಯಿಂದ ಸಿಗುವ ಲಾಭ ತಿಳಿದರೆ ಪ್ರತಿ ದಿನ ತಪ್ಪದೇ ತಿನ್ನುತ್ತೀರಿ .


ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಸೇವಿಸುವುದರಿಂದ ಏನೆಲ್ಲ ಲಾಭಗಳಿವೆ ಹಾಗೂ ಯಾವೆಲ್ಲ ರೋಗಗಳಿಗೆ ಇದು ಒಳ್ಳೆಯದು ಎಂದು ತಿಳಿಯೋಣ ಬನ್ನಿ:



ಸಾಮಾನ್ಯವಾಗಿ ಈಗ ಕಂಡು ಬರುವ ಮುಖ್ಯ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ,ಆಯಾಸ ,ಗಂಟುಗಳಲ್ಲಿ ನೋವು,ಸೊಂಟ ನೋವು,ರಕ್ತಹೀನತೆ,ಅಜೀರ್ಣ,ಕೂದಲು ಉದುರುವುದು,ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವುದು,ಜ್ಞಾಪಕ ಶಕ್ತಿಯ ತೊಂದರೆ ಇದಕ್ಕಾಗಿ ಹಾಗೂ ಇದನ್ನು ಸರಿಪಡಿಸಿಕೊಳ್ಳಲು ಹಲವಾರು ಮೆಡಿಸಿನ್ ಟ್ಯಾಬ್ಲೆಟ್ ಗಳ ಸೇವನೆ ಕೂಡ ಮಾಡಲಾಗುತ್ತಿದೆ.ಆದರೆ ಫಲಿತಾಂಶ ಆ ಔಷಧಿಗಳನ್ನು ಸೇವಿಸುವ ತನಕ ಅಷ್ಟೇ ಆಮೇಲೆ ಯಾವುದೇ ರೀತಿಯ ಫಲಿತಾಂಶ ದೊರೆಯುವುದಿಲ್ಲ.



ಇದಕ್ಕಾಗಿ ನಾವು ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಕೆಲವು ವಸ್ತುಗಳನ್ನು ತಪ್ಪದೇ ಸೇವಿಸಬೇಕು.ಇದರಲ್ಲಿ ಸಂಪೂರ್ಣವಾದ ಪೋಷಕಾಂಶಗಳಿದ್ದು ನಮ್ಮ ದೇಹದಲ್ಲಿನ ವಿಟಮಿನ್ ಕೊರತೆಗಳನ್ನು ಪೂರ್ಣಗೊಳಿಸಬೇಕು.



ಒಣಕೊಬ್ಬರಿಇದನ್ನು ಸೂಪರ್ ಫುಡ್ ಎಂದು ಕರೆದರು ತಪ್ಪಾಗುವುದಿಲ್ಲ.ಅಷ್ಟು ಪೋಷಕಾಂಶಗಳನ್ನು ಹೊಂದಿದೆ ಈ ಒಣಕೊಬ್ಬರಿ.ತುಂಬಾ ಜನರಿಗೆ ಒಣಕೊಬ್ಬರಿ ಎಂದರೆ ತುಂಬಾನೇ ಇಷ್ಟ.ಮನೆಯಲ್ಲಿ ಹಿರಿಯರು ಇದ್ದರೆ ಅವರು ಕೂಡ ಮಕ್ಕಳಿಗೆ ಒಣ ಕೊಬ್ಬರಿಯನ್ನು ತಿನ್ನಲು ಸಲಹೆ ಮಾಡುತ್ತಾರೆ.ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್,ನಾರಿನಾಂಶ,ಕಾಪರ್,ಸೆಲೆನಿಯಂ ಎನ್ನುವ ಪೋಷಕಾಂಶಗಳಿವೆ.



ಹಾಗಿದ್ರೆ ಯಾವ ರೀತಿಯಲ್ಲಿ ಒಣಕೊಬ್ಬರಿಯನ್ನು ಸೇವಿಸಿದರೆ ಒಳ್ಳೆಯದು ಎಂದು ನೋಡುವುದಾದರೆ 20 ರಿಂದ 25 ಗ್ರಾಂ ನಷ್ಟು ಪ್ರತಿ ದಿನ ಒಂದು ಚಿಕ್ಕ ತುಂಡು ಒಣಕೊಬ್ಬರಿಯನ್ನು ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಇದನ್ನು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಚಿಕ್ಕ ತುಂಡು ಒಣಕೊಬ್ಬರಿಯನ್ನು ನೀವು ಸೇವಿಸಬಹುದು.



ಒಣಕೊಬ್ಬರಿ ಪ್ರತಿನಿತ್ಯ ಸೇವಿಸುವುದರಿಂದ ಸಿಗುವ ಲಾಭಗಳೇನು ಹಾಗೂ ಯಾವ ರೀತಿಯ ರೋಗಗಳಿಗೆ ಒಣಕೊಬ್ಬರಿ ಸೇವನೆ ಒಳ್ಳೆಯದು ಎಂಬುದನ್ನು ನೋಡುವುದಾದರೆ.ಒಣಕೊಬ್ಬರಿ ಸೇವಿಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುತ್ತದೆ.ಇದು ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಮೂಳೆಗಳ ಅಂಗಾಂಶ ಅಂದರೆ ಟಿಶುಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಇರುತ್ತದೆ.ಇದು ಕಡಿಮೆಯಾದರೆ ದೇಹದ ಯಾವುದೇ ಭಾಗಕ್ಕೂ ಇದು ತೊಂದರೆ ನೀಡಬಹುದು.



ಒಣ ಕೊಬ್ಬರಿಯ ಸೇವನೆಯಿಂದ ಈ ಮೂಳೆಗಳಲ್ಲಿನ ಖನಿಜಾಂಶ ಅಂದ್ರೆ ಮಿನರಲ್ಗಳ ಕಡಿಮೆ ಯನ್ನು ಪೂರ್ಣಗೊಳಿಸಿ ಕೊಳ್ಳಬಹುದು.ಒಣ ಕೊಬ್ಬರಿಯಿಂದ ದೊರೆಯುವ ಈ ಮಿನರಲ್ ದೇಹಕ್ಕೆ ಬೇಗನೆ ಸೇರಿಬಿಡುತ್ತದೆ.ಇದರಿಂದಾಗಿ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರಾಗಬಹುದು.ಇನ್ನು ಕೆಲವರ ಗಂಟುಗಳಲ್ಲಿ ಕಟಕಟ ಶಬ್ದವಾಗುತ್ತಿರುತ್ತದೆ. ಇದು ಮೂಳೆಗಳಲ್ಲಿರುವ ಲೂಬ್ರಿಕೇನ್ಟ್ ನ ಕೊರತೆಯಿಂದ ಆಗುತ್ತದೆ.ಇಂಥವರು ಒಣಕೊಬ್ಬರಿಯ ಸೇವನೆ ಮಾಡಬೇಕು. ಒಣಕೊಬ್ಬರಿ ಯಲ್ಲಿ ನೈಸರ್ಗಿಕವಾದ ಎಣ್ಣೆ ಹಾಗೂ ಖನಿಜ ಇರುವುದರಿಂದ ಇದು ಮೂಳೆಗಳನ್ನು ಬಲಶಾಲಿಯಾಗಿಸಿ ಈ ಸಮಸ್ಯೆಯೂ ಸರಿಹೋಗುತ್ತದೆ.



ಮೆದುಳು ಚುರುಕಾಗಿರುತ್ತದೆ. ಒಣ ಕೊಬ್ಬರಿ ಸೇವನೆಯಿಂದ ನಿಮ್ಮ ಮೆದುಳು ಚುರುಕಾಗುತ್ತದೆ.ಇದರಿಂದ ಮೆದುಳಿನ ಫಂಕ್ಷನ್ ಇಂಪ್ರೂವ್ ಆಗುತ್ತದೆ.ನಿಮಗೆ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಹಾಗೂ ಮೆದುಳು ಚುರುಕಾಗಿ ಇರಬೇಕು ಅಂದರೆ ತಪ್ಪದೇ ನೀವು ಒಣ ಕೊಬ್ಬರಿಯನ್ನು ಸೇವಿಸಲೇಬೇಕು.ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಯೂ ಕೂಡ ಒಣಕೊಬ್ಬರಿ ಒಳ್ಳೆಯ ಔಷಧಿ.ಇದನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ.ಒಣ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡ ಸರಿಪಡಿಸುತ್ತದೆ.



ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ರಕ್ತಹೀನತೆಯ ಸಮಸ್ಯೆ ಹೆಚ್ಚಾದರೆ ಶರೀರದಲ್ಲಿ ಶಕ್ತಿಯಿರುವುದಿಲ್ಲ,ತಲೆಸುತ್ತು,ಮೊದಲಾದ ತೊಂದರೆ ಎದುರಾಗುತ್ತದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಒಣಕೊಬ್ಬರಿಯ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಏಕೆಂದರೆ ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿದೆ ಆದ್ದರಿಂದ ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡಲು ಒಣಕೊಬ್ಬರಿಯ ಸೇವನೆಯನ್ನು ತಪ್ಪದೇ ಮಾಡಿ.



ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ ಒಣಕೊಬ್ಬರಿಯನ್ನು ಹೀಗೆ ಬಳಸಿದರೆ ಸಂಪೂರ್ಣವಾಗಿ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ತುರಿದ ಕೊಬ್ಬರಿ 20 ರಿಂದ 25 ಗ್ರಾಂ ತೆಗೆದುಕೊಳ್ಳಿ 20 ರಿಂದ 25 ಗ್ರಾಂ ನಷ್ಟು ಕಲ್ಲು ಸಕ್ಕರೆ ತೆಗೆದುಕೊಳ್ಳಿ.ಇವೆರಡನ್ನು ಸೂರ್ಯ ಉದಯಿಸುವುದಕ್ಕಿಂತ ಮೊದಲು ಸೇವಿಸಿ.ಜಗಿದು ಜಗಿದು ಸೇವಿಸಬೇಕು.ಈ ರೀತಿಯಾಗಿ ನೀವು ಪ್ರತಿನಿತ್ಯ ಸೇವಿಸಿದರೆ ಸ್ವಲ್ಪ ದಿನದಲ್ಲೇ ಎಷ್ಟೇ ಹಳೆಯದಾದ ತಲೆನೋವಿದ್ದರು ಹಾಗೂ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.

 

 

                                                                   another Picture



ಥೈರಾಡ್ ಸಮಸ್ಯೆ ಇರುವವರು ಒಣಕೊಬ್ಬರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ದೇಹದಲ್ಲಿ ಸೆಲೆನಿಯಂ ಕೊರತೆಯಿಂದ ಉಂಟಾಗುತ್ತದೆ.ಒಣ ಕೊಬ್ಬರಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ.ನಿಮಗೆ ಹೈಪರ್ ಥೈರಾಯ್ಡ್ ಇರಲಿ ಅಥವಾ ಹೈಪೋ ಥೈರಾಯ್ಡ್ ಇರಲಿ ನೀವು ತಪ್ಪದೆ ಒಣಕೊಬ್ಬರಿ ಸೇವಿಸಿ.ಇದು ನಿಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾಗಿ ಇಡುತ್ತದೆ.



ಇನ್ನು ಒಣಕೊಬ್ಬರಿ ಹೃದಯದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇದರಲ್ಲಿರುವ ಫೈಬರ್ ಹೃದಯವನ್ನು ಆರೋಗ್ಯವಾಗಿಡುತ್ತದೆ.ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆ.ಇದರಿಂದಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ನಿತ್ಯವೂ ತಪ್ಪದೆ ಒಣಕೊಬ್ಬರಿಯನ್ನು ಸೇವನೆ ಮಾಡುವುದು ಉತ್ತಮ.



ನಿದ್ರಾಹೀನತೆಯ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಒಣಕೊಬ್ಬರಿಗಿದೆ.ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.



ಒಣಕೊಬ್ಬರಿಯನ್ನು ಸೇವಿಸುವುದರಿಂದ ಅಜೀರ್ಣತೆಯ ಸಮಸ್ಯೆಯೂ ಕೂಡ ಸರಿ ಹೋಗುತ್ತದೆ.ಇನ್ನು ಒಣ ಕೊಬ್ಬರಿಯನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು.ಇದು ರಕ್ತದಲ್ಲಿ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಕೊಬ್ಬರಿಯ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯೂ ಬೇಗನೆ ಕಡಿಮೆಯಾಗುತ್ತದೆ.ಒಣಕೊಬ್ಬರಿ ಒಂದು ಒಳ್ಳೆಯ ಆ್ಯಂಟಿ ಬಯಾಟಿಕ್ ತರ ಕೆಲಸ ಮಾಡುತ್ತದೆ.ಇದರಿಂದಾಗಿ ಯಾವುದೇ ರೀತಿಯ ಅಲರ್ಜಿ ಅಥವಾ ಯಾವುದೇ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಸೇರಲು ಸಾಧ್ಯ ಇಲ್ಲ.



ಒಣ ಕೊಬ್ಬರಿ ನಮ್ಮ ಕಣ್ಣುಗಳ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.ಇನ್ನು ಇದರಿಂದ ಹಲವಾರು ಲಾಭಗಳು ದೊರೆಯುತ್ತದೆ.ಇದರ ಸೇವನೆಯ ನಂತರ ಸ್ವಲ್ಪ ದಿನಗಳಲ್ಲಿಯೇ ನಿಮ್ಮ ದೇಹದಲ್ಲಿ ಒಳ್ಳೆಯ ವ್ಯತ್ಯಾಸ ಕಂಡುಬರುತ್ತದೆ.ನಮಗೆ ಯಾವುದೇ ರೋಗ ಇರಲಿ ಇಲ್ಲದಿರಲಿ ಇಂತಹ ಅದ್ಭುತವಾದ ಆಹಾರವನ್ನು ನಮ್ಮ ಪ್ರತಿನಿತ್ಯ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ನಮ್ಮ ದೇಹವು ಆರೋಗ್ಯವಾಗಿರುತ್ತದೆ.


ಯಾವುದೇ ರೋಗವು ನಮ್ಮ ಹತ್ತಿರವೂ ಸುಳಿಯುವುದಿಲ್ಲ.


Wonderful and Natural Hidden Magical Potent properties is in this Dried Copra and many Cures for most of the Health issues.



----------- Hari Om -----------

Sunday, June 6, 2021

Tree Anjaneya

 Tree Anjaneya Swamy Temple

 

                                                                  Tree Anjaneya Swamy


This is  Udbhava sri kodi-Vanada Anjaneya Swamy is formed  on a Peepul Tree by Nature by itself and people of this area are conducting Daily Basic Poojas and it has given them all immense Hapiness in their Life and so many obstacles has been warded Off automatically by Praying to the Lord Tree Anjaneya.


                                                 

                                                                   another Picture

Address of the Temple :

Nanjunde Gowda Layout
Ganigara Halli Main Road
Ganapati Nagar,
Chikkabanavara,
Bengaluru - 560090 , Karnataka 


Sri Anjaneya Mangalashtakam:

`Suvarchalaa kalathraaya chaturbhuja dharaaya cha

Ushtraa roodhaya veeraya mangalam Sri Hanumathe.''

 


 

                                                                        Pic-1

 

                                                                          Pic-2

 

                                                                          Pic-3

 

                                                                        Pic-4

ಹನುಮತ್-ಪಂಚರತ್ನಂ

ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಂ
ಸೀತಾಪತಿ ದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಂ ॥ 1

ತರುಣಾರುಣಮುಖಕಮಲಂ ಕರುಣಾರಸಪೂರಪೂರಿತಾಪಾಂಗಂ
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಂ ॥ 2

ಶಂಬರವೈರಿಶರಾತಿಗಮಂಬುಜದಲ ವಿಪುಲಲೋಚನೋದಾರಂ
ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ ॥ 3

ದೂರೀಕೃತಸೀತಾರ್ತಿಃ ಪ್ರಕಟೀಕೃತರಾಮವೈಭವಸ್ಫೂರ್ತಿಃ
ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನುಮತೋ ಮೂರ್ತಿಃ ॥ 4

ವಾನರನಿಕರಾಧ್ಯಕ್ಷಂ ದಾನವಕುಲಕುಮುದರವಿಕರಸದೃಶಂ
ದೀನಜನಾವನದೀಕ್ಷಂ ಪವನತಪಃ ಪಾಕಪುಂಜಮದ್ರಾಕ್ಷಂ ॥ 5

ಏತತ್ಪವನಸುತಸ್ಯ ಸ್ತೋತ್ರಂ ಯಃ ಪಠತಿ ಪಂಚರತ್ನಾಖ್ಯಂ
ಚಿರಮಿಹ ನಿಖಿಲಾನ್ಭೋಗಾನ್ಭುಂಕ್ತ್ವಾ ಶ್ರೀರಾಮಭಕ್ತಿಭಾಗ್ಭವತಿ ॥ 6 ॥ 

 

                                                                  Pic-5

 

                                                                 Pic-6
                

ಆಂಜನೇಯ ಗಾಯತ್ರಿ ಮಂತ್ರ


"ಓಂ ಆಂಜನೇಯ ವಿಧ್ಮಹೇ ಮಹಾ ಬಾಲಾಯ ಧೀಮಹೇ
ಥನ್ನೋ ಹನುಮಾನ್ ಪ್ರಚೋದಯಾಥ್,
ಓಂ ಆಂಜನೇಯ ವಿಧ್ಮಹೇ ವಾಯು ಪುತ್ರಾಯ ಧೀಮಹೀ
ಥನ್ನೋ ಹನುಮಾನ್ ಪ್ರಚೋದಯಾಥ್.

 

                                                                          Pic-7
 



One must visit this Road side Tree Anjaneya temple and get Blessings from the Lord and help in building it.   

 

-------------- Hari Om -------------               





 


 

                                                                       

 

 



Tuesday, May 18, 2021

Sri Anjaneya Swamy Temple - Kanva Mutt

 Sri Anjaneya Swamy Temple - Kanva Mutt

                                                        Main Deity - Sri Anjaneya Swamy


This Anjaneya Swamy temple is just 3 Kms from Yelahanka New Town and situated in Old Yelahanka and next to Vegetable Market and its also called as Kanva Mutt.

 

                                                                 Main Entrance


 

                                                                Old Dwajastamba

 

                                                                      another Photo

It is believed that it has an history of over 500 Years old temple and old prarangana with dilapidated Pillars which may fall any time.


 

                                                                 Anjaneya Swamy-1

 

                                                                    Kalyani or Pond


 

                                                                   Puskarani or Pond

Temple authorities have maintained old traditions and its Values and propagate old traditional system.

                                                          Mythreyi Gyana Mantapa

Mythreyi Gyana Mantapa Place is mainly used for Sanskrit studies and Veda Parayana and to conduct Functions.

 

                                                                   Sri Anjaneya swamy


Yearly Festivals are conducted are like Hanumantha Vrita or Jayanti, Krishna Janmastami, Rama Navami, Ugadi and other main festivals.



                                                                   Tulasi Vana 

There is Tulasi Vana they grow Flowers and Tulasi required for the temple Poojas.

 

                                                                   Pic-1


                                                                       Pic-2

Very Serene , clean and Pious place and temple priest conducts daily Poojas.




                                                                         Pic-3


                                                                           Pic-4

 Worth Visit and get Blessings from  Lord Anjaneya Swamy.

                                                     ------------ Hari Om ------------


Thursday, April 22, 2021

Sri Rama Darshana


Sri Rama Darshana

                                                               Sri Rama Devaru or God

 
 

Sri Rama Darshana ---- ಶ್ರೀ ರಾಮನ ದರ್ಶನ

 

ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ...

"
ನೀವು
ಇಷ್ಟೆಲ್ಲ ರಾಮನಾಮ ಗುಣಗಾನ
ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ
ಶ್ರೀರಾಮನ ದರ್ಶನ ಆಗಿದೆಯೇ?"

ಅದಕ್ಕೆ ತುಳಸೀದಾಸರು,
"
ಖಂಡಿತವಾಗಿಯೂ ಆಗಿದೆ!" ಎಂದು
ಹೆಮ್ಮೆಯಿಂದ ಹೇಳುತ್ತಾರೆ.

ಭಕ್ತನು
"
ಹಾಗಿದ್ದರೆ ನನಗೂ ಶ್ರೀರಾಮದರ್ಶನ
ಸಾಧ್ಯವಿದೆಯೇ?" ಎಂದು ಕೇಳುತ್ತಾನೆ.

ತುಳಸೀದಾಸರು "ಯಾಕಿಲ್ಲ? ನಿನಗೂ
ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ
ಸುಲಭವಾಗಿಯೂ ಇದೆ. ನೀನು ಈ
ಪ್ರಪಂಚದಲ್ಲಿ ಯಾವುದೇ
ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ
ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ
ಸ್ವಾಮೀ" ಎಂದು ವಿನಂತಿಸಿದ.

ತುಳಸೀದಾಸರು ಹೇಳುತ್ತಾರೆ-
"
ನೋಡು, ಇದಕ್ಕೊಂದು ಸುಲಭಸೂತ್ರ
ಇದೆ. ಈ ಪ್ರಪಂಚದಲ್ಲಿ ಯಾರದೇ
ಹೆಸರಿಗಾದರೂ ಸರಿ ಈ ಸೂತ್ರವನ್ನು
ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ
ಹೆಸರೇ ಸಿಗುತ್ತದೆ!"

ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ.
ಯಾವುದು ಆ ಸೂತ್ರ? ಎಂದು ಕೇಳಿದ.

ಆಗ ತುಳಸೀದಾಸರು ಹೇಳುತ್ತಾರೆ:

ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ,
ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು
ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ
ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ
ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು
(
ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು
ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ
ಉಳಿಯುವುದು ಎರಡೇ. ಆ ಎರಡು
ಅಕ್ಷರಗಳೇ "ರಾಮ"!

ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು
ತನ್ನ ಹೆಸರು "ನಿರಂಜನ" ಎಂದು ನಾಲ್ಕು
ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21;
21X2=42; 42/8=
ಭಾಗಲಬ್ಧ 5. ಶೇಷ 2.

ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು
ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12;
12+5=17; 17X2=34; 34/8 =
ಭಾಗಲಬ್ಧ 4. ಶೇಷ 2.

ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ
ಸೂತ್ರ ಅನ್ವಯಿಸಿದ. 2X4=8; 8+5=13;
13X2=26; 26/8 =
ಭಾಗಲಬ್ಧ 3. ಶೇಷ
2.

ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ"
ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
5X4=20; 20+5=25; 25X2=50; 50/8
=
ಭಾಗಲಬ್ಧ 6. ಶೇಷ 2.

ಹೌದಲ್ವಾ! ಹೆಸರು ಯಾವುದೇ ಇದ್ದರೂ,
ಎಷ್ಟು ಅಕ್ಷರಗಳೇ ಇದ್ದರೂ
ಕೊನೆಯಲ್ಲುಳಿಯುವುದು ಎರಡಕ್ಷರ
"
ರಾಮ" ಮಾತ್ರ! ಭಕ್ತನಿಗೆ ಬಹಳ
ಖುಷಿಯಾಯ್ತು.

ತುಳಸೀದಾಸರ
ಕಾಲಿಗೆರಗಿದ. ಇವತ್ತು ನನಗೆ
ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು
ಯಾವಾಗಲೂ ನಾನು ರಾಮನನ್ನೇ
ಕಾಣುತ್ತಿರುತ್ತೇನೆ ಎಂದು ಅಲ್ಲಿಂದ
ಹೊರಟುಹೋದ.

ಅಷ್ಟಾಗಿ, ತುಳಸೀದಾಸರು ಹೇಳಿದ
ಸೂತ್ರದಲ್ಲಿನ ಸಂಖ್ಯೆಗಳ ಮತ್ತು
ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ?

ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ
ಎಂಬ ನಾಲ್ಕು ಪುರುಷಾರ್ಥ.

ಪಂಚತತ್ತ್ವ = ಭೂಮಿ, ನೀರು, ಅಗ್ನಿ,
ವಾಯು, ಆಕಾಶ ಎಂಬ ಪಂಚಮಹಾಭೂತ.

ದ್ವಿಗುಣ = ಮಾಯೆ ಮತ್ತು ಬ್ರಹ್ಮ.

ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,
ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ
ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ
ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ
ಕೊನೆಗೂ ಉಳಿಯುವ ಶೇಷ "ರಾಮ"
ಮಾತ್ರ!

ಜೈ ಶ್ರೀರಾಮ್

                                              Sri Rama,Sita,Laxmana & Anjaneya
 


"
ಭಗವತ್ ಗೀತೆ ನುಡಿ "

ಹುಟ್ಟಿದಾಗ ನೀ ಅಳುತ್ತಿದ್ದೆ,
ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

ಹುಟ್ಟಿದಾಗ ಹುಡುಕುವರು ನಿನಗೆ
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
ನಿನ್ನ ನಾಮ.

ನೀನೇನನ್ನೂ ಗಳಿಸದೇ ಬಂದೆ,
ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.

ಓ ಮಾನವಾ..
ಮಡಿದಾಗ ಮಣ್ಣಲ್ಲಿ ಮರಳಾಗಿ
ಹೊಗುವ ನೀನು
ನಿನ್ನದು ಎನ್ನಲು ನಿನಗೇನಿದೆ,

ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
ನಾನು ಯಾರು ?
ಏನಿದೇ ನನ್ನಲ್ಲಿ ?

ಚಿಂತಿಸುವವನಿಗೆ ದೃಷ್ಟಾಂತವಿದೆ.


------------ Hari Om ------------

Tuesday, March 30, 2021

Satya Bodha Tirtharu

 

ಶ್ರೀ ಗುರುಭ್ಯೋ ನಮಃ 

                                        Sri Satya Bodha Tirthara Moola Brindavana                                                                                in Savanuru near Haveri, Karnataka
 

ಶ್ರೀ ಸತ್ಯಬೋಧತೀರ್ಥರು (ಸವಣೂರು)


ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |

नैवेद्यगविषं रामे वीक्ष्य तद्भुक्तिभाग् गुरु:
योदर्शयद्रविं रात्रौ सत्यबोधोस्तु मे मुदे ।


ಶ್ರೀಸತ್ಯಭೋಧೊ ನಿಜಕಾಮಧೇನು/
ಮಾಯಾತಮಃಖಂಡನ ಚಂಡಭಾನುಃ/
ದುರಂತಪಾಪ ಪ್ರದಹೇ ಕೃಶಾನುಃ
ದೇಯಾನ್ಮಮೇಷ್ಟಂ ಗುರುರಾಜಸೂನುಃ/

ಇಂದುಶ್ರೀಸತ್ಯಭೋಧತೀರ್ಥರ #ಆರಾಧನೆನಿಮಿತ್ಯಈ_ಲೇಖನಮಾಲಿಕೆಸಮರ್ಪಣೆ

ಶ್ರೀಸತ್ಯಭೋಧ ತೀರ್ಥರು ಅಂದಿನ ರಾಜಕೀಯ ವಿಷಮ ಗಳಿಗೆಯಲ್ಲೂ,ಮದ್ವ ಮತದ ಪ್ರವರ್ಧಮಾನಕ್ಕೆ ಕಾರಣಕರ್ತರು.


ದಾಸ ಸಾಹಿತ್ಯವನ್ನು ವಿಶೇಷವಾಗಿ ಬೆಳೆಸಿ ಪೋಷಿಸಿದರು.

ಗುರುಗಳಾದ ಶ್ರೀ ಸತ್ಯಪ್ರಿಯತೀರ್ಥರಿಂದ ಸನ್ಯಾಸ ದೀಕ್ಷೆ‌ಪಡೆದು , ಉತ್ತರಾಧಿ ಮಠದ ಹಂಸನಾಮಕ‌ ಪೀಠದಲ್ಲಿ ಶ್ರೀ ಸತ್ಯಭೋಧ ತೀರ್ಥ ರಂದು ನಾಮಕರಣ ಗೊಂಡು ಪೀಠಾಧಿಪತಿ ಗಳಾದರು. ಇವರು ಮಾರ್ಕಾಂಡೇಯ ಮುನಿಗಳ ಅಂಶ ಸಂಭೂತರು. ಕಕ್ಷಾತಾರತಮ್ಯ ೨೭.

ಸತ್ಯಭೋಧರು ಅತ್ಯದ್ಭುತ ವಾಗ್ಮಯಿಗಳು ಮತ್ತು ಪ್ರವಚನಕಾರರಾಗಿದ್ದರು. ಕಲಿಯುಗದ ಕಲ್ಪವೃಕ್ಷ ಕಾಮಧೇನು ಆಗಿದ್ದರು. ನೂರಾರು ಪಂಡಿತರನ್ನು ನಿರ್ಮಿಸಿದ್ದರು. ಹಾಗೇ ಹರಿದಾಸ ವರಣ್ಯೇರಿಗೆ ಮತ್ತು ದಕ್ಷಿಣ ಭಾರತದಲ್ಲಿ ಮತ್ತು ಎಲ್ಲ ಪಂಥದ ಜನರಿಗೂ ಪರಮ ಪೂಜ್ಯ ಶ್ರೀಗಳಾಗಿದ್ದರು.ಇವರು ರಾಜಕೀಯ, ಸಾಮಾಜಿಕ, ಎಲ್ಲ ಕ್ಷೇತ್ರಗಳಲ್ಲೂ ಪಾತ್ರ ವಹಿಸುತ್ತಿದ್ದಲ್ಲದೇ ತ್ರಿವಿಕ್ರಮ ಸಾಧಿಸುತ್ತಿದ್ದರು.


ಬೃಂದಾವನ ಪ್ರವೇಶ ಕ್ರಿ..೧೭೮೩ ( 1783 ) ಇವರ ಕಾಲಾವಧಿ ೧೭೪೪-೧೭೮೩. ( 1744 - 1783 )

ಜೀವನ ಚರಿತ್ರೆ

ರಾಯಚೂರಿನ ಹರಿ ಆಚಾರ್ಯ ಮತ್ತು ಅರಳಮ್ಮ ದಂಪತಿಗಳು ವಾಸವಾಗಿದ್ದರು. ಶ್ರೀ ರಾಮನ ಉಪಾಸನೆ ಯಿಂದ , ಮುದ್ದಾದ ಗಂಡುಮಗು ಜನನವಾಯಿತು.ಆ ಮಗುವಿಗೆ ರಾಮಚಂದ್ರ ಆಚಾರ್ಯ ಎಂದು ನಾಮಕರಣ ಮಾಡಿದರು.

ತಮ್ಮ ಗುರುಗಳಾದ ಶ್ರೀ ಸತ್ಯ ತೀರ್ಥರಲ್ಲಿ ಸಕಲ ಶಾಸ್ತ್ರಗಳನ್ನು ಕಲೆತರು. ಮುಂದೆ ಶಕೆ ೧೭೪೪" ರುದಿರೋದ್ಗಾರಿ"ಸಂವತ್ಸರದ ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಶ್ರೀ ಹಂಸನಾಮಕ ಪೀಠವನ್ನು ಅಲಂಕರಿಸಿದರು. ಗುರುಗಳು;ಇವರಿಗೆ "ಸತ್ಯಭೋದತೀರ್ಥ"ರೆಂದು ನಾಮಕರಣಮಾಡಿದರು.

ಸವಣೂರಿನ ನವಾಬ ಖಂಡೇರಾಯ, ಸರದಾರ ಜಾನೋಜಿ ನಿಂಬಾಳಕರ, ತ್ರಿಕಟಾಪಲ್ಲಿಯಭೀಮರಾಯ,ತಂಜಾವೂರಿನ ಪ್ರತಾಪಸಿಂಹ ಹೀಗೆ ಅನೇಕ ರಾಜಕೀಯ ವ್ಯಕ್ತಿಗಳು ಇವರ ಒಡನಾಡಿಯಾಗಿ ದ್ದರಲ್ಲದೇ..ಇವರ ಶಿಷ್ಯರಾಗಿದ್ದರು.

ಶ್ರೀ ಸತ್ಯಸಂಧ ತೀರ್ಥರು, ಶ್ರೀ ಸತ್ಯವರತೀರ್ಥರು,ಶ್ರೀ ಸತ್ಯಧರ್ಮ ತೀರ್ಥರು, ಶ್ರೀ ಸತ್ಯಸಂಕಲ್ಪ ತೀರ್ಥರಾದಿ ಯತಿವರೇಣ್ಯರು ಇವರ ಶಿಷ್ಯರಾಗಿದ್ದರು.
ಮಾದನೂರಿನ ವಿಷ್ಣು ತೀರ್ಥರು,ವ್ಯಾಸತತ್ವಜ್ಞರು,ರಾಯರ ಮಠದ ಧೀರೆಂದ್ರತೀರ್ಥರು, ವರದೇಂದ್ರತೀರ್ಥರು .


ಇವರೆಲ್ಲ ಸತ್ಯಭೋಧರ ಸಮಕಾಲಿನರು ಹಾಗೂ ಗೌರವ ಪ್ರಧಾನ ಪಾತ್ರರಾಗಿದ್ದರು.

ಗಲಗಲಿ ಮುದ್ಗಲ ಆಚಾರ್ಯರರು (ಗಲಗಲಿ ಅವ್ವನವರ ಪತಿ), ಪಾಂಡುರಂಗಿ ನರಸಿಂಹ ಆಚಾರ್ಯರರು, ಮನ್ನಾರಿ ಶ್ರೀನಿವಾಸ ಆಚಾರ್ಯರರು, ಗುರ್ಲಪಾಡಿಶ್ರೀನಿವಾಸ ಆಚಾರ್ಯರರು,ಉಮರ್ಜಿ ಕೃಷ್ಣಾಚಾರ್ಯರರು,ಬಿದರಹಳ್ಳಿ ಶ್ರೀಪತ್ಯ ಆಚಾರ್ಯರು ಹೀಗೆ ಅನೇಕ ಮುಂತಾದ ವರು ಇವರಲ್ಲಿ ಶಾಸ್ತ್ರ ಪ್ರವೀಣರಾದ ವಿದ್ವಾಂಸರು.

ವಿಜಯದಾಸರು,ಗೋಪಾಲ ದಾಸರು(ಇವರ ಅಣ್ಣತಮ್ಮಂದಿರು),
ಜಗನ್ನಾಥ ದಾಸರು, ಮೋಹನದಾಸರು, ಶ್ರೀದ ವಿಠ್ಠಲ ದಾಸರು, ಅನೇಕರಿಗೆ ಗುರು ಸ್ಥಾನದಲ್ಲಿದ್ದು ತತ್ವೋಪದೇಶಗಳನ್ನು ನೀಡಿ
ಮಾರ್ಗದರ್ಶಕರಾಗಿದ್ದರು

ಇವರು ತಿರುಚನಾಪಳ್ಳಿ, ಶ್ರೀ ಮುಷ್ಣಂ,ಅರಣಿ,ಕನ್ಯಾಕುಮಾರಿ,ಶ್ರೀರಂಗಂ,ತಿರುಪತಿ,ಕಡಪ,ಹೈದ್ರಾಬಾದ,ರಾಯಚೂರ,ಸುರಪುರ,ಗುಲ್ಬರ್ಗಾ,ಬಳ್ಳಾರಿ,ಚಿತ್ರದುರ್ಗ, ಹರಿಹರ ಮೊದಲಾದ ಊರಗಳಲ್ಲಿ ದ್ವಿಗ್ವಿಜಯ ಯಾತ್ರೆ ಮುಗಿಸಿ, ಕೊನೆಗೆಸವಣೂರನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.ಅಲ್ಲಿಯೇ ತಮ್ಮ ಕಾರ್ಯಕ್ಷೇತ್ರ ವನ್ನಾಗಿಸಿ ಬಹಳ ದಿನಗಳವರಿಗೆ ಅಲ್ಲಿಯೇ ವಾಸ ಇದ್ದರು.



Tanka Saale 
 

ಟಂಕಸಾಲೆಯನ್ನು ನಿರ್ಮಿಸಿ ಬೆಳ್ಳಿ ಮತ್ತು ಬಂಗಾರದ ತಮ್ಮ ಭಾವಚಿತ್ರವುಳ್ಳ‌ ನಾಣ್ಯಗಳನ್ನು ದಕ್ಷಿಣ ಭಾರತದಲ್ಲಿ ಚಲಾವಣೆಗೆ ತಂದರು. ಇವರ ಕಾಲಕ್ಕೆ ಈ ಮಹಾ ಸಂಸ್ಥಾನಕ್ಕೆ "ಶ್ರೀ ಸತ್ಯಭೋಧ ಮಠ" ಎಂದು ಪ್ರಸಿದ್ಧಿಯಾಗಿತ್ತು.ಹಾಗೆಯೇ ಕರೆಯುತ್ತಿದ್ದರು.

ಇವರ ಮಹಿಮೆಯು ಬಹಳ ಅಪಾರ.


)ಪೇಶ್ವೆಯ ಸಹೋದರಮಾವ ಆನಂದಿರಾಯನಿಗೆ ರೋಗ ಪರಿಹರಿಸಿಅನುಗ್ರಹಿಸಿದರು


)ವಿಷ ಪರಿಹಾರಕ್ಕಾಗಿ ರಾತ್ರಿ ಪೂಜೆ ಮಾಡಿ ಸೂರ್ಯನಾರಯಣನ ದರ್ಶನ ಮಾಡಿಸಿದವರು


) ಕಪಿ ರೂಪದ ಕೊನ್ಹೇರಿ ಆಚಾರ್ಯರಿಗೆ ಗೀತಾ ಭಾಷ್ಯ ಪಾಠ ಹೇಳಿ ಉದ್ಧರಿಸಿದರು.


)ಸವಣೂರ ವಿಜಯದಶಮಿ ಯಂದು ಬಾವಿಯಲ್ಲಿ ಗಂಗೆಯು ಒಲಿದುಬಂದಳು.ಅದೇ"ವಿಷ್ಣು ತೀರ್ಥ"ವೆನಿಸಿತು.


)ಗೋಪಾಲ ದಾಸರು ಮತ್ತು ಅವರ ಅನುಜರನ್ನು ಪ್ರತ್ಯಕ ಕೂಡಿಸಿ
"
ಮಾರಮದಘನ್ನ" ಎಂಬ ಸಾಹಿತ್ಯ ಬರೆಯಿಸಿ ಅವರ ಶಕ್ತಿಯನ್ನು ಪರಿಚಯಿಸಿ ದರು.


)ಜಗನ್ನಾಥ ದಾಸರಿಗೆ ಅನುಗ್ರಹಿಸಿ,
ಸವಣೂನರಿನಲ್ಲಿಯೇ ಹರಿಕಥಾಮೃತಸಾರ
ಬರೆಯಿಸಿ , ಕೊನೆಗೆ ಆಶಿರ್ವಾದ ರೂಪದಲ್ಲಿ ತಮ್ಮ ಪಾದುಕೆ‌ ಮತ್ತು
ಮಣೆಯನ್ನು ನೀಡಿ, ಶಿಷ್ಯರಾದ ಜಗನ್ನಾಥ ದಾಸರ ಗೋಪಾಳಬುಟ್ಟಿ ಯಲ್ಲಿ ಮಂತ್ರಾಕ್ಷತೆ ನೀಡತೊಡಗಿದರು.


) ಶ್ರೀ ಸತ್ಯಸಂಧತೀರ್ಥರಿಗೆ ೧೦ ಆಯುಷ್ಯ ದಾನ ಮಾಡಿದರು.

ಶ್ರೀ ಮುಷ್ಣ ಭೂವರಹಾ ದೇವರಿಗೆ ಲಕ್ಷ ತುಳಸಿ,ಲಕ್ಷ ಹೂಗಳಿಂದ, ಅರ್ಚಿಸಿದರು. ಕೊನೆಗೆ ತಮ್ಮ ೭೪ ನೇ ವಯಸ್ಸಿನಲ್ಲಿ "ಫಾಲ್ಗುಣ ಕೃಷ್ಣ ಪ್ರತಿಪಾದ" ದಂದು, ಸವಣೂರಿನಲ್ಲಿ ವೃಂದಾವನ ಪ್ರವೇಶಿಸಿದರು.

ವಿಜಯದಾಸರಾದಿ ೧೪ ಜನ ಹರಿದಾಸರುಇವರ ಸ್ತೋತ್ರಪದ ರಚಿಸಿದ್ದಾರೆ

ದಾಸ ಮತ್ತು ವ್ಯಾಸ ಸಾಹಿತ್ಯವನ್ನುಉನ್ನತ ಸ್ಥಾನಕ್ಕೆ ಕರೆದೋಯ್ದ ಕೀರ್ತಿ ಇವರದು.

ಶ್ರೀಕೃಷ್ಣಾರ್ಪಣಮಸ್ತು        ----------- Hari Om -----------