Tuesday, August 4, 2026

ಪಂಚಗವ್ಯ ಚಿಕಿತ್ಸೆ -- ಗೋವಿನ ತುಪ್ಪ ---- Panchagavya Treatment from Cow Ghee

 

                                                              Panchagavya Treatment

  

ಪಂಚಗವ್ಯ ಚಿಕಿತ್ಸೆ -- ಗೋವಿನ ತುಪ್ಪ


Panchagavya Treatment from Cow Ghee


ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ವಾತಾವರಣ ಶುದ್ಧಿಯಾಗುತ್ತೆ !!.
ಗೋವಿಗೆ ವಿಷ ನೀಡಿದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ...

ದೇಶ ಕಂಡ ಅತೀ ದೊಡ್ಡ ದುರಂತ "ಭೋಪಾಲ್ ಅನಿಲ ದುರಂತ" ನೀವು ಕೇಳಿರಬಹುದು. ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರು ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ" ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು.


H I V ಪೀಡಿತ ಮಕ್ಕಳಿಗಾಗಿ ಮೈಸೂರಲ್ಲಿ ಒಂದು ಶಾಲೆ ಇದೆ. ಇದರ ಸ್ಥಾಪಕರಾದ ರಾಮದಾಸ್ (ಮಾಜಿ ಶಾಸಕರು) ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದರು . ಆಗ ಇಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು.


"ಅಗ್ನಿ ಹೋತ್ರ" ದ ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಅಗ್ನಿ ಸ್ಪರ್ಶ ಮಾಡಬೇಕು. ಇದನ್ನು ಬೆಳಿಗ್ಗೆ ಸೂರ್ಯೋದಯದ ಮೊದಲು, ಸಂಜೆ ಸೂರ್ಯಾಸ್ತದ ನಂತರ ಮಾಡಬೇಕು.


ಈ ಪೂಜೆ, ಹೋಮ, ಹವನ ಅಂದರೆ ಕೆಲವರಿಗೆ ಅಲರ್ಜಿ. ಆದರೆ ಇಲ್ಲಿ ವೈಜ್ಞಾನಿಕವಾಗಿ ಹೇಳುವುದಾದರೆ ತಾಮ್ರ ಬಿಸಿಯಾದಾಗ ಮತ್ತು ಸಗಣಿ, ತುಪ್ಪ ಸುಟ್ಟಾಗ ಬಿಡುಗಡೆಯಾಗುವ ಅನಿಲ ನಮ್ಮ ದೇಹ ಪ್ರವೇಶಿಸಿದಾಗ ನಮ್ಮ ದೇಹದ ನರಗಳೆಲ್ಲ ಶುದ್ಧವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ


ಅಮಿತ್ ವೈದ್ಯ, ಇವರು ಅಮೇರಿಕಾದಲ್ಲಿ ನೆಲೆ ನಿಂತ ಭಾರತದ ಉದ್ಯಮಿ. ಇವರ ತಂದೆ ತಾಯಿ ಇಬ್ಬರು ಕ್ಯಾನ್ಸರ್ ನಿಂದ ತೀರಿ ಹೋಗುತ್ತಾರೆ. ಕೆಲವು ಸಮಯದಲ್ಲಿ ಅಮಿತ್ ರಿಗೂ ಕ್ಯಾನ್ಸರ್ ಬರುತ್ತದೆ. ವೈದ್ಯರು 6 ತಿಂಗಳ ಕಾಲ ಮಾತ್ರ ಕಾಲಾವಕಾಶ ನೀಡುತ್ತಾರೆ. ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಬೇಕೆಂದು ಗುಜರಾತ್ ಗೆ ಬಂದ ಅಮಿತ್, ಒಬ್ಬರ ಪರಿಚಯದ ಮೇಲೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿ ಒಂದು ಸಣ್ಣ ಚಿಕಿತ್ಸೆಗೆ ಒಳಪಡುತ್ತಾರೆ. ಕೆಲವೇ ತಿಂಗಳಲ್ಲಿ ಅವರ ಕ್ಯಾನ್ಸರ್ ಮಾಯವಾಗಿಬಿಟ್ಟಿದೆ. ಇಂದು ಬೇರೆಯವರಂತೆ ಆರೋಗ್ಯವಾಗಿ ಬದುಕುತ್ತಿದ್ದಾರೆ. ಅವರ ಮಾಡಿದ ಚಿಕಿತ್ಸೆ ಅಂದರೆ "ಪಂಚಗವ್ಯ ಚಿಕಿತ್ಸೆ".

 

                                                                            PIC - 1

 

ಇದೇ ಚಿಕಿತ್ಸೆ ಅನೇಕ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿದೆ. "ಪಂಚಗವ್ಯ" ಅಂದರೆ ಗೋಮೂತ್ರ, ಗೋಸಗಣಿ, ಗೋಹಾಲು, ಗೋತುಪ್ಪ, ಗೋಮೊಸರು ಇವೆಲ್ಲದರ ಮಿಶ್ರಣದಿಂದ ತಯಾರಾಗೋ ಔಷಧಿ. ಈ ಚಿಕಿತ್ಸೆಯಿಂದ ಗುಣಮುಖರಾದ ಅಮಿತ್ ವೈದ್ಯ ಅವರು ಒಂದು ಇಂಗ್ಲಿಷ್ ಪುಸ್ತಕ ಬರೆದಿದ್ದಾರೆ. ಅ ಪುಸ್ತಕದ ಕನ್ನಡ ಹೆಸರು "ಒಂದು ದನ ನನ್ನ ಜೀವ ಹೇಗೆ ಕಾಪಾಡಿತು" ಎಂದು. ದನವನ್ನು ದೇವರೆಂದು ಪೂಜಿಸೋ ಭಾರತೀಯರಾದ ನಮ್ಮಲ್ಲಿ ಎಷ್ಟೋ ಜನಕ್ಕೆ ಇದರ ಮಾಹಿತಿ ಇಲ್ಲ. ಎಷ್ಟೋ ಕಾಯಿಲೆಗಳಿಗೆ ಮೀನಿನಿಂದ ಔಷಧ ತಯಾರಿಸುತ್ತಾರೆ. ಮೀನು ತಿನ್ನದವರು ಔಷಧ ಮುಖಾಂತರ ಆದರು ತಿನ್ನಲೆ ಬೇಕು. ಹಾಗೆಯೆ ವಿದೇಶಗಳಲ್ಲಿ ದನದ ಮೂತ್ರ, ಸಗಣಿ, ಮಾಂಸದಿಂದ ಔಷಧಿ ತಯಾರಿಸಿ ಭಾರತಕ್ಕೆ ಕಳಿಸುತ್ತಾರೆ.ಅದನ್ನು ನಾವು ತಿನ್ನುತ್ತೇವೆ.


ನಮ್ಮ ಮನೆಯಲ್ಲಿರುವ ದನದ ಬಗ್ಗೆ ನಮಗೆ ತಾತ್ಸಾರ. ಇವುಗಳನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ನಾವು ವಿದೇಶಿ ಕಂಪನಿಯವರ ದನದ ಮಾಂಸದ ಔಷಧಿ ತಿನ್ನುವ ಅವಶ್ಯಕತೆ ಇರುತ್ತಿರಲಿಲ್ಲ. ದನ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದ ಹಾಗೆ. ಚಿನ್ನದ ಮೊಟ್ಟೆ ಹಾಗೆ ದನಗಳು ನಮಗೆ ಚಿನ್ನದ ಜೀವನ ನಡೆಸಲು ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ಕೊಡುತ್ತದೆ. ಆದರೆ ನಾವು ಅತೀ ಆಸೆಯಿಂದ ಕೋಳಿಯ ಹೊಟ್ಟೆ ಸೀಳಿದ ಹಾಗೆ ಧನವನ್ನು ಕಡಿದು ತಿನ್ನುತ್ತೇವೆ. ಇದು ಬೇಕಾ? ಮನುಷ್ಯನ ದುರಾಸೆಗೆ ಕೊನೆ ಎಲ್ಲಿ.? ನಮ್ಮ ಮನೆಯಲ್ಲಿಯಲ್ಲಿ ಮೆಡಿಕಲ್ ಸೆಂಟರ್ ಇಟ್ಟುಕೊಂಡು ಕಾಯಿಲೆ ಬಂದಾಗ ಇಡೀ ಪ್ರಪಂಚ ಸುತ್ತುತ್ತೇವೆ.

 

                                                          Govu Mutra or Cow Urine


 

ಕ್ಯಾನ್ಸರ್ ನಿಂದ ಹಿಡಿದು ತಲೆನೋವಿನ ತನಕ 5000 ಕಾಯಿಲೆಗಳಿಗೆ ದನದಲ್ಲಿ ಔಷಧಿ ಇದೆ ಅಂದರೆ ನಂಬಲೇಬೇಕು. ಎಬೋಲಾದಂತಹ ಹೊಸ ಖಾಯಿಲೆ ಇರಲಿ, ಇನ್ನು ಹೊಸದಾಗಿ ಹುಟ್ಟಿ ಯಾವುದೇ ಖಾಯಿಲೆ ಬರಲಿ ಅದಕ್ಕೆ ಗೋವಿನಿಂದ ಔಷಧಿ ಇದೆ.


ದನದ ಮೂತ್ರದ ಬಗ್ಗೆ ಬಹಳ ಬೇಗ ಎಚ್ಚೆತ್ತ ಅಮೇರಿಕಾ, ಭಾರತದಲ್ಲಿರುವ ಗೋಮೂತ್ರದ ಬಗ್ಗೆ "ಪೇಟೆಂಟ್" ಗೆ ಹೋರಾಟ ನಡೆಸುತ್ತಾರೆಂದರೆ, ನಮಗೆ ಇನ್ನು ಯಾವಾಗ ಬುದ್ಧಿ ಬರುತ್ತದೆ?
ಪ್ರಪಂಚದ ಮುಂದುವರಿದ ಕೆಲವು ದೇಶಗಳ ಯುನಿವರ್ಸಿಟಿಗಳಲ್ಲಿ ಇದರ ಬಗ್ಗೆ ಒಂದು ವಿಷಯ ಇದೆ ಅಂದರೆ ನೀವು ನಂಬಲೇಬೇಕು.

                                   PIC -2


ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಮಲಗಿದ್ದು ಸಾಕು, ಇನ್ನಾದರು ಎಚ್ಚೆತ್ತು ಕೊಳ್ಳೊಣ.
ನಮಗಲ್ಲದಿದ್ದರು ನಮ್ಮ ಪೀಳಿಗೆಗಾದರೂ ಒಳ್ಳೆಯದಾಗಲಿ. ಮುಂದಿನ ಜನಾಂಗವಾದರೂ ಆರೋಗ್ಯವಂತ ಸಮಾಜವಾಗಲೀ.

Please always Use Cow  Ghee since it has been proved Scientifically very Healthy for Human Uses.


-------------------------------- Hari Om ------------------------------




 


                                             

 


No comments:

Post a Comment