Wednesday, June 10, 2026

ಶನಿ ಗ್ರಹದ ಮಾಹಿತಿ -- Saturn Planet its Information

 

                                                                          Shani Deva

 

ಶನಿ ಗ್ರಹದ ಮಾಹಿತಿ -- Saturn Planet its 

Information



ಶ್ರೀ ಶನೈಶ್ಚರ ಜ್ಯೋತಿಷ್ಯ ಶಾಸ್ತ್ರದಲ್ಲಿ,ದಿವ್ಯನವಗ್ರಹಗಳಲ್ಲಿ"ಶನಿ"ಯುಮಹತ್ತರವಾದ ಗ್ರಹ
ಶನಿಯು ಸಶರೀರನಾಗಿದ್ದಾನೆ,ಶನಿಯು,ಶನಿವಾರದ ದೇವರು,ಭಾರತೀಯ ಭಾಷೆಗಳಲ್ಲಿ
ಶನಿಯು ವಾರದ ಏಳನೇ ದಿನದ ದೇವರಾಗಿದ್ದಾನೆ.


ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದು ಕೊಳ್ಳುವ ಸಮಯ 30 ವರ್ಷಗಳು. ಶನಿಯನ್ನು ಶನೈಶ್ವರ ಶನಿ ಭಗವಾನ್, ಶನೀಶ್ವರ, ಸನೀಸ್ವರ , ಶನೀಶ್ವರನ್ , ಶನಿದೇವ ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ,


ಶನಿಯು ಸೂರ್ಯ ದೇವನ ಪುತ್ರ. ಹಾಗೂ ಸೂರ್ಯನ ಹೆಂಡತಿ ಛಾಯ{ನೆರಳಿನ ದೇವತೆ }ಹೀಗಾಗಿ 'ಛಾಯಾಪುತ್ರ' ಎಂದೂ ಕರೆಯಲಾಗುತ್ತದೆ, ಹಿಂದೂಗಳ ಸಾವಿನ ದೇವತೆ ಯಮನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.


ಆಸಕ್ತಿಯ ವಿಷಯವೆಂದರೆ ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು ಯಮ ನ್ಯಾಯ ದೇವತೆಗಳೇ!
ಒಬ್ಬರು ತಮ್ಮ ಜೀವನದ ಆಗು-ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ ಯಮನು , ಒಬ್ಬ ವ್ಯಕ್ತಿಯು ಸತ್ತ ನಂತರ ಫಲಿತಾಂಶವನ್ನು ನೀಡುತ್ತಾನೆ, ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದ್ದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯಪ್ರಭಾವಎಂತಹದೆಂ ಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ.


ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ,
ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗುಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ.

 

                                                                 Saturn Planet

 

ಈತನು ಕಪ್ಪುಬಣ್ದವನಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದು ಬಾಣ ಹಾಗು ಎರಡು ಚಾಕು ಹೊಂದಿದ್ದು, ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ, ಶ್ರೀಶನೈಶ್ಚರನು ಮಹಾಪರಾಕ್ರಮಿ ಸೂರ್ಯಪುತ್ರ,
ಶನಿಯ ಅವತಾರದ ಕಥೆ ಬೇರೆ ಬೇರೆ ಪುರಾಣಗಳಲ್ಲಿ ಸ್ವಲ್ಪ ವಿಭಿನ್ನವಾಗಿ ನಿರೂಪಿತವಾಗಿದೆ,
ಕಶ್ಯಪ ಮಹರ್ಷಿಯ ಮಗನಾದ ಸೂರ್ಯನು ತ್ವಷ್ಟೃ ಪ್ರಜಾಪತಿಯ ಮಗಳಾದ ಸಂಜ್ಞಾ ಎಂಬುವಳೊಡನೆ ವಿವಾಹವಾದನು,


ಈ ದಂಪತಿಗಳಿಗೆ ವೈವಸ್ವತ ಮನು, ಯಮಧರ್ಮ ಎಂಬ ಇಬ್ಬರು ಪುತ್ರರು ಮತ್ತು ಯಮುನೆಯೆಂಬ ಮಗಳು ಹುಟ್ಟಿದರು,ಕಾಲಾಂತರದಲ್ಲಿ ಸಂಜ್ಞೆಗೆ ತನ್ನ ಪತಿಯಾದ ಸೂರ್ಯನ ದಿವ್ಯವಾದ, ಪ್ರಖರವಾದ ತೇಜಸ್ಸು ಸಹಿಸಲುಅಸಾಧ್ಯ ವಾಯಿತು, ತನ್ನ ಪ್ರತಿಕೃತಿಯಾಗಿ ಛಾಯಾ ಎಂಬುವಳನ್ನು ಸಂಜ್ಞೆಯು ಸೃಷ್ಟಿಮಾಡಿ ತನ್ನ ಪತಿಯ ಸೇವೆ ಮತ್ತು ಮಕ್ಕಳ ಆರೈಕೆ ಮಾಡುವುದಾಗಿ ನಿಯಮ ಮಾಡಿ ತಾನು ಪಿತೃಗ್ರಹಕ್ಕೆ ತೆರಳಿದಳು, ಛಾಯಾದೇವಿಯು ಪತಿಸೇವಾ ಕಾರ್ಯದಲ್ಲಿ ತತ್ಪರಳಾಗಿ ಸೂರ್ಯನ ವಿಶೇಷ ಅನುಗ್ರಹವನ್ನು ಪಡೆದಳು. ಸಂಜ್ಞೆಯಂತೆಯೆ ಛಾಯೆಯುಸಹಸೂರ್ಯನಿಂದ ಸಾವರ್ಣಿ ಮನು, ಶನೈಶ್ಚರರೆಂಬ ಗಂಡು ಮಕ್ಕಳನ್ನು ತಪತಿಯೆಂಬ ಹೆಣ್ಣುಮಗುವನ್ನು ಪಡೆದಳು.
ಶನಿರಾಯನ ಜನನದ ಸಮಾಚಾರವನ್ನು ಕೇಳಿದ ಸೂರ್ಯನು ಅವಸರದಿಂದ ಪುತ್ರನನ್ನು ನೋಡಲು ಬಂದನು,


ಆಗ ತಾನೇ ಜನಿಸಿದ ಶಿಶು ಶನೈಶ್ಚರನ ದೃಷ್ಟಿಯುಸೂರ್ಯ, ಅವನ ಸಾರಥಿ ಅರುಣ, ರಥದ ಕುದುರೆಗಳುಹೀಗೆಎಲ್ಲದಕ್ಕೂಪೀಡೆಯನ್ನುಂಟು ಮಾಡಲು ಜಗದಾದ್ಯಂತ ಈತನ ಶಕ್ತಿ, ಸಾಮರ್ಥ್ಯಗಳ ಪ್ರಸಿದ್ಧಿಯಾಯಿತು.


ಶನಿದೇವನ ಪ್ರಾರ್ಥನೆಯನ್ನು ನಿತ್ಯದಲ್ಲಿ, ಶನಿವಾರ, ಶನಿಪ್ರದೋಷಗಳಂದು ವಿಶೇಷವಾಗಿ ಮಾಡಿದಲ್ಲಿ ಶ್ರೀ ಶನೈಶ್ಚರನ ಕೃಪೆ ಅವಶ್ಯವಾಗಿ ಆಗುವುದು, ವೇದಗಳ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ,

9 ನವಗ್ರಹ ಗಳಲ್ಲಿ ಶನಿಭಗವಾನ್ ಒಬ್ಬನು, ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನಉಪಾಧ್ಯಾಯನಾಗಿದ್ದು, ಸಹನೆ, ಶ್ರಮ, ಪ್ರಯತ್ನ, ಅನುಭವಗಳ ಪ್ರತೀಕವಾಗಿದ್ದಾನೆ.ಅಡೆತಡೆಗಳನ್ನು, ದುರಾದೃಷ್ಟಗಳನ್ನು, ತರುವವನೂ ಆಗಿದ್ದಾನೆ

 

                                                                      Lord Shani

 

ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ,ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ , ಹಿಂದೂ ಜ್ಯೋತಿಷಿಗಳು ನಂಬುವಂತೆ, ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು, ಅದೇ ಶನಿಯು "ಕೆಟ್ಟಸ್ಥಾನ"ದಲ್ಲಿ ಕುಳಿತಿದ್ದರೆ, ಎಲ್ಲ ರೀತಿಯ ತೊಂದರೆ ಅನುಭವಿಸ ಬೇಕಾಗುತ್ತದೆ, ಜ್ಯೋತಿಷ್ಯವನ್ನು ನಂಬುವ ಹಿಂದೂಗಳು ಶನಿಯ ಬಗ್ಗೆ ಬಹಳ ಭಯ ಹಾಗು ಹೆದರಿಕೆಯಿದ್ದು, ಆತನು ಕೆಟ್ಟಸ್ಥಾನದಲ್ಲಿ ಕುಳಿತಾಗ ಆಗುವ ಅನಾಹುತಗಳಿಗೆ ಹೆದರುತ್ತಾರೆ,
ಆದರೂ ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳಬಹುದೆಂದರೆ, ಯಾವುದೇ ಸುಖ ಅಥವಾ ದುಃಖಕ್ಕೆ ಶನಿಯ ಪ್ರಭಾವದಿಂದ ಮನುಷ್ಯನಿಗೆ ನೆರವಾದ ಕಾರಣವಾಗಿರದೆ, ಮನುಷ್ಯ ತಾನು ಮಾಡಿದ ಸ್ವಂತ ಕರ್ಮದ ನೇರ ಫಲವಾಗಿರುತ್ತದೆ.


ಅದು ಶನಿಯ "ಮುಖಾಂತರ" ಘಟಿಸುತ್ತದೆ ಅಷ್ಟೇ. ಮನುಷ್ಯ ತಾನು ಮಾಡಿದ ಕೆಟ್ಟ ಕರ್ಮ ದ ಫಲದ ಅನುಸಾರ, ಶನಿಯ "ಸ್ಥಾನ-ಕೆಟ್ಟದಾಗಿ " ಕಷ್ಟಗಳು ಬರುತ್ತವೆ,ಹಾಗೆಯೇ ಒಳ್ಳೆಯದೂ ಸಹ, ಶನಿಯ ಪ್ರಭಾವದಿಂದ ಬರುವ ಖಾಯಿಲೆಗಳೆಂದರೆ-ಕೊಳೆ ಯುವಿಕೆ,ರಕ್ತಸರಬರಾಜಿನಲ್ಲಿನ ಏರು-ಪೇರು,ಕ್ಷಯರೋಗ ,ಮುಂತಾದವು,ಮಾನಸಿಕವಾಗಿ, ಸಂಕುಚಿತಮನೋಭಾವ, ಕೆಳಮಟ್ಟದ ಚಿಂತನೆ,ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ, ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಕಾಲಾವಧಿಯು 30 ವರ್ಷಗಳು,ಅಂದರೆ ಎಲ್ಲಾ 12 ರಾಶಿ ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು ದಾಟಲು 30 ವರ್ಷದ ಅವಧಿ ಬೇಕಾಗುತ್ತದೆ. ಪ್ರತಿಯೊಂದು ರಾಶಿಯಲ್ಲಿ ಶನಿ ಭಗವಾನ್ ಎರಡೂವರೆ ವರ್ಷ{2,1/2} ಕಾಲವನ್ನು ಕಳೆಯುತ್ತಾನೆ, ಚಂದ್ರ ಚಿನ್ಹೆ ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಚಿನ್ಹೆಯ ಮುಖಾಂತರದ ಈ ಚಲನೆಯ ಶನಿಯ ಅವಧಿಯು ಮುಖ್ಯವಾದುದಾಗಿದೆ ಹಾಗು ಜಾತಕದ ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ.


ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿ /ಚಂದ್ರಚಿನ್ಹೆ ಯ ಹಿಂದಿನ ಮನೆಯರಾಶಿಯಪ್ರವೇಶ
ವಾದಾಗ, ಶನಿಯ ಪ್ರಭಾವವು ಪ್ರಾರಂಭವಾಗಿ , ಹುಟ್ಟಿದ ರಾಶಿ /ಚಂದ್ರಚಿನ್ಹೆ ಯ ಮುಂದಿನ ಮನೆ ಪ್ರವೇಶದೊಂದಿಗೆ ಶನಿಯ ಪ್ರಭಾವವು ನಿಲ್ಲುತ್ತದೆ, ಒಟ್ಟು ಅವಧಿಯ 7.5 ವರ್ಷ {2.5 ವರ್ಷ × 3}ವನ್ನು ಸಾಡೇ ಸಾತಿ ಅಥವಾ "ಏಳರಾಟ ಶನಿ" ಎಂದು,ಈ ಅವಧಿಯು ಅತ್ಯಂತ ತ್ರಾಸದಾಯಕ ವಾದುದಾಗಿದೆ, ಶನಿ ಮಹಾದೆಶೆಯು ಮನುಷ್ಯನಲ್ಲಿ ನಡೆಯುವಾಗ ಆತನ ಪ್ರಭಾವವು ಉನ್ನತ ಮಟ್ಟದಲ್ಲಿನಿಶ್ಚಿತವಾಗುತ್ತದೆ, ಹೇಳಿಕೆಯಂತೆ ಶನಿಯ ಪ್ರಭಾವದಿಂದ ರಾಜನೂ ಸಹ 'ಪಾಪರ್' ಆಗಿ ಬೀದಿಗೆ ಬೀಳುವ ಸಂದರ್ಭ ಆ ಸಮಯದಲ್ಲಿ ಬರಬಹುದು.

 

                                                                     another Picture

 
 

ಶನಿಯು ಮಕರ ಮತ್ತು ಕುಂಭ ರಾಶಿಯ ಅಧಿಪತಿ, ತುಲಾ ರಾಶಿಯಲ್ಲಿ ಸಬಲನಾದರೆ, ಮೇಷ ರಾಶಿಯಲ್ಲ ದುರ್ಬಲನಾಗಿರುತ್ತಾನೆ,ಬುಧ , ಶುಕ್ರ , ರಾಹು ,ಕೇತು ಗ್ರಹಗಳು ಶನಿಯೊಂದಿಗೆ ಸ್ನೇಹದಿಂದಿದ್ದರೆ, ಸೂರ್ಯ , ಚಂದ್ರ ಮತ್ತು ಗುರು ಗ್ರಹಗಳು ಸಮ ಶತ್ರು ಗ್ರಹಗಳಾಗಿವೆ,
ಗುರು ಅಥವಾ ಗುರುಗ್ರಹ ಶನಿಯೊಂದಿಗೆ ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ.

ಪುಷ್ಯ , ಅನುರಾಧ ಮತ್ತು ಉತ್ತರ - ಭಾದ್ರಪದ ನಕ್ಷತ್ರಗಳಿಗೆ ಒಡೆಯ ಶನಿ ಮಹಾರಾಜ.


ಶನಿ ಭಗವಾನನ ಬಣ್ಣ ಕಪ್ಪು ಅಥವಾ ದಟ್ಟ ನೀಲಿ; ಲೋಹ-ಕಬ್ಬಿಣ; ಹರಳು-ನೀಲಿ,
ಈತನ ಮೂಲವಸ್ತು ಅಥವಾ ತತ್ತ್ವಗಾಳಿ ;ದಿಕ್ಕು-ಪಶ್ಚಿಮ, {ಸೂರ್ಯ ಮುಳುಗುವ-ಕತ್ತಲು ಆರಂಭ ವಾಗುವ ದಿಕ್ಕು} ಹಾಗು ಎಲ್ಲಾ ಋತುಗಳನ್ನೂ ಆಳುತ್ತಾನೆ, ಶನಿಯ ಸಾಂಪ್ರದಾಯಿಕ ಆಹಾರಗಳು,ಕರಿ ಮೆಣಸು, ಕರಿ ಉದ್ದು. ಈತನ ಹೂವುನೇರಳೆ, ಎಲ್ಲಾ ಕರಿ ಬಣ್ಣದ ಪ್ರಾಣಿಗಳು ಹಾಗು ಉಪಯೋಗಕ್ಕೆ ಬಾರದ ಕುರೂಪಿ ಮರಗಳು ಶನಿಯ ಸಂಕೇತ, ಶನಿಯು ಗುಂಪುಗಳನ್ನು ಆಳುವವನಾಗಿದ್ದಾನೆ. ಒಬ್ಬರ ಜಾತಕದಲ್ಲಿಗ್ರಹಗಳಆಶೀರ್ವಾದವಿಲ್ಲದೆ , ಗುಂಪುಗಳನ್ನು ಪರಿಗಣಿಸುವುದು ಕಷ್ಟದಾಯಕ.


ಶನಿ ಗ್ರಹವು ಉಚ್ಚಸ್ಥಾನ {ಅಥವಾ ಲಗ್ನ } ದಲ್ಲಿದ್ದಾಗ ಜ್ಯೋತಿಷ್ಯದ ಜಾತಕ ಫಲದನ್ವಯ ನಾಯಕತ್ವದ ಗುಣ ಅವನದಾಗಿದ್ದು,ಹೆಸರು ಮತ್ತು ಅಧಿಕಾರವನ್ನು ಹೊಂದಿದವನಾಗುತ್ತಾನೆ,
ಜೊತೆಗೆ ಅಂತಹ ಜನರು ಹೆಚ್ಚಿನಶ್ರದ್ಧೆಯುಳ್ಳವರಾಗಿದ್ದು ,ಕೈಯಲ್ಲಿ ಹಿಡಿದ ಕೆಲಸವನ್ನು ಬಿಡದೆಮಾಡುವವರಾಗಿರುತ್ತಾರೆ,ಮತ್ತೊಂದು ಭಾಗದಲ್ಲಿ . ಅದೇ ಶನಿ ಗ್ರಹವು ನೀಚ ಸ್ಥಾನದಲ್ಲಿದ್ದಾಗ,ಒಬ್ಬ ವ್ಯಕ್ತಿಯ 'ಕರ್ಮ 'ದನ್ವಯ ದುರ್ಬಲನಾಗಿದ್ದು,ಕೆಲಸಗಳಲ್ಲಿ ಆಸಕ್ತಿಯಿಲ್ಲದೆ, ಕರ್ಮವನ್ನು ಹಳಿಯುತ್ತಾ,ನಿರಾಶಾ ದಾಯಕ ವಾಗಿಸೋಲನ್ನುಅನುಭವಿಸುತ್ತಾನೆ.

 

                                                           Shani s Stone -- Blue Sapphire


ಒಬ್ಬನ ಜಾತಕದಲ್ಲಿ ಶನೀಶ್ವರನ ಪ್ರಭಾವವಿಲ್ಲದಿದ್ದರೆ, ಆತನಿಗೆ ಮೋಕ್ಷ ದುರ್ಲಭ ವಾಗುತ್ತಾ ಹೋಗುತ್ತದೆ. ಶನೀಶ್ವರ ಮಹಾರಾಜನನ್ನು {ನ್ಯಾಯಾಧೀಶ}ಎಂದೂ ತಿಳಿಯಲಾಗಿದೆ. ವ್ಯಕ್ತಿಯು ಮಾಡಿರುವ ತಪ್ಪುಗಳನ್ನು ಮನಗಂಡು, ಅವನ ದೆಶೆಯಲ್ಲಿ ತೊಂದರೆ ನೀಡುತ್ತಾನೆ,
ಶನಿ ದೋಷದಲ್ಲಿ , ವ್ಯಕ್ತಿಯು ಸರಿಯಾಗಿದ್ದು, ಭಕ್ತನಾಗಿದ್ದರೆ ಈ ಕಷ್ಟ ಕಾಲದಲ್ಲಿಯೂ ಯಾವುದೇ ರೀತಿಯ ತೊಂದರೆಗಳಿಲ್ಲದೆ ಹೊರ ಬರುತ್ತಾನೆ, ಶನಿ ಮಹಾರಾಜನು ನೀಡುವ ಕಷ್ಟಗಳಿಗಿಂತ, ಆತನು ನೀಡುವ ಒಳ್ಳೆಯ ವರಗಳಿಗೆ ಹೆಚ್ಚುಹೆಸರು ವಾಸಿಯಾಗಿದ್ದಾನೆ.


ಆಶೀರ್ವಾದದ ದೃಷ್ಟಿಯಿಂದ ಶನಿ ಮಹಾರಾಜನಷ್ಟು ಬೇರೆ ಯಾವ ಗ್ರಹಗಳೂ ಹೋಲಿಕೆಗೆ ಸಿಗಲು ಸಾಧ್ಯವಿಲ್ಲ. .ಆತನು ತನ್ನ ದೆಶೆಯಕೊನೆಯಲ್ಲಿ ವರವನ್ನು ನೀಡುತ್ತಾನೆ,
ಈತನ ಆದಿ -ದೇವತೆಯು ಪ್ರಜಾಪತಿ ಮತ್ತು ಪ್ರತ್ಯಾದಿ - ದೇವತೆಯು ಯಮ . ಶನಿ ಮಹಾರಾಜನು ಒಬ್ಬ ವ್ಯಕ್ತಿಯ ಸಹನೆಯನ್ನು ಪರೀಕ್ಷಿಸುತ್ತಾನೆ. ನಮ್ಮಲ್ಲಿನ ಕೆಟ್ಟ ಗುಣಗಳು ಒಳ್ಳೆಯಗುಣಗಳಾಗಿ ಪರಿವರ್ತನೆಯಾಗಲು ಆಶಾಭಂಗವನ್ನು ಸೃಷ್ಟಿಸುತ್ತಾನೆ ಹಾಗು ಕಾರ್ಯವನ್ನು ತಡ ಮಾಡುತ್ತಾನೆ, ಕೊನೆಯಲ್ಲಿ ಒಬ್ಬ ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಅರಿಯಲು ಅನುವು ಮಾಡಿಕೊಡುತ್ತಾನೆ. ,ಶಿಕ್ಷೆಯನ್ನು ಕೊಡುವ ಮೂಲಕ ಮುಗ್ಧತೆಯನ್ನು ತೊಡೆದು ಹಾಕುತ್ತಾನೆ,
ಇದರಿಂದಾಗಿ ಆತ್ಮ ಪರಿಶುದ್ಧವಾಗಿ ,ವ್ಯಕ್ತಿಯು ಬದಲಾಗಿ ತಾಮ್ರ ಚಿನ್ನವಾಗಿ ಪರಿವರ್ತನೆ ಹೊಂದುತ್ತದೆ. ಅಂತರಂಗದಲ್ಲಿಅಂದರೆ ,ನಿಜವಾದ ಸತ್ಯವನ್ನು ಅರ್ಥ ಮಾಡಿಕೊಳ್ಳಲಾರಂಭಿಸುತ್ತಾನೆ.


ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳನ್ನು ಅರಿಯುತ್ತಾನೆ. ಶನಿಯ ಮಹಾದೆಶೆ ಮುಗಿಯುತ್ತಾ ಬಂದಂತೆ, ಮನುಷ್ಯ ತನ್ನ ಹಿಡಿತದಲ್ಲಿ ಯಾವುದೂ ಇಲ್ಲ ಎಂದು ತಿಳಿಯುತ್ತಾ ಬರುತ್ತಾನೆ,
ಎಲ್ಲವೂದೈವನಿಯಾಮಕವಾಗಿದ್ದು, ದೇವರು ನಿಜವಾದ ಸಾಧಕನಾಗಿದ್ದು, ಮಾನವ ಆತನ ದೂತರು ಮಾತ್ರ, ಸಂಖ್ಯಾ ಶಾಸ್ತ್ರದ ಪ್ರಕಾರ 7 ರ ಸಂಖ್ಯೆಯಂದು ಹುಟ್ಟಿದವರು ಶನಿಗೆ ಅಧೀನರಾಗುರುತ್ತಾರೆ,
ಯಾವುದೇ ತಿಂಗಳು, ದಿನಾಂಕ 7 ಮತ್ತು 27ರಂದು ಹುಟ್ಟಿದವರು ಕಷ್ಟಗಳನ್ನು ಜೀವನದಲ್ಲಿ ಎದುರಿಸ ಬೇಕಾದದ್ದು ಅನಿವಾರ್ಯ.


ಈ ಕಷ್ಟಗಳಿಗೆ ಒಂದು ಕಾರ್ಯ-ಕಾರಣ ಗುರಿಯಿದ್ದು, ಅವನ್ನು ಗುರುತಿಸುವುದು ಮುಖ್ಯವಾಗಿದ್ದು, ಜೀವನದಲ್ಲಿ ಅದರ ಕಾರಣವನ್ನು ಕಂಡುಕೊಳ್ಳ ಬೇಕಾಗುತ್ತದೆ,
ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ, ತಾನು ಮಾಡಿದ ತಪ್ಪುಗಳ ಜವಾಬ್ದಾರಿಯನ್ನು ಹೊರಲು ಸಿದ್ಧನಿರಬೇಕು, ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕು, ಕಷ್ಟ ಪಡಬೇಕು. ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.

 

                                         Lord Anjaneya & Lord Shani
 

  

ಶನಿಯನ್ನು ಸಂತೃಪ್ತಿ ಪಡಿಸುವ ಮಾರ್ಗಗಳು


ಪುರಾಣದ ಪ್ರಕಾರ , ಶನಿಯು " ಶಿವನ"ಆರಾಧಕ . "ಬ್ರಹ್ಮಾಂಡ ಪುರಾಣ " "ನವಗ್ರಹ ಪೀಡಾಹಾರ ಸ್ತೋತ್ರದ ಪ್ರಕಾರ,ಯಾರೇ ಆಗಲಿ ಈ ಕೆಳಕಂಡ ಸ್ತೋತ್ರವನ್ನು ಪಠಿಸಿದರೆ ಶನಿಯ ಎಲ್ಲಾ ರೀತಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದಾಗಿದೆ.


ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ ಮಂದಚಾರಃ ಪ್ರಸನ್ನಾತ್ಮ ಪೀಡಾಮ್ ಹರತು ಮೇ ಶನಿಃ


ವೇದಗಳ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ,ಶನಿಯ ಸ್ಥಳಾಂತರದಿಂದ ಆಗುವ ಕೆಟ್ಟ ಪರಿಣಾಮಗಳಿಂದ ಪಾರಾಗಲು ಈ ಕೆಳಕಂಡ ಉಪಾಯಗಳನ್ನು ಅನುಸರಿಸಿ.


ಶನಿಗ್ರಹದ ಚಲನೆ , ಶನಿ -ಕಾಂತ,ಶನಿ ಶನಿಯು 7 ಮನೆಯಲ್ಲಿ ಚಲಿಸುವಾಗ ಚಂದ್ರನ ದೃಷ್ಟಿಯಿಂದ ಸಾಡೇ - ಸತೀ ಶನಿ ಗ್ರಹವು ಹನ್ನೆರಡನೆ ,ಮೊದಲ,ಹಾಗು ಎರಡನೇ ಮನೆ , ಚಂದ್ರ ನಿಂದ ದೃಷ್ಟಿಯಿಂದ} ತಾಯಿಕಾಳಿಯನ್ನುಅಮಾವಾಸ್ಯೆಯಂದು ಪೂಜಿಸಿದರೆ ಶ್ರೇಷ್ಠ, ವಿಶ್ವದ ಆಕಾರದಲ್ಲಿ ಶ್ರೀ ಹನುಮಾನನನ್ನು ಅಂದರೆl ಶನಿ ಮಹಾತ್ಮನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡ ಸಂದರ್ಭದಲ್ಲಿದ್ದಂತೆ ಹಾಗು ಆತನಿಂದ ವರವನ್ನು ಪಡೆದ ಸಂದರ್ಭದಲ್ಲಿನ ಹನುಮನ ಪ್ರಾರ್ಥನೆ ಮಾಡಿ ಸೂರ್ಯನಿಂದ ಪಡೆದ ಸಲಹೆ ಹಾಗು ಆಶೀರ್ವಾದ ಪಡೆದ ಸಂದರ್ಭ,
ಶನಿ ದೇವರ ಆಶೀರ್ವಾದವನ್ನು ಪಡೆಯಲು ಬಳಸುವ ಒಂದು ಸಾಮಾನ್ಯ ಮಂತ್ರ:

 


                                                                 Lord Shani

 

ಓಂ ಶಂ ಶನೈಸ್ಕಾರ್ಯಯೇ ನಮಃ .


ಶನಿಯನ್ನು ಸಂತೃಪ್ತನಾಗಿಸಲು ಇನ್ನೊಂದು ಮಂತ್ರ:



ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ|


ಓಂ ಐಂಗ್‌ ಹ್ರಿಂಗ್‌ ಶ್ರೀಂಗ್‌ ಶಂಗ್‌ ಶನೈಶ್ಚರಾಯ ನಮಃ ಓಂ ಓಂ 

 

                                           Lord Shani & Lord Anjaneya

 

 

ಶನಿ ದೇವರ ಮಂತ್ರ


ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ, ಛಾಯಾ -ಮಾರ್ತಂಡಂ -

 ಸಂಭೂತಂ , ತಮ್ ನಮಾಮಿ ಶನೈಶ್ಚರಂ


ಓಂ ಭಗಭವಾಯ ವಿದ್ಮಹೈಂ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್|

ಓಂ ಶನ್ನೋದೇವೀರ್ಭೀಷ್ಟಯ ಆಪೋ ಭವಂತು ಪೀತಯೇ ಶಂಯೋರ್ಭಿಶ್ರವಂತು ನಃ|''

 

                                                                 Tirunallaliru
 


ಇನ್ನೂ ಕೆಲವು ಭಕ್ತರು "ಓಂ ಶಂ ಶನೈಶ್ಚರಾಯ ನಮಃ" ಎಂದು ಪ್ರತಿದಿನ 108 ಸಲ ಪಠಿಸುತ್ತಾರೆ. ಹಾಗೆಯೇ ನವಗ್ರಹಗಳ ಮಂತ್ರವನ್ನುಳ್ಳ ಪುಸ್ತಕಗಳನ್ನು ಶ್ರದ್ಧೆಯಿಂದ ಓದಿ ಅಭ್ಯಸಿಸುತ್ತಾರೆ, ನಂತರ ಶನಿ ಶ್ಲೋಕವನ್ನು ನವಗ್ರಹ ಶ್ಲೋಕದಿಂದ ಪ್ರಾರಂಭಿಸಿ ಕೊನೆಯಲ್ಲಿ ಶಂ ಶನೀಶ್ವರಾಯ ನಮಃ, ಎಂದು ಪ್ರಾರ್ಥಿಸಿ, ತಿಲಾಭಿಷೇಕಂ ಅನ್ನು ಶನಿ ತ್ರಯೋದಶಿಯಂದು, ಶನಿ ಜಯಂತಿಯಂದು {ಪುಷ್ಯ ಮಾಸ ಬಹುಳ ಅಷ್ಟಮಿ} ಮತ್ತು ಶನಿ- ಅಮಾವಾಸ್ಯೆ ದಿನಗಳಂದು ಮಾಡಿಸಿದರೆ ಉತ್ತಮ ,
ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡಿ {1 KG 900 grams ನಷ್ಟು } ಕಪ್ಪು ಹಸುವಿಗೆ {ಗೋವು}ಕರಿ ಎಳ್ಳು ,ಬೆಲ್ಲದ ಮಿಶ್ರಣವನ್ನು ತಿನ್ನಿಸಿ, ಶನಿವಾರದಂದು ಉಪವಾಸ ಮಾಡುವವರು ಅಂದಿನ ದಿನ {ದ್ರವಾಹಾರ}ಬೆಳಗ್ಗೆ 6:00 ರಿಂದ ಸಂಜೆ 6:00 ರವರೆಗೆ ಮಾತ್ರ ಸೇವನೆ ಮಾಡಬೇಕು,
ಕಾಗೆಗಳಿಗೆ ಆಹಾರ ಬೆಳಗಿನ ಹೊತ್ತು ಕೊಡುವುದು, ದೈಹಿಕ ಅಂಗವಿಕಲರಿಗೆ ಆಹಾರ ಕೊಡುವದು,
ನವಗ್ರಹ ಪ್ರದಕ್ಷಿಣೆ {19 ಬಾರಿ} ಹಾಕುವದು.


ನಮ್ಮಭಾರತದಲ್ಲಿರುವ ಹೆಸರಾಂತ ಶನಿ ದೇವರ ದೇವಸ್ಥಾನಗಳ ಭೇಟಿ (ವರ್ಷಕ್ಕೆ ಒಂದು ಸಾರಿ ಭೇಟಿ ಕೊಡುವುದು ಶ್ರೇಯಸ್ಕರ -- ಮಂದಪಲ್ಲಿ ,ಶನಿಸಿಂಗನಪುರ {ಮಹಾರಾಷ್ಟ್ರ}, ತಿರುನಳ್ಳಾರ್
{ ತಮಿಳುನಾಡು }, ನರ್ಸಿನ್ ಗೋಲೆ , ವೆಂಕಥಳ ಮತ್ತು ವೀರಣ್ಣ ಪಲೇಮ್ -- ಪರ್ಚುರ್ ಮಂಡಲಂ, ಪ್ರಕಾಶಂ ಜಿಲ್ಲೆ ಆಂಧ್ರ ಪ್ರದೇಶ.

 

 

ಪ್ರತಿದಿನ ಮನೆಯ ಮುಖ್ಯದ್ವಾರದ ಮುಂದೆ , ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದರಿಂದ, ದಶರಥ ಮಹಾರಾಜನಿಂದ ರಚಿಸಲ್ಪಟ್ಟ ಶನಿ ಸ್ತೋತ್ರದ ಪಠಣ, ಮಾಡುವುದರಿಂದ, ಜ್ಯೇಷ್ಥಾದೇವಿ , ಶನೀಶ್ವರ ಸ್ವಾಮಿಯವರ ಮದುವೆ {ಶ್ರಾವಣ ಪೂರ್ಣಿಮ ದಿನ}
ಶನಿ ಜಪಂ,19000 ಮೂಲಮಂತ್ರದ ಜೊತೆಗೆ , ಪುನರ್ ಚರಣ , ಹವನಂ , ದಾನಂ .ಶನಿಚಾರ ವ್ರಥಂ ,ಹೋಮ ಪ್ರತಿ ಶನಿವಾರ ಶ್ರಾವಣ ಮಾಸದಲ್ಲಿ, ,ಶನೈಚರ ಧೀಕ್ಷ :ಶ್ರಾವಣ ಶುದ್ಧ ವಿದಿಯಿಂದ ಶ್ರಾವಣ ಬಹುಳ ಷಷ್ಠಿಯವರೆಗೆ, , "ರಾಮ ನಾಮ" ಹನುಮಾನ್ ಚಾಲೀಸ- ದುರ್ಗಾ ಸ್ತುತಿಯ ಪಠಣ, ಮಾಡುವುದರಿಂದ, ,ಹನುಮಾನ್ - ಶ್ರೀ ದುರ್ಗಾ ದೇವಿ - ವಿನಾಯಕನಿಗೆ ಪ್ರಾರ್ಥನೆ, ಮಾಡುವುದರಿಂದ, ,ಮೊಸರನ್ನ ,ಅದರಲ್ಲಿ ಸ್ವಲ್ಪ ಮೆಣಸು ಬೆರೆಸಿ ದೇವರಿಗೆ ಅರ್ಪಿಸಿ ನಂತರ ಕಾಗೆಗೆ ಉಣ ಬಡಿಸುವುದುದರಿಂದ ನಮ್ಮ ಕಷ್ಟಗಳು ಬಗೆಹರಿಯುತ್ತವೆ.

------------------- Hari Om ---------------



 


 



 



 


 

 

Tuesday, June 9, 2026

‌ಶನೈಶ್ಚರ ---- Shaneswara

 

                                                                          Lord Shani

 

ಶನೈಶ್ಚರ ---- Shaneswara


‌ ‌ ‌ ‌ ‌ ‌

ಶನೈಶ್ಚರ ಸ್ವಾಮಿಯ ಅನುಗ್ರಹಕ್ಕೆ 10 ಸರಳ ಮಾರ್ಗಗಳು…


10 simple ways to seek the blessings of Lord Shani.


ನವಗ್ರಹಗಳ ಪೈಕಿ ಶನೈಶ್ಚರ ಎಂದರೆ ಜನ ಸಾಮಾನ್ಯರಲ್ಲಿ ಅತಂಕ ಶುರುವಾಗುತ್ತದೆ ಮತ್ತು ಶನಿ ಅಂದರೆ ತೊಂದರೆ ಅಂತಲೂ ಭಾವಿಸುವವರಿದ್ದಾರೆ. ಆದರೆ ಈ ಭಾವನೆ ಪೂರ್ಣ ಸತ್ಯವಲ್ಲ. ಶನಿ ಮಹರ್ದಶೆ ಹಾಗೂ ಗೋಚಾರದಲ್ಲಿ ಉತ್ತಮ ಸ್ಥಿತಿಯಲ್ಲಿರುವಾಗ ಸಕಲ ಸಂಪತ್ತು, ಆಯುಷ್ಯ ಹಾಗೂ ಆರೋಗ್ಯ ದಯಪಾಲಿಸುತ್ತಾನೆ ಶನೈಶ್ಚರ ಸ್ವಾಮಿ.

ಇನ್ನೊಂದು ವಿಚಾರ ನೆನಪಿಟ್ಟುಕೊಳ್ಳಿ, ಧರ್ಮದ ಹಾದಿ ಬಿಟ್ಟು ನಡೆದರೆ ಶನಿಯ ದುಷ್ಪ್ರಭಾವವನ್ನು ಅನುಭವಿಸಬೇಕಾಗುತ್ತದೆ. ಇನ್ನೊಬ್ಬರಿಗೆ ಕೇಡು ಬಗೆಯುವ ಆಲೋಚನೆ ಕೂಡ ಮಾಡಬೇಡಿ. ನಮ್ಮ ರಾಶಿಗೆ ಶನಿಯು ಯಾವ ರೀತಿ ಪ್ರಭಾವ ಬೀರುತ್ತಿದ್ದಾನೆ ಅನ್ನೋದನ್ನು ತಿಳಿದುಕೊಳ್ಳಿ. ಅದು ಹೇಗೆ ಅಂತೀರಾ?


ಇದನ್ನು ಓದಿದರೆ ಶನಿಯು ನಿಮ್ಮ ರಾಶಿಗೆ ಯಾವ ರೀತಿಯ ಫಲ ನೀಡಲಿದ್ದಾನೆ ಎಂದು ತಿಳಿಯುತ್ತದೆ. ಅಗ ಆತನ ಪ್ರಭಾವ ಒಳ್ಳೆ ರೀತಿಯಲ್ಲಿ ಆಗಲು, ತೀಕ್ಷ್ಣತೆ ಕಡಿಮೆ ಆಗುವುದಕ್ಕೆ ಈ ಲೇಖನದಲ್ಲಿ ಅತ್ಯುತ್ತಮ ಸಲಹೆಗಳನ್ನು ಕೊಡಲಾಗಿದೆ.
‌ ‌ ‌ ಸಾಡೇಸಾತ್, ಪಂಚಮ, ಚತುರ್ಥ ಹಾಗೂ ಅಷ್ಟಮ ಸ್ಥಾನಗಳಲ್ಲಿ ಈಗ ಶನಿ ಸಂಚಾರ ಆಗುತ್ತಿರುವ ರಾಶಿಗಳವರು ಮಾಡಿಕೊಳ್ಳಬೇಕಾದ ಶನಿಯ ಶಾಂತಿ ಕ್ರಮಗಳನ್ನು ಅನುಸರಿಸಿ. ನಿಮ್ಮ ಬದುಕು ಬಂಗಾರವಾಗಲಿ..

 

                                                              Vade Male to Lord Anjaneya

 

1) ಆಂಜನೇಯನಿಗೆ ಉದ್ದಿನವಡೆ ಹಾರ


ನಿಮ್ಮ ಮನೆಯ ಬಳಿಯೋ ಅಥವಾ ಮನೆ ದೇವರ ಗುಡಿಯಲ್ಲಿ ಆಂಜನೇಯ ಮೂರ್ತಿಯಿದ್ದರೆ ಶನಿವಾರದಂದು ದೇಗುಲದಲ್ಲಿ ಸ್ವಾಮಿಗೆ ಉದ್ದಿನವಡೆ ಹಾರ ಮಾಡಿಸಿ ಹಾಕಿ ಹಾಗೂ ಎಳ್ಳುಬೆಲ್ಲದ ನೈವೇದ್ಯ ಮಾಡಿಸಿ.

2) ಶನೈಶ್ಚರ ವ್ರತ ಮಾಡಿಸಬಹುದು


ಎಷ್ಟೋ ಜನರಿಗೆ ತಿಳಿದಿಲ್ಲ. ಸತ್ಯನಾರಾಯಣ ಪೂಜೆ ವಿಧಾನದಲ್ಲಿಯೇ ಶನೈಶ್ಚರ ವ್ರತ ಎಂದು ಸಹ ಇದೆ. ಈ ವ್ರತವನ್ನು ಶನಿವಾರದಂದು, ಜನ್ಮ ನಕ್ಷತ್ರ ಬಂದಾಗ ಅಥವಾ ಶನಿವಾರದಂದೇ ಮಾಡಿಸಿದರೆ ಉತ್ತಮ. ಶೀಘ್ರವಾಗಿ ಶನಿ ಕಾಟದಿಂದ ಪರಿಹಾರ ಪಡೆಯ ಬಹುದು.

3) ರುದ್ರ ಹವನ ಮಾಡಿಸಿ


ಪೂರ್ವಾರ್ಜಿತ ಕರ್ಮ ಫಲ ಅಂದರೆ ಹಿಂದಿನ ಜನುಮದ ಪಾಪ ಶೇಷ ಹೆಚ್ಚಿದ್ದರೆ ಈ ಜನುಮದಲ್ಲಿ ಶನಿ ಕಾಟ ಹೆಚ್ಚು ಇರುತ್ತದೆ. ಆದುದರಿಂದ ಹಿಂದಿನ ಜನುಮದ ಪಾಪ ಪರಿಹಾರಕ್ಕಾಗಿ ಕರಿ ಎಳ್ಳು ಹಾಗೂ ಭತ್ತಕ್ಕೆ ಶುದ್ಧ ಹಸುವಿನ ತುಪ್ಪ ಬೆರೆಸಿ, ರುದ್ರ ಹವನ ಮಾಡಿಸಿ

4) ದತ್ತಾತ್ರೇಯ ವಜ್ರಕವಚ ಸ್ತೋತ್ರ ಪಠಣ


ಪ್ರತಿ ದಿನ ತಪ್ಪದೇ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಣ ಮಾಡಿದರೆ ಶನಿ ಕಾಟದಿಂದ ರಕ್ಷಣೆ ದೊರೆಯುತ್ತದೆ.

5) ಕರಿ ಎಳ್ಳು ದಾನ


ಬ್ರಾಹ್ಮಣ ಪುರೋಹಿತ ಅಥವಾ ಅರ್ಚಕರಿಗೆ ಶನಿವಾರದಂದು ಕಬ್ಬಿಣದ ಬಾಂಡಲಿಯಲ್ಲಿ ಪರಿಶುದ್ಧವಾದ ಹಾಗೂ ಅಡುಗೆ ಮಾಡಲು ಉಪಯುಕ್ತವಾದ ಎಳ್ಳಎಣ್ಣೆ ದಕ್ಷಿಣೆ ಸಹಿತ ದಾನ ಮಾಡಿ. ನೀವು ಕೊಡುವ ಈ ದಾನ ತನಗೆ ನಿತ್ಯ ಬಳಸಲು ಬರದ ಕಾರಣ ಒಂದು ಪಕ್ಷ ದಾನ ತೆಗೆದುಕೊಳ್ಳಲು ಅವರು ನಿರಾಕರಿಸಿದರೆ ಹೊಸದಾದ ಸ್ಟೇನ್ ಲೆಸ್ ಸ್ಟೀಲ್ ತಟ್ಟೆಯಲ್ಲಿ ಸ್ವಲ್ಪ ಕರಿ ಎಳ್ಳು ಇಟ್ಟು ದಕ್ಷಿಣೆ ಸಹಿತ ದಾನ ಮಾಡಿ.

6) ಹತ್ತಿಯ ಬತ್ತಿಯಲ್ಲಿ ದೀಪ ಹಚ್ಚಿ


ನಿಮ್ಮ ಮನೆಯ ಹತ್ತಿರದ ನವಗ್ರಹ ದೇಗುಲದಲ್ಲಿ ಅಥವಾ ಅದೇ ದೇಗುಲದ ಆವರಣದ ದೊಡ್ಡ ಮರದ ಬುಡದಲ್ಲಿ ಹೆಚ್ಚು ಗಾಳಿ ಆಡದ ವ್ಯವಸ್ಥೇ ಮಾಡಿ, ಅಲ್ಲಿ ಕಬ್ಬಿಣದ ಬಾಂಡಲಿ ನಲ್ಲಿ ಪರಿಶುದ್ಧ (ಅಡುಗೆಗೆ ಬಳಸುವ ಗುಣಮಟ್ಟದ್ದು) ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿ, ಹತ್ತಿಯ ಬತ್ತಿ ಹಾಕಿ ದೀಪ ಹಚ್ಚಿ.

7) ಶನಿದೇವರಿಗೆ ತೈಲಾಭಿಷೇಕ


ಇನ್ನು ಶನಿವಾರಗಳಂದು ಶನಿ ದೇಗುಲದಲ್ಲಿ ಸ್ವಾಮಿಗೆ ಪರಿಶುದ್ಧ ಎಳ್ಳು ಎಣ್ಣೆಯಲ್ಲಿ ತೈಲಾಭಿಷೇಕ ಮಾಡಿಸಿ. ಆ ಸಮಯದಲ್ಲಿ ನೀವು ಖುದ್ದಾಗಿ ಇದ್ದು, ಕುಟುಂಬ-ಪರಿವಾರದವರ ಸಂಕಲ್ಪ ಮಾಡಿಸಿದರೆ ಒಳ್ಳೆಯದು.

8) ಶನೈಶ್ಚರ ಅಷ್ಟೋತ್ತರ ಪಠಿಸಿ


ಸ್ನಾನ ನಂತರ ಮನೆಯಲ್ಲಿಯೋ ಅಥವಾ ಪ್ರಶಾಂತ ಎನಿಸುವಂಥ ಸ್ಥಳದಲ್ಲಿ ಕೂತು ಪ್ರತಿ ದಿನ ಶನೈಶ್ಚರ ಅಷ್ಟೋತ್ತರ ಪಠಿಸಿ. ನೆನಪಿಡಿ, ಸ್ಥಳದ ಆಯ್ಕೆ ಬಹಳ ಮುಖ್ಯ. ಮನಸ್ಸಿನ ಉದ್ದೇಶ ಕದಡುವಂಥ ಕಡೆ ಬೇಡ.

9) ದಶರಥ ಕೃತ ಶನಿ ಸ್ತೋತ್ರ


ಮತ್ತೊಂದು ಸ್ತೋತ್ರ ಪಠಣ ಇದೆ. ಈ ಸ್ತೋತ್ರ ರಚನೆ ಮಾಡಿರುವುದು ದಶರಥ. ಆ ಕಾರಣದಿಂದ ಅದನ್ನು ದಶರಥ ಕೃತ ಶನಿ ಸ್ತೋತ್ರ ಎಂದು ಕರೆಯುತ್ತಾರೆ. ಅದನ್ನು ಪ್ರತಿದಿನ ಪಠಿಸಿ

10) ಶನೈಶ್ಚರ ಶಾಂತಿ ಹವನ


19000 ಸಂಖ್ಯೆಯಲ್ಲಿ ಶನಿ ಮಂತ್ರದ ಜಪ ಮಾಡಿಸಿ, ಅದರ ದಶಾಂಶ ಅಂದರೆ ಹತ್ತನೇ ಒಂದು ಭಾಗದಷ್ಟು ಸಂಖ್ಯೆಯಲ್ಲಿ ಕೃಸರಾನ್ನ ಹಾಗೂ ಶಮಿ ಸಮಿಧ, ಆಜ್ಯ ಈ ದ್ರವ್ಯಗಳಲ್ಲಿ ಶನಿ ಶಾಂತಿ ಹವನ, ನಂತರ ಅದೇ ದಶಾಂಶ ವಿಧಾನದಲ್ಲಿ ತರ್ಪಣ ಪರೋಕ್ಷಣ ಹಾಗೂ ಪ್ರಾಶನ ಮಾಡಿದರೆ ಅತ್ಯಂತ ಶೀಘ್ರ ಹಾಗೂ ಅತ್ಯತ್ತಮ ನಿರೀಕ್ಷಿತ ಫಲಗಳನ್ನು ಕೊಡುತ್ತವೆ.


ಶ್ರೀಕೃಷ್ಣಾರ್ಪಣಮಸ್ತು


----------------- Hari Om -----------------


 

 

Saturday, June 6, 2026

ಆದಿತ್ಯ ‌ಹೃದಯ ಸ್ತೋತ್ರಮ್ - ‌Aditya Hridaya Stotram

 

                                                                           Lord Surya

 

ಆದಿತ್ಯ ‌ಹೃದಯ ಸ್ತೋತ್ರಮ್ - ‌Aditya Hridaya 

Stotram


 

ಆದಿತ್ಯ ಹೃದಯ ಸ್ತೋತ್ರವನ್ನು ಏಕೆ ಪಠಿಸಬೇಕು..? 

ಇದರ ಪ್ರಯೋಜನವೇನು..?


Why should one recite Aditya Hridaya Stotram
and What are its benefits ?



ಆದಿತ್ಯ ಹೃದಯ ಸ್ತೋತ್ರವನ್ನು ಜಪಿಸುವುದು ಎಷ್ಟು ಪರಿಣಾಮಕಾರಿ..? ಜನರು ದಿನಕ್ಕೆ ಒಮ್ಮೆಯಾದರೂ ಇದನ್ನು ಏಕೆ ಪಠಿಸಬೇಕು..? ಇದಲ್ಲದೆ, ಭಾನುವಾರದಂದು ಇದನ್ನು ಏಕೆ ವಿಶೇಷವಾಗಿ ಜಪಿಸಬೇಕು..?

ಹಿಂದೂ ಸಂಪ್ರದಾಯದ ಪ್ರಕಾರ ಭೂಮಿ, ಬೆಂಕಿ, ಗಾಳಿ ಮತ್ತು ಇತರ ನೈಸರ್ಗಿಕ ಶಕ್ತಿಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಸೂರ್ಯನೂ ಕೂಡ ಒಬ್ಬ. ಸೂರ್ಯನು ಅದಿತಿಯ ಮಗನಾದ ಕಾರಣ ಆತನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಸೂರ್ಯನು ಭೂಮಿಯ ಮೇಲಿನ ಜೀವಗಳ ಆತ್ಮದಂತೆ ಎಂದು ಹೇಳಲಾಗಿದೆ. ಆದಿತ್ಯ ಹೃದಯ ಸ್ತೋತ್ರವು ಸಾರ್ವಕಾಲಿಕ ಅತ್ಯಂತ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಇದು ಸೂರ್ಯ ದೇವನಿಗೆ ಸಮರ್ಪಿತವಾಗಿದೆ ಮತ್ತು ಜ್ಯೋತಿಷ್ಯದ ಪ್ರಕಾರ ಸೂರ್ಯ ಬಲ ಇಲ್ಲದ ರಾಶಿಯವರಿಗೆ ಈ ಸ್ತೋತ್ರ ಹೆಚ್ಚು ಪರಿಣಾಮಕಾರಿ.

ಪುರಾಣದಲ್ಲೂ ಕೂಡ ಆದಿತ್ಯ ಹೃದಯ ಸ್ತೋತ್ರದ ಬಗ್ಗೆ ಉಲ್ಲೇಖಿಸಲಾಗಿದೆ ಎಂದರೆ ನೀವು ಆಶ್ಚರ್ಯಚಕಿತಾರಾಗಬಹುದು..? ಕೆಲವು ಉತ್ತರಗಳನ್ನು ಪುರಾಣಗಳಲ್ಲಿ ಉತ್ತಮವಾಗಿ ಹೇಳಲಾಗಿದೆ. ಇದು ಪೌರಾಣಿಕದ ರಾಮಾಯಣ ಕಾಲದ ಬಗ್ಗೆ, ಹೆಚ್ಚು ನಿರ್ದಿಷ್ಟವಾಗಿ ರಾಮ ಮತ್ತು ರಾವಣನ ನಡುವಿನ ಅಂತಿಮ ಯುದ್ಧದ ಸಮಯದ ಬಗ್ಗೆ ತಿಳಿಸುತ್ತದೆ.



                                                                Surya Bhagavan

  

ರಾಮನಿಂದ ಆದಿತ್ಯ ಹೃದಯ ಪಠಣೆ

ಮೊದಲ ಹಂತದ ಯುದ್ಧದಲ್ಲಿ ರಾವಣನನ್ನು ಸೋಲಿಸುವ ಶ್ರೀ ರಾಮನ ಪ್ರಯತ್ನ ವಿಫಲವಾಗುತ್ತದೆ. ತನ್ನ ಶತ್ರುವಾದ ರಾವಣನನ್ನು ಸೋಲಿಸುವ ಪ್ರಯತ್ನ ವ್ಯರ್ಥವಾಯಿತಲ್ಲ ಎಂಬ ಕೊರಗು ಶ್ರೀ ರಾಮನನ್ನು ಕಾಡುತ್ತದೆ. ಒಂದು ಹಂತದಲ್ಲಿ ಶ್ರೀ ರಾಮನಿಗೆ ಉಳಿದಿದ್ದು ನಿರಾಶೆ ಮತ್ತು ಆಯಾಸ ಮಾತ್ರ. ಈ ಸಮಯದಲ್ಲಿ ನೊಂದ ರಾಮನು ದೀರ್ಘ ತಪ್ಪಸ್ಸು ಮಾಡುತ್ತಾನೆ. ಇದನ್ನು ಕಂಡ ಅಗಸ್ತ್ಯರು, ರಾಮನನ್ನು ಉತೇಜಿಸುತ್ತಾರೆ. ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುತ್ತಾ ಸೂರ್ಯನಿಗೆ ತನ್ನ ಪ್ರಾರ್ಥನೆ ಸಲ್ಲಿಸುವಂತೆ ಅಗಸ್ತ್ಯ ಮಹಾ ಋಷಿಗಳು ಹೇಳಿಕೊಡುತ್ತಾರೆ. ರಾಮನು ಅಗಸ್ತ್ಯ ಮಹಾ ಋಷಿಗಳು ಹೇಳಿದ್ದಂತೆಯೇ ಶ್ರೀ ರಾಮನು ಮಾಡುತ್ತಾನೆ. ಇದನ್ನು ಮಾಡುತ್ತಿದ್ದಂತೆ ರಾಮನು ಅತ್ಯಂತ ಶಕ್ತಿದಾಯದ ಮತ್ತು ನಿರ್ಣಾಯಕ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಆದಿತ್ಯ ಹೃದಯ ಸ್ತೋತ್ರ ಪಠಣದಿಂದ ನೀವು ಅಂದುಕೊಂಡ ಕೆಲಸ ಕಾರ್ಯ ಪೂರ್ಣಗೊಳಿಸಿಕೊಳ್ಳಬಹುದು. ಅದಕ್ಕಾಗಿಯೇ ಶ್ರೀ ರಾಮನೂ ಕೂಡ ಯುದ್ಧಕ್ಕೆ ಮುನ್ನ ಸ್ತೋತ್ರವನ್ನು ಪಠಿಸುತ್ತಾನೆ.

ನಿರ್ದಿಷ್ಟವಾಗಿ ಭಾನುವಾರವೇ ಏಕೆ ಪಠಿಸಬೇಕು.?

ಜ್ಯೋತಿಷ್ಯದ ಪ್ರಕಾರ, ವಾರದ ಪ್ರತಿ ದಿನವೂ ಒಂದು ದೇವರು ಅಥವಾ ಒಂದು ಗ್ರಹಕ್ಕೆ ಅರ್ಪಿತವಾಗಿರುತ್ತದೆ. ಶನಿವಾರದಂದು ಶನಿ ದೇವನಿಗಾಗಿ ಮತ್ತು ಮಂಗಳವಾರ ಹನುಮಂತನಿಗೆ. ಹಾಗೆಯೇ, ಭಾನುವಾರ ಭಗವಾನ್ ಸೂರ್ಯನಿಗೆ ಅರ್ಪಿಸಲಾಗಿದೆ. ಭಾನುವಾರ ಸೂರ್ಯನಿಗೆ ಅರ್ಪಿಸಲಾಗಿರುವುದರಿಂದ ಅವನನ್ನು ಕುರಿತು ಪ್ರಾರ್ಥಿಸಲು ಅದಕ್ಕಿಂತ ಬೇರೆ ಶುಭ ದಿನ ಉಂಟೆ...? ನೀವು ಪ್ರತಿನಿತ್ಯ ನಿಮ್ಮದೇ ಕೆಲಸದಲ್ಲಿ ಮಗ್ನರಾಗಿರುತ್ತೀರಿ. ಬೆಳಗ್ಗೆ ಎದ್ದರೆ ಕಚೇರಿಯ ಒತ್ತಡ ಮೊದಲಾದ ಕಾರ್ಯಗಳ ಬಗ್ಗೆ ನಿಮಗೆ ಗಮನ ಇರುತ್ತದೆ. ಭಾನುವಾರ ನೀವು ಬಿಡುವಾಗಿರುವ ಕಾರಣ ಆ ದಿನ ನೀವು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬಹುದಾಗಿದೆ.



                                                                              Pic-1

 

ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದಾಗುವ 

ಪ್ರಯೋಜನಗಳು

 

ನಮಗೆ ಏನಾದರೂ ಪ್ರಯೋಜನವಾಗುವವರೆಗೆ ನಾವು ಎಂದಿಗೂ ಯಾವುದರ ಬಗ್ಗೆಯೂ ಆಸಕ್ತಿ ವಹಿಸುವುದಿಲ್ಲ. ಆದಿತ್ಯ ಹೃದಯ ಸ್ತೋತ್ರವು ಅಸಂಖ್ಯಾತ ವಿಶ್ವಾಸಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಅಂತಹ ಪ್ರಯೋಜನಗಳು ಇಲ್ಲಿವೆ.

- ಭಗವಾನ್ ಸೂರ್ಯನ ಆಶೀರ್ವಾದದಿಂದ ನಿಮ್ಮ ಕಾರ್ಯಗಳು ಮತ್ತು ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಸ್ತೋತ್ರವು ನಿಮಗೆ ಸಹಾಯ ಮಾಡುತ್ತದೆ.

- ಇದು ನಿಮ್ಮಲ್ಲಿನ ಆತಂಕಗಳನ್ನು ತೆಗೆದುಹಾಕುತ್ತದೆ.

- ಇದು ನಿಮ್ಮ ಜೀವನದ ಹಾದಿಗೆ ಧೈರ್ಯವನ್ನು ತರುತ್ತದೆ.

- ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ಕಷ್ಟದ ದಿನಗಳಲ್ಲಿ ನಿಮ್ಮನ್ನು ಉನ್ನತೀಕರಿಸಲಾಗುತ್ತದೆ ಮತ್ತು ಆಳವಾದ ಅತೃಪ್ತಿಯಿಂದ ನಿಮ್ಮನ್ನು ಉಳಿಸುತ್ತದೆ.

- ನಿಮ್ಮ ಪಾಪಗಳನ್ನು ನಾಶಮಾಡುವುದರ ಜೊತೆಗೆ ಅದು ನಿಮ್ಮನ್ನು ಸ್ವಯಂ ಅನುಮಾನಗಳಿಂದ ದೂರ ಮಾಡುತ್ತದೆ.

- ಆದಿತ್ಯ ಹೃದಯ ಸ್ತೋತ್ರವು ಜೀವನದಲ್ಲಿ ಸಮೃದ್ಧಿ ಮತ್ತು ಸ್ಪಷ್ಟತೆಯನ್ನು ತರುತ್ತದೆ.

- ಸ್ತೋತ್ರವು ನಿಮ್ಮನ್ನು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ.

- ಈ ಸ್ತೋತ್ರವು ನಿಮ್ಮನ್ನು ರೋಗ ಮುಕ್ತವಾಗಿರಿಸುತ್ತದೆ ಮತ್ತು ಅನೇಕ ಗಂಭೀರ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.


ಆದಿತ್ಯ ಹೃದಯ ಸ್ತೋತ್ರ ಪಠಿಸುವ ವಿಧಾನ

 

ಪ್ರಾರಂಭದಲ್ಲಿ ಇದು ಸ್ವಲ್ಪ ಕಷ್ಟ ಆಗಬಹುದು. ಆದರೆ ಒಮ್ಮೆ ನೀವು ನಿರಂತರವಾಗಿ ಅಭ್ಯಾಸ ಮಾಡಿದರೆ ಅದರ ಸೆಳವನ್ನು ಎಂದಾದರೂ ಅನುಭವಿಸಬಹುದು. ಭಗವಾನ್ ಸೂರ್ಯನಿಗೆ ನಿಮ್ಮ ಕೃತಜ್ಞತೆಯನ್ನು ಅರ್ಪಿಸಿ. ಕೇಳುವಾಗ ನಿಮ್ಮ ಸ್ವಾರ್ಥವನ್ನು ಪಕ್ಕಕ್ಕಿಡಿ. ಪ್ರಪಂಚದ ಒಳಿತಿಗಾಗಿ ಸ್ವಲ್ಪ ಪ್ರಾರ್ಥಿಸಿ. ಪ್ರತಿ ದಿನ ನಿಮ್ಮ ದಿನದ ಹತ್ತು ನಿಮಿಷಗಳನ್ನು ಭಗವಾನ್ ಸೂರ್ಯನಿಗೆ ಕೊಡುವುದು ಮತ್ತು ಈ ದೈವಿಕ ಸ್ತೋತ್ರವನ್ನು ಪಠಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ, ಯಾವುದಕ್ಕೂ ಕಾಯಬೇಡಿ. ಭಾನುವಾರವನ್ನು ಸೂರ್ಯನಿಗಾಗಿ ಅರ್ಪಿಸಿ. ನಿಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಿ. ‌ ‌

 


                                                                          Pic-2

 

ಆದಿತ್ಯ ಹೃದಯ ಸ್ತೋತ್ರಮ್ :



ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || 4 ||

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ || 9 ||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ || 10 ||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋsಅಂಶುಮಾನ್ || 11 ||

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋ‌உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 12 ||

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || 13 ||

ಆತಪೀ ಮಂಡಲೀ ಮೃತ್ಯುಃ ಸ್ತೋತ್ರಮ್ವತಾಪನಃ
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || 14 ||

ನಕ್ಷತ್ರ ಗ್ರಹ ತಾರಾಣಾಮ್ ಅಧಿIST ಜನನವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌sಸ್ತು ತೇ || 15 ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 16 ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || 17 ||

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || 18 ||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || 19 ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 20 ||

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌ಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || 21 ||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 22 ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || 23 ||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || 24 ||

 

 

                                                                           Pic-3

 

 

ಫಲಶ್ರುತಿ :

 

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ || 25 ||

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || 26 ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || 27 ||

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌sಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 28 ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || 29 ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌sಭವತ್ || 30 ||

ಅಥರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || 31 || ‌


|| ಇತಿ ಆದಿತ್ಯ ಹೃದಯ ಸ್ತೋತ್ರಮ್ ಸಂಪೂರ್ಣಂ ||


------------------ Hari Om -----------------

‌ ‌‌ ‌

 

 

 

Thursday, June 4, 2026

ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ -- Hole Anjaneya Swamy Temple in Madduru

 

ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ

Hole Anjaneya Swamy Temple in Madduru
 
Hole Anjaneya Swamy
 
Hole Anjaneya
 

ಮನೋಜವಂ ಮರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಂ ವರಿಷ್ಠಮ್ ।

ವಾತಾತ್ಮಜಂ ವಾನರಯೂತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ॥


ಶ್ರೀಪಾದರಾಜರು ಹಾಗೂ ವ್ಯಾಸರಾಯರು ಇಬ್ಬರು, ಗುರು ಶಿಷ್ಯರು ಸೇರಿ ಈ ದೇವರನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. 732 ಕಡೆ ವ್ಯಾಸರಾಯರು ಆಂಜನೇಯ ವಿಗ್ರಹಗಳನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಅದೇ ರೀತಿ ಮದ್ದೂರಿನ ಹೊಳೆಯ ದಡದ ಮೇಲೆ ಕೂಡ ಆಂಜನೇಯ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಆಂಜನೇಯ ದೇವರು, ಹನುಮ, ಭೀಮ, ಮಧ್ವಾ ಎಂದು ಮೂರು ಅವತಾರದಲ್ಲಿ ಇದ್ದಾರೆ. ಬಲಗೈಯ ಎರಡು ಬೆರಳುಗಳು ಉದ್ದ ಇರುವುದು ಮಧ್ವಾ ಅವತಾರ. ಎಡಗೈಯಲ್ಲಿ ಸೌಗಂಧಿಕ ಪುಷ್ಪ ಇರುವುದು ಭೀಮ ಅವತಾರ. ದೇವರಿಗೆ ಜುಟ್ಟು ಸಹಾ ಇದೆ

 

                                                    Way to the Temple

 

                                                        Shimsa River

 

ಇಲ್ಲಿನ ವಿಶೇಷ ಎಂದರೇ ದೇವಸ್ಥಾನದಲ್ಲಿ ನಾಲ್ಕಾಣೆ ದುಡ್ಡು ಕೊಡುತ್ತಾರೆ. ಅದನ್ನ ನೋಟಿನ ಜೊತೆ ಇಟ್ಟುಕೊಂಡು ತಮಗೆ ಏನು ಆಗಬೇಕು ಎಂದು ಪ್ರಾರ್ಥನೆ ಮಾಡಿ ಅದನ್ನ ದೇವರ ಪಾದದ ಬಳಿ ಹಾಕಿದ್ರೆ ನಾವು ಅಂದುಕೊಂಡ ಕೆಲಸ ಆಗುತ್ತದೆ ಎಂಬ ನಂಬಿಕೆ ಇದೆ.

 

                                                  History of the Temple

 

                                                          Banyan Tree

 

ಕದಂಬ ಖುಷಿಗಳು ಕೂಡ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಾರೆ. ಈ ಹಿಂದೆ ಶಿಂಷಾ ನದಿ ಕದಂಬ ನದಿಯಾಗಿತ್ತು. ಕದಂಬ ಖುಷಿಗಳು ತಪ್ಪಸ್ಸು ಮಾಡಿದ್ದರು ಎಂಬ ನಂಬಿಕೆ.

 

                                                          Name Board

 

                                                     Nagara Kallu

 

Hole Anjaneya Swamy Temple is in Maddur – just 2 kms from Maddur Railway Station and on the way from Bangalore towards Mysuru at Madduru one needs to take a deviation from the Highway to this Temple and Name Boards are there will lead to the Hole Anjaneya Swamy Temple. From Bangalore Maddur is Just 76 Kms.

 

                                                   another Picture

 

                                                 Abhisekha

Temple Timings are :

  • Morning 7:00 AM till 1:00 PM.

    Evening 4:00 PM till 7:00 PM

    On Saturdays & Festival Days temple will be open with Flexible Timings.

    Hole Anjaneya Swamy Temple

    Address: near kolli circle, Vaidhyanathapura Road, Maddur Town, Mandya District, Karnataka – 571422, India

    Contact Number: 099453 89599


 
 

ಅಂಜನಾ ನಂದನಂ ವೀರಂ, ಜಾನಕಿ ಶೋಕ ನಾಶನಂ!


ಕಪೀಶಮಕ್ಷ ಹಂತಾರಂ ವಂದೇ ಲಂಕಾ ಭಯಂಕರಂ !!


ಮಹಾ ವ್ಯಾಕರಣಾಂಭೋಧಿ, ಮಂತ ಮಾನಸಮಂದರಂ


ಕವಯಂತಂ ರಾಮಕೀರ್ತ್ಯಾ ಹನುಮಂತಮುಪಾಸ್ಮಹೇ !!

 

                                                         Pic-1


 

ಓಂ ಹನುಮತೇ ನಮಃ

ಓಂ ಐಂ ಭ್ರೀಂ ಹನುಮತೇ

ಶ್ರೀ ರಾಮ ದೂತಾಯ ನಮಃ

 

                                                                          Pic-2


 

                                                                      Pic-3

 

                                                                           Pic-4
 

 

|| ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।

ತನ್ನೋ ಹನುಮಾನ್ ಪ್ರಚೋದಯಾತ್ ||


Om Anjaneyaya Vidmahe Vayuputraya Dhimahi

Tanno Hanumat Prachodayat



ॐ आञ्जनेयाय विद्महे वायुपुत्राय धीमहि।

तन्नो हनुमत् प्रचोदयात्॥

 

                                                       Pic-5


 

                                                          Pic-6

 

                                                  Pic-7


 

ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ | ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ || 

 ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । ತನ್ನೋ ಹನುಮತ್ ಪ್ರಚೋದಯಾತ್॥

 

                                                          Pic-8

 

                                                         Pic-9

 

ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ

 

                                                                     Pic-10

 

ॐ श्री वज्रदेहाय रामभक्ताय वायुपुत्राय नमोsस्तुते ।”

 

                                                            Pic-11

 

ಪ್ರಥಮೋ ಹನುಮಾನ್ ನಾಮ


ದ್ವಿತೀಯೋ ಭೀಮ ಏವ ಚ 

 
ಪೂರ್ಣಪ್ರಜ್ಞ ತ್ರೀತೀಯಾಸ್ತು 

 
ಭಗವತ್ ಕಾರ್ಯ ಸಾದಕಃ ॥

 

                                                        Pic-12


 

Please Visit this most Powerful Temple and get Blessings from the Lord Anjaneya and 

get Enjoy the Serene Beauty & is Nature & River & its Surroundings near the Temple.

Every Saturdays and Festival days Prasadams are distributed.


----------------- Hari Om ----------------