Shani Deva
ಶನಿ ಗ್ರಹದ ಮಾಹಿತಿ -- Saturn Planet its
Information
ಶ್ರೀ
ಶನೈಶ್ಚರ ಜ್ಯೋತಿಷ್ಯ
ಶಾಸ್ತ್ರದಲ್ಲಿ,ದಿವ್ಯನವಗ್ರಹಗಳಲ್ಲಿ"ಶನಿ"ಯುಮಹತ್ತರವಾದ
ಗ್ರಹ
ಶನಿಯು
ಸಶರೀರನಾಗಿದ್ದಾನೆ,ಶನಿಯು,ಶನಿವಾರದ
ದೇವರು,ಭಾರತೀಯ
ಭಾಷೆಗಳಲ್ಲಿ
ಶನಿಯು
ವಾರದ ಏಳನೇ ದಿನದ ದೇವರಾಗಿದ್ದಾನೆ.
ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದು ಕೊಳ್ಳುವ ಸಮಯ 30 ವರ್ಷಗಳು. ಶನಿಯನ್ನು ಶನೈಶ್ವರ ಶನಿ ಭಗವಾನ್, ಶನೀಶ್ವರ, ಸನೀಸ್ವರ , ಶನೀಶ್ವರನ್ , ಶನಿದೇವ ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ,
ಶನಿಯು
ಸೂರ್ಯ ದೇವನ ಪುತ್ರ. ಹಾಗೂ
ಸೂರ್ಯನ ಹೆಂಡತಿ ಛಾಯ{ನೆರಳಿನ
ದೇವತೆ }ಹೀಗಾಗಿ
'ಛಾಯಾಪುತ್ರ'
ಎಂದೂ
ಕರೆಯಲಾಗುತ್ತದೆ, ಹಿಂದೂಗಳ
ಸಾವಿನ ದೇವತೆ ಯಮನ ಹಿರಿಯ ಸಹೋದರ
ಶನಿ. ಧರ್ಮ
ಗ್ರಂಥಗಳ ಪ್ರಕಾರ ನ್ಯಾಯವನ್ನು
ಒದಗಿಸುವ ದೇವರು.
ಆಸಕ್ತಿಯ
ವಿಷಯವೆಂದರೆ ಸೂರ್ಯನ ಇಬ್ಬರು
ಮಕ್ಕಳು ಶನಿ ಮತ್ತು ಯಮ ನ್ಯಾಯ
ದೇವತೆಗಳೇ!
ಒಬ್ಬರು
ತಮ್ಮ ಜೀವನದ ಆಗು-ಹೋಗುಗಳನ್ನು
ಗಮನಿಸಿ, ಶನಿಯು
ಸೂಕ್ತ ರೀತಿಯ ಶಿಕ್ಷೆ ಅಥವಾ
ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ
ಯಮನು , ಒಬ್ಬ
ವ್ಯಕ್ತಿಯು ಸತ್ತ ನಂತರ ಫಲಿತಾಂಶವನ್ನು
ನೀಡುತ್ತಾನೆ, ತಿಳಿದು
ಬಂದ ಒಂದು ವಿಷಯವೆಂದರೆ,
ಶನಿಯು
ಮಗುವಾಗಿದ್ದಾಗ,
ಸೂರ್ಯಗ್ರಹಣವಾಗಿದ್ದು,
ಬಿಟ್ಟ ಕಣ್ಣಿನಿಂದ
ಮೊದಲ ಬಾರಿಗೆ ನೋಡಿದ್ದರಿಂದಾಗಿ
ಶನಿಯಪ್ರಭಾವಎಂತಹದೆಂ ಬುದು
ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ
ತಿಳಿಯುತ್ತದೆ.
ಈತನು
ಒಬ್ಬ ಮಹಾನ್ ಉಪಾಧ್ಯಾಯ.
ಶನಿದೇವ ಯಾವ
ವ್ಯಕ್ತಿಯು ತಪ್ಪಿನ/ಮೋಸದ
ಅನ್ಯಾಯದ ಹಾದಿ ಹಿಡಿಯುತ್ತಾರೋ
ಅವರಿಗೆ ಶನಿಯು ಬಹಳ ಕಷ್ಟವನ್ನು
ನೀಡುತ್ತಾನೆ,
ಹಿಂದೂ
ಧರ್ಮಗ್ರಂಥಗಳ ಆಧಾರದ ಪ್ರಕಾರ
ಶನಿಯು ತೊಂದರೆಯನ್ನು ಕೊಡುವ
ದೇವರು ಹಾಗುಒಳ್ಳೆಯವರನ್ನು
ಆಶೀರ್ವದಿಸುವವನೂ ಸಹ ಆಗಿದ್ದಾನೆ.
Saturn Planet
ಈತನು
ಕಪ್ಪುಬಣ್ದವನಾಗಿದ್ದು,
ಕಪ್ಪು
ಬಟ್ಟೆಯನ್ನು ಧರಿಸಿದವನು ,
ಕೈಯಲ್ಲಿ
ಕತ್ತಿಯನ್ನು ಹಿಡಿದವನಾಗಿದ್ದು
ಬಾಣ ಹಾಗು ಎರಡು ಚಾಕು ಹೊಂದಿದ್ದು,
ಕಪ್ಪಗಿನ
ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ,
ಶ್ರೀಶನೈಶ್ಚರನು
ಮಹಾಪರಾಕ್ರಮಿ ಸೂರ್ಯಪುತ್ರ,
ಶನಿಯ
ಅವತಾರದ ಕಥೆ ಬೇರೆ ಬೇರೆ ಪುರಾಣಗಳಲ್ಲಿ
ಸ್ವಲ್ಪ ವಿಭಿನ್ನವಾಗಿ
ನಿರೂಪಿತವಾಗಿದೆ,
ಕಶ್ಯಪ
ಮಹರ್ಷಿಯ ಮಗನಾದ ಸೂರ್ಯನು ತ್ವಷ್ಟೃ
ಪ್ರಜಾಪತಿಯ ಮಗಳಾದ ಸಂಜ್ಞಾ
ಎಂಬುವಳೊಡನೆ ವಿವಾಹವಾದನು,
ಈ
ದಂಪತಿಗಳಿಗೆ ವೈವಸ್ವತ ಮನು,
ಯಮಧರ್ಮ ಎಂಬ
ಇಬ್ಬರು ಪುತ್ರರು ಮತ್ತು ಯಮುನೆಯೆಂಬ
ಮಗಳು ಹುಟ್ಟಿದರು,ಕಾಲಾಂತರದಲ್ಲಿ
ಸಂಜ್ಞೆಗೆ ತನ್ನ ಪತಿಯಾದ ಸೂರ್ಯನ
ದಿವ್ಯವಾದ, ಪ್ರಖರವಾದ
ತೇಜಸ್ಸು ಸಹಿಸಲುಅಸಾಧ್ಯ ವಾಯಿತು,
ತನ್ನ
ಪ್ರತಿಕೃತಿಯಾಗಿ ಛಾಯಾ ಎಂಬುವಳನ್ನು
ಸಂಜ್ಞೆಯು ಸೃಷ್ಟಿಮಾಡಿ ತನ್ನ
ಪತಿಯ ಸೇವೆ ಮತ್ತು ಮಕ್ಕಳ ಆರೈಕೆ
ಮಾಡುವುದಾಗಿ ನಿಯಮ ಮಾಡಿ ತಾನು
ಪಿತೃಗ್ರಹಕ್ಕೆ ತೆರಳಿದಳು,
ಛಾಯಾದೇವಿಯು
ಪತಿಸೇವಾ ಕಾರ್ಯದಲ್ಲಿ ತತ್ಪರಳಾಗಿ
ಸೂರ್ಯನ ವಿಶೇಷ ಅನುಗ್ರಹವನ್ನು
ಪಡೆದಳು. ಸಂಜ್ಞೆಯಂತೆಯೆ
ಛಾಯೆಯುಸಹಸೂರ್ಯನಿಂದ ಸಾವರ್ಣಿ
ಮನು, ಶನೈಶ್ಚರರೆಂಬ
ಗಂಡು ಮಕ್ಕಳನ್ನು ತಪತಿಯೆಂಬ
ಹೆಣ್ಣುಮಗುವನ್ನು ಪಡೆದಳು.
ಶನಿರಾಯನ
ಜನನದ ಸಮಾಚಾರವನ್ನು ಕೇಳಿದ
ಸೂರ್ಯನು ಅವಸರದಿಂದ ಪುತ್ರನನ್ನು
ನೋಡಲು ಬಂದನು,
ಆಗ
ತಾನೇ ಜನಿಸಿದ ಶಿಶು ಶನೈಶ್ಚರನ
ದೃಷ್ಟಿಯುಸೂರ್ಯ, ಅವನ
ಸಾರಥಿ ಅರುಣ, ರಥದ
ಕುದುರೆಗಳುಹೀಗೆಎಲ್ಲದಕ್ಕೂಪೀಡೆಯನ್ನುಂಟು
ಮಾಡಲು ಜಗದಾದ್ಯಂತ ಈತನ ಶಕ್ತಿ,
ಸಾಮರ್ಥ್ಯಗಳ
ಪ್ರಸಿದ್ಧಿಯಾಯಿತು.
ಶನಿದೇವನ
ಪ್ರಾರ್ಥನೆಯನ್ನು ನಿತ್ಯದಲ್ಲಿ,
ಶನಿವಾರ,
ಶನಿಪ್ರದೋಷಗಳಂದು
ವಿಶೇಷವಾಗಿ ಮಾಡಿದಲ್ಲಿ ಶ್ರೀ
ಶನೈಶ್ಚರನ ಕೃಪೆ ಅವಶ್ಯವಾಗಿ
ಆಗುವುದು, ವೇದಗಳ
ಜ್ಯೋತಿಷ್ಯ ಶಾಸ್ತ್ರ ಪ್ರಕಾರ
,
9 ನವಗ್ರಹ ಗಳಲ್ಲಿ ಶನಿಭಗವಾನ್ ಒಬ್ಬನು, ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನಉಪಾಧ್ಯಾಯನಾಗಿದ್ದು, ಸಹನೆ, ಶ್ರಮ, ಪ್ರಯತ್ನ, ಅನುಭವಗಳ ಪ್ರತೀಕವಾಗಿದ್ದಾನೆ.ಅಡೆತಡೆಗಳನ್ನು, ದುರಾದೃಷ್ಟಗಳನ್ನು, ತರುವವನೂ ಆಗಿದ್ದಾನೆ.
Lord Shani
ಆದರೂ ,ಜಾತಕದಲ್ಲಿ
ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ
ಇದ್ದರೆ, ಆ
ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು
ಹೊಂದುತ್ತದೆ,ಆರೋಗ್ಯಕರ
ಜೀವನವಾಗಿರುತ್ತದೆ, ಎಲ್ಲವೂ
ಧನಾತ್ಮಕವಾಗಿರುತ್ತದೆ.
ವಾಸ್ತವವಾಗಿ
, ಹಿಂದೂ
ಜ್ಯೋತಿಷಿಗಳು ನಂಬುವಂತೆ,
ಯಾರ ಜಾತಕದಲ್ಲಿ
ಶನಿಯು ಒಳ್ಳೆಯ ಸ್ಥಾನದಲ್ಲಿ
ಇರುತ್ತಾನೋ, ಅವರಿಗೆ
ಬೇರೆ ಯಾವುದೇ 'ಗ್ರಹ'
ಗಳು ಶನಿಯು
ನೀಡುವಂತೆ ಒಳ್ಳೆಯದನ್ನು ನೀಡಲಾರರು,
ಅದೇ ಶನಿಯು
"ಕೆಟ್ಟಸ್ಥಾನ"ದಲ್ಲಿ
ಕುಳಿತಿದ್ದರೆ, ಎಲ್ಲ
ರೀತಿಯ ತೊಂದರೆ ಅನುಭವಿಸ ಬೇಕಾಗುತ್ತದೆ,
ಜ್ಯೋತಿಷ್ಯವನ್ನು
ನಂಬುವ ಹಿಂದೂಗಳು ಶನಿಯ ಬಗ್ಗೆ
ಬಹಳ ಭಯ ಹಾಗು ಹೆದರಿಕೆಯಿದ್ದು,
ಆತನು
ಕೆಟ್ಟಸ್ಥಾನದಲ್ಲಿ ಕುಳಿತಾಗ
ಆಗುವ ಅನಾಹುತಗಳಿಗೆ ಹೆದರುತ್ತಾರೆ,
ಆದರೂ
ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳಬಹುದೆಂದರೆ,
ಯಾವುದೇ ಸುಖ
ಅಥವಾ ದುಃಖಕ್ಕೆ ಶನಿಯ ಪ್ರಭಾವದಿಂದ
ಮನುಷ್ಯನಿಗೆ ನೆರವಾದ ಕಾರಣವಾಗಿರದೆ,
ಮನುಷ್ಯ ತಾನು
ಮಾಡಿದ ಸ್ವಂತ ಕರ್ಮದ ನೇರ
ಫಲವಾಗಿರುತ್ತದೆ.
ಅದು
ಶನಿಯ "ಮುಖಾಂತರ"
ಘಟಿಸುತ್ತದೆ
ಅಷ್ಟೇ. ಮನುಷ್ಯ
ತಾನು ಮಾಡಿದ ಕೆಟ್ಟ ಕರ್ಮ ದ ಫಲದ
ಅನುಸಾರ, ಶನಿಯ
"ಸ್ಥಾನ-ಕೆಟ್ಟದಾಗಿ
" ಕಷ್ಟಗಳು
ಬರುತ್ತವೆ,ಹಾಗೆಯೇ
ಒಳ್ಳೆಯದೂ ಸಹ, ಶನಿಯ
ಪ್ರಭಾವದಿಂದ ಬರುವ ಖಾಯಿಲೆಗಳೆಂದರೆ-ಕೊಳೆ
ಯುವಿಕೆ,ರಕ್ತಸರಬರಾಜಿನಲ್ಲಿನ
ಏರು-ಪೇರು,ಕ್ಷಯರೋಗ
,ಮುಂತಾದವು,ಮಾನಸಿಕವಾಗಿ,
ಸಂಕುಚಿತಮನೋಭಾವ,
ಕೆಳಮಟ್ಟದ
ಚಿಂತನೆ,ಈ
ಖಾಯಿಲೆಗಳನ್ನು ಶನಿಯ ನಿಯಮ ಮತ್ತು
ಷರತ್ತುಗಳನ್ವಯವೇ ಸುಧಾರಿಸಲು
ಸಾಧ್ಯ, ಶನಿಗ್ರಹವು
ಸೂರ್ಯನನ್ನು ಒಂದು ಸುತ್ತು ಹಾಕಲು
ತೆಗೆದುಕೊಳ್ಳುವ ಕಾಲಾವಧಿಯು
30 ವರ್ಷಗಳು,ಅಂದರೆ
ಎಲ್ಲಾ 12 ರಾಶಿ
ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು
ದಾಟಲು 30 ವರ್ಷದ
ಅವಧಿ ಬೇಕಾಗುತ್ತದೆ.
ಪ್ರತಿಯೊಂದು
ರಾಶಿಯಲ್ಲಿ ಶನಿ ಭಗವಾನ್ ಎರಡೂವರೆ
ವರ್ಷ{2,1/2} ಕಾಲವನ್ನು
ಕಳೆಯುತ್ತಾನೆ, ಚಂದ್ರ
ಚಿನ್ಹೆ ಹಿಂದೂ ಜ್ಯೋತಿಷ್ಯ
ಶಾಸ್ತ್ರದ ಪ್ರಕಾರ,
ಚಂದ್ರಚಿನ್ಹೆಯ
ಮುಖಾಂತರದ ಈ ಚಲನೆಯ ಶನಿಯ ಅವಧಿಯು
ಮುಖ್ಯವಾದುದಾಗಿದೆ ಹಾಗು ಜಾತಕದ
ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ.
ಒಬ್ಬ
ವ್ಯಕ್ತಿಯ ಹುಟ್ಟಿದ ರಾಶಿ
/ಚಂದ್ರಚಿನ್ಹೆ
ಯ ಹಿಂದಿನ ಮನೆಯರಾಶಿಯಪ್ರವೇಶ
ವಾದಾಗ,
ಶನಿಯ ಪ್ರಭಾವವು
ಪ್ರಾರಂಭವಾಗಿ , ಹುಟ್ಟಿದ
ರಾಶಿ /ಚಂದ್ರಚಿನ್ಹೆ
ಯ ಮುಂದಿನ ಮನೆ ಪ್ರವೇಶದೊಂದಿಗೆ
ಶನಿಯ ಪ್ರಭಾವವು ನಿಲ್ಲುತ್ತದೆ,
ಒಟ್ಟು ಅವಧಿಯ
7.5 ವರ್ಷ
{2.5 ವರ್ಷ
× 3}ವನ್ನು
ಸಾಡೇ ಸಾತಿ ಅಥವಾ "ಏಳರಾಟ
ಶನಿ" ಎಂದು,ಈ
ಅವಧಿಯು ಅತ್ಯಂತ ತ್ರಾಸದಾಯಕ
ವಾದುದಾಗಿದೆ, ಶನಿ
ಮಹಾದೆಶೆಯು ಮನುಷ್ಯನಲ್ಲಿ
ನಡೆಯುವಾಗ ಆತನ ಪ್ರಭಾವವು ಉನ್ನತ
ಮಟ್ಟದಲ್ಲಿನಿಶ್ಚಿತವಾಗುತ್ತದೆ,
ಹೇಳಿಕೆಯಂತೆ
ಶನಿಯ ಪ್ರಭಾವದಿಂದ ರಾಜನೂ ಸಹ
'ಪಾಪರ್'
ಆಗಿ ಬೀದಿಗೆ
ಬೀಳುವ ಸಂದರ್ಭ ಆ ಸಮಯದಲ್ಲಿ
ಬರಬಹುದು.
another Picture
ಶನಿಯು ಮಕರ
ಮತ್ತು ಕುಂಭ ರಾಶಿಯ ಅಧಿಪತಿ,
ತುಲಾ ರಾಶಿಯಲ್ಲಿ
ಸಬಲನಾದರೆ, ಮೇಷ
ರಾಶಿಯಲ್ಲ ದುರ್ಬಲನಾಗಿರುತ್ತಾನೆ,ಬುಧ
, ಶುಕ್ರ
, ರಾಹು
,ಕೇತು
ಗ್ರಹಗಳು ಶನಿಯೊಂದಿಗೆ ಸ್ನೇಹದಿಂದಿದ್ದರೆ,
ಸೂರ್ಯ ,
ಚಂದ್ರ ಮತ್ತು
ಗುರು ಗ್ರಹಗಳು ಸಮ ಶತ್ರು
ಗ್ರಹಗಳಾಗಿವೆ,
ಗುರು
ಅಥವಾ ಗುರುಗ್ರಹ ಶನಿಯೊಂದಿಗೆ
ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ.
ಪುಷ್ಯ , ಅನುರಾಧ ಮತ್ತು ಉತ್ತರ - ಭಾದ್ರಪದ ನಕ್ಷತ್ರಗಳಿಗೆ ಒಡೆಯ ಶನಿ ಮಹಾರಾಜ.
ಶನಿ
ಭಗವಾನನ ಬಣ್ಣ ಕಪ್ಪು ಅಥವಾ ದಟ್ಟ
ನೀಲಿ; ಲೋಹ-ಕಬ್ಬಿಣ;
ಹರಳು-ನೀಲಿ,
ಈತನ
ಮೂಲವಸ್ತು ಅಥವಾ ತತ್ತ್ವಗಾಳಿ
;ದಿಕ್ಕು-ಪಶ್ಚಿಮ,
{ಸೂರ್ಯ
ಮುಳುಗುವ-ಕತ್ತಲು
ಆರಂಭ ವಾಗುವ ದಿಕ್ಕು} ಹಾಗು
ಎಲ್ಲಾ ಋತುಗಳನ್ನೂ ಆಳುತ್ತಾನೆ,
ಶನಿಯ ಸಾಂಪ್ರದಾಯಿಕ
ಆಹಾರಗಳು,ಕರಿ
ಮೆಣಸು, ಕರಿ
ಉದ್ದು. ಈತನ
ಹೂವುನೇರಳೆ, ಎಲ್ಲಾ
ಕರಿ ಬಣ್ಣದ ಪ್ರಾಣಿಗಳು ಹಾಗು
ಉಪಯೋಗಕ್ಕೆ ಬಾರದ ಕುರೂಪಿ ಮರಗಳು
ಶನಿಯ ಸಂಕೇತ, ಶನಿಯು
ಗುಂಪುಗಳನ್ನು ಆಳುವವನಾಗಿದ್ದಾನೆ.
ಒಬ್ಬರ
ಜಾತಕದಲ್ಲಿಗ್ರಹಗಳಆಶೀರ್ವಾದವಿಲ್ಲದೆ
, ಗುಂಪುಗಳನ್ನು
ಪರಿಗಣಿಸುವುದು ಕಷ್ಟದಾಯಕ.
ಶನಿ
ಗ್ರಹವು ಉಚ್ಚಸ್ಥಾನ {ಅಥವಾ
ಲಗ್ನ } ದಲ್ಲಿದ್ದಾಗ
ಜ್ಯೋತಿಷ್ಯದ ಜಾತಕ ಫಲದನ್ವಯ
ನಾಯಕತ್ವದ ಗುಣ ಅವನದಾಗಿದ್ದು,ಹೆಸರು
ಮತ್ತು ಅಧಿಕಾರವನ್ನು
ಹೊಂದಿದವನಾಗುತ್ತಾನೆ,
ಜೊತೆಗೆ
ಅಂತಹ ಜನರು ಹೆಚ್ಚಿನಶ್ರದ್ಧೆಯುಳ್ಳವರಾಗಿದ್ದು
,ಕೈಯಲ್ಲಿ
ಹಿಡಿದ ಕೆಲಸವನ್ನು
ಬಿಡದೆಮಾಡುವವರಾಗಿರುತ್ತಾರೆ,ಮತ್ತೊಂದು
ಭಾಗದಲ್ಲಿ . ಅದೇ
ಶನಿ ಗ್ರಹವು ನೀಚ ಸ್ಥಾನದಲ್ಲಿದ್ದಾಗ,ಒಬ್ಬ
ವ್ಯಕ್ತಿಯ 'ಕರ್ಮ
'ದನ್ವಯ
ದುರ್ಬಲನಾಗಿದ್ದು,ಕೆಲಸಗಳಲ್ಲಿ
ಆಸಕ್ತಿಯಿಲ್ಲದೆ, ಕರ್ಮವನ್ನು
ಹಳಿಯುತ್ತಾ,ನಿರಾಶಾ
ದಾಯಕ ವಾಗಿಸೋಲನ್ನುಅನುಭವಿಸುತ್ತಾನೆ.
Shani s Stone -- Blue Sapphire
ಒಬ್ಬನ ಜಾತಕದಲ್ಲಿ
ಶನೀಶ್ವರನ ಪ್ರಭಾವವಿಲ್ಲದಿದ್ದರೆ,
ಆತನಿಗೆ ಮೋಕ್ಷ
ದುರ್ಲಭ ವಾಗುತ್ತಾ ಹೋಗುತ್ತದೆ.
ಶನೀಶ್ವರ
ಮಹಾರಾಜನನ್ನು {ನ್ಯಾಯಾಧೀಶ}ಎಂದೂ
ತಿಳಿಯಲಾಗಿದೆ. ವ್ಯಕ್ತಿಯು
ಮಾಡಿರುವ ತಪ್ಪುಗಳನ್ನು ಮನಗಂಡು,
ಅವನ ದೆಶೆಯಲ್ಲಿ
ತೊಂದರೆ ನೀಡುತ್ತಾನೆ,
ಶನಿ
ದೋಷದಲ್ಲಿ , ವ್ಯಕ್ತಿಯು
ಸರಿಯಾಗಿದ್ದು, ಭಕ್ತನಾಗಿದ್ದರೆ
ಈ ಕಷ್ಟ ಕಾಲದಲ್ಲಿಯೂ ಯಾವುದೇ
ರೀತಿಯ ತೊಂದರೆಗಳಿಲ್ಲದೆ ಹೊರ
ಬರುತ್ತಾನೆ, ಶನಿ
ಮಹಾರಾಜನು ನೀಡುವ ಕಷ್ಟಗಳಿಗಿಂತ,
ಆತನು ನೀಡುವ
ಒಳ್ಳೆಯ ವರಗಳಿಗೆ ಹೆಚ್ಚುಹೆಸರು
ವಾಸಿಯಾಗಿದ್ದಾನೆ.
ಆಶೀರ್ವಾದದ
ದೃಷ್ಟಿಯಿಂದ ಶನಿ ಮಹಾರಾಜನಷ್ಟು
ಬೇರೆ ಯಾವ ಗ್ರಹಗಳೂ ಹೋಲಿಕೆಗೆ
ಸಿಗಲು ಸಾಧ್ಯವಿಲ್ಲ. .ಆತನು
ತನ್ನ ದೆಶೆಯಕೊನೆಯಲ್ಲಿ ವರವನ್ನು
ನೀಡುತ್ತಾನೆ,
ಈತನ
ಆದಿ -ದೇವತೆಯು
ಪ್ರಜಾಪತಿ ಮತ್ತು ಪ್ರತ್ಯಾದಿ
- ದೇವತೆಯು
ಯಮ . ಶನಿ
ಮಹಾರಾಜನು ಒಬ್ಬ ವ್ಯಕ್ತಿಯ
ಸಹನೆಯನ್ನು ಪರೀಕ್ಷಿಸುತ್ತಾನೆ.
ನಮ್ಮಲ್ಲಿನ
ಕೆಟ್ಟ ಗುಣಗಳು ಒಳ್ಳೆಯಗುಣಗಳಾಗಿ
ಪರಿವರ್ತನೆಯಾಗಲು ಆಶಾಭಂಗವನ್ನು
ಸೃಷ್ಟಿಸುತ್ತಾನೆ ಹಾಗು ಕಾರ್ಯವನ್ನು
ತಡ ಮಾಡುತ್ತಾನೆ, ಕೊನೆಯಲ್ಲಿ
ಒಬ್ಬ ವ್ಯಕ್ತಿಯು ತಾನು ಮಾಡಿದ
ತಪ್ಪನ್ನು ಅರಿಯಲು ಅನುವು
ಮಾಡಿಕೊಡುತ್ತಾನೆ.
,ಶಿಕ್ಷೆಯನ್ನು
ಕೊಡುವ ಮೂಲಕ ಮುಗ್ಧತೆಯನ್ನು
ತೊಡೆದು ಹಾಕುತ್ತಾನೆ,
ಇದರಿಂದಾಗಿ
ಆತ್ಮ ಪರಿಶುದ್ಧವಾಗಿ ,ವ್ಯಕ್ತಿಯು
ಬದಲಾಗಿ ತಾಮ್ರ ಚಿನ್ನವಾಗಿ
ಪರಿವರ್ತನೆ ಹೊಂದುತ್ತದೆ.
ಅಂತರಂಗದಲ್ಲಿಅಂದರೆ
,ನಿಜವಾದ
ಸತ್ಯವನ್ನು ಅರ್ಥ ಮಾಡಿಕೊಳ್ಳಲಾರಂಭಿಸುತ್ತಾನೆ.
ಬೇಜವಾಬ್ದಾರಿತನದಿಂದ
ಮಾಡಿದ ತಪ್ಪುಗಳನ್ನು ಅರಿಯುತ್ತಾನೆ.
ಶನಿಯ ಮಹಾದೆಶೆ
ಮುಗಿಯುತ್ತಾ ಬಂದಂತೆ,
ಮನುಷ್ಯ ತನ್ನ
ಹಿಡಿತದಲ್ಲಿ ಯಾವುದೂ ಇಲ್ಲ ಎಂದು
ತಿಳಿಯುತ್ತಾ ಬರುತ್ತಾನೆ,
ಎಲ್ಲವೂದೈವನಿಯಾಮಕವಾಗಿದ್ದು,
ದೇವರು ನಿಜವಾದ
ಸಾಧಕನಾಗಿದ್ದು, ಮಾನವ
ಆತನ ದೂತರು ಮಾತ್ರ, ಸಂಖ್ಯಾ
ಶಾಸ್ತ್ರದ ಪ್ರಕಾರ 7 ರ
ಸಂಖ್ಯೆಯಂದು ಹುಟ್ಟಿದವರು ಶನಿಗೆ
ಅಧೀನರಾಗುರುತ್ತಾರೆ,
ಯಾವುದೇ
ತಿಂಗಳು, ದಿನಾಂಕ
7 ಮತ್ತು
27ರಂದು
ಹುಟ್ಟಿದವರು ಕಷ್ಟಗಳನ್ನು
ಜೀವನದಲ್ಲಿ ಎದುರಿಸ ಬೇಕಾದದ್ದು
ಅನಿವಾರ್ಯ.
ಈ
ಕಷ್ಟಗಳಿಗೆ ಒಂದು ಕಾರ್ಯ-ಕಾರಣ
ಗುರಿಯಿದ್ದು, ಅವನ್ನು
ಗುರುತಿಸುವುದು ಮುಖ್ಯವಾಗಿದ್ದು,
ಜೀವನದಲ್ಲಿ
ಅದರ ಕಾರಣವನ್ನು ಕಂಡುಕೊಳ್ಳ
ಬೇಕಾಗುತ್ತದೆ,
ಶನಿಯನ್ನು
ಸಂತೃಪ್ತಿಗೊಳಿಸುವ ಉಪಾಯವೆಂದರೆ,
ತಾನು ಮಾಡಿದ
ತಪ್ಪುಗಳ ಜವಾಬ್ದಾರಿಯನ್ನು
ಹೊರಲು ಸಿದ್ಧನಿರಬೇಕು,
ಆತ್ಮ ವಿಮರ್ಶೆಯನ್ನು
ಮಾಡಿಕೊಳ್ಳಬೇಕು, ಕಷ್ಟ
ಪಡಬೇಕು. ಶನಿವಾರದಂದು
ನೀಲಿ ಬಣ್ಣದ ಬಟ್ಟೆಯನ್ನು
ದಾನ ಮಾಡಬೇಕು ಹಾಗು ಬಡವರಿಗೆ
ಸಹಾಯ ಮಾಡಬೇಕು.
Lord Anjaneya & Lord Shani
ಶನಿಯನ್ನು ಸಂತೃಪ್ತಿ ಪಡಿಸುವ ಮಾರ್ಗಗಳು
ಪುರಾಣದ
ಪ್ರಕಾರ , ಶನಿಯು
" ಶಿವನ"ಆರಾಧಕ
. "ಬ್ರಹ್ಮಾಂಡ
ಪುರಾಣ " "ನವಗ್ರಹ
ಪೀಡಾಹಾರ ಸ್ತೋತ್ರದ ಪ್ರಕಾರ,ಯಾರೇ
ಆಗಲಿ ಈ ಕೆಳಕಂಡ ಸ್ತೋತ್ರವನ್ನು
ಪಠಿಸಿದರೆ ಶನಿಯ ಎಲ್ಲಾ ರೀತಿಯ
ಕೆಟ್ಟ ದೃಷ್ಟಿಯಿಂದ ಪಾರಾಗಬಹುದಾಗಿದೆ.
ಸೂರ್ಯಪುತ್ರೋ
ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ
ಮಂದಚಾರಃ ಪ್ರಸನ್ನಾತ್ಮ ಪೀಡಾಮ್
ಹರತು ಮೇ ಶನಿಃ
ವೇದಗಳ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ
,ಶನಿಯ
ಸ್ಥಳಾಂತರದಿಂದ ಆಗುವ ಕೆಟ್ಟ
ಪರಿಣಾಮಗಳಿಂದ ಪಾರಾಗಲು ಈ ಕೆಳಕಂಡ
ಉಪಾಯಗಳನ್ನು ಅನುಸರಿಸಿ.
ಶನಿಗ್ರಹದ
ಚಲನೆ , ಶನಿ
-ಕಾಂತ,ಶನಿ
ಶನಿಯು 7 ಮನೆಯಲ್ಲಿ
ಚಲಿಸುವಾಗ ಚಂದ್ರನ ದೃಷ್ಟಿಯಿಂದ
ಸಾಡೇ - ಸತೀ
ಶನಿ ಗ್ರಹವು ಹನ್ನೆರಡನೆ
,ಮೊದಲ,ಹಾಗು
ಎರಡನೇ ಮನೆ , ಚಂದ್ರ
ನಿಂದ ದೃಷ್ಟಿಯಿಂದ}
ತಾಯಿಕಾಳಿಯನ್ನುಅಮಾವಾಸ್ಯೆಯಂದು
ಪೂಜಿಸಿದರೆ ಶ್ರೇಷ್ಠ,
ವಿಶ್ವದ
ಆಕಾರದಲ್ಲಿ ಶ್ರೀ ಹನುಮಾನನನ್ನು
ಅಂದರೆl ಶನಿ
ಮಹಾತ್ಮನನ್ನು ತನ್ನ ಹೆಗಲ ಮೇಲೆ
ಕೂರಿಸಿಕೊಂಡ ಸಂದರ್ಭದಲ್ಲಿದ್ದಂತೆ
ಹಾಗು ಆತನಿಂದ ವರವನ್ನು ಪಡೆದ
ಸಂದರ್ಭದಲ್ಲಿನ ಹನುಮನ ಪ್ರಾರ್ಥನೆ
ಮಾಡಿ ಸೂರ್ಯನಿಂದ ಪಡೆದ ಸಲಹೆ
ಹಾಗು ಆಶೀರ್ವಾದ ಪಡೆದ ಸಂದರ್ಭ,
ಶನಿ
ದೇವರ ಆಶೀರ್ವಾದವನ್ನು ಪಡೆಯಲು
ಬಳಸುವ ಒಂದು ಸಾಮಾನ್ಯ ಮಂತ್ರ:
Lord Shani
ಓಂ ಶಂ ಶನೈಸ್ಕಾರ್ಯಯೇ ನಮಃ .
ಶನಿಯನ್ನು ಸಂತೃಪ್ತನಾಗಿಸಲು ಇನ್ನೊಂದು ಮಂತ್ರ:
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ|
ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ ಓಂ
Lord Shani & Lord Anjaneya
ಶನಿ ದೇವರ ಮಂತ್ರ
ಓಂ
ನೀಲಾಂಜನ ಸಮಾಭಾಸಂ ರವಿಪುತ್ರಂ
ಯಮಾಗ್ರಜಂ, ಛಾಯಾ
-ಮಾರ್ತಂಡಂ
-
ಸಂಭೂತಂ , ತಮ್ ನಮಾಮಿ ಶನೈಶ್ಚರಂ
ಓಂ ಭಗಭವಾಯ ವಿದ್ಮಹೈಂ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್|
ಓಂ ಶನ್ನೋದೇವೀರ್ಭೀಷ್ಟಯ ಆಪೋ ಭವಂತು ಪೀತಯೇ ಶಂಯೋರ್ಭಿಶ್ರವಂತು ನಃ|''
Tirunallaliru
ಇನ್ನೂ ಕೆಲವು
ಭಕ್ತರು "ಓಂ
ಶಂ ಶನೈಶ್ಚರಾಯ ನಮಃ"
ಎಂದು
ಪ್ರತಿದಿನ 108 ಸಲ
ಪಠಿಸುತ್ತಾರೆ. ಹಾಗೆಯೇ
ನವಗ್ರಹಗಳ ಮಂತ್ರವನ್ನುಳ್ಳ
ಪುಸ್ತಕಗಳನ್ನು ಶ್ರದ್ಧೆಯಿಂದ
ಓದಿ ಅಭ್ಯಸಿಸುತ್ತಾರೆ,
ನಂತರ ಶನಿ
ಶ್ಲೋಕವನ್ನು ನವಗ್ರಹ ಶ್ಲೋಕದಿಂದ
ಪ್ರಾರಂಭಿಸಿ ಕೊನೆಯಲ್ಲಿ ಶಂ
ಶನೀಶ್ವರಾಯ ನಮಃ, ಎಂದು
ಪ್ರಾರ್ಥಿಸಿ, ತಿಲಾಭಿಷೇಕಂ
ಅನ್ನು ಶನಿ ತ್ರಯೋದಶಿಯಂದು,
ಶನಿ ಜಯಂತಿಯಂದು
{ಪುಷ್ಯ
ಮಾಸ ಬಹುಳ ಅಷ್ಟಮಿ} ಮತ್ತು
ಶನಿ- ಅಮಾವಾಸ್ಯೆ
ದಿನಗಳಂದು ಮಾಡಿಸಿದರೆ ಉತ್ತಮ
,
ಕರಿ
ಎಳ್ಳನ್ನು ಬ್ರಾಹ್ಮಣರಿಗೆ ದಾನ
ಮಾಡಿ {1 KG 900 grams ನಷ್ಟು
} ಕಪ್ಪು
ಹಸುವಿಗೆ {ಗೋವು}ಕರಿ
ಎಳ್ಳು ,ಬೆಲ್ಲದ
ಮಿಶ್ರಣವನ್ನು ತಿನ್ನಿಸಿ,
ಶನಿವಾರದಂದು
ಉಪವಾಸ ಮಾಡುವವರು ಅಂದಿನ ದಿನ
{ದ್ರವಾಹಾರ}ಬೆಳಗ್ಗೆ
6:00 ರಿಂದ
ಸಂಜೆ 6:00 ರವರೆಗೆ
ಮಾತ್ರ ಸೇವನೆ ಮಾಡಬೇಕು,
ಕಾಗೆಗಳಿಗೆ
ಆಹಾರ ಬೆಳಗಿನ ಹೊತ್ತು ಕೊಡುವುದು,
ದೈಹಿಕ
ಅಂಗವಿಕಲರಿಗೆ ಆಹಾರ ಕೊಡುವದು,
ನವಗ್ರಹ
ಪ್ರದಕ್ಷಿಣೆ {19 ಬಾರಿ}
ಹಾಕುವದು.
ನಮ್ಮಭಾರತದಲ್ಲಿರುವ
ಹೆಸರಾಂತ ಶನಿ ದೇವರ ದೇವಸ್ಥಾನಗಳ
ಭೇಟಿ (ವರ್ಷಕ್ಕೆ
ಒಂದು ಸಾರಿ ಭೇಟಿ ಕೊಡುವುದು
ಶ್ರೇಯಸ್ಕರ -- ಮಂದಪಲ್ಲಿ
,ಶನಿಸಿಂಗನಪುರ
{ಮಹಾರಾಷ್ಟ್ರ},
ತಿರುನಳ್ಳಾರ್
{
ತಮಿಳುನಾಡು
}, ನರ್ಸಿನ್
ಗೋಲೆ , ವೆಂಕಥಳ
ಮತ್ತು ವೀರಣ್ಣ ಪಲೇಮ್ --
ಪರ್ಚುರ್
ಮಂಡಲಂ, ಪ್ರಕಾಶಂ
ಜಿಲ್ಲೆ ಆಂಧ್ರ ಪ್ರದೇಶ.
ಪ್ರತಿದಿನ
ಮನೆಯ ಮುಖ್ಯದ್ವಾರದ ಮುಂದೆ ,
ಸೂರ್ಯ ಮುಳುಗಿದ
ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು
ಹಚ್ಚುವುದರಿಂದ, ದಶರಥ
ಮಹಾರಾಜನಿಂದ ರಚಿಸಲ್ಪಟ್ಟ ಶನಿ
ಸ್ತೋತ್ರದ ಪಠಣ,
ಮಾಡುವುದರಿಂದ,
ಜ್ಯೇಷ್ಥಾದೇವಿ
, ಶನೀಶ್ವರ
ಸ್ವಾಮಿಯವರ ಮದುವೆ {ಶ್ರಾವಣ
ಪೂರ್ಣಿಮ ದಿನ}
ಶನಿ
ಜಪಂ,19000 ಮೂಲಮಂತ್ರದ
ಜೊತೆಗೆ , ಪುನರ್
ಚರಣ , ಹವನಂ
, ದಾನಂ
.ಶನಿಚಾರ
ವ್ರಥಂ ,ಹೋಮ
ಪ್ರತಿ ಶನಿವಾರ ಶ್ರಾವಣ ಮಾಸದಲ್ಲಿ,
,ಶನೈಚರ
ಧೀಕ್ಷ :ಶ್ರಾವಣ
ಶುದ್ಧ ವಿದಿಯಿಂದ ಶ್ರಾವಣ ಬಹುಳ
ಷಷ್ಠಿಯವರೆಗೆ, , "ರಾಮ
ನಾಮ" ಹನುಮಾನ್
ಚಾಲೀಸ- ದುರ್ಗಾ
ಸ್ತುತಿಯ ಪಠಣ, ಮಾಡುವುದರಿಂದ,
,ಹನುಮಾನ್
- ಶ್ರೀ
ದುರ್ಗಾ ದೇವಿ - ವಿನಾಯಕನಿಗೆ
ಪ್ರಾರ್ಥನೆ, ಮಾಡುವುದರಿಂದ,
,ಮೊಸರನ್ನ
,ಅದರಲ್ಲಿ
ಸ್ವಲ್ಪ ಮೆಣಸು ಬೆರೆಸಿ ದೇವರಿಗೆ
ಅರ್ಪಿಸಿ ನಂತರ ಕಾಗೆಗೆ ಉಣ
ಬಡಿಸುವುದುದರಿಂದ ನಮ್ಮ ಕಷ್ಟಗಳು
ಬಗೆಹರಿಯುತ್ತವೆ.
------------------- Hari Om ---------------





































