Sunday, April 19, 2026

ನೈವೇದ್ಯ ---- Offerings to God

 

ನೈವೇದ್ಯ ---- Offerings to God

 


                                      
 Naivadya

 

ನಿಮ್ಮ ದೇವರು ನೈವೇದ್ಯ ತಿಂತಾರ ?

ಒಂದು ಅದ್ಭುತ ವಿಚಾರದ ವಿಶ್ಲೇಷಣೆಯ ಸಂವಾದ ಈ ಕೆಳಗಿದೆ. ಓದಿ ಅನುಭವಿಸಿ ಮತ್ತು ಆನಂದಿಸಿ.

ನೈವೇದ್ಯ : ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು?

ಇದು ನಂಬಿಕೆಯಿಲ್ಲದವರ ಪ್ರಶ್ನೆ. ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ.

ಒಬ್ಬ ಗುರು ಮತ್ತು ಶಿಷ್ಯರ ಸಂವಾದ ಹೀಗೆ ನಡೆದಿತ್ತು.

ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ 

ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು 

ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ

 

ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ.

ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ ತಯಾರಾಗಲು ಆದೇಶಿಸಿದರು.

ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ

 ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ 

ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು

 

ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ ಕಂಠಸ್ಥ ಹೇಳಿ, ಒಪ್ಪಿಸಿದ.

ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ

                                                           Naivaidya1

 

" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.

ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.

"
ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ

 

                                                 Nava Vidha Bhakthi
 

 

ನಾವು ಉಣ್ಣುವ ಆಹಾರದಲ್ಲಿ 'ಭಕ್ತಿ' ಹೊಕ್ಕರೆ 

 
ಅದು ' ಪ್ರಸಾದ' ವಾಗುತ್ತದೆ.....

ನಮ್ಮ ಹಸಿವಿಗೆ 'ಭಕ್ತಿ' ಹೊಕ್ಕರೆ 

 
ಅದು ' ಉಪವಾಸ' ವಾಗುತ್ತದೆ......

ನಾವು 'ಭಕ್ತಿ' ಕುಡಿದರೆ 

 
ಅದು 'ಚರಣಾಮೃತ' ವಾಗುತ್ತದೆ......

ನಮ್ಮ ಪ್ರಯಾಣ ' ಭಕ್ತಿ' ಪೂರ್ಣವಾದರೆ

 
ಅದು ' ತೀರ್ಥಯಾತ್ರೆ' ಯಾಗುತ್ತದೆ.......

ನಾವು ಹಾಡುವ ಸಂಗೀತ' ಭಕ್ತಿ' ಮಯವಾದರೆ 

 
ಅದು 'ಕೀರ್ತನೆ'ಯಾಗುತ್ತದೆ......

ನಮ್ಮ ವಾಸದ ಮನೆಯೊಳಕ್ಕೆ' ಭಕ್ತಿ ' ತುಂಬಿದರೆ 

ನಮ್ಮ ಮನೆಯೇ ' ಮಂದಿರ ' ವಾಗುತ್ತದೆ.......

ನಮ್ಮ ಕ್ರಿಯೆ ' ಭಕ್ತಿ' ಪೂರಿತವಾದರೆ 

 
ನಮ್ಮ ಕಾರ್ಯಗಳು ' ಸೇವೆ' ಯಾಗುತ್ತದೆ.....

ನಾವು ಮಾಡುವ ಕೆಲಸದಲ್ಲಿ' ಭಕ್ತಿ ' ಇದ್ದರೆ

 
ಅದು ನಮ್ಮ ' ಕರ್ಮ ' ವಾಗುತ್ತದೆ.....

ನಮ್ಮ ಹೃದಯದಲ್ಲಿ ' ಭಕ್ತಿ ' ತುಂಬಿದರೆ 

ನಾವು ಮಾನವರಾಗುತ್ತೇವೆ.....

ನಮ್ಮ ವಿಚಾರವಿನಿಮಯದಲ್ಲಿ ' ಭಕ್ತಿ' ಇದ್ದರೆ

 
ಅದು ' ಸತ್ಸಂಗ' ವಾಗುತ್ತದೆ.

 

                                                          Types of Bhakthi
 


------------------ Hari Om ----------------

 



 


 

Sunday, April 12, 2026

ವೀಳ್ಯದೆಲೆ ---- ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು -- Betel Leaf – its Health Benefits

 

                                                                      Betel Leaf

 

ವೀಳ್ಯದೆಲೆ ---- ಆಶ್ಚರ್ಯಕರ ಆರೋಗ್ಯ 

ಪ್ರಯೋಜನಗಳು


Betel Leaf – its Health Benefits

 

ಜನರು ಊಟದ ನಂತರ ಪಾನ್ ತಿನ್ನಲು ಇಷ್ಟಪಡುತ್ತಾರೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ, ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ನೆಗಡಿ ಮತ್ತು ಕೆಮ್ಮಿಗೆ ವೀಳ್ಯದೆಲೆಯ ನೀರು ಒಳ್ಳೆಯದು. ಇದು ಕಫ ಮತ್ತು ಪಿತ್ತ ದೋಷಗಳನ್ನು ನಿವಾರಿಸುತ್ತದೆ. ಹಾಗೆಯೇ ವೀಳ್ಯದೆಲೆಯ ನೀರು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆ ಪ್ರಯೋಜನಗಳೇನು ಎಂದು ತಿಳಿಯಿರಿ.

1) ವೀಳ್ಯದೆಲೆಯ ನೀರು ಮಾಡುವ ವಿಧಾನ: 3-4 ವೀಳ್ಯದೆಲೆಗಳನ್ನು ತೊಳೆದು ಮೂರು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಮತ್ತು ಒಂದು ಲೋಟ ಉಳಿದಾಗ, ಅದು ತಣ್ಣಗಾದ ನಂತರ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ. ಇದು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

2) ಮಧುಮೇಹವನ್ನು ನಿಯಂತ್ರಿಸುತ್ತದೆ: ವೀಳ್ಯದೆಲೆಯ ನೀರು ಮಧುಮೇಹಿಗಳ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಈ ನೀರನ್ನು ಕುಡಿಯಬಹುದು.

3) ಮಲಬದ್ಧತೆಯಿಂದ ಪರಿಹಾರ ನೀಡುತ್ತದೆ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೀಳ್ಯದೆಲೆಯ ನೀರನ್ನು ಕುಡಿಯುವುದು ಮಲಬದ್ಧತೆಗೆ ತುಂಬಾ ಪ್ರಯೋಜನಕಾರಿ.

4) ಕಫ -ಪಿತ್ತ ತೆರವುಗೊಳಿಸುತ್ತದೆ: ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ, ವೀಳ್ಯದೆಲೆ ನೀರು ಕೆಮ್ಮು ಮತ್ತು ಪಿತ್ತ ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಗಂಟಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ತೆಗೆದುಹಾಕುತ್ತದೆ.

 

                                                              another Picture

 

5) ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ವಾಂತಿ, ಭೇದಿ, ವಾಕರಿಕೆ ಮುಂತಾದ ಸಮಸ್ಯೆಗಳಿದ್ದರೆ ವೀಳ್ಯದೆಲೆಯ ನೀರು ಸಹ ಪ್ರಯೋಜನಕಾರಿಯಾಗಿದೆ. ಈ ನೀರು ನಮ್ಮ ಜೀರ್ಣ ಶಕ್ತಿಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ನಮ್ಮ ಜೀರ್ಣಶಕ್ತಿಯನ್ನು ಸಹ ಆರೋಗ್ಯಕರವಾಗಿರಿಸುತ್ತದೆ.

6) ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ: ವೀಳ್ಯದೆಲೆಯಿಂದ ತಯಾರಿಸಿದ ನೀರು ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ. ಇದಲ್ಲದೆ, ಇದು ಹಲ್ಲುಗಳನ್ನು ಹೊಳಪು ಮಾಡಲು ಸಹಾಯ ಮಾಡುತ್ತದೆ.


7) ವೀಳ್ಯದೆಲೆಯು ಪ್ರಬಲವಾದ ಕ್ಯಾನ್ಸರ್ ವಿರೋಧಿ ಮತ್ತು ಆಂಟಿಮ್ಯುಟಾಜೆನಿಕ್ ಸಂಯುಕ್ತಗಳನ್ನು ಹೊಂದಿದೆ ಮತ್ತು ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಸೂಕ್ಷ್ಮಜೀವಿಯ ವಿರೋಧಿ ಗುಣಗಳನ್ನು ಹೊಂದಿದ್ದು ಸಣ್ಣ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಸುಟ್ಟ ಗಾಯಗಳು. ವೀಳ್ಯದೆಲೆಯು ಖಿನ್ನತೆಯನ್ನು ಎದುರಿಸಲು ಹೆಸರುವಾಸಿಯಾಗಿದೆ ಮತ್ತು ನಿಮ್ಮನ್ನು ಹಗುರವಾದ, ಸಂತೋಷದ ಮನಸ್ಥಿತಿಯಲ್ಲಿ ಇರಿಸಬಹುದು.


8) ವೀಳ್ಯದೆಲೆಯು ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ಇದು ನಿಮಗೆ ತುಂಬಾ ಒಳ್ಳೆಯದು. ಇದು ಯೋಗ್ಯ ಪ್ರಮಾಣದ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. 100 ಗ್ರಾಂಗೆ ವೀಳ್ಯದೆಲೆಯ ಪೌಷ್ಟಿಕಾಂಶದ ಅಂಶವನ್ನು ಪರಿಶೀಲಿಸೋಣ, 1.3 ಮೈಕ್ರೋಗ್ರಾಂ ಅಯೋಡಿನ್, 1.1-4.6 ಮೈಕ್ರೋಗ್ರಾಂ ಪೊಟ್ಯಾಸಿಯಮ್, 1.9-2.9 ಮೈಕ್ರೋಗ್ರಾಂ ವಿಟಮಿನ್ ಎ, 13-0 ಮೈಕ್ರೋಗ್ರಾಂ ವಿಟಮಿನ್ ಬಿ-1, 1.9-30 ಮೈಕ್ರೋಗ್ರಾಂ ವಿಟಮಿನ್ B-2, ಮತ್ತು ನಿಕೋಟಿನಿಕ್ ಆಮ್ಲದ 0.63-0.89 ಮೈಕ್ರೋಗ್ರಾಂಗಳು. ಬೀಟಲ್ ಎಲೆಗಳಲ್ಲಿ ಇರುವ ಈ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.


----------------- Hari Om -----------------




 

Monday, April 6, 2026

ರಾಮ ನಾಮ ಸ್ಮರಣೆ -- Power of Rama Nama Reciting

                                                                           Lord Rama


 

ರಾಮ -- Rama && ರಾಮ ನಾಮ ಸ್ಮರಣೆ


Power of Rama Nama Reciting


ರಾಮ ಎನ್ನುವ ಹೆಸರು ಧಾರ್ಮಿಕವಾಗಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.


ರಾಮ” ಕೇವಲ ಎರಡಕ್ಷರದ ಪದವಲ್ಲ.ಅಲೌಕಿಕ ಸಂತೋಷ,ಶಾಂತಿ,ಜೀವನ ಹಾಗೂ ಧರ್ಮ ಇವು “ರಾಮ” ಶಬ್ದಕ್ಕಿರುವ ಅರ್ಥಗಳು.ಓಂ ನಮೋ ನಾರಾಯಣಾಯ” ಎಂಬ ನಾರಾಯಣ ಮಂತ್ರದಲ್ಲಿರುವ “ರಾ” ಹಾಗೂ ”ಓಂ ನ”ಮ:” ಶಿವಾಯ ಎಂಬ ಪಂಚಾಕ್ಷರಿ ಮಂತ್ರದ “ಮ” ಅಕ್ಷರಗಳಿಂದ “ರಾಮ” ಶಬ್ದ ವ್ಯುತ್ಪನ್ನಗೊಂಡಿದೆ.ಹಾಗಾಗಿ “ರಾಮ” ಎಂಬುದು ನಾರಾಯಣ ಹಾಗೂ ಈಶ್ವರರ ಸ್ವರೂಪ.ಹಾಗಾಗಿ “ರಾಮ” ಎಂಬುದು ದಿವ್ಯಮಂತ್ರ.ವೇದಗಳ ಜ್ಞಾನವಿಲ್ಲದೆಯೂ ಮೋಕ್ಷವನ್ನು ತೋರಿಸುವ ಮಾರ್ಗ.ರಾಮನಾಮ ಜಪಿಸುವವನಿಗೆ ಸರ್ವದುಃಖಗಳಿಂದ ವಿಮೋಚನೆ.

ಹಿಂದಿನಕಾಲದಲ್ಲಿ ಪರಸ್ಪರರು ಭೇಟಿಯಾದಾಗ “ರಾಮ್ ರಾಮ್” ಎನ್ನುವ ಪದ್ಧತಿಯಿತ್ತು.”ರಾಮ” ಶಬ್ದವನ್ನು ಬಿಡಿಸಿದಾಗ ಮೂರು ಅಕ್ಷರಗಳು ಸಿಗುತ್ತವೆ.ರ್++ಮ್.. “ರ” ವ್ಯಂಜನಗಳಲ್ಲಿ ಇಪ್ಪತ್ತೇಳನೆಯದು. “ಆ” ಸ್ವರಗಳಲ್ಲಿ ಎರಡನೆಯದು. “ಮ್” ವ್ಯಂಜನಗಳಲ್ಲಿ ಇಪ್ಪತ್ತೈದನೆಯದು. ಇಪ್ಪತ್ತೇಳು+ಎರಡು+ಇಪ್ಪತ್ತೈದು = ಐವತ್ತನಾಲ್ಕು. ”ರಾಮ್ ರಾಮ್” ಎಂದರೆ ಐವತ್ತನಾಲ್ಕು + ಐವತ್ತನಾಲ್ಕು = ನೂರಾಎಂಟು. ನೂರಾಎಂಟು ನಮಗೆ ಪವಿತ್ರ ಸಂಖ್ಯೆ.ಜಪಮಾಲೆಯಲ್ಲಿರುವ ಮಣಿಗಳ ಸಂಖ್ಯೆ.ಜಪಮಾಲೆಯನ್ನು ಹಿಡಿದು ನೂರಾಎಂಟು ಬಾರಿ ಜಪ ಮಾಡಬೇಕಿಂದಿಲ್ಲ.


ರಾಮ ರಾಮ” ಎಂದರೆ ಸಾಕು, ಒಂದು ಮಾಲೆ ಜಪವನ್ನು ಮಾಡಿದ ಫಲ ಸಿಗುತ್ತದೆ..!!


ಏಹಿ ಮಹಂ ರಘುಪತಿ ನಾಮ ಉದಾರಾ ಅತಿಪಾವನ ಪುರಾನ ಶ್ರುತಿ ಸಾರಾ | ಮಂಗಲ ಭವನ ಅಮಂಗಲ ಹಾರೀ ಉಮಾ ಸಹಿತ ಜೇಹಿ ಜಪತ ಪುರಾರೀ ||


ರಾಮ” ಎಂಬುದು ರಘುಪತಿಯ ಉದಾರನಾಮ.ಅದು ಅತ್ಯಂತ ಪವಿತ್ರ ಹೆಸರು.ವೇದ-ಪುರಾಣಗಳ ಸಾರ.ಸಕಲ ಕಲ್ಯಾಣಗಳ ಭವನ.ಅಮಂಗಲಗಳ ಹರಣ.ಈ ರಾಮನಾಮವನ್ನು ಪಾರ್ವತಿ ಸಹಿತ ಪರಮೇಶ್ವರ ಸದಾ ಜಪಿಸುತ್ತಿರುತ್ತಾನೆ. “ರಾಮ”ವೆಂಬ ಪವಿತ್ರನಾಮ ಸದಾ ನಮ್ಮ ಮನದಲ್ಲಿರಲಿ.ಶ್ರೀರಾಮನ ಅನುಗ್ರಹ ಸದಾ ನಮಗಿರಲಿ.


"ರಾಮ ನಾಮ" ಜಪಿಸಿದರೆ ಈ ಅಚ್ಚರಿಯ ಬದಲಾವಣೆಗಳು ನಿಮ್ಮಲ್ಲಿ ಉಂಟಾಗುವುದು.

"
ರಾ" ಮತ್ತು "" ಎನ್ನುವ ಎರಡು ವಿಭಿನ್ನ ಅಕ್ಷರವನ್ನು ಒಟ್ಟಿಗೆ ಸೇರಿಸಿದಾದ ದೈವ ಪ್ರಜ್ಞೆಯ ಅರ್ಥವನ್ನು ನೀಡುತ್ತದೆ. ರಾಮ ಎನ್ನುವ ಎರಡಕ್ಷರವು ವಿಷ್ಣುವಿನ ಏಳನೇ ಅವತಾರದ ರೂಪ. ಜಗತ್ಪಾಲಕನ ಈ ಹೆಸರನ್ನು ಜಪಿಸಿದರೆ ಮನಸ್ಸು ಮತ್ತು ಹೃದಯ ಅಸಾಧಾರಣ ಸಂತೋಷಕ್ಕೆ ಒಳಗಾಗುವುದು.

ಜೊತೆಗೆ ಸಾಕಷ್ಟು ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುವುದು. ಅರಿಯದೆ ಮಾಡಿದ ತಪ್ಪುಗಳು ನಮ್ಮಿಂದ ದೂರವಾಗುತ್ತವೆ. ರಾಮ ಎನ್ನುವ ಹೆಸರು ಧಾರ್ಮಿಕವಾಗಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಹಾಗಾಗಿ ರಾಮ ನಾಮವನ್ನು ಜಪಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ವಿವರಿಸಲಾಗಿದೆ.

"ರಾಮ ನಾಮ" ಸ್ಮರಣೆ:


ದಶರಥ ಮತ್ತು ಕೌಸಲ್ಯೆಯ ಮಗನಾಗಿ ಜನಿಸಿದ ಸರ್ವೋಚ್ಚ ಮನೋಭಾವದ ಮಾನವನ ಅವತಾರವೇ "ಶ್ರೀರಾಮ"ನ ಅವತಾರ. ಪ್ರಕೃತಿಯಲ್ಲಿ ಎಲ್ಲೆಡೆ ರಾಮನು ಇರುತ್ತಾನೆ. ಆದರೆ ಅವನನ್ನು ನಾವು ತೆರೆದ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಆದರೆ ಆಂತರಿಕ ಕಣ್ಣುಗಳಿಂದ ರಾಮನನ್ನು ಕಾಣಬಹುದು.

ಆತ್ಮ ಶುದ್ಧಿಯಿಂದ ರಾಮನನ್ನು ಕಂಡರೆ ಜನ್ಮವು ಪಾವನವಾಗುವುದು. ನಿಸ್ವಾರ್ಥ ಭಾವನೆಯಿಂದ ರಾಮನ ನಾಮ ಸ್ಮರಣೆ ಮಾಡಿದರೆ ಜೀವನವು ಬೆಳಗುವುದು. ಅಜ್ಞಾನ ಹಾಗೂ ಅತಿ ಆಸೆಯಿಂದ ಕೂಡಿದ ನಮ್ಮ ಕತ್ತಲ ಬದುಕಿಗೆ ಶ್ರೀ ರಾಮನು ಜ್ಞಾನ ಹಾಗೂ ಅರಿವಿನ ಬೆಳಕು ಚೆಲ್ಲುವುದರ ಮೂಲಕ ಬದುಕನ್ನು ಬೆಳಗುವನು.

ಮಹಾನ್ ದೈವ ಪುರುಷ "ಶ್ರೀರಾಮ":


ಮಾನವನ ಅವತಾರವನ್ನು ತಾಳಿ, ಮನುಕುಲದ ನಡುವೆಯೇ ಇದ್ದು, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ ದೇವ ರೂಪ "ರಾಮ". ತನ್ನ ನಿಷ್ಕಲ್ಮಶವಾದ ಮನಸ್ಸಿನಿಂದ ಪಾಲಕರನ್ನು ಹಾಗೂ ಸಮಾಜವನ್ನು ಗೌರವಿಸಿದನು. ತನ್ನ ಪ್ರಜೆಗಳಿಗೆ ಸದಾ ಸಂತೋಷದ ಜೀವನವನ್ನು ಕರುಣಿಸಿದನು.

ದುಷ್ಟ ರಾವಣನನ್ನು ಸೋಲಿಸಿ, ಇತರರಿಗೆ ಕೆಟ್ಟದನ್ನು ಮಾಡಿದರೆ ಜೀವನದಲ್ಲಿ ಕೆಟ್ಟದ್ದೇ ಸಂಭವಿಸುವುದು ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ದೈವ ಪುರುಷ ಶ್ರೀರಾಮ. ಶ್ರೀರಾಮನ ನಾಮ ಸ್ಮರಣೆಯನ್ನು ಮಾಡಿದರೆ ಮನುಕುಲದ ಜೀವನವು ಹಸನಾಗುವುದು. ರಾಮನಲ್ಲಿ ಭಕ್ತಿ ಹಾಗೂ ನಂಬಿಕೆಯಿಟ್ಟು ನಡೆದರೆ ಜೀವನವು ಸದಾ ಸಂತೃಪ್ತಿಯಿಂದ ಕೂಡಿರುವುದು.

"
ರಾಮನು" ಸರ್ವಶಕ್ತನು:


ಭಗವಾನ್ ಶ್ರೀರಾಮನು ಸರ್ವಾಂತರ್ಯಾಮಿ. ಅವನಿಗೆ ಅನೇಕ ಹೆಸರುಗಳಿಂದ ಕರೆಯಲಾಗುವುದು. ರಾಮನ ಹೆಸರುಗಳು ಬ್ರಹ್ಮಾಂಡದಲ್ಲಿ ಅತ್ಯಂತ ಬಲವಾದ ಮತ್ತು ಸಕಾರಾತ್ಮಕ ಕಂಪನಗಳಿಂದ ಕೂಡಿದೆ. ರಾಮನ ನಾಮಗಳನ್ನು ಜಪಿಸಿದರೆ ನಮ್ಮಲ್ಲಿಯೂ ಸಕಾರಾತ್ಮಕ ಬದಲಾವಣೆಗಳು ಆಂತರಿಕವಾಗಿ ಉಂಟಾಗುತ್ತವೆ.

ಜೊತೆಗೆ ಮಾನಸಿಕವಾಗಿ ನಿರಾಳತೆ ಹಾಗೂ ನೆಮ್ಮದಿ ದೊರೆಯುವುದು. ರಾಮ ನಾಮದ ಧ್ಯಾನ ಮಾಡಿದರೆ ವ್ಯಕ್ತಿಯು ಜೀವನದಲ್ಲಿ ಸರ್ವೋಚ್ಚ ಮನೋಭಾವವನ್ನು ಪಡೆದುಕೊಳ್ಳುವನು. ಮನುಷ್ಯನಲ್ಲಿ ಸಾಮಾನ್ಯವಾಗಿ ಕೋಪ, ದ್ವೇಷ, ಸಿಟ್ಟು ಹಾಗೂ ವಿನಾಶದ ಪ್ರವೃತ್ತಿ ಇರುತ್ತದೆ. ಇವನ ಈ ಕೆಟ್ಟ ಗುಣಗಳೆ ಬಹುತೇಕ ಸಂದರ್ಭದಲ್ಲಿ ದಾರಿ ತಪ್ಪುವಂತೆ ಪ್ರೇರೇಪಿಸುತ್ತವೆ.

ಹಾಗಾಗಿ ಮನುಷ್ಯ ಮೊದಲು ತನ್ನ ಭಾವನೆ ಹಾಗೂ ಸಂವೇದನೆಗಳ ಮೇಲೆ ಹತೋಟಿಯನ್ನು ಹೊಂದಬೇಕು. ಆಗಲೇ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ರಾಮನ ನಾಮ ಜಪಿಸಿದರೆ ವ್ಯಕ್ತಿ ತನ್ನಲ್ಲಿರುವ ಕೆಟ್ಟ ಹಾಗೂ ವಿನಾಶಕಾರಿ ಶಕ್ತಿಯಿಂದ ಮುಕ್ತನಾಗಿ, ತನ್ನಲ್ಲಿ ರಚನಾತ್ಮಕ ಶಕ್ತಿಯ ಹರಿವನ್ನು ಪಡೆದುಕೊಳ್ಳುವನು.

ನಿತ್ಯವೂ ರಾಮ ನಾಮ ಜಪ ಮಾಡಿದರೆ ವ್ಯಕ್ತಿ ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವನು. ಅಲ್ಲದೆ ಆತಂಕ, ಖಿನ್ನತೆಯಂತಹ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ರಾಮನ ನಾಮವು ದೇಹದಲ್ಲಿ ಗಮನಾರ್ಹ ಕಂಪನ ಉಂಟಾಗುವುದು. ಇದು ನಿದ್ರೆಯ ನರ ಕೋಶಗಳನ್ನು ಪ್ರಚೋದಿಸುವುದು.

ಉಪ ಪ್ರಜ್ಞೆಯ ಮನಸ್ಸಿನ ಭಾಗವನ್ನು ಆಹ್ವಾನಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುವುದು. ಜೊತೆಗೆ ಹೆಚ್ಚು ಸೃಜನಶೀಲರಾಗಿ ಹಾಗೂ ಕಾರ್ಯ ಪ್ರವೃತ್ತರಾಗಿ ಇರಲು ಸಹಾಯ ಮಾಡುವುದು.

 

                                                                 Lord Anjaneya
 

 "ಹನುಮಂತನು" ಅಪಾರ ಶಕ್ತಿಯನ್ನು ಪಡೆದನು:


ಹನುಮಂತನು "ಶ್ರೀ ರಾಮನ" ಪರಮ ಭಕ್ತ. ಪುರಾಣ ಇತಿಹಾಸದಲ್ಲಿ ಹನುಮಂತನಿಗೆ ಸಂಬಂಧಿಸಿದಂತೆ ಅನೇಕ ಸಾಹಸ ಕಥೆಗಳು ಇರುವುದನ್ನು ನಾವು ಕಾಣಬಹುದು. ಹನುಮಂತನು "ರಾಮ ನಾಮ" ಜಪ ಮಾಡುವುದರಿಂದ ಅನೇಕ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದನು.

ದ್ರೋಣಗಿರಿ ಪರ್ವತವನ್ನು ಹಿಮಾಲಯದಿಂದ ಲಂಕೆಗೆ ಸ್ಥಳಾಂತರಿಸಲು ಸಹಾಯ ಮಾಡಿದ ಶಕ್ತಿ "ರಾಮ" ನಾಮದಿಂದ ಪಡೆದುಕೊಂಡಿದ್ದನ್ನು ಎಂದು ಹೇಳಲಾಗುವುದು. ಆತ್ಮ ಮತ್ತು ಕರ್ಮಗಳ ಶುದ್ಧಿಗೆ "ರಾಮ ನಾಮ" ಜಪವನ್ನು ಮಾಡುವುದು ಸುಲಭ ಮಾರ್ಗ ಎನ್ನಲಾಗುವುದು.


------------------ Hari Om ----------------



Thursday, March 26, 2026

ಶ್ರೀರಾಮ ರಾಮ ರಾಮೇತಿ

 

                                                              Lord Rama & Sita Devi

 

ಶ್ರೀರಾಮ ರಾಮ ರಾಮೇತಿ ----- ಜೈ ಶ್ರೀ ರಾಮ


ಸಾವಿರ ನಾಮಕ್ಕೆ ಬದಲಾಗಿ ಒಂದೇ ಹೆಸರು ಹೇಳಿದರೆ ಸಾಕೆಂಬ ಮಂತ್ರವಿದ್ದರೆ ಹೇಳಿ ಎನ್ನುತ್ತಾಳೆ ಪಾರ್ವತಿ.

" ಜೈ ಶ್ರೀ ರಾಮ"

 

                                                              Shiva Pooje by Lord Rama


 

ವಿಷ್ಣು ಸಹಸ್ರನಾಮದಲ್ಲೊಂದು ಪ್ರಸಂಗ:


ಕೈಲಾಸದಲ್ಲಿ ಪಾರ್ವತಿ ಪೂಜಾ ನಿರತಳಾಗಿದ್ದಾಗ ಈಶ್ವರ ಬರುತ್ತಾನೆ. ಗಂಡನನ್ನು ಸ್ವಾಗತಿಸದ ಹೆಂಡತಿಯ ಬಗ್ಗೆ ಸಿಟ್ಟು ಬರುತ್ತದೆ ಈಶ್ವರನಿಗೆ. ಆದರೆ ಹೆಂಡತಿಯೆದುರಿಗೆ ತೋರಿಸಿಕೊಳ್ಳುವಂತಿಲ್ಲ. ಪೂಜೆ ಮುಗಿಸಿ ಬಂದ ಪಾರ್ವತಿಯನ್ನು ಈಶ್ವರ ಏನು ಮಾಡ್ತಿದ್ದೆ ಎಂದು ಜೋರಾಗಿ ಕೇಳುತ್ತಾನೆ. ಶಾಂತವಾಗಿಯೇ ಪಾರ್ವತಿ ಹೇಳುತ್ತಾಳೆ " ವಿಷ್ಣು ಸಹಸ್ರ ನಾಮ ಹೇಳುತ್ತಿದ್ದೆ"ಈಶ್ವರ ನಕ್ಕು ಬಿಡುತ್ತಾನೆ. ಸಹಸ್ರನಾಮದ ಅಗತ್ಯವೇಯಿಲ್ಲ. ಒಂದೇ ಹೆಸರಿಗೇಕೆ ಮತ್ತೆ ಸಾವಿರ ಹೆಸರು? ಒಂದು ಹೆಸರೇ ಸಾಕು.

ಪಾರ್ವತಿ ಕೇಳುತ್ತಾಳೆ:


"ಕೇನೋಪಾಯೇನ ಲಘುನಾಂ ವಿಷ್ಣೋರ್ನಾಮ ಸಹಸ್ರಕಂ

ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತ್ರುಮಿಚ್ಯಾಮ್ಯಹಂ ಪ್ರಭೋ"

ಸಾವಿರ ನಾಮಕ್ಕೆ ಬದಲಾಗಿ ಒಂದೇ ಹೆಸರು ಹೇಳಿದರೆ ಸಾಕೆಂಬ ಮಂತ್ರವಿದ್ದರೆ ಹೇಳಿ ಎನ್ನುತ್ತಾಳೆ ಪಾರ್ವತಿ.

ಈಶ್ವರ ಹೇಳುತ್ತಾನೆ:


"ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ.

ಸಹಸ್ರನಾಮ ತತ್ತುಲ್ಯಂ ರಾಮನಾಮವರಾನನೇ"


"Shri Rama Rama Rameti Rame RAame Manorame.
Sahasranama Tattulyam RamanamavaranaNe" 
 

ಅಂದರೆ ಶ್ರೀರಾಮ ಎಂಬ ಒಂದೇ ಪದ ಸಹಸ್ರ ನಾಮಗಳಿಗೆ ಸಮ ಎನ್ನುತ್ತಾನೆ. ಇದನ್ನೇ ದಾಸಶ್ರೇಷ್ಟ ಪುರಂದರ ದಾಸರು ತಮ್ಮ ರಾಮಮಂತ್ರವ ಜಪಿಸೋ ಗೀತೆಯಲ್ಲಿ "ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ.. ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ" ಎಂದದ್ದು.

 

 

                                                             Sri Ramana Alankara

 

ಶೃಂಗಾರಂ ಕ್ಷಿತಿ ನಂದಿನೀ ವಿಹರಣೇ ವೀರಂ ಧನುರ್ಭಂಜನೇ.

ಕಾರುಣ್ಯಂ ಬಲಿಬೋಜನೇದ್ಭುತರಸಂ ಸಿಂಧೌ ಗಿರಿಸ್ಥಾಪನೇ.

ಹಾಸ್ಯಂ ಶೂರ್ಪಣಕಾ ಮುಖೇ ಭಯಮಘೇ ಭೀಭತ್ಸಮನ್ಯಾಮುಖೇ.

ರೌದ್ರಂ ರಾವಣಭಂಜನೇ ಮುನಿಜನೇ ಶಾಂತಂ ವಪುಃ ಪಾತು ನಃ

 

ಅಂತಹ ಮರ್ಯಾದಪುರುಷೋತ್ತಮ, ನವರಸಗಳ ಮೂರ್ತರೂಪನಾದ ಶ್ರೀರಾಮಚಂದ್ರ ಪ್ರಭು ನಮ್ಮನ್ನು, ಭುವಿಯನ್ನಾವರಿಸಿರುವ ಕಾರ್ಮೋಡಗಳಿಂದ ನಮ್ಮನ್ನು ಕಾಪಾಡಲಿ.

 

--------------------- Hari Om -------------------





Friday, March 20, 2026

ಪರಾಭವ ನಾಮ ಸಂವತ್ಸರ ---- Paraabhava Nama Samvatsara

 

                                                           Paraabhava Nama Samvatsara

 

 

ಪರಾಭವ ನಾಮ ಸಂವತ್ಸರ

Paraabhava Nama Samvatsara


ಈ ಸಂವತ್ಸರಕ್ಕೇಕೆ ಈ ಹೆಸರು? ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?

ಬೆಳಗಿನಿಂದ ಅನೇಕರದ್ದು ಒಂದೇ ಪ್ರಶ್ನೆ - ‘ಈ ಸಂವತ್ಸರಕ್ಕೆ ‘ಪರಾಭವ’ ಎಂಬ ಹೆಸರೇಕೆ ? ಪರಾಭವ ಅಂದ್ರೆ ಸೋಲು ಅಂತ ಅರ್ಥವಲ್ಲವೇ? ಯಾಕೋ ಯುಗಾದಿ ಶುಭಾಶಯ ಹೇಳುವಾಗ ಕಸಿವಿಸಿ ಆಗುತ್ತದೆ.

ನಿಜ, 'ಪರಾಭವ' ಎಂದರೆ ನಮಗೆ 'ಸೋಲು' ಅಥವಾ 'ಅವಮಾನ' ಎಂಬ ಅರ್ಥವೇ ಮೊದಲು ನೆನಪಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಈ ಹೆಸರಿನಲ್ಲಿ ಅಡಗಿರುವ ಅರ್ಥವೇ ಬೇರೆ. ಹಿಂದೂ ಕಾಲಗಣನೆಯ 60 ಸಂವತ್ಸರಗಳಲ್ಲಿ 'ಪರಾಭವ' ಎಂಬುದು 40ನೇ ಸಂವತ್ಸರ. ಸಂಸ್ಕೃತದಲ್ಲಿ 'ಪರಾಭವ' ಎಂದರೆ ಕೇವಲ ಸೋಲು ಎಂದಲ್ಲ. ಪರ ಎಂದರೆ ಶ್ರೇಷ್ಠ ಅಥವಾ ಉನ್ನತ ಎಂಬ ಅರ್ಥವೂ ಇದೆ. ಭವ ಎಂದರೆ ಜನ್ಮ ಅಥವಾ ಉಗಮ.

ಈ ದೃಷ್ಟಿಕೋನದಿಂದ ನೋಡಿದಾಗ, ಯಾವುದೋ ಒಂದು ಹಂತವನ್ನು ದಾಟಿ 'ಹೊಸದಾಗಿ ಉದಯಿಸುವುದು' ಅಥವಾ 'ರೂಪಾಂತರಗೊಳ್ಳುವುದು' ಎಂಬ ಅರ್ಥ ಬರುತ್ತದೆ. ಹಳೆಯದರ ಅಂತ್ಯ ಮತ್ತು ಹೊಸದರ ಆರಂಭದ ಸಂಕೇತವಾಗಿ ಇದನ್ನು ನೋಡಬಹುದು.

ನಮ್ಮ ಶಾಸ್ತ್ರಗಳ ಪ್ರಕಾರ, ಅಹಂಕಾರದ ನಾಶವೇ ನಿಜವಾದ ಪರಾಭವ. ಒಬ್ಬ ವ್ಯಕ್ತಿ ತನ್ನ ಅಹಂಕಾರವನ್ನು ಸೋಲಿಸಿದಾಗ (ಪರಾಭವಗೊಳಿಸಿದಾಗ) ಮಾತ್ರ ಜ್ಞಾನೋದಯ ಸಾಧ್ಯ. ಆದ್ದರಿಂದ, ಈ ಸಂವತ್ಸರವು ಮನುಷ್ಯನು ತನ್ನ ಕೆಟ್ಟ ಗುಣಗಳನ್ನು ಮೆಟ್ಟಿ ನಿಂತು ಜಯಶಾಲಿಯಾಗಬೇಕು ಎಂಬ ಸಂದೇಶವನ್ನು ನೀಡುತ್ತದೆ.

ಜ್ಯೋತಿಷ್ಯ ಶಾಸ್ತ್ರದ 'ವರಾಹಮಿಹಿರ'ನ ಸಂಹಿತೆಗಳ ಪ್ರಕಾರ, ಪರಾಭವ ಸಂವತ್ಸರದಲ್ಲಿ ಜನಿಸಿದವರು ಅಥವಾ ಈ ವರ್ಷದ ಪ್ರಭಾವವು ಹೀಗಿರುತ್ತದೆ - ಇದು ಅನಿಶ್ಚಿತತೆಯ ಕಾಲವೆಂದು ಪರಿಗಣಿಸಲ್ಪಟ್ಟರೂ, ಸತ್ಯವಂತರಿಗೆ ಮತ್ತು ಕಠಿಣ ಪರಿಶ್ರಮಿಗಳಿಗೆ ಇದು ಶುಭಫಲವನ್ನೇ ನೀಡುತ್ತದೆ ಹಾಗೂ ಹಳೆಯ ವ್ಯವಸ್ಥೆಗಳು ಪರಾಜಯಗೊಂಡು (ಸೋತು), ಹೊಸ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತದೆ.

ಅರವತ್ತು ವರ್ಷಗಳ ಚಕ್ರದಲ್ಲಿ ಬರುವ ಹೆಸರುಗಳು ಕೇವಲ ಶುಭ-ಅಶುಭಗಳ ಮೇಲೆ ನಿಂತಿಲ್ಲ. ಅವು ಪ್ರಕೃತಿಯ ವಿವಿಧ ಸ್ಥಿತ್ಯಂತರಗಳನ್ನು ಸೂಚಿಸುತ್ತವೆ. ಉದಾಹರಣೆಗೆ, 'ಕ್ಷಯ' ಎಂಬ ಹೆಸರಿನ ಸಂವತ್ಸರವೂ ಇದೆ, ಅದರರ್ಥ ಎಲ್ಲವೂ ನಾಶವಾಗುತ್ತದೆ ಎಂದಲ್ಲ, ಬದಲಾಗಿ ಒಂದು ಚಕ್ರ ಮುಗಿಯಿತು ಎಂದರ್ಥ.

ಒಟ್ಟಾರೆಯಾಗಿ, ಇಲ್ಲಿ 'ಪರಾಭವ' ಎಂದರೆ ಸೋತು ಮಲಗುವುದಲ್ಲ, ಬದಲಾಗಿ ದೋಷಗಳನ್ನು ಸೋಲಿಸಿ ವಿಜಯದತ್ತ ಮುನ್ನಡೆಯುವುದು.


--------------------- Hari Om --------------------

Tuesday, March 17, 2026

ಯುಗಾದಿ -- ಬೇವು-ಬೆಲ್ಲ-- Ugadi -- Neem-Jaggery

 


                Ugadi -- Neem-Jaggery   

 

 

ಯುಗಾದಿ -- ಬೇವು-ಬೆಲ್ಲ-- Ugadi -- Neem-Jaggery

  

ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಯೋಜನೆಯನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ‘ ಯುಗಾದಿ’ ಎಂಬ ಪದ ಬಂದಿದೆ,ಈ ಯುಗಾದಿ ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ. ಜೊತೆಗೆ ಬ್ರಹ್ಮ ದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ನಂಬಿಕೆಯೂ ಇದೆ. ಋತುಗಳು, ಗ್ರಹಗಳು, ನಕ್ಷತ್ರಗಳು ಈ ದಿನ ಸೃಷ್ಟಿ ಆಯಿತು ಎನ್ನುವ ನಂಬಿಕೆಯೂ ಇದೆ.

ಯುಗಾದಿ ಹಬ್ಬವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಜನ ಚಂದ್ರಮಾನ ಮತ್ತು ಸೌರಮಾನ ಯುಗಾದಿ ಆಚರಿಸುತ್ತಾರೆ. ಹುಣ್ಣಿಮೆ ದಿನ ಚಂದ್ರನು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದ ಹೆಸರಿನಿಂದ ಆ ಮಾಸ ಆರಂಭವಾಗುತ್ತದೆ.

ಈ ರೀತಿ ಚಂದ್ರನಿಂದಲೇ ಎಲ್ಲಾ ಲೆಕ್ಕಚಾರ ಮಾಡುವುದರಿಂದ ಈ ವರ್ಷದ ಮೊದಲ ದಿನವನ್ನು ಚಂದ್ರಮಾನ ಯುಗಾದಿ ಎಂದು ಕರೆಯಲಾಗುತ್ತದೆ. ಚಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.

 

                                         
                                       
ಯುಗಾದಿ -- ಬೇವು-ಬೆಲ್ಲ

 

ಇತಿಹಾಸ:


ಯುಗಾದಿಯ ಚಂದ್ರಮಾನ ಪದ್ಧತಿಯ ಹೊಸ ವರ್ಷದ ಪ್ರಾರಂಭದ ದಿನ. ವರ್ಷದ ಫಸಲು ಕೈಗೆ ಬಂದು, ಆಗ ತಾನೇ ಸುಗ್ಗಿ ಮುಗಿದು ಹಿಗ್ಗಿನ ಬುಗ್ಗೆಯಾಗಿರುವ ಜನರಿಗೆ ‘ಉಂಡಿದ್ದೆ ಉಗಾದಿ ಮಿಂದಿದ್ದೆ ದೀಪಾವಳಿ’.

ಈ ಹಬ್ಬದ ಹಿರಿಮೆ-ಗರಿಮೆ ಮಹಿಮೆಗಳನ್ನು ಅಥರ್ವ ವೇದ, ಶತಪಥ ಬ್ರಾಹಣ, ಧರ್ಮಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ.

ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮರಾಜ್ಯವಾಳಲು ಆರಂಭಿಸಿದ. ಅಯೋಧ್ಯೆಯ ಪ್ರಜೆಗಳು ಸಂತೋಷದಿಂದ ಮನೆಯ ಮುಂದೆ ವಿಜಯ ಪತಾಕೆಯನ್ನು ಹಾರಿಸಿದರು. ಇಂದಿಗೂ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ಧತಿ ಇದೆ. ಅದಕ್ಕಾಗಿಯೇ ಇದಕ್ಕೆ ಗುಡಿಪಾಡ್ಯ (ಗುಡಿ=ಬಾವುಟ) ಎನ್ನುತ್ತಾರೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಯುಗಾದಿಯನ್ನು ಗುಡಿಪಾಡ್ಯ ಹೆಸರಿನಲ್ಲಿ ಆಚರಿಸಲಾಗುತ್ತದೆ

ರೋಮನ್ನರಿಗೆ ಜನವರಿಯ ಮೊದಲ ದಿನವಿದ್ದಂತೆ, ಹಿಂದೂಗಳಿಗೆ ‘ಯುಗಾದಿ’ ಆದಿಯ ದಿನವಾಗಿದೆ. ಯುಗಾದಿಯ ಶಕ್ತಿ ಉಪವಾಸನೆಯ ಆರಂಭದ ದಿನವಾಗಿದ್ದು, ಈ ದಿನದಿಂದ ವಸಂತ ನವರಾತ್ರಿ ಆರಂಭವಾಗುತ್ತದೆ. ವರ್ಷಾಧಿಯ ವಸಂತ ಮತ್ತು ವರ್ಷಮಧ್ಯದ ಶರದೃತುಗಳ ಆರಂಭ ಕಾಲ ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ ಇದೆ. ಅಂದರೆ ಯುಗಾದಿಯ ದಿನ ಬೆಳಗ್ಗೆ ಎದ್ದು ಮನೆ ದೇವರನ್ನು ಸ್ಮರಿಸಿ, ಮಂಗಳ ಸ್ನಾನ ಮಾಡಿ, ನವವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು-ಬೆಲ್ಲ ತಿನ್ನಲಾಗುತ್ತದೆ.

 

                                                                      Pic-1

 

 ಯುಗಾದಿಯ ವಿಶೇಷತೆ


ಈ ಹಬ್ಬದಂದು ಬೆಲ್ಲ ಮತ್ತು ಕಹಿಯಾದ ಬೇವು ಮಿಶ್ರಣವನ್ನು ಸೇವಿಸುವ ಆಚರಣೆ ಹಲವು ಕಡೆಗಳಲ್ಲಿ ಇದೆ. ಬೆಲ್ಲವನ್ನು ಎಲ್ಲರೂ ಸುಖಕರ, ಕಹಿ ಬೇವನ್ನು ದುಃಖಕರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಜೀವನವು ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ. ಸಂಪೂರ್ಣ ಸುಖ ಮತ್ತು ದು:ಖದ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆಯೇ ಸುಖ-ದುಃಖ, ಶೀತ-ಉಷ್ಣ, ಲಾಭ-ನಷ್ಟಗಳಿಂದಲೂ ಬದುಕು ಕೂಡಿದೆ. ಇವುಗಳ ಸಂಕೇತವೇ ಬೇವು ಬೆಲ್ಲ.


ಖಣಿ ಇಡುವುದು

 

ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇಟ್ಟು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲ್ಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ
ಅಂದಿನ ವಿಶೇಷ.

                                                                         Pic-2

 

ವಿಶೇಷ ಆಹಾರ


ಒಬ್ಬಟ್ಟು ಅಥವಾ ಹೋಳಿಗೆ ಅಂದಿನ ವಿಶೇಷ ತಿನಿಸು.. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು.
ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನ ಕಾಯಿಯಿಂದ ಉಪ್ಪಿನ ಕಾಯಿಯನ್ನು ಮಾಡುವರು.

 

ಬೇವು-ಬೆಲ್ಲದ ವಿಶೇಷತೆ ಏನು?

 

"ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ."
" ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ."
"ಮಾನವ ವಜ್ರದ್ರೇಹಿಯಾಗುತ್ತಾನೆ"
"ಸಂಪತ್ತು ಉಂಟಾಗುತ್ತದೆ."
" ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.


ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚುವುದರ ಹಿಂದಿನ ಆಧ್ಯಾತ್ಮಿಕ,

ವೈಜ್ಞಾನಿಕ ಮಹತ್ವವೇನು?

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ… ಮತ್ತೆ ಯುಗಾದಿ ಬಂದಿದೆ.. ಹೊಸ ಆರಂಭ, ಹೊಸ ವರ್ಷ, ಶುದ್ಧತೆ, ಹೊಸ ನಿರೀಕ್ಷೆ ಮತ್ತು ಸಮೃದ್ಧಿಯ ಸಂಕೇತವಾಗಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳ ಈ ಪವಿತ್ರ ಹಬ್ಬದ ದಿನ ದೇವರ ಪೂಜಾ ಕಾರ್ಯದ ಜೊತೆಗೆ ಮನೆಮಂದಿಯೆಲ್ಲಾ ಬೇವು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸ್ನೇಹಿತರು, ಸಂಬಂಧಿಕರಿಗೂ ಬೇವು-ಬೆಲ್ಲವನ್ನು ಹಂಚುತ್ತಾರೆ. ಹೌದು ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ಸವಿಯುವ ಹಾಗೆ ಯುಗಾದಿ ಹಬ್ಬದಂದು ಬೇವು ಬೆಲ್ಲ ಸೇವಿಸುವ ಆಚರಣೆ ರೂಢಿಯಲ್ಲಿದೆ. ಇದು ಕೇವಲ ಆಚರಣೆಯಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು-ಬೆಲ್ಲವನ್ನು ಸವಿಯುವುದರ ಹಿಂದಿರುವ ವೈಜ್ಞಾನಿಕ ಕಾರಣ ಇಲ್ಲಿದೆ.



ಬೇವು-ಬೆಲ್ಲದ ಆಧ್ಯಾತ್ಮಿಕ ಮಹತ್ವವೇನು?


ನೋವು-ನಲಿವನ್ನು ಸಂಕೇತಿಸುತ್ತದೆ: ಕಹಿ ಬೇವು ಮತ್ತು ಸಿಹಿ ಬೆಲ್ಲವು ಜೀವನದ ದ್ವಂದ್ವ ಸ್ವಭಾವವನ್ನು ಸಂಕೇತಿಸುತ್ತದೆ. ಸಂತೋಷ ಮತ್ತು ದುಃಖ, ಸವಾಲುಗಳು ಮತ್ತು ಯಶಸ್ಸು ಎಲ್ಲವನ್ನು ಬೇವು ಬೆಲ್ಲದಂತೆ ಸಮಾನವಾಗಿ ಸ್ವೀಕರಿಸಬೇಕು ಜೀವನವು ಕಹಿ ಮತ್ತು ಸಿಹಿ ಅನುಭವಗಳ ಮಿಶ್ರಣವಾಗಿದ್ದು, ಈ ಎರಡನ್ನೂ ಸಮಾನವಾಗಿ ಸ್ವೀಕರಿಸುವುದರಿಂದ ಜೀವನವು ಸಂತೋಷದಿಂದ ಸಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ.

ಶುಭ ಆರಂಭದ ಸಂಕೇತ: ಹಿಂದೂ ಸಂಪ್ರದಾಯದಲ್ಲಿ, ಬೇವನ್ನು ದೈವಿಕ ಗುಣಗಳನ್ನು ಹೊಂದಿರುವ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ. ಇದನ್ನು ಬೆಲ್ಲದೊಂದಿಗೆ ಪ್ರಸಾದವಾಗಿ ಅರ್ಪಿಸುವುದು ಶುದ್ಧೀಕರಣ ಮತ್ತು ಹೊಸ ವರ್ಷದ ಆಶೀರ್ವಾದದ ಆರಂಭವನ್ನು ಸೂಚಿಸುತ್ತದೆ. ಇದು ನಕಾರಾತ್ಮಕತೆಯನ್ನು ಶುದ್ಧೀಕರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ, ಮುಂಬರುವ ವರ್ಷವನ್ನು ಸಮೃದ್ಧಗೊಳಿಸುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಹೊಸ ವರ್ಷವಾದ ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ಸ್ವೀಕರಿಸಲಾಗುತ್ತದೆ.



ಬೇವು ಬೆಲ್ಲದ ಸೇವನೆಯ ವೈಜ್ಞಾನಿಕ ಮಹತ್ವವೇನು?


ಯುಗಾದಿ ಹಬ್ಬದ ದಿನದಿಂದ ವಸಂತ ಕಾಲ ಆರಂಭವಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾದಂತೆ ವಾತಾವರಣವು ಒಣಗಿ, ಬಿಸಿಲಿನಿಂದ ಕೂಡಿ, ಬೆಚ್ಚಗಾಗುತ್ತದೆ ಮತ್ತು ಸೂರ್ಯನ ಶಾಖದ ಪ್ರಭಾವದಿಂದಾಗಿ ದೇಹದಲ್ಲಿ ಪಿತ್ತರದ ಅಂಶವೂ ಹೆಚ್ಚಾಗುತ್ತದೆ. ಇದರಿಂದಾಗಿ ಹೊಟ್ಟೆ ಸಂಬಂಧಿ ಕಾಯಿಲೆಗಳು, ಬಾಯಿ ಹುಣ್ಣು, ವಾಂತಿ, ಎದೆಯುರಿ, ಅತಿಯಾದ ಬೆವರುವಿಕೆ, ತುರಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗಳನ್ನು ತಡೆಗಟ್ಟಲು, ಅತಿಯಾದ ಪಿತ್ತರಸದ ಅಂಶವನ್ನು ಕಡಿಮೆ ಮಾಡಲು ಮತ್ತು ರೋಧನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ಸೇವನೆ ಮಾಡಲಾಗುತ್ತದೆ.



ಬೇವು-ಬೆಲ್ಲದ ಆರೋಗ್ಯ ಪ್ರಯೋಜನಗಳೇನು?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೇವು-ಬೆಲ್ಲದ ಮಿಶ್ರಣವು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೇಹವನ್ನು ತಂಪಾಗಿಸುತ್ತದೆ: ಕಹಿಯಾದ ಬೇವನ್ನು ಸಿಹಿಯಾದ ಬೆಲ್ಲದೊಂದಿಗೆ ಸೇವಿಸಿದಾಗ, ದೇಹದಲ್ಲಿನ ಪಿತ್ತರಸ ಅಂಶವು ಕಡಿಮೆಯಾಗುತ್ತದೆ ಮತ್ತು ಇದು ದೇಹವನ್ನು ತಂಪಾಗಿಸುತ್ತದೆ.

1) ಬೇವು ದೇಹವನ್ನು ನಿರ್ವಿಷಗೊಳಿಸುತ್ತದೆ: ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕುತ್ತದೆ, ಚರ್ಮ ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸುತ್ತದೆ.

2) ಬೇವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.

3) ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಬೆಲ್ಲ ನೈಸರ್ಗಿಕ ಜೀರ್ಣಕಾರಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ, ಆಮ್ಲೀಯತೆ ಮತ್ತು ಉಬ್ಬುವಿಕೆಯನ್ನು ತಡೆಯುತ್ತದೆ.

4) ಬೆಲ್ಲ ಕಬ್ಬಿಣದಿಂದ ಸಮೃದ್ಧವಾಗಿದೆ: ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

5) ಬೆಲ್ಲ ತ್ವರಿತ ಶಕ್ತಿಯನ್ನು ಒದಗಿಸುತ್ತದೆ: ಬೆಲ್ಲವು ನೈಸರ್ಗಿಕ ಶಕ್ತಿಯ ಮೂಲವಾಗಿದ್ದು, ಇದು ಬೇಸಿಗೆಯಲ್ಲಿ ದೇಹ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

6) ಗಾಯಗಳನ್ನು ಗುಣಪಡಿಸುತ್ತದೆ: ಬೇವು ಬೆಲ್ಲದ ಮಿಶ್ರಣವು ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವುದರಿಂದ, ಇದು ಗಾಯಗಳನ್ನು ಗುಣಪಡಿಸುತ್ತದೆ ಮತ್ತು ಅವುಗಳನ್ನು ಬೇಗನೆ ಗುಣಪಡಿಸುತ್ತದೆ.


-------------------- Hari Om --------------------