Sunday, August 9, 2026

ಅಗ್ನಿಹೋತ್ರ – AgniHotra

 

ಅಗ್ನಿಹೋತ್ರ – AgniHotra

 


                     
  Agni Deva or Fire God

 

ಅಗ್ನಿಹೋತ್ರದ ಅನೇಕ ಲಾಭಗಳು -- ಮತ್ತು -- ಅಗ್ನಿಹೋತ್ರದ ವಿವಿಧ ಉಪಯೋಗಗಳು


ಅಗ್ನಿಹೋತ್ರದ ಮಹತ್ವ ಅಪಾರ... ನಿತ್ಯವೂ ತಪ್ಪದೇ ಮಾಡಿ


'ಅಗ್ನಿ' ಎಂದರೆ ಬೆಂಕಿ ಮತ್ತು 'ಹೋತ್ರ' ಎಂದರೆ ಗುಣಪಡಿಸುವಿಕೆ; ಇದು ಪವಿತ್ರ ವೈದಿಕ ಹಿಂದೂ ಗ್ರಂಥಗಳಿಂದ 
ಉಗಮಗೊಂಡ ಪ್ರಾಚೀನ ಅಗ್ನಿ ಆಚರಣೆಯಾಗಿದೆ. ಇದು ಪರಿಸರವನ್ನು ಶುದ್ಧೀಕರಿಸುವ ಮತ್ತು ವಾತಾವರಣದಲ್ಲಿ 
ಪರಿವರ್ತನೆಯನ್ನು ಉಂಟುಮಾಡುವಂತಹ ಗುಣಪಡಿಸುವ ಶಕ್ತಿಯುಳ್ಳ ಅಗ್ನಿಯನ್ನು ಸೃಷ್ಟಿಸುತ್ತದೆ. ಈ ಸಂಪ್ರದಾಯವು
ಶತಮಾನಗಳಷ್ಟು ಹಳೆಯದು; ಹಲವು ತಲೆಮಾರುಗಳ ಕಾಲ ಈ ಪದ್ಧತಿಯು ಮರೆಯಾಗಿತ್ತು, ಆದರೆ ಇತ್ತೀಚೆಗೆ ಭಾರತದಲ್ಲಿ
ಇದು ಪುನರುಜ್ಜೀವನಗೊಂಡಿದೆ. 
 
ಅಗ್ನಿಹೋತ್ರವು ಜೀವನ ಚಕ್ರದಲ್ಲಿ ಅಗ್ನಿಯ ಮಹತ್ವವನ್ನು ಎತ್ತಿಹಿಡಿಯುತ್ತದೆ; ಇದು ಶಕ್ತಿ ಮತ್ತು ಗಾಳಿಯ ಗುಣಮಟ್ಟದ 
ದೃಷ್ಟಿಯಿಂದ ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸಲು ಹಾಗೂ ಸಮತೋಲನಗೊಳಿಸಲು ಸಹಾಯ ಮಾಡುತ್ತದೆ 
ಅಲ್ಲದೆ, ಇದು ವಾತಾವರಣದಲ್ಲಿರುವ ವಿಕಿರಣ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಲು ಸಹಕಾರಿಯಾಗಿದೆ ಎಂದು
 ನಂಬಲಾಗಿದೆ.

Agni means Fire & Hotra means Healing -- Ancient Fire Ceremony originating from the Sacred Vedic Hindu Texts and Creating a Healing Fire that Cleanses the Environment and brings about a Transformation in the Atmosphere and This Tradition is Centuries old, the practice was lost for many Generations but has recently seen a Revival in India.

Agnihotra Celebrates the importance of Fire in the cycle of Life, helps to cleanse and Harmonise the surrounding environment in terms of Energy and Air Quality, believed to help Clear Radiation and Negative Energies in the Atmosphere.

 

                                                                   Homa Kunda
 


ಪಂಚಮಹಾಯಜ್ಞಗಳಲ್ಲಿ ಸುಲಭವಾಗಿ ಮತ್ತು ಎಲ್ಲರೂ ಮಾಡಬಹುದಾದ ಯಜ್ಞವೆಂದರೆ ಅಗ್ನಿಹೋತ್ರ ! ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ. ಅನಾದಿಕಾಲದಿಂದಲೂ ಅಗ್ನಿಹೋತ್ರವು ಮನುಷ್ಯನ ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ ಆಗುವ ಮಾಲಿನ್ಯವನ್ನು ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ.
ಅಗ್ನಿಹೋತ್ರದ ಮಹತ್ವ ಪಂಚಮಹಾಯಜ್ಞಗಳಲ್ಲಿ ಸುಲಭವಾಗಿ ಮತ್ತು ಎಲ್ಲರೂ ಮಾಡಬಹುದಾದ ಯಜ್ಞವೆಂದರೆ ಅಗ್ನಿಹೋತ್ರ ! ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ.

ಅನಾದಿಕಾಲದಿಂದಲೂ ಅಗ್ನಿಹೋತ್ರವು ಮನುಷ್ಯನ ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ ಆಗುವ ಮಾಲಿನ್ಯವನ್ನು ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ. ದೇವಯಜ್ಞ ಅಥವಾ ಅಗ್ನಿಹೋತ್ರವನ್ನು ಮಾಡುವುದರಿಂದ ವಾಯು, ಮಳೆ ಮತ್ತು ಜಲ ಇವುಗಳ ಶುದ್ಧಿಯಾಗುತ್ತದೆ, ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುತ್ತದೆ.

 

                                                         Basic Agnihotra Utensils


 

ಅಗ್ನಿಹೋತ್ರ ಹೋಮ ಸಾಮಗ್ರಿಗಳು


ಹವನಪಾತ್ರ : ಅಗ್ನಿಹೋತ್ರಕ್ಕಾಗಿ ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆ, ಗೋವಂಶದ ಬೆರಣಿ : ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ತಯಾರಿಸಲು ದೇಶಿ ಗೋವುಗಳ ಸೆಗಣಿಯ ಬೆರಣಿ ಅಕ್ಕಿ (ಅಕ್ಷತೆ) : ಪಾಲಿಶ್ ಮಾಡದ ಅಖಂಡ ಅಕ್ಕಿಯನ್ನೇ ಉಪಯೋಗಿಸಬೇಕು ಆಕಳ ತುಪ್ಪ : ದೇಶಿ ಆಕಳಿನ ತುಪ್ಪವನ್ನು ಬಳಸಿ ಶುದ್ಧ ಕರ್ಪೂರ : ಇದನ್ನು ಅಗ್ನಿ ಪ್ರಜ್ವಲಿಸಲು ಅಥವಾ ಆಹುತಿ ಎಂದು ಅರ್ಪಿಸಲು ಇತರ ಸಾಮಗ್ರಿಗಳು : ಬೆಂಕಿ ಪೊಟ್ಟಣ, ತಾಮ್ರದ ತಟ್ಟೆ, ಚಮಚ, ಕೈಬೀಸಣಿಗೆ, ವಿಭೂತಿ ಸಂಗ್ರಹಿಸಿಡಲು ಗಾಜಿನ ಅಥವಾ ಮಣ್ಣಿನ ಪಾತ್ರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಮಾಡಬೇಕು ಸೃಷ್ಟಿಯಲ್ಲಿರುವ ಪ್ರತಿಯೊಂದು ವಿಷಯವು ಸ್ಥಳ, ಕಾಲ ಮತ್ತು ಸಮಯಕ್ಕೆ ಬದ್ಧವಾಗಿರುತ್ತದೆ. ಕಾಲಕ್ಕನುಸಾರ ಪ್ರತಿಯೊಂದು ವಿಷಯದ ಸ್ಥಳ ಮತ್ತು ಅದಕ್ಕನುಸಾರ ಆ ಕೃತಿ ಘಟಿಸಲು ಬೇಕಾಗುವ ಸಮಯವು ಈಶ್ವರನ ಯೋಜನೆಯೇ ಆಗಿರುತ್ತವೆ.


ಆದ್ದರಿಂದ ಯಾವುದಾದರೊಂದು ಕೃತಿಯನ್ನು ಕಾಲಕ್ಕನುಸಾರ (ಮುಹೂರ್ತಕ್ಕನುಸಾರ) ಮಾಡಿದರೆ ವ್ಯಕ್ತಿಗೆ ಅಪೇಕ್ಷಿತ ಲಾಭ ಸಿಗುತ್ತದೆ. ಆದುದರಿಂದ ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರವನ್ನು ಮಾಡುವುದಕ್ಕೆ ಮಹತ್ವವಿದೆ. – ಸೌ. ಪ್ರಿಯಾಂಕಾ ಗಾಡ್ಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ನಿಮ್ಮ ಊರಿನ ಸೂರ್ಯೋದಯ ಹಾಗೂ ಸೂರ್ಯಾಸ್ತದ ನಿಖರವಾದ ಸಮಯವನ್ನು ತಿಳಿದುಕೊಳ್ಳಲು ಸನಾತನ ಪಂಚಾಂಗ ಆ್ಯಪ ಉಪಯೋಗಿಸಿ.

 

                                                                           PIC-1
 

 

ಅಗ್ನಿಹೋತ್ರದ ಪ್ರತ್ಯಕ್ಷ ಕೃತಿಯನ್ನು ಮಾಡುವ ವಿಧಾನ


. ಯೋಗ್ಯ ದಿಕ್ಕು : ಅಗ್ನಿಹೋತ್ರ ಮಾಡುವಾಗ ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. . ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ಪ್ರಜ್ವಲಿಸುವ ಕೃತಿ : ಹವನಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ ೨–೩ ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು, ಏಕೆಂದರೆ ಹೀಗೆ ಮಾಡುವುದರಿಂದ ಬಾಯಿಯಲ್ಲಿನ ರೋಗಜಂತುಗಳು ಅಗ್ನಿಯಲ್ಲಿ ಹೋಗುತ್ತವೆ. ಅಗ್ನಿಯನ್ನು ಪ್ರಜ್ವಲಿಸಲು ಸೀಮೆಎಣ್ಣೆಯಂತಹ ಜ್ವಲನಶೀಲ ಪದಾರ್ಥಗಳನ್ನು ಉಪಯೋಗಿಸಬಾರದು. ಅಗ್ನಿಯನ್ನು ಧೂಮರಹಿತವಾಗಿ ಪ್ರಜ್ವಲಿಸಬೇಕು, ಅಂದರೆ ಅದರಿಂದ ಹೊಗೆ ಬರಬಾರದು.

ಹವನ ಸಾಮಗ್ರಿಗಳನ್ನು ಅಗ್ನಿಗೆ ಅರ್ಪಿಸುವುದು


ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೂ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಕೆಳಗೆ ನೀಡಿರುವ ಮಂತ್ರಗಳ ಪೈಕಿ ಮೊದಲನೆಯ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮೆ (ಮಧ್ಯದ ಬೆರಳು), ಅನಾಮಿಕೆ (ಕಿರುಬೆರಳಿನ ಹತ್ತಿರದ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ (ಈ ಸಮಯದಲ್ಲಿ ಹೆಬ್ಬೆರಳನ್ನು ಮೇಲ್ಮುಖವಾಗಿ ಅಂದರೆ ಆಕಾಶದತ್ತ ಮಾಡಿಡಬೇಕು) ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) (ಚಿತ್ರ ನೋಡಿ) ಆಮೇಲೆ ಎರಡನೇ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು.

 

                                                                             PIC-2

 

ಅಗ್ನಿಹೋತ್ರ ಮಂತ್ರ


1) ಸೂರ್ಯೋದಯದ ಸಮಯದಲ್ಲಿ ಪಠಿಸಬೇಕಾದ ಮಂತ್ರ

ಸೂರ್ಯಾಯ ಸ್ವಾಹಾ, ಸೂರ್ಯಾಯ ಇದಂ ನ ಮಮ । ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ ।।

2) ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕಾದ ಮಂತ್ರ

ಅಗ್ನಯೇ ಸ್ವಾಹಾ, ಅಗ್ನಯ ಇದಂ ನ ಮಮ । ಪ್ರಜಾಪತಯೇ ಸ್ವಾಹಾ, ಪ್ರಜಾಪತಯ

ಇದಂ ನ ಮಮ ।।



ಅಗ್ನಿಹೋತ್ರ ಮಾಡುವಾಗ ಇದನ್ನು ಪಾಲಿಸಿ ಮಂತ್ರಗಳ ಉಚ್ಚಾರವನ್ನು ಹೇಗೆ ಮಾಡಬೇಕು ?


ಮಂತ್ರಗಳ ಉಚ್ಚಾರವು ಅಗ್ನಿಹೋತ್ರದ ಸ್ಥಳದಲ್ಲಿ ಝೇಂಕರಿಸುವಂತಹ ನಾದಮಯ ರೀತಿಯಲ್ಲಿ, ಹೆಚ್ಚು ಗಡಿಬಡಿಯಿಂದಲೂ ಅಲ್ಲ (ವೇಗವಲ್ಲದ) ಮತ್ತು ಹೆಚ್ಚು ನಿಧಾನವಾಗಿಯೂ ಅಲ್ಲ, ಹೀಗೆ ಸ್ಪಷ್ಟ ಮತ್ತು ಗಟ್ಟಿಧ್ವನಿಯಲ್ಲಿ ಹೇಳಬೇಕು.



ಮಂತ್ರವನ್ನು ಹೇಳುವಾಗ ಭಾವ ಹೇಗಿರಬೇಕು ?

ಮಂತ್ರದಲ್ಲಿನ ಸೂರ್ಯ, ಅಗ್ನಿ, ಪ್ರಜಾಪತಿ ಈ ಶಬ್ದಗಳು ಈಶ್ವರ ವಾಚಕವಾಗಿವೆ. ‘ಸೂರ್ಯ, ಅಗ್ನಿ, ಪ್ರಜಾಪತಿ ಇವರ ಆಂತರ್ಯದಲ್ಲಿರುವ ಪರಮಾತ್ಮನ ಶಕ್ತಿಗೆ ನಾನು ಆಹುತಿಯನ್ನು ಅರ್ಪಿಸುತ್ತಿದ್ದೇನೆ, ಇದು ನನ್ನದಲ್ಲ’ ಎಂಬ ಅರ್ಥದಲ್ಲಿ ಈ ಮಂತ್ರವಿದೆ. ಇಡೀ ಸೃಷ್ಟಿಯನ್ನು ನಿರ್ಮಿಸುವ, ಅದನ್ನು ಧಾರಣೆ ಮಾಡುವ ಮತ್ತು ಅದರ ಪೋಷಣೆ ಮಾಡುವ ಪರಮಾತ್ಮನ ಶಕ್ತಿಯ ಕುರಿತು ಶರಣಾಗತಭಾವವನ್ನು ಈ ಮಂತ್ರದಲ್ಲಿ ಹೇಳಲಾಗಿದೆ; ಆದುದರಿಂದ ಈ ಮಂತ್ರಗಳನ್ನು ಶರಣಾಗತಭಾವದಿಂದ ಹೇಳಬೇಕು.ಮಂತ್ರವನ್ನು ಯಾರು ಹೇಳಬೇಕು ?


ಮನೆಯಲ್ಲಿ ಒಬ್ಬರು ಅಗ್ನಿಹೋತ್ರವನ್ನು ಮಾಡುವಾಗ, ಮನೆಯಲ್ಲಿರುವ ಇತರ ಸದಸ್ಯರು ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದು, ಆಹುತಿ ನೀಡುವ ವ್ಯಕ್ತಿಯೊಂದಿಗೆ ಅಗ್ನಿಹೋತ್ರದ ಮಂತ್ರವನ್ನು ಹೇಳಬಹುದು.

ಅಗ್ನಿಹೋತ್ರವಾದ ನಂತರ ಇದನ್ನು ಮಾಡಿ


ಧ್ಯಾನ ಧಾರಣೆ


ಅಗ್ನಿಹೋತ್ರವಾದ ನಂತರ ವಾತಾವರಣದ ಶುದ್ಧಿಯಾಗುವುದರಿಂದ ಇತರ ಸಮಯಕ್ಕೆ ಹೋಲಿಸಿದರೆ ಮನಸ್ಸು ಏಕಾಗ್ರವಾಗಲು ಹೆಚ್ಚಿನ ಸಮಯ ತಗುಲುವುದಿಲ್ಲಿ. ಆದುದರಿಂದ ಪ್ರತಿಯೊಂದು ಅಗ್ನಿಹೋತ್ರದ ನಂತರ ಸಾಧ್ಯವಿದ್ದಷ್ಟು ಹೆಚ್ಚು ಸಮಯವನ್ನು ಧ್ಯಾನಕ್ಕಾಗಿ ಇಡಬೇಕು. ಕನಿಷ್ಠ ಅಗ್ನಿಯು ಶಾಂತವಾಗುವ ವರೆಗಾದರೂ ಧ್ಯಾನವನ್ನು ಮಾಡಬೇಕು. ಅದರಲ್ಲೂ ಮನೆ ಮಂದಿಯೆಲ್ಲ ಸೇರಿ ಕುಳಿತು ಇಷ್ಟ ದೇವತೆಯ ನಾಮ ಜಪಿಸಿದರೆ ಎಲ್ಲರಿಗೂ ಅದರ ಲಾಭವಾಗುತ್ತದೆ. ಯಾವ ನಾಮ ಜಪಿಸಬೇಕು ಎಂದು ತಿಳಿದಿಲ್ಲವೇ? ಇಲ್ಲಿ ಕ್ಲಿಕ್ ಮಾಡಿ, ತಿಳಿದುಕೊಳ್ಳಿ !

 


                                                           Agni Hotra Benefits


 

 

 

 

 

 

 

 

 

 

Vibuthi or Bhasma Powder

 

ಅಗ್ನಿಹೋತ್ರದ ವಿಭೂತಿಯ ಅನೇಕ ಉಪಯೋಗಗಳು


. ವಿಭೂತಿಯನ್ನು ಮನೆಯಲ್ಲಿ ಊದುವುದರಿಂದ ವಾಸ್ತು ಶುದ್ಧಿಯಾಗುತ್ತದೆ

. ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯ ವಿಕಾರಗಳಲ್ಲಿ ಸುಧಾರಣೆಯಾಗಲು ಸಹಾಯವಾಗುತ್ತದೆ

. ಪ್ರಾಣಶಕ್ತಿ ಕಡಿಮೆಯಾಗಿದೆ ಎನಿಸಿದಾಗ ಚಿಟಿಕೆ ವಿಭುತಿಯನ್ನು ಸೇವಿಸುವುದರಿಂದ ಪ್ರಾಣಶಕ್ತಿಯಲ್ಲಿ ಹೆಚ್ಚಳವಾಗುತ್ತದೆ

. ಚಿಟಿಕೆ ವಿಭೂತಿಯನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ತೀರ್ಥ ಪ್ರಾಶನದ ಲಾಭವಾಗುತ್ತದೆ

. ಹೋಟೆಲ ಅಥವಾ ಹೊರಗಿನ ಊಟ-ತಿಂಡಿಯನ್ನು ಸೇವಿಸುವ ಮೊದಲು ಅದರ ಮೇಲೆ ಚಿಟಿಕೆ ವಿಭೂತಿಯನ್ನು ಸಿಂಪಡಿಸಿದರೆ ಅದರಲ್ಲಿರಬಹುದಾದ ನಕಾರಾತ್ಕಕ ಶಕ್ತಿ ನಾಶವಾಗುತ್ತದೆ

. ಕೈದೋಟದಲ್ಲಿರುವ ಗಿಡ-ಮರಗಳಿಗೆ ಈ ವಿಭೂತಿಯನ್ನು ಗೊಬ್ಬರವೆಂದೂ ಉಪಯೋಗಿಸಬಹುದು

 


                                              Agnihotra Bhasma or VIbuthi  

 

                                                    Health Benefits from Agnihotra


ಅಗ್ನಿಹೋತ್ರದ ಅನೇಕ ಲಾಭಗಳು


. ಚೈತನ್ಯದಾಯಕ ಮತ್ತು ಔಷಧಿ ವಾತಾವರಣ ನಿರ್ಮಾಣವಾಗುತ್ತದೆ
. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ
. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳು ಆಗುತ್ತವೆ
. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗಿ ಮನೋ ರೋಗಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುತ್ತದೆ
. ರೋಗಜಂತುಗಳ ಪ್ರತಿರೋಧ


ಅಗ್ನಿಹೋತ್ರ ಮಾಡುವುದರಿಂದ ಆಗುವ ಉಪಯೋಗಗಳು

 

1. ದೈವ ಕೃಪೆಯು ಸಿದ್ಧಿಸುತ್ತದೆ.
2. ದೇಹ ಮನಸ್ಸು ಆತ್ಮ ಈ ಮೂರರಲ್ಲೂ ಚೈತನ್ಯ ತುಂಬುತ್ತದೆ.
3. ಜಾತಕದಲ್ಲಿನ ಅಗ್ನಿ ತತ್ವದ ಕೊರತೆಯುಂಟಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು.
4. ಸುತ್ತಲ ವಾತಾವರಣವನ್ನು ಪರಿಶುಧ್ಧಗೊಳಿಸಿ ಹೆಚ್ಚು ಆಮ್ಲಜನಕದ ಅವಕಾಶವನ್ನು ಕಲ್ಪಿಸಿಕೊಡುತ್ತದೆ.
5. ಮನುಷ್ಯನಲ್ಲಿ ಹೆಚ್ಚು ಆತ್ಮಸ್ಥೈರ್ಯವನ್ನು ತಂದುಕೊಡುತ್ತದೆ.
6. ಧೈರ್ಯ ಸಾಹಸ ಪ್ರೌವೃತ್ತಿಗಳನ್ನು ಬೆಳೆಸಿಕೊಳ್ಳುವಂತಹ ವಿಶೇಷ ಶಕ್ತಿಯನ್ನು ತಂದುಕೊಡುತ್ತದೆ.
7. ಮಾನಸಿಕ ಗೊಂದಲಗಳಿಗೆ ಒಂದು ನಿರ್ಧಿಷ್ಟ ಅರ್ಥವನ್ನು ತಂದುಕೊಡುತ್ತದೆ.
8. ನಿಮ್ಮ ಮನಸ್ಸಿನ ಸಂಕಲ್ಪವನ್ನು ಈಡೇರಿಸಿಕೊಳ್ಳಬಹುದು.
9. ನೀವು ಅಂದುಕೊಂಡ ಕೆಲಸವನ್ನು ಪೂರ್ಣಗೊಳಿಸಲು ಈ ಅಗ್ನಿಹೋತ್ರವು ಸಹಾಯ ಮಾಡುತ್ತದೆ.
10. ನಿಮ್ಮ ಜೀವನದಲ್ಲಿನ ಅಸ್ಪಷ್ಟತೆಗಳಿಗೆಲ್ಲ ಸ್ಪಷ್ಟತೆಯನ್ನು ತಂದುಕೊಡುತ್ತದೆ.
11. ನಿಮ್ಮ ಅಪೂರ್ಣತೆಗಳಿಗೆಲ್ಲಾ ಪೂರ್ಣ ಶಕ್ತಿಯನ್ನು ತಂದುಕೊಡುತ್ತದೆ.



ನಿತ್ಯ ಅಗ್ನಿಹೋತ್ರ ಮಾಡುವವರು ಮಾಡಿಯೇ ತೀರಬೇಕಂತೆ; ಬೆಳಗ್ಗೆ, ಸಾಯಂಕಾಲ ಅಗ್ನಿಹೋತ್ರ ಮಾಡುವ ಸಮಯದಲ್ಲಿ ಅವರಿಗೆ ಆಶೌಚ ಇಲ್ಲವಂತೆ. ಮುಗಿದ ಕೂಡಲೆ ಪುನಃ ಅಗ್ನಿಹೋತ್ರ ಮಾಡುವವರೆಗೂ ಆಶೌಚನಿಯಮಗಳನ್ನು ಅನುಸರಿಸಬೇಕು. ಆಶೌಚವು ದೈಹಿಕವಾಗಿದ್ದರೆ ಅಗ್ನಿಹೋತ್ರ ಆರಂಭದಲ್ಲಿ ಹೋಗುವುದು ಹೇಗೆ? ಮುಗಿದಕೂಡಲೆ ಬರುವುದು ಎಂದರೇನು? ಮಾನಸಿಕ ಎಂದಿಟ್ಟುಕೊಂಡರೆ ಸಮರ್ಥಿಸಬಹುದು. ಅಗ್ನಿಹೋತ್ರವೆನ್ನುವುದು ವೇದೋಕ್ತವಾದ ನಿತ್ಯಕರ್ಮ. ಅದಕ್ಕೆ ದೊಡ್ಡ ಸ್ಥಾನ. ಆದ್ದರಿಂದ ಅದನ್ನು ಮಾಡುವ ಸಮಯದಲ್ಲಿ ಸ್ವಲ್ಪಕಾಲ ಮಮತೆಯನ್ನೂ, ಅದರಿಂದ ಉಂಟಾಗಿರುವ ದುಃಖವನ್ನೂ ಮರೆಯಬೇಕೆಂದರ್ಥ. ಅಗ್ನಿಹೋತ್ರದಂಥ ಉತ್ತಮ ಕರ್ಮವನ್ನು ಮಾಡುವಾಗ ಅದರ ಏಕಾಗ್ರತೆಯಲ್ಲಿ ಮಮತೆ, ದುಃಖಗಳು ಮರೆತುಹೋಗಬೇಕು – ಮರೆತುಹೋಗುತ್ತವೆ.

 

ಹಾಗೇ ಶ್ರಾದ್ಧ ಆರಂಭಿಸಿಬಿಟ್ಟಿದ್ದರೆ, ವಿಷಯ ತಿಳಿದರೂ ಆಶೌಚವಿಲ್ಲ. ಶ್ರಾದ್ಧ ಮುಗಿದ ಕೂಡಲೆ ಬಂದು ಸೇರಿಕೊಳ್ಳುತ್ತದಂತೆ! ದೈಹಿಕವಾದರೆ ಇದು ಹೇಗೆ ಸಾಧ್ಯ? ಮಾನಸಿಕ ಎಂದಿಟ್ಟುಕೊಂಡರೆ ಪುನಃ ಸಮರ್ಥಿಸಬಹುದು. ಶ್ರಾದ್ಧದಂತಹ ಪಿತೃಗಳಿಗೆ ಮಾಡುವ ಯಜ್ಞದಲ್ಲಿ ನಿರತನಾಗಿರುವಾಗ ಬಂಧುಗಳ ಮೃತಿಯಿಂದ ಉಂಟಾಗುವ ದುಃಖ ಬಾಧಿಸಬಾರದು. ಬಾಧಿಸುವುದಿಲ್ಲ

ಅಗ್ನಿಹೋತ್ರ ನಿಜವಾಗಿ ನಮ್ಮ ಶ್ರೇಯಸ್ಸಿನ ಮಾರ್ಗ. ಯಾರು ಮಾಡಿ ಏನು ಸಾಧಿಸುವಿರೆಂದು ಆದರೆ ಅವರೆ ಗೌಪ್ಯವಾಗಿ ಮಾಡಿ ಸಿದ್ಧಿ ಪಡೆವರು. ಇದು ನಿಮಗೆ ಗೊತ್ತಿದೆ. ಅಗ್ನಿಹೋತ್ರ ಕಡಿಮೆ ವೆಚ್ಚದ ಫಲಪ್ರದ ಮಾರ್ಗ. ನಾಟಿ ಹಸುವಿನ ಬೆರಣಿ. ನಾಟಿ ಹಸುವಿನ ತುಪ್ ಪಾಲೀಸ್ ಇಲ್ಲದ ಅಕ್ಕಿ ಇವುಗಳ ಮೂಲಕ ಬೆಳಿಗ್ಗೆ ಸೂರ್ಯ ಉದಯದ ಮುನ್ನ. ಸಂಜೆ ಸೂರ್ಯನ ಅಸ್ತದ ವೇಳೆ ಮಾಡುವ ಮೂಲಕ ಮನೆಯ ವಾತಾವರಣ ಶುದ್ಧ ವಾಗುವಂತೆ ಮಾಡಿ.


==========================


ಸನಾತನವೇ ಸತ್ಯ,


ಸನಾತನವೇ ಶ್ರೇಷ್ಠ.


ಸನಾತನವೇ ವಿಶ್ವ ಧರ್ಮ


==========================


------------------------- Hari om ---------------------

 

 


 

Saturday, August 8, 2026

ಸೂರ್ಯಪುರ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಸ್ಥಾನ ಕೊರಟಗೆರೆ ತಾಲೂಕು, ಕರ್ನಾಟಕ -- Suryapura – Sri Suryanjaneya Swamy Temple, Koratagere Taluk, Karnataka State

 

ಸೂರ್ಯಪುರ ಶ್ರೀ ಸೂರ್ಯಾಂಜನೇಯ ಸ್ವಾಮಿ

 ದೇವಸ್ಥಾನ ,ಕೊರಟಗೆರೆ ತಾಲೂಕು, ಕರ್ನಾಟಕ


Suryapura – Sri Suryanjaneya Swamy Temple,

Koratagere Taluk, Karnataka State

 

                                  

                                                    ಸೂರ್ಯಾಂಜನೇಯ ಸ್ವಾಮಿ

                                   Surya Anjaneya Swamy

                     

ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ ಕೊರಟಗೆರೆ
ತಾಲ್ಲೂಕಿನ ಸೂರ್ಯಪುರ ಗ್ರಾಮದಲ್ಲಿದೆ. ಇದು ಸೂರ್ಯ ಮತ್ತು ಆಂಜನೇಯರಿಗಾಗಿ
 (ಗುರು ಮತ್ತು ಶಿಷ್ಯ) ಮೀಸಲಾದ 'ಸೂರ್ಯಾಂಜನೇಯ ಸ್ವಾಮಿ ದೇವಾಲಯ'ವಾಗಿದೆ;  
ಇಡೀ ಜಗತ್ತಿನಲ್ಲಿಯೇ ಇಂತಹ ಏಕೈಕ ದೇವಾಲಯ ಇದಾಗಿದೆ.

Surya Anjaneya Temple in Suryapura village is just 30 Kms from Tumkuru in Koratagere Taluk
 and 80 Kms from Bengaluru and 600 Years old Temple.

ಕೊರಟಗೆರೆ ತಾಲೂಕಿನ ತುಮಕೂರಿನಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಸೂರ್ಯಪುರ
 ಗ್ರಾಮದ ಸೂರ್ಯ ಆಂಜನೇಯ ದೇವಸ್ಥಾನ ಮತ್ತು ಬೆಂಗಳೂರಿನಿಂದ 80 ಕಿ.ಮೀ ಹಾಗೂ
 600 ವರ್ಷಗಳಷ್ಟು ಹಳೆಯದಾದ ದೇವಾಲಯವಿದೆ.
 
Temple Entrance
 
 

ಹಾಗೆ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ_ಬೆಟ್ಟ ಮತ್ತು ಆಂಜನೇಯ ತನ್ನ ಗುರುವಾದ ಸೂರ್ಯದೇವನಿಂದ ವಿದ್ಯೆ ಕಲಿತ ಸ್ಥಳ ಸೂರ್ಯಪುರ ಕೂಡ ಆಗಬೇಕು, ದೇಶದ ಎಲ್ಲ ರಾಜ್ಯಗಳ ಹನುಮನ ಭಕ್ತರು ಮತ್ತು ಸೂರ್ಯನ ಭಕ್ತರು ಸೂರ್ಯಪುರಕ್ಕೆ ಬರಬೇಕು.


ನಮ್ಮ ಬೇರೆ ಬೇರೆ ರಾಜ್ಯದ ಬಹಳಷ್ಟು ಜನಕ್ಕೆ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ ಸೂರ್ಯಪುರದ ಬಗ್ಗೆ ಗೊತ್ತಿಲ್ಲ, ಆಂಜನೇಯನು ವಿದ್ಯೆ ಕಲಿತ ಸ್ಥಳ ಸೂರ್ಯಪುರ ಎಲ್ಲರಿಗೂ ತಿಳಿಯುವಂತಹ ಕೆಲಸ ಆಗಬೇಕು, ರಾಜ್ಯ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆ ಸ್ವಲ್ಪ ಇದರ ಬಗ್ಗೆ ಗಮನಹರಿಸಬೇಕು. ದೇಶದೆಲ್ಲೆಡೆಯಿಂದ ಭಕ್ತರು ಬರುವಂತಾಗಲಿ. ಋಷಿ ಮುನಿಗಳು ತಪ್ಪಸ್ಸುಗೈದ ಸ್ಥಳವಾಗಿದ್ದ ಸೂರ್ಯಪುರ, ವಿಜಯನಗರ ಸಾಮ್ರಾಜ್ಯದ ಪತನಾ ನಂತರ ತನ್ನ ಭವ್ಯತೆಯನ್ನು ಕಳೆದುಕೊಂಡಿತು.


ಸೂರ್ಯಪುರ (ರಾಯಪುರ) ಗ್ರಾಮದ ಮನೆಯೊಳಗಿನ ಒಲೆಯೊಂದರಲ್ಲಿ ಹುಣಸೆಗಿಡ ಹುಟ್ಟಿದಾಗ ಅದು ಅಪಶಕುನ ಎಂದು ಜನರು ಈ ಗ್ರಾಮವನ್ನೆ ಖಾಲಿ ಮಾಡಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ.


ಈಗಲೂ ಕೂಡ ಆಗಾಗ್ಗೆ ರಾತ್ರಿ ಸಮಯದಲ್ಲಿ (ಋಷಿಮುನಿಗಳ ಸಂಚಾರ) ಜ್ಯೋತಿ (ಬೆಳಕು) ಸಂಚರಿಸುತ್ತಿರುವುದನ್ನು ನೋಡುತ್ತಿರುವುದಾಗಿ ಅರ್ಚಕರ ಕುಟುಂಬದವರು ತಿಳಿಸುತ್ತಾರೆ.
ಇತ್ತೀಚೆಗೆ ಅಳಿದುಳಿದ ಈ ಗ್ರಾಮದ ದೇವಾಲಯಗಳನ್ನು ಸೂರ್ಯಪುರ ಆಶ್ರಮ (ಮಠ)ದ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.ಸೂರ್ಯನಿಗೆ ಪ್ರಿಯವಾದ ವಾರ ಬಾನುವಾರ.ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಹೀಗಾಗಿ ಬಾನುವಾರ,ಮಂಗಳವಾರ ಮತ್ತು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

 

                                                                another Picture

  

ಶ್ರೀ ಸೂರ್ಯಾಂಜನೇಯ ಸ್ವಾಮಿಗೆ ಭಕ್ತರು ಹರಕೆ ರೂಪದಲ್ಲಿ ಮುಡಿ (ಮಂಡೆ) ಕೊಡುತ್ತಾರೆ.
ಸುಮೇರು ಪ್ರಾಂತ್ಯದ ರಾಜ ಕೇಸರಿ ಮಹಾರಾಜ ಮತ್ತು ಅಂಜನಾದೇವಿಯ ಮಗ ಆಂಜನೇಯ.
ಕಶ್ಯಪ ಋಷಿ ಮತ್ತು ಅದಿತಿಯ ಮಗ ಸೂರ್ಯ. ಆಂಜನೇಯನು ತನ್ನ ಗುರುವಾದ ಸೂರ್ಯದೇವನಿಗೆ ಕೊಟ್ಟ ಮಾತಿನಂತೆ ತನ್ನ ಸುಮೇರು ರಾಜ್ಯವನ್ನು ತ್ಯಜಿಸಿ ಸೂರ್ಯದೇವನ ಅಂಶದಿಂದ ಜನಿಸಿದ ಕಿಷ್ಕಿಂದಾ ರಾಜನಾದ ಸುಗ್ರೀವನ ಬಳಿಗೆ ಹೋಗುತ್ತಾನೆ.ಹೀಗೆ ತನ್ನನ್ನು ನಂಬಿದವರ ಕಾಪಾಡುತ್ತಾ ಶಕ್ತಿ,ಭಕ್ತಿ,ಯುಕ್ತಿ ಇವುಗಳ ಸಂಕೇತವಾಗಿದ್ದಾನೆ.


ಪ್ರತಿ ವರ್ಷ ಸೂರ್ಯ ಹುಟ್ಟಿದ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ ದಿನ (ರಥಸಪ್ತಮಿ) ಸೂರ್ಯಪುರದಲ್ಲಿ ರಥೋತ್ಸವ
ಜರುಗುತ್ತದೆ ಮಕರ ಸಂಕ್ರಾಂತಿ ಮತ್ತು ರಥಸಪ್ತಮಿ ದಿನಸೂರ್ಯಮಾಲೆ ಧರಿಸಿ ಭಕ್ತರು ಶ್ರೀ ಕ್ಷೇತ್ರ ಸೂರ್ಯಪುರಕ್ಕೆ ಬರುತ್ತಾರೆ.


ಸುಂದರ ಪ್ರಕೃತಿಯ ನಿಸರ್ಗದ ತಾಣ ಸೂರ್ಯಪುರ, ಧ್ಯಾನ, ಯೋಗ, ಮತ್ತು ಮನಃಶಾಂತಿಗೆ ಸೂಕ್ತವಾದ ಸ್ಥಳ. ಸೂರ್ಯಪುರಕ್ಕೆ ದೂರದ ಊರುಗಳಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ. ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಸಮುದಾಯ ಭವನ ಲಭ್ಯವಿದೆ.

 

                                                                            PIC-1

 
 ಭಕ್ತರಿಗೆ ಪ್ರತಿದಿನ ಟ್ರಸ್ಟ್ ವತಿಯಿಂದ ದಾಸೋಹ ವ್ಯವಸ್ಥೆ ಇರುತ್ತದೆ.


ಸೂರ್ಯ ಮತ್ತು ಆಂಜನೇಯ ನೆಲೆಸಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ ತುಂಬಾ ಅಪರೂಪವಾಗಿದ್ದು, ಸ್ವಾಮಿ ದಕ್ಷಿಣಾಭಿಮುಖವಾಗಿರುವುದು ಇಲ್ಲಿನ ಮತ್ತೊಂದು ವಿಶೇಷ.

ಶ್ರೀ ಕ್ಷೇತ್ರದಲ್ಲಿ ನವಗ್ರಹವನ, ನಕ್ಷತ್ರವನ, ಮತ್ತು ರಾಶಿವನ ಇದ್ದು ಭಕ್ತರು ತಮ್ಮ ರಾಶಿ,ನಕ್ಷತ್ರ, ಮತ್ತು ಗ್ರಹಗಳ ಅನುಸಾರವಾಗಿ ಪ್ರಾರ್ಥನೆ ಸಲ್ಲಿಸಬಹುದು.


ಶ್ರೀ ಕ್ಷೇತ್ರ ಸೂರ್ಯಪುರ ಸಂಪೂರ್ಣ ವಾಸ್ತು ರೀತಿಯಿಂದ ಕೂಡಿರುವುದರಿಂದ ಭಕ್ತರ ಸಕಲ ಕೋರಿಕೆಗಳನ್ನು ಶ್ರೀ ಸೂರ್ಯಾಂಜನೇಯ ಸ್ವಾಮಿ ನೆರವೇರಿಸುತ್ತಿದ್ದಾನೆ.
ಸೂರ್ಯಪುರದ ಗುಟ್ಟೆಯ ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.


ಆರೋಗ್ಯ,ಆಯುಸ್ಸು ಐಶ್ವರ್ಯ, ಸಂತಾನ ಬಾಗ್ಯ, ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ನೆಲೆಸಿರುವ ಸೂರ್ಯಪುರ ಒಂದು ಪುಣ್ಯ ಕ್ಷೇತ್ರವಾಗಿದೆ.
ಹೆಚ್ಚಿನ ವಿವರಗಳಿಗೆ ಸೂರ್ಯಪುರ ಆಶ್ರಮ.

ಮೊಬೈಲ್ ಸಂಖ್ಯೆ 9448270327 ಮತ್ತು 9008335288. ಸಂಪರ್ಕಿಸಬಹುದು.

 

                                                                             PIC-2

 
 

ಸೂರ್ಯ ದೇವರು ಮತ್ತು ಆಂಜನೇಯ ಸ್ವಾಮಿ ಒಂದೇ ವಿಗ್ರಹದಲ್ಲಿ ಆರಾಧನೆ ಮತ್ತು 
ನೆಲೆಸಿರುವ ಈ ಅಪರೂಪದ ದೇವಾಲಯಕ್ಕೆ ದಯವಿಟ್ಟು ಭೇಟಿ ನೀಡಿ; ಇಡೀ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ 'ಸೂರ್ಯ-ಆಂಜನೇಯ ಸ್ವಾಮಿ'ಯ ದರ್ಶನ ಮತ್ತು ಆಶೀರ್ವಾದವನ್ನು ಇಲ್ಲಿ ಪಡೆಯಬಹುದು

Please Visit this very Rare Temple Lord Surya with Lord Anjaneya Combination in one idol Worshiped and No where in this World One find Find and get Blessings form the Lord SuryaAnjaneya Swamy.


---------------------- Hari Om -----------------------

 

 


Friday, August 7, 2026

ಶ್ರೀ ಗಂಗಾಸ್ತೋತ್ರ – Sri Ganga Sthotra

 

                                                                Adi Shankaracharya

 

ಶ್ರೀ ಗಂಗಾಸ್ತೋತ್ರ – Sri Ganga Sthotra

                  

ಶ್ರೀ ಗಂಗಾಸ್ತೋತ್ರವನ್ನು ಶ್ರೀಶಂಕರಾಚಾರ್ಯರು ರಚಿಸಿದ್ದಾರೆ. ಶ್ರೀಗಂಗಾ ಸ್ತೋತ್ರದಲ್ಲಿ 14 ಪರಮ ಪವಿತ್ರವಾದ ರೋಗನಾಶಕವಾದ ಹಾಗೂ ಅತೀ ರಹಸ್ಯವುಳ್ಳ ಶ್ಲೋಕಗಳನ್ನು ರಚಿಸಿದ್ದಾರೆ..

ಶ್ರೀ ಗಂಗಾಸ್ತೋತ್ರವನ್ನು ಓದುತ್ತಿರುವವರಿಗೆ ಜೀವನದಲ್ಲಿ ಯಾವುದೇ ತರಹದ ಖಾಯಿಲೆಗಳು, ಚಿಂತೆಗಳು, ಯೋಚನೆಗಳು ಬರದೆ ದೇಹವು ವಜ್ರಕಾಯ ಶರೀರವಾಗುತ್ತದೆ..

1) ಯಾರಿಗೆ ಹಾಸಿಗೆಯಿಂದ ಎದ್ದಾಗ ತಲೆ ಸುತ್ತು ಬರುತ್ತದೆಯೋ , ಯಾರಿಗೆ ಆಚೆಕಡೆ ಸುತ್ತಾಡಿದರೆ ತಲೆನೋವು ಬರುತ್ತದೆಯೋ , ಯಾರಿಗೆ B.P.ಇದ್ದು ಎಷ್ಟು ಮಾತ್ರೆ ತೆಗೆದುಕೊಂಡರೂ ಕಡಿಮೆಯಾಗುವುದಿಲ್ಲವೋ, ಯಾರಿಗೆ ತಮ್ಮ ಖಾಯಿಲೆಯನ್ನು ವೈದ್ಯರ ಬಳಿಗೆ ಹೇಳಿದರೆ ಅರ್ಥವಾಗುವುದಿಲ್ಲವೋ, ಅಂತಹವರು "ಶ್ರೀ ಗಂಗಾದೇವಿ" ಸ್ತೋತ್ರವನ್ನು ಓದಿದರೆ ಬಹಳ ಅನುಕೂಲವಾಗುತ್ತದೆ...

2) ಯಾರು ತುಂಬಾ ಯೋಚನೆಯನ್ನು ಮಾಡುತ್ತಾರೋ, ಯಾರಿಗೆ ನಿದ್ದೆ ಬರುವುದಿಲ್ಲವೋ, ಯಾರು ಮನೋರೋಗಿಯಾಗಿರುತ್ತಾರೋ, ಯಾರಿಗೆ ಮಾತನಾಡುವಾಗ ದೇಹ ಅದರುತ್ತದೆಯೋ, ಯಾರಿಗೆ ಬೆವರು ಜಾಸ್ತಿ ಬರುತ್ತದೆಯೋ, ಯಾರಿಗೆ ಭಯ ಜಾಸ್ತಿ ಆಗುತ್ತಿದೆಯೋ, ಯಾರು ಶವವನ್ನು ನೋಡಿದರೆ ಭಯ ಪಡುತ್ತಾರೆಯೋ, ಯಾರು ಕನಸಿನಲ್ಲಿ ಬೆಚ್ಚಿ ಬೀಳುತ್ತಾರೋ, ಯಾರಿಗೆ ಕೆಟ್ಟ ಕನಸುಗಳು ಪದೇಪದೇ ಬರುತ್ತಿರುತ್ತದೆಯೋ ಅಂತಹವರು ಗಂಗಾದೇವಿಯ ಸ್ತೋತ್ರವನ್ನು ಓದಿ ಸುಮಂಗಲಿಯರಿಗೆ ತಾಂಬೂಲದಾನ ಮಾಡಿದರೆ ಸಕಲ ದೋಷಗಳು ನಿವಾರಣೆಯಾಗುತ್ತದೆ..


                                                                Sacred Ganga River


ರಾತ್ರಿ ಮಲಗುವ ಮುನ್ನ ಗಂಗಾದೇವಿ ಸ್ತೋತ್ರದ ಎರಡನೇ ಶ್ಲೋಕವನ್ನು ಹೇಳಿಕೊಂಡು ಮಲಗುವುದು ಶುಭ..

3) ಯಾರಿಗೆ ಹೆಚ್ಚು ವಿದ್ಯೆ ಕಲಿಯಲು ಆಸಕ್ತಿ ಇದ್ದು , ಎಷ್ಟು ಓದಿದರೂ ಮರೆತು ಹೋಗುತ್ತಿದ್ದರೆ , ಯಾರಿಗೆ ಓದುವಾಗ ಹೆಚ್ಚು ಯೋಚನೆಗಳು ಬರುತ್ತಿದ್ದರೆ, ಯಾರಿಗೆ ಪರಿಕ್ಷಾ ಸಮಯದಲ್ಲಿ ದೇಹವು ಸರಿ ಇರುವುದಿಲ್ಲವೋ, ಅಂತವರು "ಶ್ರೀಗಂಗಾ ಸ್ತೋತ್ರ"ದ ೨ ನೇ ಶ್ಲೋಕವನ್ನು 7 ಸಾರಿ ನೀರಿನಲ್ಲಿ ಅಭಿಮಂತ್ರಿಸಿ, ಮಂತ್ರಿಸಿದ ನೀರನ್ನು ತಲೆಗೆ, ಕಣ್ಣುಗಳಿಗೆ, ಹಚ್ಚಿ ಉಳಿದ ನೀರಿನಿಂದ ಮುಖವನ್ನು ತೊಳೆದುಕೊಂಡರೆ ಮಹಾವಿದ್ಯಾವಂತರಾಗುತ್ತಾರೆ..

4) ಯಾರಿಗೆ ಸಕ್ಕರೆ ಖಾಯಿಲೆ ಇದ್ದು ತುಂಬಾ ಏರುಪೇರಾಗುತ್ತಿರುತ್ತದೆಯೋ ಅಂತಹವರು ಗಂಗಾದೇವಿಯ ದೇವಾಲಯದಲ್ಲಿ ಪೂಜೆ ಮಾಡಿಸಿ ಪಾನಕ ಕೋಸಂಬರಿ ಹಂಚಿದರೆ ಸಕ್ಕರೆ ಖಾಯಿಲೆಯು ಸಮತೋಲನದಲ್ಲಿರುತ್ತದೆ. ಆರೋಗ್ಯವಾಗಿರುತ್ತಾರೆ..

5) ಯಾರು ಪ್ರತಿದಿವಸ ಸ್ನಾನ ಮಾಡುವಾಗ "ಶ್ರೀ ಗಂಗಾ ಸ್ತೋತ್ರವನ್ನು" ಹೇಳಿ ಸ್ನಾನವನ್ನು ಮಾಡಿದರೆ ಸರ್ವಪಾಪಗಳೂ ನಿವಾರಣೆಯಾಗಿ ದೇಹವು ವಜ್ರಕಾಯವಾಗುತ್ತದೆ..

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೇಜೋವಂತರಾಗಿಯೂ, ಕಾಂತಿವಂತರಾಗಿಯೂ, ದೈವಾಂಶರಾಗಿಯೂ ಕಾಣುತ್ತಾರೆ.

 

                                  Mandakini & Alakananda Rivers join at DevPrayag 

                                 to Form Ganges River


                                 

                                                                  Ganga Jal or Ganga Water

 

 ಹೀಗೆ ಒಂದೊಂದು ಸ್ತೋತ್ರಕ್ಕೂ ಒಂದೊಂದು ಅರ್ಥ ಮತ್ತು ಮಹತ್ವವಿದೆ. ವಿಶೇಷ ಶಕ್ತಿಯಿದೆ..

ದೇವಿ! ಸುರೇಶ್ವರಿ! ಭಗವತಿ! ಗಂಗೇ ತ್ರಿಭುವನತಾರಿಣಿ ತರಳತರಂಗೇ |
ಶಂಕರಮೌಳಿವಿಹಾರಿಣಿ ವಿಮಲೇ ಮಮ ಮತಿರಾಸ್ತಾಂ ತವ ಪದಕಮಲೇ || 1 ||

ಭಾಗೀರಥಿಸುಖದಾಯಿನಿ ಮಾತಸ್ತವ ಜಲಮಹಿಮಾ ನಿಗಮೇ ಖ್ಯಾತಃ |
ನಾಹಂ ಜಾನೇ ತವ ಮಹಿಮಾನಂ ಪಾಹಿ ಕೃಪಾಮಯಿ ಮಾಮಙ್ಞಾನಮ್ || 2 ||

ಹರಿಪದಪಾದ್ಯತರಂಗಿಣಿ ಗಂಗೇ ಹಿಮವಿಧುಮುಕ್ತಾಧವಳತರಂಗೇ |
ದೂರೀಕುರು ಮಮ ದುಷ್ಕೃತಿಭಾರಂ ಕುರು ಕೃಪಯಾ ಭವಸಾಗರಪಾರಮ್ || 3 ||

ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತಃ ಕಿಲ ತಂ ದ್ರಷ್ಟುಂ ನ ಯಮಃ ಶಕ್ತಃ || 4 ||

ಪತಿತೋದ್ಧಾರಿಣಿ ಜಾಹ್ನವಿ ಗಂಗೇ ಖಂಡಿತ ಗಿರಿವರಮಂಡಿತ ಭಂಗೇ |
ಭೀಷ್ಮಜನನಿ ಹೇ ಮುನಿವರಕನ್ಯೇ ಪತಿತನಿವಾರಿಣಿ ತ್ರಿಭುವನ ಧನ್ಯೇ || 5 ||

ಕಲ್ಪಲತಾಮಿವ ಫಲದಾಂ ಲೋಕೇ ಪ್ರಣಮತಿ ಯಸ್ತ್ವಾಂ ನ ಪತತಿ ಶೋಕೇ |
ಪಾರಾವಾರವಿಹಾರಿಣಿ ಗಂಗೇ ವಿಮುಖಯುವತಿ ಕೃತತರಲಾಪಾಂಗೇ || 6 ||

ತವ ಚೇನ್ಮಾತಃ ಸ್ರೋತಃ ಸ್ನಾತಃ ಪುನರಪಿ ಜಠರೇ ಸೋಪಿ ನ ಜಾತಃ |
ನರಕನಿವಾರಿಣಿ ಜಾಹ್ನವಿ ಗಂಗೇ ಕಲುಷವಿನಾಶಿನಿ ಮಹಿಮೋತ್ತುಂಗೇ || 7 ||

ಪುನರಸದಂಗೇ ಪುಣ್ಯತರಂಗೇ ಜಯ ಜಯ ಜಾಹ್ನವಿ ಕರುಣಾಪಾಂಗೇ |
ಇಂದ್ರಮುಕುಟಮಣಿರಾಜಿತಚರಣೇ ಸುಖದೇ ಶುಭದೇ ಭೃತ್ಯಶರಣ್ಯೇ || 8 ||

ರೋಗಂ ಶೋಕಂ ತಾಪಂ ಪಾಪಂ ಹರ ಮೇ ಭಗವತಿ ಕುಮತಿಕಲಾಪಮ್ |
ತ್ರಿಭುವನಸಾರೇ ವಸುಧಾಹಾರೇ ತ್ವಮಸಿ ಗತಿರ್ಮಮ ಖಲು ಸಂಸಾರೇ || 9 ||

ಅಲಕಾನಂದೇ ಪರಮಾನಂದೇ ಕುರು ಕರುಣಾಮಯಿ ಕಾತರವಂದ್ಯೇ |
ತವ ತಟನಿಕಟೇ ಯಸ್ಯ ನಿವಾಸಃ ಖಲು ವೈಕುಂಠೇ ತಸ್ಯ ನಿವಾಸಃ || 10 ||

ವರಮಿಹ ನೀರೇ ಕಮಠೋ ಮೀನಃ ಕಿಂ ವಾ ತೀರೇ ಶರಟಃ ಕ್ಷೀಣಃ |
ಅಥವಾಶ್ವಪಚೋ ಮಲಿನೋ ದೀನಸ್ತವ ನ ಹಿ ದೂರೇ ನೃಪತಿಕುಲೀನಃ || 11 ||

ಭೋ ಭುವನೇಶ್ವರಿ ಪುಣ್ಯೇ ಧನ್ಯೇ ದೇವಿ ದ್ರವಮಯಿ ಮುನಿವರಕನ್ಯೇ |
ಗಂಗಾಸ್ತವಮಿಮಮಮಲಂ ನಿತ್ಯಂ ಪಠತಿ ನರೋ ಯಃ ಸ ಜಯತಿ ಸತ್ಯಮ್ || 12 ||

ಯೇಷಾಂ ಹೃದಯೇ ಗಂಗಾ ಭಕ್ತಿಸ್ತೇಷಾಂ ಭವತಿ ಸದಾ ಸುಖಮುಕ್ತಿಃ |
ಮಧುರಾಕಂತಾ ಪಂಝಟಿಕಾಭಿಃ ಪರಮಾನಂದಕಲಿತಲಲಿತಾಭಿಃ || 13 ||

ಗಂಗಾಸ್ತೋತ್ರಮಿದಂ ಭವಸಾರಂ ವಾಂಛಿತಫಲದಂ ವಿಮಲಂ ಸಾರಮ್ |b
ಶಂಕರಸೇವಕ ಶಂಕರ ರಚಿತಂ ಪಠತಿ ಸುಖೀಃ ತವ ಇತಿ ಚ ಸಮಾಪ್ತಃ || 14 ||

 

 

                         anorher Picture

 

 

                                                  another Picture of Sacred Ganges River


 

ಅನೇಕ ಪಟ್ಟು ಪ್ರಯೋಜನಗಳನ್ನು ಪಡೆಯಲು ದಯವಿಟ್ಟು ಈ ಗಂಗಾ ಸ್ತೋತ್ರವನ್ನು ಪಠಿಸಿ.

Please Recite these Ganga Stothra to Get Multifold Benefits.


------------ Hari om ------------


 



Wednesday, August 5, 2026

ವಯೋಮಾನಕ್ಕೆ ಅನುಸಾರವಾಗಿ 100 ವರ್ಷಗಳವರಗೆ ಆಚರಿಸಬೇಕಾಗುವ ಶಾಂತಿಗಳು - Peace Ceremonies according to Individual Age for 100 Years

 

ವಯೋಮಾನಕ್ಕೆ ಅನುಸಾರವಾಗಿ 100 ವರ್ಷಗಳವರಗೆ

 ಆಚರಿಸಬೇಕಾಗುವ ಶಾಂತಿಗಳು


Peace Ceremonies according to Individual Age for 100 Years



                                                     Vaishnavi Shanthi at 50 th Birthday

 

1) 50 ವರ್ಷಕ್ಕೆ ವೈಷ್ಣವೀ ಶಾಂತಿ
2) 55
ವರ್ಷಕ್ಕೆ ವಾರುಣೀ ಶಾಂತಿ
3) 60
ವರ್ಷಕ್ಕೆ ಉಗ್ರರತಿ ಶಾಂತಿ
4) 65
ವರ್ಷಕ್ಕೆ ಮಹಾಪಥ ಶಾಂತಿ
5) 70
ವರ್ಷಕ್ಕೆ ಭೀಮರತಿ ಶಾಂತಿ
6) 75
ವರ್ಷಕ್ಕೆ ಐಂಧ್ರಿ ಶಾಂತಿ
7) 78 -81
ವರ್ಷಕ್ಕೆ ವಿಜಯರಥಿ ಶಾಂತಿ
8) 82 -85
ವರ್ಷದ ಓಳಗೆ ಸಹಸ್ರ ಚಂದ್ರ ದರ್ಶನ ಶಾಂತಿ
9) 85
ವರ್ಷದ ಮೇಲೆ ರೌಧ್ರಿ ಶಾಂತಿ
10) 90
ವರ್ಷಕ್ಕೆ ಸೌರಿ ಶಾಂತಿ
11) 95
ವರ್ಷಕ್ಕೆ ಪರಿಶಿಷ್ಠ ಶಾಂತಿ
12) 100
ವರ್ಷಕ್ಕೆ ಶತಾಭಿಷೇಕ ಶಾಂತಿ



ಷಷ್ಟ್ಯಬ್ಧ ಅಥವಾ ಉಗ್ರರಥ ಶಾಂತಿ

ಮನುಷ್ಯನು ತನ್ನ ಜೀವನದ ಕಷ್ಟ-ಸುಖಗಳನ್ನು ಅನುಭವಿಸುತ್ತ ಸಕಾಲದಲ್ಲಿ ವಿವಾಹವಾಗಿ ಪತ್ನಿಯನ್ನೊಡಗೂಡಿ ಮಕ್ಕಳ ಆಗು ಹೋಗುಗಳನ್ನು ಪೂರೈಸುತ್ತ ತನ್ನ ಜೀವನದ ೬೦ನೇ ಸಂವತ್ಸರವನ್ನು ಪ್ರವೇಶಿಸಿದಾಗ ಜನ್ಮನಕ್ಷತ್ರದಲ್ಲಿ ಈ ಶಾಂತಿಯನ್ನು ಮಾಡಬೇಕು.
ಇದನ್ನು ಎಕೆ ಮಾಡಬೇಕು?


ಇದನ್ನು ಮುಂದಿನ ಜೀವನದಲ್ಲಿ ಬರುವಂತಹ ಅಪಮೃತ್ಯು, ದುಃಸ್ವಪ್ನ ದರ್ಶನ, ಗೃಹಪೀಡೆ, ವಿವಿಧ ರೋಗಬಾದೆ, ಛಾಯಾವಿಕೃತಿ. ಭೂತ-ಪ್ರೇತಾದಿ ಪೀಡಾರೂಪಕವಾದಂತಹ ನಾನಾವಿಧ ಅರಿಷ್ಟ ನಿವಾರಣೆಗಾಗಿ ಮಾಡುವಂತಹ ಶಾಂತಿಯನ್ನು ಉಗ್ರರಥ ಶಾಂತಿ ಎನ್ನುತ್ತೇವೆ.


ಈ ವಿಧಿಯಲ್ಲಿ ಗಣಪತಿ, ನವಗ್ರಹದೇವತೆಗಳನ್ನು, ಪೀಡಾಪರಿಹಾರಕನಾದ ಮೃತುಂಜಯನನ್ನು, ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮೃತ್ಯುವನ್ನೇ ಜಯಿಸಿದ ಮಾರ್ಕೆಂಡೆಯನನ್ನು, ಆಯುರ್ದೇವತೆ ನಕ್ಷತ್ರದೇವತೆಗಳನ್ನು ಆರಾಧಿಸಬೇಕು. ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನವನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಈ ವಿಧಿಯಲ್ಲಿ ಉಗ್ರನೆಂಬ ಹೆಸರಿನ ಮೃತ್ಯುಂಜಯನು ಪ್ರಧಾನದೇವತೆಯಾದ್ದರಿಂದ ಉಗ್ರರಥ ಶಾಂತಿ ಎಂಬ ಹೆಸರು ಬಂತು

ಈ ವಿಧಿಯ ಅಂತ್ಯದಲ್ಲಿ ಕಲಶ ತೀರ್ಥಸ್ನಾನ ಮತ್ತು ಮಂಗಳದೃವ್ಯ ದರ್ಶನ ಅಲ್ಲದೇ ಪುನಃ ಮಂಗಳ ಸೂತ್ರ ಕಟ್ಟುವುದು ಮುಖ್ಯವಾಗಿರುತ್ತದೆ.

 

 

                                            Bhima Ratha Shanthi at 70 th Year Birthday

 

 

೭೦ನೇ ವರ್ಷ ಪ್ರವೇಶದ ಭೀಮರಥ ಶಾಂತಿ

70th Year Starting ---- Bhima Ratha Shanthi

ಈ ಶಾಂತಿಯನ್ನು ಜನ್ಮಕಾಲ ಮೊದಲುಗೊಂಡು ೭೦ನೇ ವರ್ಷವನ್ನು ಪ್ರವೇಶಿಸಿದಾಗ ಜನ್ಮಮಾಸ, ಜನ್ಮ ನಕ್ಷತ್ರದಲ್ಲಿ ಸಕಲಪೀಡಾಪರಿಹಾರಕ್ಕಾಗಿ ಮಾಡಬೇಕು. ಈ ವಿಧಿಯನ್ನು ವರ್ತಮಾನದಲ್ಲಿ ದೇಹದಲ್ಲಿ ಅಡಕವಾಗಿರುವ ವಾತ, ಪಿತ್ತ, ಕಫಾದಿ ನಾನಾವಿಧಧ ರೋಗಪೀಡಾ ಪರಿಹಾರಕ್ಕಾಗಿ ಅಲ್ಲದೆ ಮುಂದೆ ಬರುವಂತಹ ನಾನಾವಿಧ ಘೋರ ವಿಪತ್ಯಾದಿ ಸರ್ವಾರಿಷ್ಟ ನಿವಾರಣೆಗಾಗಿ ಆಯುಷ್ಯ, ಆರೋಗ್ಯ, ಆನಂದ ಪ್ರಾಪ್ತಿಗಾಗಿ ಈ ಶಾಂತಿಯನ್ನು ವಿಧಿಯುಕ್ತವಾಗಿ ಆಚರಿಸಿಕೊಳ್ಳಬೇಕು. ಈ ಶಾಂತಿ ಕ್ರಮದಲ್ಲಿ ಭೀಮ ಎಂಬ ಮಹಾ ಮೃತ್ಯುಂಜಯನು ಪ್ರಧಾನ ದೇವತೆಯಾದ್ದರಿಂದ ಇದನ್ನು ಭೀಮರಥ ಶಾಂತಿ ಎನ್ನಲಾಗಿದೆ. ಈ ವಿಧಿಯಲ್ಲಿ ಭೀಮ ಮೃತ್ಯುಂಜಯ, ಬ್ರಹ್ಮ, ವಿಷ್ಣು, ಲೋಕಪಾಲ ದೇವತೆಗಳನ್ನು, ಸಪ್ತಮಿ ಚಿರಂಜೀವಿಗಳನ್ನು, ಗ್ರಹದೇವತೆಯನ್ನು, ಆಯುಷ್ಯ ನಕ್ಷತ್ರ ಆಯುರ್ದೇವತೆಯನ್ನು ವಿಶೇಷವಾಗಿ ಆರಾಧಿಸಿ ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನ ದಾನಾದಿಗಳನ್ನು ಮಾಡಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು.

 

                                                         Vijaya Ratha Shanthi

 

ಸಹಸ್ರಚಂದ್ರ ದರ್ಶನ ಅಥವಾ ಶತಾಭಿಷೇಕ



ಜನ್ಮ ಕಾಲ ಮೊದಲುಗೊಂಡು ಅಧಿಕಮಾಸಾದಿಗಳನ್ನು ಗಣನೆಗೆ ತೆಗೆದುಕೊಂಡು ೮೦ ವರ್ಷ ೮ ತಿಂಗಳು ಆದಾಗ ಮಾಡುವ ವಿಧಿಗೆ ಸಹಸ್ರಚಂದ್ರ ದರ್ಶನ ಎನ್ನುವರು. ಈ ವಿಧಿಯಲ್ಲಿ ಆದಿತ್ಯಾದಿ ನವಗ್ರಹ ದೇವತೆಗಳನ್ನು, ಆಯುರ್ದ್ಧಾ ಅಗ್ನಿಯನ್ನು, ಬ್ರಹ್ಮ, ಪ್ರಜಾಪತಿ, ಪರಮೇಷ್ಟಿ, ಚತುರ್ಮುಖ, ಹಿರಣ್ಯ ಗರ್ಭ, ಅಗ್ನಿ, ಸೋಮ ಯಜ್ಞ ಆದಿ ದೇವತೆಗಳನ್ನು ಆರಾಧಿಸಿ ಜಪ, ಹೋಮ,ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನ ದಾನಾದಿಗಳನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು

ಈ ಶಾಂತಿಯನ್ನು ವರ್ತಮಾನದಲ್ಲಿ ದೇಹ ಸ್ಥಿತ ಸಕಲ ಬಾಧೆ ನಿವಾರಣೆಗೊಳಿಸುವ ಪೂರ್ವಕ ಭವಿಷ್ಯತ್ತಿನಲ್ಲಿ ಬರುವ ರೋಗ ಪೀಡಾ, ಗ್ರಹ ಪೀಡೆ. ದೃಷ್ಟಿಮಾಂದ್ಯ, ಛಾಯಾವಿಕೃತಿ, ಭೂತ ಪ್ರೇತ ಪಿಶಾಚಾದಿ ಸಕಲ ಪೀಡೆ ನಿವಾರಣೆಗೋಸ್ಕರ ಅಕಾಲಬಾಧಾ ಪರಿಹಾರವಾಗಿ ಆಯುಷ್ಯ, ಆನಂದ, ಆರೋಗ್ಯ, ಸನ್ಮಂಗಲ, ಜ್ಞಾನ ವೈರಾಗ್ಯ ಪ್ರಾಪ್ತಿಗಾಗಿ ಈ ವಿಧಿಯನ್ನು ಆಚರಿಸುತ್ತಾರೆ.


--------------------------- Hari Om -------------------------