Thursday, July 23, 2026

ಪಂಚಭೂತ ಕ್ಷೇತ್ರಗಳು--Panchabootha Places

                                                           Pancha Bootha Kshetrs / Places

 

                                                                   another Picture


ಪಂಚಭೂತ ಕ್ಷೇತ್ರಗಳು--Panchabootha  

Places


ಪಂಚಭೂತ ತತ್ವಗಳ ದಿವ್ಯ ಕ್ಷೇತ್ರಗಳು


5 ( Five ) Divine Temple sites/Places associated with 
the principles of the Five Elements.



ಆಧ್ಯಾತ್ಮಿಕವಾಗಿ ಮಾನವನ ಶರೀರವು ಪಂಚಭೂತ ಅಥವಾ ಐದು ತತ್ವಗಳಿಂದ (ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿ) ಮಾಡಲ್ಪಟ್ಟಿದ್ದು ಅದರ ಒಡೆಯನಾದ ಶಿವ ಪರಮಾತ್ಮನಿಗೆ ಸಮರ್ಪಿತವಾದ ಪ್ರತ್ಯೇಕ ದೇವಸ್ಥಾನಗಳನ್ನು ಪಂಚಭೂತ ಸ್ಥಳಗಳೆನ್ನುತ್ತಾರೆ. ಈ ಪಂಚಭೂತ ಸ್ಥಳಗಳಲ್ಲಿ ಐದು ಶಿವಲಿಂಗಗಳಿದ್ದು ಅದರಲ್ಲಿ ನಾಲ್ಕು ಸ್ಥಳಗಳು ತಮಿಳುನಾಡಿನಲ್ಲಿದ್ದು, ಒಂದು ಸ್ಥಳವು ಪ್ರಸ್ತುತ ಆಂಧ್ರ ಪ್ರದೇಶದಲ್ಲಿದೆ.

ಪಂಚಭೂತಂ ಕುರಿತು ಸಂಕ್ಷಿಪ್ತ ಮಾಹಿತಿ


ಹಿಂದೂ ತತ್ವದ ಅನುಸಾರ ಜಗತ್ತಿನ ಸಕಲ ಜೀವರಾಶಿಗಳು, ಸೌರವ್ಯೂಹದಲ್ಲಿರುವ ಗ್ರಹಗತಿ ಹಾಗು ಪಂಚ ತತ್ವಗಳಾದ ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿಗಳಿಂದ ರಚನೆಯಾಗಿವೆ. ಭೂತವೆಂದರೆ ಸಂಸ್ಕೃತದಲ್ಲಿ ಕಣ ಅಥವಾ ಅಂಶವೆಂದೂ ಮಹಾಭೂತವೆಂದರೆ ಮಹಾನ್ ಕಣ ಅಥವಾ ಅಂಶ ಎಂದಾಗುತ್ತದೆ.

ಪುರಾತನ ಹಿಂದೂ ವೈದ್ಯಶಾಸ್ತ್ರ ಆಯುರ್ವೇದದ ಪ್ರಕಾರ, ಶರೀರ ಹಾಗೂ ಪಂಚಭೂತಗಳ ನಡುವಿನ ಸಮತೋಲನವು ಕೆಲವು ಪ್ರಧಾನ ಅಂಶಗಳಿಂದ ನಿರ್ವಹಿಸಲ್ಪಡುತ್ತದೆ. ಅವುಗಳೆಂದರೆ ಶ್ಲೇಷ್ಮ (ಕಫ), ಪಿತ್ತರಸ (ಪಿತ್ತ), ವಾಯು, ಧಾತು ಹಾಗು ಮಲ (ಕಸ).



ಹಾಗಾದರೆ ಬನ್ನಿ ಒಮ್ಮೆ ಆ ಪವಿತ್ರ ಐದು ಪಂಚಭೂತ ಸ್ಥಳಗಳ 

ದರುಶನ ಮಾಡಿಕೊಂಡು ಬರೋಣ.

 

                                        

                                      Kanchipuram Temple Gopuram

 


                                           Kanchi Ekabareswarar

 

1) ಏಕಾಂಬರೇಶ್ವರರ್ ದೇವಾಲಯ (ಪೃಥ್ವಿ ಅಥವಾ ಭೂಮಿ) -- 

ಕಾಂಚೀಪುರಂ

Ekambareswarar Temple - Kanchipuram ( Earth )

 

ತಮಿಳುನಾಡಿನ ಕಾಂಚೀಪುರಂ ಪಟ್ಟಣದಲ್ಲಿರುವ ಈ ಬೃಹತ್ ದೇವಾಲಯವು ಪಂಚಭೂತಗಳಲ್ಲೊಂದಾದ ಭೂಮಿ ಅಥವಾ ಪೃಥ್ವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಪಟ್ಟಣದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ಈ ದೇವಾಲಯವು 59 ಮೀ ಎತ್ತರದ ಗೋಪುರವನ್ನು ಹೊಂದಿದ್ದು, ಭಾರತದಲ್ಲಿರುವ ಎತ್ತರದ ಗೋಪುರ ದೇವಾಲಯಗಳ ಪೈಕಿ ಒಂದೆನಿಸಿದೆ. ಮುಖ್ಯ ಬಸ್ ನಿಲ್ದಾಣದಿಂದ 1.6 ಕಿ.ಮೀ ದೂರದಲ್ಲಿರುವ ಈ ದೇವಾಲಯವನ್ನು ರಾಜಾ ಸ್ಟ್ರೀಟ್ ಮೂಲಕ ಸುಲಭವಾಗಿ ತಲುಪಬಹುದು.

 


                                                    Tiruannamalai Temple Gopuram

 

                                                         Sri Annamalaiyar Swamy


 

2) ಅರುಣಾಚಲೇಶ್ವರರ್ ದೇವಾಲಯ (ಅಗ್ನಿ) -- 

ತಿರುವಣ್ಣಾಮಲೈ

Arunachaleswarar Temple – Tiruannamalai ( Agni or Fire )

ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದ ಅಣ್ಣಾಮಲೈ ಬೆಟ್ಟ ಶ್ರೇಣಿಗಳಲ್ಲಿ ನೆಲೆಸಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಅಗ್ನಿ ತತ್ವಕ್ಕೆ ಸಂಬಂಧಿಸಿದ ದೇವಾಲಯವಾಗಿದೆ. ಇಲ್ಲಿರುವ ಶಿವಸ್ವರೂಪಿ ಲಿಂಗವನ್ನು ಅಣ್ಣಮಲಯರ್ ಅಥವಾ ಅರುಣಾಚಲೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. 10 ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ತಾಗಿ ಹರಡಿರುವ ಈ ದೇವಾಲಯ ಸಂಕೀರ್ಣವು ಹಲವು ಎತ್ತರದ ಗೋಪುರಗಳನ್ನು ಹೊಂದಿದ್ದು ಪೂರ್ವಭಾಗದ ಗೋಪುರವು ಅತ್ಯಂತ ಎತ್ತರದ ಗೋಪುರವಾಗಿದೆ. ಇದರ ಎತ್ತರ ಸುಮಾರು 217 ಅಡಿ ಅಥವಾ 66 ಮೀಟರ್ ಗಳಷ್ಟು.

ಪ್ರತಿದಿನ ಆರು ಪೂಜಾ ವಿಧಿ ವಿಧಾನಗಳು ಇಲ್ಲಿ ಜರುಗುತ್ತಿದ್ದು ಬೆಳಿಗ್ಗೆ 5.30 ರಿಂದ ರಾತ್ರಿ 10 ಘಂಟೆಯಯವರೆಗೆ ತೆರೆದಿರುತ್ತದೆ. ತಿರುವಣ್ಣಾಮಲೈ ರೈಲು ನಿಲ್ದಾಣದಿಂದ ಕೇವಲ 1.6 ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.

 

                                                       Jambukeswara Temple Gopuram


 

                                                            Sri Jambukeshwarar

 

3) ಜಂಬುಕೇಶ್ವರ ದೇವಾಲಯ (ಜಲ) – ತಿರುವನೈಕಾವಲ್

Jambukeshwarar Temple – Tiruvanaikaval ( Jala or Water )


ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಈ ದೇವಾಲಯವು ಜಂಬುಕೇಶ್ವರ ದೇವಾಲಯವೆಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದು ಪಂಚಭೂತಗಳಲ್ಲೊಂದಾದ ನೀರಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಮತ್ತೊಂದು ಪ್ರಸಿದ್ಧ ಯಾತ್ರಾಕ್ಷೇತ್ರವಾದ ಶ್ರೀ ರಂಗನಾಥಸ್ವಾಮಿ ದೇವಾಲಯವಿರುವ ಶ್ರೀರಂಗಂನ ದ್ವೀಪದಲ್ಲಿ ನೆಲೆಸಿದೆ. ಜಂಬುಕೇಶ್ವರ ದೇವಾಲಯದ ಗರ್ಭಗುಡಿಯ ಕೆಳಗೆ ಎಂದಿಗೂ ಬತ್ತಲಾರದ ಚಿಲುಮೆಯೊಂದಿದ್ದು, ಸುಮಾರು 1800 ವರ್ಷಗಳ ಇತಿಹಾಸವನ್ನು ಈ ದೇವಾಲಯ ಹೊಂದಿದೆ.

ಇಲ್ಲಿನ ಶಿವಸ್ವರೂಪಿ ಲಿಂಗವನ್ನು ಅಪ್ಪು ಲಿಂಗಂ ಅಥವಾ ನೀರಿನ ಲಿಂಗ ಎಂದು ಕರೆಯಲಾಗುತ್ತದೆ. ಈ ಜಂಬುಕೇಶ್ವರ ಅಖಿಲಾಂಡೇಶ್ವರಿ ದೇವಾಲಯವು ಪಟ್ಟಣದ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

 

                                                        Chidambaram Temple Gopuram


 

                                                          Thillai Nartaraja Swamy

 

4) ತಿಳ್ಳೈ ನಟರಾಜ ದೇವಾಲಯ (ಆಕಾಶ) – ಚಿದಂಬರಂ

Thillai Nataraja Temple – Chidambaram - ( Akasa or Sky )

ತಮಿಳುನಾಡಿನ ಪೂರ್ವ ಮಧ್ಯ ಭಾಗದ ಚಿದಂಬರಂ ಪಟ್ಟಣದಲ್ಲಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಆಕಾಶಕ್ಕೆ ಸಮರ್ಪಿತವಾದುದಾಗಿದೆ. ಇಲ್ಲಿನ ಶಿವಸ್ವರೂಪಿ ಲಿಂಗವನ್ನು ತಿಳ್ಳೈ ನಟರಾಜನ ರೂಪದಲ್ಲಿ ಪೂಜಿಸಲಾಗುತ್ತದೆ. ವೈದಿಕ ಬ್ರಾಹ್ಮಣರಾದ ದಿಕ್ಷೀತರ್ ರಿಂದ ಈ ದೇವಸ್ಥಾನವು ನಿರ್ವಹಿಸಲ್ಪಡುತ್ತದೆ. ಇವರನ್ನು ಪತಂಜಲಿಯವರು ದೇವಾಲಯದ ವಿಧಿವತ್ತಾದ ನಿರ್ವಹಣೆಗಾಗಿ ಕೈಲಾಸ ಪರ್ವತದಿಂದ ಕರೆತಂದಿದ್ದರು ಎನ್ನಲಾಗಿದೆ.

ಈ ದೇವಾಲಯವು ಚಿದಂಬರಂ ಬಸ್ಸು ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿ ನೆಲೆಸಿದ್ದು ಪಟ್ಟಣದ ಯಾವುದೇ ಭಾಗದಿಂದ ಸುಲಭವಾಗಿ ತಲುಪಬಹುದಾಗಿದೆ.

 

                                                          Sri Kalahasti Temple Gopuram


 

                                                                  Sri Kalahastiswarar

 

5) ಶ್ರೀಕಾಳಹಸ್ತಿ ದೇವಾಲಯ (ವಾಯು) -- ಶ್ರೀಕಾಳಹಸ್ತಿ

Sri Kalahasti Temple – Sri Kalahasti ( Vayu or Air )


ಪ್ರಸ್ತುತ ಆಂಧ್ರಪ್ರದೇಶ ರಾಜ್ಯದ ಶ್ರೀಕಾಳಹಸ್ತಿ ಯಲ್ಲಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ವಾಯುವಿಗೆ ಸಂಬಂಧಿಸಿದುದಾಗಿದೆ. ಶಿವಸ್ವರೂಪಿಯಾದ ವಾಯುಲಿಂಗಂ ಅನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಈ ಸ್ಥಳವು ಮತ್ತೊಂದು ವಿಶ್ವವಿಖ್ಯಾತ ತಾಣವಾದ ತಿರುಪತಿಯಿಂದ ಈಶಾನ್ಯ ಭಾಗಕ್ಕೆ ಕೇವಲ 36 ಕಿ.ಮೀ ದೂರದಲ್ಲಿ ನೆಲೆಸಿದೆ. ಶ್ರೀಕಾಳಹಸ್ತಿ ರೈಲು ನಿಲ್ದಾಣದಿಂದ 2.6 ಕಿ.ಮೀ ದೂರದಲ್ಲಿ ನೆಲೆಸಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದಾಗಿದೆ.


Please Visit to all the above Temples once in your Life time and our Human Body is Composed of these above 5 Elements so get the Blessings from the Lords of Divine.


--------------------- Hari Om --------------------



 

 
                                                  

Sunday, July 19, 2026

ಭಗವದ್ಗೀತೆ-ಪೀಠಿಕೆ-Bhagavad Gita-Introduction

 

                                                                   Sri Bhagavad Gita

 

ಭಗವದ್ಗೀತೆ-ಪೀಠಿಕೆ-Bhagavad Gita-

Introduction


ಭಗವದ್ಗೀತೆ ನಮ್ಮ ಶಾಸ್ತ್ರ ಪರಂಪರೆ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ ಎಂದು ಹೆಸರುಪಡೆದಿದೆ. ಪ್ರಾಚೀನರು ಭಗವದ್ಗೀತೆಗೆ ವೇದಕ್ಕಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಇದಕ್ಕೆ ಸರಿಸಾಟಿಯಾದ ಕೃತಿ ಇನ್ನೊಂದಿಲ್ಲ. ಎಲ್ಲ ಅದ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರ-ಭಗವದ್ಗೀತೆ. ಅರ್ಥದ ಭಾರದಿಂದ ತುಂಬಿರುವ ಮಹಾಭಾರತ ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂಥಹ ಮಹಾಭಾರತದಲ್ಲಿ ಭಗವದ್ಗೀತೆ ಶ್ರೇಷ್ಠ. ಭಗವದ್ಗೀತೆಯನ್ನು ಸಮಗ್ರವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗಾಗುತ್ತದೆ.


ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೆಯಿಂದ ತೆರೆದುಕೊಳ್ಳುತ್ತದೆ. ಭಗವದ್ಗೀತೆ ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮಹಾಭಾರತದ ಸಾರವನ್ನು ಸೆರೆಹಿಡಿದಿದೆ. ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸವಲ್ಲ, ಬದಲಿಗೆ ಮನಃಶಾಸ್ತ್ರ ಮತ್ತು ಅಧ್ಯಾತ್ಮ.

ಮಹಾಭಾರತ ಎಳುಪಾತ್ರಗಳ ಮೂಲಕ ಹದಿನೆಂಟು ( 18 ) ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಅವುಗಳೆಂದರೆ:

. ಧರ್ಮರಾಜ - ಧರ್ಮ()
. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ(೧೧).
. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ(೧೪)
.. ನಕುಲ-ಸಹದೇವ - ಶೀಲ ಮತ್ತು ವಿನಯ(೧೬)
. ದ್ರೌಪದಿ - ವೇದವಿದ್ಯೆ(೧೭)
. ಶ್ರೀಕೃಷ್ಣ – ವೇದವೇದ್ಯ(೧೮)

ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ,ಮನನ ಮತ್ತು ನಿದಿಧ್ಯಾಸನದೊಂದಿಗೆ ಶೀಲ ಮತ್ತು ವಿನಯಗಳು ನಮ್ಮ ನಿತ್ಯ ಸಂಗಾತಿಗಳಾಗಿರಬೇಕು. ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪುವುದೇ ಗೀತೆಯ ಒಟ್ಟು ಸಾರಾಂಶ. ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು.



                                            Gita Upadesha by Lord Krishna to Arjuna

 

ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು . ಇದು ತತ್ವಶಾಸ್ತ್ರದ ಎಲ್ಲ ರಹಸ್ಯವನ್ನು ಬಸಿರಲ್ಲಿ ಬಚ್ಚಿಟ್ಟುಕೊಂಡ ಸಂಖ್ಯೆ. ಮಹಾಭಾರತದಲ್ಲಿ ಕೂಡ ಈ ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ.
ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ.


ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ,ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ.


ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ಮಾನವನ ಜೀವನ್ಮೊಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ. ಬನ್ನಿ ಇಂತಹ ಅಪೂರ್ವ ಕೃತಿಯನ್ನು ನಮ್ಮ ಯೋಗ್ಯತೆ ಇದ್ದಷ್ಟು ಅರಿಯಲು ಪ್ರಯತ್ನಿಸೋಣ.

ಕೃಪೆ: ಶ್ರೀ ಬನ್ನಂಜೆ ಗೋವಿಂದಾಚಾರ್ಯ.


--------------------- Hari Om ----------------------

Wednesday, July 15, 2026

ಜಪ ---- JAPA

 

ಜಪ ---- JAPA


'ಜಪ' ಎಂಬುದು ಸಂಸ್ಕೃತ ಪದವಾಗಿದ್ದು, ಇದು ಮಂತ್ರ ಅಥವಾ ದೈವಿಕ ನಾಮದ ಧ್ಯಾನಪೂರ್ವಕ ಪುನರಾವರ್ತನೆಯ

Japa is a Sanskrit word meaning the Meditative Repetition of a 

Mantra or a Divine Name.


ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ.

"
ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು.

"
ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ

"
" ಕಾರೋ ಜನ್ಮ ವಿಚ್ಚೇದನ
"
" ಕಾರೋ ಪಾಪನಾಶಕl
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕll

"
"ಕಾರವು ಜನ್ಮ ವಿನಾಶಕವಾದದ್ದೆಂದೂ "" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಜನ್ಮ ಪವಿತ್ರವಾಗ ಬೇಕಾದರೆ "ಜಪ" ಅವಶ್ಯಕವೆಂದಾಗುತ್ತದೆ.

 

                                                               Tulasi Japa Male

 

"ಜಪ" ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ.  

ಜಪಿಸುವ "ಬೀಜ" ಮಂತ್ರವಾಗಲೀ, "ತಾರಕ" ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.

"
ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆಂದರೆ:

1) ವಾಚಕ

2) ಉಪಾಂಶು

3) ಮಾನಸೀ ಜಪ.

ವಾಚಕ: ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು.
ಉಪಾಂಶು:ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು.
ಮಾನಸಿಕ ಜಪ: ಮನಸ್ಸಿನಲ್ಲಿ ಧ್ಯಾನಿಸುವುದು.
ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು. ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ. ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆಂದು ಕರೆಯಲಾಗುತ್ತದೆ.

ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ ಹೀಗಿದೆ "ಗು" ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) "ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.

ಗುರುವು ಉಪದೇಶ ಮಾಡುವ ಮಂತ್ರವು, a) ಏಕಾಕ್ಷರಿ b) ದ್ವೈಕ್ಷರಿ c) ಪಂಚಾಕ್ಷರಿ d) ಅಷ್ಟಾಕ್ಷರಿ e) ದಶಾಕ್ಷರಿ f) ಪಂಚ ದಶಾಕ್ಷರಿ g) ಶೋಡಶಾಕ್ಷರಿ. ಇವುಗಳಲ್ಲಿ ಯಾವುದೇ ಇರ ಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.

ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣ ಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ.

ಜಪಸರದಲ್ಲಿ ೧೦೮ ಮಣಿಗಳಿರ ಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.


                                                      Japa done with Tulasi male


ಜಪದಲ್ಲಿ ವಿಧಗಳಿವೆ ---- Types of Japa


1)
ನಿತ್ಯ ಜಪ
2)
ವೈಯಕ್ತಿಕ ಜಪ
3)
ಪ್ರಾಯಶ್ಚಿತ್ತ ಜಪ
4)
ಅಚಲ ಜಪ
5)
ಜಲ ಜಪ
6)
ಅಖಂಡ ಜಪ
7)
ಪ್ರದಕ್ಷಿಣ ಜಪ
8)
ಲಿಖಿತ ಜಪ
9)
ಕಾಮ್ಯ ಜಪ



ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ ಪಠಿಸಲಾಗುತ್ತದೆ.

ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು
ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರ ಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡ ಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸ ಬೇಕು.

ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (೧೦೮) ಜಪ ಮಾಡ ಬೇಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳ ನಡುವೆ ಜಪ ಮಣಿ // ಜಪಮಾಲೆ ಏನಿಸಬೇಕು.


------------------- Hari Om -------------------




 



Friday, July 10, 2026

ಅಣಿಮಾ -- ಮಹಿಮಾ -- ಗರಿಮಾ -- ಹಿಂದೂ ತತ್ವಶಾಸ್ತ್ರದಲ್ಲಿನ 8 ದೈವಿಕ ಅಥವಾ ಅತಿ ನೈಸರ್ಗಿಕ ಶಕ್ತಿಗಳ ಅಷ್ಟಸಿದ್ದಿಗಳು

 

                                                                  

                                                                                   Pic-1

 

ಅಣಿಮಾ -- ಮಹಿಮಾ -- ಗರಿಮಾ -- ಹಿಂದೂ 

ತತ್ವಶಾಸ್ತ್ರದಲ್ಲಿನ 8 ದೈವಿಕ ಅಥವಾ ಅತಿ ನೈಸರ್ಗಿಕ 

ಶಕ್ತಿಗಳ ಅಷ್ಟಸಿದ್ದಿಗಳು

 

 

Anima -- Mahima – Garima Astasiddis out of 8 ( Eight ) 

Divine or Super Natural Powers in Hindu Philosophy.

 

                                            

                                               Pic-2

 

1) ಅಣಿಮಾ : ಅಣಿಮಾ ಎಂದರೆ ಚಿಕ್ಕ ಕಣಕ್ಕಿಂತ ಚಿಕ್ಕದಾಗುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ಯಾವುದೇ ವಸ್ತು ಅಥವಾ ಜಾಗವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಅದು ಎಷ್ಟೇ ಚಿಕ್ಕದಾಗಿದ್ದರೂ ಸಹ.

2) ಮಹಿಮಾ : ಮಹಿಮಾ ಎಂದರೆ ದೊಡ್ಡ ವಸ್ತುವಿಗಿಂತ ದೊಡ್ಡದಾಗುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ತನ್ನ ಪ್ರಜ್ಞೆಯನ್ನು ವಿಸ್ತರಿಸಲು ಮತ್ತು ಬ್ರಹ್ಮಾಂಡದ ವಿಶಾಲತೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

3) ಗರಿಮಾ : ಗರಿಮಾ ಎಂದರೆ ಯಾವುದೇ ವಸ್ತುವಿಗಿಂತ ಭಾರವಾಗಬಲ್ಲ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ತನ್ನನ್ನು ತಾನೇ ನೆಲಕ್ಕೆ ಮತ್ತು ಭೂಮಿಯೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

4) ಲಘಿಮಾ : ಲಘಿಮಾ ಎಂದರೆ ಯಾವುದೇ ವಸ್ತುವಿಗಿಂತ ಹಗುರವಾಗುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ಭೌತಿಕ ಸಮತಲದ ಮೇಲೆ ಏರಲು ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

5) ಪ್ರಾಪ್ತಿ: ಪ್ರಾಪ್ತಿ ಎಂದರೆ ಬಯಸಿದ ಎಲ್ಲವನ್ನೂ ಸಾಧಿಸುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ತಮ್ಮ ಆಸೆಗಳನ್ನು ವ್ಯಕ್ತಪಡಿಸಲು ಮತ್ತು ಅವರ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.

6) ಪ್ರಾಕಾಮ್ಯ : ಪ್ರಾಕಾಮ್ಯವು ಯಾವುದೇ ಬಯಕೆಯನ್ನು ಪೂರೈಸುವ ಸಾಮರ್ಥ್ಯ, ಅದು ಎಷ್ಟೇ ಅಸಾಧ್ಯವೆಂದು ತೋರುತ್ತದೆ. ಈ ಸಿದ್ಧಿಯು ಸಾಧಕನಿಗೆ ಬ್ರಹ್ಮಾಂಡದ ಅನಿಯಮಿತ ಸಾಮರ್ಥ್ಯವನ್ನು ಸ್ಪರ್ಶಿಸಲು ಅನುವು ಮಾಡಿಕೊಡುತ್ತದೆ.

7) ಈಶಿತ್ವ : ಈಶತ್ವವು ಪ್ರಕೃತಿಯ ಅಂಶಗಳನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಸಾಮರ್ಥ್ಯವಾಗಿದೆ. ಈ ಸಿದ್ಧಿಯು ಸಾಧಕನಿಗೆ ಅಂಶಗಳ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ಅವುಗಳ ಪ್ರಯೋಜನಕ್ಕಾಗಿ ಬಳಸಲು ಅನುಮತಿಸುತ್ತದೆ.

8) ವಶಿತ್ವ : ವಶಿತ್ವ ಎಂದರೆ ಇತರರ ಮನಸ್ಸನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ಧನಾತ್ಮಕ ಉದ್ದೇಶಗಳಿಗಾಗಿ ಇತರರ ಆಲೋಚನೆಗಳು ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರಲು ಅನುವು ಮಾಡಿಕೊಡುತ್ತದೆ.

 

                                                                          

                                                                              Pic-3 
 

Anima, Mahima, and Garima are three of the Ashta Siddhis (the Eight Divine or Supernatural Powers) in Hindu mythology and Yogic philosophy. They represent the mastery over physical scale and mass, commonly associated with deities like Lord Hanuman.

These three fundamental yogic powers allow for the complete manipulation of the Body's physical properties:

  • Anima: The ability to reduce the physical body to the size of an atom (or anything incredibly minute). This power was famously used by Lord Hanuman to enter the demon city of Lanka undetected and to approach Sita without frightening her.

    Mahima: The exact opposite of Anima, this is the power to expand the physical self to a gigantic, infinite, or cosmic size. Hanuman used this siddhi to outwit and overpower demons in the Ramayana.

    Garima: The ability to make one's physical body infinitely heavy and completely immovable. Hanuman famously displayed this to subdue Ravana's palace and to humble Bhima's pride by making his tail too heavy to be moved.

The remaining five of the eight Ashta Siddhis include Laghima (weightlessness), Prapti (attaining desired objects or places), Prakamya (the ability to fulfill desires), Ishitva (absolute lordship over nature), and Vasitva (the ability to control all beings).


------------- Hari Om ------------


 


Tuesday, July 7, 2026

ಹುಟ್ಟಿನಿಂದ ಬಂದದ್ದಲ್ಲ ವರ್ಣ— Caste is Not By Birth but by Work—ಕೆಲವು ಋಷಿ ಪರಂಪರೆ

 

ಹುಟ್ಟಿನಿಂದ ಬಂದದ್ದಲ್ಲ ವರ್ಣ— Caste is Not By 

Birth but by Work—ಕೆಲವು ಋಷಿ ಪರಂಪರೆ

 

 

(  ವಜ್ರಸೂಚಿಕೋಪನಿಷತ್ತಿನ ಪ್ರಕಾರ…)

 

                                                                     Rishi Shrunga

1) ಋಷ್ಯಶೃಂಗ -- ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು.

 

                                                                     Kaushika Maharshi

 

2) ಕೌಶಿಕ ಮಹರ್ಷಿ - ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.

 

                                                                  Jambooka Maharshi

 

3) ಜಂಬೂಕ ಮಹರ್ಷಿ -- ನರಿಗಳನ್ನು ಹಿಡಿಯುವ ಜಾತಿಯವರು.

 

                                                            Valmiki Maharshi

 

4) ವಾಲ್ಮೀಕಿ ಮಹರ್ಷಿ - ಕಿರಾತಕರ ಒಂದು ಜಾತಿಗೆ ಸೇರಿದವನು. ಈತ ರಚಿಸಿದ ರಾಮಾಯಣ..... ಹಿಂದುಗಳಿಗೆ ಪರಮ ಪವಿತ್ರವಾದ ಗ್ರಂಥ. ಈತನನ್ನು ಆದಿಕವಿಯೆಂದು ಗೌರವಿಸಲಾಗುತ್ತಿದೆ.


5) ವ್ಯಾಸ. ಮಹರ್ಷಿ -- ಮೀನುಗಳನ್ನು ಹಿಡಿಯುವ ಬೆಸ್ತರ ಜಾತಿಗೆ ಸೇರಿದವನು. ಹಿಂದುಗಳಿಗೆ ಪರಮಪವಿತ್ರವಾದ ವೇದಗಳು.... ಈತನ ಮೂಲಕ ವಿಭಜಿಸಲ್ಪಟ್ಟವು. ಆದ್ದರಿಂದ ಈತನನ್ನು ವೇದವ್ಯಾಸ.... ಎಂದು ಪೂಜಿಸುತ್ತಾರೆ.

 

                                                               Gauthama Maharshi

 

6) ಗೌತಮ ಮಹರ್ಷಿ -- ಮೊಲ ಹಿಡಿಯುವ ಜಾತಿಗೆ ಸೇರಿದವನು.

 

                                                                  Vasista Maharshi


 

7) ವಶಿಷ್ಟ -- ಒಬ್ಬ ವೇಶ್ಯೆಗೆ ಜನಿಸಿದವನು. ಈತನ ಹೆಂಡತಿ ನಿಮ್ನಜಾತಿಗೆ ಸೇರಿದ ಮಹಿಳೆಯಾದ ಆರುಂಧತೀ ದೇವಿ. ಈ ದಿನಗಳಲ್ಲೂ ಸಹ ನವ ದಂಪತಿಗಳು ಆರಂಧತೀ ಮತ್ತು ವಶಿಷ್ಟರಿಗೆ ನಮಸ್ಕರಿಸುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಪ್ರತಿ ಪೂಜೆಯಲ್ಲೂ ಹಿಂದುಗಳಿಂದ ಆರಂಧತೀ ವಶಿಷ್ಠಾಭ್ಯಾಂ ನಮಃ ...ಎಂದು ಪೂಜೆಗಳನ್ನು ಸ್ವೀಕರಿಸುತ್ತಿದ್ದಾರೆ. ಇವರ ಮಗ ಶಕ್ತಿ. ಇವನ ಹೆಂಡತಿ ಸಹ ನಿಮ್ನ ಜಾತಿಗೆ ಸೇರಿದಾಕೆ...ಚಂಡಾಲಾಂಗಿನಿ. ಇವರ ಮಗ ಪರಾಶರ ಮಹರ್ಷಿ. ಈತ ಬೆಸ್ತ ಮಹಿಳೆ ಮತ್ಸ್ಯಗಂಧಿಯನ್ನು ಸೇರಿ ವ್ಯಾಸನ ಜನನಕ್ಕೆ ಕಾರಣರಾದರು.

 

                                                              Agasthya Maharshi

 

8) ಅಗಸ್ತ್ಯ ಮಹರ್ಷಿ - ಮಣ್ಣಿನ ಪಾತ್ರೆಯಲ್ಲಿ ಹುಟ್ಟಿದವರು.

 

                                                                Matanga Maharshi

 

9) ಮತಂಗ ಮಹರ್ಷಿ -- ನಿಮ್ನಕುಲದಲ್ಲಿ ಜನಿಸಿದರೂ...... ಬ್ರಾಹ್ಮಣನಾದ! ಈತನ ಮಗಳೇ.. ಮಾತಂಗಕನ್ಯೆ... ಒಂದು ಶಕ್ತಿ ದೇವತೆ. ಕಾಳಿದಾಸನನ್ನು ಮೊದಲ್ಗೊಂಡು ಎಷ್ಟೋ ಜನ ಮಹನೀಯರು ಈ ಮಾತೆಯ ಉಪಾಸನೆಯನ್ನು ಮಾಡಿದ್ದಾರೆ….. ಮಾಡುತ್ತಿದ್ದಾರೆ. ಆಕೆಯೇ ಶ್ಯಾಮಲಾದೇವಿ.
ಇನ್ನೂ.

 

                                                              Aithreya Maharshi

10) ಐತರೇಯ ಮಹರ್ಷಿ -- ಒಬ್ಬ ದಸ್ಯ ಮತ್ತು ಕಿರಾತಕ ದಂಪತಿಗಳಿಗೆ ಜನಿಸಿದವನು. ಅಂದರೆ ಇಂದಿನ ಲೆಕ್ಕಾಚಾರದಂತೆ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿದವರು. ಜನ್ಮತಃ ಬ್ರಾಹ್ಮಣನಲ್ಲ ಆದರೆ ಆತ ಅತ್ಯುನ್ನತವಾದ ಬ್ರಾಹ್ಮಣನಾದ. ಆತನ ಕೃತಿಗಳೇ ಐತರೇಯ ಬ್ರಾಹ್ಮಣ ಮತ್ತು ಐತರೇಯೋಪನಿಷತ್ತು. ಐತರೇಯ ಬ್ರಾಹ್ಮಣವು ಬಹಳ ಕ್ಲಿಷ್ಟವಾದುದು. ಋಗ್ವೇದವನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯಕ.


11) ಐಲುಷ ಮಹರ್ಷಿ -- ಒಬ್ಬ ದಾಸಿ ಪುತ್ರ. ಆತ ಋಗ್ವೇದದ ಮೇಲೆ ದೀರ್ಘವಾದ ಅಧ್ಯಯನವನ್ನು ಮಾಡಿ ಬಹಳಷ್ಟು ವಿಷಯವನ್ನು ಅರಿತ. ಆತನನ್ನು ಋಷಿಗಳೆಲ್ಲರೂ ಅಹ್ವಾನಿಸಿ ತಮ್ಮ ಆಚಾರ್ಯನನ್ನಾಗಿ ಮಾಡಿಕೊಂಡರು (ಐತರೇಯ ಬ್ರಾ. .೧೯)

 

 

                                                         Jaabala Satyakama Maharshi

 

12) ಸತ್ಯಕಾಮ ಜಾಬಾಲ ಮಹರ್ಷಿ -- ಸಹ ಒಬ್ಬ ವೇಶ್ಯೆಯ ಮಗ. ತಂದೆಯ ಗೋತ್ರವಲ್ಲ..... ಕಡೇ ಪಕ್ಷ ತನ್ನ ತಂದೆ ಹೆಸರೇನು ಎಂದೂ ಸಹ ತಿಳಿಯದವನು. ಆದರೆ ಜ್ಞಾನದಿಂದಾಗಿ ಬ್ರಾಹ್ಮಣನಾದ.
ಉನ್ನತವಾದ ವಂಶಗಳಲ್ಲಿ ಹುಟ್ಟಿಯೂ ಸಹ ವರ್ಣಾಶ್ರಮ ಧರ್ಮಗಳನ್ನು ಅನುಸರಿಸದೇ ಇದ್ದವರು ...... ನಿಸ್ಸಂದೇಹವಾಗಿ ಬಹಿಷ್ಕರಿಸಲ್ಪಟ್ಟರು..... ಅವರಲ್ಲಿ ಕೆಲವರು 

 

                                                                Vishwamitra Maharshi

 

                                                                 Charvaka Maharshi


                                                            

13) ಭೂದೇವಿಯ ಮಗ -- ಕ್ಷತ್ರಿಯನಾದ ನರಕ...... ರಾಕ್ಷಸನಾದ!

14) ಬ್ರಹ್ಮನ ವಂಶಸ್ಥರಾದ ಹಿರಣ್ಯಾಕ್ಷ, ಹಿರಣ್ಯಕಶಪು ಮತ್ತು ರಾವಣರು... ಬ್ರಾಹ್ಮಣಾದರೂ..... ರಾಕ್ಷಸರಾದರು.

15) ರಘುವಂಶದ ಮೂಲಪುರುಷನಾದ ರಘುಮಹಾರಾಜನ ಮಕ್ಕಳಲ್ಲಿ ಒಬ್ಬನಾಗಿದ್ದ ಪ್ರವಿದ್ಧನು.... ರಾಕ್ಷಸನಾದ.

16) ತ್ರಿಶಂಕು ಮಹಾರಾಜ ಕ್ಷತ್ರಿಯ -- ಆದರೆ ಚಂಡಾಲನಾದ!

17) ವಿಶ್ವಾಮಿತ್ರನು ಕ್ಷತ್ರಿಯ -- ಬ್ರಾಹ್ಮಣನಾದ.... ಈತನ ವಂಶಸ್ಥರೇ... ವಿಶ್ವಾಮಿತ್ರ ಗೋತ್ರದ ಬ್ರಾಹ್ಮಣರಾದರು. ವಿಶ್ವಾಮಿತ್ರನ ಮಕ್ಕಳಲ್ಲಿ ಕೆಲವರು ಅನ್ಯರಾದರು.

18) ನವ ಬ್ರಹ್ಮರಲ್ಲಿ ಒಬ್ಬನಾದ ದಕ್ಷ ಪ್ರಜಾಪತಿಯ ಮಗ ಪೃಷಧ -- ಬ್ರಹ್ಮಜ್ಞಾನವಿಲ್ಲದ ಕಾರಣ ಅನ್ಯನಾಗಿ ಬದಲಾದ (ವಿಷ್ಣುಪುರಾಣ ೪..೧೪)

19) ನೇದಿಷ್ಟ ಮಹಾರಾಜನ ಮಗ. --ನಾಭ. -- ಇವನಿಗೆ ಕ್ಷಾತ್ರ ಜ್ಞಾನವಿಲ್ಲದ ಕಾರಣ, ವರ್ತಕ ಜ್ಞಾನವಿದ್ದ ಕಾರಣ ವೈಶ್ಯನಾಗಿ ಮಾರ್ಪಟ್ಟ (ವಿಷ್ಣುಪುರಾಣ ೪..೧೩).


20) ಕ್ಷತ್ರಿಯರಾದ ರಥೋದರ, ಅಗ್ನಿವೇಶ, ಹರಿತ -- ಬ್ರಹ್ಮಜ್ಞಾನದ ಕಾರಣದಿಂದಾಗಿ ಬ್ರಾಹ್ಮಣರಾದರು. ಹರಿತನ ವಂಶಿಕರು ಅವನ ಹೆಸರನ್ನೇ ಹೊಂದಿ ಹರಿತಸ ಗೋತ್ರದ ಬ್ರಾಹ್ಮಣರೆನಿಸಿದ್ದಾರೆ (ವಿಷ್ಣುಪುರಾಣ ೪..)


21) ಶೌನಕ ಮಹರ್ಷಿಯ ಮಕ್ಕಳು -- ನಾಲ್ಕು ವರ್ಣಗಳಿಗೆ ಸೇರಿದವರಾಗಿ ಬದಲಾದರು (ವಿಷ್ಣುಪುರಾಣ ೪..)


22) ಅದೇ ವಿಧವಾಗಿ ಗೃತ್ಸಮದ, ವೀತವ್ಯ, ವೃತ್ಸಮತಿ -- ಇವರ ಮಕ್ಕಳೂ ಸಹ ನಾಲ್ಕು ವರ್ಣಗಳಿಗೆ ಸೇರಿದವರಾದರು.


ಇವರಲ್ಲಿ ಬಹಳಷ್ಟು ಜನ.... ವೇದಮಂತ್ರಗಳನ್ನು ಸಹ ರಚಿಸಿದವರಾಗಿದ್ದಾರೆ!

ಹಿಂದೂ ಧರ್ಮವು ಜ್ಞಾನವನ್ನು ಅವಲಂಬಿಸಿದೆಯೇ ಹೊರತು, ಜನನವನ್ನು ಅವಲಂಬಿಸಿಲ್ಲ.


ಆದ್ದರಿಂದಲೇ..... "ಋಷಿಮೂಲ, ನದೀಮೂಲ, ಸ್ತ್ರೀಮೂಲ ನೋಡಬೇಡಿ" ಅಂದಿದ್ದು.


ಹುಟ್ಟಿನಿಂದ ಬಂದದ್ದಲ್ಲ ಈ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣಗಳು,

ಒಳ್ಳೆಯ ಮನಸ್ಸುಳ್ಳ ಪ್ರತಿ ವ್ಯಕ್ತಿಯೂ ಸಹ ಜ್ಞಾನಕ್ಕೆ ಅರ್ಹನೇ ಆಗುತ್ತಾನೆ.

ಆದ್ದರಿಂದಲೇ.

"ಹೀನಂ ದೂಷಯತಿ ಇತಿ ಹಿಂದೂ" ಎಂದಾಗಿದೆ. ಅದರ ಅರ್ಥ: ಹೀನ(ನೀಚ/ತುಚ್ಛ)ವಾದದ್ದನ್ನು ದೂರವಿರಿಸುವುದು ಎಂಬುದಾಗಿ. ಇದುವೇ "ಹಿಂದೂ" ಪದದ ವ್ಯುತ್ಪತ್ತಿ( ಜನನ).

ನಾವು ಹಂಚಿಕೊಳ್ಳುವ ವಿವಿಧ ಸಂದೇಶಗಳೊಂದಿಗೆ ಈ ಸಂದೇಶವನ್ನೂ ಸಹ ನಮ್ಮ ಬಂಧುಮಿತ್ರರು ಮತ್ತು ಆಪ್ತರೊಂದಿಗೆ ಹಂಚಿಕೊಳ್ಳೋಣ.?

ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯ ಕುರಿತಾಗಿ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡೋಣ.


------------------------- Hari Om -----------------------