Monday, September 7, 2026

ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು -- Benefits of eating while sitting on the floor

                                                               Having Food on the Floor
 

ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು

Benefits of eating while sitting on the
floor

ಊಟ ಮಾಡುವುದು ಕೇವಲಒಂದುಚಟುವಟಿಕೆಎಂದಾಗಿರುವ ಈ ಕಾಲದಲ್ಲಿ ನೆಲದ ಮೇಲೆ ಕುಳಿತು ಊಟಮಾಡುವುದು ಎಂದರೆ ಕಷ್ಟದ ಕೆಲಸದಂತಾಗಿದೆ.ಅದರಲ್ಲೂ ಯುವಕರಲ್ಲಿಅಸಡ್ಡೆಯ ಜೊತೆಗೆ ಅಸಾಧ್ಯದ ಭಾವನೆಯೇ ಎದ್ದು ಕಾಣುತ್ತದೆ ಈಗಿನ ಜೀವನ ಶೈಲಿಯಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಊಟಕ್ಕೆ ಕೂರುವುದು ಎಂದರೆ ಅದು ಎಲ್ಲರ ಸೌಭಾಗ್ಯವೆ ಸರಿ.


ನಮ್ಮ ಸನಾತನ ಧರ್ಮದಲ್ಲಿ ಊಟ ಎಂದರೆ ಅದೊಂದು ಗೌರವ ಪೂರ್ವಕವಾಗಿ ನಡೆಸುವ ದೈನಂದಿನ ಯಜ್ಞವಿದ್ದಂತೆ.ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆ ಅಲ್ಲ.ನೆಲದ ಮೇಲೆ ಪದ್ಮಾಸನದಲ್ಲಿ {ಸುಖಾಸನ}ಕುಳಿತು ಕೈ ಮುಗಿದು ಪ್ರಾರ್ಥಿಸಿ , ನಿಶ್ಚಿಂತೆಯಿಂದ ಬರಿಗೈಯಲ್ಲಿ ಸೇವಿಸುವ ಆಹಾರನಮ್ಮ ಜಠರಕ್ಕೆ, ಅಷ್ಟೇ ಅಲ್ಲದೆ ಆತ್ಮಕ್ಕೂ ತೃಪ್ತಿ ನೀಡುವುದು .ಊಟದ ನಂತರ "ಅನ್ನ ದಾತೋ ಸುಖೀ ಭವ" ಎಂಬ ಒಂದು ವ್ಯಾಖ್ಯಾನ ಅಡಿಗೆ ತಯಾರಿಸಿದವರ ಪಾಲಿಗೆ ಸಾರ್ಥಕತೆಯ ಅನುಭವನೀಡುತ್ತದೆ.

 

                                                                PIC-1

 

ನೆಲದ ಮೇಲೆ ಕುಳಿತು ಊಟ ಮಾಡುವುದರ ಹಿಂದಿನ ವೈಜ್ಞಾನಿಕ

 ವಿಚಾರ

The scientific reason behind eating while sitting on the floor.


1) ಯೋಗಾಸನದಲ್ಲಿ ಪ್ರಮುಖ ಆಸನವಾದ ಪದ್ಮಾಸನದಲ್ಲಿ ಕುಳಿತಾಗ ನಮ್ಮ ಕಿಬ್ಬೊಟ್ಟೆಯ ಮೇಲಿನ ಭಾಗಗಳೆಲ್ಲವೂ ಬೆನ್ನು ಹುರಿಯ ಸಹಾಯದಿಂದ ನೇರವಾಗುತ್ತದೆ ಹಾಗು ಪೆಲ್ವಿಕ್ ಸ್ನಾಯುಗಳು ಹಿಗ್ಗುತ್ತದೆ.ಇದರಿಂದ ನಮ್ಮ ಜೀರ್ಣಾಂಗ ವ್ಯೂಹವು ಉತ್ತಮ ಸ್ಥಿತಿಯನ್ನು ತಲುಪಿ ಜೀರ್ಣಕ್ಕೆ ಸಹಕರಿಸುತ್ತದೆ.


2) ನೆಲದ ಮೇಲೆಕುಳಿತಾಗ ಮನಸ್ಸು ಪ್ರಶಾಂತಗೊಳ್ಳುತ್ತದೆ ಹಾಗು ಸ್ಥಿರತೆಯನ್ನು ವೃದ್ಧಿಗೊಳಿಸಿ ಆಹಾರದತ್ತ ಗಮನಹರಿಸಲು ಸಾಧ್ಯವಾಗುತ್ತದೆ.

3) ನಮ್ಮಕುಟುಂಬದಸದಸ್ಯರೊಡನೆ ಸಮಯ ಕಳೆಯಲು ಇದೊಂದು ಸುಯೋಗವಿದ್ದಂತ್ತೆ.ಎಲ್ಲರ ಅಭಿರುಚಿ ತಿಳಿಯುವ ವೇದಿಕೆಯೂ ಹೌದು.

4) ಕೆಲವು ಅಧ್ಯಯನಗಳ ಪ್ರಕಾರ ಕೆಳಗೆಕೂತು ಊಟಮಾಡುವವರು ಯಾವುದೇ ಸಹಾಯವಿಲ್ಲದೆ ಏಳಲು ಶಕ್ತರಾಗಿದಲ್ಲಿ ಅವರ ಆಯಸ್ಸು ವೃದ್ಧಿಸುತ್ತದೆ.


5) ಮೊಣಕೈ ಹಾಗು ಕಾಲುಗಳಿಗೆ ವ್ಯಾಯಾಮ ದೊರೆಯುತ್ತದೆ,ಇದರಿಂದ ಸಂಧಿವಾತ ಹಾಗು ಓಸ್ಟಿಯೋಪೋರೆಸಿಸ್ಕಾಯಿಲೆಗಳನ್ನು ತಡೆಯಬಹುದು.


6) ಬರಿಗೈಯಲ್ಲಿ ಊಟ ಮಾಡುವಾಗ ನಮ್ಮ ಐದು ಬೆರಳುಗಳು ಸೇರಿ ಒಂದು ಮುದ್ರೆ ರಚನೆಗೊಳ್ಳು ತ್ತದೆ ಇದು ಪಂಚೇಂದ್ರಿಯಗಳನ್ನು ಪ್ರೇರೇಪಿಸಿ ಮೆದುಳಿಗೆ ಸಂದೇಶ ರವಾನಿಸುತ್ತದೆ,ಆಗ ಜೀರ್ಣ ಕ್ರಿಯೆಗೆ ಬೇಕಾದ ಜೀರ್ಣರಸಗಳು, ಸಹಜವಾಗಿ ಬಿಡುಗಡೆಗೊಳ್ಳುತ್ತದೆ.


7) ಕೈಯಲ್ಲಿ ತಿನ್ನುವಾಗ ಆಹಾರದ ಬಿಸಿಹಾಗೂಮೃದುತ್ವ ನಮ್ಮ ಗಮನಕ್ಕೆ ಬರುತ್ತದೆ.


8) ವೈದಿಕ ಶಾಸ್ತ್ರದ ಪ್ರಕಾರ ನಮ್ಮ ಕೈ ಬೆರಳುಗಳು ಪಂಚ ತತ್ವಗಳಿಂದಕೂಡಿದೆಹೆಬ್ಬೆರಳು-ಅಗ್ನಿ,ತೋರುಬೆರಳು ವಾಯು, ಮಧ್ಯಬೆರಳು-ಆಕಾಶ,ಉಂಗುರ ಬೆರಳು -ಭೂಮಿ,ಕಿರುಬೆರಳು - ನೀರು.


9) ಊಟ ಮಾಡುವಾಗ ಬಾಗಿ ಏಳುವಪರಿಆಹಾರವನ್ನು ಸುಲಭವಾಗಿ ಜಠರಕ್ಕೆ ಜಾರಲು ಸಹಕರಿಸುತ್ತದೆ, ಹಾಗೂ ಆರೋಗ್ಯ ವೃದ್ಧಿಯಾಗಿ ದೀರ್ಘಾಯುಷ್ಯನ್ನು ಪಡೆಯಬಹುದು.


------------------------ Hari Om --------------------------

 
 

Sunday, September 6, 2026

ಧನ್ವಂತರಿ ಶ್ರೀ ನಾರಾಯಣ ದೇವಸ್ಥಾನ--ಕುದುರೆಗೆರೆ -- Dhanvantari Sri Narayana Temple -- Kuduregere

 

                                                                   Lord Dhanvantari Deva

 

ಧನ್ವಂತರಿ ಶ್ರೀ ನಾರಾಯಣ ದೇವಸ್ಥಾನ--ಕುದುರೆಗೆರೆ

Dhanvantari Sri Narayana Temple -- Kuduregere

 

    Lord Dhanvantari

 

ಕುದುರೆಗೆರೆಯಲ್ಲಿರುವ ಧನ್ವಂತರಿ ದೇವಾಲಯವನ್ನು ಶ್ರೀ ಧನ್ವಂತರಿ 

ನಾರಾಯಣ ಸ್ವಾಮಿ ದೇವಾಲಯ ಅಥವಾ ಧನ್ವಂತರಿ ಶ್ರೀ ನಾರಾಯಣ 

ಸಂಸ್ಕೃತಿ ಭವನ (ಶ್ರೀ ನಾರಾಯಣ ಧಾಮ) ಎಂದು ಕರೆಯಲಾಗುತ್ತದೆ

ಇದು ಕರ್ನಾಟಕದ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿ ಕುದುರೆಗೆರೆ ಪ್ರದೇಶದಲ್ಲಿದೆ. 

 

                                                                 God Ananthsayana

                                                                  Lord Dattatreya


 

                                                                  Lord Dakshina Murthi


ಉತ್ತಮ ಆರೋಗ್ಯ ಮತ್ತು ಗುಣಮುಖರಾಗಲು ಪ್ರಾರ್ಥಿಸುವ ಜನರು ಭೇಟಿ
ನೀಡುವ, ನಗರದ ಹೊರವಲಯದಲ್ಲಿರುವ ಶಾಂತಿಯುತ ಆಧ್ಯಾತ್ಮಿಕ
ಕೇಂದ್ರವಿದು. ಇದನ್ನು ಶ್ರೀ ಆದಿಚುಂಚನಗಿರಿ ಮಠವು ಸುಸ್ಥಿತಿಯಲ್ಲಿ 
ನಿರ್ವಹಿಸುತ್ತಿದೆ..
 
Our Group Photo

ಬೆಂಗಳೂರಿನಿಂದ ಈ ದೇವಾಲಯವನ್ನು ತಲುಪಲು ಯಾವುದೇ 
ಬಸ್ ಸೌಲಭ್ಯವಿಲ್ಲ.ಇದು ಬೆಂಗಳೂರಿನಿಂದ ಕೇವಲ 24 ಕಿಲೋಮೀಟರ್
ದೂರದಲ್ಲಿದೆ.  
PIC-1
PIC-2

 
PIC-3
 

It is just 24 Kms from Bangalore and a quiet suburban spiritual

center visited by people praying for Good Health and Healing. 

Well-maintained by Sri Adichunchanagiri Mutt.There are No bus facilities available to reach the temple from Bangalore.

 

 

          PIC-4

                                                        PIC-5


 

                                                          PIC-6

 

ವಿಳಾಸ: ಕುದುರೆಗೆರೆ, ತಮ್ಮೇನಹಳ್ಳಿ , ಸೋಸುವೆ ಘಟ್ಟ ಕ್ರಾಸ್
ಮಾದನಾಯಕನ ಹಳ್ಳಿ, ಬೆಂಗಳೂರು, ಕರ್ನಾಟಕ -- 562162


Address: Kuduregere, Thammenahalli Village, Sosuve ghatta Cross, 

Madanayakana Halli, Bengaluru, Karnataka 562162

 

                            
                                                          PIC-7

 

                                                        PIC-8


 

                                                        PIC-9

ದಯವಿಟ್ಟು ಈ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಧನ್ವಂತರಿ ದೇವರ
ಆಶೀರ್ವಾದವನ್ನು ಪಡೆಯಿರಿ.


Please visit this Temple and get Blessings from Lord Dhanvantari Deva.

 

 

                                                      PIC-10

 


----------------------- Hari Om --------------------


 

 

 



  


 


 

 



Saturday, September 5, 2026

ಚಿತ್ರಾಹುತಿ -- Chitrahuti

 

                                                                       Chitrahuti 

 

 

ಚಿತ್ರಾಹುತಿ -- Chitrahuti


ಊಟಕ್ಕೆ ಕುಳಿತಾಗ ಚಿತ್ರಾಹುತಿ ನೀಡುವ ಕ್ರಮ..

The practice of offering a symbolic portion of the
Meal before eating!


ಸನಾತನ ಧರ್ಮದಲ್ಲಿ ಮಾನವರು ಪಶು ಪಕ್ಷಿ ಗಳಂತೆ ಆಹಾರವನ್ನು ಎಲೆ ಅಥವ ತಟ್ಟೆಯಲ್ಲಿ ಹಾಕಿದೊಡನೇ ಮುಕ್ಕಲು ಪ್ರಾರಂಭಿಸುವುದಿಲ್ಲ ..ಅವರು ಊಟವನ್ನು ಒಂದು ಯಜ್ಞ ಎಂದು ಭಾವಿಸುತ್ತಾರೆ. ಪಂಡಿತರಿಂದ ಒಬ್ಬ ಸಾಮಾನ್ಯ ಗೃಹಸ್ತರಾದಿಯಾಗಿ ಅವರ ಊಟದ ಪದ್ಧತಿ ಹೀಗಿರುತ್ತದೆ ----

ಭೋಜನ ಸ್ವೀಕಾರಕ್ಕೂ ಮೊದಲು -- Before Partaking of the Meal



1) ಪರಿಷಿಂಚನೆ

ಎಲ್ಲಾ ಪದಾರ್ಥ ವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:

ಓಂ ಭೂರ್ಭುವಃ ಸ್ವಃ |

ಸತ್ಯಂ ತ್ವರ್ತೇ ನ ಪರಿಷಿಂಚಾಮಿ || (ಹಗಲಿಗೆ)
ಋತಂ ತ್ವಾ ಸತ್ಯೇನ ಪರಿಷಿಂಚಾಮಿ ||(ರಾತ್ರಿಗೆ)

ವಿಷ್ಣೋರನ್ನಂ ರಕ್ಷಸ್ವ

ಈ ಮಂತ್ರ ಹೇಳಿಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ಸುತ್ತ ವೃತ್ತಾಕಾರದಲ್ಲಿ ನೀರು ಸುತ್ತುಗಟ್ಟುವದು. ಇದುವೇ ಪರಿಷಿಂಚನೆ.

 

                                         Sprinkling Water around the Food before Eating

 

2) ಹವಿಸ್ಸು ಸಮರ್ಪಣೆ:

ಬಾಳೆ ಎಲೆಯ ಬಲ ಭಾಗದಲ್ಲಿ ಪ್ರಾರಂಭ ಮಾಡಿ ಯಮಾದಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ.

ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |
ಈ ನಾಲ್ಕು ಮಂತ್ರದಿಂದ

ಕೆಳಗಿನಿಂದ ಮೇಲಕ್ಕೆ ಉದ್ದ ನೆಟ್ಟಗೆ ಸಾಲಾಗಿ ನಾಲ್ಕು ಸಲ ಕಿಂಚಿತ್ ಅನ್ನ ಇಡುವುದು

ಚಿತ್ರಾಯ ನಮ:
ಚಿತ್ರಗುಪ್ತಾಯ ನಮ:
ಯಮಾಯ ನಮ:
ಯಮಧರ್ಮಾಯ ನಮ:

ಈ ನಾಲ್ಕು ಮಂತ್ರದಿಂದ ಕೆಳಗಿನಿಂದ ಮೇಲಕ್ಕೆ ಉದ್ದ ಸಾಲಾಗಿ ನಾಲ್ಕು ಕಡೆಗಳಲ್ಲಿಟ್ಟ ಅನ್ನದ ಮೇಲೆ ಕಿಂಚಿತ್ ನೀರು ಬಿಡುವುದು

 

                                                               another Picture

3) ಪ್ರಾರ್ಥನೆ:

ಬಲ ಕೈಲಿ ನೀರು ಹಿಡಿದುಕೊಂಡು ಈ ಕೆಳಗಿನ ಮಂತ್ರ ಪ್ರಾರ್ಥನೆ (ಅಭಿಮಂತ್ರಣೆ) ಮಾಡಿ
ಆ ನೀರನ್ನು ಶಬ್ದ ಮಾಡದೆ ಕುಡಿಯಬೇಕು.

'ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ' ಉತ್ತಿಷ್ಠ, ಲೋಹಿತ, ಪಿಂಗಲಾಕ್ಷ ,ಅಜಪುರುಷ, ಅಮೃತಋಷೀ, ಸತ್ಯೋದೇವತಾ,ಗಾಯತ್ರೀ ಛಂಧಃ, ಅಮೃತೋಪಸ್ತರಣಮಸಿ ಸ್ವಾಹಾ ||


                                                                    Chitrahuti-1

 

4) ಅನ್ನಪ್ರಾಶನ:

ಓಂ ಪ್ರಾಣಾಯ ಸ್ವಾಹಾ ||
ಓಂ ಅಪಾನಾಯ ಸ್ವಾಹಾ ||
ಓಂ ವ್ಯಾನಾಯ ಸ್ವಾಹಾ ||
ಓಂ ಉದಾನಾಯ ಸ್ವಾಹಾ ||
ಓಂ ಸಮಾನಾಯ ಸ್ವಾಹಾ ||

(ಅಗುಳು ನುಂಗುವುದು) ಈ ಮೇಲಿನ ಮಂತ್ರದಿಂದ
ಒಂದೊಂದು ಮಂತ್ರಕ್ಕೂ ಸ್ವಲ್ಪ ಸ್ವಲ್ಪ ಅನ್ನವನ್ನು ಭಕ್ಷಿಸುವುದು

 

                                                                     PIC-1   

5). ಆಪೋಶನ :


ದೇವರ ಪ್ರಸಾದವೆಂದು ಭಾವಿಸಿ ಊಟ ಮಾಡುವುದು ಮತ್ತು ಊಟ ಮಾಡುವಾಗ
ಭಗವಂತನ ಮಹಿಮೆಯನ್ನು ಕೀರ್ತಿಸುವುದು.


To Eat Food or Meal as Prasadam is a  God's Gift and Reciting Glory of the Lord 

in between while having the Meal.


--------------------------- Hari Om -----------------------

      
 


 
 

 

 
 

Friday, September 4, 2026

ಕೃಷ್ಣಾಷ್ಟಮಿಯ ಅರ್ಘ್ಯ – Krishnashtami Arghya

 

                                                                Krishnasthami Arghya

 

ಕೃಷ್ಣಾಷ್ಟಮಿಯ ಅರ್ಘ್ಯ – Krishnashtami Arghya

ಕೃಷ್ಣಾಷ್ಟಮಿ ದಿನದಿಂದ ಅರ್ಘ್ಯ ನೀಡಿದರೆ ಸಮಸ್ತ ಭೂಮಂಡಲ ದಾನ ಮಾಡಿದ ಪುಣ್ಯ ಬರುತ್ತದೆ.

ಭವಿಷ್ಯತ್ ಪುರಾಣ ಕೃಷ್ಣಾಷ್ಟಮಿಯಂದು ಮಾಡಿದ ಉಪವಾಸ ಇಪ್ಪತ್ತು ಕೋಟಿ ಏಕಾದಶಿ ಮಾಡಿದ ಪುಣ್ಯಕ್ಕೆ ಸಮ. ಆದರೆ ಕೃಷ್ಣಾಷ್ಟಮಿ ಮಾತ್ರ ಉಪವಾಸ ಮಾಡಿ ಏಕಾದಶಿಯನ್ನು ಬಿಡುವ ಹಾಗಿಲ್ಲ. ಬಿಟ್ಟರೆ ಪಾಪ ಬರುತ್ತೆ.

ಪರಮಾತ್ಮನ ವಿವಿಧ ರೂಪಗಳಲ್ಲಿ , ಅವತಾರಗಳಲ್ಲಿ ಭೇದ ಚಿಂತನೆ ಮಾಡಬಾರದು. ಆದರೂ ಕಾಲರೀತ್ಯ ಕೃಷ್ಣಾವತಾರ ಕಲಿಯುಗಕ್ಕೆ ಹತ್ತಿರವಿರುವುದರಿಂದ , ಅರ್ಘ್ಯ ಸಮರ್ಪಿಸಿ ಉಪವಾಸ ಮಾಡಬೇಕು.

ಕೃಷ್ಣಾಷ್ಟಮಿ ದಿನ ಪೂರ್ತಿ ಉಪವಾಸ ಮಾಡತಕ್ಕದ್ದು. ರಾತ್ರಿ ಅರ್ಘ್ಯ ಕೊಟ್ಟು ಮೇಲೆ ಫಲಾಹಾರ ಮಾಡಬಹುದಾ ? ಇಲ್ಲ. ಅರ್ಘ್ಯ ನಂತರ ತೀರ್ಥ ಸ್ವೀಕರಿಸಿ, ಅಂಗಾರ ಅಕ್ಷತೆಯನ್ನು ಧರಿಸಿ, ಶಯನ ಮಾಡಬಹುದು.

ಕೃಷ್ಣಾರ್ಘವನ್ನು ಚಂದ್ರೋದಯ ನಂತರವೇ ಕೊಡತಕ್ಕದ್ದು.

ನೈವೇದ್ಯ ದೇವರಿಗೆ ಮಾತ್ರ. ರಮಾನೈವೇದ್ಯ, ವೈಶ್ವದೇವ, ಹಸ್ತೋದಕ, ಬ್ರಹ್ಮಯಜ್ಞ ಇವುಗಳನ್ನು ಮಾರನೇ ದಿನವೇ ಮಾಡತಕ್ಕದ್ದು. ಉತ್ತರಾದಿ ಮಠ ಮತ್ತು ರಾಯರ ಮಠದವರು ತಿಥ್ಯಾಂತೇ ರಮಾ ನೈವೇದ್ಯಾದಿಗಳ ಮಾಡಬೇಕು.

ಯೋಗಾಯ ಯೋಗಪತಯೇ ಯೋಗೇಶ್ವರಾಯ ಯೋಗ ಸಂಭವಾಯ ಶ್ರೀ ಗೋವಿಂದಾಯ ನಮ: |

ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ ದೇವಕೀಂ ನಂದಗೋಪಂ ಯಶೋದಾಂ ಚ ಸುಭದ್ರಾಂ ತತ್ರ ಪೂಜಯೇತ್ |

ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇದೇವಕೀ ಸಹಿತ ಶ್ರೀ ಕೃಷ್ಣಾಯ ನಮ: | ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ಸಮರ್ಪಯಾಮಿ | (ಮೂರು ಸಾರಿ ಅರ್ಘ್ಯ ಕೊಡಬೇಕು)

ಕ್ಷೀರೋದಾರ್ಣವ ಸಂಬೂತ ಅತ್ರಿನೇತ್ರ ಸಮುದ್ಭವ ಗೃಹಾಣಾರ್ಘ್ಯಂ ಮಯಾ ದತ್ತ ರೋಹಿಣೀ ಸಹಿತಾಯ ಶಶಿನೇ ನಮ: | ರೋಹಿಣೀಸಹಿತಾಯ ಚಂದ್ರಮಸೇ ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ |

 

ಶ್ರೀ ಕೃಷ್ಣ ಪರಮಾತ್ಮನ ದುಷ್ಟ ನಿಗ್ರಹ

ಪೂತನಾಜೀವಿತಹರ : ದುರ್ಗೆಯಿಂದ ಕೃಷ್ಣನು ಬೇರೊಂದು ಕಡೆ ಬೆಳೆಯುತ್ತಿರುವ ವಿಷಯವರಿತ ಕಂಸ ತನ್ನ ಭೃತ್ಯಳಾದ ಪೂತನೆಯನ್ನು ಕೃಷ್ಣ ಸಂಹಾರಾರ್ಥ ನಿಯೋಜಿಸಿದ. ಕಂಸನ ದಾಸಿ ಪೂತನಿ ಮಾಯೆಯಿಂದ ಸ್ಫುರದ್ರೂಪಿಯಾಗಿ ವಿಷದ ಸ್ತನ್ಯಪಾನ ಮಾಡಿಸುತ್ತಾ ಮಕ್ಕಳನ್ನು ಕೊಲ್ಲುತ್ತಾ ಬಂದಳು. ಕೃಷ್ಣನನ್ನು ಎತ್ತಿಕೊಂಡಳು. ಕೃಷ್ಣನಿಗೆ ಸ್ತನ್ಯಪಾನ ಮಾಡಿಸುವ ನೆಪದಲ್ಲಿ ವಿಷವನುಣಿಸಿದಳು. ಕೃಷ್ಣನಾದರೋ ಹಾಲು ಹೀರುತ್ತಾ ಆಕೆಯ ಪ್ರಾಣವನ್ನೂ ಹೀರಿದನು. ಪೂತನೆಯು “ಹೋ” ಎಂದು ಅರಚುತ್ತಾ ನಿಜರೂಪದಲ್ಲಿ ಬಿದ್ದಾಗ, ಅವಳ ದೇಹ ಒಂದು ಯೋಜನೆವರೆಗೂ ಹರಡಿ ಬಿದ್ದು ಮರಗಿಡಗಳೆಲ್ಲ ಬಿದ್ದುಹೋಯಿತು. ಅವಳ ದೇಹದ ಮೇಲೆ ಕುಳಿತು ಕೃಷ್ಣ ಆಟವಾಡುತ್ತಿದ್ದನು. ಈ ಪೂತನಿಯಲ್ಲಿ ಜೀವದ್ವಯಾವೇಷವಿದ್ದು ರಾಕ್ಷಸಿ ಪೂತನಿ ನರಕಕ್ಕೆ ಹೋದರೆ, ಊರ್ವಶಿಯು ಸ್ವರ್ಗ ಸೇರಿದಳು.

 

                                                                 Lord Krishna ( Udupi )

 

ದ್ಯೂತದ ಕಾಲದಲ್ಲಿ ಕೃಷ್ಣ ಎಲ್ಲಿದ್ದ?

ಸಾಳ್ವ ಮಹಾರಾಜ ದ್ವಾರಕೆಯನ್ನು ಮುತ್ತಿಗೆ ಹಾಕಿದ್ದರಿಂದ ಅಲ್ಲಿಗೆ ತೆರಳಿ ಅವನೊಂದಿಗೆ ಯುದ್ಧನಿರತನಾಗಿದ್ದರಿಂದ ಕೃಷ್ಣ ದ್ಯೂತಕಾಲ ದಲ್ಲಿ ಅಲ್ಲಿರಲಿಲ್ಲ. ಕೃಷ್ಣ ಸರ್ವಶಕ್ತ, ಸರ್ವನಿಯಾಮಕ ಆದರೂ ಲೋಕರೀತ್ಯ ತಾನು ದೂರ ಇದ್ದುದರಿಂದ ದ್ಯೂತದ ವಿಷಯ ತಿಳಿಯಲಿಲ್ಲ ಎಂದು ವಿಡಂಬನೆ ಮಾಡಿದ. ಕೃಷ್ಣನಿಗೆ ನಿಜಕ್ಕೂ ಅದು ಅಜ್ಞಾತವಿರಲಿಲ್ಲ ಎಂಬುದಕ್ಕೆ ತಾನಾಗಿಯೇ ದ್ರೌಪದಿಗೆ ಅಕ್ಷಯವಸ್ತ್ರ ನೀಡಿದ್ದು ನಿದರ್ಶನ.

ಸಾಳ್ವ ವಧೆ – ಸಾಳ್ವ ವಿಮಾನದಲ್ಲಿ ಕುಳಿತು ದ್ವಾರಕೆಯ ನನ್ನು ಹಿಂಸಿಸುತ್ತಿದ್ದ. ಕೃಷ್ಣ ಪುತ್ರ ಪ್ರದ್ಯುಮ್ನ ಸಾಳ್ವನೊಂದಿಗೆ ಯುದ್ದ ಮಾಡುತ್ತಿರುತ್ತಾನೆ. ಯುದ್ದಕ್ಕೆ ಬಂದವನು ಕೃಷ್ಣನಲ್ಲ, ಕೃಷ್ಣ ಪುತ್ರ ಪ್ರದ್ಯುಮ್ನ ಎಂದು ತಿಳಿದು, ಸಾಳ್ವ ವಿಮಾನದಿಂದ ಇಳಿದು ರಥವನೇರಿ ಯುದ್ಧ ಆರಂಭಿಸಿದ. ಪ್ರದ್ಯುಮ್ನನಾದರೋ, ಸಾಳ್ವ ನನ್ನು ಕೊಲ್ಲಲು ಕೃಷ್ಣ ನೀಡಿದ್ದ ವಿಶೇಷ ಬಾಣವನ್ನು ಪ್ರಯೋಗಿಸಲು ಉದ್ಯುಕ್ತನಾದ. ಆಗ ಅಶರೀರವಾಣಿ ನುಡಿಯಿತು – “ಸಾಳ್ವ ನನ್ನು ಕೊಲ್ಲಲು ಕೃಷ್ಣನ ಸಂಕಲ್ಪವಿದೆ. ನೀನು ಕೊಲ್ಲಲು ಪ್ರಯತ್ನಿಸಬೇಡ”. ಈ ಮಾತನ್ನು ಕೇಳಿದ ಪ್ರದ್ಯುಮ್ನ ಬಾಣವನ್ನು ಪ್ರಯೋಗಿಸಲಿಲ್ಲ. ಸಾಳ್ವ ವಿಮಾನ ವೇರಿ ತನ್ನ ರಾಜ್ಯಕ್ಕೆ ಹಿಂತಿರುಗಿದ. ದ್ವಾರಕೆಯನ್ನು ಹಾಳು ಮಾಡಿದ್ದು ಸಾಳ್ವನನ್ನು ಬೆನ್ನಟ್ಟಿ ಹೋದ ಕೃಷ್ಣ. ಸಾಳ್ವನಾದೂರು ಕೃಷ್ಣನ ಮೇಲೆ ಶಸ್ತ್ರಗಳ ಮತ್ತು ಮಹಾಸ್ತ್ರಗಳನ್ನು ಮಾಯೆಯಿಂದ ಪ್ರಯೋಗಿಸಿದ. ಆಗ ಸಾಳ್ವ ಪ್ರಯೋಗಿಸಿದ ಮಾಯೆಯಿಂದ ಕೃಷ್ಣ ಕೆಳಗೆ ಬಿದ್ದಂತೆಯೂ, ಆ ದಾನವರು ಆಯುಧಗಳಿಂದ ತಿವಿದು ಕೊಲ್ಲುತ್ತಿದ್ದಂತೆಯೂ ಕಾಣಿಸಿತು. ಆಗ ಕೃಷ್ಣನು ವಿಜ್ಞಾನಾಸ್ತ್ರದಿಂದ ಮಾಯೆಯನ್ನು ನಾವು ಮಾಡಿದ. ಸಾಳ್ವ ಬೆಟ್ಟಗಳ ಮಳೆಗರೆದಾಗ, ಕೃಷ್ಣನು ಸಾಳ್ವನ ಸೌಭ ವಿಮಾನವನ್ನು ಉರುಳಿಸಿ, ಬೀಳಿಸಿದಾಗ, ಅವನು ರಥವನೇರಿ ಯುದ್ದಕ್ಕೆ ಬರಲು, ಅವನ ತೋಳುಗಳನ್ನು, ಶಿರಸ್ಸನ್ನೂ ತುಂಡರಿಸಿ, ಸಾಳ್ವ ನನ್ನು ಸಂಹರಿಸಿದನು.

ಮತ್ತೆ ಕೃಷ್ಣಾರ್ಘ್ಯ ಮಂತ್ರ

ಶ್ರೀ ಕೃಷ್ಣಾರ್ಘ್ಯ ಮಂತ್ರ

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ II ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ II ದೇವಕೀಸಹಿತ-ಶ್ರೀಕೃಷ್ಣಾಯ ನಮಃ I ಇದಮರ್ಘ್ಯಂ ಸಮರ್ಪಯಾಮಿ

ಚಂದ್ರಾರ್ಘ್ಯ ಮಂತ್ರ:

ಕ್ಷೀರೋದಾರ್ಣವ ಸಂಭೂತ ಅತಿಗೋತ್ರಸಮುದ್ಭವ ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃ ಶಶಿನ್

ಸರ್ವಜನ ಸುಖಿನೋಭವತು -- ಶ್ರೀ ಕೃಷ್ಣಾರ್ಪಣಮಸ್ತು

------------------ Hari Om -----------------

 

ವಿಶ್ವರೂಪ ದರ್ಶನ – Vishwaroopa Darshana

 

                                                                 Vishwaroopa Darshana 

 

ವಿಶ್ವರೂಪ ದರ್ಶನ – Vishwaroopa Darshana


ಶ್ರೀ ಕೃಷ್ಣನ ವಿಶ್ವರೂಪ ದರ್ಶನ

Sri Krishnas Vishwaroopa Darshana


ಶ್ರೀ ಕೃಷ್ಣನ ಮೊದಲ ಸಾರ್ವತ್ರಿಕ ದರ್ಶನ ಇಲ್ಲಿದೆ.

ಭಗವಂತನ ವಿಶ್ವರೂಪ:

 

ಶ್ರೀಕೃಷ್ಣನ ಮೊದಲ ವಿಶ್ವರೂಪವನ್ನು ತಾಯಿ ಯಶೋಧ ತೊಡೆಯ ಮೇಲೆ ಮಲಗಿ ಹಾಲು ಕುಡಿಯುತ್ತಿದ್ದಾಗ ಆಕಳಿಸಿದ ಕಂದನ ಬಾಯಿಯಲ್ಲಿ ಬ್ರಹ್ಮಾಂಡವನ್ನೇ ನೋಡುತ್ತಾಳೆ. ಇನ್ನೊಂದು ಸಲ ಮಕ್ಕಳೊಂದಿಗೆ ಆಡುತ್ತಿದ್ದಾಗ ಮಣ್ಣು ತಿಂದ ಎಂದು ಹುಡುಗರು ತಾಯಿ ಯಶೋದೆಗೆ ಹೇಳಿದಾಗ, ಯಶೋಧ ಬಂದು, ಮಣ್ಣು ಏಕೆ ತಿಂದೆ ಎಂದು ಗದರಿದಾಗ ಇಲ್ಲ ಎಂದು ಎರಡು ಮೂರು ಸಲ ಹೇಳಿದರು ನಂಬದಿದ್ದಾಗ, ನೋಡು ಬೇಕಾದರೆ ಎಂದು ಕೃಷ್ಣನು ತನ್ನ ಬಾಯಿ ಕಳೆಯುತ್ತಾನೆ. ಆಗ ಯಶೋದೆಗೆ ಅಲ್ಲಿ ಬ್ರಹ್ಮಾಂಡವೇ ಕಾಣುತ್ತದೆ. ಕೃಷ್ಣನ ಮೊದಲ ವಿಶ್ವರೂಪ ದರ್ಶನ



ಕೃಷ್ಣ ದೊಡ್ಡವನಾದ ಮೇಲೆ ಕೌರವ ಪಾಂಡವರ ನಡುವೆ ಸಂಧಿಕಾರ್ಯ ಮಾಡಲು ಹಸ್ತಿನಾಪುರಕ್ಕೆ ರಾಯಭಾರಿಯಾಗಿ ಬರುತ್ತಾನೆ. ಕೃಷ್ಣನ ಹಿತೋಪದೇಶ ಕೌರವರಿಗೆ ಬೇಕಾಗಿರಲಿಲ್ಲ. ಮಾತಿಗೆ ಮಾತು ಬೆಳೆದು ದುರ್ಯೋಧನ ಕೃಷ್ಣನನ್ನು ಬಂಧಿಸಲು ಪಿತೂರಿ ಮಾಡುತ್ತಾನೆ. ಆಗ ಕೃಷ್ಣನು ನನ್ನನ್ನು ನೀನು ಬಂಧಿಸಲಾಗುವುದಿಲ್ಲ . ನೀನು ಚಿಟಿಕೆ ಹೊಡೆಯುವಷ್ಟರಲ್ಲಿ ಭೂಮಂಡಲವನ್ನೇ ನಾಶ ಮಾಡುತ್ತೇನೆ ಎಂದು ತನ್ನ ವಿಶ್ವ ರೂಪವನ್ನು ತೋರಿಸುತ್ತಾನೆ. ಇದನ್ನು ಭೀಷ್ಮ, ದ್ರೋಣ, ವಿದುರ ,ಸಂಜಯ, ಇವರುಗಳಿಗೆ, ಹಾಗೂ ಪ್ರಾರ್ಥನೆಯ ಮೇರೆಗೆ ಧೃತರಾಷ್ಟ್ರ ನಿಗೂ 'ವಿಶ್ವರೂಪ' ದರ್ಶನ ಅನುಗ್ರಹಿಸುತ್ತಾನೆ. ಸೂರ್ಯಕಿರಣ ಪ್ರಭೆಯ ಪ್ರಕಾಶವನ್ನು ಉಳಿದವರು ಬರೀಗಣ್ಣಿನಿಂದ ನೋಡಲಾಗದೆ ಕಣ್ಣು ಮುಚ್ಚಿದರು



ನಂತರ ಕುರುಕ್ಷೇತ್ರದ ಯುದ್ಧದ ಆರಂಭದಲ್ಲಿ ಶೋಕ ಮೋಹಿತನಾಗಿ ಅರ್ಜುನ ಯುದ್ಧ ಮಾಡಲು ಒಪ್ಪುವುದಿಲ್ಲ. ಕೃಷ್ಣನು ಅವನಿಗೆ ಆತ್ಮ ತತ್ವವನ್ನು ವಿವರಿಸಿ, ಗೀತೋಪದೇಶ ಮಾಡುತ್ತಾನೆ. ವಿಭೂತಿಗಳನ್ನು ವಿವರಿಸಿದಾಗ, ಅವುಗಳನ್ನು ತಾನು ಕಣ್ಣಾರೆ ನೋಡಬೇಕೆಂದು ಅರ್ಜುನನು ಶ್ರೀಕೃಷ್ಣನ ಮುಂದೆ ಕೈಮುಗಿದು ದೈನ್ಯತೆಯಿಂದ ಬೇಡುತ್ತಾನೆ. ಭಗವಂತನ ಅಪರಿಮಿತ ದರ್ಶನವನ್ನು, ಪರಿಮಿತವಾದ ಮನಸ್ಸಿನಿಂದ ನೋಡಬೇಕು, ಮನಸ್ಸಿನ ತುಂಬಾ ಭಗವಂತ ನಿನ್ನ ರೂಪವನ್ನು ತುಂಬಿಕೊಳ್ಳುವುದು ಹೇಗೆ ? ಎಂದು ಕೇಳಿದಾಗ, ಸ್ವತಃ ಕೃಷ್ಣನೇ ಆಶ್ವಾಸನೆ ಕೊಡುತ್ತಾನೆ.

 

                                                                    another Picture

 

ಅರ್ಜುನ ನಿನ್ನಲ್ಲಿ ಇರುವ ಸಂಶಯಗಳಿಗೆ ನಾನು ಸ್ಪಷ್ಟವಾಗಿ ತಿಳಿಸುತ್ತೇನೆ. "


"ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ ಪರ್ಯುಪಾಸತೇ ತೇಷಾಂ ನಿತ್ಯಾ ಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ"


ಕೃಷ್ಣ ಹೇಳಿರುವಂತೆ (ಅನನ್ಯವಾದ ಮನಸ್ಸಿನಿಂದ ಯಾರು ನನ್ನ ಸದಾ ಚಿಂತನೆ ಮಾಡುತ್ತಾರೋ ಅಂತಹ ನಿತ್ಯ ಯುಕ್ತರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.) ನೀನು ನನ್ನಲ್ಲಿ ಆಸಕ್ತಿ ಹೊಂದಿದವನಾಗಿ, ನನ್ನನ್ನೇ ಮನದಲ್ಲಿ ನಂಬಿ, ನನ್ನನ್ನೆ ತಿಳಿದವನಾಗಿ, ನನ್ನನ್ನೆ ಪೂಜಿಸಿ, ಸ್ತುತಿಸಿ, ಭಜಿಸಿ, ಆರಾಧಿಸುವನಾದರೆ, ನೀನು ಸರಿಯಾದ ರೀತಿಯಲ್ಲಿ ನನ್ನ ಸಮಗ್ರ ರೂಪವನ್ನು ತಿಳಿದುಕೊಳ್ಳುತ್ತೀ. ನಿನಗೆ ನಂಬಿಕೆ ಆಸಕ್ತಿ ಇರುವುದಾದರೆ, ನಿನಗೆ ಯಾವ ಅನುಮಾನಗಳು ಇರದಂತೆ ನನ್ನನ್ನು ತಿಳಿದುಕೊಳ್ಳುತ್ತಿ , ಎಂದು ಸಾಕ್ಷಾತ್ ಕೃಷ್ಣನಿಂದಲೆ ಅರ್ಜುನ ಈ ಮಾತುಗಳನ್ನು ಕೇಳುತ್ತಾನೆ. ಕೃಷ್ಣನನ್ನು ತಿಳಿಯುವುದಾದರೆ, ವೇದ ಸಾಹಿತ್ಯ ಗಳಿಂದ, ಭಗವದ್ಗೀತೆಯಿಂದ, ಅಥವಾ ನೇರವಾಗಿ ಕೇಳಿದರೆ ಅಂತಹ ಸೌಭಾಗ್ಯಕ್ಕೆ ಎಣೆಯುಂಟೇ, ಕೃಷ್ಣನ ಕಥೆ, ವಿಚಾರಗಳನ್ನು, ಯಾರೋ ಹೇಳುವುದನ್ನು ಕೇಳಿಯೇ ಮನಸ್ಸಿಗೆ ಸಂತೋಷ ಸಿಗುವುದಾದರೆ ಸ್ವತಹ ಕೃಷ್ಣನಿಂದಲೇ ಈ ಮಾತನ್ನು ಕೇಳಿದ ಅರ್ಜುನನು ಅದೆಷ್ಟು ಪುಣ್ಯವಂತ. ತಾನೇ ಶ್ರೇಷ್ಠ ಎಂದುಕೊಂಡಿದ್ದ ಅರ್ಜುನನಿಗೆ ಭಗವಂತನು ಈ ಮೂಲಕ ಕಣ್ಣು ತೆರೆಸಿದ್ದಾನೆ



ಜ್ಞಾನವನ್ನು ಪುಸ್ತಕದಿಂದ ಅಥವಾ ಜೀವನದ ಅನುಭವದಿಂದ ತಿಳಿಯುವಂತಹದು. ಜೀವನಕ್ಕೆ ಅಳವಡಿಸಿಕೊಂಡರೆ ಅದು ವಿಜ್ಞಾನ. ಯಾವುದೇ ಜ್ಞಾನವನ್ನು ವಿಜ್ಞಾನದ ಸಹಿತ ವಿಷಯವನ್ನು ಪೂರ್ತಿ ತಿಳಿದುಕೊಂಡಮೇಲೆ, ಬಾಕಿ ತಿಳಿದುಕೊಳ್ಳಬೇಕಾದುದು ಇರುವುದಿಲ್ಲವೋ ಅಂತಹ ಜ್ಞಾನವನ್ನು ವಿಜ್ಞಾನ ಯುಕ್ತವಾಗಿ ನಿನಗೆ ಹೇಳುತ್ತೇನೆ. ಜ್ಞಾನ-ವಿಜ್ಞಾನ ಸಮ ಪ್ರಮಾಣದಲ್ಲಿ ಬೆರೆಯುತ್ತದೆಯೋ ಆಗ ಭಗವಂತನ ಪೂರ್ಣ ದರ್ಶನ ನಿನಗಾಗುತ್ತದೆ. ಈ ಜಗತ್ತಿನ ಸರ್ವಸ್ವವೂ ನಾನೇ ಆದಿ- ಮಧ್ಯ-ಅಂತ್ಯ, ಎಲ್ಲವೂ ನಾನೇ. ಆಗ ಅರ್ಜುನನು, ಕೃಷ್ಣಾ ನಿನ್ನ ಗುಪ್ತವಾದ ಆಧ್ಯಾತ್ಮಿಕ ಉಪದೇಶದಿಂದ ನನ್ನ ಅಜ್ಞಾನವನ್ನು ದೂರ ಮಾಡಿದೆ. ನಿನ್ನಿಂದ ಪ್ರಾಣಿಗಳ ಉತ್ಪತ್ತಿ ಮತ್ತು ಜಗತ್ತಿನ ಪ್ರಳಯದ ಬಗ್ಗೆ ಹಾಗೂ ನಿನ್ನ ಅವಿನಾಶಿ ಮಹಿಮೆಯನ್ನು ತಿಳಿದುಕೊಂಡೆ. ಪುರುಷೋತ್ತಮ ಸಕಲ ಜೀವಿಗಳ ಉತ್ಪತ್ತಿ ಮತ್ತು ನಶಿಸುವುದರ ಬಗ್ಗೆ ನಾನು ನಿನ್ನಿಂದ ವಿವರವಾಗಿ ಕೇಳಿದೆನು. ಕೊನೆಯಿಲ್ಲದ ಮಹಿಮೆಗಳನ್ನು ಕೂಡ ಕೇಳಿದೆನು. ನಿನ್ನನ್ನು ನೀನು ಇರುವ ಹಾಗೆಯೇ ವರ್ಣಿಸಿರುವೆ. ಅದನ್ನು ನೇರವಾಗಿ ನಾನು ನೋಡಲು ನನಗೆ ಸಾಧ್ಯವಿದೆ ಎಂದು ನಿನಗೆ ಅನಿಸುವುದಾದರೆ ನಿನ್ನ ದಿವ್ಯವಾದ ರೂಪವನ್ನು ನನಗೆ ತೋರಿಸು ಎಂದು ಅರ್ಜುನನ ದೈನ್ಯತೆಯಿಂದ ಕೇಳಿದನು

 

ಅರ್ಜುನನ ಮಾತುಗಳನ್ನು ಕೇಳಿ ಕೃಷ್ಣನು ಪ್ರಸನ್ನನಾದನು. ಪಾರ್ಥ ನನ್ನ ಲಕ್ಷಾಂತರ ಬಣ್ಣಗಳು, ಆಕಾರಗಳು, ವಿಧ ವಿಧವಾದ ದಿವ್ಯ ರೂಪಗಳನ್ನು ನೋಡು ಎಂದು, ಹೂಂಕರಿಸುತ್ತಿದ್ದಂತೆ, ಆದಿತ್ಯರು, ವಸುಗಳು, ರುದ್ರರು, ಅಶ್ವಿನಿ ಕುಮಾರರು, ಮತ್ತು ಎಲ್ಲಾ ವಾಯು ದೇವತೆಗಳು, ಹಿಂದೆ ಯಾರೂ ನೋಡಿರದ ಅದ್ಭುತಗಳು, ಅರ್ಜುನ ನೀನು ಏನನ್ನು ಅಪೇಕ್ಷಿಸುತ್ತೀಯೋ, ಅವನ್ನೆಲ್ಲಾ ನೋಡು, ಆದರೆ ಅರ್ಜುನ ನಿನ್ನ ಈಗಿನ ಕಣ್ಣುಗಳಿಂದ ನನ್ನನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ದಿವ್ಯವಾದ ದೃಷ್ಟಿಯನ್ನು ಕೊಡುತ್ತೇನೆ. ನನ್ನ ಯೋಗ ಶಕ್ತಿಯನ್ನು ನೋಡು. ಕೃಷ್ಣ ಹೀಗೆ ಹೇಳಿ ನಂತರ ಅರ್ಜುನನಿಗೆ ತನ್ನ ದಿವ್ಯವಾದ ವಿಶ್ವ ರೂಪವನ್ನು ತೋರಿಸಿದನು



ಅನೇಕ ಮುಖಗಳು, ಕಣ್ಣುಗಳು, ಅನೇಕ ಆಶ್ಚರ್ಯಕರವಾದ ದರ್ಶನಗಳು, ಅನೇಕ ದಿವ್ಯಾಭರಣಗಳು, ಅನೇಕ ಆಯುಧಗಳು, ಅನೇಕ ದಿವ್ಯ ಹಾರಗಳು,ಧರಿಸಿದ ದಿವ್ಯವಸ್ತ್ರಗಳು, ದಿವ್ಯ ಸುಗಂಧಗಳು, ಎಲ್ಲವು ಸಾವಿರ ಕೋಟಿ ಲಕ್ಷದ ವಜ್ರದಷ್ಟು ಪ್ರಕಾಶವಾಗಿ ಹೊಳೆಯುತ್ತಿತ್ತು. ಆದಿ ಅಂತ್ಯಗಳಿಲ್ಲದ ವಿಶ್ವದೆಲ್ಲೆಡೆ ವ್ಯಾಪಿಸಿತ್ತು. ಭಗವಂತನ ತೇಜಸ್ಸು ಸಹಸ್ರಾರು ಸೂರ್ಯಪ್ರಕಾಶ ದಷ್ಟಿತ್ತು. ವಿಭಜಿತವಾದ ಸಂಪೂರ್ಣ ವಿಶ್ವವನ್ನು ಒಂದೇ ಕಡೆ ನೋಡಿದನು. ಇಂತಹವಿಸ್ಮಯಗಳನ್ನು ನೋಡಿ ದಿಗ್ಭ್ರಮೆಗೊಳಗಾಗಿ ತಲ್ಲಣಗೊಂಡು, ಭಾವೋದ್ವೇಗದಿಂದ ರೋಮಾಂಚನಗೊಂಡನು. ಪರಮಪುರುಷ ಶ್ರೇಷ್ಠನಾದ ಭಗವಂತನನ್ನೇ ನೋಡುತ್ತಾ ದೇವ ದೇವೋತ್ತಮನನ್ನು ಪ್ರಾರ್ಥಿಸುತ್ತಾ, ಅರ್ಜುನನು ತಲೆಬಾಗಿ ನಮಸ್ಕರಿಸಿ, ಕೈಮುಗಿದು ಹೀಗೆ ಹೇಳಿದನು

 

                                                                         PIC-1

  

ಪ್ರಭುವೇ ಎಲ್ಲಾ ದೇವತೆಗಳು, ಕಮಲದ ಮೇಲೆ ಕುಳಿತ ಬ್ರಹ್ಮನನ್ನು, ಶಿವನನ್ನು, ಮಹರ್ಷಿಗಳು ಮತ್ತು ದಿವ್ಯ ಸರ್ಪಗಳು, ಅನೇಕ ತೋಳುಗಳು ಕಣ್ಣುಗಳು, ಹೊಟ್ಟೆಗಳು, ಮುಖಗಳನ್ನು ನೋಡಿದೆನು, ಆದರೆ ಆದಿ, ಮಧ್ಯ ಮತ್ತು ಅಂತ್ಯ ಯಾವುದು ಕಾಣುವುದಿಲ್ಲ. ಹೊಳೆಯುವ ಕಿರೀಟ, ಗದೆ, ಚಕ್ರ, ಪ್ರಜ್ವಲಿಸುತ್ತಿರುವ ಸೂರ್ಯನ ಪ್ರಕಾಶದಿಂದ ನಿನ್ನನ್ನು , ನಿನ್ನ ವಿರಾಟ್ ರೂಪವನ್ನು, ನೋಡಲು ಕಷ್ಟವಾಗಿದೆ. ಮೂರು ಲೋಕಗಳನ್ನು ನಿನ್ನೊಳಗೆ ಅಡಗಿಸಿಕೊಂಡು, ಭೂಮ್ಯಾ ಕಾಶಗಳನ್ನೆಲ್ಲಾ ವ್ಯಾಪಿಸಿರುವ ನಿನ್ನನ್ನು ನೋಡಲು ದೇವಾನು ದೇವತೆಗಳೆಲ್ಲರ ನೆರೆದಿದ್ದಾರೆ. ನಿನ್ನ ಅಪರಿಮಿತ ಮಹಿಮೆಗಳನ್ನು ತಿಳಿಯದೆ ಗೆಳೆಯನೆಂದು ಭಾವಿಸಿ, ಯಾವುದನ್ನು ಪ್ರೀತಿಯಿಂದಲೋ, ಪ್ರಮಾದದಿಂದಲೊ, ಅರಿಯದೆ, ಯೋಚಿಸದೆ ಹೇಳಿದ್ದೆನೋ, ಎಲ್ಲವಕ್ಕೂ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ. ಸಕಲ ಲೋಕಗಳಿಗೆ ತಂದೆ ನೀನು, ಪೂಜನೀಯನು, ಪರಮಗುರುವು, ದೇವರಿಗೆಲ್ಲಾ ದೇವನು, ಮಹಿಮಾನ್ವಿತನು, ನೀನೇ ಆಗಿರುವೆ ನಿನಗೆ ಸಮಾನರು, ಶ್ರೇಷ್ಠರು ಮೂರು ಲೋಕದಲ್ಲಿ ಯಾರೂ ಇಲ್ಲ .ಆದ್ದರಿಂದ, ತಂದೆಯು ಮಗನನ್ನು, ಸ್ನೇಹಿತ ಸ್ನೇಹಿತನನ್ನು, ಪ್ರಿಯಕರನು ಪ್ರಿಯತಮೆಯನ್ನು, ಕ್ಷಮಿಸುವಂತೆ ನನ್ನನ್ನು ಕ್ಷಮಿಸು. ಎಂದು ಭಕ್ತಿಯಿಂದ ನಮಸ್ಕರಿಸಿದನು.



ಕೃಷ್ಣನು, ತನ್ನ ಭಯಾನಕವಾದ ವಿಶ್ವ ರೂಪವನ್ನು ಸಂಹರಿಸಿ, ಮುಕುಟವನ್ನು ಧರಿಸಿದ, ಶಂಖ, ಚಕ್ರ ,ಗದಾದಾರಿಯಾಗಿ, ಚತುರ್ಭುಜನಾದ ಮಂದಸ್ಮಿತ ಮುಗುಳುನಗೆಯ ದರ್ಶನ ಕೊಟ್ಟನು. ಅರ್ಜುನ ಯಾರು ನನಗಾಗಿ ಕರ್ಮಗಳನ್ನು ಮಾಡುವನೋ, ನನ್ನನ್ನು ಪರಮಾತ್ಮನೆಂದು ಪರಿಗಣಿಸಿ ನನ್ನ ಭಕ್ತಿಸೇವೆಯಲ್ಲಿ ತೊಡಗುವನೋ, ಕಾಮ್ಯ ಕರ್ಮಗಳಿಂದ ಮತ್ತು ಊಹಾತ್ಮಕ ಚಿಂತನೆಗಳಿಂದ ಮುಕ್ತ ನಾಗಿರುವನೋ, ಸಕಲ ಜೀವಿಗಳ ಮಿತ್ರನೋ, ಅವನು ನನ್ನಲ್ಲಿಗೆ ಬರುತ್ತಾನೆ. ಎಂದು ಶ್ರೀಕೃಷ್ಣ ಅಭಯ ನೀಡಿ ಅರ್ಜುನನಿಗೆ ಯುದ್ಧೋತ್ಸಾಹವನ್ನು ತುಂಬಿ, ಯುದ್ಧಕ್ಕೆ ಸಿದ್ಧನಾದನು. 🪻ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೆ ವಿಶ್ವರೂಪದರ್ಶನ ಯೋಗೋ ನಾಮ ಏಕಾದಶೋಧ್ಯಾಯ.


ಶ್ರೀಕೃಷ್ಣಾರ್ಪಣಮಸ್ತು


--------------------- Hari Om ---------------------