Saturday, September 5, 2026

ಚಿತ್ರಾಹುತಿ -- Chitrahuti

 

                                                                       Chitrahuti 

 

 

ಚಿತ್ರಾಹುತಿ -- Chitrahuti


ಊಟಕ್ಕೆ ಕುಳಿತಾಗ ಚಿತ್ರಾಹುತಿ ನೀಡುವ ಕ್ರಮ..

The practice of offering a symbolic portion of the
Meal before eating!


ಸನಾತನ ಧರ್ಮದಲ್ಲಿ ಮಾನವರು ಪಶು ಪಕ್ಷಿ ಗಳಂತೆ ಆಹಾರವನ್ನು ಎಲೆ ಅಥವ ತಟ್ಟೆಯಲ್ಲಿ ಹಾಕಿದೊಡನೇ ಮುಕ್ಕಲು ಪ್ರಾರಂಭಿಸುವುದಿಲ್ಲ ..ಅವರು ಊಟವನ್ನು ಒಂದು ಯಜ್ಞ ಎಂದು ಭಾವಿಸುತ್ತಾರೆ. ಪಂಡಿತರಿಂದ ಒಬ್ಬ ಸಾಮಾನ್ಯ ಗೃಹಸ್ತರಾದಿಯಾಗಿ ಅವರ ಊಟದ ಪದ್ಧತಿ ಹೀಗಿರುತ್ತದೆ ----

ಭೋಜನ ಸ್ವೀಕಾರಕ್ಕೂ ಮೊದಲು -- Before Partaking of the Meal



1) ಪರಿಷಿಂಚನೆ

ಎಲ್ಲಾ ಪದಾರ್ಥ ವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:

ಓಂ ಭೂರ್ಭುವಃ ಸ್ವಃ |

ಸತ್ಯಂ ತ್ವರ್ತೇ ನ ಪರಿಷಿಂಚಾಮಿ || (ಹಗಲಿಗೆ)
ಋತಂ ತ್ವಾ ಸತ್ಯೇನ ಪರಿಷಿಂಚಾಮಿ ||(ರಾತ್ರಿಗೆ)

ವಿಷ್ಣೋರನ್ನಂ ರಕ್ಷಸ್ವ

ಈ ಮಂತ್ರ ಹೇಳಿಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ಸುತ್ತ ವೃತ್ತಾಕಾರದಲ್ಲಿ ನೀರು ಸುತ್ತುಗಟ್ಟುವದು. ಇದುವೇ ಪರಿಷಿಂಚನೆ.

 

                                         Sprinkling Water around the Food before Eating

 

2) ಹವಿಸ್ಸು ಸಮರ್ಪಣೆ:

ಬಾಳೆ ಎಲೆಯ ಬಲ ಭಾಗದಲ್ಲಿ ಪ್ರಾರಂಭ ಮಾಡಿ ಯಮಾದಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ.

ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |
ಈ ನಾಲ್ಕು ಮಂತ್ರದಿಂದ

ಕೆಳಗಿನಿಂದ ಮೇಲಕ್ಕೆ ಉದ್ದ ನೆಟ್ಟಗೆ ಸಾಲಾಗಿ ನಾಲ್ಕು ಸಲ ಕಿಂಚಿತ್ ಅನ್ನ ಇಡುವುದು

ಚಿತ್ರಾಯ ನಮ:
ಚಿತ್ರಗುಪ್ತಾಯ ನಮ:
ಯಮಾಯ ನಮ:
ಯಮಧರ್ಮಾಯ ನಮ:

ಈ ನಾಲ್ಕು ಮಂತ್ರದಿಂದ ಕೆಳಗಿನಿಂದ ಮೇಲಕ್ಕೆ ಉದ್ದ ಸಾಲಾಗಿ ನಾಲ್ಕು ಕಡೆಗಳಲ್ಲಿಟ್ಟ ಅನ್ನದ ಮೇಲೆ ಕಿಂಚಿತ್ ನೀರು ಬಿಡುವುದು

 

                                                               another Picture

3) ಪ್ರಾರ್ಥನೆ:

ಬಲ ಕೈಲಿ ನೀರು ಹಿಡಿದುಕೊಂಡು ಈ ಕೆಳಗಿನ ಮಂತ್ರ ಪ್ರಾರ್ಥನೆ (ಅಭಿಮಂತ್ರಣೆ) ಮಾಡಿ
ಆ ನೀರನ್ನು ಶಬ್ದ ಮಾಡದೆ ಕುಡಿಯಬೇಕು.

'ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ' ಉತ್ತಿಷ್ಠ, ಲೋಹಿತ, ಪಿಂಗಲಾಕ್ಷ ,ಅಜಪುರುಷ, ಅಮೃತಋಷೀ, ಸತ್ಯೋದೇವತಾ,ಗಾಯತ್ರೀ ಛಂಧಃ, ಅಮೃತೋಪಸ್ತರಣಮಸಿ ಸ್ವಾಹಾ ||


                                                                    Chitrahuti-1

 

4) ಅನ್ನಪ್ರಾಶನ:

ಓಂ ಪ್ರಾಣಾಯ ಸ್ವಾಹಾ ||
ಓಂ ಅಪಾನಾಯ ಸ್ವಾಹಾ ||
ಓಂ ವ್ಯಾನಾಯ ಸ್ವಾಹಾ ||
ಓಂ ಉದಾನಾಯ ಸ್ವಾಹಾ ||
ಓಂ ಸಮಾನಾಯ ಸ್ವಾಹಾ ||

(ಅಗುಳು ನುಂಗುವುದು) ಈ ಮೇಲಿನ ಮಂತ್ರದಿಂದ
ಒಂದೊಂದು ಮಂತ್ರಕ್ಕೂ ಸ್ವಲ್ಪ ಸ್ವಲ್ಪ ಅನ್ನವನ್ನು ಭಕ್ಷಿಸುವುದು

 

                                                                     PIC-1   

5). ಆಪೋಶನ :


ದೇವರ ಪ್ರಸಾದವೆಂದು ಭಾವಿಸಿ ಊಟ ಮಾಡುವುದು ಮತ್ತು ಊಟ ಮಾಡುವಾಗ
ಭಗವಂತನ ಮಹಿಮೆಯನ್ನು ಕೀರ್ತಿಸುವುದು.


To Eat Food or Meal as Prasadam is a  God's Gift and Reciting Glory of the Lord 

in between while having the Meal.


--------------------------- Hari Om -----------------------

      
 


 
 

 

 
 

Friday, September 4, 2026

ಕೃಷ್ಣಾಷ್ಟಮಿಯ ಅರ್ಘ್ಯ – Krishnashtami Arghya

 

                                                                Krishnasthami Arghya

 

ಕೃಷ್ಣಾಷ್ಟಮಿಯ ಅರ್ಘ್ಯ – Krishnashtami Arghya

ಕೃಷ್ಣಾಷ್ಟಮಿ ದಿನದಿಂದ ಅರ್ಘ್ಯ ನೀಡಿದರೆ ಸಮಸ್ತ ಭೂಮಂಡಲ ದಾನ ಮಾಡಿದ ಪುಣ್ಯ ಬರುತ್ತದೆ.

ಭವಿಷ್ಯತ್ ಪುರಾಣ ಕೃಷ್ಣಾಷ್ಟಮಿಯಂದು ಮಾಡಿದ ಉಪವಾಸ ಇಪ್ಪತ್ತು ಕೋಟಿ ಏಕಾದಶಿ ಮಾಡಿದ ಪುಣ್ಯಕ್ಕೆ ಸಮ. ಆದರೆ ಕೃಷ್ಣಾಷ್ಟಮಿ ಮಾತ್ರ ಉಪವಾಸ ಮಾಡಿ ಏಕಾದಶಿಯನ್ನು ಬಿಡುವ ಹಾಗಿಲ್ಲ. ಬಿಟ್ಟರೆ ಪಾಪ ಬರುತ್ತೆ.

ಪರಮಾತ್ಮನ ವಿವಿಧ ರೂಪಗಳಲ್ಲಿ , ಅವತಾರಗಳಲ್ಲಿ ಭೇದ ಚಿಂತನೆ ಮಾಡಬಾರದು. ಆದರೂ ಕಾಲರೀತ್ಯ ಕೃಷ್ಣಾವತಾರ ಕಲಿಯುಗಕ್ಕೆ ಹತ್ತಿರವಿರುವುದರಿಂದ , ಅರ್ಘ್ಯ ಸಮರ್ಪಿಸಿ ಉಪವಾಸ ಮಾಡಬೇಕು.

ಕೃಷ್ಣಾಷ್ಟಮಿ ದಿನ ಪೂರ್ತಿ ಉಪವಾಸ ಮಾಡತಕ್ಕದ್ದು. ರಾತ್ರಿ ಅರ್ಘ್ಯ ಕೊಟ್ಟು ಮೇಲೆ ಫಲಾಹಾರ ಮಾಡಬಹುದಾ ? ಇಲ್ಲ. ಅರ್ಘ್ಯ ನಂತರ ತೀರ್ಥ ಸ್ವೀಕರಿಸಿ, ಅಂಗಾರ ಅಕ್ಷತೆಯನ್ನು ಧರಿಸಿ, ಶಯನ ಮಾಡಬಹುದು.

ಕೃಷ್ಣಾರ್ಘವನ್ನು ಚಂದ್ರೋದಯ ನಂತರವೇ ಕೊಡತಕ್ಕದ್ದು.

ನೈವೇದ್ಯ ದೇವರಿಗೆ ಮಾತ್ರ. ರಮಾನೈವೇದ್ಯ, ವೈಶ್ವದೇವ, ಹಸ್ತೋದಕ, ಬ್ರಹ್ಮಯಜ್ಞ ಇವುಗಳನ್ನು ಮಾರನೇ ದಿನವೇ ಮಾಡತಕ್ಕದ್ದು. ಉತ್ತರಾದಿ ಮಠ ಮತ್ತು ರಾಯರ ಮಠದವರು ತಿಥ್ಯಾಂತೇ ರಮಾ ನೈವೇದ್ಯಾದಿಗಳ ಮಾಡಬೇಕು.

ಯೋಗಾಯ ಯೋಗಪತಯೇ ಯೋಗೇಶ್ವರಾಯ ಯೋಗ ಸಂಭವಾಯ ಶ್ರೀ ಗೋವಿಂದಾಯ ನಮ: |

ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ ದೇವಕೀಂ ನಂದಗೋಪಂ ಯಶೋದಾಂ ಚ ಸುಭದ್ರಾಂ ತತ್ರ ಪೂಜಯೇತ್ |

ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇದೇವಕೀ ಸಹಿತ ಶ್ರೀ ಕೃಷ್ಣಾಯ ನಮ: | ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ಸಮರ್ಪಯಾಮಿ | (ಮೂರು ಸಾರಿ ಅರ್ಘ್ಯ ಕೊಡಬೇಕು)

ಕ್ಷೀರೋದಾರ್ಣವ ಸಂಬೂತ ಅತ್ರಿನೇತ್ರ ಸಮುದ್ಭವ ಗೃಹಾಣಾರ್ಘ್ಯಂ ಮಯಾ ದತ್ತ ರೋಹಿಣೀ ಸಹಿತಾಯ ಶಶಿನೇ ನಮ: | ರೋಹಿಣೀಸಹಿತಾಯ ಚಂದ್ರಮಸೇ ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ |

 

ಶ್ರೀ ಕೃಷ್ಣ ಪರಮಾತ್ಮನ ದುಷ್ಟ ನಿಗ್ರಹ

ಪೂತನಾಜೀವಿತಹರ : ದುರ್ಗೆಯಿಂದ ಕೃಷ್ಣನು ಬೇರೊಂದು ಕಡೆ ಬೆಳೆಯುತ್ತಿರುವ ವಿಷಯವರಿತ ಕಂಸ ತನ್ನ ಭೃತ್ಯಳಾದ ಪೂತನೆಯನ್ನು ಕೃಷ್ಣ ಸಂಹಾರಾರ್ಥ ನಿಯೋಜಿಸಿದ. ಕಂಸನ ದಾಸಿ ಪೂತನಿ ಮಾಯೆಯಿಂದ ಸ್ಫುರದ್ರೂಪಿಯಾಗಿ ವಿಷದ ಸ್ತನ್ಯಪಾನ ಮಾಡಿಸುತ್ತಾ ಮಕ್ಕಳನ್ನು ಕೊಲ್ಲುತ್ತಾ ಬಂದಳು. ಕೃಷ್ಣನನ್ನು ಎತ್ತಿಕೊಂಡಳು. ಕೃಷ್ಣನಿಗೆ ಸ್ತನ್ಯಪಾನ ಮಾಡಿಸುವ ನೆಪದಲ್ಲಿ ವಿಷವನುಣಿಸಿದಳು. ಕೃಷ್ಣನಾದರೋ ಹಾಲು ಹೀರುತ್ತಾ ಆಕೆಯ ಪ್ರಾಣವನ್ನೂ ಹೀರಿದನು. ಪೂತನೆಯು “ಹೋ” ಎಂದು ಅರಚುತ್ತಾ ನಿಜರೂಪದಲ್ಲಿ ಬಿದ್ದಾಗ, ಅವಳ ದೇಹ ಒಂದು ಯೋಜನೆವರೆಗೂ ಹರಡಿ ಬಿದ್ದು ಮರಗಿಡಗಳೆಲ್ಲ ಬಿದ್ದುಹೋಯಿತು. ಅವಳ ದೇಹದ ಮೇಲೆ ಕುಳಿತು ಕೃಷ್ಣ ಆಟವಾಡುತ್ತಿದ್ದನು. ಈ ಪೂತನಿಯಲ್ಲಿ ಜೀವದ್ವಯಾವೇಷವಿದ್ದು ರಾಕ್ಷಸಿ ಪೂತನಿ ನರಕಕ್ಕೆ ಹೋದರೆ, ಊರ್ವಶಿಯು ಸ್ವರ್ಗ ಸೇರಿದಳು.

 

                                                                 Lord Krishna ( Udupi )

 

ದ್ಯೂತದ ಕಾಲದಲ್ಲಿ ಕೃಷ್ಣ ಎಲ್ಲಿದ್ದ?

ಸಾಳ್ವ ಮಹಾರಾಜ ದ್ವಾರಕೆಯನ್ನು ಮುತ್ತಿಗೆ ಹಾಕಿದ್ದರಿಂದ ಅಲ್ಲಿಗೆ ತೆರಳಿ ಅವನೊಂದಿಗೆ ಯುದ್ಧನಿರತನಾಗಿದ್ದರಿಂದ ಕೃಷ್ಣ ದ್ಯೂತಕಾಲ ದಲ್ಲಿ ಅಲ್ಲಿರಲಿಲ್ಲ. ಕೃಷ್ಣ ಸರ್ವಶಕ್ತ, ಸರ್ವನಿಯಾಮಕ ಆದರೂ ಲೋಕರೀತ್ಯ ತಾನು ದೂರ ಇದ್ದುದರಿಂದ ದ್ಯೂತದ ವಿಷಯ ತಿಳಿಯಲಿಲ್ಲ ಎಂದು ವಿಡಂಬನೆ ಮಾಡಿದ. ಕೃಷ್ಣನಿಗೆ ನಿಜಕ್ಕೂ ಅದು ಅಜ್ಞಾತವಿರಲಿಲ್ಲ ಎಂಬುದಕ್ಕೆ ತಾನಾಗಿಯೇ ದ್ರೌಪದಿಗೆ ಅಕ್ಷಯವಸ್ತ್ರ ನೀಡಿದ್ದು ನಿದರ್ಶನ.

ಸಾಳ್ವ ವಧೆ – ಸಾಳ್ವ ವಿಮಾನದಲ್ಲಿ ಕುಳಿತು ದ್ವಾರಕೆಯ ನನ್ನು ಹಿಂಸಿಸುತ್ತಿದ್ದ. ಕೃಷ್ಣ ಪುತ್ರ ಪ್ರದ್ಯುಮ್ನ ಸಾಳ್ವನೊಂದಿಗೆ ಯುದ್ದ ಮಾಡುತ್ತಿರುತ್ತಾನೆ. ಯುದ್ದಕ್ಕೆ ಬಂದವನು ಕೃಷ್ಣನಲ್ಲ, ಕೃಷ್ಣ ಪುತ್ರ ಪ್ರದ್ಯುಮ್ನ ಎಂದು ತಿಳಿದು, ಸಾಳ್ವ ವಿಮಾನದಿಂದ ಇಳಿದು ರಥವನೇರಿ ಯುದ್ಧ ಆರಂಭಿಸಿದ. ಪ್ರದ್ಯುಮ್ನನಾದರೋ, ಸಾಳ್ವ ನನ್ನು ಕೊಲ್ಲಲು ಕೃಷ್ಣ ನೀಡಿದ್ದ ವಿಶೇಷ ಬಾಣವನ್ನು ಪ್ರಯೋಗಿಸಲು ಉದ್ಯುಕ್ತನಾದ. ಆಗ ಅಶರೀರವಾಣಿ ನುಡಿಯಿತು – “ಸಾಳ್ವ ನನ್ನು ಕೊಲ್ಲಲು ಕೃಷ್ಣನ ಸಂಕಲ್ಪವಿದೆ. ನೀನು ಕೊಲ್ಲಲು ಪ್ರಯತ್ನಿಸಬೇಡ”. ಈ ಮಾತನ್ನು ಕೇಳಿದ ಪ್ರದ್ಯುಮ್ನ ಬಾಣವನ್ನು ಪ್ರಯೋಗಿಸಲಿಲ್ಲ. ಸಾಳ್ವ ವಿಮಾನ ವೇರಿ ತನ್ನ ರಾಜ್ಯಕ್ಕೆ ಹಿಂತಿರುಗಿದ. ದ್ವಾರಕೆಯನ್ನು ಹಾಳು ಮಾಡಿದ್ದು ಸಾಳ್ವನನ್ನು ಬೆನ್ನಟ್ಟಿ ಹೋದ ಕೃಷ್ಣ. ಸಾಳ್ವನಾದೂರು ಕೃಷ್ಣನ ಮೇಲೆ ಶಸ್ತ್ರಗಳ ಮತ್ತು ಮಹಾಸ್ತ್ರಗಳನ್ನು ಮಾಯೆಯಿಂದ ಪ್ರಯೋಗಿಸಿದ. ಆಗ ಸಾಳ್ವ ಪ್ರಯೋಗಿಸಿದ ಮಾಯೆಯಿಂದ ಕೃಷ್ಣ ಕೆಳಗೆ ಬಿದ್ದಂತೆಯೂ, ಆ ದಾನವರು ಆಯುಧಗಳಿಂದ ತಿವಿದು ಕೊಲ್ಲುತ್ತಿದ್ದಂತೆಯೂ ಕಾಣಿಸಿತು. ಆಗ ಕೃಷ್ಣನು ವಿಜ್ಞಾನಾಸ್ತ್ರದಿಂದ ಮಾಯೆಯನ್ನು ನಾವು ಮಾಡಿದ. ಸಾಳ್ವ ಬೆಟ್ಟಗಳ ಮಳೆಗರೆದಾಗ, ಕೃಷ್ಣನು ಸಾಳ್ವನ ಸೌಭ ವಿಮಾನವನ್ನು ಉರುಳಿಸಿ, ಬೀಳಿಸಿದಾಗ, ಅವನು ರಥವನೇರಿ ಯುದ್ದಕ್ಕೆ ಬರಲು, ಅವನ ತೋಳುಗಳನ್ನು, ಶಿರಸ್ಸನ್ನೂ ತುಂಡರಿಸಿ, ಸಾಳ್ವ ನನ್ನು ಸಂಹರಿಸಿದನು.

ಮತ್ತೆ ಕೃಷ್ಣಾರ್ಘ್ಯ ಮಂತ್ರ

ಶ್ರೀ ಕೃಷ್ಣಾರ್ಘ್ಯ ಮಂತ್ರ

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ II ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ II ದೇವಕೀಸಹಿತ-ಶ್ರೀಕೃಷ್ಣಾಯ ನಮಃ I ಇದಮರ್ಘ್ಯಂ ಸಮರ್ಪಯಾಮಿ

ಚಂದ್ರಾರ್ಘ್ಯ ಮಂತ್ರ:

ಕ್ಷೀರೋದಾರ್ಣವ ಸಂಭೂತ ಅತಿಗೋತ್ರಸಮುದ್ಭವ ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃ ಶಶಿನ್

ಸರ್ವಜನ ಸುಖಿನೋಭವತು -- ಶ್ರೀ ಕೃಷ್ಣಾರ್ಪಣಮಸ್ತು

------------------ Hari Om -----------------

 

ವಿಶ್ವರೂಪ ದರ್ಶನ – Vishwaroopa Darshana

 

                                                                 Vishwaroopa Darshana 

 

ವಿಶ್ವರೂಪ ದರ್ಶನ – Vishwaroopa Darshana


ಶ್ರೀ ಕೃಷ್ಣನ ವಿಶ್ವರೂಪ ದರ್ಶನ

Sri Krishnas Vishwaroopa Darshana


ಶ್ರೀ ಕೃಷ್ಣನ ಮೊದಲ ಸಾರ್ವತ್ರಿಕ ದರ್ಶನ ಇಲ್ಲಿದೆ.

ಭಗವಂತನ ವಿಶ್ವರೂಪ:

 

ಶ್ರೀಕೃಷ್ಣನ ಮೊದಲ ವಿಶ್ವರೂಪವನ್ನು ತಾಯಿ ಯಶೋಧ ತೊಡೆಯ ಮೇಲೆ ಮಲಗಿ ಹಾಲು ಕುಡಿಯುತ್ತಿದ್ದಾಗ ಆಕಳಿಸಿದ ಕಂದನ ಬಾಯಿಯಲ್ಲಿ ಬ್ರಹ್ಮಾಂಡವನ್ನೇ ನೋಡುತ್ತಾಳೆ. ಇನ್ನೊಂದು ಸಲ ಮಕ್ಕಳೊಂದಿಗೆ ಆಡುತ್ತಿದ್ದಾಗ ಮಣ್ಣು ತಿಂದ ಎಂದು ಹುಡುಗರು ತಾಯಿ ಯಶೋದೆಗೆ ಹೇಳಿದಾಗ, ಯಶೋಧ ಬಂದು, ಮಣ್ಣು ಏಕೆ ತಿಂದೆ ಎಂದು ಗದರಿದಾಗ ಇಲ್ಲ ಎಂದು ಎರಡು ಮೂರು ಸಲ ಹೇಳಿದರು ನಂಬದಿದ್ದಾಗ, ನೋಡು ಬೇಕಾದರೆ ಎಂದು ಕೃಷ್ಣನು ತನ್ನ ಬಾಯಿ ಕಳೆಯುತ್ತಾನೆ. ಆಗ ಯಶೋದೆಗೆ ಅಲ್ಲಿ ಬ್ರಹ್ಮಾಂಡವೇ ಕಾಣುತ್ತದೆ. ಕೃಷ್ಣನ ಮೊದಲ ವಿಶ್ವರೂಪ ದರ್ಶನ



ಕೃಷ್ಣ ದೊಡ್ಡವನಾದ ಮೇಲೆ ಕೌರವ ಪಾಂಡವರ ನಡುವೆ ಸಂಧಿಕಾರ್ಯ ಮಾಡಲು ಹಸ್ತಿನಾಪುರಕ್ಕೆ ರಾಯಭಾರಿಯಾಗಿ ಬರುತ್ತಾನೆ. ಕೃಷ್ಣನ ಹಿತೋಪದೇಶ ಕೌರವರಿಗೆ ಬೇಕಾಗಿರಲಿಲ್ಲ. ಮಾತಿಗೆ ಮಾತು ಬೆಳೆದು ದುರ್ಯೋಧನ ಕೃಷ್ಣನನ್ನು ಬಂಧಿಸಲು ಪಿತೂರಿ ಮಾಡುತ್ತಾನೆ. ಆಗ ಕೃಷ್ಣನು ನನ್ನನ್ನು ನೀನು ಬಂಧಿಸಲಾಗುವುದಿಲ್ಲ . ನೀನು ಚಿಟಿಕೆ ಹೊಡೆಯುವಷ್ಟರಲ್ಲಿ ಭೂಮಂಡಲವನ್ನೇ ನಾಶ ಮಾಡುತ್ತೇನೆ ಎಂದು ತನ್ನ ವಿಶ್ವ ರೂಪವನ್ನು ತೋರಿಸುತ್ತಾನೆ. ಇದನ್ನು ಭೀಷ್ಮ, ದ್ರೋಣ, ವಿದುರ ,ಸಂಜಯ, ಇವರುಗಳಿಗೆ, ಹಾಗೂ ಪ್ರಾರ್ಥನೆಯ ಮೇರೆಗೆ ಧೃತರಾಷ್ಟ್ರ ನಿಗೂ 'ವಿಶ್ವರೂಪ' ದರ್ಶನ ಅನುಗ್ರಹಿಸುತ್ತಾನೆ. ಸೂರ್ಯಕಿರಣ ಪ್ರಭೆಯ ಪ್ರಕಾಶವನ್ನು ಉಳಿದವರು ಬರೀಗಣ್ಣಿನಿಂದ ನೋಡಲಾಗದೆ ಕಣ್ಣು ಮುಚ್ಚಿದರು



ನಂತರ ಕುರುಕ್ಷೇತ್ರದ ಯುದ್ಧದ ಆರಂಭದಲ್ಲಿ ಶೋಕ ಮೋಹಿತನಾಗಿ ಅರ್ಜುನ ಯುದ್ಧ ಮಾಡಲು ಒಪ್ಪುವುದಿಲ್ಲ. ಕೃಷ್ಣನು ಅವನಿಗೆ ಆತ್ಮ ತತ್ವವನ್ನು ವಿವರಿಸಿ, ಗೀತೋಪದೇಶ ಮಾಡುತ್ತಾನೆ. ವಿಭೂತಿಗಳನ್ನು ವಿವರಿಸಿದಾಗ, ಅವುಗಳನ್ನು ತಾನು ಕಣ್ಣಾರೆ ನೋಡಬೇಕೆಂದು ಅರ್ಜುನನು ಶ್ರೀಕೃಷ್ಣನ ಮುಂದೆ ಕೈಮುಗಿದು ದೈನ್ಯತೆಯಿಂದ ಬೇಡುತ್ತಾನೆ. ಭಗವಂತನ ಅಪರಿಮಿತ ದರ್ಶನವನ್ನು, ಪರಿಮಿತವಾದ ಮನಸ್ಸಿನಿಂದ ನೋಡಬೇಕು, ಮನಸ್ಸಿನ ತುಂಬಾ ಭಗವಂತ ನಿನ್ನ ರೂಪವನ್ನು ತುಂಬಿಕೊಳ್ಳುವುದು ಹೇಗೆ ? ಎಂದು ಕೇಳಿದಾಗ, ಸ್ವತಃ ಕೃಷ್ಣನೇ ಆಶ್ವಾಸನೆ ಕೊಡುತ್ತಾನೆ.

 

                                                                    another Picture

 

ಅರ್ಜುನ ನಿನ್ನಲ್ಲಿ ಇರುವ ಸಂಶಯಗಳಿಗೆ ನಾನು ಸ್ಪಷ್ಟವಾಗಿ ತಿಳಿಸುತ್ತೇನೆ. "


"ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ ಪರ್ಯುಪಾಸತೇ ತೇಷಾಂ ನಿತ್ಯಾ ಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ"


ಕೃಷ್ಣ ಹೇಳಿರುವಂತೆ (ಅನನ್ಯವಾದ ಮನಸ್ಸಿನಿಂದ ಯಾರು ನನ್ನ ಸದಾ ಚಿಂತನೆ ಮಾಡುತ್ತಾರೋ ಅಂತಹ ನಿತ್ಯ ಯುಕ್ತರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.) ನೀನು ನನ್ನಲ್ಲಿ ಆಸಕ್ತಿ ಹೊಂದಿದವನಾಗಿ, ನನ್ನನ್ನೇ ಮನದಲ್ಲಿ ನಂಬಿ, ನನ್ನನ್ನೆ ತಿಳಿದವನಾಗಿ, ನನ್ನನ್ನೆ ಪೂಜಿಸಿ, ಸ್ತುತಿಸಿ, ಭಜಿಸಿ, ಆರಾಧಿಸುವನಾದರೆ, ನೀನು ಸರಿಯಾದ ರೀತಿಯಲ್ಲಿ ನನ್ನ ಸಮಗ್ರ ರೂಪವನ್ನು ತಿಳಿದುಕೊಳ್ಳುತ್ತೀ. ನಿನಗೆ ನಂಬಿಕೆ ಆಸಕ್ತಿ ಇರುವುದಾದರೆ, ನಿನಗೆ ಯಾವ ಅನುಮಾನಗಳು ಇರದಂತೆ ನನ್ನನ್ನು ತಿಳಿದುಕೊಳ್ಳುತ್ತಿ , ಎಂದು ಸಾಕ್ಷಾತ್ ಕೃಷ್ಣನಿಂದಲೆ ಅರ್ಜುನ ಈ ಮಾತುಗಳನ್ನು ಕೇಳುತ್ತಾನೆ. ಕೃಷ್ಣನನ್ನು ತಿಳಿಯುವುದಾದರೆ, ವೇದ ಸಾಹಿತ್ಯ ಗಳಿಂದ, ಭಗವದ್ಗೀತೆಯಿಂದ, ಅಥವಾ ನೇರವಾಗಿ ಕೇಳಿದರೆ ಅಂತಹ ಸೌಭಾಗ್ಯಕ್ಕೆ ಎಣೆಯುಂಟೇ, ಕೃಷ್ಣನ ಕಥೆ, ವಿಚಾರಗಳನ್ನು, ಯಾರೋ ಹೇಳುವುದನ್ನು ಕೇಳಿಯೇ ಮನಸ್ಸಿಗೆ ಸಂತೋಷ ಸಿಗುವುದಾದರೆ ಸ್ವತಹ ಕೃಷ್ಣನಿಂದಲೇ ಈ ಮಾತನ್ನು ಕೇಳಿದ ಅರ್ಜುನನು ಅದೆಷ್ಟು ಪುಣ್ಯವಂತ. ತಾನೇ ಶ್ರೇಷ್ಠ ಎಂದುಕೊಂಡಿದ್ದ ಅರ್ಜುನನಿಗೆ ಭಗವಂತನು ಈ ಮೂಲಕ ಕಣ್ಣು ತೆರೆಸಿದ್ದಾನೆ



ಜ್ಞಾನವನ್ನು ಪುಸ್ತಕದಿಂದ ಅಥವಾ ಜೀವನದ ಅನುಭವದಿಂದ ತಿಳಿಯುವಂತಹದು. ಜೀವನಕ್ಕೆ ಅಳವಡಿಸಿಕೊಂಡರೆ ಅದು ವಿಜ್ಞಾನ. ಯಾವುದೇ ಜ್ಞಾನವನ್ನು ವಿಜ್ಞಾನದ ಸಹಿತ ವಿಷಯವನ್ನು ಪೂರ್ತಿ ತಿಳಿದುಕೊಂಡಮೇಲೆ, ಬಾಕಿ ತಿಳಿದುಕೊಳ್ಳಬೇಕಾದುದು ಇರುವುದಿಲ್ಲವೋ ಅಂತಹ ಜ್ಞಾನವನ್ನು ವಿಜ್ಞಾನ ಯುಕ್ತವಾಗಿ ನಿನಗೆ ಹೇಳುತ್ತೇನೆ. ಜ್ಞಾನ-ವಿಜ್ಞಾನ ಸಮ ಪ್ರಮಾಣದಲ್ಲಿ ಬೆರೆಯುತ್ತದೆಯೋ ಆಗ ಭಗವಂತನ ಪೂರ್ಣ ದರ್ಶನ ನಿನಗಾಗುತ್ತದೆ. ಈ ಜಗತ್ತಿನ ಸರ್ವಸ್ವವೂ ನಾನೇ ಆದಿ- ಮಧ್ಯ-ಅಂತ್ಯ, ಎಲ್ಲವೂ ನಾನೇ. ಆಗ ಅರ್ಜುನನು, ಕೃಷ್ಣಾ ನಿನ್ನ ಗುಪ್ತವಾದ ಆಧ್ಯಾತ್ಮಿಕ ಉಪದೇಶದಿಂದ ನನ್ನ ಅಜ್ಞಾನವನ್ನು ದೂರ ಮಾಡಿದೆ. ನಿನ್ನಿಂದ ಪ್ರಾಣಿಗಳ ಉತ್ಪತ್ತಿ ಮತ್ತು ಜಗತ್ತಿನ ಪ್ರಳಯದ ಬಗ್ಗೆ ಹಾಗೂ ನಿನ್ನ ಅವಿನಾಶಿ ಮಹಿಮೆಯನ್ನು ತಿಳಿದುಕೊಂಡೆ. ಪುರುಷೋತ್ತಮ ಸಕಲ ಜೀವಿಗಳ ಉತ್ಪತ್ತಿ ಮತ್ತು ನಶಿಸುವುದರ ಬಗ್ಗೆ ನಾನು ನಿನ್ನಿಂದ ವಿವರವಾಗಿ ಕೇಳಿದೆನು. ಕೊನೆಯಿಲ್ಲದ ಮಹಿಮೆಗಳನ್ನು ಕೂಡ ಕೇಳಿದೆನು. ನಿನ್ನನ್ನು ನೀನು ಇರುವ ಹಾಗೆಯೇ ವರ್ಣಿಸಿರುವೆ. ಅದನ್ನು ನೇರವಾಗಿ ನಾನು ನೋಡಲು ನನಗೆ ಸಾಧ್ಯವಿದೆ ಎಂದು ನಿನಗೆ ಅನಿಸುವುದಾದರೆ ನಿನ್ನ ದಿವ್ಯವಾದ ರೂಪವನ್ನು ನನಗೆ ತೋರಿಸು ಎಂದು ಅರ್ಜುನನ ದೈನ್ಯತೆಯಿಂದ ಕೇಳಿದನು

 

ಅರ್ಜುನನ ಮಾತುಗಳನ್ನು ಕೇಳಿ ಕೃಷ್ಣನು ಪ್ರಸನ್ನನಾದನು. ಪಾರ್ಥ ನನ್ನ ಲಕ್ಷಾಂತರ ಬಣ್ಣಗಳು, ಆಕಾರಗಳು, ವಿಧ ವಿಧವಾದ ದಿವ್ಯ ರೂಪಗಳನ್ನು ನೋಡು ಎಂದು, ಹೂಂಕರಿಸುತ್ತಿದ್ದಂತೆ, ಆದಿತ್ಯರು, ವಸುಗಳು, ರುದ್ರರು, ಅಶ್ವಿನಿ ಕುಮಾರರು, ಮತ್ತು ಎಲ್ಲಾ ವಾಯು ದೇವತೆಗಳು, ಹಿಂದೆ ಯಾರೂ ನೋಡಿರದ ಅದ್ಭುತಗಳು, ಅರ್ಜುನ ನೀನು ಏನನ್ನು ಅಪೇಕ್ಷಿಸುತ್ತೀಯೋ, ಅವನ್ನೆಲ್ಲಾ ನೋಡು, ಆದರೆ ಅರ್ಜುನ ನಿನ್ನ ಈಗಿನ ಕಣ್ಣುಗಳಿಂದ ನನ್ನನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ದಿವ್ಯವಾದ ದೃಷ್ಟಿಯನ್ನು ಕೊಡುತ್ತೇನೆ. ನನ್ನ ಯೋಗ ಶಕ್ತಿಯನ್ನು ನೋಡು. ಕೃಷ್ಣ ಹೀಗೆ ಹೇಳಿ ನಂತರ ಅರ್ಜುನನಿಗೆ ತನ್ನ ದಿವ್ಯವಾದ ವಿಶ್ವ ರೂಪವನ್ನು ತೋರಿಸಿದನು



ಅನೇಕ ಮುಖಗಳು, ಕಣ್ಣುಗಳು, ಅನೇಕ ಆಶ್ಚರ್ಯಕರವಾದ ದರ್ಶನಗಳು, ಅನೇಕ ದಿವ್ಯಾಭರಣಗಳು, ಅನೇಕ ಆಯುಧಗಳು, ಅನೇಕ ದಿವ್ಯ ಹಾರಗಳು,ಧರಿಸಿದ ದಿವ್ಯವಸ್ತ್ರಗಳು, ದಿವ್ಯ ಸುಗಂಧಗಳು, ಎಲ್ಲವು ಸಾವಿರ ಕೋಟಿ ಲಕ್ಷದ ವಜ್ರದಷ್ಟು ಪ್ರಕಾಶವಾಗಿ ಹೊಳೆಯುತ್ತಿತ್ತು. ಆದಿ ಅಂತ್ಯಗಳಿಲ್ಲದ ವಿಶ್ವದೆಲ್ಲೆಡೆ ವ್ಯಾಪಿಸಿತ್ತು. ಭಗವಂತನ ತೇಜಸ್ಸು ಸಹಸ್ರಾರು ಸೂರ್ಯಪ್ರಕಾಶ ದಷ್ಟಿತ್ತು. ವಿಭಜಿತವಾದ ಸಂಪೂರ್ಣ ವಿಶ್ವವನ್ನು ಒಂದೇ ಕಡೆ ನೋಡಿದನು. ಇಂತಹವಿಸ್ಮಯಗಳನ್ನು ನೋಡಿ ದಿಗ್ಭ್ರಮೆಗೊಳಗಾಗಿ ತಲ್ಲಣಗೊಂಡು, ಭಾವೋದ್ವೇಗದಿಂದ ರೋಮಾಂಚನಗೊಂಡನು. ಪರಮಪುರುಷ ಶ್ರೇಷ್ಠನಾದ ಭಗವಂತನನ್ನೇ ನೋಡುತ್ತಾ ದೇವ ದೇವೋತ್ತಮನನ್ನು ಪ್ರಾರ್ಥಿಸುತ್ತಾ, ಅರ್ಜುನನು ತಲೆಬಾಗಿ ನಮಸ್ಕರಿಸಿ, ಕೈಮುಗಿದು ಹೀಗೆ ಹೇಳಿದನು

 

                                                                         PIC-1

  

ಪ್ರಭುವೇ ಎಲ್ಲಾ ದೇವತೆಗಳು, ಕಮಲದ ಮೇಲೆ ಕುಳಿತ ಬ್ರಹ್ಮನನ್ನು, ಶಿವನನ್ನು, ಮಹರ್ಷಿಗಳು ಮತ್ತು ದಿವ್ಯ ಸರ್ಪಗಳು, ಅನೇಕ ತೋಳುಗಳು ಕಣ್ಣುಗಳು, ಹೊಟ್ಟೆಗಳು, ಮುಖಗಳನ್ನು ನೋಡಿದೆನು, ಆದರೆ ಆದಿ, ಮಧ್ಯ ಮತ್ತು ಅಂತ್ಯ ಯಾವುದು ಕಾಣುವುದಿಲ್ಲ. ಹೊಳೆಯುವ ಕಿರೀಟ, ಗದೆ, ಚಕ್ರ, ಪ್ರಜ್ವಲಿಸುತ್ತಿರುವ ಸೂರ್ಯನ ಪ್ರಕಾಶದಿಂದ ನಿನ್ನನ್ನು , ನಿನ್ನ ವಿರಾಟ್ ರೂಪವನ್ನು, ನೋಡಲು ಕಷ್ಟವಾಗಿದೆ. ಮೂರು ಲೋಕಗಳನ್ನು ನಿನ್ನೊಳಗೆ ಅಡಗಿಸಿಕೊಂಡು, ಭೂಮ್ಯಾ ಕಾಶಗಳನ್ನೆಲ್ಲಾ ವ್ಯಾಪಿಸಿರುವ ನಿನ್ನನ್ನು ನೋಡಲು ದೇವಾನು ದೇವತೆಗಳೆಲ್ಲರ ನೆರೆದಿದ್ದಾರೆ. ನಿನ್ನ ಅಪರಿಮಿತ ಮಹಿಮೆಗಳನ್ನು ತಿಳಿಯದೆ ಗೆಳೆಯನೆಂದು ಭಾವಿಸಿ, ಯಾವುದನ್ನು ಪ್ರೀತಿಯಿಂದಲೋ, ಪ್ರಮಾದದಿಂದಲೊ, ಅರಿಯದೆ, ಯೋಚಿಸದೆ ಹೇಳಿದ್ದೆನೋ, ಎಲ್ಲವಕ್ಕೂ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ. ಸಕಲ ಲೋಕಗಳಿಗೆ ತಂದೆ ನೀನು, ಪೂಜನೀಯನು, ಪರಮಗುರುವು, ದೇವರಿಗೆಲ್ಲಾ ದೇವನು, ಮಹಿಮಾನ್ವಿತನು, ನೀನೇ ಆಗಿರುವೆ ನಿನಗೆ ಸಮಾನರು, ಶ್ರೇಷ್ಠರು ಮೂರು ಲೋಕದಲ್ಲಿ ಯಾರೂ ಇಲ್ಲ .ಆದ್ದರಿಂದ, ತಂದೆಯು ಮಗನನ್ನು, ಸ್ನೇಹಿತ ಸ್ನೇಹಿತನನ್ನು, ಪ್ರಿಯಕರನು ಪ್ರಿಯತಮೆಯನ್ನು, ಕ್ಷಮಿಸುವಂತೆ ನನ್ನನ್ನು ಕ್ಷಮಿಸು. ಎಂದು ಭಕ್ತಿಯಿಂದ ನಮಸ್ಕರಿಸಿದನು.



ಕೃಷ್ಣನು, ತನ್ನ ಭಯಾನಕವಾದ ವಿಶ್ವ ರೂಪವನ್ನು ಸಂಹರಿಸಿ, ಮುಕುಟವನ್ನು ಧರಿಸಿದ, ಶಂಖ, ಚಕ್ರ ,ಗದಾದಾರಿಯಾಗಿ, ಚತುರ್ಭುಜನಾದ ಮಂದಸ್ಮಿತ ಮುಗುಳುನಗೆಯ ದರ್ಶನ ಕೊಟ್ಟನು. ಅರ್ಜುನ ಯಾರು ನನಗಾಗಿ ಕರ್ಮಗಳನ್ನು ಮಾಡುವನೋ, ನನ್ನನ್ನು ಪರಮಾತ್ಮನೆಂದು ಪರಿಗಣಿಸಿ ನನ್ನ ಭಕ್ತಿಸೇವೆಯಲ್ಲಿ ತೊಡಗುವನೋ, ಕಾಮ್ಯ ಕರ್ಮಗಳಿಂದ ಮತ್ತು ಊಹಾತ್ಮಕ ಚಿಂತನೆಗಳಿಂದ ಮುಕ್ತ ನಾಗಿರುವನೋ, ಸಕಲ ಜೀವಿಗಳ ಮಿತ್ರನೋ, ಅವನು ನನ್ನಲ್ಲಿಗೆ ಬರುತ್ತಾನೆ. ಎಂದು ಶ್ರೀಕೃಷ್ಣ ಅಭಯ ನೀಡಿ ಅರ್ಜುನನಿಗೆ ಯುದ್ಧೋತ್ಸಾಹವನ್ನು ತುಂಬಿ, ಯುದ್ಧಕ್ಕೆ ಸಿದ್ಧನಾದನು. 🪻ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೆ ವಿಶ್ವರೂಪದರ್ಶನ ಯೋಗೋ ನಾಮ ಏಕಾದಶೋಧ್ಯಾಯ.


ಶ್ರೀಕೃಷ್ಣಾರ್ಪಣಮಸ್ತು


--------------------- Hari Om ---------------------



 

 

Thursday, September 3, 2026

ಶ್ರೀಕೃಷ್ಣಂ ಒಂದೇ ಜಗದ್ಗುರುಮ್ -- Sri Krishnam Onde Jagadgurum

 

                                                        Krishnam Onde Jagadgurum

 

 ಶ್ರೀಕೃಷ್ಣಂ ಒಂದೇ ಜಗದ್ಗುರುಮ್

ಜಗದ್ಗುರು ಶ್ರೀಕೃಷ್ಣ Jagadguru Sri Krishna

 

ಶ್ರೀ ಕೃಷ್ಣನನ್ನು_ಜಗದ್ಗುರು_ಎಂದು_ಯಾಕೆ_ಕರೆಯುವರು?

ಪ್ರಾಚೀನ ಕಾಲದಿಂದಲೂ ಗುರು-ಶಿಷ್ಯ ಪರಂಪರೆ ಅಸ್ತಿತ್ವದಲ್ಲಿದೆ. ಭೂಮಿಯ ಮೇಲಿನ ಮೊದಲ ಗುರು ಅಥವಾ ಆದಿ ಗುರು. ಯಾರು ಯೋಗ, ಧರ್ಮ ಮತ್ತು ಶಾಸ್ತ್ರಗಳ ಬಗ್ಗೆ ಸಪ್ತ ಋಷಿಗಳು (ಸಂತರು) ಕಲಿಸಿದರು . ಸಪ್ತ ಋಷಿಗಳಿಗೆ ಈ ಯೋಗ, ಸಾಧನೆ, ಮತ್ತು ಶಾಸ್ತ್ರಗಳನ್ನು ಆ ಕಾಲದ ಅತ್ಯಂತ ಶ್ರೇಷ್ಠ ಯೋಗಿಗಳಿಗೆ ಕಲಿಸಿದರು ಮತ್ತು ಅಂದಿನಿಂದ ಈ ಪ್ರಕ್ರಿಯೆಯು ನಡೆಯುತ್ತಿದೆ.



ಗುರು ತನ್ನ ಜ್ಞಾನವನ್ನು ತನ್ನ ಶಿಷ್ಯರಿಗೆ ಕೊಟ್ಟು ನಂತರ ಶಿಷ್ಯರು ಈ ಜ್ಞಾನವನ್ನು ಅಳವಡಿಸಿಕೊಂಡು ತಮ್ಮನ್ನು ಗುರುಗಳನ್ನಾಗಿ ಮಾಡಿ ಕೊಳ್ಳುತ್ತಾರೆ. ನಂತರ ಅವರು ಅನೇಕ ಇತರ ಶಿಷ್ಯರಿಗೆ ಕಲಿಸುತ್ತಾರೆ, ಅದರಲ್ಲಿ ಮತ್ತೆ ಈ ಶಿಷ್ಯರ ಸಣ್ಣ ಗುಂಪು, ಅವರು ಪಡೆದ ಜ್ಞಾನದ ಗುಣದಿಂದ, ಗುರುಗಳಾಗಿ ಬದಲಾಗುತ್ತಾರೆ ಮತ್ತು ಮತ್ತಷ್ಟು ಅವರು ಕೆಲವು ಶಿಷ್ಯರನ್ನು ಸಂಗ್ರಹಿಸಿ ಯೋಗ ಮತ್ತು ಸಾಧನದ ಬಗ್ಗೆ ಕಲಿಸುತ್ತಾರೆ ಮತ್ತು ಈ ರೀತಿಯಾಗಿ ಈ ವಲಯವು ಮುಂದು ವರಿಯುತ್ತದೆ ಇದು. ಇದನ್ನು ಗುರು-ಶಿಷ್ಯ ಪರಂಪರೆ ಎಂದು ಕರೆಯಲಾಗುತ್ತದೆ.



ಆದರೆ ಶ್ರೀ ಕೃಷ್ಣನನ್ನು ಯೋಗಿ ಎಂದು ಕರೆಯುವೆವು ಬಲ್ಲವರಿಗೆಲ್ಲ ಹೇಳುವವ ಇವನು ಅದನ್ನು ಹೇಳುವ ಕಲೆ ಇವನಿಗೆ ಗೊತ್ತಿರುತ್ತದೆ ಅದು ಹೇಗೆ ಅಂತಾ ನೀವು ಕೇಳಬಹುದು ಇಲ್ಲಿ ನೀವು ಒಂದು ಅರ್ಥ ಮಾಡಿಕೊಳ್ಳಿ ಶ್ರೀಕೃಷ್ಣ ಪರಮ ಸತ್ಯದ ಮೇಲೆ ನೆಲೆಸಿರುವನು. ಸತ್ಯ ವನ್ನು ಹೇಳುವವ ಮಾತ್ರ ಪರಮ ಯೋಗಿ ಆಗಬಲ್ಲ! ಅಸಾಮಾನ್ಯ ಗುರುವಾಗಬಲ್ಲ



ಜೀವನದಲ್ಲಿ ಅತಿ ಸುಲಭವಾಗಿರುವುದನ್ನು ಅತಿ ಕೃಷ್ಟವಾದ ಭಾಷೆಯಲ್ಲಿ ಕೆಲವರು ಹೇಳುವರು ಆ ಭಾವ ನಮಗೆ ಕಾಣದ ರೀತಿಯಲ್ಲಿ ಪಾಂಡಿತ್ಯ ಅದನ್ನು ಅರ್ಥೈಸುವುದು ಕಷ್ಟ . ಆದರೆ ಶ್ರೀಕೃಷ್ಣನ ಭಾಷೆಯಾದರೂ ಜೀವನದ ಪರಮ ಸತ್ಯಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವಂತೆ ಇರುವುದು . ಅದು ಹೃದಯದಿಂದ ಬಂದ ಭಾಷೆ ಮತ್ತೊಂದು ಹೃದಯಕ್ಕೆ ನೇರವಾಗಿ ತಾಕುವುದು ಶ್ರೀ ಕೃಷ್ಣ ಇಲ್ಲಿ ಏನು ಮಾಡುತ್ತಿರುವನು ? ಅನಾವಶ್ಯ ಕವಾದ ಭಾವನೆಗಳನ್ನೆಲ್ಲ ಬಿಟ್ಟು ಯಾವುದು ಸಾರವೋ! ಭವ ಜೀವಿಗಳ ಅಜ್ಞಾನದ ರೋಗವನ್ನು ಗುಣಮಾಡುವವನು ಇವನು ಅಂತಹ ಅಮೃತವನ್ನು ನೀಡಿದವನು ಕೃಷ್ಣ

 


                                                                           PIC-1

 

ಅರ್ಜುನಂತೆ ಸಂದೇಹದ ಸುಳಿಗೆ ಸಿಕ್ಕಿ ದಾರಿ ಕಾಣದೆ ದಿಕ್ಕೆಟ್ಟವರು ದಾರಿ ತೋರುವವನು ಬರಲಾರನೇ? ಎಂದು ಕಾತುರದಿಂದ ನಿಂತು ಬಿಡುವರು ಅರಿಯಬೇಕಾದ ಪರಮ ಸತ್ಯವನ್ನು ಲೋಕಕ್ಕೆ ತಿಳಿಸ ಬಂದವನು ಶ್ರೀ ಕೃಷ್ಣ ಆಧ್ಯಾತ್ಮಿಕ ವಿಷಯ ತಿಳಿಯುವುದರಲ್ಲಿ ನಾವು ನೀವು ಅಸುಳೆಗಳು ಇದನ್ನು ನೀವು ನಾವು ಅರ್ಥ ಮಾಡಿ ಕೊಳ್ಳ ಬೇಕು ಇಲ್ಲಿ ಕೃಷ್ಣನು ಗೀತೆ ಭೋಧಿಸುವಾಗ ಶ್ರೀಕೃಷ್ಣನ ಮುಂದೆ ಅರ್ಜುನನು ಮಾತ್ರ ಅಲ್ಲ ಇರುವುದು ಅರ್ಜುನನು ನೇರ ಪ್ರತಿನಿಧಿಯಂತೆ ಇರುವನು ಭಗವಂತ ಮುಖ್ಯವಾಗಿ ಮಾನವ ಕೋಟಿಗೆ ಇಲ್ಲಿ ಸಂದೇಶ ನೀಡುವನು



"ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್

 

ವಸುದೇವನ ಮಗ ಕಂಸನನ್ನು ಕೊಂದವನು ದೇವಕಿಗೆ ಪರಮಾ ನಂದವನ್ನು ಉಂಟು ಮಾಡಿದವನು ಶಿಷ್ಯನಾದವನು ಗುರುವಿಗೆ ಇಲ್ಲಿ ನಮಿಸುವನು ಅರ್ಜುನ ಶ್ರೀ ಕೃಷ್ಣನ ಪ್ರೀಯ ಸಖ ಆದರೂ ಭಗವದ್ಗೀತೆಯಿಂದ ಅರ್ಜುನ ತಿಳಿದ ಜ್ಞಾನ ಅನಂತ ಅಪರಿಮಿತ.
ಕೃಷ್ಣನನ್ನು ಅರ್ಜುನ ಗುರುವಾಗಿ ಸ್ವೀಕರಿಸುವನು



ಈ ಮೇಲಿನ ಭಗವದ್ಗೀತೆಯ ಶ್ಲೋಕದಲ್ಲಿ ಶ್ರೀಕೃಷ್ಣನನ್ನು ಕೊಂಡಾಡು ವರು ಅವನು ವಸುದೇವ ದೇವಕಿಯರಿಗೆ ಪರಮಾನಂದವನ್ನು ಉಂಟು ಮಾಡಿದವನು ಒಬ್ಬ ಮಗುವಿನಿಂದ ಅಪ್ಪ ಅಮ್ಮ ಎನಿಸಿ ಕೊಂಡಾಗ ಆಗುವ ಆನಂದವನ್ನು ಹೆತ್ತವರೇ ಬಲ್ಲರು! ಆ ಮಗು ಸಾಧಾರಣ ಮಗುವಲ್ಲದೇ ಇಡೀ ಬ್ರಹ್ಮಾಂಡ ಒಡೆಯ ನಾದವನು , ಅವನಿಗೆ ಜನ್ಮ ನೀಡುವರು , ಅವನು ಮಾಡುವ ಲೀಲೆಗಳನ್ನು ನೋಡುವರು



ಧರ್ಮದ ರಕ್ಷಣೆಗೆ ನಿಂತ ಶ್ರೀ ಕೃಷ್ಣನು ತನ್ನ ಸೋದರ ಮಾವನಾ ದರೂ ಕಂಸನನ್ನು ಕೊಲ್ಲುವನು ಅವನ ಅವತಾರವೇ ಆಧರ್ಮವನ್ನು ನಿರ್ಧಾಕ್ಷಿಣ್ಯವಾಗಿ ಕೀಳಬೇಕು ಶ್ರೀಕೃಷ್ಣ ಈ ಕೆಲಸವನ್ನು ಮಾಡುವಾಗ ಇವನಿಗೆ ಸ್ವಲ್ಪವೂ ಅರಿವಿನ ಅಗತ್ಯ ಬೇಕಿಲ್ಲ ಇವನು ಜಗದ್ಗುರು ಆದರೆ ನರ ಮನುಷ್ಯರಾದ ನಮಗೆ ಗೀತೆಯ ಬೆಳಕು ಬೇಕು ಆ ಬೆಳಕಿನ ಜೊತೆಗೆ ನಾವು ಬದುಕಬೇಕು.


--------------------------- Hari Om ---------------------------

 

 

 

Wednesday, September 2, 2026

ಶ್ರೀ ಕೃಷ್ಣ ಜನ್ಮಾಷ್ಟಮಿ -- Sri Krishna Janmastami

 

                                                             Sri Krshna Janmastami

 

ಶ್ರೀ ಕೃಷ್ಣ ಜನ್ಮಾಷ್ಟಮಿ -- Sri Krishna Janmastami

 


                                    Baby Krishna

 

ಕತ್ತಲೆಯಿಂದ ಜ್ಞಾನದೆಡೆಗೆ: ಕೃಷ್ಣಾವತಾರ: ಪುರಾಣ, ವಿಜ್ಞಾನ ಮತ್ತು ಜೀವನ ದರ್ಶನ

ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಕೇವಲ ಒಂದು ಹಬ್ಬವಲ್ಲ; ಅದು ಪ್ರೀತಿ, ಭಕ್ತಿ, ಧರ್ಮ ಮತ್ತು ಬದುಕಿನ ಸತ್ಯಗಳ ಮಹಾಸಂಗಮ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ಕತ್ತಲ ರಾತ್ರಿಯಲ್ಲಿ ಹುಟ್ಟಿದ ಕೃಷ್ಣ, ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ಮಹಾನಾಯಕ. ಈ ದಿನದ ಪೌರಾಣಿಕ, ಐತಿಹಾಸಿಕ, ವೈಜ್ಞಾನಿಕ ಮತ್ತು ಭಾವನಾತ್ಮಕ ಆಯಾಮಗಳ ಒಂದು ಸುಂದರ ನೋಟ ಇಲ್ಲಿದೆ.



. ಪೌರಾಣಿಕ ಹಿನ್ನೆಲೆ: ಕತ್ತಲೆಯಿಂದ ಬೆಳಕಿನೆಡೆಗೆ


ದ್ವಾಪರ ಯುಗದಲ್ಲಿ ಕಂಸನ ಅಧರ್ಮ ಮತ್ತು ಅತ್ಯಾಚಾರಗಳು ಮಿತಿಮೀರಿದಾಗ, ಭೂಮಾದೇವಿಯ ಮೊರೆ ಆಲಿಸಿದ ವಿಷ್ಣು ದೇವಕಿಯ ಎಂಟನೇ ಗರ್ಭದಲ್ಲಿ ಅವತರಿಸಲು ನಿರ್ಧರಿಸಿದನು. ಕಾರಾಗೃಹದ ಬಂಧನ, ಹೊರಗೆ ಬಿರುಗಾಳಿ, ಸಿಡಿಲು, ಸುರಿಯುವ ಮಳೆ ಮತ್ತು ಉಕ್ಕಿ ಹರಿಯುತ್ತಿದ್ದ ಯಮುನಾ ನದಿ—ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅರ್ಧರಾತ್ರಿ ಕೃಷ್ಣ ಜನಿಸಿದನು. ವಸುದೇವ ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಗೋಕುಲಕ್ಕೆ ತಲುಪಿಸಿ ಯಶೋದೆಯ ಮಡಿಲಿಗೆ ನೀಡಿದನು. ಅಧರ್ಮವನ್ನು ಅಳಿಸಿ ಧರ್ಮವನ್ನು ಸಂಸ್ಥಾಪಿಸಲು ಪರಮಾತ್ಮ ತಳೆದ ಅವತಾರವೇ ಕೃಷ್ಣಾವತಾರ.



. ಐತಿಹಾಸಿಕ ಮತ್ತು ವಾಸ್ತವ ಸತ್ಯ


ಕೃಷ್ಣ ಕೇವಲ ಕಲ್ಪನೆಯಲ್ಲ, ಆತ ಭಾರತದ ಭವ್ಯ ಇತಿಹಾಸದ ಜೀವಂತ ಭಾಗ.
ಖಗೋಳಶಾಸ್ತ್ರದ ಪುರಾವೆ: ಭಾಗವತ ಮತ್ತು ಮಹಾಭಾರತದಲ್ಲಿ ಉಲ್ಲೇಖವಾಗಿರುವ ಗ್ರಹ-ನಕ್ಷತ್ರಗಳ ಸ್ಥಿತಿಯನ್ನು ಆಧುನಿಕ ಖಗೋಳ ತಂತ್ರಜ್ಞಾನದಿಂದ (Planetarium Software) ವಿಶ್ಲೇಷಿಸಿದಾಗ, ಕೃಷ್ಣನ ಜನನ ಕ್ರಿ.ಪೂ. ೩೨೨೮ರಲ್ಲಿ ನಡೆದಿದೆ ಎಂದು ನಂಬಲಾಗುತ್ತದೆ.
ದ್ವಾರಕಾ ನಗರ: ಗುಜರಾತ್‌ನ ಕರಾವಳಿಯಲ್ಲಿ ನಡೆಸಿದ ಸಮುದ್ರದಾಳದ ಉತ್ಖನನಗಳಲ್ಲಿ ಪುರಾತನ ದ್ವಾರಕಾ ನಗರದ ಅವಶೇಷಗಳು ಮತ್ತು ನಾಣ್ಯಗಳು ದೊರೆತಿದ್ದು, ಕೃಷ್ಣನ ಅಸ್ತಿತ್ವಕ್ಕೆ ಬಲವಾದ ಸಾಕ್ಷಿ ಒದಗಿಸಿವೆ.


. ವೈಜ್ಞಾನಿಕ ಸತ್ಯ ಮತ್ತು ಜೀವನ ದರ್ಶನ


ಕೃಷ್ಣನ ಜನನದ ಪ್ರತಿಯೊಂದು ಘಟನೆಯಲ್ಲೂ ಆಳವಾದ ಸೈಂಟಿಫಿಕ್ ಹಾಗೂ ಮಾನಸಿಕ ಅರ್ಥವಿದೆ:
ಅರ್ಧರಾತ್ರಿಯ ಪೂಜೆ: ಶ್ರಾವಣ ಮಾಸದ ಮಳೆಗಾಲದಲ್ಲಿ ವಾತಾವರಣವು ತಂಪಾಗಿರುತ್ತದೆ. ರಾತ್ರಿಯ ಉಪವಾಸ ಮತ್ತು ಧ್ಯಾನವು ದೇಹದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಿ, ಮನಸ್ಸಿನಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಸ್ರವಿಸುವಿಕೆಯನ್ನು ಹೆಚ್ಚಿಸಿ ಪ್ರಶಾಂತತೆ ನೀಡುತ್ತದೆ.
ಸಂಕೇತಗಳು: ಕಂಸ ಎಂದರೆ ನಮ್ಮೊಳಗಿನ 'ಅಹಂಕಾರ' ಮತ್ತು 'ಕೆಟ್ಟ ಆಲೋಚನೆಗಳು'. ಕಾರಾಗೃಹ ಎಂದರೆ ನಮ್ಮ 'ಮಾನಸಿಕ ಬಂಧನ'. ಶ್ರೀಕೃಷ್ಣ ಎಂದರೆ ನಮ್ಮೊಳಗೆ ಅರಳಬೇಕಾದ 'ಆತ್ಮಜ್ಞಾನ'. ನಂಬಿಕೆ ಮತ್ತು ಧರ್ಮದ ಹಾದಿಯಲ್ಲಿ ಸಾಗಿದಾಗ ಅಹಂಕಾರ ನಾಶವಾಗಿ ಆನಂದ ಸಿಗುತ್ತದೆ ಎಂಬುದು ಇದರ ವೈಜ್ಞಾನಿಕ ಸತ್ಯ.



. ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ಅನುಬಂಧ

  

ಕೃಷ್ಣ ಜನ್ಮಾಷ್ಟಮಿ ಎಂದರೆ ವಾತ್ಸಲ್ಯದ ಪರಾಕಾಷ್ಠೆ.
ತನ್ನ ಕರುಳ ಕುಡಿಯನ್ನು ಹುಟ್ಟಿದ ತಕ್ಷಣ ಅಗಲಿದ ದೇವಕಿಯ ಕಣ್ಣೀರು ಒಂದೆಡೆಯಾದರೆ, ಹೆತ್ತ ಮಗನಲ್ಲದಿದ್ದರೂ ತನ್ನಿಡೀ ಪ್ರೀತಿಯನ್ನು ಧಾರೆ ಎರೆದು ಸಾಕಿ ಬೆಳೆಸಿದ ಯಶೋದೆಯ ವಾತ್ಸಲ್ಯ ಇನ್ನೊಂದೆಡೆ.


ಮನೆಯಲ್ಲಿ ಪುಟ್ಟ ಮಕ್ಕಳ ಕಾಲಿಗೆ ಅರಿಶಿನ-ದೇವದಾರಿಯ ಬಣ್ಣ ಬಳಸಿ, ಕೃಷ್ಣನ ಹೆಜ್ಜೆಗಳನ್ನು ಬಿಡಿಸುವಾಗ ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ ಆ ಮುದ್ದು ಕೃಷ್ಣನನ್ನೇ ಕಾಣುತ್ತಾಳೆ. ಬೆಣ್ಣೆ ಕದಿಯುವ ತುಂಟಾಟ, ಕೊಳಲಿನ ನಾದ, ರಾಧೆಯ ನಿಷ್ಕಲ್ಮಶ ಪ್ರೀತಿ ಮತ್ತು ಅರ್ಜುನನಿಗೆ ಮಾರ್ಗದರ್ಶನ ನೀಡಿದ ಸಖ—ಹೀಗೆ ಕೃಷ್ಣ ಪ್ರತಿಯೊಬ್ಬರ ಹೃದಯಕ್ಕೂ ಹತ್ತಿರವಾಗುತ್ತಾನೆ.
ಜನ್ಮಾಷ್ಟಮಿ ಎಂದರೆ ಕೇವಲ ಪೂಜೆ-ಪುನಸ್ಕಾರಗಳಲ್ಲ; ನಮ್ಮೊಳಗಿನ ಕತ್ತಲೆಯನ್ನು ಓಡಿಸಿ, ಪ್ರೀತಿ ಮತ್ತು ಕರ್ಮಯೋಗದ ಬೆಳಕನ್ನು ಬೆಳಗಿಸುವ ಪವಿತ್ರ ಪರ್ವದಿನ.


                                                              Krishnastakam


ಕೃಷ್ಣಾಷ್ಟಕಂ -- Krishnastakam

ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ ।
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥

ಅತಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಂ ।
ರತ್ನ ಕಂಕಣ ಕೇಯೂರಂ ಕೃಷ್ಣಂ ವಂದೇ ಜಗದ್ಗುರುಂ ॥

ಕುಟಿಲಾಲಕ ಸಂಯುಕ್ತಂ ಪೂರ್ಣಚಂದ್ರ ನಿಭಾನನಂ ।
ವಿಲಸತ್ ಕುಂಡಲಧರಂ ಕೃಷ್ಣಂ ವಂದೇ ಜಗದ್ಗುರಂ ॥

ಮಂದಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ ।
ಬರ್ಹಿ ಪಿಂಛಾವ ಚೂಡಾಂಗಂ ಕೃಷ್ಣಂ ವಂದೇ ಜಗದ್ಗುರುಂ ॥

ಉತ್ಫುಲ್ಲ ಪದ್ಮಪತ್ರಾಕ್ಷಂ ನೀಲ ಜೀಮೂತ ಸನ್ನಿಭಂ ।
ಯಾದವಾನಾಂ ಶಿರೋರತ್ನಂ ಕೃಷ್ಣಂ ವಂದೇ ಜಗದ್ಗುರುಂ ॥

ರುಕ್ಮಿಣೀ ಕೇಳಿ ಸಂಯುಕ್ತಂ ಪೀತಾಂಬರ ಸುಶೋಭಿತಂ ।
ಅವಾಪ್ತ ತುಲಸೀ ಗಂಧಂ ಕೃಷ್ಣಂ ವಂದೇ ಜಗದ್ಗುರುಂ ॥

ಗೋಪಿಕಾನಾಂ ಕುಚದ್ವಂದ ಕುಂಕುಮಾಂಕಿತ ವಕ್ಷಸಂ ।
ಶ್ರೀನಿಕೇತಂ ಮಹೇಷ್ವಾಸಂ ಕೃಷ್ಣಂ ವಂದೇ ಜಗದ್ಗುರುಂ ॥

ಶ್ರೀವತ್ಸಾಂಕಂ ಮಹೋರಸ್ಕಂ ವನಮಾಲಾ ವಿರಾಜಿತಂ ।
ಶಂಖಚಕ್ರ ಧರಂ ದೇವಂ ಕೃಷ್ಣಂ ವಂದೇ ಜಗದ್ಗುರುಂ ॥

ಕೃಷ್ಣಾಷ್ಟಕ ಮಿದಂ ಪುಣ್ಯಂ ಪ್ರಾತರುತ್ಥಾಯ ಯಃ ಪಠೇತ್ ।
ಕೋಟಿಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ॥


----------------------------- Hari Om -------------------------

 

Monday, August 31, 2026

ಶ್ರೀ ರಾಘವೇಂದ್ರ ಸ್ವಾಮಿ ಮೂಲ ಮಂತ್ರ -- Sri Raghavendra Swamy Moola Mantra

 

                                                                 Sri Raghavendra Swamy

 

ಶ್ರೀ ರಾಘವೇಂದ್ರ ಸ್ವಾಮಿ ಮೂಲ ಮಂತ್ರ

Sri Raghavendra Swamy Moola Mantra


ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಯಾವುದೇ ಸಮಸ್ಯೆಗಳಿಗಾಗಿ ಯಾರು ಬೇಕಾದರೂ ಜಪಿಸಬಹುದು.


ಶ್ರೀ ರಾಘವೇಂದ್ರ ಸ್ವಾಮಿಯು ಭಾರತದ ತಮಿಳುನಾಡಿನ ಭುವನಗಿರಿ ಪಟ್ಟಣದಲ್ಲಿ ವೆಂಕಟನಾಥರಾಗಿ 1595 ರಲ್ಲಿ ಬ್ರಾಹ್ಮಣ ಪೋಷಕರಾದ ತಿಮಣ್ಣ ಭಟ್ಟ ಮತ್ತು ಗೋಪಿಕಾಂಬರಿಗೆ ಜನಿಸಿದರು. ಅವರನ್ನು ಕೆಲವೊಮ್ಮೆ ವೆಂಕಟೇಶ್ವರರ ಗೌರವಾರ್ಥ ವೆಂಕಟಾಚಾರ್ಯ ಎಂದೂ ಕರೆಯುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಯವರ ಆರಂಭಿಕ ಶಿಕ್ಷಣ ಮುಗಿಯುತ್ತಿದ್ದಂತೆ ಅವರನ್ನು ಕುಂಬಕೋಣಂನ ಶ್ರೀ ಮಠಕ್ಕೆ ಸೇರಿಸಲಾಯಿತು. ಅವರು ಮಧುರೈನಿಂದ ಹಿಂದಿರುಗಿದ ನಂತರ, ವೆಂಕಟನಾಥ ಅವರು ಸರಸ್ವತಿ ಬಾಯಿಯನ್ನು ವಿವಾಹವಾದರು. ಅವರ ಮಗ ಲಕ್ಷ್ಮಿ ನಾರಾಯಣಾಚಾರ್ಯರು. ನಂತರ ಕುಟುಂಬವು ಕುಂಬಕೋಣಂಗೆ ಸ್ಥಳಾಂತರಗೊಂಡಿತು.

ರಾಘವೇಂದ್ರ ಸ್ವಾಮಿಗಳ ಸಾಧನೆ:


ಶ್ರೀ ಮಠದಲ್ಲಿ, ವೆಂಕಟನಾಥರು ಸುಧೀಂದ್ರ ತೀರ್ಥರ ಅಡಿಯಲ್ಲಿ ಅಧ್ಯಯನ ಮಾಡಿದರು. ಅವರು ಶೀಘ್ರದಲ್ಲೇ ಪ್ರತಿಭಾವಂತ ವಿದ್ವಾಂಸರಾಗಿ ಹೊರಹೊಮ್ಮಿದರು ಮತ್ತು ಅವರಿಗಿಂತ ಹಳೆಯ ವಿದ್ವಾಂಸರ ಬಗ್ಗೆ ನಿರಂತರವಾಗಿ ಚರ್ಚೆಗಳಲ್ಲಿ ಗೆಲುವನ್ನು ಸಾಧಿಸಿದರು. ಅವರನ್ನು ಸಂಸ್ಕೃತ ಮತ್ತು ಪ್ರಾಚೀನ ವೈದಿಕ ಗ್ರಂಥಗಳ ಶಿಕ್ಷಕ ಎಂದೂ ಕರೆಯಲಾಗುತ್ತಿತ್ತು. ನಂತರ 1614 ರಲ್ಲಿ ಅವರು ಸನ್ಯಾಸವನ್ನು ತೆಗೆದುಕೊಂಡು ರಾಘವೇಂದ್ರ ತೀರ್ಥ ಎಂಬ ಹೆಸರನ್ನು ಸ್ವೀಕರಿಸಿದರು ಮತ್ತು 1621 ರಲ್ಲಿ ರಾಘವೇಂದ್ರ ತೀರ್ಥರು ತಮ್ಮ ಗುರು ಸುಧೀಂದ್ರ ತೀರ್ಥರ ನಂತರ ಶ್ರೀ ಮಠದ ಮುಖ್ಯಸ್ಥರಾಗಿ 1621 ರಿಂದ 1671 ರವರೆಗೆ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಮಾಧ್ವಾಚಾರ್ಯರನ್ನು ಅನುಸರಿಸುತ್ತಾ ದಕ್ಷಿಣ ಭಾರತದಾದ್ಯಂತ ಪ್ರಯಾಣಿಸಿದರು. ದ್ವೈತ ತತ್ವಶಾಸ್ತ್ರ ಮತ್ತು ಹಲವಾರು ಪವಾಡಗಳಿಗೆ ಕಾರಣವಾಗಿದೆ. 1671 ರಲ್ಲಿ ಶ್ರೀ ರಾಘವೇಂದ್ರ ಅವರು ಮಂತ್ರಾಲಯದಲ್ಲಿ ಸಮಾಧಿ ಪಡೆದರು.

 

                                                                           PIC-1

 

ಶ್ರೀ ರಾಘವೇಂದ್ರ ಮೂಲ ಮಂತ್ರದ ಪ್ರಯೋಜನಗಳು:


ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಜಪಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು. ಈ ಮೂಲ ಮಂತ್ರವು ಶ್ರೀ ರಾಘವೇಂದ್ರರ ಆಶೀರ್ವಾದವನ್ನು ಪಡೆಯಲು ಅತ್ಯಂತ ಶಕ್ತಿಯುತವಾದ ಮಂತ್ರವೆಂದು ಹೇಳಲಾಗುತ್ತದೆ. ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಯಾವುದೇ ಸಮಸ್ಯೆಗಳಿಗಾಗಿ ಯಾರು ಬೇಕಾದರೂ ಜಪಿಸಬಹುದು.

ಗುರವಾರ ರಾಘವೇಂದ್ರ ಸ್ವಾಮಿಯನ್ನು ಪೂಜಿಸುವ ವಿಧಾನ:


ರಾಘವೇಂದ್ರ ಸ್ವಾಮಿಯ ಪೂಜೆ ಸರಳವಾದರೂ ಸ್ವಚ್ಛವಾಗಿರಬೇಕು. 6 ಗುರುವಾರಗಳವರೆಗೆ ಸ್ವಾಮಿಯನ್ನು ಪೂಜಿಸಿ, 7ನೇ ಗುರುವಾರ ಪೂಜೆಯನ್ನು ಸಮಾಪ್ತಿ ಮಾಡಬೇಕು.
ಗುರುವಾರ ಮುಂಜಾನೆ ಬೇಗ ಎದ್ದು, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ರಂಗೋಲಿ ಹಾಕಿ ಅದರ ಮೇಲೆ ಮರದ ಮಣೆ ಇಟ್ಟು ಮಣೆಯನ್ನು ಸ್ವಚ್ಛಗೊಳಿಸಿ ಅದರ ಮೇಲೆ ರಂಗೋಲಿಯನ್ನು ಹಾಕಿ. ಅದರ ಮೇಲೆ ಸ್ವಚ್ಛಗೊಳಿಸಿದ ರಾಯರ ಮೂರ್ತಿ ಅಥವಾ ಫೊಟೋವನ್ನಿಟ್ಟು ಕುಂಕುಮ, ಗಂಧವನ್ನು ಹಚ್ಚಿ. ನಂತರ ತುಳಸಿ ಹಾರವನ್ನು, ಇನ್ನಿತರ ಹೂಗಳ ಹಾರವನ್ನು ಅರ್ಪಿಸಿ.

 

                                                                             PIC-2

 

ರಾಯರ ಫೋಟೋದ ಮುಂದೆ 5 ಮುಖದ ದೀಪವನ್ನು ಬೆಳಗಿಸಿ. ಉತ್ತಮ ಹಣ್ಣುಗಳು, ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ ಇತ್ಯಾದಿಗಳನ್ನು ಇಡಿ. ಮುಖ್ಯವಾಗಿ ರಾಯರ ಪೂಜೆಯಲ್ಲಿ ಅರಿಶಿನ ಬಳಸಬೇಕು. ರಾಯರನ್ನು ಪೂಜಿಸುವ ಮುನ್ನ ಗಣೇಶನನ್ನು ಪೂಜಿಸಿ ಅವನಿಗೂ ಪ್ರತ್ಯೇಕವಾಗಿ ಹೂವು, ಹಣ್ಣುಗಳನ್ನು ಅರ್ಪಿಸಿ. ನಂತರ ರಾಯರ ಮುಂದೆ ಕುಳಿತು ಮನಸ್ಸಿನಲ್ಲಿನ ಆಸೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿ ದೂಪ - ದೀಪವನ್ನು ಬೆಳಗಿ ನೈವೇದ್ಯವನ್ನು ಅರ್ಪಿಸಿ.

ಸುಮಾರು 2 ಅಥವಾ 3 ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನಮ್ಮ ಕೈಯಲ್ಲಿ ಮುಚ್ಚಿ ರಾಯರಿಗೆ 11 ಪ್ರದಕ್ಷಿಣೆಯನ್ನು ಹಾಕಿ. ಪ್ರದಕ್ಷಿಣೆ ಹಾಕುವಾಗ ಈ ಮಂತ್ರವನ್ನು ಪಠಿಸಿ.

"ಪೂಜ್ಯಾಯ ಶ್ರೀ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ|
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||"

11 ಪ್ರದಕ್ಷಿಣೆ ಮುಗಿಸಿದ ನಂತರ, ಶ್ರೀ ರಾಘವೇಂದ್ರರ ಮೇಲೆ ನಮ್ಮ ಕೈಯಲ್ಲಿರುವ ತುಳಸಿಯನ್ನು ಹರಡಿ ಅವನ ಕಡೆಗೆ ಪ್ರಾರ್ಥಿಸಿ. ಕೊನೆಗೆ ಅವನ ಕಡೆಗೆ "ಸಷ್ಟಾಂಗ ನಮಸ್ಕಾರ" ಮಾಡಿ ಪೂಜೆ ಮುಗಿಸಿ. ಕೇವಲ ಮಧ್ಯಾಹ್ನ ಒಂದು ಬಾರಿ ಆಹಾರವನ್ನು ತೆಗೆದುಕೊಂಡು ರಾತ್ರಿಯಲ್ಲಿ ಕೆಲವು ಹಣ್ಣುಗಳನ್ನು ಮತ್ತು ಹಾಲನ್ನು ಮಾತ್ರ ಸೇವಿಸಬೇಕು.


ಮಲಗುವ ಚಾಪೆಯನ್ನು, ಮಂಚವನ್ನು ಬಳಸಬಾರದು.ಈ ಮೇಲಿನ ಪೂಜಾ ವಿಧಾನಗಳನ್ನು ಮತ್ತು ಮಂತ್ರವನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಅನುಸರಿಸುವ ಮೂಲಕ, ನಿಮ್ಮ ಜೀವನದಲ್ಲಿ ಸಕಾರಾತ್ಮಕ ಮಾರ್ಗವನ್ನು ನೀವು ಸ್ಪಷ್ಟವಾಗಿ ನೋಡಬಹುದು.



------------------------- Hari Om ------------------------

 


 

 

Sunday, August 30, 2026

ಶ್ರೀ ರಾಘವೇಂದ್ರಕವಚಂ -- Sri Raghavendra Kavacham

 

                                                             Sri Raghavendra Kavacham

  

ಶ್ರೀ ರಾಘವೇಂದ್ರಕವಚಂ

Sri Raghavendra Kavacham


ಮಂತ್ರಾಲಯದ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳನ್ನು (ಶ್ರೀ ರಾಯರು) 'ಭವ ರೋಗ
ವೈದ್ಯ' (ಸಂಸಾರದ ಅಥವಾ ಲೌಕಿಕ ಬಾಧೆಗಳ ವೈದ್ಯ) ಎಂದು ಕರೆಯಲಾಗುತ್ತದೆ ಎಂಬ ಸತ್ಯವನ್ನು 
ಯಾರೂ ಅಲ್ಲಗಳೆಯಲಾರರು. ಇದೇ ಕಾರಣಕ್ಕಾಗಿಯೇ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು
 ಕೋರಿ ಅವರ ಪಾದಸನ್ನಿಧಿಗೆ ಧಾವಿಸುತ್ತಾರೆ. ಶ್ರೀ ರಾಯರನ್ನು ಒಲಿಸಿಕೊಳ್ಳುವ ವಿವಿಧ 
ವಿಧಾನಗಳನ್ನು ನೂರಾರು ಭಕ್ತರು ಸ್ವತಃ ಕಂಡುಕೊಂಡಿದ್ದಾರೆ. ಆದಾಗ್ಯೂ, ದೈಹಿಕ ಹಾಗೂ 
ಮಾನಸಿಕ ಅನಾರೋಗ್ಯದಿಂದ ತಮ್ಮನ್ನು ಪಾರುಮಾಡಬಲ್ಲಂತಹ ಶ್ರೀ ರಾಯರ ಕುರಿತಾದ
 ಯಾವುದಾದರೂ ಸ್ತೋತ್ರವಿದೆಯೇ ಎಂದು ಅನೇಕರು ಇಂದಿಗೂ ಕೇಳುತ್ತಲೇ ಇರುತ್ತಾರೆ. 
 

No one can deny the fact that Mantralaya Guru Saarvabhouma Sri Raaghavendra Swamy (Sri Raayaru) is called as Bhavaroga Vaidya, Doctor of worldly sickness. That`s why people keep rushing towards his Feet Seeking Solutions for their Problems. Hundreds of Devotees have realized by themselves various ways of Pleasing Sri Raayaru. Still many people keep asking if there is any Stothra on Sri Raayaru that can bring them out of ill Health both Mental and Physical.

 

                                                                 another Picture

 

ಹೌದು, ಶ್ರೀ ರಾಯರ ಪರಮ ಭಕ್ತರಾದ ಶ್ರೀ ಅಪ್ಪಣಾಚಾರ್ಯರು ಸುಮಾರು 400 ವರ್ಷಗಳ
ಹಿಂದೆಯೇ ಈ ಪ್ರಶ್ನೆಯನ್ನು ಊಹಿಸಿದ್ದರು! ಹಾಗಾಗಿ, ಅವರು ಶ್ರೀ ರಾಯರ ಕುರಿತು ಒಂದು
ಅದ್ಭುತವಾದ ಸ್ತೋತ್ರವನ್ನು ರಚಿಸಿದರು. ಇದರಲ್ಲಿ ಅವರು ಅತ್ಯದ್ಭುತ ಪದಗಳ ಮೂಲಕ
ಶ್ರೀ ರಾಯರನ್ನು ಕೊಂಡಾಡುತ್ತಾರೆ ಮತ್ತು ನಮ್ಮ ದೇಹದ ಪ್ರತಿಯೊಂದು ಭಾಗದ ಮೇಲೂ
ಅವರ ಕರುಣಾಮಯಿ ದೃಷ್ಟಿ ಬೀಳುವಂತೆ ಪ್ರಾರ್ಥಿಸುತ್ತಾರೆ. ಶ್ರೀ ರಾಯರ ಈ ದಿವ್ಯ ದೃಷ್ಟಿಯು
 'ಬುಲೆಟ್-ಪ್ರೂಫ್ ಜಾಕೆಟ್'ನಂತೆ (ರಕ್ಷಾಕವಚದಂತೆ) ಕಾರ್ಯನಿರ್ವಹಿಸುತ್ತದೆ ಮತ್ತು 
ನಮ್ಮನ್ನು ಎಲ್ಲ ರೀತಿಯ ರೋಗಗಳಿಂದ ರಕ್ಷಿಸುತ್ತದೆ. ಆದ್ದರಿಂದಲೇ, ಈ ಸ್ತೋತ್ರವನ್ನು 
ಅತ್ಯಂತ ಅರ್ಥಪೂರ್ಣವಾಗಿ 'ಶ್ರೀ ರಾಘವೇಂದ್ರ ಕವಚ' ಎಂದು ಕರೆಯಲಾಗುತ್ತದೆ. ನಿಮ್ಮ 
ಸುತ್ತಮುತ್ತ ಯಾರಾದರೂ ಯಾವುದೇ ರೋಗದಿಂದ ಬಳಲುತ್ತಿದ್ದರೆ, ಅವರನ್ನು ಭಕ್ತಿಯಿಂದ
 ಈ ಸ್ತೋತ್ರವನ್ನು ಪಠಿಸುವಂತೆ ಹೇಳಿ.


Yes Sri Appanacharya an ardent Devotee of Sri Raayaru, about 400 years ago had anticipated this question! So, He composed a Wonderful Stothra on Sri Raayaru. Here, He admires Sri Raayaru by Wonderful words and requests His compassionate sight on each and every part of the body. This Divine Sight of Sri Rayaru acts like a Bullet-Proof Jacket and Protects us from all sorts of Diseases. Hence this Stothra is Very Meaningfully called Sri Raghavendra Kavacha. If there is any one around you, suffering from any Disease ask them to chant this Stotra Devotedly.

 

                                                            Sri Raghavendra Swamy

 

ಶ್ರೀರಾಘವೇಂದ್ರಕವಚಂ (ಶ್ರೀಅಪ್ಪಣ್ಣಾಚಾರ್ಯ ಕೃತ)



ಕವಚಂ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನಃ |
ವಕ್ಷ್ಯಾಮಿ ಗುರುವರ್ಯಸ್ಯ ವಾಂಛಿತಾರ್ಥಪ್ರದಾಯಕಮ್ || ||

ಋಷಿರಸ್ಯಾಪ್ಪಣಾಚಾರ್ಯಃ ಛಂದೋsನುಷ್ಟುಪ್ ಪ್ರಕೀರ್ತಿತಮ್ |
ದೇವತಾ ಶ್ರೀರಾಘವೇಂದ್ರಗುರುರಿಷ್ಟಾರ್ಥಸಿದ್ಧಯೇ || ||

ಅಷ್ಟೋತ್ತರಶತಂ ಜಪ್ಯಂ ಭಕ್ತಿಯುಕ್ತೇನ ಚೇತಸಾ |
ಉದ್ಯತ್ಪ್ರದ್ಯೋತನದ್ಯೋತಭರ್ಮಕೂರ್ಮಾಸನೇ ಸ್ಥಿತಮ್ || ||

ಏದ್ಯಖದ್ಯೋತನದ್ಯೋತಪ್ರತಾಪಂ ರಾಮಮಾನಸಮ್ |
ಧೃತಕಾಷಾಯವಸನಂ ತುಲಸೀಹಾರವಕ್ಷಸಮ್ || ||

ದೋರ್ದಂಡವಿಲಸದ್ದಂಡಕಮಂಡಲುವಿರಾಜಿತಮ್ |
ಅಭಯeನಮುದ್ರಾಕ್ಷಮಾಲಾಶೀಲಕರಾಂಬುಜಮ್ || ||

ಯೋಗೀಂದ್ರವಂದ್ಯಪಾದಾಬ್ಜಂ ರಾಘವೇಂದ್ರಗುರುಂ ಭಜೇ |
ಶಿರೋ ರಕ್ಷತು ಮೇ ನಿತ್ಯಂ ರಾಘವೇಂದ್ರೋsಖಿಲೇಷ್ಟದಃ || ||

ಪಾಪಾದ್ರಿಪಾಟನೇ ವಜ್ರಃ ಕೇಶಾನ್ ರಕ್ಷತು ಮೇ ಸದಾ |
ಕ್ಷಮಾಸುರಗಣಾಧೀಶೋ ಮುಖಂ ರಕ್ಷತು ಮೇ ಗುರುಃ || ||

ಹರಿಸೇವಾಲಬ್ಧಸರ್ವಸಂಪತ್ಫಾಲಂ ಮಮಾವತು |
ದೇವಸ್ವಭಾವೋsವತು ಮೇ ದೃಶೌ ತತ್ತ ಪ್ರದರ್ಶಕಃ || ||

ಇಷ್ಟಪ್ರದಾನೇ ಕಲ್ಪದ್ರುಃ ಶ್ರೋತ್ರೇ ಶ್ರುತ್ಯರ್ಥಬೋಧಕಃ |
ಭವ್ಯಸ್ವರೂಪೋ ಮೇ ನಾಸಾಂ ಜಿಹ್ವಾಂ ಮೇsವತು ಭವ್ಯಕೃತ್ || ||

ಆಸ್ಯಂ ರಕ್ಷತು ಮೇ ದುಃಖತೂಲಸಂಘಾಗ್ನಿಚರ್ಯಕಃ |
ಸುಖಧೈರ್ಯಾದಿಸುಗುಣೋ ಭ್ರುವೌ ಮಮ ಸದಾsವತು || ೧೦ ||

ಓಷ್ಠೌ ರಕ್ಷತು ಮೇ ಸರ್ವಗ್ರಹನಿಗ್ರಹಶಕ್ತಿಮಾನ್ |
ಉಪಪ್ಲವೋದಧೇಸ್ಸೇತುರ್ದಂತಾನ್ ರಕ್ಷತು ಮೇ ಸದಾ || ೧೧ ||

ನಿರಸ್ತದೋಷೋ ಮೇ ಪಾತು ಕಪೋಲೌ ಸರ್ವಪಾಲಕಃ |
ನಿರವದ್ಯಮಹಾವೇಷಃ ಕಂಠಂ ಮೇsವತು ಸರ್ವದಾ || ೧೨ ||

ಕರ್ಣಮೂಲೇ ತು ಪ್ರತ್ಯರ್ಥಿಮೂಕತ್ವಾಕರವಾಙ ಮಮ |
ಬಹುವಾದಿಜಯೀ ಪಾತು ಹಸ್ತೌ ಸತ್ತತ್ತ್ವವಾದಕೃತ್ || ೧೩ ||

ಕರೌ ರಕ್ಷತು ಮೇ ವಿದ್ವತ್ಪರಿಜ್ಞೇಯವಿಶೇಷವಾನ್ |
ವಾಗ್ವೈಖರೀಭವ್ಯಶೇಷಜಯೀ ವಕ್ಷಸ್ಥಲಂ ಮಮ || ೧೪ ||

ಸತೀಸಂತಾನಸಂಪತ್ತಿಭಕ್ತಿeನಾದಿವೃದ್ಧಿಕೃತ್ |
ಸ್ತನೌ ರಕ್ಷತು ಮೇ ನಿತ್ಯಂ ಶರೀರಾವದ್ಯಹಾನಿಕೃತ್ || ೧೫ ||

ಪುಣ್ಯವರ್ಧನಪಾದಾಬ್ಜಾಭಿಷೇಕಜಲಸಂಚಯಃ |
ನಾಭಿಂ ರಕ್ಷತು ಮೇ ಪಾರ್ಶ್ವೌ ದ್ಯುನದೀತುಲ್ಯಸದ್ಗುಣಃ || ೧೬ ||

ಪೃಷ್ಟಂ ರಕ್ಷತು ಮೇ ನಿತ್ಯಂ ತಾಪತ್ರಯವಿನಾಶಕೃತ್ |
ಕಟಿಂ ಮೇ ರಕ್ಷತು ಸದಾ ವಂಧ್ಯಾಸತ್ಪುತ್ರದಾಯಕಃ || ೧೭ ||

ಜಘನಂ ಮೇsವತು ಸದಾ ವ್ಯಂಗಸ್ವಂಗಸಮೃದ್ಧಿಕೃತ್ |
ಗುಹ್ಯಂ ರಕ್ಷತು ಮೇ ಪಾಪಗ್ರಹಾರಿಷ್ಟವಿನಾಶಕೃತ್ || ೧೮ ||

ಭಕ್ತಾಘವಿಧ್ವಂಸಕರನಿಜಮೂರ್ತಿಪ್ರದರ್ಶಕಃ |
ಮೂರ್ತಿಮಾನ್ಪಾತು ಮೇ ರೋಮಂ ರಾಘವೇಂದ್ರೋ ಜಗದ್ಗುರುಃ || ೧೯ ||

 
ಸರ್ವತಂತ್ರಸ್ವತಂತ್ರೋsಸೌ ಜಾನುನೀ ಮೇ ಸದ್ರಾವತು |
ಜಂಘೇ ರಕ್ಷತು ಮೇ ನಿತ್ಯಂ ಶ್ರೀಮಧ್ವಮತವರ್ಧನಃ || ೨೦ ||

ವಿಜಯೀಂದ್ರಕರಾಬ್ಜೋತ್ಥಸುಧೀಂದ್ರವರಪುತ್ರಕಃ |
ಗುಲ್ಫೌ ಶ್ರೀರಾಘವೇಂದ್ರೋ ಮೇ ಯತಿರಾಟ್ ಸರ್ವದಾsವತು | | ೨೧ ||

ಪಾದೌ ರಕ್ಷತು ಮೇ ಸರ್ವಭಯಹಾರೀ ಕೃಪಾನಿಧಿಃ |
e
ನಭಕ್ತಿಸುಪುತ್ರಾಯುರ್ಯಶಃ ಶ್ರೀಪುಣ್ಯವರ್ಧನಃ || ೨೨ ||

ಕರಪಾದಾಂಗುಲೀಃ ಸರ್ವಾ ಮಮಾವತು ಜಗದ್ಗುರುಃ |
ಪ್ರತಿವಾದಿಜಯಸ್ವಾಂತಭೇದಚಿಹ್ನಾದರೋ ಗುರುಃ || ೨೩ ||

ನಖಾನವತು ಮೇ ಸರ್ವಾನ್ ಸರ್ವಶಾಸ್ತ್ರವಿಶಾರದಃ |
ಅಪರೋಕ್ಷೀಕೃತಶ್ರೀಶಃ ಪ್ರಾಚ್ಯಾಂ ದಿಶಿ ಸದಾsವತು || ೨೪ ||

ಸ ದಕ್ಷಿಣೇ ಚಾವತು ಮಾಂ ಸಮುಪೇಕ್ಷಿತಭಾವಜಃ |
ಅಪೇಕ್ಷಿತಪ್ರದಾತಾ ಚ ಪ್ರತೀಚ್ಯಾಮವತು ಪ್ರಭುಃ || ೨೫ ||

ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ |
ಸದೋದೀಚ್ಯಾಮವತು ಮಾಂ ಶಾಪಾನುಗ್ರಹಶಕ್ತಿಮಾನ್ || ೨೬ ||

ನಿಖಿಲೇಂದ್ರಿಯದೋಷಘ್ನೋ ಮಹಾನುಗ್ರಹಕೃದ್ಗುರುಃ |
ಅಧಶ್ಚೋರ್ಧ್ವಂ ಚಾವತು ಮಾಮಷ್ಟಾಕ್ಷರಮನೂದಿತಮ್ || ೨೭ ||

ಆತ್ಮಾತ್ಮೀಯಾಘರಾಶಿಘ್ನೋ ಮಾಂ ರಕ್ಷತು ವಿದಿಕ್ಷು ಚ |
ಚತುರ್ಣಾಂ ಚ ಪುಮರ್ಥಾನಾಂ ದಾತಾ ಪ್ರಾತಃ ಸದಾsವತು || ೨೮ ||

ಸಂಗಮ್ರೇವತು ಮಾಂ ನಿತ್ಯಂ ತತ್ತ್ವವಿತ್ಸರ್ವಸೌಖ್ಯಕೃತ್ |
ಮಧ್ಯಾಹ್ನೇಽಗಮ್ಯಮಹಿಮಾ ಮಾಂ ರಕ್ಷತು ಮಹಾಯಶಾಃ || ೨೯ ||

ಮೃತಪೋತಪ್ರಾಣದಾತಾ ಸಾಯಾಹ್ನೇ ಮಾಂ ಸದಾsವತು |
ವೇದಿಸ್ಥಪುರುಷೋಜ್ಜೀವೀ ನಿಶೀಥೇ ಪಾತು ಮಾಂ ಗುರುಃ || ೩೦ ||

ವಹ್ನಿಸ್ಥಮಾಲಿಕೋದ್ಧರ್ತಾ ವಹ್ನಿತಾಪಾತ್ಸದಾsವತು |
ಸಮಗ್ರಟೀಕಾವ್ಯಾಖ್ಯಾತಾ ಗುರುರ್ಮೇ ವಿಷಯೇsವತು || ೩೧ ||



ಕಾಂತಾರ್ರೇವತು ಮಾಂ ನಿತ್ಯಂ ಭಾಟ್ಟ (ಭಾಷ್ಯ) ಸಂಗ್ರಹಕೃದ್ಗುರುಃ |
ಸುಧಾಪರಿಮಳೋದ್ಧರ್ತಾ ಸು (ಸ್ವ)ಚ್ಛಂದಸ್ತು ಸದಾsವತು || ೩೨ ||

ರಾಜಚೋರವಿಷವ್ಯಾಧಿಯಾದೋವನ್ಯಮೃಗಾದಿಭಿಃ |
ಅಪಸ್ಮಾರಾಪಹರ್ತಾ ನಃ ಶಾಸ್ತ್ರವಿತ್ಸರ್ವದಾsವತು || ೩೩ ||

ಗತೌ ಸರ್ವತ್ರ ಮಾಂ ಪಾತೂಪನಿಷದರ್ಥಕೃದ್ಗುರುಃ |
ಋಗ್ವ್ಯಾಖ್ಯಾನಕೃದಾಚಾರ್ಯಃ ಸ್ಥಿತೌ ರಕ್ಷತು ಮಾಂ ಸದಾ || ೩೪ ||

ಮಂತ್ರಾಲಯನಿವಾಸೀ ಮಾಂ ಜಾಗ್ರತ್ಕಾಲೇ ಸದಾsವತು |
ನ್ಯಾಯಮುಕ್ತಾವಲೀಕರ್ತಾ ಸ್ವಪ್ನೇ ರಕ್ಷತು ಮಾಂ ಸದಾ || ೩೫ ||

ಮಾಂ ಪಾತು ಚಂದ್ರಿಕಾವ್ಯಾಖ್ಯಾಕರ್ತಾ ಸುಪ್ತೌ ಹಿ ತತ್ತ ಕೃತ್ |
ಸುತಂತ್ರದೀಪಿಕಾಕರ್ತಾ ಮುಕ್ತೌ ರಕ್ಷತು ಮಾಂ ಗುರುಃ || ೩೬ ||

ಗೀತಾರ್ಥಸಂಗ್ರಹಕರಸ್ಸದಾ ರಕ್ಷತು ಮಾಂ ಗುರುಃ |
ಶ್ರೀಮಧ್ವಮತದುಗ್ಧಾಬ್ಧಿಚಂದ್ರೋsವತು ಸದಾsನಘಃ || ೩೭ ||

ಇತಿ ಶ್ರೀರಾಘವೇಂದ್ರಸ್ಯ ಕವಚಂ ಪಾಪನಾಶನಮ್ |
ಸರ್ವವ್ಯಾಧಿಹರಂ ಸದ್ಯಃ ಪಾವನಂ ಪುಣ್ಯವರ್ಧನಮ್ || ೩೮ ||

ಯ ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತಃ |
ಅದೃಷ್ಟಿಃ ಪೂರ್ಣದೃಷ್ಟಿಃ ಸ್ಯಾದೇಡಮೂಕೋsಪಿ ವಾಕ್ಪತಿಃ || ೩೯ ||

ಪೂರ್ಣಾಯುಃ ಪೂರ್ಣಸಂಪತ್ತಿಭಕ್ತಿeನಾಭಿವೃದ್ಧಿಕೃತ್ |
ಪೀತ್ವಾ ವಾರಿ ನರೋ ಯೇನ ಕವಚೇನಾಭಿಮಂತ್ರಿತಮ್ || ೪೦ ||

ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯಪ್ರಸಾದತಃ |
ಪ್ರದಕ್ಷಿಣನಮಸ್ಕಾರಾನ್ ಗುರೋರ್ವೃಂದಾವನಸ್ಯ ಯಃ || ೪೧ ||

ಕರೋತಿ ಪರಯಾ ಭಕ್ತ್ಯಾ ತದೇತತ್ಕವಚಂ ಪಠನ್ |
ಪಂಗುಃ ಕೂಣಿಶ್ಚ ಪೌಗಂಡಃ ಪೂರ್ಣಾಂಗೋ ಜಾಯತೇ ಧ್ರುವಮ್ || ೪೨ ||

ಶೇಷಾಶ್ಚ ಕುಷ್ಠಪೂರ್ವಾಶ್ಚ ನಶ್ಯಂತ್ಯಾಮಯರಾಶಯಃ |
ಅಷ್ಟಾಕ್ಷರೇಣ ಮಂತ್ರೇಣ ಸ್ತೋತ್ರೇಣ ಕವಚೇನ ಚ || ೪೩ ||

ವೃಂದಾವನೇ ಸನ್ನಿಹಿತಮಭಿಷಿಚ್ಯ ಯಥಾವಿಧಿ |
ಯಂತ್ರೇ ಮಂತ್ರಾಕ್ಷರಾಣ್ಯಷ್ಟೌ ವಿಲಿಖ್ಯಾತ್ರ ಪ್ರತಿಷ್ಠಿತಮ್ || ೪೪ ||

ಷೋಡಶೈರುಪಚಾರೈಶ್ಚ ಸಂಪೂಜ್ಯ ತ್ರಿಜಗದ್ಗುರುಮ್ |
ಅಷ್ಟೋತ್ತರಶತಾಖ್ಯಾಭಿರರ್ಚಯೇತ್ಕುಸುಮಾದಿಭಿಃ || ೪೫ ||

ಫಲೈಶ್ಚ ವಿವಿಧೈರೇವ ಗುರೋರರ್ಚಾಂ ಪ್ರಕುರ್ವತಃ |
ನಾಮಶ್ರವಣಮಾತ್ರೇಣ ಗುರುವರ್ಯಪ್ರಸಾದತಃ || ೪೬ ||

ಭೂತಪ್ರೇತಪಿಶಾಚಾದ್ಯಾಃ ವಿದ್ರವಂತಿ ದಿಶೋ ದಶ |
ಪಠೇದೇತತ್ತ್ರಿಕಂ ನಿತ್ಯಂ ಗುರೋರ್ವೃಂದಾವನಾಂತಿಕೇ || ೪೭ ||

ದೀಪಂ ಸಂಯೋಜ್ಯ ವಿದ್ಯಾವಾನ್ ಸಭಾಸು ವಿಜಯೀ ಭವೇತ್ |
ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಾತ್ || ೪೮ ||

ಕವಚಸ್ಯ ಪ್ರಭಾವೇಣ ಭಯಂ ತಸ್ಯ ನ ಜಾಯತೇ |
ಸೋಮಸೂರ್ಯೋಪರಾಗಾದಿಕಾಲೇ ವೃಂದಾವನಾಂತಿಕೇ || ೪೯ ||

ಕವಚಾದಿತ್ರಿಕಂ ಪುಣ್ಯಮಪ್ಪಣಾಚಾರ್ಯದರ್ಶಿತಮ್ |
ಜಪೇದ್ಯಃ ಸ ಧನಂ ಪುತ್ರಾನ್ ಭಾರ್ಯಾಂ ಚ ಸುಮನೋರಮಾಮ್ || ೫೦ ||

ಜ್ಞಾನಂ ಭಕ್ತಿಂ ಚ ವೈರಾಗ್ಯಂ ಭುಕ್ತಿಂ ಮುಕ್ತಿಂ ಚ ಶಾಶ್ವತೀಮ್ |
ಸಂಪ್ರಾಪ್ಯ ಮೋದತೇ ನಿತ್ಯಂ ಗುರುವರ್ಯಪ್ರಸಾದತಃ || ೫೧ ||



ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಕವಚಂ 

ಸಂಪೂರ್ಣಮ್. 

 

  ಶ್ರೀಕೃಷ್ಣಾರ್ಪಣಮಸ್ತು .

 

                                             Sri Raghavendra Gayatri Matra


 

                                                        PIC-1


ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಆಪಾದಃ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್
ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಧ್ಯಂತಿ ಚ ಮನೋರಥಾಃ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||

ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||


ಓಂ ಶ್ರೀ ಗುರು ರಾಘವೇಂದ್ರಾಯ ನಮಃ । 
OM  SRI GURU RAGHVENDRAYA NAMAHA.

------------------- Hari Om ------------------