Tuesday, August 11, 2026

ಬಾಳೆ ಎಲೆಯ ಶಕ್ತಿ-Power of Banana Leaf - Part -2

 

                                                                      Banana Leaf

 

ಬಾಳೆ ಎಲೆಯ ಶಕ್ತಿ-Power of Banana Leaf


ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು? ವೈಜ್ಞಾನಿಕ 

ಕಾರಣ ಇಲ್ಲಿದೆ ನೋಡಿ


Proved Scientific Reason on One Eat on a Banana Leaf


ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆಗುಂಪಾಗಿಸಿದ್ದೇವೆ.

ಅವುಗಳಲ್ಲಿ ಬಾಳೆಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು.

ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ.

ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು.

ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ.

ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.

 


                                                           Banana Leaf Meal


ಬಾಳೆಎಲೆ ಊಟದಿಂದ ಕೇವಲ ತುಂಬುವುದೊಂದೇ ಅಲ್ಲ, ಈ 

ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ ಮುಖ್ಯವಾದ ಲಾಭಗಳು

ಇಲ್ಲಿವೆ,

1.
ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.

2.
ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.

3.
ಚೆನೈನ ಆಯುರ್ವೇದ ತಜ್ಞರ ಪ್ರಕಾರ, ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯಿದ್ದವರು ನಿತ್ಯ ಬಾಳೆಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.

4.
ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು. ಆದರೆ, ಬಾಳೆಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.

5.
ಬಾಳೆಎಲೆ ಊಟ ಆರೋಗ್ಯಕ್ಕೆತಂಪು. ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.

6.
ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ, ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆ ಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ.

7.
ಭವಿಷ್ಯದಲ್ಲಿ ಚರ್ಮರೋಗಗಳು ಬಾರದಮತೆ ತಡೆಯುವ ವೈದ್ಯೋದ್ದೇಶ ಇದರದ್ದು.

8.
ತೆಂಗಿನೆಣ್ಣೆ ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.

9.
ಮಕ್ಕಳ ತ್ವಚೆಗೆ ಪರಿಹಾರ ---- ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.

10.
ಸುಟ್ಟ ಗಾಯಗಳಿಗೆ ---- ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.

11. ಬಾಳೆ ಎಲೆಗಳು ತಿಂದು ಬಿಸಾಡಿದರು ಅದು ಪ್ರಕೃತಿಯಲ್ಲಿ ಲೀನವಾಗುತ್ತದೆಯೇ ವಿನಃ ಪ್ಲಾಸ್ಟಿಕ್‌ನಂತೆ ಹಾಳುಗೆಡುವುದಿಲ್ಲ. ನಿಮ್ಮಲ್ಲಿ ಹೆಚ್ಚಿನವರು ಪ್ಲಾಸ್ಟಿಕ್ ಪ್ಲೇಟ್‌ಗಳು, ಸ್ಟೈರೋಫೊಮ್ ಪ್ಲೇಟ್‌ಗಳು ಅಥವಾ ಪ್ಲಾಸ್ಟಿಕ್ ಲೇಪಿತ ಪೇಪರ್ ಪ್ಲೇಟ್‌ಗಳನ್ನು ಬಳಸುತ್ತಿರುವಿರಿ. ಇವು ಭೂಮಿಯಲ್ಲಿ ಕರಗಲು ಸಾಕಷ್ಟು ವರ್ಷಗಳೇ ಬೇಕು.

 


                                                                       PIC-1

 

 

                                                            

                                                                        PIC-2

 

METHOD OF SERVING IN PLAINTAIN LEAF

  • The broader side of a leaf is to be placed on the right since right hands is used to eat and it would be easy to have the wider part for eating.

    A traditional meal starts off by serving water. Leaf is Washed to Remove Dust.

    With Main Dishes like Rice, Chapati Served on the Lower Side of the Leaf and Side Dish on the Top of the Leaf.

    Salt is served first followed by Sweet, Pickle, Fruit, Vegetable Gravy Dishes, Fried item, Papad and other Crispies like Vada all have their own Places Reserved on the Banana Leaf.

    On the Bottom of the Leaf Rice is Served followed by Dal with Ghee, Sambar, next Majjige Huli or Mor Kulambu , Soppina Huli and Rasam in Sequence Aids in Digestion. Just before Curds Payasa / Desserts is Served.

    As a Final Touch Close with Banana and Betel Leaves with Nuts and Calcium Carbonate as an aid for Digestion.

    There is also a procedure to Conclude your Lunch after you complete always Close the Top Leaf Side over Lower Leaf Side. 

     

Advantages of using Plaintain or Banana Leaf

  1. Consuming food in Plaintain Leaf itself has More Benefits that to if the Food is Hot has more Beneficiaries.

  2. Cooking food with Banana Leaf either by Steaming or Topping or Wrapping Confers Aroma to the Food.

  3. Cooking food with Banana imparts 99% Chlorophyll content to the Dish and Avoids Early Spoiling of the Food.

  4. Chlorophyll in the Leaf helps to Purify Blood, Relieves organ engorgement and helps in Toning Organs both Internally and Externally.

  5. The Banana Leaf also kills Various Bacteria and Germs in the food thus Preventing us from Various Diseases.

  6. When the food is eaten in Banana Leaves stimulates the taste bud and Soothes Digestive System and Cures Ulcers.

  7. Eating Food in Banana Leaf helps to Overcome Signs of Ageing like Graying of Hair.

  8. Banana Leaf is a Best Medicine for Burns are packed with leaf to Reduce the impact.

  9. When infants Suffers Vitamin D deficiency they are massaged with Gingely oil and made to lie down under rising Sun with Banana Leaf covered over them. This helps to protect them from Skin Disease and Sun Burns.

  10. In case of any injury, Skin Lesions apply a wet cloth with Banana Leaf on top it also helps in curing tumor, ulcers.

  11. Small pox, Bed Sore Rub Honey on Banana Leaf and made to lie on the Leaf.

  12. Of all Eating in Plaintain Leaf helps to improve the Life Span.

There are Many More UN Known Benefits upon Using Banana Leaf apart from the above just Listed.

--------------------- Hari Om --------------------






Monday, August 10, 2026

ಇಪ್ಪತ್ತನಾಲ್ಕು-- ಕೇಶವಾದಿ ನಾಮದ ಅರ್ಥ -- 24- Keshvadi Nama – its Meaning

 

                                                                      Lord Keshava

 

ಇಪ್ಪತ್ತನಾಲ್ಕು-- ಕೇಶವಾದಿ ನಾಮದ ಅರ್ಥ


24- Keshvadi Nama – its Meaning


ಪ್ರತಿದಿನ ಕೇಶವನಾಮ ಹೇಳುವ ನಾವು ಅದರ ಅರ್ಥ ಅರಿತಿದ್ದರೆ ಇನ್ನು ಹೇಳಲು ಸುಲಭ ಮತ್ತು ನೆನಪಿನಲ್ಲಿ ಹೆಚ್ಚು ಉಳಿಯುತ್ತದೆ ಅಲ್ಲವೇ.. ಎಷ್ಟು ಸುಂದರವಾಗಿದೆ. ಕೇಶವನಾಮಾದಿ ಹೇಳುತ್ತಾ ಇಪ್ಪತ್ತು ನಾಲ್ಕು ಶಂಖ,ಚಕ್ರ ಹಾಕಿದರೆ ಅಪಾರ ಪುಣ್ಯದ ಫಲ, ಪ್ರತಿದಿನ ಸಾಧ್ಯವಿಲ್ಲದಿದ್ದರೆ ಏಕಾದಶಿಗೊಮ್ಮೆ ಹಾಕಿ.

 

                                                             24  Keshavadi Roopas

 

 

1. ಕೇಶವ - ಬ್ರಹ್ಮ ರುದ್ರರಿಗೆ ಪ್ರೇರಕ


2. ನಾರಾಯಣ - ಗುಣಪೂರ್ಣ


3. ಮಾಧವ - ಲಕ್ಷೀ ರಮಣ


4. ಗೋವಿಂದ - ವೇದ ವೇದ್ಯ


5. ವಿಷ್ಣು- ಸರ್ವ ವ್ಯಾಪಿ


6. ಮಧುಸೂದನ - ಮಧು ದೈತ್ಯನನ್ನು ಕೊಂದವ


7. ತಿವಿಕ್ರಮ-ಮೂರು ಹೆಜ್ಜೆ ಇಟ್ಟವನು


8. ವಾಮನ-ಮಂಗಳಕರ


9. ಶ್ರೀಧರ-ಲಕ್ಷೀಯನ್ನು ಎದೆಯಲ್ಲಿ ಧರಿಸಿದವನು


10. ಹೃಷಿಕೇಶ- ಇಂದ್ರಿಯಗಳ ದೇವತೆ


11. ಪಧ್ಮನಾಭ- ನಾಭಿಯಲ್ಲಿ ಪದ್ಮವನ್ನು ಹೊಂದಿರುವವನು.


12. ದಾಮೋಧರ -ಹೋಟ್ಟೆಯ ಮೇಲೆ ಹಗ್ಗದಿಂದ ಕಟ್ಟಲ್ಪಟ್ಟವನು.


13. ಸಂಕರ್ಷಣ-ಪ್ರಳಯಕಾಲದಲ್ಲಿ ಎಲ್ಲರನ್ನು ಸೆಳೆಯುವವನು


14. ವಾಸುದೇವ- ಜಗದಾಧಾರ


15. ಪ್ರದ್ಯುಮ್ನ -ಉತ್ತಮ ಐಶ್ವರ್ಯ ನೀಡುವವನು


16. ಅನಿರುದ್ದ-ತನ್ನಾಜ್ಞೆಗೆ ಯಾರಿಂದಲೂ ತಡೆ ಇಲ್ಲದವನು


17. ಪುರುಷೋತ್ತಮ-ಎಲ್ಲ ಜೀವರಿಗಿಂತಲೂ ಲಕ್ಷಿಗಿಂತಲೂ ಉತ್ತಮ


18. ಅಧೊಕ್ಷಜ- ಇಂದ್ರಿಯಗಳಿಗೆ ನಿಲಕದವನು


19. ನಾರಸಿಂಹ- ನರ ಮತ್ತು ಸಿಂಹ ಆಕೃತಿ ಉಳ್ಳವನು


20. ಅಚ್ಚುತ- ತನ್ನ ಸಾಮರ್ಥ್ಯಕ್ಕೆ ಎಂದೂ ಚ್ಯುತಿ ಇಲ್ಲದವನು


21. ಜನಾರ್ಧನ-ಜನನವಿಲ್ಲದಂತೆ ಮಾಡುವವನು


22. ಉಪೇಂದ್ರ- ಎಲ್ಲಾ ಇಂದ್ರರಿಗಿಂತ ಉತ್ತಮ


23. ಹರಿಯೆ -- ಪಾಪ ಪರಿಹಾರಕ


24. ಶ್ರೀ ಕೃಷ್ಣ- ಲೋಕ ನಿಯಾಮಕನಾಗಿದ್ದು ಎಲ್ಲವನ್ನು ಸೆಳೆದು ಕೊಳ್ಳುವವನು.

 

                                                                     another Picture 



Il ಶ್ರೀ ಕೃಷ್ಣಾರ್ಪಣಮಸ್ತು ll


---------------------- Hari Om -----------------------

 

Sunday, August 9, 2026

ಅಗ್ನಿಹೋತ್ರ – AgniHotra

 

ಅಗ್ನಿಹೋತ್ರ – AgniHotra

 


                     
  Agni Deva or Fire God

 

ಅಗ್ನಿಹೋತ್ರದ ಅನೇಕ ಲಾಭಗಳು -- ಮತ್ತು -- ಅಗ್ನಿಹೋತ್ರದ ವಿವಿಧ ಉಪಯೋಗಗಳು


ಅಗ್ನಿಹೋತ್ರದ ಮಹತ್ವ ಅಪಾರ... ನಿತ್ಯವೂ ತಪ್ಪದೇ ಮಾಡಿ


'ಅಗ್ನಿ' ಎಂದರೆ ಬೆಂಕಿ ಮತ್ತು 'ಹೋತ್ರ' ಎಂದರೆ ಗುಣಪಡಿಸುವಿಕೆ; ಇದು ಪವಿತ್ರ ವೈದಿಕ ಹಿಂದೂ ಗ್ರಂಥಗಳಿಂದ 
ಉಗಮಗೊಂಡ ಪ್ರಾಚೀನ ಅಗ್ನಿ ಆಚರಣೆಯಾಗಿದೆ. ಇದು ಪರಿಸರವನ್ನು ಶುದ್ಧೀಕರಿಸುವ ಮತ್ತು ವಾತಾವರಣದಲ್ಲಿ 
ಪರಿವರ್ತನೆಯನ್ನು ಉಂಟುಮಾಡುವಂತಹ ಗುಣಪಡಿಸುವ ಶಕ್ತಿಯುಳ್ಳ ಅಗ್ನಿಯನ್ನು ಸೃಷ್ಟಿಸುತ್ತದೆ. ಈ ಸಂಪ್ರದಾಯವು
ಶತಮಾನಗಳಷ್ಟು ಹಳೆಯದು; ಹಲವು ತಲೆಮಾರುಗಳ ಕಾಲ ಈ ಪದ್ಧತಿಯು ಮರೆಯಾಗಿತ್ತು, ಆದರೆ ಇತ್ತೀಚೆಗೆ ಭಾರತದಲ್ಲಿ
ಇದು ಪುನರುಜ್ಜೀವನಗೊಂಡಿದೆ. 
 
ಅಗ್ನಿಹೋತ್ರವು ಜೀವನ ಚಕ್ರದಲ್ಲಿ ಅಗ್ನಿಯ ಮಹತ್ವವನ್ನು ಎತ್ತಿಹಿಡಿಯುತ್ತದೆ; ಇದು ಶಕ್ತಿ ಮತ್ತು ಗಾಳಿಯ ಗುಣಮಟ್ಟದ 
ದೃಷ್ಟಿಯಿಂದ ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸಲು ಹಾಗೂ ಸಮತೋಲನಗೊಳಿಸಲು ಸಹಾಯ ಮಾಡುತ್ತದೆ 
ಅಲ್ಲದೆ, ಇದು ವಾತಾವರಣದಲ್ಲಿರುವ ವಿಕಿರಣ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಲು ಸಹಕಾರಿಯಾಗಿದೆ ಎಂದು
 ನಂಬಲಾಗಿದೆ.

Agni means Fire & Hotra means Healing -- Ancient Fire Ceremony originating from the Sacred Vedic Hindu Texts and Creating a Healing Fire that Cleanses the Environment and brings about a Transformation in the Atmosphere and This Tradition is Centuries old, the practice was lost for many Generations but has recently seen a Revival in India.

Agnihotra Celebrates the importance of Fire in the cycle of Life, helps to cleanse and Harmonise the surrounding environment in terms of Energy and Air Quality, believed to help Clear Radiation and Negative Energies in the Atmosphere.

 

                                                                   Homa Kunda
 


ಪಂಚಮಹಾಯಜ್ಞಗಳಲ್ಲಿ ಸುಲಭವಾಗಿ ಮತ್ತು ಎಲ್ಲರೂ ಮಾಡಬಹುದಾದ ಯಜ್ಞವೆಂದರೆ ಅಗ್ನಿಹೋತ್ರ ! ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ. ಅನಾದಿಕಾಲದಿಂದಲೂ ಅಗ್ನಿಹೋತ್ರವು ಮನುಷ್ಯನ ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ ಆಗುವ ಮಾಲಿನ್ಯವನ್ನು ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ.
ಅಗ್ನಿಹೋತ್ರದ ಮಹತ್ವ ಪಂಚಮಹಾಯಜ್ಞಗಳಲ್ಲಿ ಸುಲಭವಾಗಿ ಮತ್ತು ಎಲ್ಲರೂ ಮಾಡಬಹುದಾದ ಯಜ್ಞವೆಂದರೆ ಅಗ್ನಿಹೋತ್ರ ! ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ.

ಅನಾದಿಕಾಲದಿಂದಲೂ ಅಗ್ನಿಹೋತ್ರವು ಮನುಷ್ಯನ ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ ಆಗುವ ಮಾಲಿನ್ಯವನ್ನು ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ. ದೇವಯಜ್ಞ ಅಥವಾ ಅಗ್ನಿಹೋತ್ರವನ್ನು ಮಾಡುವುದರಿಂದ ವಾಯು, ಮಳೆ ಮತ್ತು ಜಲ ಇವುಗಳ ಶುದ್ಧಿಯಾಗುತ್ತದೆ, ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುತ್ತದೆ.

 

                                                         Basic Agnihotra Utensils


 

ಅಗ್ನಿಹೋತ್ರ ಹೋಮ ಸಾಮಗ್ರಿಗಳು


ಹವನಪಾತ್ರ : ಅಗ್ನಿಹೋತ್ರಕ್ಕಾಗಿ ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆ, ಗೋವಂಶದ ಬೆರಣಿ : ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ತಯಾರಿಸಲು ದೇಶಿ ಗೋವುಗಳ ಸೆಗಣಿಯ ಬೆರಣಿ ಅಕ್ಕಿ (ಅಕ್ಷತೆ) : ಪಾಲಿಶ್ ಮಾಡದ ಅಖಂಡ ಅಕ್ಕಿಯನ್ನೇ ಉಪಯೋಗಿಸಬೇಕು ಆಕಳ ತುಪ್ಪ : ದೇಶಿ ಆಕಳಿನ ತುಪ್ಪವನ್ನು ಬಳಸಿ ಶುದ್ಧ ಕರ್ಪೂರ : ಇದನ್ನು ಅಗ್ನಿ ಪ್ರಜ್ವಲಿಸಲು ಅಥವಾ ಆಹುತಿ ಎಂದು ಅರ್ಪಿಸಲು ಇತರ ಸಾಮಗ್ರಿಗಳು : ಬೆಂಕಿ ಪೊಟ್ಟಣ, ತಾಮ್ರದ ತಟ್ಟೆ, ಚಮಚ, ಕೈಬೀಸಣಿಗೆ, ವಿಭೂತಿ ಸಂಗ್ರಹಿಸಿಡಲು ಗಾಜಿನ ಅಥವಾ ಮಣ್ಣಿನ ಪಾತ್ರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಮಾಡಬೇಕು ಸೃಷ್ಟಿಯಲ್ಲಿರುವ ಪ್ರತಿಯೊಂದು ವಿಷಯವು ಸ್ಥಳ, ಕಾಲ ಮತ್ತು ಸಮಯಕ್ಕೆ ಬದ್ಧವಾಗಿರುತ್ತದೆ. ಕಾಲಕ್ಕನುಸಾರ ಪ್ರತಿಯೊಂದು ವಿಷಯದ ಸ್ಥಳ ಮತ್ತು ಅದಕ್ಕನುಸಾರ ಆ ಕೃತಿ ಘಟಿಸಲು ಬೇಕಾಗುವ ಸಮಯವು ಈಶ್ವರನ ಯೋಜನೆಯೇ ಆಗಿರುತ್ತವೆ.


ಆದ್ದರಿಂದ ಯಾವುದಾದರೊಂದು ಕೃತಿಯನ್ನು ಕಾಲಕ್ಕನುಸಾರ (ಮುಹೂರ್ತಕ್ಕನುಸಾರ) ಮಾಡಿದರೆ ವ್ಯಕ್ತಿಗೆ ಅಪೇಕ್ಷಿತ ಲಾಭ ಸಿಗುತ್ತದೆ. ಆದುದರಿಂದ ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರವನ್ನು ಮಾಡುವುದಕ್ಕೆ ಮಹತ್ವವಿದೆ. – ಸೌ. ಪ್ರಿಯಾಂಕಾ ಗಾಡ್ಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ನಿಮ್ಮ ಊರಿನ ಸೂರ್ಯೋದಯ ಹಾಗೂ ಸೂರ್ಯಾಸ್ತದ ನಿಖರವಾದ ಸಮಯವನ್ನು ತಿಳಿದುಕೊಳ್ಳಲು ಸನಾತನ ಪಂಚಾಂಗ ಆ್ಯಪ ಉಪಯೋಗಿಸಿ.

 

                                                                           PIC-1
 

 

ಅಗ್ನಿಹೋತ್ರದ ಪ್ರತ್ಯಕ್ಷ ಕೃತಿಯನ್ನು ಮಾಡುವ ವಿಧಾನ


. ಯೋಗ್ಯ ದಿಕ್ಕು : ಅಗ್ನಿಹೋತ್ರ ಮಾಡುವಾಗ ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. . ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ಪ್ರಜ್ವಲಿಸುವ ಕೃತಿ : ಹವನಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ ೨–೩ ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು, ಏಕೆಂದರೆ ಹೀಗೆ ಮಾಡುವುದರಿಂದ ಬಾಯಿಯಲ್ಲಿನ ರೋಗಜಂತುಗಳು ಅಗ್ನಿಯಲ್ಲಿ ಹೋಗುತ್ತವೆ. ಅಗ್ನಿಯನ್ನು ಪ್ರಜ್ವಲಿಸಲು ಸೀಮೆಎಣ್ಣೆಯಂತಹ ಜ್ವಲನಶೀಲ ಪದಾರ್ಥಗಳನ್ನು ಉಪಯೋಗಿಸಬಾರದು. ಅಗ್ನಿಯನ್ನು ಧೂಮರಹಿತವಾಗಿ ಪ್ರಜ್ವಲಿಸಬೇಕು, ಅಂದರೆ ಅದರಿಂದ ಹೊಗೆ ಬರಬಾರದು.

ಹವನ ಸಾಮಗ್ರಿಗಳನ್ನು ಅಗ್ನಿಗೆ ಅರ್ಪಿಸುವುದು


ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೂ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಕೆಳಗೆ ನೀಡಿರುವ ಮಂತ್ರಗಳ ಪೈಕಿ ಮೊದಲನೆಯ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮೆ (ಮಧ್ಯದ ಬೆರಳು), ಅನಾಮಿಕೆ (ಕಿರುಬೆರಳಿನ ಹತ್ತಿರದ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ (ಈ ಸಮಯದಲ್ಲಿ ಹೆಬ್ಬೆರಳನ್ನು ಮೇಲ್ಮುಖವಾಗಿ ಅಂದರೆ ಆಕಾಶದತ್ತ ಮಾಡಿಡಬೇಕು) ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) (ಚಿತ್ರ ನೋಡಿ) ಆಮೇಲೆ ಎರಡನೇ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು.

 

                                                                             PIC-2

 

ಅಗ್ನಿಹೋತ್ರ ಮಂತ್ರ


1) ಸೂರ್ಯೋದಯದ ಸಮಯದಲ್ಲಿ ಪಠಿಸಬೇಕಾದ ಮಂತ್ರ

ಸೂರ್ಯಾಯ ಸ್ವಾಹಾ, ಸೂರ್ಯಾಯ ಇದಂ ನ ಮಮ । ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ ।।

2) ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕಾದ ಮಂತ್ರ

ಅಗ್ನಯೇ ಸ್ವಾಹಾ, ಅಗ್ನಯ ಇದಂ ನ ಮಮ । ಪ್ರಜಾಪತಯೇ ಸ್ವಾಹಾ, ಪ್ರಜಾಪತಯ

ಇದಂ ನ ಮಮ ।।



ಅಗ್ನಿಹೋತ್ರ ಮಾಡುವಾಗ ಇದನ್ನು ಪಾಲಿಸಿ ಮಂತ್ರಗಳ ಉಚ್ಚಾರವನ್ನು ಹೇಗೆ ಮಾಡಬೇಕು ?


ಮಂತ್ರಗಳ ಉಚ್ಚಾರವು ಅಗ್ನಿಹೋತ್ರದ ಸ್ಥಳದಲ್ಲಿ ಝೇಂಕರಿಸುವಂತಹ ನಾದಮಯ ರೀತಿಯಲ್ಲಿ, ಹೆಚ್ಚು ಗಡಿಬಡಿಯಿಂದಲೂ ಅಲ್ಲ (ವೇಗವಲ್ಲದ) ಮತ್ತು ಹೆಚ್ಚು ನಿಧಾನವಾಗಿಯೂ ಅಲ್ಲ, ಹೀಗೆ ಸ್ಪಷ್ಟ ಮತ್ತು ಗಟ್ಟಿಧ್ವನಿಯಲ್ಲಿ ಹೇಳಬೇಕು.



ಮಂತ್ರವನ್ನು ಹೇಳುವಾಗ ಭಾವ ಹೇಗಿರಬೇಕು ?

ಮಂತ್ರದಲ್ಲಿನ ಸೂರ್ಯ, ಅಗ್ನಿ, ಪ್ರಜಾಪತಿ ಈ ಶಬ್ದಗಳು ಈಶ್ವರ ವಾಚಕವಾಗಿವೆ. ‘ಸೂರ್ಯ, ಅಗ್ನಿ, ಪ್ರಜಾಪತಿ ಇವರ ಆಂತರ್ಯದಲ್ಲಿರುವ ಪರಮಾತ್ಮನ ಶಕ್ತಿಗೆ ನಾನು ಆಹುತಿಯನ್ನು ಅರ್ಪಿಸುತ್ತಿದ್ದೇನೆ, ಇದು ನನ್ನದಲ್ಲ’ ಎಂಬ ಅರ್ಥದಲ್ಲಿ ಈ ಮಂತ್ರವಿದೆ. ಇಡೀ ಸೃಷ್ಟಿಯನ್ನು ನಿರ್ಮಿಸುವ, ಅದನ್ನು ಧಾರಣೆ ಮಾಡುವ ಮತ್ತು ಅದರ ಪೋಷಣೆ ಮಾಡುವ ಪರಮಾತ್ಮನ ಶಕ್ತಿಯ ಕುರಿತು ಶರಣಾಗತಭಾವವನ್ನು ಈ ಮಂತ್ರದಲ್ಲಿ ಹೇಳಲಾಗಿದೆ; ಆದುದರಿಂದ ಈ ಮಂತ್ರಗಳನ್ನು ಶರಣಾಗತಭಾವದಿಂದ ಹೇಳಬೇಕು.ಮಂತ್ರವನ್ನು ಯಾರು ಹೇಳಬೇಕು ?


ಮನೆಯಲ್ಲಿ ಒಬ್ಬರು ಅಗ್ನಿಹೋತ್ರವನ್ನು ಮಾಡುವಾಗ, ಮನೆಯಲ್ಲಿರುವ ಇತರ ಸದಸ್ಯರು ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದು, ಆಹುತಿ ನೀಡುವ ವ್ಯಕ್ತಿಯೊಂದಿಗೆ ಅಗ್ನಿಹೋತ್ರದ ಮಂತ್ರವನ್ನು ಹೇಳಬಹುದು.

ಅಗ್ನಿಹೋತ್ರವಾದ ನಂತರ ಇದನ್ನು ಮಾಡಿ


ಧ್ಯಾನ ಧಾರಣೆ


ಅಗ್ನಿಹೋತ್ರವಾದ ನಂತರ ವಾತಾವರಣದ ಶುದ್ಧಿಯಾಗುವುದರಿಂದ ಇತರ ಸಮಯಕ್ಕೆ ಹೋಲಿಸಿದರೆ ಮನಸ್ಸು ಏಕಾಗ್ರವಾಗಲು ಹೆಚ್ಚಿನ ಸಮಯ ತಗುಲುವುದಿಲ್ಲಿ. ಆದುದರಿಂದ ಪ್ರತಿಯೊಂದು ಅಗ್ನಿಹೋತ್ರದ ನಂತರ ಸಾಧ್ಯವಿದ್ದಷ್ಟು ಹೆಚ್ಚು ಸಮಯವನ್ನು ಧ್ಯಾನಕ್ಕಾಗಿ ಇಡಬೇಕು. ಕನಿಷ್ಠ ಅಗ್ನಿಯು ಶಾಂತವಾಗುವ ವರೆಗಾದರೂ ಧ್ಯಾನವನ್ನು ಮಾಡಬೇಕು. ಅದರಲ್ಲೂ ಮನೆ ಮಂದಿಯೆಲ್ಲ ಸೇರಿ ಕುಳಿತು ಇಷ್ಟ ದೇವತೆಯ ನಾಮ ಜಪಿಸಿದರೆ ಎಲ್ಲರಿಗೂ ಅದರ ಲಾಭವಾಗುತ್ತದೆ. ಯಾವ ನಾಮ ಜಪಿಸಬೇಕು ಎಂದು ತಿಳಿದಿಲ್ಲವೇ? ಇಲ್ಲಿ ಕ್ಲಿಕ್ ಮಾಡಿ, ತಿಳಿದುಕೊಳ್ಳಿ !

 


                                                           Agni Hotra Benefits


 

 

 

 

 

 

 

 

 

 

Vibuthi or Bhasma Powder

 

ಅಗ್ನಿಹೋತ್ರದ ವಿಭೂತಿಯ ಅನೇಕ ಉಪಯೋಗಗಳು


. ವಿಭೂತಿಯನ್ನು ಮನೆಯಲ್ಲಿ ಊದುವುದರಿಂದ ವಾಸ್ತು ಶುದ್ಧಿಯಾಗುತ್ತದೆ

. ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯ ವಿಕಾರಗಳಲ್ಲಿ ಸುಧಾರಣೆಯಾಗಲು ಸಹಾಯವಾಗುತ್ತದೆ

. ಪ್ರಾಣಶಕ್ತಿ ಕಡಿಮೆಯಾಗಿದೆ ಎನಿಸಿದಾಗ ಚಿಟಿಕೆ ವಿಭುತಿಯನ್ನು ಸೇವಿಸುವುದರಿಂದ ಪ್ರಾಣಶಕ್ತಿಯಲ್ಲಿ ಹೆಚ್ಚಳವಾಗುತ್ತದೆ

. ಚಿಟಿಕೆ ವಿಭೂತಿಯನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ತೀರ್ಥ ಪ್ರಾಶನದ ಲಾಭವಾಗುತ್ತದೆ

. ಹೋಟೆಲ ಅಥವಾ ಹೊರಗಿನ ಊಟ-ತಿಂಡಿಯನ್ನು ಸೇವಿಸುವ ಮೊದಲು ಅದರ ಮೇಲೆ ಚಿಟಿಕೆ ವಿಭೂತಿಯನ್ನು ಸಿಂಪಡಿಸಿದರೆ ಅದರಲ್ಲಿರಬಹುದಾದ ನಕಾರಾತ್ಕಕ ಶಕ್ತಿ ನಾಶವಾಗುತ್ತದೆ

. ಕೈದೋಟದಲ್ಲಿರುವ ಗಿಡ-ಮರಗಳಿಗೆ ಈ ವಿಭೂತಿಯನ್ನು ಗೊಬ್ಬರವೆಂದೂ ಉಪಯೋಗಿಸಬಹುದು

 


                                              Agnihotra Bhasma or VIbuthi  

 

                                                    Health Benefits from Agnihotra


ಅಗ್ನಿಹೋತ್ರದ ಅನೇಕ ಲಾಭಗಳು


. ಚೈತನ್ಯದಾಯಕ ಮತ್ತು ಔಷಧಿ ವಾತಾವರಣ ನಿರ್ಮಾಣವಾಗುತ್ತದೆ
. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ
. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳು ಆಗುತ್ತವೆ
. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗಿ ಮನೋ ರೋಗಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುತ್ತದೆ
. ರೋಗಜಂತುಗಳ ಪ್ರತಿರೋಧ


ಅಗ್ನಿಹೋತ್ರ ಮಾಡುವುದರಿಂದ ಆಗುವ ಉಪಯೋಗಗಳು

 

1. ದೈವ ಕೃಪೆಯು ಸಿದ್ಧಿಸುತ್ತದೆ.
2. ದೇಹ ಮನಸ್ಸು ಆತ್ಮ ಈ ಮೂರರಲ್ಲೂ ಚೈತನ್ಯ ತುಂಬುತ್ತದೆ.
3. ಜಾತಕದಲ್ಲಿನ ಅಗ್ನಿ ತತ್ವದ ಕೊರತೆಯುಂಟಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು.
4. ಸುತ್ತಲ ವಾತಾವರಣವನ್ನು ಪರಿಶುಧ್ಧಗೊಳಿಸಿ ಹೆಚ್ಚು ಆಮ್ಲಜನಕದ ಅವಕಾಶವನ್ನು ಕಲ್ಪಿಸಿಕೊಡುತ್ತದೆ.
5. ಮನುಷ್ಯನಲ್ಲಿ ಹೆಚ್ಚು ಆತ್ಮಸ್ಥೈರ್ಯವನ್ನು ತಂದುಕೊಡುತ್ತದೆ.
6. ಧೈರ್ಯ ಸಾಹಸ ಪ್ರೌವೃತ್ತಿಗಳನ್ನು ಬೆಳೆಸಿಕೊಳ್ಳುವಂತಹ ವಿಶೇಷ ಶಕ್ತಿಯನ್ನು ತಂದುಕೊಡುತ್ತದೆ.
7. ಮಾನಸಿಕ ಗೊಂದಲಗಳಿಗೆ ಒಂದು ನಿರ್ಧಿಷ್ಟ ಅರ್ಥವನ್ನು ತಂದುಕೊಡುತ್ತದೆ.
8. ನಿಮ್ಮ ಮನಸ್ಸಿನ ಸಂಕಲ್ಪವನ್ನು ಈಡೇರಿಸಿಕೊಳ್ಳಬಹುದು.
9. ನೀವು ಅಂದುಕೊಂಡ ಕೆಲಸವನ್ನು ಪೂರ್ಣಗೊಳಿಸಲು ಈ ಅಗ್ನಿಹೋತ್ರವು ಸಹಾಯ ಮಾಡುತ್ತದೆ.
10. ನಿಮ್ಮ ಜೀವನದಲ್ಲಿನ ಅಸ್ಪಷ್ಟತೆಗಳಿಗೆಲ್ಲ ಸ್ಪಷ್ಟತೆಯನ್ನು ತಂದುಕೊಡುತ್ತದೆ.
11. ನಿಮ್ಮ ಅಪೂರ್ಣತೆಗಳಿಗೆಲ್ಲಾ ಪೂರ್ಣ ಶಕ್ತಿಯನ್ನು ತಂದುಕೊಡುತ್ತದೆ.



ನಿತ್ಯ ಅಗ್ನಿಹೋತ್ರ ಮಾಡುವವರು ಮಾಡಿಯೇ ತೀರಬೇಕಂತೆ; ಬೆಳಗ್ಗೆ, ಸಾಯಂಕಾಲ ಅಗ್ನಿಹೋತ್ರ ಮಾಡುವ ಸಮಯದಲ್ಲಿ ಅವರಿಗೆ ಆಶೌಚ ಇಲ್ಲವಂತೆ. ಮುಗಿದ ಕೂಡಲೆ ಪುನಃ ಅಗ್ನಿಹೋತ್ರ ಮಾಡುವವರೆಗೂ ಆಶೌಚನಿಯಮಗಳನ್ನು ಅನುಸರಿಸಬೇಕು. ಆಶೌಚವು ದೈಹಿಕವಾಗಿದ್ದರೆ ಅಗ್ನಿಹೋತ್ರ ಆರಂಭದಲ್ಲಿ ಹೋಗುವುದು ಹೇಗೆ? ಮುಗಿದಕೂಡಲೆ ಬರುವುದು ಎಂದರೇನು? ಮಾನಸಿಕ ಎಂದಿಟ್ಟುಕೊಂಡರೆ ಸಮರ್ಥಿಸಬಹುದು. ಅಗ್ನಿಹೋತ್ರವೆನ್ನುವುದು ವೇದೋಕ್ತವಾದ ನಿತ್ಯಕರ್ಮ. ಅದಕ್ಕೆ ದೊಡ್ಡ ಸ್ಥಾನ. ಆದ್ದರಿಂದ ಅದನ್ನು ಮಾಡುವ ಸಮಯದಲ್ಲಿ ಸ್ವಲ್ಪಕಾಲ ಮಮತೆಯನ್ನೂ, ಅದರಿಂದ ಉಂಟಾಗಿರುವ ದುಃಖವನ್ನೂ ಮರೆಯಬೇಕೆಂದರ್ಥ. ಅಗ್ನಿಹೋತ್ರದಂಥ ಉತ್ತಮ ಕರ್ಮವನ್ನು ಮಾಡುವಾಗ ಅದರ ಏಕಾಗ್ರತೆಯಲ್ಲಿ ಮಮತೆ, ದುಃಖಗಳು ಮರೆತುಹೋಗಬೇಕು – ಮರೆತುಹೋಗುತ್ತವೆ.

 

ಹಾಗೇ ಶ್ರಾದ್ಧ ಆರಂಭಿಸಿಬಿಟ್ಟಿದ್ದರೆ, ವಿಷಯ ತಿಳಿದರೂ ಆಶೌಚವಿಲ್ಲ. ಶ್ರಾದ್ಧ ಮುಗಿದ ಕೂಡಲೆ ಬಂದು ಸೇರಿಕೊಳ್ಳುತ್ತದಂತೆ! ದೈಹಿಕವಾದರೆ ಇದು ಹೇಗೆ ಸಾಧ್ಯ? ಮಾನಸಿಕ ಎಂದಿಟ್ಟುಕೊಂಡರೆ ಪುನಃ ಸಮರ್ಥಿಸಬಹುದು. ಶ್ರಾದ್ಧದಂತಹ ಪಿತೃಗಳಿಗೆ ಮಾಡುವ ಯಜ್ಞದಲ್ಲಿ ನಿರತನಾಗಿರುವಾಗ ಬಂಧುಗಳ ಮೃತಿಯಿಂದ ಉಂಟಾಗುವ ದುಃಖ ಬಾಧಿಸಬಾರದು. ಬಾಧಿಸುವುದಿಲ್ಲ

ಅಗ್ನಿಹೋತ್ರ ನಿಜವಾಗಿ ನಮ್ಮ ಶ್ರೇಯಸ್ಸಿನ ಮಾರ್ಗ. ಯಾರು ಮಾಡಿ ಏನು ಸಾಧಿಸುವಿರೆಂದು ಆದರೆ ಅವರೆ ಗೌಪ್ಯವಾಗಿ ಮಾಡಿ ಸಿದ್ಧಿ ಪಡೆವರು. ಇದು ನಿಮಗೆ ಗೊತ್ತಿದೆ. ಅಗ್ನಿಹೋತ್ರ ಕಡಿಮೆ ವೆಚ್ಚದ ಫಲಪ್ರದ ಮಾರ್ಗ. ನಾಟಿ ಹಸುವಿನ ಬೆರಣಿ. ನಾಟಿ ಹಸುವಿನ ತುಪ್ ಪಾಲೀಸ್ ಇಲ್ಲದ ಅಕ್ಕಿ ಇವುಗಳ ಮೂಲಕ ಬೆಳಿಗ್ಗೆ ಸೂರ್ಯ ಉದಯದ ಮುನ್ನ. ಸಂಜೆ ಸೂರ್ಯನ ಅಸ್ತದ ವೇಳೆ ಮಾಡುವ ಮೂಲಕ ಮನೆಯ ವಾತಾವರಣ ಶುದ್ಧ ವಾಗುವಂತೆ ಮಾಡಿ.


==========================


ಸನಾತನವೇ ಸತ್ಯ,


ಸನಾತನವೇ ಶ್ರೇಷ್ಠ.


ಸನಾತನವೇ ವಿಶ್ವ ಧರ್ಮ


==========================


------------------------- Hari om ---------------------

 

 


 

Saturday, August 8, 2026

ಸೂರ್ಯಪುರ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಸ್ಥಾನ ಕೊರಟಗೆರೆ ತಾಲೂಕು, ಕರ್ನಾಟಕ -- Suryapura – Sri Suryanjaneya Swamy Temple, Koratagere Taluk, Karnataka State

 

ಸೂರ್ಯಪುರ ಶ್ರೀ ಸೂರ್ಯಾಂಜನೇಯ ಸ್ವಾಮಿ

 ದೇವಸ್ಥಾನ ,ಕೊರಟಗೆರೆ ತಾಲೂಕು, ಕರ್ನಾಟಕ


Suryapura – Sri Suryanjaneya Swamy Temple,

Koratagere Taluk, Karnataka State

 

                                  

                                                    ಸೂರ್ಯಾಂಜನೇಯ ಸ್ವಾಮಿ

                                   Surya Anjaneya Swamy

                     

ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ ಕೊರಟಗೆರೆ
ತಾಲ್ಲೂಕಿನ ಸೂರ್ಯಪುರ ಗ್ರಾಮದಲ್ಲಿದೆ. ಇದು ಸೂರ್ಯ ಮತ್ತು ಆಂಜನೇಯರಿಗಾಗಿ
 (ಗುರು ಮತ್ತು ಶಿಷ್ಯ) ಮೀಸಲಾದ 'ಸೂರ್ಯಾಂಜನೇಯ ಸ್ವಾಮಿ ದೇವಾಲಯ'ವಾಗಿದೆ;  
ಇಡೀ ಜಗತ್ತಿನಲ್ಲಿಯೇ ಇಂತಹ ಏಕೈಕ ದೇವಾಲಯ ಇದಾಗಿದೆ.

Surya Anjaneya Temple in Suryapura village is just 30 Kms from Tumkuru in Koratagere Taluk
 and 80 Kms from Bengaluru and 600 Years old Temple.

ಕೊರಟಗೆರೆ ತಾಲೂಕಿನ ತುಮಕೂರಿನಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಸೂರ್ಯಪುರ
 ಗ್ರಾಮದ ಸೂರ್ಯ ಆಂಜನೇಯ ದೇವಸ್ಥಾನ ಮತ್ತು ಬೆಂಗಳೂರಿನಿಂದ 80 ಕಿ.ಮೀ ಹಾಗೂ
 600 ವರ್ಷಗಳಷ್ಟು ಹಳೆಯದಾದ ದೇವಾಲಯವಿದೆ.
 
Temple Entrance
 
 

ಹಾಗೆ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ_ಬೆಟ್ಟ ಮತ್ತು ಆಂಜನೇಯ ತನ್ನ ಗುರುವಾದ ಸೂರ್ಯದೇವನಿಂದ ವಿದ್ಯೆ ಕಲಿತ ಸ್ಥಳ ಸೂರ್ಯಪುರ ಕೂಡ ಆಗಬೇಕು, ದೇಶದ ಎಲ್ಲ ರಾಜ್ಯಗಳ ಹನುಮನ ಭಕ್ತರು ಮತ್ತು ಸೂರ್ಯನ ಭಕ್ತರು ಸೂರ್ಯಪುರಕ್ಕೆ ಬರಬೇಕು.


ನಮ್ಮ ಬೇರೆ ಬೇರೆ ರಾಜ್ಯದ ಬಹಳಷ್ಟು ಜನಕ್ಕೆ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ ಸೂರ್ಯಪುರದ ಬಗ್ಗೆ ಗೊತ್ತಿಲ್ಲ, ಆಂಜನೇಯನು ವಿದ್ಯೆ ಕಲಿತ ಸ್ಥಳ ಸೂರ್ಯಪುರ ಎಲ್ಲರಿಗೂ ತಿಳಿಯುವಂತಹ ಕೆಲಸ ಆಗಬೇಕು, ರಾಜ್ಯ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆ ಸ್ವಲ್ಪ ಇದರ ಬಗ್ಗೆ ಗಮನಹರಿಸಬೇಕು. ದೇಶದೆಲ್ಲೆಡೆಯಿಂದ ಭಕ್ತರು ಬರುವಂತಾಗಲಿ. ಋಷಿ ಮುನಿಗಳು ತಪ್ಪಸ್ಸುಗೈದ ಸ್ಥಳವಾಗಿದ್ದ ಸೂರ್ಯಪುರ, ವಿಜಯನಗರ ಸಾಮ್ರಾಜ್ಯದ ಪತನಾ ನಂತರ ತನ್ನ ಭವ್ಯತೆಯನ್ನು ಕಳೆದುಕೊಂಡಿತು.


ಸೂರ್ಯಪುರ (ರಾಯಪುರ) ಗ್ರಾಮದ ಮನೆಯೊಳಗಿನ ಒಲೆಯೊಂದರಲ್ಲಿ ಹುಣಸೆಗಿಡ ಹುಟ್ಟಿದಾಗ ಅದು ಅಪಶಕುನ ಎಂದು ಜನರು ಈ ಗ್ರಾಮವನ್ನೆ ಖಾಲಿ ಮಾಡಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ.


ಈಗಲೂ ಕೂಡ ಆಗಾಗ್ಗೆ ರಾತ್ರಿ ಸಮಯದಲ್ಲಿ (ಋಷಿಮುನಿಗಳ ಸಂಚಾರ) ಜ್ಯೋತಿ (ಬೆಳಕು) ಸಂಚರಿಸುತ್ತಿರುವುದನ್ನು ನೋಡುತ್ತಿರುವುದಾಗಿ ಅರ್ಚಕರ ಕುಟುಂಬದವರು ತಿಳಿಸುತ್ತಾರೆ.
ಇತ್ತೀಚೆಗೆ ಅಳಿದುಳಿದ ಈ ಗ್ರಾಮದ ದೇವಾಲಯಗಳನ್ನು ಸೂರ್ಯಪುರ ಆಶ್ರಮ (ಮಠ)ದ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.ಸೂರ್ಯನಿಗೆ ಪ್ರಿಯವಾದ ವಾರ ಬಾನುವಾರ.ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಹೀಗಾಗಿ ಬಾನುವಾರ,ಮಂಗಳವಾರ ಮತ್ತು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

 

                                                                another Picture

  

ಶ್ರೀ ಸೂರ್ಯಾಂಜನೇಯ ಸ್ವಾಮಿಗೆ ಭಕ್ತರು ಹರಕೆ ರೂಪದಲ್ಲಿ ಮುಡಿ (ಮಂಡೆ) ಕೊಡುತ್ತಾರೆ.
ಸುಮೇರು ಪ್ರಾಂತ್ಯದ ರಾಜ ಕೇಸರಿ ಮಹಾರಾಜ ಮತ್ತು ಅಂಜನಾದೇವಿಯ ಮಗ ಆಂಜನೇಯ.
ಕಶ್ಯಪ ಋಷಿ ಮತ್ತು ಅದಿತಿಯ ಮಗ ಸೂರ್ಯ. ಆಂಜನೇಯನು ತನ್ನ ಗುರುವಾದ ಸೂರ್ಯದೇವನಿಗೆ ಕೊಟ್ಟ ಮಾತಿನಂತೆ ತನ್ನ ಸುಮೇರು ರಾಜ್ಯವನ್ನು ತ್ಯಜಿಸಿ ಸೂರ್ಯದೇವನ ಅಂಶದಿಂದ ಜನಿಸಿದ ಕಿಷ್ಕಿಂದಾ ರಾಜನಾದ ಸುಗ್ರೀವನ ಬಳಿಗೆ ಹೋಗುತ್ತಾನೆ.ಹೀಗೆ ತನ್ನನ್ನು ನಂಬಿದವರ ಕಾಪಾಡುತ್ತಾ ಶಕ್ತಿ,ಭಕ್ತಿ,ಯುಕ್ತಿ ಇವುಗಳ ಸಂಕೇತವಾಗಿದ್ದಾನೆ.


ಪ್ರತಿ ವರ್ಷ ಸೂರ್ಯ ಹುಟ್ಟಿದ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ ದಿನ (ರಥಸಪ್ತಮಿ) ಸೂರ್ಯಪುರದಲ್ಲಿ ರಥೋತ್ಸವ
ಜರುಗುತ್ತದೆ ಮಕರ ಸಂಕ್ರಾಂತಿ ಮತ್ತು ರಥಸಪ್ತಮಿ ದಿನಸೂರ್ಯಮಾಲೆ ಧರಿಸಿ ಭಕ್ತರು ಶ್ರೀ ಕ್ಷೇತ್ರ ಸೂರ್ಯಪುರಕ್ಕೆ ಬರುತ್ತಾರೆ.


ಸುಂದರ ಪ್ರಕೃತಿಯ ನಿಸರ್ಗದ ತಾಣ ಸೂರ್ಯಪುರ, ಧ್ಯಾನ, ಯೋಗ, ಮತ್ತು ಮನಃಶಾಂತಿಗೆ ಸೂಕ್ತವಾದ ಸ್ಥಳ. ಸೂರ್ಯಪುರಕ್ಕೆ ದೂರದ ಊರುಗಳಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ. ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಸಮುದಾಯ ಭವನ ಲಭ್ಯವಿದೆ.

 

                                                                            PIC-1

 
 ಭಕ್ತರಿಗೆ ಪ್ರತಿದಿನ ಟ್ರಸ್ಟ್ ವತಿಯಿಂದ ದಾಸೋಹ ವ್ಯವಸ್ಥೆ ಇರುತ್ತದೆ.


ಸೂರ್ಯ ಮತ್ತು ಆಂಜನೇಯ ನೆಲೆಸಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ ತುಂಬಾ ಅಪರೂಪವಾಗಿದ್ದು, ಸ್ವಾಮಿ ದಕ್ಷಿಣಾಭಿಮುಖವಾಗಿರುವುದು ಇಲ್ಲಿನ ಮತ್ತೊಂದು ವಿಶೇಷ.

ಶ್ರೀ ಕ್ಷೇತ್ರದಲ್ಲಿ ನವಗ್ರಹವನ, ನಕ್ಷತ್ರವನ, ಮತ್ತು ರಾಶಿವನ ಇದ್ದು ಭಕ್ತರು ತಮ್ಮ ರಾಶಿ,ನಕ್ಷತ್ರ, ಮತ್ತು ಗ್ರಹಗಳ ಅನುಸಾರವಾಗಿ ಪ್ರಾರ್ಥನೆ ಸಲ್ಲಿಸಬಹುದು.


ಶ್ರೀ ಕ್ಷೇತ್ರ ಸೂರ್ಯಪುರ ಸಂಪೂರ್ಣ ವಾಸ್ತು ರೀತಿಯಿಂದ ಕೂಡಿರುವುದರಿಂದ ಭಕ್ತರ ಸಕಲ ಕೋರಿಕೆಗಳನ್ನು ಶ್ರೀ ಸೂರ್ಯಾಂಜನೇಯ ಸ್ವಾಮಿ ನೆರವೇರಿಸುತ್ತಿದ್ದಾನೆ.
ಸೂರ್ಯಪುರದ ಗುಟ್ಟೆಯ ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.


ಆರೋಗ್ಯ,ಆಯುಸ್ಸು ಐಶ್ವರ್ಯ, ಸಂತಾನ ಬಾಗ್ಯ, ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ನೆಲೆಸಿರುವ ಸೂರ್ಯಪುರ ಒಂದು ಪುಣ್ಯ ಕ್ಷೇತ್ರವಾಗಿದೆ.
ಹೆಚ್ಚಿನ ವಿವರಗಳಿಗೆ ಸೂರ್ಯಪುರ ಆಶ್ರಮ.

ಮೊಬೈಲ್ ಸಂಖ್ಯೆ 9448270327 ಮತ್ತು 9008335288. ಸಂಪರ್ಕಿಸಬಹುದು.

 

                                                                             PIC-2

 
 

ಸೂರ್ಯ ದೇವರು ಮತ್ತು ಆಂಜನೇಯ ಸ್ವಾಮಿ ಒಂದೇ ವಿಗ್ರಹದಲ್ಲಿ ಆರಾಧನೆ ಮತ್ತು 
ನೆಲೆಸಿರುವ ಈ ಅಪರೂಪದ ದೇವಾಲಯಕ್ಕೆ ದಯವಿಟ್ಟು ಭೇಟಿ ನೀಡಿ; ಇಡೀ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ 'ಸೂರ್ಯ-ಆಂಜನೇಯ ಸ್ವಾಮಿ'ಯ ದರ್ಶನ ಮತ್ತು ಆಶೀರ್ವಾದವನ್ನು ಇಲ್ಲಿ ಪಡೆಯಬಹುದು

Please Visit this very Rare Temple Lord Surya with Lord Anjaneya Combination in one idol Worshiped and No where in this World One find Find and get Blessings form the Lord SuryaAnjaneya Swamy.


---------------------- Hari Om -----------------------