ಯುಗಾದಿ ಹಬ್ಬದ ಮಹತ್ವ – Importance of Ugadi –
Hindu New Year Festival
ಚೈತ್ರಮಾಸಕ್ಕೆ
ವಿಷ್ಣು ನಿಯಾಮಕ.
ಚೈತ್ರ
ಶುಕ್ಲ ಪ್ರತಿಪದೆಯ ದಿನ ಯುಗಾದಿ
ಹಬ್ಬದ ದಿನ ನೂತನ ವರ್ಷಾರಂಭ.
ಈ
ದಿನ ಅರುಣೋದಯದ ಕಾಲದಲ್ಲಿಯೇ
ಎದ್ದು ಭಗವಂತನ ನಾಮಸ್ಮರಣೆಯನ್ನು
ಮಾಡುತ್ತಾ ದೇವರ ಮನೆಗೆ ಹೋಗಿ
ದೇವರ ಮುoದೆ
ಇಟ್ಟಿರುವ ಪಂಚಾಂಗ,
ತರಕಾರಿಗಳು,
ಧಾನ್ಯಗಳು,
ಫಲ ತಾಂಬೂಲಗಳು,
ಎಣ್ಣೆ
ನೆಲ್ಲಿಕಾಯಿ ಮುಂತಾದ ವಸ್ತುಗಳನ್ನು
ಹೊಸ ಕನ್ನಡಿಯ ಮೂಲಕ ನೋಡಬೇಕು.
ಯಾವ ಯಾವ
ವಸ್ತುಗಳನ್ನು ಕನ್ನಡಿಯ ಮೂಲಕ
ನೋಡುವೇವೋ ಅವುಗಳನ್ನು ಬಿಂಬ
ರೂಪಿ ಪರಮಾತ್ಮನು ದೊರಕಿಸಿ
ಕೊಡುವನು. ಮುಖ
ಪ್ರಕ್ಷಾಲನೆಯನ್ನು ಮಾಡಿ ಗಜೇಂದ್ರ
ಮೋಕ್ಷ ಪಾರಾಯಣ ಮಾಡಬೇಕು.
ಯುಗಾದಿಯಂದು
ಪ್ರತಿಯೊಬ್ಬನೂ ಅಭ್ಯಂಜನ ಮಾಡಲೇಬೇಕು.
ಈ ಮೊದಲು
ಪೂಜಕನು ಸ್ನಾನ ಮಾಡಿ ಭಗವoತನಿಗೆ
ಎಣ್ಣೆ ಸೀಗೆಪುಡಿ, ಬಿಸಿ
ನೀರಿನ ಅಭ್ಯoಜನವನ್ನು
ಮಾಡಿಸಬೇಕು. ಭಗವಂತನಿಗೆ
ಮಾಡಿ, ಉಳಿದ
ಎಣ್ಣೆ ಸೀಗೆಪುಡಿಗೆ ಬೇರೆ ಎಣ್ಣೆ,
ಸೀಗೆಪುಡಿಯನ್ನು
ಬೆರೆಸಿ ಪ್ರತಿಯೊಬ್ಬರೂ ಹಚ್ಚಿಕೊಂಡು
ನಂತರ ಸ್ನಾನ ಮಾಡಬೇಕು.
ಸಪ್ತ
ಚಿರಂಜೀವಿ ಸ್ಮರಣೆ
ಎಣ್ಣೆಯನ್ನು
ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ
ಸಪ್ತ ಚಿರಂಜೀವಿ ಗಳನ್ನು ಮಾರ್ಕಂಡೇಯ
ನನ್ನು ಈ ಕೆಳಗೆ ಕೊಟ್ಟಿರುವ
ಮಂತ್ರವನ್ನು ಹೇಳಿ ಸ್ಮರಿಸಬೇಕು
.
अश्वत्तामा
बलिर्व्यास: हनूमांश्च
विभीषण: ।
कृप: परशुरामश्च
सप्तैते चिरंजीविन:
।
ಅಶ್ವತ್ತಾಮಾ
ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ
| ಕೃಪಃ
ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ
|
ಅಭ್ಯoಜನವನ್ನು
ಮಾಡಿದ ನಂತರ ಭಗವಂತನ ವಿಶೇಷ
ಪೂಜೆಯನ್ನು ಮಾಡಿ ನಂತರ ಹೊಸಬಟ್ಟೆಯನ್ನು
ಧರಿಸಿ, ನಿಂಬಕ
ದಳ ಭಕ್ಷಣ
(ಬೇವು
-ಬೆಲ್ಲ)ವನ್ನು
ಮಾಡಬೇಕು.
ಬೇವು
ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ
ಮಂತ್ರ:-
शतायुर्वज्रदेहाय
सर्वसंपत्कराय च सर्वारिष्टविनाशाय
निंबकदळभक्षणम्
ಶತಾಯುರ್ವಜ್ರದೇಹಾಯ
ಸರ್ವಸಂಪತ್ಕರಾಯ ಚ |
ಸರ್ವಾರಿಷ್ಟವಿನಾಶಾಯ
ನಿಂಬಕದಳಭಕ್ಷಣಮ್ |
ಅರ್ಥ
:- ನೂರು
ವರ್ಷ ಆಯುಸ್ಸು, ವಜ್ರದಂತೆ
ಧೃಢವಾದ ಶರೀರ, ಸರ್ವಸಂಪತ್ತು,
ಸರ್ವ ಅರಿಷ್ಟನಾಶ
- ಇವುಗಳಿಗಾಗಿ
ಯುಗಾದಿಯoದು
ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು.
ನಂತರ
ಪಂಚಾoಗ
ಶ್ರವಣಮಾಡಬೇಕು
ಪಂಚಾಂಗ
ಶ್ರವಣ ಎಂದರೇನು ಮತ್ತು ಅದರ ಮಹತ್ವ
ಏನು?
ಜ್ಯೋತಿಷಿಯ
ಪೂಜೆಯನ್ನು ಮಾಡಿ ಅವರಿಂದ ಅಥವಾ
ಉಪಾಧ್ಯಾಯರಿಂದ ಹೊಸ ವರ್ಷದ
ಪಂಚಾಂಗವನ್ನು ಅರ್ಥಾತ್ ವರ್ಷಫಲದ
ಶ್ರವಣವನ್ನು ಮಾಡಬೇಕು. ಈ
ವರ್ಷಫಲದ ಶ್ರವಣದ ಫಲ ಹೇಳಲಾಗಿದೆ,
ಅದು ಮುಂದಿನಂತಿದೆ.
ತಿಥಿಯ ಶ್ರವಣದಿಂದ
ಲಕ್ಷ್ಮೀಯು ಒಲಿಯುತ್ತಾಳೆ,
ವಾರದ ಶ್ರವಣದಿಂದ
ಆಯುಷ್ಯವು ವೃದ್ಧಿಯಾಗುತ್ತದೆ,
ನಕ್ಷತ್ರದ
ಶ್ರವಣದಿಂದ ಪಾಪನಾಶ ವಾಗುತ್ತದೆ,
ಯೋಗದ ಶ್ರವಣದಿಂದ
ರೋಗಗಳ ನಿವಾರಣೆಯಾಗುತ್ತದೆ,
ಕರಣ ಶ್ರವಣದಿಂದ
ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ.
ಇವು ಪಂಚಾಂಗ
ಶ್ರವಣದ ಉತ್ತಮ ಫಲಗಳಾಗಿವೆ.
ಇದರ ನಿತ್ಯಶ್ರವಣದಿಂದ
ಗಂಗಾಸ್ನಾನದ ಫಲವು ಲಭಿಸುತ್ತದೆ.
ಬೇವಿನ
ಪ್ರಸಾದ
ಪಂಚಾಂಗ
ಶ್ರವಣದ ನಂತರ ಕಹಿ ಬೇವಿನ ಪ್ರಸಾದ
ಹಂಚಬೇಕು. ಈ
ಪ್ರಸಾದವನ್ನು ಬೇವಿನ ಹೂವು,
ಚಿಗುರೆಲೆಗಳು,
ನೆನೆಸಿದ
ಕಡಲೆಕಾಳು ಅಥವಾ ಬೇಳೆ,
ಜೇನು,
ಜೀರಿಗೆ ಮತ್ತು
ಸ್ವಲ್ಪ ಇಂಗು ಇವೆಲ್ಲವನ್ನು
ಬೆರೆಸಿ ತಯಾರಿಸುತ್ತಾರೆ.
ಭೂಮಿಯನ್ನು
ಊಳುವುದು:
ಯುಗಾದಿಯಂದು
ಭೂಮಿಯನ್ನು ಊಳಬೇಕು.
ಭೂಮಿಯನ್ನು
ಊಳುವಾಗ ಕೆಳಗಿನ ಮಣ್ಣು ಮೇಲೆ
ಬರುತ್ತದೆ. ಮಣ್ಣಿನ
ಸೂಕ್ಷ್ಮ-ಕಣಗಳ
ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ
ಬೀಜ ಮೊಳಕೆಯೊಡೆಯುವ ಭೂಮಿಯ
ಸಾಮರ್ಥ್ಯವು ಅನೇಕ ಪಟ್ಟು
ಹೆಚ್ಚಾಗುತ್ತದೆ. ಭೂಮಿಗೆ
ಉಪಯೋಗಿಸಲ್ಪಡುವ ಸಲಕರಣೆ ಮತ್ತು
ಎತ್ತುಗಳ ಮೇಲೆ ಪ್ರಜಾಪತಿ
ಲಹರಿಗಳನ್ನು ಉತ್ಪನ್ನ ಮಾಡುವ
ಮಂತ್ರಸಹಿತ ಅಕ್ಷತೆಗಳನ್ನು
ಹಾಕಬೇಕು. ಹೊಲದಲ್ಲಿ
ಅಥವಾ ಗದ್ದೆಯಲ್ಲಿ ಕೆಲಸ ಮಾಡುವವರಿಗೆ
ಹೊಸ ಬಟ್ಟೆಗಳನ್ನು ಕೊಡಬೇಕು.
ಈ ದಿನ ಹೊಲದಲ್ಲಿ
ಕೆಲಸ ಮಾಡುವ ಜನರ ಮತ್ತು ಎತ್ತುಗಳ
ಭೋಜನದಲ್ಲಿ ಕುಂಬಳಕಾಯಿ,
ಹೆಸರುಬೇಳೆ,
ಅಕ್ಕಿ,
ಹೂರಣ ಮುಂತಾದ
ಪದಾರ್ಥಗಳಿರಬೇಕು.
ದಾನ
:
ಯಾಚಕರಿಗೆ
ಅನೇಕ ವಿಧದ ದಾನವನ್ನು ಕೊಡಬೇಕು,
ಉದಾ.
ಅರವಟ್ಟಿಗೆಯನ್ನು
(ಜಲ
ಮಂದಿರ) ನಿರ್ಮಿಸಿ
ನೀರಿನ ದಾನವನ್ನು ಮಾಡಬೇಕು.
ಇದರಿಂದ
ಪಿತೃಗಳು ಸಂತುಷ್ಟರಾಗುತ್ತಾರೆ.
ಈ
ದಿನ ಅನೇಕ ವಿಧದ ಮಂಗಲ ಹಾಡುಗಳನ್ನು
ಮತ್ತು ಪುಣ್ಯಪುರುಷರ ಕಥೆಗಳನ್ನು
ಕೇಳುತ್ತಾ ಈ ದಿನವನ್ನು ಆನಂದದಿಂದ
ಕಳೆಯಬೇಕು. ಈಗಿನ
ಕಾಲದ ಹಬ್ಬವೆಂದರೆ ಮೋಜು ಮಜಾ
ಮಾಡುವ ದಿನವೆಂಬ ಸಂಕಲ್ಪನೆ
ಬರುವಂತಾಗಿದೆ, ಆದರೆ
ಹಿಂದೂ ಧರ್ಮದ ಶಾಸ್ತ್ರೀಯ ಪದ್ಧತಿಯ
ಹಬ್ಬವೆಂದರೆ "ಹೆಚ್ಚೆಚ್ಚು
ಚೈತನ್ಯ ಪಡೆಯುವ ದಿನ"
ವಾಗಿರುತ್ತದೆ.
ಆದ್ದರಿಂದ ಹಬ್ಬದಂದು ಸಾತ್ತ್ವಿಕ ಆಹಾರ, ಸಾತ್ತ್ವಿಕ ಬಟ್ಟೆ ಹಾಗೂ ಇತರ ಧಾರ್ಮಿಕ ಕೃತಿ ಇತ್ಯಾದಿಗಳನ್ನು ಮಾಡುವುದರೊಂದಿಗೆ ಸಾತ್ತ್ವಿಕವಾದ ಸುಖದಾಯಕ ಕೃತಿಗಳನ್ನು ಮಾಡಲು ಶಾಸ್ತ್ರವು ಹೇಳಿದೆ. ಈ ರೀತಿ ಯುಗಾದಿಯನ್ನು ಆಚರಿಸುವುದರಿಂದ ಆರೋಗ್ಯ, ಕೃಷಿ ಮುಂತಾದವು ಹೆಚ್ಚಾಗುತ್ತದೆ.
----------------- Hari Om ----------------








