Wednesday, July 15, 2026

ಜಪ ---- JAPA

 

ಜಪ ---- JAPA


'ಜಪ' ಎಂಬುದು ಸಂಸ್ಕೃತ ಪದವಾಗಿದ್ದು, ಇದು ಮಂತ್ರ ಅಥವಾ ದೈವಿಕ ನಾಮದ ಧ್ಯಾನಪೂರ್ವಕ ಪುನರಾವರ್ತನೆಯ

Japa is a Sanskrit word meaning the Meditative Repetition of a 

Mantra or a Divine Name.


ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ.

"
ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು.

"
ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ

"
" ಕಾರೋ ಜನ್ಮ ವಿಚ್ಚೇದನ
"
" ಕಾರೋ ಪಾಪನಾಶಕl
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕll

"
"ಕಾರವು ಜನ್ಮ ವಿನಾಶಕವಾದದ್ದೆಂದೂ "" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಜನ್ಮ ಪವಿತ್ರವಾಗ ಬೇಕಾದರೆ "ಜಪ" ಅವಶ್ಯಕವೆಂದಾಗುತ್ತದೆ.

 

                                                               Tulasi Japa Male

 

"ಜಪ" ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ.  

ಜಪಿಸುವ "ಬೀಜ" ಮಂತ್ರವಾಗಲೀ, "ತಾರಕ" ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.

"
ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆಂದರೆ:

1) ವಾಚಕ

2) ಉಪಾಂಶು

3) ಮಾನಸೀ ಜಪ.

ವಾಚಕ: ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು.
ಉಪಾಂಶು:ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು.
ಮಾನಸಿಕ ಜಪ: ಮನಸ್ಸಿನಲ್ಲಿ ಧ್ಯಾನಿಸುವುದು.
ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು. ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ. ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆಂದು ಕರೆಯಲಾಗುತ್ತದೆ.

ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ ಹೀಗಿದೆ "ಗು" ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) "ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.

ಗುರುವು ಉಪದೇಶ ಮಾಡುವ ಮಂತ್ರವು, a) ಏಕಾಕ್ಷರಿ b) ದ್ವೈಕ್ಷರಿ c) ಪಂಚಾಕ್ಷರಿ d) ಅಷ್ಟಾಕ್ಷರಿ e) ದಶಾಕ್ಷರಿ f) ಪಂಚ ದಶಾಕ್ಷರಿ g) ಶೋಡಶಾಕ್ಷರಿ. ಇವುಗಳಲ್ಲಿ ಯಾವುದೇ ಇರ ಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.

ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣ ಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ.

ಜಪಸರದಲ್ಲಿ ೧೦೮ ಮಣಿಗಳಿರ ಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.


                                                      Japa done with Tulasi male


ಜಪದಲ್ಲಿ ವಿಧಗಳಿವೆ ---- Types of Japa


1)
ನಿತ್ಯ ಜಪ
2)
ವೈಯಕ್ತಿಕ ಜಪ
3)
ಪ್ರಾಯಶ್ಚಿತ್ತ ಜಪ
4)
ಅಚಲ ಜಪ
5)
ಜಲ ಜಪ
6)
ಅಖಂಡ ಜಪ
7)
ಪ್ರದಕ್ಷಿಣ ಜಪ
8)
ಲಿಖಿತ ಜಪ
9)
ಕಾಮ್ಯ ಜಪ



ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ ಪಠಿಸಲಾಗುತ್ತದೆ.

ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು
ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರ ಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡ ಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸ ಬೇಕು.

ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (೧೦೮) ಜಪ ಮಾಡ ಬೇಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳ ನಡುವೆ ಜಪ ಮಣಿ // ಜಪಮಾಲೆ ಏನಿಸಬೇಕು.


------------------- Hari Om -------------------




 



Friday, July 10, 2026

ಅಣಿಮಾ -- ಮಹಿಮಾ -- ಗರಿಮಾ -- ಹಿಂದೂ ತತ್ವಶಾಸ್ತ್ರದಲ್ಲಿನ 8 ದೈವಿಕ ಅಥವಾ ಅತಿ ನೈಸರ್ಗಿಕ ಶಕ್ತಿಗಳ ಅಷ್ಟಸಿದ್ದಿಗಳು

 

                                                                  

                                                                                   Pic-1

 

ಅಣಿಮಾ -- ಮಹಿಮಾ -- ಗರಿಮಾ -- ಹಿಂದೂ 

ತತ್ವಶಾಸ್ತ್ರದಲ್ಲಿನ 8 ದೈವಿಕ ಅಥವಾ ಅತಿ ನೈಸರ್ಗಿಕ 

ಶಕ್ತಿಗಳ ಅಷ್ಟಸಿದ್ದಿಗಳು

 

 

Anima -- Mahima – Garima Astasiddis out of 8 ( Eight ) 

Divine or Super Natural Powers in Hindu Philosophy.

 

                                            

                                               Pic-2

 

1) ಅಣಿಮಾ : ಅಣಿಮಾ ಎಂದರೆ ಚಿಕ್ಕ ಕಣಕ್ಕಿಂತ ಚಿಕ್ಕದಾಗುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ಯಾವುದೇ ವಸ್ತು ಅಥವಾ ಜಾಗವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಅದು ಎಷ್ಟೇ ಚಿಕ್ಕದಾಗಿದ್ದರೂ ಸಹ.

2) ಮಹಿಮಾ : ಮಹಿಮಾ ಎಂದರೆ ದೊಡ್ಡ ವಸ್ತುವಿಗಿಂತ ದೊಡ್ಡದಾಗುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ತನ್ನ ಪ್ರಜ್ಞೆಯನ್ನು ವಿಸ್ತರಿಸಲು ಮತ್ತು ಬ್ರಹ್ಮಾಂಡದ ವಿಶಾಲತೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

3) ಗರಿಮಾ : ಗರಿಮಾ ಎಂದರೆ ಯಾವುದೇ ವಸ್ತುವಿಗಿಂತ ಭಾರವಾಗಬಲ್ಲ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ತನ್ನನ್ನು ತಾನೇ ನೆಲಕ್ಕೆ ಮತ್ತು ಭೂಮಿಯೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

4) ಲಘಿಮಾ : ಲಘಿಮಾ ಎಂದರೆ ಯಾವುದೇ ವಸ್ತುವಿಗಿಂತ ಹಗುರವಾಗುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ಭೌತಿಕ ಸಮತಲದ ಮೇಲೆ ಏರಲು ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

5) ಪ್ರಾಪ್ತಿ: ಪ್ರಾಪ್ತಿ ಎಂದರೆ ಬಯಸಿದ ಎಲ್ಲವನ್ನೂ ಸಾಧಿಸುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ತಮ್ಮ ಆಸೆಗಳನ್ನು ವ್ಯಕ್ತಪಡಿಸಲು ಮತ್ತು ಅವರ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.

6) ಪ್ರಾಕಾಮ್ಯ : ಪ್ರಾಕಾಮ್ಯವು ಯಾವುದೇ ಬಯಕೆಯನ್ನು ಪೂರೈಸುವ ಸಾಮರ್ಥ್ಯ, ಅದು ಎಷ್ಟೇ ಅಸಾಧ್ಯವೆಂದು ತೋರುತ್ತದೆ. ಈ ಸಿದ್ಧಿಯು ಸಾಧಕನಿಗೆ ಬ್ರಹ್ಮಾಂಡದ ಅನಿಯಮಿತ ಸಾಮರ್ಥ್ಯವನ್ನು ಸ್ಪರ್ಶಿಸಲು ಅನುವು ಮಾಡಿಕೊಡುತ್ತದೆ.

7) ಈಶಿತ್ವ : ಈಶತ್ವವು ಪ್ರಕೃತಿಯ ಅಂಶಗಳನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಸಾಮರ್ಥ್ಯವಾಗಿದೆ. ಈ ಸಿದ್ಧಿಯು ಸಾಧಕನಿಗೆ ಅಂಶಗಳ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ಅವುಗಳ ಪ್ರಯೋಜನಕ್ಕಾಗಿ ಬಳಸಲು ಅನುಮತಿಸುತ್ತದೆ.

8) ವಶಿತ್ವ : ವಶಿತ್ವ ಎಂದರೆ ಇತರರ ಮನಸ್ಸನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಸಾಮರ್ಥ್ಯ. ಈ ಸಿದ್ಧಿಯು ಸಾಧಕನಿಗೆ ಧನಾತ್ಮಕ ಉದ್ದೇಶಗಳಿಗಾಗಿ ಇತರರ ಆಲೋಚನೆಗಳು ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರಲು ಅನುವು ಮಾಡಿಕೊಡುತ್ತದೆ.

 

                                                                          

                                                                              Pic-3 
 

Anima, Mahima, and Garima are three of the Ashta Siddhis (the Eight Divine or Supernatural Powers) in Hindu mythology and Yogic philosophy. They represent the mastery over physical scale and mass, commonly associated with deities like Lord Hanuman.

These three fundamental yogic powers allow for the complete manipulation of the Body's physical properties:

  • Anima: The ability to reduce the physical body to the size of an atom (or anything incredibly minute). This power was famously used by Lord Hanuman to enter the demon city of Lanka undetected and to approach Sita without frightening her.

    Mahima: The exact opposite of Anima, this is the power to expand the physical self to a gigantic, infinite, or cosmic size. Hanuman used this siddhi to outwit and overpower demons in the Ramayana.

    Garima: The ability to make one's physical body infinitely heavy and completely immovable. Hanuman famously displayed this to subdue Ravana's palace and to humble Bhima's pride by making his tail too heavy to be moved.

The remaining five of the eight Ashta Siddhis include Laghima (weightlessness), Prapti (attaining desired objects or places), Prakamya (the ability to fulfill desires), Ishitva (absolute lordship over nature), and Vasitva (the ability to control all beings).


------------- Hari Om ------------


 


Tuesday, July 7, 2026

ಹುಟ್ಟಿನಿಂದ ಬಂದದ್ದಲ್ಲ ವರ್ಣ— Caste is Not By Birth but by Work—ಕೆಲವು ಋಷಿ ಪರಂಪರೆ

 

ಹುಟ್ಟಿನಿಂದ ಬಂದದ್ದಲ್ಲ ವರ್ಣ— Caste is Not By 

Birth but by Work—ಕೆಲವು ಋಷಿ ಪರಂಪರೆ

 

 

(  ವಜ್ರಸೂಚಿಕೋಪನಿಷತ್ತಿನ ಪ್ರಕಾರ…)

 

                                                                     Rishi Shrunga

1) ಋಷ್ಯಶೃಂಗ -- ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು.

 

                                                                     Kaushika Maharshi

 

2) ಕೌಶಿಕ ಮಹರ್ಷಿ - ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.

 

                                                                  Jambooka Maharshi

 

3) ಜಂಬೂಕ ಮಹರ್ಷಿ -- ನರಿಗಳನ್ನು ಹಿಡಿಯುವ ಜಾತಿಯವರು.

 

                                                            Valmiki Maharshi

 

4) ವಾಲ್ಮೀಕಿ ಮಹರ್ಷಿ - ಕಿರಾತಕರ ಒಂದು ಜಾತಿಗೆ ಸೇರಿದವನು. ಈತ ರಚಿಸಿದ ರಾಮಾಯಣ..... ಹಿಂದುಗಳಿಗೆ ಪರಮ ಪವಿತ್ರವಾದ ಗ್ರಂಥ. ಈತನನ್ನು ಆದಿಕವಿಯೆಂದು ಗೌರವಿಸಲಾಗುತ್ತಿದೆ.


5) ವ್ಯಾಸ. ಮಹರ್ಷಿ -- ಮೀನುಗಳನ್ನು ಹಿಡಿಯುವ ಬೆಸ್ತರ ಜಾತಿಗೆ ಸೇರಿದವನು. ಹಿಂದುಗಳಿಗೆ ಪರಮಪವಿತ್ರವಾದ ವೇದಗಳು.... ಈತನ ಮೂಲಕ ವಿಭಜಿಸಲ್ಪಟ್ಟವು. ಆದ್ದರಿಂದ ಈತನನ್ನು ವೇದವ್ಯಾಸ.... ಎಂದು ಪೂಜಿಸುತ್ತಾರೆ.

 

                                                               Gauthama Maharshi

 

6) ಗೌತಮ ಮಹರ್ಷಿ -- ಮೊಲ ಹಿಡಿಯುವ ಜಾತಿಗೆ ಸೇರಿದವನು.

 

                                                                  Vasista Maharshi


 

7) ವಶಿಷ್ಟ -- ಒಬ್ಬ ವೇಶ್ಯೆಗೆ ಜನಿಸಿದವನು. ಈತನ ಹೆಂಡತಿ ನಿಮ್ನಜಾತಿಗೆ ಸೇರಿದ ಮಹಿಳೆಯಾದ ಆರುಂಧತೀ ದೇವಿ. ಈ ದಿನಗಳಲ್ಲೂ ಸಹ ನವ ದಂಪತಿಗಳು ಆರಂಧತೀ ಮತ್ತು ವಶಿಷ್ಟರಿಗೆ ನಮಸ್ಕರಿಸುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಪ್ರತಿ ಪೂಜೆಯಲ್ಲೂ ಹಿಂದುಗಳಿಂದ ಆರಂಧತೀ ವಶಿಷ್ಠಾಭ್ಯಾಂ ನಮಃ ...ಎಂದು ಪೂಜೆಗಳನ್ನು ಸ್ವೀಕರಿಸುತ್ತಿದ್ದಾರೆ. ಇವರ ಮಗ ಶಕ್ತಿ. ಇವನ ಹೆಂಡತಿ ಸಹ ನಿಮ್ನ ಜಾತಿಗೆ ಸೇರಿದಾಕೆ...ಚಂಡಾಲಾಂಗಿನಿ. ಇವರ ಮಗ ಪರಾಶರ ಮಹರ್ಷಿ. ಈತ ಬೆಸ್ತ ಮಹಿಳೆ ಮತ್ಸ್ಯಗಂಧಿಯನ್ನು ಸೇರಿ ವ್ಯಾಸನ ಜನನಕ್ಕೆ ಕಾರಣರಾದರು.

 

                                                              Agasthya Maharshi

 

8) ಅಗಸ್ತ್ಯ ಮಹರ್ಷಿ - ಮಣ್ಣಿನ ಪಾತ್ರೆಯಲ್ಲಿ ಹುಟ್ಟಿದವರು.

 

                                                                Matanga Maharshi

 

9) ಮತಂಗ ಮಹರ್ಷಿ -- ನಿಮ್ನಕುಲದಲ್ಲಿ ಜನಿಸಿದರೂ...... ಬ್ರಾಹ್ಮಣನಾದ! ಈತನ ಮಗಳೇ.. ಮಾತಂಗಕನ್ಯೆ... ಒಂದು ಶಕ್ತಿ ದೇವತೆ. ಕಾಳಿದಾಸನನ್ನು ಮೊದಲ್ಗೊಂಡು ಎಷ್ಟೋ ಜನ ಮಹನೀಯರು ಈ ಮಾತೆಯ ಉಪಾಸನೆಯನ್ನು ಮಾಡಿದ್ದಾರೆ….. ಮಾಡುತ್ತಿದ್ದಾರೆ. ಆಕೆಯೇ ಶ್ಯಾಮಲಾದೇವಿ.
ಇನ್ನೂ.

 

                                                              Aithreya Maharshi

10) ಐತರೇಯ ಮಹರ್ಷಿ -- ಒಬ್ಬ ದಸ್ಯ ಮತ್ತು ಕಿರಾತಕ ದಂಪತಿಗಳಿಗೆ ಜನಿಸಿದವನು. ಅಂದರೆ ಇಂದಿನ ಲೆಕ್ಕಾಚಾರದಂತೆ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿದವರು. ಜನ್ಮತಃ ಬ್ರಾಹ್ಮಣನಲ್ಲ ಆದರೆ ಆತ ಅತ್ಯುನ್ನತವಾದ ಬ್ರಾಹ್ಮಣನಾದ. ಆತನ ಕೃತಿಗಳೇ ಐತರೇಯ ಬ್ರಾಹ್ಮಣ ಮತ್ತು ಐತರೇಯೋಪನಿಷತ್ತು. ಐತರೇಯ ಬ್ರಾಹ್ಮಣವು ಬಹಳ ಕ್ಲಿಷ್ಟವಾದುದು. ಋಗ್ವೇದವನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯಕ.


11) ಐಲುಷ ಮಹರ್ಷಿ -- ಒಬ್ಬ ದಾಸಿ ಪುತ್ರ. ಆತ ಋಗ್ವೇದದ ಮೇಲೆ ದೀರ್ಘವಾದ ಅಧ್ಯಯನವನ್ನು ಮಾಡಿ ಬಹಳಷ್ಟು ವಿಷಯವನ್ನು ಅರಿತ. ಆತನನ್ನು ಋಷಿಗಳೆಲ್ಲರೂ ಅಹ್ವಾನಿಸಿ ತಮ್ಮ ಆಚಾರ್ಯನನ್ನಾಗಿ ಮಾಡಿಕೊಂಡರು (ಐತರೇಯ ಬ್ರಾ. .೧೯)

 

 

                                                         Jaabala Satyakama Maharshi

 

12) ಸತ್ಯಕಾಮ ಜಾಬಾಲ ಮಹರ್ಷಿ -- ಸಹ ಒಬ್ಬ ವೇಶ್ಯೆಯ ಮಗ. ತಂದೆಯ ಗೋತ್ರವಲ್ಲ..... ಕಡೇ ಪಕ್ಷ ತನ್ನ ತಂದೆ ಹೆಸರೇನು ಎಂದೂ ಸಹ ತಿಳಿಯದವನು. ಆದರೆ ಜ್ಞಾನದಿಂದಾಗಿ ಬ್ರಾಹ್ಮಣನಾದ.
ಉನ್ನತವಾದ ವಂಶಗಳಲ್ಲಿ ಹುಟ್ಟಿಯೂ ಸಹ ವರ್ಣಾಶ್ರಮ ಧರ್ಮಗಳನ್ನು ಅನುಸರಿಸದೇ ಇದ್ದವರು ...... ನಿಸ್ಸಂದೇಹವಾಗಿ ಬಹಿಷ್ಕರಿಸಲ್ಪಟ್ಟರು..... ಅವರಲ್ಲಿ ಕೆಲವರು 

 

                                                                Vishwamitra Maharshi

 

                                                                 Charvaka Maharshi


                                                            

13) ಭೂದೇವಿಯ ಮಗ -- ಕ್ಷತ್ರಿಯನಾದ ನರಕ...... ರಾಕ್ಷಸನಾದ!

14) ಬ್ರಹ್ಮನ ವಂಶಸ್ಥರಾದ ಹಿರಣ್ಯಾಕ್ಷ, ಹಿರಣ್ಯಕಶಪು ಮತ್ತು ರಾವಣರು... ಬ್ರಾಹ್ಮಣಾದರೂ..... ರಾಕ್ಷಸರಾದರು.

15) ರಘುವಂಶದ ಮೂಲಪುರುಷನಾದ ರಘುಮಹಾರಾಜನ ಮಕ್ಕಳಲ್ಲಿ ಒಬ್ಬನಾಗಿದ್ದ ಪ್ರವಿದ್ಧನು.... ರಾಕ್ಷಸನಾದ.

16) ತ್ರಿಶಂಕು ಮಹಾರಾಜ ಕ್ಷತ್ರಿಯ -- ಆದರೆ ಚಂಡಾಲನಾದ!

17) ವಿಶ್ವಾಮಿತ್ರನು ಕ್ಷತ್ರಿಯ -- ಬ್ರಾಹ್ಮಣನಾದ.... ಈತನ ವಂಶಸ್ಥರೇ... ವಿಶ್ವಾಮಿತ್ರ ಗೋತ್ರದ ಬ್ರಾಹ್ಮಣರಾದರು. ವಿಶ್ವಾಮಿತ್ರನ ಮಕ್ಕಳಲ್ಲಿ ಕೆಲವರು ಅನ್ಯರಾದರು.

18) ನವ ಬ್ರಹ್ಮರಲ್ಲಿ ಒಬ್ಬನಾದ ದಕ್ಷ ಪ್ರಜಾಪತಿಯ ಮಗ ಪೃಷಧ -- ಬ್ರಹ್ಮಜ್ಞಾನವಿಲ್ಲದ ಕಾರಣ ಅನ್ಯನಾಗಿ ಬದಲಾದ (ವಿಷ್ಣುಪುರಾಣ ೪..೧೪)

19) ನೇದಿಷ್ಟ ಮಹಾರಾಜನ ಮಗ. --ನಾಭ. -- ಇವನಿಗೆ ಕ್ಷಾತ್ರ ಜ್ಞಾನವಿಲ್ಲದ ಕಾರಣ, ವರ್ತಕ ಜ್ಞಾನವಿದ್ದ ಕಾರಣ ವೈಶ್ಯನಾಗಿ ಮಾರ್ಪಟ್ಟ (ವಿಷ್ಣುಪುರಾಣ ೪..೧೩).


20) ಕ್ಷತ್ರಿಯರಾದ ರಥೋದರ, ಅಗ್ನಿವೇಶ, ಹರಿತ -- ಬ್ರಹ್ಮಜ್ಞಾನದ ಕಾರಣದಿಂದಾಗಿ ಬ್ರಾಹ್ಮಣರಾದರು. ಹರಿತನ ವಂಶಿಕರು ಅವನ ಹೆಸರನ್ನೇ ಹೊಂದಿ ಹರಿತಸ ಗೋತ್ರದ ಬ್ರಾಹ್ಮಣರೆನಿಸಿದ್ದಾರೆ (ವಿಷ್ಣುಪುರಾಣ ೪..)


21) ಶೌನಕ ಮಹರ್ಷಿಯ ಮಕ್ಕಳು -- ನಾಲ್ಕು ವರ್ಣಗಳಿಗೆ ಸೇರಿದವರಾಗಿ ಬದಲಾದರು (ವಿಷ್ಣುಪುರಾಣ ೪..)


22) ಅದೇ ವಿಧವಾಗಿ ಗೃತ್ಸಮದ, ವೀತವ್ಯ, ವೃತ್ಸಮತಿ -- ಇವರ ಮಕ್ಕಳೂ ಸಹ ನಾಲ್ಕು ವರ್ಣಗಳಿಗೆ ಸೇರಿದವರಾದರು.


ಇವರಲ್ಲಿ ಬಹಳಷ್ಟು ಜನ.... ವೇದಮಂತ್ರಗಳನ್ನು ಸಹ ರಚಿಸಿದವರಾಗಿದ್ದಾರೆ!

ಹಿಂದೂ ಧರ್ಮವು ಜ್ಞಾನವನ್ನು ಅವಲಂಬಿಸಿದೆಯೇ ಹೊರತು, ಜನನವನ್ನು ಅವಲಂಬಿಸಿಲ್ಲ.


ಆದ್ದರಿಂದಲೇ..... "ಋಷಿಮೂಲ, ನದೀಮೂಲ, ಸ್ತ್ರೀಮೂಲ ನೋಡಬೇಡಿ" ಅಂದಿದ್ದು.


ಹುಟ್ಟಿನಿಂದ ಬಂದದ್ದಲ್ಲ ಈ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣಗಳು,

ಒಳ್ಳೆಯ ಮನಸ್ಸುಳ್ಳ ಪ್ರತಿ ವ್ಯಕ್ತಿಯೂ ಸಹ ಜ್ಞಾನಕ್ಕೆ ಅರ್ಹನೇ ಆಗುತ್ತಾನೆ.

ಆದ್ದರಿಂದಲೇ.

"ಹೀನಂ ದೂಷಯತಿ ಇತಿ ಹಿಂದೂ" ಎಂದಾಗಿದೆ. ಅದರ ಅರ್ಥ: ಹೀನ(ನೀಚ/ತುಚ್ಛ)ವಾದದ್ದನ್ನು ದೂರವಿರಿಸುವುದು ಎಂಬುದಾಗಿ. ಇದುವೇ "ಹಿಂದೂ" ಪದದ ವ್ಯುತ್ಪತ್ತಿ( ಜನನ).

ನಾವು ಹಂಚಿಕೊಳ್ಳುವ ವಿವಿಧ ಸಂದೇಶಗಳೊಂದಿಗೆ ಈ ಸಂದೇಶವನ್ನೂ ಸಹ ನಮ್ಮ ಬಂಧುಮಿತ್ರರು ಮತ್ತು ಆಪ್ತರೊಂದಿಗೆ ಹಂಚಿಕೊಳ್ಳೋಣ.?

ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯ ಕುರಿತಾಗಿ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡೋಣ.


------------------------- Hari Om -----------------------



 


 

 


                                                                      


 

                                            


 

                                    



 


Sunday, July 5, 2026

ನೋವು ನಿವಾರಕ ಲೇಹ್ಯಾ ---- NOVU NIVARAKA LEYHYA

 

                                                                                Leyhya

 

 

ನೋವು ನಿವಾರಕ ಲೇಹ್ಯಾ ---- NOVU NIVARAKA LEYHYA

ರೆಸಿಪಿ ಹೆಸರು ನೋಡಿ ಆಶ್ಚರ್ಯ ಆಯ್ತಾ ಸದಸ್ಯರೆ?

ನಲವತ್ತು ದಾಟಿದ ಮಹಿಳೆಯರಲ್ಲಿ ಮೊಣ ಕಾಲು ನೋವು ಬಹಳ ಸಾಮಾನ್ಯ! ಋತುಬಂಧ (Menopause) ಆದ ಮೇಲೆ ಮಹಿಳೆಯರ ತೂಕ ಹೆಚ್ಚುತ್ತಾ ಹೋಗುತ್ತದೆ! ಜೊತೆಯಲ್ಲಿ ಮೊಣ ಕಾಲು, ಮುಂಗಾಲು ನೋವು ಸೇರಿ ಕೊಳ್ಳುತ್ತದೆ! ಪ್ರತಿದಿನ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವವರು ಎಷ್ಟೋ ಜನ!

ಈ ರೆಸಿಪಿ ನನಗೆ ನಮ್ಮ ಆಂಟಿ ಕೊಟ್ಟಿದ್ದು. ನಾನು ಕೂಡ ಈ ನೋವು ತುಂಬಾ ಅನುಭವಿಸಿದ್ದೇನೆ! ನನಗೆ ಕೂಡ ಸಂಧಿವಾತ ( Rheumatism) ಕಾಯಿಲೆ ಇದೆ! ಅಂದರೆ Joints pain! ಬೆಳಗ್ಗೆ ಎದ್ದೊಡನೆ ಕೈ ಬೆರಳು, ಮುಂಗಾಲಲ್ಲಿ ( Ankle) ನೋವು ಇರುತ್ತದೆ. ದಿನದ ಕೆಲಸ ಮಾಡಿಕೊಳ್ಳಲು, ತರಕಾರಿ ಹೆಚ್ಚಲು ಸಹ ಕಷ್ಟ ಆಗುತ್ತೆ! ಆದರೆ ನಾನು ಈ ಲೇಹ್ಯಾ ತಿನ್ನಲು ಪ್ರಾರಂಭ ಮಾಡಿದ ಮೇಲೆ ತುಂಬಾ ನೋವು ಕಡಿಮೆ ಆಗಿದೆ!

ಹಾಗಾದರೆ ಮೊದಲು ರೆಸಿಪಿ ನೋಡೋಣ!

ಮಾಡುವ ವಿಧಾನ:-

ಒಳ್ಳೆಯ ಕಂಪೆನಿಯ ಜೇನು ತುಪ್ಪ ( Honey ) - 200 ಗ್ರಾಂ
ಅಗಸೆ ಬೀಜ (Flax Seed) - 8 ಟೇಬಲ್ ಚಮಚ
ಬಿಳಿ ಎಳ್ಳು ( White Sesame ) - 4 ಟೇಬಲ್ ಚಮಚ
ಒಣ ದ್ರಾಕ್ಷಿ - ( Dried Raisins ) 3 ಟೇಬಲ್ ಚಮಚ
ಸಿಹಿ ಕುಂಬಳ ಕಾಯಿ ಬೀಜ - ( Pumpkin Seeds ) 3 ಟೇಬಲ್ ಚಮಚ

 

                                                              Honey


 

                                                                another Picture

 


                                                    Agase Bija or Flax Seeds

 


                                                       another Picture

 


                                                           White Til

 

                                                          another Picture

 


                                                     Dried Raisins or Dried Grapes

 

                                                         another Picture
 


 

                                                           Pumpkin Seeds

 


                                                      another Picture

 

 

ಮೊದಲು ಜೇನು ತುಪ್ಪ ಬಿಟ್ಟು ಮಿಕ್ಕ ಎಲ್ಲಾ ಸಾಮಗ್ರಿಗಳನ್ನು ಪುಡಿ ಮಾಡಿ (ಹುರಿಯುವ ಅಗತ್ಯವಿಲ್ಲ) ನಂತರ ಜೇನು ತುಪ್ಪ ಹಾಕಿ ಮತ್ತೊಮ್ಮೆ ರುಬ್ಬಿ , ನೀರು ಸೇರಿಸ ಕೂಡದು. ಅಳತೆ ಕೂಡ ಸರಿಯಾಗಿ ಇಷ್ಟೇ ಹಾಕಿ. ರುಬ್ಬಿದ ನಂತರ ಇದು ಅಂಟಾದ ಲೇಹ್ಯಾ ತರಹ ಆಗುತ್ತದೆ. ಇದನ್ನು ಒಂದು ಬಾಟಲ್ ನಲ್ಲಿ ಹಾಕಿ Fridge ನಲ್ಲಿ ಇಡಿ.

ಪ್ರತಿ ದಿನ ಬೆಳಗ್ಗೆ ತಿಂಡಿ ತಿನ್ನುವ ಮುಂಚೆ 1 ಟೀ ಚಮಚ, ಮತ್ತೆ ಮಧ್ಯಾನ್ಹ ಅಥವಾ ರಾತ್ರಿ ಊಟದ ಮುಂಚೆ ಒಂದು ಟೀ ಚಮಚ, ಹೀಗೆ ದಿನಕ್ಕೆ ಎರಡು ಬಾರಿ ತೆಗೆದು ಕೊಂಡರೆ ಮೊಣ ಕಾಲಿನ ನೋವು, ಮುಂಗಾಲಿನ ನೋವು ಕಡಿಮೆ ಆಗುತ್ತಾ ಬರುತ್ತದೆ!

ಇದನ್ನು ಗಂಡಸರು, ಹೆಂಗಸರು ಯಾರೂ ಬೇಕಾದರೂ ತಿನ್ನಬಹುದು. ವಯಸ್ಸಿನ ಅಂತರವಿಲ್ಲ! ತುಂಬಾ ರುಚಿಯಾಗಿರುತ್ತದೆ. ಹಾಗೆಂದು ಹೆಚ್ಚು ತಿನ್ನುವುದೂ ಬೇಡ. ಪ್ರತಿ ದಿನ ತಪ್ಪದೆ ಎರಡು ಬಾರಿ ತಿಂದರೆ ನಿಮಗೆ 1 ವಾರದಲ್ಲಿ ಫಲಿತಾಂಶ ಗೊತ್ತಾಗುತ್ತೆ! ಮೊಣ ಕಾಲಿನ ಮಾಂಸ ಖಂಡಗಳಿಗೆ ಹೊಸ ಶಕ್ತಿ ಬಂದ ಹಾಗೆ ಅನ್ನಿಸುತ್ತೆ.

ನಾನು ಈ ಲೇಹ್ಯಾ ತಿನ್ನಲು ಪ್ರಾರಂಭ ಮಾಡಿದ ಮೇಲೆ Pain killer Tablet ತೆಗೆದು ಕೊಂಡಿಲ್ಲ! ಮೊದಲೆಲ್ಲಾ ವಾರಕ್ಕೆ ಒಮ್ಮೆ, ಮೂರು ದಿನಕ್ಕೆ ಒಮ್ಮೆ ತೆಗೆದು ಕೊಳ್ಳುತ್ತಾ ಇದ್ದೆ. ನನಗಂತೂ ನೋವು ಕಡಿಮೆ ಆಗಿದೆ! ಈಗ No pain killers!

ಆಯುರ್ವೇದದ ಪ್ರಕಾರ ಜೇನು ತುಪ್ಪ ಮಧು ಮೇಹ ಹೆಚ್ಚು ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೂ ನೀವು Diabetes patients ಆಗಿದ್ದಲ್ಲಿ Sugar level ಮೇಲೆ ಕಣ್ಣಿರಲಿ.

ಟೇಬಲ್ ಚಮಚ, ಟೀ ಚಮಚ ಎರಡರ ಫೋಟೋ ಹಾಕಿದೆ.

ಸಿಹಿ ಕುಂಬಳದ ಬೀಜ ಅಂಗಡಿಯಲ್ಲಿ ಸಿಗುತ್ತೆ. ಆದರೆ ತುಂಬಾ ಜನ ಕಲ್ಲಂಗಡಿ ಹಣ್ಣಿನ ಬೀಜ ಕೊಡುತ್ತಾರೆ‌ ಕಲ್ಲಂಗಡಿ ಬೀಜ ಅಡಿಕೆ ಪುಡಿ, ಖಾರಾ ಚೌ ಚೌ ಗಳಲ್ಲಿ ಹಾಕಿರುತ್ತಾರೆ. ಕಲ್ಲಂಗಡಿ ಬೀಜ ಸಿಹಿ ಕುಂಬಳದ ಬೀಜ ಬೇರೆ ಬೇರೆ.

ಈ ಲೇಹ್ಯಾ ತಿನ್ನುವಾಗ Positive ಮನಸ್ಸಿನಿಂದ ತಿನ್ನಿ. ಮನಸ್ಸಿನಲ್ಲಿ ಅಳುಕಿದ್ದರೆ, ಸಂದೇಹವಿದ್ದರೆ ಇದು ಕೆಲಸ ಮಾಡುವುದಿಲ್ಲ! ಮತ್ತು ಇದರಲ್ಲಿರುವುದು ಎಲ್ಲಾ ಆರೋಗ್ಯಕರವಾದ ಅಂಶಗಳೇ! Pain killer tablet ನ ಹಾಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ! ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ ಅಲ್ಲವೇ?

ನೋವು ಬಹಳ ವರ್ಷದಿಂದ ಇದ್ದರೆ ಇದರ ಪರಿಣಾಮ ಸ್ವಲ್ಪ ನಿಧಾನವಾಗಿ ಆಗಬಹುದು, ಹಾಗೆಂದು ಪ್ರಯತ್ನ ಬಿಡಬೇಡಿ!


---------------------- Hari Om --------------------