Thursday, June 4, 2026

ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ -- Hole Anjaneya Swamy Temple in Madduru

 

ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ

Hole Anjaneya Swamy Temple in Madduru
 
Hole Anjaneya Swamy
 
Hole Anjaneya
 

ಮನೋಜವಂ ಮರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಂ ವರಿಷ್ಠಮ್ ।

ವಾತಾತ್ಮಜಂ ವಾನರಯೂತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ॥


ಶ್ರೀಪಾದರಾಜರು ಹಾಗೂ ವ್ಯಾಸರಾಯರು ಇಬ್ಬರು, ಗುರು ಶಿಷ್ಯರು ಸೇರಿ ಈ ದೇವರನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. 732 ಕಡೆ ವ್ಯಾಸರಾಯರು ಆಂಜನೇಯ ವಿಗ್ರಹಗಳನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಅದೇ ರೀತಿ ಮದ್ದೂರಿನ ಹೊಳೆಯ ದಡದ ಮೇಲೆ ಕೂಡ ಆಂಜನೇಯ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಆಂಜನೇಯ ದೇವರು, ಹನುಮ, ಭೀಮ, ಮಧ್ವಾ ಎಂದು ಮೂರು ಅವತಾರದಲ್ಲಿ ಇದ್ದಾರೆ. ಬಲಗೈಯ ಎರಡು ಬೆರಳುಗಳು ಉದ್ದ ಇರುವುದು ಮಧ್ವಾ ಅವತಾರ. ಎಡಗೈಯಲ್ಲಿ ಸೌಗಂಧಿಕ ಪುಷ್ಪ ಇರುವುದು ಭೀಮ ಅವತಾರ. ದೇವರಿಗೆ ಜುಟ್ಟು ಸಹಾ ಇದೆ

 

                                                    Way to the Temple

 

                                                        Shimsa River

 

ಇಲ್ಲಿನ ವಿಶೇಷ ಎಂದರೇ ದೇವಸ್ಥಾನದಲ್ಲಿ ನಾಲ್ಕಾಣೆ ದುಡ್ಡು ಕೊಡುತ್ತಾರೆ. ಅದನ್ನ ನೋಟಿನ ಜೊತೆ ಇಟ್ಟುಕೊಂಡು ತಮಗೆ ಏನು ಆಗಬೇಕು ಎಂದು ಪ್ರಾರ್ಥನೆ ಮಾಡಿ ಅದನ್ನ ದೇವರ ಪಾದದ ಬಳಿ ಹಾಕಿದ್ರೆ ನಾವು ಅಂದುಕೊಂಡ ಕೆಲಸ ಆಗುತ್ತದೆ ಎಂಬ ನಂಬಿಕೆ ಇದೆ.

 

                                                  History of the Temple

 

                                                          Banyan Tree

 

ಕದಂಬ ಖುಷಿಗಳು ಕೂಡ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಾರೆ. ಈ ಹಿಂದೆ ಶಿಂಷಾ ನದಿ ಕದಂಬ ನದಿಯಾಗಿತ್ತು. ಕದಂಬ ಖುಷಿಗಳು ತಪ್ಪಸ್ಸು ಮಾಡಿದ್ದರು ಎಂಬ ನಂಬಿಕೆ.

 

                                                          Name Board

 

                                                     Nagara Kallu

 

Hole Anjaneya Swamy Temple is in Maddur – just 2 kms from Maddur Railway Station and on the way from Bangalore towards Mysuru at Madduru one needs to take a deviation from the Highway to this Temple and Name Boards are there will lead to the Hole Anjaneya Swamy Temple. From Bangalore Maddur is Just 76 Kms.

 

                                                   another Picture

 

                                                 Abhisekha

Temple Timings are :

  • Morning 7:00 AM till 1:00 PM.

    Evening 4:00 PM till 7:00 PM

    On Saturdays & Festival Days temple will be open with Flexible Timings.

    Hole Anjaneya Swamy Temple

    Address: near kolli circle, Vaidhyanathapura Road, Maddur Town, Mandya District, Karnataka – 571422, India

    Contact Number: 099453 89599


 
 

ಅಂಜನಾ ನಂದನಂ ವೀರಂ, ಜಾನಕಿ ಶೋಕ ನಾಶನಂ!


ಕಪೀಶಮಕ್ಷ ಹಂತಾರಂ ವಂದೇ ಲಂಕಾ ಭಯಂಕರಂ !!


ಮಹಾ ವ್ಯಾಕರಣಾಂಭೋಧಿ, ಮಂತ ಮಾನಸಮಂದರಂ


ಕವಯಂತಂ ರಾಮಕೀರ್ತ್ಯಾ ಹನುಮಂತಮುಪಾಸ್ಮಹೇ !!

 

                                                         Pic-1


 

ಓಂ ಹನುಮತೇ ನಮಃ

ಓಂ ಐಂ ಭ್ರೀಂ ಹನುಮತೇ

ಶ್ರೀ ರಾಮ ದೂತಾಯ ನಮಃ

 

                                                                          Pic-2


 

                                                                      Pic-3

 

                                                                           Pic-4
 

 

|| ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।

ತನ್ನೋ ಹನುಮಾನ್ ಪ್ರಚೋದಯಾತ್ ||


Om Anjaneyaya Vidmahe Vayuputraya Dhimahi

Tanno Hanumat Prachodayat



ॐ आञ्जनेयाय विद्महे वायुपुत्राय धीमहि।

तन्नो हनुमत् प्रचोदयात्॥

 

                                                       Pic-5


 

                                                          Pic-6

 

                                                  Pic-7


 

ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ | ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ || 

 ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । ತನ್ನೋ ಹನುಮತ್ ಪ್ರಚೋದಯಾತ್॥

 

                                                          Pic-8

 

                                                         Pic-9

 

ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ

 

                                                                     Pic-10

 

ॐ श्री वज्रदेहाय रामभक्ताय वायुपुत्राय नमोsस्तुते ।”

 

                                                            Pic-11

 

ಪ್ರಥಮೋ ಹನುಮಾನ್ ನಾಮ


ದ್ವಿತೀಯೋ ಭೀಮ ಏವ ಚ 

 
ಪೂರ್ಣಪ್ರಜ್ಞ ತ್ರೀತೀಯಾಸ್ತು 

 
ಭಗವತ್ ಕಾರ್ಯ ಸಾದಕಃ ॥

 

                                                        Pic-12


 

Please Visit this most Powerful Temple and get Blessings from the Lord Anjaneya and 

get Enjoy the Serene Beauty & is Nature & River & its Surroundings near the Temple.

Every Saturdays and Festival days Prasadams are distributed.


----------------- Hari Om ----------------





                                        


 


 

 



 





 
 

 


 

 

 

 


 
 

 

 



Sunday, May 31, 2026

ಶಿವ ಮಂತ್ರ ---- Shiva Mantra

                                                                         Lord Shiva

 

 

ಶಿವ ಮಂತ್ರ ---- Shiva Mantra


ಶಿವ ಪೂಜೆ ಮಾಡಲು ಸಾಧ್ಯವಾಗದಿದ್ದರೆ ಈ ಮಂತ್ರಗಳನ್ನೇ ಪಠಿಸಿ.

ಪ್ರಾಚೀನ ಕಾಲದಿಂದಲೂ, ಸೋಮವಾರವು ಪರಮೇಶ್ವರನ ಸಂಬಂಧವನ್ನು ಹೊಂದಿದೆ. ಭೋಲೆ ಭಂಡಾರಿಯ ಭಕ್ತರು ಈ ದಿನವನ್ನು ವಿಶೇಷವೆಂದು ಪರಿಗಣಿಸಿ ಆತನನ್ನು ಪೂಜಿಸುತ್ತಾರೆ. ನಂಬಿಕೆಯ ಪ್ರಕಾರ, ಸೋಮವಾರದಂದು ಉಪವಾಸ ಮತ್ತು ಪೂಜಿಸುವ ಮೂಲಕ, ಶಿವನು ತನ್ನ ಭಕ್ತರೊಂದಿಗೆ ತುಂಬಾ ಸಂತೋಷಪಡುತ್ತಾನೆ. ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ.

ಶಿವನ ಹೆಸರಿನಲ್ಲಿ ಉಪವಾಸ ಮತ್ತು ಪೂಜೆ ಮಾಡುವವರ ಜೀವನದಿಂದ ದುಃಖಗಳು, ರೋಗಗಳು, ಕ್ಲೇಶಗಳು ಮತ್ತು ಆರ್ಥಿಕ ತೊಂದರೆಗಳು ದೂರವಾಗುತ್ತವೆ. ಈ ದಿನ ಉಪವಾಸ ಮಾಡಿ ಶಿವನನ್ನು ಪೂಜಿಸುವುದರಿಂದ ಅವಿವಾಹಿತ ಹೆಣ್ಣುಮಕ್ಕಳು ಸದ್ಗುಣಶೀಲ ವರನನ್ನು ಪಡೆಯುತ್ತಾರೆ.

ಹಿಂದೂ ಧರ್ಮದಲ್ಲಿ, ಮಂತ್ರಗಳನ್ನು ಪಠಿಸದೆ ಯಾವುದೇ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಪೂಜೆಯಲ್ಲಿ ಮಂತ್ರಗಳ ಪಠಣವನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಶಿವಾರಾಧನೆಯ ವಿಷಯವಾದರೆ ಈಶ್ವರನನ್ನು ಪೂಜಿಸಲು ಸಾಧ್ಯವಾಗದಿದ್ದರೂ ಶಿವ ಮಂತ್ರಗಳನ್ನು ಪಠಿಸಿದರೆ ಮಾತ್ರ ಅದರ ಸಂಪೂರ್ಣ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೆ, ಸೋಮವಾರದಂದು ಉಪವಾಸ ಮಾಡಿದರೆ, ನಂತರ ಮಂತ್ರಗಳಿಂದ ಪೂಜಿಸುವುದರಿಂದ ವ್ಯಕ್ತಿಯು ಶಿವನ ಅನುಗ್ರಹಕ್ಕೆ ಅರ್ಹನಾಗುತ್ತಾನೆ.

ಭಗವಾನ್ ಶಿವನ ಮೂಲ ಮಂತ್ರ: ''ಓಂ ನಮಃ ಶಿವಾಯ''

 

ಶಿವ ನಾಮಾವಳಿ ಮಂತ್ರ:


ಶ್ರೀ ಶಿವಾಯ ನಮಃ

ಶ್ರೀ ಶಂಕರಾಯ ನಮಃ

ಶ್ರೀ ಮಹೇಶ್ವರಾಯ ನಮಃ

ಶ್ರೀ ಸಾಂಬಸದಾಶಿವಾಯ ನಮಃ

ಶ್ರೀ ರುದ್ರಾಯ ನಮಃ

ಓಂ ಪಾರ್ವತೀಪತಯೇ ನಮಃ

ಓಂ ನಮೋ ನೀಲಕಂಠಾಯ

 


ಶಿವನ ಇತರ ಶಕ್ತಿಯುತ ಮಂತ್ರಗಳು:


ಓಂ ಸಧ್ಯೋಜಾತಾಯ ನಮಃ

ಓಂ ವಾಮ ದೇವಾಯ ನಮಃ

ಓಂ ಅಘೋರಾಯ ನಮಃ

ಓಂ ತತ್ಪುರುಷಾಯ ನಮಃ

ಓಂ ಈಶಾನಾಯ ನಮಃ

ಓಂ ಹ್ರೀಂ ಹ್ರೌಂ ನಮಃ ಶಿವಾಯ


ನಂಬಿಕೆಯ ಪ್ರಕಾರ, ಸೋಮವಾರದಂದು ಈಶ್ವರನ ಈ ಮಂತ್ರಗಳನ್ನು ಪಠಿಸುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.



                                                                      another Picture

 

ಶಿವನನ್ನು ಮೆಚ್ಚಿಸಲು ಸೋಮವಾರದ ಪೂಜೆ:


1) ಸೋಮವಾರ ಬೆಳಿಗ್ಗೆ, ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ, ನಿಯಮ ಮತ್ತು ನಿಬಂಧನೆಗಳ ಪ್ರಕಾರ ದೇವಾಲಯಕ್ಕೆ ಹೋಗಿ ಅಥವಾ ಮನೆಯಲ್ಲಿ ಶಿವನನ್ನು ಪೂಜಿಸಿ.


2) ಮೊದಲು ಆದಿಪೂಜಿತ ಗಣಪತಿ, ತಾಯಿ ಪಾರ್ವತಿ ಮತ್ತು ನಂದಿಯನ್ನು ಶಿವನೊಂದಿಗೆ ಗಂಗಾಜಲ ಮತ್ತು ಹಾಲಿನಿಂದ ಅಭಿಷೇಕ ಮಾಡಿ.


3) ಇದಾದ ನಂತರ ಅವರ ಮೇಲೆ ಶ್ರೀಗಂಧ, ಅಕ್ಕಿ, ವೀಳ್ಯದೆಲೆ, ಬಿಲ್ವಪತ್ರೆ ಮತ್ತು ದಾತುರವನ್ನು ಅರ್ಪಿಸಿ.


4) ಭೋಗವನ್ನು ಅರ್ಪಿಸಿದ ನಂತರ, ಕೊನೆಯದಾಗಿ ಶಿವನ ಆರತಿಯನ್ನು ಮಾಡಿ.


5) ದೇವಸ್ಥಾನಕ್ಕೆ ಹೋಗಿ ಶಿವನಿಗೆ ಹಾಲು ಮತ್ತು ಸಕ್ಕರೆ ಮಿಠಾಯಿ ಅರ್ಪಿಸಿ. ನಿಮಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಮನೆಯಲ್ಲೇ ಶಿವನಿಗೆ ಈ ವಸ್ತುಗಳನ್ನು ಅರ್ಪಿಸಿ.

6) ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾದುದು. ಆದ್ದರಿಂದ, ನಿಮ್ಮ ಇಷ್ಟಾರ್ಥಗಳನ್ನು ಪೂರೈಸಲು, ಸೋಮವಾರ ಶಿವಶಂಕರನಿಗೆ 11 ಬಿಲ್ವಪತ್ರೆಯನ್ನು ಅರ್ಪಿಸಿ.


7) ಇದಲ್ಲದೇ ಪ್ರತಿ ಸೋಮವಾರ ಗಂಗಾಜಲದಿಂದ ಅಭಿಷೇಕ ಮಾಡಿ. ಇದರಿಂದ ಭಗವಾನ್ ಶಂಕರನು ಬೇಗನೆ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ.


8) 'ಓಂ ನಮಃ ಶಿವಾಯ' ಎಂಬ ಮಂತ್ರದೊಂದಿಗೆ ಆಯಾ ಋತುವಿಗೆ ಸಿಗುವ ಸಿಹಿ ಹಣ್ಣುಗಳನ್ನು ಅವರಿಗೆ ನೀಡಿ.


9) ನಂಬಿಕೆಯ ಪ್ರಕಾರ, ಇಮರ್ತಿಯನ್ನು ಅಥವಾ ಜಹಂಗೀರ್‌ನ್ನು ಅರ್ಪಿಸುವ ಮೂಲಕ ಭಗವಂತ ಶಿವನನ್ನು ಸಹ ಸಂತೋಷಪಡಿಸಬಹುದು.

ಸೋಮವಾರದಂದು ಶಿವನನ್ನು ಈ ಮೇಲಿನಂತೆ ಭಕ್ತಿ - ಭಾವದಿಂದ ಪೂಜಿಸುವುದರಿಂದ ಶಿವನ ಅನುಗ್ರಹ ಪಡೆದುಕೊಳ್ಳಬಹುದು. ಸೋಮವಾರ ಶಿವನನ್ನು ಪೂಜಿಸುವಾಗ ಈ ಮಂತ್ರಗಳನ್ನು ಪಠಿಸಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.



-------------------- Hari Om -------------------

 

 

Saturday, May 30, 2026

ಅತಿಥಿ ದೇವೋಭವ-ಮಹಾಭಾರತದಲ್ಲಿ ನಡೆದ ಘಟನೆ

 

ಅತಿಥಿ ದೇವೋಭವ-ಮಹಾಭಾರತದಲ್ಲಿ ನಡೆದ ಘಟನೆ
 
Lord Krishna
 

ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣ ಮತ್ತು ಅರ್ಜುನ ದ್ವಾರಕಾ ನಗರಿಗೆ ಹೋದರು. ಈ ಬಾರಿ ಅರ್ಜುನನೇ ರಥವನ್ನು ನಡೆಸಿದನು. ದ್ವಾರಕೆ ತಲುಪಿದಾಗ ಅರ್ಜುನನು ತುಂಬಾ ಬಳಲಿದ್ದನು. ಆದುದರಿಂದ ವಿಶ್ರಾಂತಿ ಪಡೆಯಲು ಅತಿಥಿ ಭವನಕ್ಕೆ ತೆರಳಿದನು.

ಸಂಜೆಯ ವೇಳೆ ರುಕ್ಮಿಣಿಯು ಶ್ರೀಕೃಷ್ಣನಿಗೆ ಊಟವನ್ನು ಬಡಿಸಿದಳು. ಆಗ ಶ್ರೀಕೃಷ್ಣನು, "ಮನೆಗೆ ಅತಿಥಿ ಬಂದಿದ್ದಾರೆ, ಅವರನ್ನು ಬಿಟ್ಟು ಹೇಗೆ ಊಟ ಮಾಡಲಿ?".

ರುಕ್ಮಿಣೀ,"ಭಗವನ್ ನೀವು ಊಟವನ್ನು ಆರಂಭಿಸಿರಿ, ನಾನು ಹೋಗಿ ಅರ್ಜುನನ್ನು ಕರೆತರುತ್ತೇನೆ" ಎಂದು ಹೇಳಿ, ಅತಿಥಿ ಭವನಕ್ಕೆ ಹೋದಾಗ ಅರ್ಜುನನು ನಿದ್ರಿಸುತ್ತಿದ್ದನು ಹಾಗೂ ಅವನ ರೋಮ-ರೋಮದಲ್ಲಿ ಕೃಷ್ಣನಾಮದ ಕೀರ್ತನೆ ಹೊರಹೊಮ್ಮುತ್ತಿತ್ತು. ಹೀಗಾಗಿ ರುಕ್ಮೀಣಿಯು ಕೃಷ್ಣನನ್ನು ಮರೆತು, ಮೆಲ್ಲನೆ ಚಪ್ಪಾಳೆ ತಟ್ಟುತ್ತಾ ಕೃಷ್ಣನಾಮದಲ್ಲಿ ತಲ್ಲೀನನಾದಳು.

ಇತ್ತ ನಾರದರು ಶ್ರೀಕೃಷ್ಣನ ಬಳಿ ಬಂದು, "ಭಗವಾನ್ ಭೋಜನ ತಣ್ಣಗಾಗುತ್ತಿದೆ" ಎಂದಾಗ, ಕೃಷ್ಣನು,"ಅತಿಥಿ ಬರದೇ ಭೋಜನ ಮಾಡಲಾರೆ" ಎಂದನು.

ನಾರದರು, "ನಾನು ಹೋಗಿ ಅರ್ಜುನನ್ನು ಕರೆತರುತ್ತೇನೆ" ಎಂದು ಹೇಳಿ ಅತ್ತ ಹೋದಾಗ ಅಲ್ಲಿನ ದೃಶ್ಯ ನೋಡಿ, ಅರ್ಜುನನ್ನು ಎಬ್ಬಿಸುವ ಬದಲು ತಮ್ಮ ವೀಣೆಯನ್ನು ನುಡಿಸಲು ಪ್ರಾರಂಭಿಸಿದರು.

ಸತ್ಯಭಾಮೆಯು ಕೃಷ್ಣನಿಗೆ, 'ಭಗವನ್, ಭೋಜನ ತಣ್ಣಗಾಗುತ್ತಿದೆ, ನೀವು ಆರಂಭವಾದರೂ ಮಾಡಿ. ಕೃಷ್ಣನು, "ಅತಿಥಿ ಬರದೇ ಭೋಜನ ಮಾಡಲಾರೆ"

ಸತ್ಯಭಾಮೆಯು, "ನಾನು ಹೋಗಿ ಕರೆತರುತ್ತೇನೆ" ಎಂದು ಹೇಳಿ ಅರ್ಜುನನಿರುವ ಕಡೆಗೆ ಹೋದಾಗ, ನಿದ್ರಿಸುತ್ತಲೇ ಇದ್ದ ಅರ್ಜುನನ ರೋಮ-ರೋಮದಿಂದ ಹೊರಹೊಮ್ಮುತ್ತಿದ್ದ 'ಕೃಷ್ಣನಾಮ ಕೀರ್ತನೆಯಿಂದಾಗಿ' ರುಕ್ಮಿಣಿಯು ಚಪ್ಪಾಳೆ ತಟ್ಟುತ್ತಿದ್ದಳು, ನಾರದರು ವೀಣೆಯನ್ನು ನುಡಿಸುತ್ತಿದ್ದರು. ಸತ್ಯಭಾಮೆಯೂ ನರ್ತಿಸಲು ಪ್ರಾರಂಭಿಸಿದಳು.

ಇಲ್ಲಿ ಕೃಷ್ಣ, "ಎಲ್ಲರೂ ನನ್ನ ಭೋಜನ ತಣ್ಣಗಾಗುತ್ತಿದೆಯೆಂದೂ, ಅರ್ಜುನನ್ನು ಕರೆತರುವುದಾಗಿ ಹೇಳಿ ಹೊರಟವರು ಎಲ್ಲಿ? ನನ್ನ ಚಿಂತೆ ಯಾರಿಗೂ ಇಲ್ಲ. ನಾನೇ ಹೋಗಿ ಅಲ್ಲೇನಾಗುತ್ತಿದೆ ಎಂದು ನೋಡುವೆ" ಎಂದು ಅರ್ಜುನ ನಿದ್ರಿಸುತ್ತಿದ್ದ ಅತಿಥಿ ಭವನಕ್ಕೆ ಹೋಗಿ ನೋಡಿದಾಗ, ಅಲ್ಲಿ ಸ್ವರ ಲಹರಿ ನಡೆಯುತ್ತಿತ್ತು.

ಅರ್ಜುನ ಮಲಗಿಕೊಂಡೇ ಕೀರ್ತನೆ ಮಾಡುತ್ತಿದ್ದಾನೆ.
ರುಕ್ಮೀಣಿಯು ಚಪ್ಪಾಳೆ ತಟ್ತುತ್ತಿದ್ದಾಳೆ.
ನಾರದರು ವೀಣೆಯನ್ನು ನುಡಿಸುತ್ತಿದ್ದಾರೆ.
ಮತ್ತು ಸತ್ಯಭಾಮೆಯು ನೃತ್ಯ ಮಾಡುತ್ತಿದ್ದಾಳೆ.

ಈ ದೃಶ್ಯವನ್ನು ನೋಡಿ ಕೃಷ್ಣನ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯತೊಡಗಿತು ಹಾಗೂ ಸ್ವಯಂ ಅರ್ಜುನನ ಕಾಲುಗಳನ್ನು ಒತ್ತತೊಡಗಿದನು

 

                                                                     Arjuna

 

ಕೃಷ್ಣನ ಕಣ್ಣೀರು ಅರ್ಜುನನ ಕಾಲುಗಳ ಮೇಲೆ ಬಿದ್ದಾಗ ಎಚ್ಚರಗೊಂಡು ಗಲಿಬಿಲಿಯಾದ ಅರ್ಜುನನು, "ಪ್ರಭು ಇದೇನಾಗುತ್ತಿದೆ...? ಎಂದಾಗ,

ಕೃಷ್ಣನೆಂದನು, "ಅರ್ಜುನಾ, ನಿನ್ನ ರೋಮ-ರೋಮದಲ್ಲಿ ನನ್ನನ್ನು ಆವರಿಸಿಕೊಂಡಿದ್ದೀಯಾ. ಆದುದರಿಂದ ನೀನು ನನಗೆ ತುಂಬಾ ಪ್ರಿಯನಾಗಿದ್ದೀಯಾ ಎಂದು ಹೇಳಿ ಅರ್ಜುನನ್ನು ಪ್ರೇಮದಿಂದ ಆಲಂಗಿಸಿಕೊಂಡನು.

ಲೀಲಾಧಾರಿಯಾದ ಕೃಷ್ಣನೇ,

ಭಕ್ತನೂ ನೀನೇ..
ದೇವನೂ ನೀನೇ...
ಮಾಡುವವನೂ ನೀನೇ....
ಮಾಡಿಸುವವನೂ ನೀನೇ.....

ಭಕ್ತ ಮತ್ತು ದೇವರಿಗೆ ಜಯವಾಗಲಿ......

ಯಾರ ಆಚರಣೆಗಳು ಪೂಜಿಸಲು ಯೋಗ್ಯವಾಗಿದೆಯೋ ಅಂತಹವರ ಚರಣಗಳನ್ನೇ ಪೂಜಿಸಲಾಗುತ್ತದೆ.

-ಜೈ ಶ್ರೀ ಕೃಷ್ಣ-


------------------- Hari Om --------------------

 
 


 

Thursday, May 28, 2026

ಶ್ರೀ ಕಾಲಭೈರವಾಷ್ಟಕಂ -- Shri Kalabhairavashtakam

 

ಶ್ರೀ ಕಾಲಭೈರವಾಷ್ಟಕಂ -- Shri Kalabhairavashtakam

 


                                     Sri Kala Byrava

 

ಓಂ ಶ್ರೀ ಗುರುಭ್ಯೋ ನಮಃ ‌

ಕಾಲಭೈರವ ಅವತಾರವು ಶಿವನ ಭಯಭೀತಗೊಳಿಸುವ ಅವತಾರವೆಂದೇ ಪರಿಗಣಿಸಲಾಗಿದೆ. ಈ ರೂಪದಲ್ಲಿ ಶಿವನು ಕ್ರೋಧದಿಂದ ಕೂಡಿರುತ್ತಾರೆ ಮತ್ತು ಎದುರಿಗೆ ಬಂದವರನ್ನು ದಹಿಸಿಬಿಡುತ್ತಾರೇನೋ ಎಂಬಂತಹ ರೀತಿಯಲ್ಲಿ ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಕಾಲಭೈರವ ಎಂಬ ಹೆಸರಿನಲ್ಲಿ ಎರಡು ಅರ್ಥಗಳು ಅಡಗಿದ್ದು ಒಂದು ಭಯ ಭೀತಗೊಳಿಸುವ ದೇವರು ಭೈರವನ ಅರ್ಥವನ್ನು ಕಂಡುಕೊಂಡರೆ ಇನ್ನೊಂದೆಡೆ ಕಾಲ ಅಂದರೆ ಕಪ್ಪಿನ ಬಣ್ಣದ ದೇವರ ಅವತಾರವೆಂಬುದಾಗಿ ನಾವು ಗ್ರಹಿಸಿಕೊಳ್ಳಬಹುದಾಗಿದೆ. ಅಂತೆಯೇ ಸಮಯ ಮತ್ತು ಅದರ ಕಳೆದುಹೋಗುವಿಕೆಯನ್ನು ಕೂಡ ಕಾಲ ನಮಗೆ ತಿಳಿಸುತ್ತದೆ.

ಭೈರವನಿಗೆ ಅಷ್ಟಮಿಯನ್ನು ಅರ್ಪಿಸಲಾಗಿದೆ. ಪಕ್ಷದ ಅಷ್ಟಮಿಯಂದು ಕಾಲಾಷ್ಟಮಿ ಎಂದು ಆಚರಿಸಲಾಗುತ್ತದೆ. ಶಿವನು ಕಾಲಭೈರವನ ಅವತಾರವನ್ನು ಎತ್ತಿರುವುದು ಈ ಸಮಯಲ್ಲಿ ಎಂಬುದಾಗಿ ನಂಬಲಾಗಿದೆ. ಇದಕ್ಕನುಗುಣವಾಗಿ ಕಾಲಭೈರವನ ಭಕ್ತರು ವ್ರತವನ್ನು ಆಚರಿಸುತ್ತಾರೆ ಅಂತೆಯೇ ಭೈರವನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನಕ್ಕೆ ಹೋಗಿ ಈ ಮಂತ್ರವನ್ನು ಪಠಿಸಿದರೆ ಉತ್ತಮ ಫಲ ದೊರೆಯುತ್ತದೆ.

‌ ‌ನಾಳೆ ಶಿವನಿಗೆ ಅರ್ಪಿತವಾದ ಸೋಮವಾರ ಹಾಗೂ ಭೈರವನಿಗೆ ಅರ್ಪಿತವಾದ ಅಷ್ಟಮಿ. ಕಾಲಭೈರವನ ಈ ಎಂಟು ಪದ್ಯಗಳನ್ನು ಅಭ್ಯಸಿಸುವವರಿಗೆ ಜ್ಞಾನ ಮತ್ತು ವಿಮೋಚನೆಯ ಹಾದಿ ದೊರೆಯುತ್ತದೆ. ದುಃಖ, ಖಿನ್ನತೆ, ದುರಾಸೆ, ಕೋಪವನ್ನು ಇದು ದೂರಮಾಡುತ್ತದೆ. ಕಾಲಭೈರವನ ಚರಣಗಳಿಗೆ ಬಿದ್ದು ಎಲ್ಲಾ ದುಃಖಗಳನ್ನು ನೀಗಿಸಿಕೊಳ್ಳೋಣ. ‌ ‌ ‌ ‌ 

 

                                                                 another Picture

  

ಶ್ರೀ ಕಾಲಭೈರವಾಷ್ಟಕಂ

 

ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ
ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಮ್ |
ನಾರದಾದಿಯೋಗಿಬೃಂದವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ||

ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ
ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ |
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ||

ಶೂಲಟಂಕಪಾಶದಂಡಪಾಣಿಮಾದಿಕಾರಣಂ
ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ |
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ||

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂ ಸ್ಥಿರಂ ಸಮಸ್ತಲೋಕವಿಗ್ರಹಮ್ |
ನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ||

ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ
ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್ |
ಸ್ವರ್ಣವರ್ಣಕೇಶಪಾಶಶೋಭಿತಾಂಗನಿರ್ಮಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ||

ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಮ್ |
ಮೃತ್ಯುದರ್ಪನಾಶನಂ ಕರಾಲದಂಷ್ಟ್ರಭೂಷಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ||

ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ
ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಮ್ |
ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ||

ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ
ಕಾಶಿವಾಸಿಲೋಕಪುಣ್ಯಪಾಪಶೋಧಕಂ ವಿಭುಮ್ |
ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || ||

ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ
ಜ್ಞಾನಮುಕ್ತಿಸಾಧಕಂ ವಿಚಿತ್ರಪುಣ್ಯವರ್ಧನಮ್ |
ಶೋಕಮೋಹದೈನ್ಯಲೋಭಕೋಪತಾಪನಾಶನಂ
ತೇ ಪ್ರಯಾಂತಿ ಕಾಲಭೈರವಾಂಘ್ರಿಸನ್ನಿಧಿಂ ಧ್ರುವಮ್ || ||


ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತಂ ಕಾಲಭೈರವಾಷ್ಟಕಂ ಸಂಪೂರ್ಣಮ್ |


------------------------- Hari Om ----------------------