Tuesday, June 9, 2026

‌ಶನೈಶ್ಚರ ---- Shaneswara

 

                                                                          Lord Shani

 

ಶನೈಶ್ಚರ ---- Shaneswara


‌ ‌ ‌ ‌ ‌ ‌

ಶನೈಶ್ಚರ ಸ್ವಾಮಿಯ ಅನುಗ್ರಹಕ್ಕೆ 10 ಸರಳ ಮಾರ್ಗಗಳು…


10 simple ways to seek the blessings of Lord Shani.


ನವಗ್ರಹಗಳ ಪೈಕಿ ಶನೈಶ್ಚರ ಎಂದರೆ ಜನ ಸಾಮಾನ್ಯರಲ್ಲಿ ಅತಂಕ ಶುರುವಾಗುತ್ತದೆ ಮತ್ತು ಶನಿ ಅಂದರೆ ತೊಂದರೆ ಅಂತಲೂ ಭಾವಿಸುವವರಿದ್ದಾರೆ. ಆದರೆ ಈ ಭಾವನೆ ಪೂರ್ಣ ಸತ್ಯವಲ್ಲ. ಶನಿ ಮಹರ್ದಶೆ ಹಾಗೂ ಗೋಚಾರದಲ್ಲಿ ಉತ್ತಮ ಸ್ಥಿತಿಯಲ್ಲಿರುವಾಗ ಸಕಲ ಸಂಪತ್ತು, ಆಯುಷ್ಯ ಹಾಗೂ ಆರೋಗ್ಯ ದಯಪಾಲಿಸುತ್ತಾನೆ ಶನೈಶ್ಚರ ಸ್ವಾಮಿ.

ಇನ್ನೊಂದು ವಿಚಾರ ನೆನಪಿಟ್ಟುಕೊಳ್ಳಿ, ಧರ್ಮದ ಹಾದಿ ಬಿಟ್ಟು ನಡೆದರೆ ಶನಿಯ ದುಷ್ಪ್ರಭಾವವನ್ನು ಅನುಭವಿಸಬೇಕಾಗುತ್ತದೆ. ಇನ್ನೊಬ್ಬರಿಗೆ ಕೇಡು ಬಗೆಯುವ ಆಲೋಚನೆ ಕೂಡ ಮಾಡಬೇಡಿ. ನಮ್ಮ ರಾಶಿಗೆ ಶನಿಯು ಯಾವ ರೀತಿ ಪ್ರಭಾವ ಬೀರುತ್ತಿದ್ದಾನೆ ಅನ್ನೋದನ್ನು ತಿಳಿದುಕೊಳ್ಳಿ. ಅದು ಹೇಗೆ ಅಂತೀರಾ?


ಇದನ್ನು ಓದಿದರೆ ಶನಿಯು ನಿಮ್ಮ ರಾಶಿಗೆ ಯಾವ ರೀತಿಯ ಫಲ ನೀಡಲಿದ್ದಾನೆ ಎಂದು ತಿಳಿಯುತ್ತದೆ. ಅಗ ಆತನ ಪ್ರಭಾವ ಒಳ್ಳೆ ರೀತಿಯಲ್ಲಿ ಆಗಲು, ತೀಕ್ಷ್ಣತೆ ಕಡಿಮೆ ಆಗುವುದಕ್ಕೆ ಈ ಲೇಖನದಲ್ಲಿ ಅತ್ಯುತ್ತಮ ಸಲಹೆಗಳನ್ನು ಕೊಡಲಾಗಿದೆ.
‌ ‌ ‌ ಸಾಡೇಸಾತ್, ಪಂಚಮ, ಚತುರ್ಥ ಹಾಗೂ ಅಷ್ಟಮ ಸ್ಥಾನಗಳಲ್ಲಿ ಈಗ ಶನಿ ಸಂಚಾರ ಆಗುತ್ತಿರುವ ರಾಶಿಗಳವರು ಮಾಡಿಕೊಳ್ಳಬೇಕಾದ ಶನಿಯ ಶಾಂತಿ ಕ್ರಮಗಳನ್ನು ಅನುಸರಿಸಿ. ನಿಮ್ಮ ಬದುಕು ಬಂಗಾರವಾಗಲಿ..

 

                                                              Vade Male to Lord Anjaneya

 

1) ಆಂಜನೇಯನಿಗೆ ಉದ್ದಿನವಡೆ ಹಾರ


ನಿಮ್ಮ ಮನೆಯ ಬಳಿಯೋ ಅಥವಾ ಮನೆ ದೇವರ ಗುಡಿಯಲ್ಲಿ ಆಂಜನೇಯ ಮೂರ್ತಿಯಿದ್ದರೆ ಶನಿವಾರದಂದು ದೇಗುಲದಲ್ಲಿ ಸ್ವಾಮಿಗೆ ಉದ್ದಿನವಡೆ ಹಾರ ಮಾಡಿಸಿ ಹಾಕಿ ಹಾಗೂ ಎಳ್ಳುಬೆಲ್ಲದ ನೈವೇದ್ಯ ಮಾಡಿಸಿ.

2) ಶನೈಶ್ಚರ ವ್ರತ ಮಾಡಿಸಬಹುದು


ಎಷ್ಟೋ ಜನರಿಗೆ ತಿಳಿದಿಲ್ಲ. ಸತ್ಯನಾರಾಯಣ ಪೂಜೆ ವಿಧಾನದಲ್ಲಿಯೇ ಶನೈಶ್ಚರ ವ್ರತ ಎಂದು ಸಹ ಇದೆ. ಈ ವ್ರತವನ್ನು ಶನಿವಾರದಂದು, ಜನ್ಮ ನಕ್ಷತ್ರ ಬಂದಾಗ ಅಥವಾ ಶನಿವಾರದಂದೇ ಮಾಡಿಸಿದರೆ ಉತ್ತಮ. ಶೀಘ್ರವಾಗಿ ಶನಿ ಕಾಟದಿಂದ ಪರಿಹಾರ ಪಡೆಯ ಬಹುದು.

3) ರುದ್ರ ಹವನ ಮಾಡಿಸಿ


ಪೂರ್ವಾರ್ಜಿತ ಕರ್ಮ ಫಲ ಅಂದರೆ ಹಿಂದಿನ ಜನುಮದ ಪಾಪ ಶೇಷ ಹೆಚ್ಚಿದ್ದರೆ ಈ ಜನುಮದಲ್ಲಿ ಶನಿ ಕಾಟ ಹೆಚ್ಚು ಇರುತ್ತದೆ. ಆದುದರಿಂದ ಹಿಂದಿನ ಜನುಮದ ಪಾಪ ಪರಿಹಾರಕ್ಕಾಗಿ ಕರಿ ಎಳ್ಳು ಹಾಗೂ ಭತ್ತಕ್ಕೆ ಶುದ್ಧ ಹಸುವಿನ ತುಪ್ಪ ಬೆರೆಸಿ, ರುದ್ರ ಹವನ ಮಾಡಿಸಿ

4) ದತ್ತಾತ್ರೇಯ ವಜ್ರಕವಚ ಸ್ತೋತ್ರ ಪಠಣ


ಪ್ರತಿ ದಿನ ತಪ್ಪದೇ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಣ ಮಾಡಿದರೆ ಶನಿ ಕಾಟದಿಂದ ರಕ್ಷಣೆ ದೊರೆಯುತ್ತದೆ.

5) ಕರಿ ಎಳ್ಳು ದಾನ


ಬ್ರಾಹ್ಮಣ ಪುರೋಹಿತ ಅಥವಾ ಅರ್ಚಕರಿಗೆ ಶನಿವಾರದಂದು ಕಬ್ಬಿಣದ ಬಾಂಡಲಿಯಲ್ಲಿ ಪರಿಶುದ್ಧವಾದ ಹಾಗೂ ಅಡುಗೆ ಮಾಡಲು ಉಪಯುಕ್ತವಾದ ಎಳ್ಳಎಣ್ಣೆ ದಕ್ಷಿಣೆ ಸಹಿತ ದಾನ ಮಾಡಿ. ನೀವು ಕೊಡುವ ಈ ದಾನ ತನಗೆ ನಿತ್ಯ ಬಳಸಲು ಬರದ ಕಾರಣ ಒಂದು ಪಕ್ಷ ದಾನ ತೆಗೆದುಕೊಳ್ಳಲು ಅವರು ನಿರಾಕರಿಸಿದರೆ ಹೊಸದಾದ ಸ್ಟೇನ್ ಲೆಸ್ ಸ್ಟೀಲ್ ತಟ್ಟೆಯಲ್ಲಿ ಸ್ವಲ್ಪ ಕರಿ ಎಳ್ಳು ಇಟ್ಟು ದಕ್ಷಿಣೆ ಸಹಿತ ದಾನ ಮಾಡಿ.

6) ಹತ್ತಿಯ ಬತ್ತಿಯಲ್ಲಿ ದೀಪ ಹಚ್ಚಿ


ನಿಮ್ಮ ಮನೆಯ ಹತ್ತಿರದ ನವಗ್ರಹ ದೇಗುಲದಲ್ಲಿ ಅಥವಾ ಅದೇ ದೇಗುಲದ ಆವರಣದ ದೊಡ್ಡ ಮರದ ಬುಡದಲ್ಲಿ ಹೆಚ್ಚು ಗಾಳಿ ಆಡದ ವ್ಯವಸ್ಥೇ ಮಾಡಿ, ಅಲ್ಲಿ ಕಬ್ಬಿಣದ ಬಾಂಡಲಿ ನಲ್ಲಿ ಪರಿಶುದ್ಧ (ಅಡುಗೆಗೆ ಬಳಸುವ ಗುಣಮಟ್ಟದ್ದು) ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿ, ಹತ್ತಿಯ ಬತ್ತಿ ಹಾಕಿ ದೀಪ ಹಚ್ಚಿ.

7) ಶನಿದೇವರಿಗೆ ತೈಲಾಭಿಷೇಕ


ಇನ್ನು ಶನಿವಾರಗಳಂದು ಶನಿ ದೇಗುಲದಲ್ಲಿ ಸ್ವಾಮಿಗೆ ಪರಿಶುದ್ಧ ಎಳ್ಳು ಎಣ್ಣೆಯಲ್ಲಿ ತೈಲಾಭಿಷೇಕ ಮಾಡಿಸಿ. ಆ ಸಮಯದಲ್ಲಿ ನೀವು ಖುದ್ದಾಗಿ ಇದ್ದು, ಕುಟುಂಬ-ಪರಿವಾರದವರ ಸಂಕಲ್ಪ ಮಾಡಿಸಿದರೆ ಒಳ್ಳೆಯದು.

8) ಶನೈಶ್ಚರ ಅಷ್ಟೋತ್ತರ ಪಠಿಸಿ


ಸ್ನಾನ ನಂತರ ಮನೆಯಲ್ಲಿಯೋ ಅಥವಾ ಪ್ರಶಾಂತ ಎನಿಸುವಂಥ ಸ್ಥಳದಲ್ಲಿ ಕೂತು ಪ್ರತಿ ದಿನ ಶನೈಶ್ಚರ ಅಷ್ಟೋತ್ತರ ಪಠಿಸಿ. ನೆನಪಿಡಿ, ಸ್ಥಳದ ಆಯ್ಕೆ ಬಹಳ ಮುಖ್ಯ. ಮನಸ್ಸಿನ ಉದ್ದೇಶ ಕದಡುವಂಥ ಕಡೆ ಬೇಡ.

9) ದಶರಥ ಕೃತ ಶನಿ ಸ್ತೋತ್ರ


ಮತ್ತೊಂದು ಸ್ತೋತ್ರ ಪಠಣ ಇದೆ. ಈ ಸ್ತೋತ್ರ ರಚನೆ ಮಾಡಿರುವುದು ದಶರಥ. ಆ ಕಾರಣದಿಂದ ಅದನ್ನು ದಶರಥ ಕೃತ ಶನಿ ಸ್ತೋತ್ರ ಎಂದು ಕರೆಯುತ್ತಾರೆ. ಅದನ್ನು ಪ್ರತಿದಿನ ಪಠಿಸಿ

10) ಶನೈಶ್ಚರ ಶಾಂತಿ ಹವನ


19000 ಸಂಖ್ಯೆಯಲ್ಲಿ ಶನಿ ಮಂತ್ರದ ಜಪ ಮಾಡಿಸಿ, ಅದರ ದಶಾಂಶ ಅಂದರೆ ಹತ್ತನೇ ಒಂದು ಭಾಗದಷ್ಟು ಸಂಖ್ಯೆಯಲ್ಲಿ ಕೃಸರಾನ್ನ ಹಾಗೂ ಶಮಿ ಸಮಿಧ, ಆಜ್ಯ ಈ ದ್ರವ್ಯಗಳಲ್ಲಿ ಶನಿ ಶಾಂತಿ ಹವನ, ನಂತರ ಅದೇ ದಶಾಂಶ ವಿಧಾನದಲ್ಲಿ ತರ್ಪಣ ಪರೋಕ್ಷಣ ಹಾಗೂ ಪ್ರಾಶನ ಮಾಡಿದರೆ ಅತ್ಯಂತ ಶೀಘ್ರ ಹಾಗೂ ಅತ್ಯತ್ತಮ ನಿರೀಕ್ಷಿತ ಫಲಗಳನ್ನು ಕೊಡುತ್ತವೆ.


ಶ್ರೀಕೃಷ್ಣಾರ್ಪಣಮಸ್ತು


----------------- Hari Om -----------------


 

 

Saturday, June 6, 2026

ಆದಿತ್ಯ ‌ಹೃದಯ ಸ್ತೋತ್ರಮ್ - ‌Aditya Hridaya Stotram

 

                                                                           Lord Surya

 

ಆದಿತ್ಯ ‌ಹೃದಯ ಸ್ತೋತ್ರಮ್ - ‌Aditya Hridaya 

Stotram


 

ಆದಿತ್ಯ ಹೃದಯ ಸ್ತೋತ್ರವನ್ನು ಏಕೆ ಪಠಿಸಬೇಕು..? 

ಇದರ ಪ್ರಯೋಜನವೇನು..?


Why should one recite Aditya Hridaya Stotram
and What are its benefits ?



ಆದಿತ್ಯ ಹೃದಯ ಸ್ತೋತ್ರವನ್ನು ಜಪಿಸುವುದು ಎಷ್ಟು ಪರಿಣಾಮಕಾರಿ..? ಜನರು ದಿನಕ್ಕೆ ಒಮ್ಮೆಯಾದರೂ ಇದನ್ನು ಏಕೆ ಪಠಿಸಬೇಕು..? ಇದಲ್ಲದೆ, ಭಾನುವಾರದಂದು ಇದನ್ನು ಏಕೆ ವಿಶೇಷವಾಗಿ ಜಪಿಸಬೇಕು..?

ಹಿಂದೂ ಸಂಪ್ರದಾಯದ ಪ್ರಕಾರ ಭೂಮಿ, ಬೆಂಕಿ, ಗಾಳಿ ಮತ್ತು ಇತರ ನೈಸರ್ಗಿಕ ಶಕ್ತಿಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಸೂರ್ಯನೂ ಕೂಡ ಒಬ್ಬ. ಸೂರ್ಯನು ಅದಿತಿಯ ಮಗನಾದ ಕಾರಣ ಆತನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಸೂರ್ಯನು ಭೂಮಿಯ ಮೇಲಿನ ಜೀವಗಳ ಆತ್ಮದಂತೆ ಎಂದು ಹೇಳಲಾಗಿದೆ. ಆದಿತ್ಯ ಹೃದಯ ಸ್ತೋತ್ರವು ಸಾರ್ವಕಾಲಿಕ ಅತ್ಯಂತ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಇದು ಸೂರ್ಯ ದೇವನಿಗೆ ಸಮರ್ಪಿತವಾಗಿದೆ ಮತ್ತು ಜ್ಯೋತಿಷ್ಯದ ಪ್ರಕಾರ ಸೂರ್ಯ ಬಲ ಇಲ್ಲದ ರಾಶಿಯವರಿಗೆ ಈ ಸ್ತೋತ್ರ ಹೆಚ್ಚು ಪರಿಣಾಮಕಾರಿ.

ಪುರಾಣದಲ್ಲೂ ಕೂಡ ಆದಿತ್ಯ ಹೃದಯ ಸ್ತೋತ್ರದ ಬಗ್ಗೆ ಉಲ್ಲೇಖಿಸಲಾಗಿದೆ ಎಂದರೆ ನೀವು ಆಶ್ಚರ್ಯಚಕಿತಾರಾಗಬಹುದು..? ಕೆಲವು ಉತ್ತರಗಳನ್ನು ಪುರಾಣಗಳಲ್ಲಿ ಉತ್ತಮವಾಗಿ ಹೇಳಲಾಗಿದೆ. ಇದು ಪೌರಾಣಿಕದ ರಾಮಾಯಣ ಕಾಲದ ಬಗ್ಗೆ, ಹೆಚ್ಚು ನಿರ್ದಿಷ್ಟವಾಗಿ ರಾಮ ಮತ್ತು ರಾವಣನ ನಡುವಿನ ಅಂತಿಮ ಯುದ್ಧದ ಸಮಯದ ಬಗ್ಗೆ ತಿಳಿಸುತ್ತದೆ.



                                                                Surya Bhagavan

  

ರಾಮನಿಂದ ಆದಿತ್ಯ ಹೃದಯ ಪಠಣೆ

ಮೊದಲ ಹಂತದ ಯುದ್ಧದಲ್ಲಿ ರಾವಣನನ್ನು ಸೋಲಿಸುವ ಶ್ರೀ ರಾಮನ ಪ್ರಯತ್ನ ವಿಫಲವಾಗುತ್ತದೆ. ತನ್ನ ಶತ್ರುವಾದ ರಾವಣನನ್ನು ಸೋಲಿಸುವ ಪ್ರಯತ್ನ ವ್ಯರ್ಥವಾಯಿತಲ್ಲ ಎಂಬ ಕೊರಗು ಶ್ರೀ ರಾಮನನ್ನು ಕಾಡುತ್ತದೆ. ಒಂದು ಹಂತದಲ್ಲಿ ಶ್ರೀ ರಾಮನಿಗೆ ಉಳಿದಿದ್ದು ನಿರಾಶೆ ಮತ್ತು ಆಯಾಸ ಮಾತ್ರ. ಈ ಸಮಯದಲ್ಲಿ ನೊಂದ ರಾಮನು ದೀರ್ಘ ತಪ್ಪಸ್ಸು ಮಾಡುತ್ತಾನೆ. ಇದನ್ನು ಕಂಡ ಅಗಸ್ತ್ಯರು, ರಾಮನನ್ನು ಉತೇಜಿಸುತ್ತಾರೆ. ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುತ್ತಾ ಸೂರ್ಯನಿಗೆ ತನ್ನ ಪ್ರಾರ್ಥನೆ ಸಲ್ಲಿಸುವಂತೆ ಅಗಸ್ತ್ಯ ಮಹಾ ಋಷಿಗಳು ಹೇಳಿಕೊಡುತ್ತಾರೆ. ರಾಮನು ಅಗಸ್ತ್ಯ ಮಹಾ ಋಷಿಗಳು ಹೇಳಿದ್ದಂತೆಯೇ ಶ್ರೀ ರಾಮನು ಮಾಡುತ್ತಾನೆ. ಇದನ್ನು ಮಾಡುತ್ತಿದ್ದಂತೆ ರಾಮನು ಅತ್ಯಂತ ಶಕ್ತಿದಾಯದ ಮತ್ತು ನಿರ್ಣಾಯಕ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಆದಿತ್ಯ ಹೃದಯ ಸ್ತೋತ್ರ ಪಠಣದಿಂದ ನೀವು ಅಂದುಕೊಂಡ ಕೆಲಸ ಕಾರ್ಯ ಪೂರ್ಣಗೊಳಿಸಿಕೊಳ್ಳಬಹುದು. ಅದಕ್ಕಾಗಿಯೇ ಶ್ರೀ ರಾಮನೂ ಕೂಡ ಯುದ್ಧಕ್ಕೆ ಮುನ್ನ ಸ್ತೋತ್ರವನ್ನು ಪಠಿಸುತ್ತಾನೆ.

ನಿರ್ದಿಷ್ಟವಾಗಿ ಭಾನುವಾರವೇ ಏಕೆ ಪಠಿಸಬೇಕು.?

ಜ್ಯೋತಿಷ್ಯದ ಪ್ರಕಾರ, ವಾರದ ಪ್ರತಿ ದಿನವೂ ಒಂದು ದೇವರು ಅಥವಾ ಒಂದು ಗ್ರಹಕ್ಕೆ ಅರ್ಪಿತವಾಗಿರುತ್ತದೆ. ಶನಿವಾರದಂದು ಶನಿ ದೇವನಿಗಾಗಿ ಮತ್ತು ಮಂಗಳವಾರ ಹನುಮಂತನಿಗೆ. ಹಾಗೆಯೇ, ಭಾನುವಾರ ಭಗವಾನ್ ಸೂರ್ಯನಿಗೆ ಅರ್ಪಿಸಲಾಗಿದೆ. ಭಾನುವಾರ ಸೂರ್ಯನಿಗೆ ಅರ್ಪಿಸಲಾಗಿರುವುದರಿಂದ ಅವನನ್ನು ಕುರಿತು ಪ್ರಾರ್ಥಿಸಲು ಅದಕ್ಕಿಂತ ಬೇರೆ ಶುಭ ದಿನ ಉಂಟೆ...? ನೀವು ಪ್ರತಿನಿತ್ಯ ನಿಮ್ಮದೇ ಕೆಲಸದಲ್ಲಿ ಮಗ್ನರಾಗಿರುತ್ತೀರಿ. ಬೆಳಗ್ಗೆ ಎದ್ದರೆ ಕಚೇರಿಯ ಒತ್ತಡ ಮೊದಲಾದ ಕಾರ್ಯಗಳ ಬಗ್ಗೆ ನಿಮಗೆ ಗಮನ ಇರುತ್ತದೆ. ಭಾನುವಾರ ನೀವು ಬಿಡುವಾಗಿರುವ ಕಾರಣ ಆ ದಿನ ನೀವು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬಹುದಾಗಿದೆ.



                                                                              Pic-1

 

ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದಾಗುವ 

ಪ್ರಯೋಜನಗಳು

 

ನಮಗೆ ಏನಾದರೂ ಪ್ರಯೋಜನವಾಗುವವರೆಗೆ ನಾವು ಎಂದಿಗೂ ಯಾವುದರ ಬಗ್ಗೆಯೂ ಆಸಕ್ತಿ ವಹಿಸುವುದಿಲ್ಲ. ಆದಿತ್ಯ ಹೃದಯ ಸ್ತೋತ್ರವು ಅಸಂಖ್ಯಾತ ವಿಶ್ವಾಸಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಅಂತಹ ಪ್ರಯೋಜನಗಳು ಇಲ್ಲಿವೆ.

- ಭಗವಾನ್ ಸೂರ್ಯನ ಆಶೀರ್ವಾದದಿಂದ ನಿಮ್ಮ ಕಾರ್ಯಗಳು ಮತ್ತು ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಸ್ತೋತ್ರವು ನಿಮಗೆ ಸಹಾಯ ಮಾಡುತ್ತದೆ.

- ಇದು ನಿಮ್ಮಲ್ಲಿನ ಆತಂಕಗಳನ್ನು ತೆಗೆದುಹಾಕುತ್ತದೆ.

- ಇದು ನಿಮ್ಮ ಜೀವನದ ಹಾದಿಗೆ ಧೈರ್ಯವನ್ನು ತರುತ್ತದೆ.

- ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ಕಷ್ಟದ ದಿನಗಳಲ್ಲಿ ನಿಮ್ಮನ್ನು ಉನ್ನತೀಕರಿಸಲಾಗುತ್ತದೆ ಮತ್ತು ಆಳವಾದ ಅತೃಪ್ತಿಯಿಂದ ನಿಮ್ಮನ್ನು ಉಳಿಸುತ್ತದೆ.

- ನಿಮ್ಮ ಪಾಪಗಳನ್ನು ನಾಶಮಾಡುವುದರ ಜೊತೆಗೆ ಅದು ನಿಮ್ಮನ್ನು ಸ್ವಯಂ ಅನುಮಾನಗಳಿಂದ ದೂರ ಮಾಡುತ್ತದೆ.

- ಆದಿತ್ಯ ಹೃದಯ ಸ್ತೋತ್ರವು ಜೀವನದಲ್ಲಿ ಸಮೃದ್ಧಿ ಮತ್ತು ಸ್ಪಷ್ಟತೆಯನ್ನು ತರುತ್ತದೆ.

- ಸ್ತೋತ್ರವು ನಿಮ್ಮನ್ನು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ.

- ಈ ಸ್ತೋತ್ರವು ನಿಮ್ಮನ್ನು ರೋಗ ಮುಕ್ತವಾಗಿರಿಸುತ್ತದೆ ಮತ್ತು ಅನೇಕ ಗಂಭೀರ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.


ಆದಿತ್ಯ ಹೃದಯ ಸ್ತೋತ್ರ ಪಠಿಸುವ ವಿಧಾನ

 

ಪ್ರಾರಂಭದಲ್ಲಿ ಇದು ಸ್ವಲ್ಪ ಕಷ್ಟ ಆಗಬಹುದು. ಆದರೆ ಒಮ್ಮೆ ನೀವು ನಿರಂತರವಾಗಿ ಅಭ್ಯಾಸ ಮಾಡಿದರೆ ಅದರ ಸೆಳವನ್ನು ಎಂದಾದರೂ ಅನುಭವಿಸಬಹುದು. ಭಗವಾನ್ ಸೂರ್ಯನಿಗೆ ನಿಮ್ಮ ಕೃತಜ್ಞತೆಯನ್ನು ಅರ್ಪಿಸಿ. ಕೇಳುವಾಗ ನಿಮ್ಮ ಸ್ವಾರ್ಥವನ್ನು ಪಕ್ಕಕ್ಕಿಡಿ. ಪ್ರಪಂಚದ ಒಳಿತಿಗಾಗಿ ಸ್ವಲ್ಪ ಪ್ರಾರ್ಥಿಸಿ. ಪ್ರತಿ ದಿನ ನಿಮ್ಮ ದಿನದ ಹತ್ತು ನಿಮಿಷಗಳನ್ನು ಭಗವಾನ್ ಸೂರ್ಯನಿಗೆ ಕೊಡುವುದು ಮತ್ತು ಈ ದೈವಿಕ ಸ್ತೋತ್ರವನ್ನು ಪಠಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ, ಯಾವುದಕ್ಕೂ ಕಾಯಬೇಡಿ. ಭಾನುವಾರವನ್ನು ಸೂರ್ಯನಿಗಾಗಿ ಅರ್ಪಿಸಿ. ನಿಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಿ. ‌ ‌

 


                                                                          Pic-2

 

ಆದಿತ್ಯ ಹೃದಯ ಸ್ತೋತ್ರಮ್ :



ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || 4 ||

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ || 9 ||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ || 10 ||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋsಅಂಶುಮಾನ್ || 11 ||

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋ‌உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 12 ||

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || 13 ||

ಆತಪೀ ಮಂಡಲೀ ಮೃತ್ಯುಃ ಸ್ತೋತ್ರಮ್ವತಾಪನಃ
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || 14 ||

ನಕ್ಷತ್ರ ಗ್ರಹ ತಾರಾಣಾಮ್ ಅಧಿIST ಜನನವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌sಸ್ತು ತೇ || 15 ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 16 ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || 17 ||

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || 18 ||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || 19 ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 20 ||

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌ಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || 21 ||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 22 ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || 23 ||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || 24 ||

 

 

                                                                           Pic-3

 

 

ಫಲಶ್ರುತಿ :

 

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ || 25 ||

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || 26 ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || 27 ||

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌sಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 28 ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || 29 ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌sಭವತ್ || 30 ||

ಅಥರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || 31 || ‌


|| ಇತಿ ಆದಿತ್ಯ ಹೃದಯ ಸ್ತೋತ್ರಮ್ ಸಂಪೂರ್ಣಂ ||


------------------ Hari Om -----------------

‌ ‌‌ ‌

 

 

 

Thursday, June 4, 2026

ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ -- Hole Anjaneya Swamy Temple in Madduru

 

ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ

Hole Anjaneya Swamy Temple in Madduru
 
Hole Anjaneya Swamy
 
Hole Anjaneya
 

ಮನೋಜವಂ ಮರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಂ ವರಿಷ್ಠಮ್ ।

ವಾತಾತ್ಮಜಂ ವಾನರಯೂತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ॥


ಶ್ರೀಪಾದರಾಜರು ಹಾಗೂ ವ್ಯಾಸರಾಯರು ಇಬ್ಬರು, ಗುರು ಶಿಷ್ಯರು ಸೇರಿ ಈ ದೇವರನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. 732 ಕಡೆ ವ್ಯಾಸರಾಯರು ಆಂಜನೇಯ ವಿಗ್ರಹಗಳನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಅದೇ ರೀತಿ ಮದ್ದೂರಿನ ಹೊಳೆಯ ದಡದ ಮೇಲೆ ಕೂಡ ಆಂಜನೇಯ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಆಂಜನೇಯ ದೇವರು, ಹನುಮ, ಭೀಮ, ಮಧ್ವಾ ಎಂದು ಮೂರು ಅವತಾರದಲ್ಲಿ ಇದ್ದಾರೆ. ಬಲಗೈಯ ಎರಡು ಬೆರಳುಗಳು ಉದ್ದ ಇರುವುದು ಮಧ್ವಾ ಅವತಾರ. ಎಡಗೈಯಲ್ಲಿ ಸೌಗಂಧಿಕ ಪುಷ್ಪ ಇರುವುದು ಭೀಮ ಅವತಾರ. ದೇವರಿಗೆ ಜುಟ್ಟು ಸಹಾ ಇದೆ

 

                                                    Way to the Temple

 

                                                        Shimsa River

 

ಇಲ್ಲಿನ ವಿಶೇಷ ಎಂದರೇ ದೇವಸ್ಥಾನದಲ್ಲಿ ನಾಲ್ಕಾಣೆ ದುಡ್ಡು ಕೊಡುತ್ತಾರೆ. ಅದನ್ನ ನೋಟಿನ ಜೊತೆ ಇಟ್ಟುಕೊಂಡು ತಮಗೆ ಏನು ಆಗಬೇಕು ಎಂದು ಪ್ರಾರ್ಥನೆ ಮಾಡಿ ಅದನ್ನ ದೇವರ ಪಾದದ ಬಳಿ ಹಾಕಿದ್ರೆ ನಾವು ಅಂದುಕೊಂಡ ಕೆಲಸ ಆಗುತ್ತದೆ ಎಂಬ ನಂಬಿಕೆ ಇದೆ.

 

                                                  History of the Temple

 

                                                          Banyan Tree

 

ಕದಂಬ ಖುಷಿಗಳು ಕೂಡ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಾರೆ. ಈ ಹಿಂದೆ ಶಿಂಷಾ ನದಿ ಕದಂಬ ನದಿಯಾಗಿತ್ತು. ಕದಂಬ ಖುಷಿಗಳು ತಪ್ಪಸ್ಸು ಮಾಡಿದ್ದರು ಎಂಬ ನಂಬಿಕೆ.

 

                                                          Name Board

 

                                                     Nagara Kallu

 

Hole Anjaneya Swamy Temple is in Maddur – just 2 kms from Maddur Railway Station and on the way from Bangalore towards Mysuru at Madduru one needs to take a deviation from the Highway to this Temple and Name Boards are there will lead to the Hole Anjaneya Swamy Temple. From Bangalore Maddur is Just 76 Kms.

 

                                                   another Picture

 

                                                 Abhisekha

Temple Timings are :

  • Morning 7:00 AM till 1:00 PM.

    Evening 4:00 PM till 7:00 PM

    On Saturdays & Festival Days temple will be open with Flexible Timings.

    Hole Anjaneya Swamy Temple

    Address: near kolli circle, Vaidhyanathapura Road, Maddur Town, Mandya District, Karnataka – 571422, India

    Contact Number: 099453 89599


 
 

ಅಂಜನಾ ನಂದನಂ ವೀರಂ, ಜಾನಕಿ ಶೋಕ ನಾಶನಂ!


ಕಪೀಶಮಕ್ಷ ಹಂತಾರಂ ವಂದೇ ಲಂಕಾ ಭಯಂಕರಂ !!


ಮಹಾ ವ್ಯಾಕರಣಾಂಭೋಧಿ, ಮಂತ ಮಾನಸಮಂದರಂ


ಕವಯಂತಂ ರಾಮಕೀರ್ತ್ಯಾ ಹನುಮಂತಮುಪಾಸ್ಮಹೇ !!

 

                                                         Pic-1


 

ಓಂ ಹನುಮತೇ ನಮಃ

ಓಂ ಐಂ ಭ್ರೀಂ ಹನುಮತೇ

ಶ್ರೀ ರಾಮ ದೂತಾಯ ನಮಃ

 

                                                                          Pic-2


 

                                                                      Pic-3

 

                                                                           Pic-4
 

 

|| ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।

ತನ್ನೋ ಹನುಮಾನ್ ಪ್ರಚೋದಯಾತ್ ||


Om Anjaneyaya Vidmahe Vayuputraya Dhimahi

Tanno Hanumat Prachodayat



ॐ आञ्जनेयाय विद्महे वायुपुत्राय धीमहि।

तन्नो हनुमत् प्रचोदयात्॥

 

                                                       Pic-5


 

                                                          Pic-6

 

                                                  Pic-7


 

ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ | ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ || 

 ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । ತನ್ನೋ ಹನುಮತ್ ಪ್ರಚೋದಯಾತ್॥

 

                                                          Pic-8

 

                                                         Pic-9

 

ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ

 

                                                                     Pic-10

 

ॐ श्री वज्रदेहाय रामभक्ताय वायुपुत्राय नमोsस्तुते ।”

 

                                                            Pic-11

 

ಪ್ರಥಮೋ ಹನುಮಾನ್ ನಾಮ


ದ್ವಿತೀಯೋ ಭೀಮ ಏವ ಚ 

 
ಪೂರ್ಣಪ್ರಜ್ಞ ತ್ರೀತೀಯಾಸ್ತು 

 
ಭಗವತ್ ಕಾರ್ಯ ಸಾದಕಃ ॥

 

                                                        Pic-12


 

Please Visit this most Powerful Temple and get Blessings from the Lord Anjaneya and 

get Enjoy the Serene Beauty & is Nature & River & its Surroundings near the Temple.

Every Saturdays and Festival days Prasadams are distributed.


----------------- Hari Om ----------------