Sunday, August 30, 2026

ಶ್ರೀ ರಾಘವೇಂದ್ರಕವಚಂ -- Sri Raghavendra Kavacham

 

                                                             Sri Raghavendra Kavacham

  

ಶ್ರೀ ರಾಘವೇಂದ್ರಕವಚಂ

Sri Raghavendra Kavacham


ಮಂತ್ರಾಲಯದ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳನ್ನು (ಶ್ರೀ ರಾಯರು) 'ಭವ ರೋಗ
ವೈದ್ಯ' (ಸಂಸಾರದ ಅಥವಾ ಲೌಕಿಕ ಬಾಧೆಗಳ ವೈದ್ಯ) ಎಂದು ಕರೆಯಲಾಗುತ್ತದೆ ಎಂಬ ಸತ್ಯವನ್ನು 
ಯಾರೂ ಅಲ್ಲಗಳೆಯಲಾರರು. ಇದೇ ಕಾರಣಕ್ಕಾಗಿಯೇ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು
 ಕೋರಿ ಅವರ ಪಾದಸನ್ನಿಧಿಗೆ ಧಾವಿಸುತ್ತಾರೆ. ಶ್ರೀ ರಾಯರನ್ನು ಒಲಿಸಿಕೊಳ್ಳುವ ವಿವಿಧ 
ವಿಧಾನಗಳನ್ನು ನೂರಾರು ಭಕ್ತರು ಸ್ವತಃ ಕಂಡುಕೊಂಡಿದ್ದಾರೆ. ಆದಾಗ್ಯೂ, ದೈಹಿಕ ಹಾಗೂ 
ಮಾನಸಿಕ ಅನಾರೋಗ್ಯದಿಂದ ತಮ್ಮನ್ನು ಪಾರುಮಾಡಬಲ್ಲಂತಹ ಶ್ರೀ ರಾಯರ ಕುರಿತಾದ
 ಯಾವುದಾದರೂ ಸ್ತೋತ್ರವಿದೆಯೇ ಎಂದು ಅನೇಕರು ಇಂದಿಗೂ ಕೇಳುತ್ತಲೇ ಇರುತ್ತಾರೆ. 
 

No one can deny the fact that Mantralaya Guru Saarvabhouma Sri Raaghavendra Swamy (Sri Raayaru) is called as Bhavaroga Vaidya, Doctor of worldly sickness. That`s why people keep rushing towards his Feet Seeking Solutions for their Problems. Hundreds of Devotees have realized by themselves various ways of Pleasing Sri Raayaru. Still many people keep asking if there is any Stothra on Sri Raayaru that can bring them out of ill Health both Mental and Physical.

 

                                                                 another Picture

 

ಹೌದು, ಶ್ರೀ ರಾಯರ ಪರಮ ಭಕ್ತರಾದ ಶ್ರೀ ಅಪ್ಪಣಾಚಾರ್ಯರು ಸುಮಾರು 400 ವರ್ಷಗಳ
ಹಿಂದೆಯೇ ಈ ಪ್ರಶ್ನೆಯನ್ನು ಊಹಿಸಿದ್ದರು! ಹಾಗಾಗಿ, ಅವರು ಶ್ರೀ ರಾಯರ ಕುರಿತು ಒಂದು
ಅದ್ಭುತವಾದ ಸ್ತೋತ್ರವನ್ನು ರಚಿಸಿದರು. ಇದರಲ್ಲಿ ಅವರು ಅತ್ಯದ್ಭುತ ಪದಗಳ ಮೂಲಕ
ಶ್ರೀ ರಾಯರನ್ನು ಕೊಂಡಾಡುತ್ತಾರೆ ಮತ್ತು ನಮ್ಮ ದೇಹದ ಪ್ರತಿಯೊಂದು ಭಾಗದ ಮೇಲೂ
ಅವರ ಕರುಣಾಮಯಿ ದೃಷ್ಟಿ ಬೀಳುವಂತೆ ಪ್ರಾರ್ಥಿಸುತ್ತಾರೆ. ಶ್ರೀ ರಾಯರ ಈ ದಿವ್ಯ ದೃಷ್ಟಿಯು
 'ಬುಲೆಟ್-ಪ್ರೂಫ್ ಜಾಕೆಟ್'ನಂತೆ (ರಕ್ಷಾಕವಚದಂತೆ) ಕಾರ್ಯನಿರ್ವಹಿಸುತ್ತದೆ ಮತ್ತು 
ನಮ್ಮನ್ನು ಎಲ್ಲ ರೀತಿಯ ರೋಗಗಳಿಂದ ರಕ್ಷಿಸುತ್ತದೆ. ಆದ್ದರಿಂದಲೇ, ಈ ಸ್ತೋತ್ರವನ್ನು 
ಅತ್ಯಂತ ಅರ್ಥಪೂರ್ಣವಾಗಿ 'ಶ್ರೀ ರಾಘವೇಂದ್ರ ಕವಚ' ಎಂದು ಕರೆಯಲಾಗುತ್ತದೆ. ನಿಮ್ಮ 
ಸುತ್ತಮುತ್ತ ಯಾರಾದರೂ ಯಾವುದೇ ರೋಗದಿಂದ ಬಳಲುತ್ತಿದ್ದರೆ, ಅವರನ್ನು ಭಕ್ತಿಯಿಂದ
 ಈ ಸ್ತೋತ್ರವನ್ನು ಪಠಿಸುವಂತೆ ಹೇಳಿ.


Yes Sri Appanacharya an ardent Devotee of Sri Raayaru, about 400 years ago had anticipated this question! So, He composed a Wonderful Stothra on Sri Raayaru. Here, He admires Sri Raayaru by Wonderful words and requests His compassionate sight on each and every part of the body. This Divine Sight of Sri Rayaru acts like a Bullet-Proof Jacket and Protects us from all sorts of Diseases. Hence this Stothra is Very Meaningfully called Sri Raghavendra Kavacha. If there is any one around you, suffering from any Disease ask them to chant this Stotra Devotedly.

 

                                                            Sri Raghavendra Swamy

 

ಶ್ರೀರಾಘವೇಂದ್ರಕವಚಂ (ಶ್ರೀಅಪ್ಪಣ್ಣಾಚಾರ್ಯ ಕೃತ)



ಕವಚಂ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನಃ |
ವಕ್ಷ್ಯಾಮಿ ಗುರುವರ್ಯಸ್ಯ ವಾಂಛಿತಾರ್ಥಪ್ರದಾಯಕಮ್ || ||

ಋಷಿರಸ್ಯಾಪ್ಪಣಾಚಾರ್ಯಃ ಛಂದೋsನುಷ್ಟುಪ್ ಪ್ರಕೀರ್ತಿತಮ್ |
ದೇವತಾ ಶ್ರೀರಾಘವೇಂದ್ರಗುರುರಿಷ್ಟಾರ್ಥಸಿದ್ಧಯೇ || ||

ಅಷ್ಟೋತ್ತರಶತಂ ಜಪ್ಯಂ ಭಕ್ತಿಯುಕ್ತೇನ ಚೇತಸಾ |
ಉದ್ಯತ್ಪ್ರದ್ಯೋತನದ್ಯೋತಭರ್ಮಕೂರ್ಮಾಸನೇ ಸ್ಥಿತಮ್ || ||

ಏದ್ಯಖದ್ಯೋತನದ್ಯೋತಪ್ರತಾಪಂ ರಾಮಮಾನಸಮ್ |
ಧೃತಕಾಷಾಯವಸನಂ ತುಲಸೀಹಾರವಕ್ಷಸಮ್ || ||

ದೋರ್ದಂಡವಿಲಸದ್ದಂಡಕಮಂಡಲುವಿರಾಜಿತಮ್ |
ಅಭಯeನಮುದ್ರಾಕ್ಷಮಾಲಾಶೀಲಕರಾಂಬುಜಮ್ || ||

ಯೋಗೀಂದ್ರವಂದ್ಯಪಾದಾಬ್ಜಂ ರಾಘವೇಂದ್ರಗುರುಂ ಭಜೇ |
ಶಿರೋ ರಕ್ಷತು ಮೇ ನಿತ್ಯಂ ರಾಘವೇಂದ್ರೋsಖಿಲೇಷ್ಟದಃ || ||

ಪಾಪಾದ್ರಿಪಾಟನೇ ವಜ್ರಃ ಕೇಶಾನ್ ರಕ್ಷತು ಮೇ ಸದಾ |
ಕ್ಷಮಾಸುರಗಣಾಧೀಶೋ ಮುಖಂ ರಕ್ಷತು ಮೇ ಗುರುಃ || ||

ಹರಿಸೇವಾಲಬ್ಧಸರ್ವಸಂಪತ್ಫಾಲಂ ಮಮಾವತು |
ದೇವಸ್ವಭಾವೋsವತು ಮೇ ದೃಶೌ ತತ್ತ ಪ್ರದರ್ಶಕಃ || ||

ಇಷ್ಟಪ್ರದಾನೇ ಕಲ್ಪದ್ರುಃ ಶ್ರೋತ್ರೇ ಶ್ರುತ್ಯರ್ಥಬೋಧಕಃ |
ಭವ್ಯಸ್ವರೂಪೋ ಮೇ ನಾಸಾಂ ಜಿಹ್ವಾಂ ಮೇsವತು ಭವ್ಯಕೃತ್ || ||

ಆಸ್ಯಂ ರಕ್ಷತು ಮೇ ದುಃಖತೂಲಸಂಘಾಗ್ನಿಚರ್ಯಕಃ |
ಸುಖಧೈರ್ಯಾದಿಸುಗುಣೋ ಭ್ರುವೌ ಮಮ ಸದಾsವತು || ೧೦ ||

ಓಷ್ಠೌ ರಕ್ಷತು ಮೇ ಸರ್ವಗ್ರಹನಿಗ್ರಹಶಕ್ತಿಮಾನ್ |
ಉಪಪ್ಲವೋದಧೇಸ್ಸೇತುರ್ದಂತಾನ್ ರಕ್ಷತು ಮೇ ಸದಾ || ೧೧ ||

ನಿರಸ್ತದೋಷೋ ಮೇ ಪಾತು ಕಪೋಲೌ ಸರ್ವಪಾಲಕಃ |
ನಿರವದ್ಯಮಹಾವೇಷಃ ಕಂಠಂ ಮೇsವತು ಸರ್ವದಾ || ೧೨ ||

ಕರ್ಣಮೂಲೇ ತು ಪ್ರತ್ಯರ್ಥಿಮೂಕತ್ವಾಕರವಾಙ ಮಮ |
ಬಹುವಾದಿಜಯೀ ಪಾತು ಹಸ್ತೌ ಸತ್ತತ್ತ್ವವಾದಕೃತ್ || ೧೩ ||

ಕರೌ ರಕ್ಷತು ಮೇ ವಿದ್ವತ್ಪರಿಜ್ಞೇಯವಿಶೇಷವಾನ್ |
ವಾಗ್ವೈಖರೀಭವ್ಯಶೇಷಜಯೀ ವಕ್ಷಸ್ಥಲಂ ಮಮ || ೧೪ ||

ಸತೀಸಂತಾನಸಂಪತ್ತಿಭಕ್ತಿeನಾದಿವೃದ್ಧಿಕೃತ್ |
ಸ್ತನೌ ರಕ್ಷತು ಮೇ ನಿತ್ಯಂ ಶರೀರಾವದ್ಯಹಾನಿಕೃತ್ || ೧೫ ||

ಪುಣ್ಯವರ್ಧನಪಾದಾಬ್ಜಾಭಿಷೇಕಜಲಸಂಚಯಃ |
ನಾಭಿಂ ರಕ್ಷತು ಮೇ ಪಾರ್ಶ್ವೌ ದ್ಯುನದೀತುಲ್ಯಸದ್ಗುಣಃ || ೧೬ ||

ಪೃಷ್ಟಂ ರಕ್ಷತು ಮೇ ನಿತ್ಯಂ ತಾಪತ್ರಯವಿನಾಶಕೃತ್ |
ಕಟಿಂ ಮೇ ರಕ್ಷತು ಸದಾ ವಂಧ್ಯಾಸತ್ಪುತ್ರದಾಯಕಃ || ೧೭ ||

ಜಘನಂ ಮೇsವತು ಸದಾ ವ್ಯಂಗಸ್ವಂಗಸಮೃದ್ಧಿಕೃತ್ |
ಗುಹ್ಯಂ ರಕ್ಷತು ಮೇ ಪಾಪಗ್ರಹಾರಿಷ್ಟವಿನಾಶಕೃತ್ || ೧೮ ||

ಭಕ್ತಾಘವಿಧ್ವಂಸಕರನಿಜಮೂರ್ತಿಪ್ರದರ್ಶಕಃ |
ಮೂರ್ತಿಮಾನ್ಪಾತು ಮೇ ರೋಮಂ ರಾಘವೇಂದ್ರೋ ಜಗದ್ಗುರುಃ || ೧೯ ||

 
ಸರ್ವತಂತ್ರಸ್ವತಂತ್ರೋsಸೌ ಜಾನುನೀ ಮೇ ಸದ್ರಾವತು |
ಜಂಘೇ ರಕ್ಷತು ಮೇ ನಿತ್ಯಂ ಶ್ರೀಮಧ್ವಮತವರ್ಧನಃ || ೨೦ ||

ವಿಜಯೀಂದ್ರಕರಾಬ್ಜೋತ್ಥಸುಧೀಂದ್ರವರಪುತ್ರಕಃ |
ಗುಲ್ಫೌ ಶ್ರೀರಾಘವೇಂದ್ರೋ ಮೇ ಯತಿರಾಟ್ ಸರ್ವದಾsವತು | | ೨೧ ||

ಪಾದೌ ರಕ್ಷತು ಮೇ ಸರ್ವಭಯಹಾರೀ ಕೃಪಾನಿಧಿಃ |
e
ನಭಕ್ತಿಸುಪುತ್ರಾಯುರ್ಯಶಃ ಶ್ರೀಪುಣ್ಯವರ್ಧನಃ || ೨೨ ||

ಕರಪಾದಾಂಗುಲೀಃ ಸರ್ವಾ ಮಮಾವತು ಜಗದ್ಗುರುಃ |
ಪ್ರತಿವಾದಿಜಯಸ್ವಾಂತಭೇದಚಿಹ್ನಾದರೋ ಗುರುಃ || ೨೩ ||

ನಖಾನವತು ಮೇ ಸರ್ವಾನ್ ಸರ್ವಶಾಸ್ತ್ರವಿಶಾರದಃ |
ಅಪರೋಕ್ಷೀಕೃತಶ್ರೀಶಃ ಪ್ರಾಚ್ಯಾಂ ದಿಶಿ ಸದಾsವತು || ೨೪ ||

ಸ ದಕ್ಷಿಣೇ ಚಾವತು ಮಾಂ ಸಮುಪೇಕ್ಷಿತಭಾವಜಃ |
ಅಪೇಕ್ಷಿತಪ್ರದಾತಾ ಚ ಪ್ರತೀಚ್ಯಾಮವತು ಪ್ರಭುಃ || ೨೫ ||

ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ |
ಸದೋದೀಚ್ಯಾಮವತು ಮಾಂ ಶಾಪಾನುಗ್ರಹಶಕ್ತಿಮಾನ್ || ೨೬ ||

ನಿಖಿಲೇಂದ್ರಿಯದೋಷಘ್ನೋ ಮಹಾನುಗ್ರಹಕೃದ್ಗುರುಃ |
ಅಧಶ್ಚೋರ್ಧ್ವಂ ಚಾವತು ಮಾಮಷ್ಟಾಕ್ಷರಮನೂದಿತಮ್ || ೨೭ ||

ಆತ್ಮಾತ್ಮೀಯಾಘರಾಶಿಘ್ನೋ ಮಾಂ ರಕ್ಷತು ವಿದಿಕ್ಷು ಚ |
ಚತುರ್ಣಾಂ ಚ ಪುಮರ್ಥಾನಾಂ ದಾತಾ ಪ್ರಾತಃ ಸದಾsವತು || ೨೮ ||

ಸಂಗಮ್ರೇವತು ಮಾಂ ನಿತ್ಯಂ ತತ್ತ್ವವಿತ್ಸರ್ವಸೌಖ್ಯಕೃತ್ |
ಮಧ್ಯಾಹ್ನೇಽಗಮ್ಯಮಹಿಮಾ ಮಾಂ ರಕ್ಷತು ಮಹಾಯಶಾಃ || ೨೯ ||

ಮೃತಪೋತಪ್ರಾಣದಾತಾ ಸಾಯಾಹ್ನೇ ಮಾಂ ಸದಾsವತು |
ವೇದಿಸ್ಥಪುರುಷೋಜ್ಜೀವೀ ನಿಶೀಥೇ ಪಾತು ಮಾಂ ಗುರುಃ || ೩೦ ||

ವಹ್ನಿಸ್ಥಮಾಲಿಕೋದ್ಧರ್ತಾ ವಹ್ನಿತಾಪಾತ್ಸದಾsವತು |
ಸಮಗ್ರಟೀಕಾವ್ಯಾಖ್ಯಾತಾ ಗುರುರ್ಮೇ ವಿಷಯೇsವತು || ೩೧ ||



ಕಾಂತಾರ್ರೇವತು ಮಾಂ ನಿತ್ಯಂ ಭಾಟ್ಟ (ಭಾಷ್ಯ) ಸಂಗ್ರಹಕೃದ್ಗುರುಃ |
ಸುಧಾಪರಿಮಳೋದ್ಧರ್ತಾ ಸು (ಸ್ವ)ಚ್ಛಂದಸ್ತು ಸದಾsವತು || ೩೨ ||

ರಾಜಚೋರವಿಷವ್ಯಾಧಿಯಾದೋವನ್ಯಮೃಗಾದಿಭಿಃ |
ಅಪಸ್ಮಾರಾಪಹರ್ತಾ ನಃ ಶಾಸ್ತ್ರವಿತ್ಸರ್ವದಾsವತು || ೩೩ ||

ಗತೌ ಸರ್ವತ್ರ ಮಾಂ ಪಾತೂಪನಿಷದರ್ಥಕೃದ್ಗುರುಃ |
ಋಗ್ವ್ಯಾಖ್ಯಾನಕೃದಾಚಾರ್ಯಃ ಸ್ಥಿತೌ ರಕ್ಷತು ಮಾಂ ಸದಾ || ೩೪ ||

ಮಂತ್ರಾಲಯನಿವಾಸೀ ಮಾಂ ಜಾಗ್ರತ್ಕಾಲೇ ಸದಾsವತು |
ನ್ಯಾಯಮುಕ್ತಾವಲೀಕರ್ತಾ ಸ್ವಪ್ನೇ ರಕ್ಷತು ಮಾಂ ಸದಾ || ೩೫ ||

ಮಾಂ ಪಾತು ಚಂದ್ರಿಕಾವ್ಯಾಖ್ಯಾಕರ್ತಾ ಸುಪ್ತೌ ಹಿ ತತ್ತ ಕೃತ್ |
ಸುತಂತ್ರದೀಪಿಕಾಕರ್ತಾ ಮುಕ್ತೌ ರಕ್ಷತು ಮಾಂ ಗುರುಃ || ೩೬ ||

ಗೀತಾರ್ಥಸಂಗ್ರಹಕರಸ್ಸದಾ ರಕ್ಷತು ಮಾಂ ಗುರುಃ |
ಶ್ರೀಮಧ್ವಮತದುಗ್ಧಾಬ್ಧಿಚಂದ್ರೋsವತು ಸದಾsನಘಃ || ೩೭ ||

ಇತಿ ಶ್ರೀರಾಘವೇಂದ್ರಸ್ಯ ಕವಚಂ ಪಾಪನಾಶನಮ್ |
ಸರ್ವವ್ಯಾಧಿಹರಂ ಸದ್ಯಃ ಪಾವನಂ ಪುಣ್ಯವರ್ಧನಮ್ || ೩೮ ||

ಯ ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತಃ |
ಅದೃಷ್ಟಿಃ ಪೂರ್ಣದೃಷ್ಟಿಃ ಸ್ಯಾದೇಡಮೂಕೋsಪಿ ವಾಕ್ಪತಿಃ || ೩೯ ||

ಪೂರ್ಣಾಯುಃ ಪೂರ್ಣಸಂಪತ್ತಿಭಕ್ತಿeನಾಭಿವೃದ್ಧಿಕೃತ್ |
ಪೀತ್ವಾ ವಾರಿ ನರೋ ಯೇನ ಕವಚೇನಾಭಿಮಂತ್ರಿತಮ್ || ೪೦ ||

ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯಪ್ರಸಾದತಃ |
ಪ್ರದಕ್ಷಿಣನಮಸ್ಕಾರಾನ್ ಗುರೋರ್ವೃಂದಾವನಸ್ಯ ಯಃ || ೪೧ ||

ಕರೋತಿ ಪರಯಾ ಭಕ್ತ್ಯಾ ತದೇತತ್ಕವಚಂ ಪಠನ್ |
ಪಂಗುಃ ಕೂಣಿಶ್ಚ ಪೌಗಂಡಃ ಪೂರ್ಣಾಂಗೋ ಜಾಯತೇ ಧ್ರುವಮ್ || ೪೨ ||

ಶೇಷಾಶ್ಚ ಕುಷ್ಠಪೂರ್ವಾಶ್ಚ ನಶ್ಯಂತ್ಯಾಮಯರಾಶಯಃ |
ಅಷ್ಟಾಕ್ಷರೇಣ ಮಂತ್ರೇಣ ಸ್ತೋತ್ರೇಣ ಕವಚೇನ ಚ || ೪೩ ||

ವೃಂದಾವನೇ ಸನ್ನಿಹಿತಮಭಿಷಿಚ್ಯ ಯಥಾವಿಧಿ |
ಯಂತ್ರೇ ಮಂತ್ರಾಕ್ಷರಾಣ್ಯಷ್ಟೌ ವಿಲಿಖ್ಯಾತ್ರ ಪ್ರತಿಷ್ಠಿತಮ್ || ೪೪ ||

ಷೋಡಶೈರುಪಚಾರೈಶ್ಚ ಸಂಪೂಜ್ಯ ತ್ರಿಜಗದ್ಗುರುಮ್ |
ಅಷ್ಟೋತ್ತರಶತಾಖ್ಯಾಭಿರರ್ಚಯೇತ್ಕುಸುಮಾದಿಭಿಃ || ೪೫ ||

ಫಲೈಶ್ಚ ವಿವಿಧೈರೇವ ಗುರೋರರ್ಚಾಂ ಪ್ರಕುರ್ವತಃ |
ನಾಮಶ್ರವಣಮಾತ್ರೇಣ ಗುರುವರ್ಯಪ್ರಸಾದತಃ || ೪೬ ||

ಭೂತಪ್ರೇತಪಿಶಾಚಾದ್ಯಾಃ ವಿದ್ರವಂತಿ ದಿಶೋ ದಶ |
ಪಠೇದೇತತ್ತ್ರಿಕಂ ನಿತ್ಯಂ ಗುರೋರ್ವೃಂದಾವನಾಂತಿಕೇ || ೪೭ ||

ದೀಪಂ ಸಂಯೋಜ್ಯ ವಿದ್ಯಾವಾನ್ ಸಭಾಸು ವಿಜಯೀ ಭವೇತ್ |
ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಾತ್ || ೪೮ ||

ಕವಚಸ್ಯ ಪ್ರಭಾವೇಣ ಭಯಂ ತಸ್ಯ ನ ಜಾಯತೇ |
ಸೋಮಸೂರ್ಯೋಪರಾಗಾದಿಕಾಲೇ ವೃಂದಾವನಾಂತಿಕೇ || ೪೯ ||

ಕವಚಾದಿತ್ರಿಕಂ ಪುಣ್ಯಮಪ್ಪಣಾಚಾರ್ಯದರ್ಶಿತಮ್ |
ಜಪೇದ್ಯಃ ಸ ಧನಂ ಪುತ್ರಾನ್ ಭಾರ್ಯಾಂ ಚ ಸುಮನೋರಮಾಮ್ || ೫೦ ||

ಜ್ಞಾನಂ ಭಕ್ತಿಂ ಚ ವೈರಾಗ್ಯಂ ಭುಕ್ತಿಂ ಮುಕ್ತಿಂ ಚ ಶಾಶ್ವತೀಮ್ |
ಸಂಪ್ರಾಪ್ಯ ಮೋದತೇ ನಿತ್ಯಂ ಗುರುವರ್ಯಪ್ರಸಾದತಃ || ೫೧ ||



ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಕವಚಂ 

ಸಂಪೂರ್ಣಮ್. 

 

  ಶ್ರೀಕೃಷ್ಣಾರ್ಪಣಮಸ್ತು .

 

                                             Sri Raghavendra Gayatri Matra


 

                                                        PIC-1


ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಆಪಾದಃ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್
ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಧ್ಯಂತಿ ಚ ಮನೋರಥಾಃ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||

ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||


ಓಂ ಶ್ರೀ ಗುರು ರಾಘವೇಂದ್ರಾಯ ನಮಃ । 
OM  SRI GURU RAGHVENDRAYA NAMAHA.

------------------- Hari Om ------------------



 


 

Saturday, August 29, 2026

ರಾಯರ ಆರಾಧನಾ ಮತ್ತು ರಾಯರ ಮಹಿಮೆ ಅಪಾರ - Rayara Aradhane and Immense Glory of Rayaru

 

                                                                             Rayaru

 

ರಾಯರ ಆರಾಧನಾ ಮತ್ತು ರಾಯರ ಮಹಿಮೆ 

ಅಪಾರ


Rayara Aradhane and Immense Glory of
Rayaru

ಶ್ರಾವಣ ಬಹುಳ ಬಿದಿಗೆ -- ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ l
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ll
'
ದೇವರೆಂದರೆ ವೆಂಕಪ್ಪ ಗುರುಗಳೆಂದರೆ ರಾಘಪ್ಪ' ಇದು ಸಾಮಾ ನ್ಯವಾಗಿ ಕೇಳುವ ನಾಣ್ಣುಡಿ.
ಶ್ರೀರಾಯರ ಬಗ್ಗೆ ಅಪ್ಪಣ್ಣಾಚಾರ್ಯರ ನುಡಿಮುತ್ತುಗಳು ಹೀಗಿದೆ -
ಶ್ರೀಮಧ್ವಮತದುಗ್ದಾಬ್ಧಿ ಚಂದ್ರೋsವತು ಸದಾನಘಹ l
ಶ್ರೀಮಧ್ವಮತ ವರ್ಧನಃ l
ಅಪೇಕ್ಷಿತಪ್ರದಾತಾನ್ಯೋ ರಾಘವೇಂದ್ರಾನ್ನವಿದ್ಯತೇ 
ಶ್ರೀಮಧ್ವಮತದ ಚಂದ್ರಮರಾಗಿ, ಭಕ್ತರ ಅಭೀಷ್ಟಗಳನ್ನು ಸುರಿಸುವವರಾಗಿ ಮಂತ್ರಾಲಯದಿ
ನೆಲೆಸಿರುವ ಶ್ರೀರಾಯರನ್ನು ಯಾರು ತಾನೆ ಸೇವಿಸರು-ಭಜಿಸರು
'ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ'  ಆಗಿರುವರು.  ಹರಿದಾಸಸಾಹಿತ್ಯದ
ಎರಡನೆಯ ಘಟ್ಟದ ಸ್ಫೂರ್ತಿದಾಯಕರು ಶ್ರೀರಾಘವೇಂದ್ರರು.  ನಂತರ ಇವರನ್ನು ಕೀರ್ತಿಸದ,
ಸ್ತುತಿಸದ ಹರಿದಾಸರಿಲ್ಲ.  ಪಂಡಿತ ಪಾಮರರಿಗೂ ಜ್ಞಾನಾದಿ ಅಭೀಷ್ಟಪರಾಗಿ ಮಾನ್ಯರಾಗಿರುವರು.
ಗುರುಗಳ ಮಹಿಮೆಯನ್ನು ಹರಿದಾಸರು ಬಹುವಾಗಿ ತಮ್ಮ ಪದಪದ್ಯಗಳಿಂದ ಹಾಡಿದ್ದನ್ನು 
ಕಾಣುತ್ತೇವೆ.  ಶ್ರೀವಿಜಯದಾಸರು -
ನೋಡಿದೆ ಗುರುಗಳ ನೋಡಿದೆ ll ll
ನೋಡಿದೆನು ಗುರುರಾಘವೇಂದ್ರರ ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ಈಡು ಇಲ್ಲದೆ ಮೆರೆವ ಮಹಿಮೆಯ ll ಅ ಪ llಟಿಪ್ಪಣ್ಯಾಚಾರ್ಯ ಚಕ್ರವರ್ತಿಯೆಂದೇ ಪ್ರಸಿದ್ಧರಾದ
ಶ್ರೀರಾಘವೇಂದ್ರಸ್ವಾಮಿಗಳ ಗ್ರಂಥರಚನಾ ವೈಭವವು ಗಾತ್ರ ಹಾಗೂ ಸತ್ವದಲ್ಲಿ ಶ್ರೇಷ್ಠಮಟ್ಟದ್ದಾಗಿ
ವಿಜೃಂಭಿಸಿವೆ.  ರಾಯರ ಐಕತ್ತಕ್ಕೂ ಹೆಚ್ಚಿನ ಗ್ರಂಥಗಳು ಎಲ್ಲ ಪ್ರಕಾರಗಳಿಂದಲೂ ವ್ಯಾಪಿಸಿವೆ.
ಟೀಕಾ, ಟಿಪ್ಪಣಿ, ಸ್ವತಂತ್ರಗ್ರಂಥಗಳು, ಸ್ತೋತ್ರ ಹೀಗೆ ಆವರಿಸಿ ಪೂರ್ಣತೆಯನ್ನು ಪಡೆದಿವೆ
ಪರಿಮಳಾಚಾರ್ಯ, ಭಾವದೀಪಕಾರರು ಮುಂತಾದವು ಸಾಕ್ಷಿಯಾಗಿವೆ.  ಪ್ರಾಕೃತ ಭಾಷೆಯಲ್ಲೂ 
ಕೃತಿಗಳನ್ನು ರಚಿಸಿ ಹರಿದಾಸಸಾಹಿತ್ಯಕ್ಕೂ ಮೆರುಗನ್ನು ನೀಡಿದ ಮಹಿಮಾನ್ವಿತರು 
ಶ್ರೀರಾಘವೇಂದ್ರಯತಿವರ್ಯರು. ಅದಕ್ಕೆಂದೆ ಶ್ರೀಜಗನ್ನಾಥದಾಸರು -
ಹೊಂದಿ ಬದುಕಿರೋ ರಾಘವೇಂದ್ರ ರಾಯರ ll
ಕುಂದದೆಮ್ಮನು ಕರುಣದಿಂದ ಪೊರೆವರ ll ಎಂದು ಕೊಂಡಾಡಿದರು. 
 
Rayara Moola Brindavana at Mantralaya
 
ಶ್ರೀವಿದ್ಯಾಪ್ರಸನ್ನ ತೀರ್ಥರು :
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ll
ಶ್ರೀಗೋಪಾಲದಾಸರು :
ರಾಯೆನ್ನೆ ರಾಶಿ ದೋಷಗಳ ದಹಿಸುವರು
ಘಾಯನ್ನೆ ಘನ ಜ್ಞಾನ ಭಕುತಿಯನಿತ್ತು l
ವೇ ಯೆನ್ನೆ ವೇಗಾದಿ ಜನನ ಮರಣ ಗೆದ್ದು
ದ್ರಾ ಯೆನ್ನೆ ದ್ರವಿಣೋದ ಶ್ರುತಿಗೇವೆ ಘನಕಾಂಬ ll
ಶ್ರೀಪ್ರಾಣೇಶದಾಸರು :
ಶ್ರೀರಾಮಚಂದ್ರಾಂಘ್ರಿ ನರಸಿಂಹ ಭೃಂಗನಿಗೆ
ಧೀರ ಸುಧೀಂದ್ರಕರ ಸಂಭೂತನಿಗೆ
ವಾರಾಹಿತೀರ ಮಂತ್ರಾಲಯ ನಿಕೇತನಗೆ
ಶ್ರೀರಾಘವೇಂದ್ರರಾಯರ ಚರಣಕೆ
ಜಯಮಂಗಳಂ ನಿತ್ಯಶುಭಮಂಗಳಂ ll
ಇಂದು ಶ್ರೀರಾಘವೇಂದ್ರವಿಜಯ ಗ್ರಂಥ ಪಾರಾಯಣ, ಆರಾಧನಾ ಸಮಾರಂಭದಲ್ಲಿ 
ಭಾಗವಹಿಸುವುದುಹಳ ಮುಖ್ಯವಾಗಿದೆ. ಶ್ರೀರಾಘವೇಂದ್ರ ಸ್ತೋತ್ರದ ಅಷ್ಟೋತ್ತರ,
ರಾಘವೇಂದ್ರವಿಜಯ, ಗುರುಗುಣಸ್ತವನ, ಹರಿದಾಸರ ಪದ-ಪದ್ಯಗಳ ಪಾರಾಯಣ ಆಗಬೇಕು.
ಹಿರಿಯ ವಿದ್ವಾಂಸರಿಂದ ರಾಯರ ಜೀವನ - ಸಾಧನೆಗಳ ಬಗ್ಗೆ ಅರಿಯಬೇಕು
ಕಲಿಯುಗದ ಕಲ್ಪತರುವೆಂದು ಪ್ರಸಿದ್ಧರಾದ ಶ್ರೀರಾಯರ ಅನುಗ್ರಹ ಪ್ರತಿಯೊಬ್ಬರಿಗೂ ಬೇಕಿದೆ
ಸಶರೀರ ಪ್ರವೇಶ ಮಾಡಿದ ಮೂಲವೃಂದಾವನ ದರ್ಶನಾದಿಗಳು ಅತ್ಯಾವಶ್ಯಕ.
ಶ್ರೀವಿಶ್ವೇಂದ್ರತೀರ್ಥರು -
ಮಧ್ವಮತವೆಂಬ ದುಗ್ಧಸಾಗರದೊಳು l
ಉದ್ಭವಿಸಿದ ಪೂರ್ಣ ಹಿಮಕರ ತೇಜ ll
ಶ್ರೀವಿದ್ಯಾಪ್ರಸನ್ನತೀರ್ಥರು -
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ll ಎಂದರು.
ಮೂಕೋಪಿ ಯತ್ಪ್ರಸಾದೇನ ಮುಕುಂದಶಯನಾಯತೇ l
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ll 
 
Rayaru or Sri Raghavendra Swamy
 

ರಾಯರ ಮಹಿಮೆ ಅಪಾರ


ನಮ್ಮ ರಾಯರು 64 ವಿದ್ಯೆಯನ್ನು ಕಲಿತಿದ್ದಾರೆ 104 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ.ಅಂದೆಲ್ಲಾ ಕರೆಂಟ್ ಇಲ್ಲದ ಕಾಲ ಜೊತೆಗೆ ಬಡತನ. ನಮ್ಮ ರಾಯರಿಗೆ ಬೆಳಗ್ಗೆ ಇಂದ ಸಂಜೆವರೆಗೂ ಬಿಡುವೇ ಇರುತ್ತಿರಲಿಲ್ಲವಂತೆ ರಾತ್ರಿಯೇ ಅವರಿಗೆ ಬಿಡುವು ಆಗ ಗ್ರಂಥಗಳನ್ನು ಬರೆಯಲು ಶುರು ಮಾಡುತ್ತಿದ್ದರಂತೆ ಬೆಳಕಿಲ್ಲದೇ ಸಣ್ಣ ದೀಪ ಹೇಗೊ ಎಣ್ಣೆ ಯನ್ನೂ ಹೊಂದಿಸಿಕೊಂಡು ಸಣ್ಣದಾಗಿ ಬತ್ತಿ ಮಾಡಿ ಕುಳಿತರೆ ಬರೆಯಲು ಆಗದು ಕೊನೆಗೆ ಅರಳಿಮರದ ಎಲೆ ಇತರ ಎಲೆಗಳನ್ನು ತೆಗೆದುಕೊಂಡು ಬರುತ್ತಿದ್ದರಂತೆ ಒಂದೊಂದು ಎಲೆಗಳನ್ನು ಮಾತ್ರವೇ ಅಂಟಿಸಿ ಗ್ರಂಥ ಬರೆಯುತ್ತಿದ್ದರಂತೆ ಎಲ್ಲಿ ಖಾಲಿ ಆಗುತ್ತದೋ ಎಂದು ಆದರೂ ಅಷ್ಟು ಗ್ರಂಥಗಳನ್ನು ಬರೆದರೂ ಒಮ್ಮೆಯೂ ಎಂದಿಗೂ ಒಮ್ಮೆ ಬರೆದ ಅಕ್ಷರವನ್ನು ತಪ್ಪಾಗಿದೆ ಎಂದು ಅಳಿಸಿ ಬರೆದಿಲ್ಲವಂತೆ ಮಹಾನುಭಾವರು.

ಅಬ್ಭಾ ಇನ್ನೆಂಥಹ ಪ್ರವಿಣ್ಯತೆ ನಮ್ಮ ರಾಯರಲ್ಲಿ ಇರಬಹುದು ಅವರು ಕಷ್ಟ ಪಟ್ಟು ಬರೆಯುವ ಅವಶ್ಯಕತೆ ಇರಲಿಲ್ಲ ಅವರಿಗೆ ಎಲ್ಲವೂ ತಿಳಿದಿತ್ತು ಎಲ್ಲಾ ಗ್ರಂಥಗಳ ಬಂಡಾರದ ವಿಚಾರವೇ ಅವರ ತಲೆಯಲ್ಲಿ ಇತ್ತು ಆದರೂ ಮುಂದಿನ ಪೀಳಿಗೆಗೋಸ್ಕರ ಬರೆದರು.ಅದೆಲ್ಲಾ ಗ್ರಂಥಗಳನ್ನು ಬರೆದರು. ಜೋಪಾನ ಮಾಡುವುದು ಸಾಮಾನ್ಯ ವಿಷಯ ವಲ್ಲವಂತೆ ಅಷ್ಟು ಕಷ್ಟಪಟ್ಟು ಬರೆದು ಶೇಖರಿಸಿದರು ಸಜ್ಜನರ ಉದ್ಧಾರಕ್ಕಾಗಿ ನಮ್ಮ ಮಂತ್ರಾಲಯದ ಮಹಾರಾಜರು. ಇಂಥ ಮಹಾನ್ ಗುರುಗಳ ಭಕ್ತರು ನಾವೆಲ್ಲಾ ಅದೆಷ್ಟು ಪುಣ್ಯವಂತರು ನಾವು ಇಂದಿನ ನಮ್ಮ ಗುರುಗಳ ದರುಶನ.

ಈ ಯೋಗ ಗುರುಗಳ ಸ್ಮರಣೆಗೆ‌ ಅತ್ಯಂತ ಪ್ರಶಸ್ತವಾದ ಕಾಲ. ಚಕ್ಕಡಿ(ಬಂಡಿ)ಗೆ ಎತ್ತುಗಳು ಎಷ್ಟು ಮುಖ್ಯವೋ, ಹಾಗೆಯೇ ಚಕ್ಕಡಿ ಓಡಿಸುವ ವ್ಯಕ್ತಿಯು ಬಹುಮುಖ್ಯ. ದೈವಾನುಗ್ರಹ ಎಷ್ಟೇ ಇರಲಿ, ಜತೆಗೆ ಗುರುಗಳ ಕರುಣಾಪೂರಿತ ಕಾರುಣ್ಯ ಇರಲೇ ಬೇಕು. ಹರ ಮುನಿದರೆ ಗುರು ಕಾಯ್ವ, ಗುರು ಮುನಿದರೆ ಕಾಯುವರಾರೋ ಎಂಬ ಮಾತಿದೆ.

ಗುರುಬಲವಿದ್ದರೆ ದೈವಬಲ ತಾನಾಗಿಯೇ ಬರುತ್ತದೆ, ಇಲ್ಲವೇ ಗುರುಗಳು ಬರಿಸುತ್ತಾರೆ. ಅದಕ್ಕಾಗಿಯೇ ಯಾವುದೇ ಶುಭಕಾರ್ಯದ ಆರಂಭದಲ್ಲಿ, ವೇದ ಪಾರಾಯಣ ಮತ್ತಿತರ ಸಮಯದಲ್ಲಿ ಶ್ರೀಗುರುಭ್ಯೋ ನಮಃ ಎನ್ನುತ್ತೇವೆ. ನಂತರ ಹರಿಃ ಓಂ ಎನ್ನುತ್ತೇವೆ. ವೀರಶೈವರು ಹರಹ ಓಂ ಎನ್ನುತ್ತಾರೆ. ಯಾವುದೇ ಧರ್ಮವಿರಲಿ, ಮತವಿರಲಿ, ಪಂಥವಿರಲಿ ಗುರು ವಿಗೆ ಅಗ್ರಸ್ಥಾನ. ಇಂತಹ ಗುರುವನ್ನು ಸದಾ ಸ್ಮರಿಸಬೇಕು. ಅದರಲ್ಲಿಯೂ ವಿಶೇಷವಾದ ಪರ್ವಕಾಲದಲ್ಲಿ ವಿಶೇಷವಾಗಿ ಸ್ಮರಣೆ ಮಾಡಬೇಕು.

 

                                                                          PIC-1

ತಾಯಿ ತನ್ನ ಮಗುವಿಗೆ ಪ್ರೇಮ ನೀಡಬಲ್ಲಳು, ತಂದೆಯಂತೆ ಶಿಕ್ಷಿಸಿ ಸರಿದಾರಿಗೆ ತರಲಾರಳು. ತಂದೆ ಶಿಸ್ತು ಕಲಿಸಿ ಬೆಳೆಸಬಹುದು, ಆದರೆ ಮಾತೃ ಪ್ರೇಮ ನೀಡಲಾರ. ಉತ್ತಮ ಗುಣ ಸಂಪನ್ನರಾದ ಗುರುಗಳು ಮಾತೆಯಂತೆ ಮಾತೃ ಹೃದಯಿಯಾಗಿ ಪ್ರೀತಿಸುವುದರ ಜತೆ, ಪಿತೃವಿನಂತೆ ದಂಡಿಸಿ ತಿದ್ದಿ ತೀಡಿ ವಿದ್ಯೆ ಕಲಿಸಬಲ್ಲರು. ಉನ್ನತವಾದ ಗುರಿ ಮುಟ್ಟಲು ಹೆಗಲಿಗೆ ಹೆಗಲಾಗುವರು. ಶಿಷ್ಯ ಸಾಧಕನಾದರೆ, ಗುರುಗಳ ಹರ್ಷಕ್ಕೆ ಮಿಗಿಲಿಲ್ಲ.

ಹಾಗಾಗಿಯೇ ಮೂರು ರೀತಿಯ ಅನುಗ್ರಹ ತೋರುವ ಗುರುಗಳಿಗಿಂತ ಅಧಿಕ ಆಪ್ತರು ಇನ್ನಾರು ಎಮಗೆ ಎನ್ನುತ್ತೇವೆ. ಅಂತಹ ಗುರುಗಳ ಹೃತ್ಕಮಲದಲ್ಲಿ ನಿಂತು ನಮ್ಮನ್ನು ಸರಿದಾರಿಯಲ್ಲಿ ನಡೆಸಿ ಸತ್ಕುಲ ಪ್ರಸೂತರನ್ನಾಗಿಸುವ ದೇವಗುರು ಬೃಹಸ್ಪತಿಯ ಜತೆ, ಪರಮಗುರುಗಳಾದ ಶ್ರೀವಾದಿರಾಜರು ಹಾಗೂ ಮಂತ್ರಾಲಯ ಪ್ರಭುಗಳನ್ನು ಈ ದಿನ ಸ್ಮರಿಸೋಣ.

ಗುರುವಾರದ ದಿನ ಪುಷ್ಯ ನಕ್ಷತ್ರವಿದ್ದರೆ ಆ ದಿನ, ಗುರುಪುಷ್ಯಯೋಗ ಎನ್ನಲಾಗುತ್ತದೆ. ಅದೇ ರೀತಿ ಭಾನುವಾರ ಪುಷ್ಯ ನಕ್ಷತ್ರ ಬಂದರೆ ಪುಷ್ಯಾರ್ಕ ಯೋಗ ಎನ್ನುತ್ತೇವೆ. ಈ ಎರಡೂ ದಿನ ದೇವ ಗುರುವಾದ ಶ್ರೀಬೃಹಸ್ಪತಿ ಯ ಜತೆ ಗುರುಗಳ ಸ್ಮರಣೆ ಅತ್ಯಂತ ಪುಣ್ಯದಾಯಕಗುರುಗಳ ಜಪ, ಸ್ಮರಣೆ ಫಲದಾಯಕ.



                                                                           PIC-2

 

ಕಲಿಯುಗದ ಕಾಮಧೇನುವಾದ ಮಂತ್ರಾಲಯ ಪ್ರಭುಗಳಾದ 

ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರನ್ನ ಈ ಪರ್ವ ಕಾಲದಲ್ಲಿ

ಸ್ಮರಿಸಿ ಧನ್ಯರಾಗೋಣ.



ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ|
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ||

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ|
ಶ್ರೀರಾಘವೇಂದ್ರಗುರುವೇ ನಮೋಅತ್ಯಂತ ದಯಾಲವೇ||

ಸರ್ವ ಗುರುಗಳನ್ನು ಸ್ಮರಿಸೋಣ.

ಆಪಾದಮೌಳಿ ಪರ್ಯಂತಂ ಗುರುಣಾಕೃತಿಂ ಸ್ಮರೇತ್|
ತೇನವಿಘ್ನಾಃಪ್ರಣಶ್ಯಂತಿ ಸಿದ್ಧಂತಿಚ ಮನೋರಥಾಃ||

ಶ್ರೀ ರಾಘವೇಂದ್ರಾಯ ನಮಃ ಎಂಬ ಅಷ್ಟಾಕ್ಷರ ಮಂತ್ರವನ್ನು ಜಪಿಸಿ ಪುನೀತರಾಗಿ.

ರಾಘವೇಂದ್ರ ಸ್ವಾಮಿಗಳು ತಿರುಪತಿ ಸನ್ನಿಧಾನಕ್ಕೆ ಬಂದು ಸ್ವಾಮೀ ಪುಷ್ಕರಿಣಿಯಲ್ಲಿ ಸ್ನಾನ ಮಾಡಿದರು. ಶ್ರೀ ವರಾಹ ಸ್ವಾಮಿಯ ದರ್ಶನ ಪಡೆದು ದೇವಸ್ಥಾನದ ಮಹಾದ್ವಾರಕ್ಕೆ ಬಂದರು. ದೇವಸ್ಥಾನದ ಅಧಿಕಾರಿಗಳು ಶ್ರೀಮದಾಚಾರ್ಯರ ಮೂಲಮಹಾಸಂಸ್ಥಾನದ ಗುರುಗಳನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡು ನೇರವಾಗಿ ಗರ್ಭಗುಡಿಗೆ ಕರೆದುಕೊಂಡು ಹೋದರು.

ಶ್ರೀ ಶ್ರೀನಿವಾಸನ ಭವ್ಯ-ದಿವ್ಯವಾದ ದರ್ಶನದಿಂದ ಪುಳಕಿತರಾದ ಶ್ರೀ ರಾಘವೇಂದ್ರರು ಭಗವಂತನ ದಿವ್ಯ ಪಾದಪದ್ಮಗಳಿಗೆ ಸಾಷ್ಟಾಂಗವೆರಗಿದರು. ಪರಮಾತ್ಮನ ದಿವ್ಯ ಪಾದಗಳ ಸ್ಪರ್ಶದಿಂದ ಭಕ್ತ್ಯುದ್ರೇಕಗೊಂಡ ಶ್ರೀ ಗುರುರಾಯರ ಕಣ್ಣಿನಿಂದ ಆನಂದ ಭಾಷ್ಪ ಹರಿಯತೊಡಗಿತು.ಶ್ರೀ ಗುರುರಾಯರು ಭಗವಂತನಿಗೆ ಮಂಗಳಾರತಿಯೆತ್ತಿ ಅವನನ್ನು ವೇದ ಮಂತ್ರಗಳಿಂದ ಹಾಗೂ ಸ್ತೋತ್ರಗಳಿಂದ ವಿಧವಿಧವಾಗಿ ಸ್ತುತಿಸಿದರು. ಶ್ರೀ ರಾಘವೇಂದ್ರ ತೀರ್ಥರು ಭಗವಂತನ ಏಕಾಂತ ಸೇವೆಯನ್ನು ಮಾಡಲಿಚ್ಚಿಸಿದಾಗ ದೇವಸ್ಥಾನದ ಅಧಿಕಾರಿಗಳು ಮರುದಿನ ಬ್ರಾಹ್ಮೀಮುಹೂರ್ತದಲ್ಲಿ ಆಗಬಹುದೆಂದರು 

ಮರುದಿನ ಶ್ರೀ ಗುರುರಾಯರು ಬ್ರಾಹ್ಮೀಮುಹೂರ್ತದಲ್ಲಿ ಪ್ರಾತರಾಹ್ನಿಕಗಳನ್ನು ಮುಗಿಸಿ, ಕೆಲವೇ ಕೆಲವು ಶಿಷ್ಯರ ಜೊತೆ ದೇವಸ್ಥಾನಕ್ಕೆ ಬಂದರು. ದೇವಸ್ಥಾನದ ಅಧಿಕಾರಿಗಳು ಅವರನ್ನು ತಕ್ಷಣ ಗರ್ಭಗುಡಿಗೆ ಕರೆದೊಯ್ದು, ಗರ್ಭಗುಡಿಯ ಒಳಗೆ ಅವರೊಬ್ಬರನ್ನೇ ಬಿಟ್ಟು, ಗರ್ಭಗುಡಿಯ ತೆರೆ ಎಳೆದರು.ಶ್ರೀ ಗುರುರಾಯರು ಭಗವಂತನ ದಿವ್ಯಾಕೃತಿಯನ್ನು ಕಣ್ತುಂಬ ನೋಡಿದರು. ಅವನ ದಿವ್ಯ ಪಾದಪದ್ಮಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನಂತರ ಪದ್ಮಾಸನದಲ್ಲಿ ಕುಳಿತು ಕಣ್ಮುಚ್ಚಿ ಶ್ರೀ ಶ್ರೀನಿವಾಸನನ್ನು ಧ್ಯಾನಿಸಿದರು. ತಕ್ಷಣವೇ ಶ್ರೀ ಶ್ರೀನಿವಾಸ ಅವರ ಹೃದಯ ಮಂದಿರದಲ್ಲಿ ಗೋಚರಿಸಿದ. ಅವನ ದಿವ್ಯದರ್ಶನವನ್ನು ಶ್ರೀ ಗುರುರಾಯರು ಪಡೆಯುತ್ತಿರುವಾಗಲೇ ಅವನು ಅಲ್ಲಿಂದ ಅದೃಶ್ಯನಾದ! ಇದೇನಚ್ಚರಿಯೆಂದು ಶ್ರೀ ಗುರುರಾಯರು ಕಣ್ತೆರೆದು ನೋಡಲು, ಆಶ್ಚರ್ಯವೆಂಬಂತೆ ಎದುರಿಗಿನ ಶ್ರೀ ಶ್ರೀನಿವಾಸನ ವಿಗ್ರಹ ಜೀವಂತವೆಂಬಂತೆ ದಿವ್ಯ ಪ್ರಭೆಯಿಂದ ಕಂಗೊಳಿಸುತ್ತಿತ್ತು. ಭಕ್ತ್ಯುದ್ರೇಕದಿಂದ ಶ್ರೀ ಗುರುರಾಯರು ಭಗವಂತನನ್ನು ಸ್ತುತಿಸಲು, ಅವರ ಕಣ್ಣಿನಿಂದ ಆನಂದಾಶ್ರು ಹರಿಯತೊಡಗಿತು. ಇದ್ದಕಿದ್ದಂತೆ ಭಗವಂತನ ಮುಖಕಮಲವು ದಿವ್ಯ ಕಾಂತಿಯಿಂದ ಬೆಳಗಲಾರಂಭಿಸಿ, ಪರಮಾತ್ಮನು ತನ್ನ ದಿವ್ಯ ಮಂಜುಳ ಸ್ವರದಿಂದ ಹೀಗೆಂದನು.

 

                                                                     PIC-3

"ಭಕ್ತ ಶ್ರೇಷ್ಠನೆ! ವೇದಗಳೇ ಸರ್ವಕ್ಕೂ ಮೂಲವಾಗಿದ್ದು, ನಾನು ಸದಾ ಅವುಗಳಲ್ಲಿ ಸನ್ನಿಹಿತನಾಗಿದ್ದೇನೆ. ಆದ್ದರಿಂದ ವೇದಗಳಿಗೆ ಭಾಷ್ಯಗಳನ್ನು ಬರೆದು ನನ್ನನ್ನು ಸೇವಿಸು". ಭಗವಂತನ ಮುಖದಿಂದ ವಾಣಿಯನ್ನು ಆಲಿಸಿದ ಶ್ರೀ ಗುರುರಾಯರ ಆನಂದಕ್ಕೆ ಪಾರವೇ ಇರಲಿಲ್ಲಾ. ಶ್ರೀ ಗುರುರಾಯರು ಉತ್ತರಿಸುತ್ತಾ " ಪರಮಾತ್ಮ! ನಿನ್ನಾಜ್ಞೆಯನ್ನು ಶಿರಸಾಧರಿಸಿ ಖಂಡಿತವಾಗಿಯೂ ನೆರವೇರಿಸುತ್ತೇನೆ! ", ಹೀಗೆಂದು ಶ್ರೀ ಗುರುರಾಯರು ತಮ್ಮ ಶಿರವನ್ನು ಭಗವಂತನ ದಿವ್ಯ ಪಾದಪದ್ಮಗಳ ಮೇಲೆ ಇರಿಸಿ, ಸಾಷ್ಟಾಂಗವೆರಗಿದರು! ಗರ್ಭಗುಡಿಯ ಹೊರಗಡೆ ಇರುವವರಿಗೆ ಶ್ರೀ ಗುರುರಾಯರ ಧ್ವನಿ ಮಾತ್ರ ಕೇಳಿಸಿತು. ಆದ್ದರಿಂದ ಇದೇನೆಂದು ನೋಡಲು ಅರ್ಚಕರು ಒಳ ಬರಲಾಗಿ, ಅದೇ ಸಮಯಕ್ಕೆ ಸರಿಯಾಗಿ ಶ್ರೀ ಶ್ರೀನಿವಾಸನನ್ನು ಅಲಂಕರಿಸಿದ್ದ ಬೃಹತ್ತಾದ ತುಳಸೀ ಮಾಲೆಯು ಕಳಚಿಬಿದ್ದು, ನಮಸ್ಕರಿಸಿದ ಶ್ರೀ ಗುರುರಾಯರ ಕೊರಳನ್ನು, ಯಾರೋ ಇಟ್ಟಂತೆ, ಅಲಂಕರಿಸಿತು.


ಈ ಮಹಿಮೆಯನ್ನು ನೋಡಿ ಅಚ್ಚರಿಗೊಂಡ ಅರ್ಚಕರು, ತಮ್ಮ ಆರು ದಶಕಗಳ ಇತಿಹಾಸದಲ್ಲಿ ಇಂತಹ ಘಟನೆಯನ್ನೆಂದೂ ನೋಡಿಲ್ಲವೆಂದು ಹೇಳಿ, ಅವರೆಲ್ಲರೂ ರಾಯರಿಗೆ ನಮಸ್ಕರಿಸಿದರು. ಭಗವಂತನ ದರ್ಶನ ಹಾಗೂ ಪ್ರತ್ಯಕ್ಷ ಮಾತುಕತೆಯಿಂದ ಸಂಪೂರ್ಣ ತೃಪ್ತಿಗೊಂಡ ಶ್ರೀ ರಾಘವೇಂದ್ರ ತೀರ್ಥರು ನಂತರ ಎಲ್ಲಾ ವಿದ್ವಾಂಸರ ಜೊತೆ ಚರ್ಚಿಸಿ ವೇದಗಳ ಪ್ರತಿಯನ್ನು ಸಂಗ್ರಹಿಸಿದರು.
ಶ್ರೀನಿವಾಸ ದೇವರ ಮತ್ತು ಮಧ್ವಾಚಾರ್ಯರ ಅನುಗ್ರಹದಿಂದ ವೇದಗಳಿಗೆ ಭಾಷ್ಯವನ್ನು ಬರೆದು ಭಗವಂತನಿಗೆ ಸಮರ್ಪಣೆ ಮಾಡಿದರು.


ಶ್ರೀ ಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ

ಶ್ರೀ ವೇದವ್ಯಾಸ ದೇವರು ಎಲ್ಲರನು ಕಾಯಲಿ.

ಕೃಪೆ:- ರಾಘವೇಂದ್ರ ವಿಜಯ


---------- Hari Om ----------