Thursday, August 27, 2026

ಶ್ರೀ ಹಯಗ್ರೀವ ಮಂತ್ರ ಮತ್ತು ಶ್ರೀ ಹಯಗ್ರೀವ ಸಂಪದ ಸ್ತೋತ್ರ - Sri Hayagriva Mantra and Hayagriva Sampada Stothra

                                                            Lord Hayagriva with Laxmi Devi

 

 ಶ್ರೀ ಹಯಗ್ರೀವ ಮಂತ್ರ ಮತ್ತು ಶ್ರೀ ಹಯಗ್ರೀವ ಸಂಪದ ಸ್ತೋತ್ರ


Sri Hayagriva Mantra and Hayagriva Sampada Stothra


ಶ್ರೀ ಹಯಗ್ರೀವ ಮಂತ್ರ ಜಪಃ


ಓಂ ಶ್ರೀಃ
ಅಸ್ಯಶ್ರೀ ಹಯಗ್ರೀವ ಏಕಾಕ್ಷರ ಮಹಾಮಂತ್ರಸ್ಯ
ಬ್ರಹ್ಮಾ ಋಷಿಃ ತ್ರುಷ್ಟುಪ್ ಛಂದಃ ಶ್ರೀ ಹಯಗ್ರೀವ ದೇವತಾ
ಹಂ ಬೀಜಂ ಸಂ ಶಕ್ತಿಃ ಔಂ ಕೀಲಕಂ
ಮಮ ವಿಶೇಷ ವಿದ್ಯಾ ಪ್ರಾಪ್ತ್ಯರ್ಥೇ ಜಪೇ ವಿನಿಯೋಗಃ ||

ಅಂಗನ್ಯಾಸಃ -- ಕರನ್ಯಾಸಃ

ಹ್ಸಾಂ ಅಂಗುಷ್ಠಾಭ್ಯಾಂ ನಮಃ ಹೃದಯಾಯ ನಮಃ
ಹ್ಸೀಂ ತರ್ಜಿನೀಭ್ಯಾಂ ನಮಃ ಶಿರಸೇ ಸ್ವಾಹಾ
ಹ್ಸೂಂ ಮಧ್ಯಮಾಭ್ಯಾಂ ನಮಃ ಶಿಖಾಯೈವಷಟ್
ಹ್ಸೈಂ ಅನಾಮಿಕಾಭ್ಯಾಂ ನಮಃ ಕವಚಾಯಹಂ
ಹ್ಸೋಂ ಕನಿಷ್ಟಿಕಾಭ್ಯಾಂ ನಮಃ ನೇತ್ರತ್ರಯಾಯವಷಟ್
ಹ್ಸಃ ಕರತಲ ಕರತುಷ್ಠಾಭ್ಯಾಂ ನಮಃ ಹಸ್ತ್ರಾಯಭಟ್
ಭೂರ್ಭುವಸ್ಸುವರೋಂ ಇತಿ ದಿಗ್ಭಂಧಃ ||

ಧ್ಯಾನಂ

ಧವಳ ನಳಿನ ನಿಷ್ಠಾಂ ಕ್ಷೀರ ಧಾರಂ ಕರಾಗ್ರೇ |
ಜಪ ವಲಯ ಸರೋಜೇ ಪುಸ್ತಕಾಭೀಷ್ಟ ಧಾನೇ ||
ದಧತ ಮಮಳ ವಸ್ತ್ರಂ ಕಲ್ಪಜಾತಾಭಿರಾಮಂ |
ತುರಗ ವದನ ವಿಷ್ಣುಂ ನೋಮಿ ದೇವಾಗ್ರ ಜಿಷ್ಣುಂ ||

ಏಕಾಕ್ಷರ ಮಂತ್ರಃ

ಹ್ಸೊಂ

 

                                                              another Picture

 

ಶ್ರೀ ಹಯಗ್ರೀವ ಗಾಯತ್ರೀ ಮಂತ್ರಃ


ಓಂ ಹ್ಸೋಂ ವಾಗೀಶ್ವರಾಯ ವಿದ್ಮಹೇ ಹಯಗ್ರೀವಾಯ ಧೀಮಹಿ |ತನ್ನೋ ಹಂಸ ಪ್ರಚೋದಯಾತ್ ||


ಹಯಗ್ರೀವ ವಿಷ್ಣುವಿನ ಕುದುರೆ ಮುಖದ ರೂಪವಾಗಿದೆ.


ವಿಷ್ಣುವಿನ ಸಣ್ಣ ಅವತಾರಗಳಲ್ಲಿ ಅವನು ಸೇರಿದ್ದಾನೆ. ಕುದುರೆಯ ತಲೆಯನ್ನು ಹೊಂದಿದ್ದ ಹಯಗ್ರೀವ ಎಂಬ ಅಸುರನನ್ನು ಅವನು ಕೊಂದನೆಂದು ತಿಳಿದುಬಂದಿದೆ. ಜನರು ವೈಶವ ಧರ್ಮವನ್ನು ಅನುಸರಿಸುವವರು ಆತನನ್ನು ಜ್ಞಾನದ ದೇವರು ಎಂದು ನಂಬುತ್ತಾರೆ.

 

                                                    Sri Vadirajaru with Lord Hayagriva
 


ಈ ಕವಚವನ್ನು ದ್ವೈತ ಸಂಪ್ರದಾಯಕ್ಕೆ ಸೇರಿದ ಒಬ್ಬ ಮಹಾನ್ ಸಾವಂತನಿಂದ ಕೇಳಲಾಗುತ್ತದೆ.

 

ಶ್ರೀ ಹಯಗ್ರೀವ ಸಂಪದ ಸ್ತೋತ್ರ



1.ಹಯಗ್ರೀವ, ಹಯಗ್ರೀವ , ಹಯಗ್ರೀವ ಇತಿ ವಾದಿನಂ,
ನರ ಮುಚ್ಯಂತಿ ಪಾಪನಿ ದಾರಿದ್ರಿಮಿವ ಯೋಷಿತಾ,


ಆ ಮನುಷ್ಯ ಹಯಗ್ರೀವ, ಹಯಗ್ರೀವ, ಹಯಗ್ರೀವ,
ಹೆಂಡತಿಯನ್ನು ಹೊಂದಿರುವವರು ಬಡತನದಿಂದ ಪಾರಾಗುತ್ತಾರೆ ಎಂಬಂತಹ  ಪಾಪಗಳಿಂದ ಪಾರಾಗುತ್ತಾರೆ


2.
ಹಯಗ್ರೀವ, ಹಯಗ್ರೀವ, ಹಯಗ್ರೀವ ಯೋ ವದೇತ್,
ತಸ್ಯ ನಿಸ್ಸಾರತೇ ವಾಣೀ ಜಹ್ನು ಕನ್ಯಾ ಪ್ರವಾಹಾತ್,


ಹಯಗ್ರೀವ, ಹಯಗ್ರೀವ, ಹಯಗ್ರೀವ ಎಂದು ಹೇಳುತ್ತಲೇ ಇರುವವನಿಗೆ
ಗಂಗಾನದಿಯ ಹರಿವಿನಂತೆ ಮಾತು ಹರಿಯುತ್ತಿತ್ತು


3.
ಹಯಗ್ರೀವ, ಹಯಗ್ರೀವ, ಹಯಗ್ರೀವ ಯೋ ಧ್ವನಿ,
ವಿಶೋಭತೇ ಸ ವೈಕುಂಟಕವತೋ ಉದ್ಘಾತನಕ್ಷಮ,


ಹಯಗ್ರೀವ, ಹಯಗ್ರೀವ, ಹಯಗ್ರೀವ ಎಂಬ ಶಬ್ದ
ವೈಕುಂಠದಲ್ಲಿ ಹೊಳೆಯುತ್ತದೆ ಮತ್ತು ಅದರ ಬಾಗಿಲು ತೆರೆಯುತ್ತದೆ.


ಫಲಶ್ರುತಿ


ಶ್ಲೋಕ ತ್ರಯಂ ಇದಂ ಪುಣ್ಯಂ ಹಯಗ್ರೀವ ಪದಮಕಿತಂ,
ವಾದಿರಾಜ ಯತಿ ಪ್ರೋಕ್ತಂ ಪದತಂ ಸಂಪದಂ ಪಧಮ್


ಹಯಗ್ರೀವನ ಪಾದಗಳನ್ನು ಅಲಂಕರಿಸುವ ಈ ಮೂರು ಶ್ಲೋಕಗಳು,
ವಾದಿರಾಜರು ಹೇಳಿದ್ದು ಓದಿದರೆ ಹಯಗ್ರೀವನ ಸ್ಥಾನ ಸಿಗುತ್ತದೆ.


ಇತಿ ಶ್ರೀ ಮಧ್ವಧಿ ರಾಜ ಪೂಜ್ಯ ಚರಣವಿರಂಚಿತಂ ಹಯಗ್ರೀವ ಸಮ್ಮೋದ ಸ್ತೋತ್ರಂ ಸಂಪೂರ್ಣಮ್
ರಾಜರಿಂದ ಪೂಜಿಸಲ್ಪಡುವ ಸಂತ ಮಧ್ವರ ಪಾದಗಳಿಗೆ ಸಲ್ಲಿಸುವ ಹಯಗ್ರೀವನ ಪ್ರಾರ್ಥನೆಯು ಇದು.

ಭಾರತೀ ರಮಣಮುಖ್ಯಪ್ರಾಣಾಂತರಗತ ಶ್ರೀ ಕೃಷ್ಣಾರ್ಪಣಂ ಅಸ್ತುಸರಸ್ವತಿ ದೇವಿಯನ್ನು ಸತ್ಕರಿಸುವ ಸಂತ ಮಧ್ವರೊಳಗಿರುವ ಶ್ರೀಕೃಷ್ಣನಿಗೆ ಇದನ್ನು ಅರ್ಪಿಸಲಾಗುತ್ತದೆ.


ಸರ್ವಜನ ಸುಖಿನೋಭವತು


ಕೃಷ್ಣಾರ್ಪಣಮಸ್ತು


----------- Hari Om -----------



 


 

Wednesday, August 26, 2026

ಶ್ರೀ ರಾಘವೇಂದ್ರ ಗುರುಗಳ ಅನುಗ್ರಹ -- The Grace of Sri Raghavendra Guru

                                                               Sri Raghavendra Swamy

 

 

ಶ್ರೀ ರಾಘವೇಂದ್ರ ಗುರುಗಳ ಅನುಗ್ರಹ


The Grace of Sri Raghavendra Guru


ಶ್ರೀ ರಾಘವೇಂದ್ರ ಗುರುಗಳು ಸನ್ಯಾಸ ಸ್ವೀಕಾರ ಮಾಡಿದ ನಂತರ, ಸಂಚಾರ ಕೈಗೊಂಡು ಅವರು ತಂಗಿದ ಕಡೆಯೆಲ್ಲಾ ರಾಯರು ತಮ್ಮ ಭಕ್ತರ ಕಷ್ಟ- ನಷ್ಟ, ರೋಗ ರುಜನಿನ್ನು ಪರಿಹರಿಸಿದರು, ಕಿತ್ತು ತಿನ್ನುವ ಬಡತನದ ಕುಟುಂಬಗಳಿಗೆ ಪರಿಹಾರ, ಸಂತಾನ ಭಾಗ್ಯ, ಮುಗ್ಧ ಭಕ್ತಗೆ ಜ್ಞಾನ ನೀಡಿದರು. ಅಜ್ಞಾನಿಗಳ ದುರಹಂಕಾರಕ್ಕೆ ಜ್ಞಾನದ ಅರಿವು ಮೂಡಿಸಿದರು. ಸತ್ತು ಹೋದ ಶವಕ್ಕೆ ಜೀವ ಕೊಟ್ಟರು. ಇನ್ನು ಹಲವಾರು ಚಮತ್ಕಾರಗಳೇ ನಡೆದಿದ್ದು ಅದರಲ್ಲಿ ಒಂದೆರಡು.

ಒಮ್ಮೆ ರಾಘವೇಂದ್ರ ಗುರುಗಳ ಸಂಚಾರ ಹೊರಟು ಅವರು ಕುಳಿತ ಮೇನೆಯನ್ನು ಶಿಷ್ಯರು ಹೊತ್ತು ಹುಬ್ಬಳ್ಳಿಗೆ ಬರುತ್ತಿದ್ದರು. ರಾಯರ ವಿಶ್ರಾಂತಿಗಾಗಿ ಅಲ್ಲೊಂದು ಕಡೆ ಮೇನೆ ಇಳಿಸಿದರು. ರಾಘವೇಂದ್ರರು ಹತ್ತಿರದಲ್ಲಿದ್ದ ದಿಬ್ಬದ ಮೇಲೆ ಕುಳಿತರು. ದೂರದಲ್ಲಿ ನೋಡುತ್ತಿದ್ದ ನಾಲ್ಕಾರು ಹುಡುಗರು ಓಡಿಬಂದು, ಇಲ್ಲಿ ಏಕೆ ಕುಳಿತಿರಿ “ಸವನೂರು ನವಾಬರ” ಮಗ ಹಾವು ಕಚ್ಚಿ ಸತ್ತು ಹೋದ ಇದು ಅವನ ಸಮಾಧಿ. ಸಮಾಧಿ ಮೇಲೆ ಕುಳಿತು ನಿಮಗೆ ಮೈಲಿಗೆಯಾಯಿತು ಎಂದರು. ಇದನ್ನು ಕೇಳಿದ ಗುರುಗಳು, ಇಲ್ಲ ಆ ಹುಡುಗನ ಆಯಸ್ಸು ಇನ್ನೂ ಮುಗಿದಿಲ್ಲ. ಆದ್ದರಿಂದ ಅವನನ್ನು ಹೊರಗೆ ತೆಗೆದರೆ ಅವನು ಬಹಳ ಕಾಲ ಬದುಕುತ್ತಾನೆ ಎಂದರು. ಈ ವಿಷಯ ನವಾಬನ ಕಿವಿಗೆ ಮುಟ್ಟುತ್ತಿದ್ದಂತೆ ಆತ ಓಡಿ ಬಂದು ಗುರುಗಳಿಗೆ ನಮಸ್ಕರಿಸಿ ಗುರುಗಳ ಆದೇಶ ದಂತೆ ದಿಬ್ಬದಿಂದ ಶವವನ್ನು ಹೊರಗೆ ತೆಗೆಸಿದನು. ಗುರುಗಳು ಸ್ವಲ್ಪ ಹೊತ್ತು ಮೌನವಾಗಿದ್ದು ಧ್ಯಾನಸ್ಥರಾದರು, ಅವರು ಧ್ಯಾನದಲ್ಲಿ ಇದ್ದಂತೆ ಹುಡುಗನ ಶರೀರ ಚಲಿಸಿದಂತಾಗಿ ಆತ ಕಣ್ಣು ಬಿಟ್ಟು ಎಚ್ಚರಗೊಂಡನು. ಸಂತಸ ಗೊಂಡ ನವಾಬನು ರಾಯರಿಗೆ ಮತ್ತು ಅಲ್ಲಿ ಬಂದ ಸಕಲರಿಗೂ ಸತ್ಕಾರ ಮಾಡಿ ಗೌರವಿಸಿದನು. ಗುರುಗಳಿಗೆ 12 ಗ್ರಾಮಗಳನ್ನು ಉಂಬಳಿ ಕೊಟ್ಟನು. ಅದೀಗ ‘ಕೃಷ್ಣಾಪುರ’ ಗ್ರಾಮವಾಗಿದೆ.

ಪೆದ್ದ ವೆಂಕಣ್ಣನಿಗೆ ಅನುಗ್ರಹಿಸಿದ ರಾಯರು:

ಒಮ್ಮೆ ರಾಘವೇಂದ್ರರು ಚಾತುರ್ಮಾಸವನ್ನು ಬೇರೆ ಗ್ರಾಮದಲ್ಲಿ ಮಾಡಲು ಸಂಕಲ್ಪಿಸಿದರು. ಅದೇ ರೀತಿ ಚಾತುರ್ಮಾಸ ಗೊತ್ತು ಪಡಿಸಿದ ಗ್ರಾಮದಲ್ಲಿ ಪೂರ್ತಿ ಆಚರಣೆ ಮುಗಿದ ನಂತರ ಹೊರಡುವಾಗ, ಬಂದ ಭಕ್ತರಿಗೆಲ್ಲ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸುತ್ತಿದ್ದರು. ಹೀಗೆ ಬಂದ ಭಕ್ತರ ನಡುವೆ ಒಬ್ಬ ದನ ಕಾಯುವ ಹುಡುಗ ಬಂದನು. ಇವನ ಹೆಸರು ವೆಂಕಣ್ಣ , ತುಂಬಾ ಪೆದ್ದ- ಮುಗ್ಧ, ಗುರುಗಳೇ ನಾನು ನಿಮ್ಮ ಜೊತೆ ಬರುತ್ತೇನೆ ಎಂದನು. ಅವನ ಪರಿಚಯ ಗುರುಗಳಿಗೆ ಇತ್ತು. ಚಾತುರ್ಮಾಸ ಆಚರಣೆ ಇದ್ದಷ್ಟು ದಿನವೂ, ಆ ಜಾಗವನ್ನೆಲ್ಲ ಶುಚಿಗೊಳಿಸುವುದು, ಹೂಗಳನ್ನು ತರುವುದು, ಮಾವಿನ ತೋರಣ ಕಟ್ಟುವುದು, ಅಲ್ಲಿದ್ದವರು ಏನಾದರೂ ಸಣ್ಣಪುಟ್ಟ ಕೆಲಸ ಹೇಳಿದರೆ ಸಂತೋಷದಿಂದ ಮಾಡಿಕೊಡುತ್ತಿದ್ದ ಹೀಗೆ ನಿತ್ಯವೂ ಸೇವೆ ಮಾಡಿಕೊಡುತ್ತಿದ್ದನು. ಗುರುಗಳು, ಮುಂದೆ ನಿನಗೆ ಒಳ್ಳೆಯ ದಿನಗಳು ಬರುತ್ತದೆ ಎಂದರು.

ಆದರೆ ವೆಂಕಣ್ಣ ಹೇಳಿದ, ಗುರುಗಳೇ ನನಗೆ ತಂದೆ- ತಾಯಿ, ಬಂಧು- ಬಳಗ ಯಾರು ಇಲ್ಲ ನನ್ನ ಜೊತೆಯವರು ನಿತ್ಯವೂ ನನ್ನನ್ನು ಅನಾಥ, ದಿಕ್ಕಿಲ್ಲದವನು, ಪೆದ್ದ -ಮೂರ್ಖ ಎಂದು ಬಯ್ಯುತ್ತಾರೆ, ಕೀಟಲೆ ಮಾಡಿ ರೇಗಿಸುತ್ತಾರೆ, ಎಂದು ಹೇಳಿ ಕಣ್ಣಲ್ಲಿ ನೀರು ಹಾಕಿದನು. ಗುರುಗಳು ಅವನ ಶಿರದ ಮೇಲೆ ಕೈ ಇಟ್ಟು, ಮಗು ಚಿಂತಿಸಬೇಡ ‘ಶ್ರೀರಾಮನ’ ಅನುಗ್ರಹ ನಿನಗಿದೆ. ಈ ಅಕ್ಷತೆಯನ್ನು ನಿನ್ನ ಜೊತೆಯಲ್ಲಿ ಇಟ್ಟುಕೊಂಡಿರು, ನಿನ್ನ ಕಷ್ಟ ಕಾಲದಲ್ಲಿ ಇದನ್ನು ಹಿಡಿದುಕೊಂಡು ಸ್ಮರಿಸು, ಎಂದು ಆಶೀರ್ವದಿಸಿ ಹೊರಟರು.

ಕೆಲವು ತಿಂಗಳು ಕಳೆದವು. ಒಂದು ದಿನ ವೆಂಕಣ್ಣ ದನಗಳನ್ನು ಕಾಯುತ್ತಿದ್ದ ಅದೇ
ಮಾರ್ಗದಲ್ಲಿ ನವಾಬನ ನೆಂಟ ಆದವಾನೀಯ ‘ಸಿದ್ಧಿ ಮಸೂರ್ ಖಾನ್’ ಎಂಬು ವನು ತನ್ನ ಅಂಗರಕ್ಷಕರ ಕಾವಲಿನಲ್ಲಿ ಅಂಬಾರಿಯಲ್ಲಿ ಕುಳಿತು ಬರುತ್ತಿದ್ದನು. ಹೀಗೆ ಬರುವಾಗ ಯಾರೋ ಒಬ್ಬ ಸೈನಿಕ ಬಂದು ಒಂದು ಲಕೋಟೆಯನ್ನು ಮಸೂರ್ ಖಾನ್ ಕೈಗೆ ಕೊಟ್ಟನು. ತೆರೆದು ನೋಡಿದರೆ ಅದು ಕನ್ನಡದಲ್ಲಿ ಬರೆದಿತ್ತು. ಅಲ್ಲಿ ಯಾರಿಗೂ ಕನ್ನಡ ಓದಲು ಬರುತ್ತಿರಲಿಲ್ಲ. ಈಗೇನು ಎಂದು ನೋಡುತ್ತಿದ್ದಾಗ ದನಗಳನ್ನು ಕಾಯುತ್ತಿದ್ದ ವೆಂಕಣ್ಣ ಕಣ್ಣಿಗೆ ಬಿದ್ದನು. ಅವನನ್ನೇ ಕರೆದು ಲಕೋಟೆಯನ್ನು ಕೊಟ್ಟು ಓದಲು ಹೇಳಿದನು. ಆದರೆ ವೆಂಕಣ್ಣ ಶಾಲೆಗೆ ಹೋಗಿಲ್ಲ ಅಕ್ಷರ ಜ್ಞಾನ ಇಲ್ಲ. ನನಗೆ ಓದಲು ಬರೆಯಲು ಬರುವುದಿಲ್ಲ ಸ್ವಾಮಿ ಎಂದನು. ಆದರೆ ಆ ನವಾಬ ಕೋಪದಿಂದ ನೀನು ಬ್ರಾಹ್ಮಣರ ಹುಡುಗನಾಗಿದ್ದು ಓದಲು ಬರೆಯಲು ಬರುವುದಿಲ್ಲವೇ? ಸುಳ್ಳು ಹೇಳಿದರೆ ಛಡಿ ಏಟು ಬೀಳುತ್ತದೆ ಎಂದನು. ಹೆದರಿದ ವೆಂಕಣ್ಣಗೆ “ಕಷ್ಟ ಕಾಲದಲ್ಲಿ ಸ್ಮರಿಸು” ಎಂದು ರಾಘವೇಂದ್ರರು ಹೇಳಿದ ಮಾತು ನೆನಪಾಯಿತು ರಾಘವೇಂದ್ರರನ್ನು ಸ್ಮರಿಸುತ್ತಾ, ಪತ್ರವನ್ನು ಬಿಚ್ಚಿ ನೋಡಿದ ಗುರುಗಳ ಅನುಗ್ರಹದಿಂದ ಎಲ್ಲಾ ಅಕ್ಷರಗಳು ಅವನಿಗೆ ತಿಳಿದು, ಒಂದಕ್ಷರ ತಪ್ಪಿಲ್ಲದಂತೆ ಸ್ಪಷ್ಟವಾಗಿ ಓದಿದನು.

ಆ ಪತ್ರದಲ್ಲಿ ಇದ್ದ ವಿಷಯ “ಸಿದ್ದಿ ಮಸೂರ್ ಖಾನ್ಗೆ” ಗಂಡು ಮಗು ಜನಿಸಿದೆ. ಮಗು ಮತ್ತು ತಾಯಿ ಚೆನ್ನಾಗಿದ್ದಾರೆ. ಎಂಬ ಶುಭ ಸಮಾಚಾರ ಇತ್ತು. ಇದನ್ನು ಕೇಳಿದ ನವಾಬನಿಗೆ ಸಂತೋಷವಾಯಿತು. ತಕ್ಷಣ ನವಾಬನು ಬಾಲಕ ವೆಂಕಣ್ಣನ ಬೆನ್ನು ತಟ್ಟಿ ಶಹಬಾಸ್ ಎಂದನು. ನೀನು ಏನು ಮಾಡಿಕೊಂಡಿದಿ ಎಂದು ಕೇಳಿದನು ವೆಂಕಣ್ಣ ದನ ಕಾಯುತ್ತಿದ್ದೇನೆ ಎಂದನು. ಈ ಕೆಲಸ ಬಿಟ್ಟು ನನ್ನ ಸೈನ್ಯದಲ್ಲಿ ಸೇರುವೆ ಯಂತೆ ಎಂದು ನವಾಬ ತನ್ನ ಜೊತೆಗೆ ಕರೆದುಕೊಂಡು ಹೋಗಿ ಸೈನ್ಯದಲ್ಲಿ ಸೇರಿಸಿ ದನು. ಒಮ್ಮೆ ವೆಂಕಣ್ಣನಿಗೆ ಯೋಚನೆ ಬಂದಿತು. ಅಕ್ಷರ ಜ್ಞಾನವಿಲ್ಲದ ನನಗೆ ಪತ್ರ ಓದಲು ಬಂದಿದ್ದು ರಾಯರ ಪವಾಡವೇ ಸರಿ. ಪತ್ರ ಓದಿದ್ದು ನೆನೆದರೆ ನಂಬಲು ಸಾಧ್ಯವಿಲ್ಲ. ನಾನು ಈಗಿಂದಲೇ ಓದು ಬರಹ ಕಲಿತು ವಿದ್ಯಾವಂತನಾಗಬೇಕು ಎಂದು ಯೋಚಿಸಿ, ಒಬ್ಬ ಗುರುವಿನ ಮೂಲಕ ವಿದ್ಯಾಭ್ಯಾಸವನ್ನು ಮಾಡಿದನು. ಅವನು ಎಷ್ಟು ಬುದ್ಧಿವಂತನಾದ ಎಂದರೆ, “ಸಿದ್ಧಿ ಮಸೂರ್ ಖಾನ್” ಸೈನಿಕನಾಗಿದ್ದ ವೆಂಕಣ್ಣನನ್ನು ತನ್ನ ಆಸ್ಥಾನದ “ದಿವಾನ” ನನ್ನಾಗಿ ಮಾಡಿಕೊಂಡನು. ಈ ರೀತಿ ದನ ಕಾಯುತ್ತಿದ್ದ ಬಡವೆಂಕಣ್ಣ ರಾಯರ ಕೃಪೆಯಿಂದ ಆದವಾನಿಯ ‘ನವಾಬನ’ ಆಸ್ಥಾನದಲ್ಲಿ ‘ದಿವಾನ’ನಾದನು.

ಓಂ ಶ್ರೀ ಗುರು ರಾಘವೇಂದ್ರಾಯ ನಮಃ!
ಓಂ ಶ್ರೀ ಗುರು ರಾಘವೇಂದ್ರಾಯ ನಮಃ!
ಓಂ ಶ್ರೀ ಗುರು ರಾಘವೇಂದ್ರಾಯ ನಮಃ!

ಓಂ ಶ್ರೀ ಗುರು ರಾಘವೇಂದ್ರಾಯ ನಮಃ!


------------------------ Hari Om -----------------------


 

Tuesday, August 25, 2026

ಯಜ್ಞೋಪವೀತ – (ಜನಿವಾರ) ---- Sacred Thread ( Janivara )

 

                                                                       Janivara

 

 

ಯಜ್ಞೋಪವೀತ – (ಜನಿವಾರ) ---- Sacred Thread 

 ( Janivara )


ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:

ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.

"ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ. ಮುಂಡನ ಹಾಗೂ ಪವಿತ್ರ ಜಲದಲ್ಲಿ ಸ್ನಾನ ಉಪನಯನ ಸಂಸ್ಕಾರದ ಅಂಗಗಳಾಗಿವೆ.

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಜನಿವಾರ ಹಳೆಯದಾದರೆ, ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.

ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿರುತ್ತದೆ.

ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಜೀವನ ಸಂಗಾತಿಗೆ ಮುಡಿಪಾಗಿರುತ್ತದೆ.ಕೆಲವೊಂದು ನಿಯಮಗಳನ್ನು ಪಾಲಿಸಬೇಕೇ ಬೇಡವೇ. ಬ್ರಹ್ಮಗಂಟು ಎಂದರೇನು? ಗಾಯತ್ರಿ ಮಂತ್ರ ಸೂರ್ಯ ದೇವ ಕೊಟ್ಟ ವೇದ ಮಾತೆ ಯಾ ಕೊಡುಗೆ ಏನು.


ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾಗಿದೆ. ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ. ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ. ಮೂರು ಪ್ರಮುಖ ಎಳೆಗಳಲ್ಲಿ ಒಂದೊಂದರಲ್ಲಿ ಪುನಃ ಮೂರು ಉಪ ಎಳೆಗಳಿರುತ್ತವೆ. ಹಾಗಾಗಿ ಒಟ್ಟು ಯಜ್ಞೋಪವೀತದಲ್ಲಿರುವ ಎಳೆಗಳು ಒಂಬತ್ತು. ಒಂದು ಮುಖ, ಎರಡು ಮೂಗಿನ ಹೊಳ್ಳೆಗಳು, ಎರಡು ಕಣ್ಣುಗಳು, ಎರಡು ಕಿವಿಗಳು, ಮಲ ಹಾಗೂ ಮೂತ್ರ ದ್ವಾರಗಳಿಂದ ಒಂದು ಶರೀರದ ರಚನೆಯಾಗುತ್ತದೆ. ಹಾಗೇ ಯಜ್ಞೋಪವೀತವೂ ಸಹ ಒಂಬತ್ತು ಎಳೆಗಳಿಂದ ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸ ಬೇಕು, ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡ ಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳ ಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ.

 

                                                                  Janivara Bundle

 

ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.

ಯಜ್ಞೋಪವೀತದ ಉದ್ದ ತೊಂಬತ್ತಾರು ಇಂಚುಗಳಷ್ಟಿರ ಬೇಕು. ಏಕೆಂದರೆ ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಅರವತ್ತ ನಾಲ್ಕು ಕಲೆಗಳನ್ನು ಹಾಗೂ ಮೂವತ್ತೆರಡು ವಿದ್ಯೆಗಳನ್ನು ಕಲಿಯುವ ಹಂಬಲವಿರ ಬೇಕು. ಆತ ಆ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ಅಂಗಗಳು, ಆರು ದರ್ಶನಗಳು, ಮೂರು ಸೂತ್ರ ಗ್ರಂಥಗಳು, ಒಂಬತ್ತು ಅರಣ್ಯಕಗಳನ್ನು ಸೇರಿಸಿದರೆ ಮೂವತ್ತೆರಡು ವಿದ್ಯೆಗಳಾಗುತ್ತವೆ. ವಾಸ್ತು ನಿರ್ಮಾಣ, ಚಿತ್ರಕಲೆ, ಸಾಹಿತ್ಯ, ಯಂತ್ರ ನಿರ್ಮಾಣ, ಆಭರಣ ತಯಾರಿಕೆ, ಕೃಷಿ ಜ್ಞಾನ ಮುಂತಾದವು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಈ ವಿದ್ಯೆಗಳನ್ನು ಕಲಿಯಲು ಪ್ರಯತ್ನಿಸ ಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ.

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. "ತತ್ಸವಿತುರ್ವರೇಣ್ಯಮ್” ಮೊದಲ ಚರಣ. "ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ". "ಧಿಯೋ ಯೋನಃ ಪ್ರಚೋದಯಾತ್”  ಮೂರನೇ ಚರಣ.

 

                                                                               PIC-1

 

ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ:

Mantra to be Recited during Wearing of Sacred Thread

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||

ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ


ಯಜ್ಞೋಪವೀತದ ನಿಯಮಗಳು:

Rules to be followed after wearing of Sacred Tread ( Janivara )

1) ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಎಡಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳ ಬೇಕು. ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ.


2) ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸ ಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸಬೇಕು.


3) ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.

4) ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯ ಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು.

 

                                                                           PIC-2

 
 

ಯಜ್ಞೋಪವೀತದ ವೈಜ್ಞಾನಿಕ ಮಹತ್ವ- Scientific Value of 

Yagnopavita

1) ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ ವಿಷಾಣುಗಳು ನಾಶಗೊಳ್ಳುತ್ತವೆ.

2) ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು
ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು
ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.

3) ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.

4) ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.

5) ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.

6) ವ್ಯಕ್ತಿಯ ಎಡ ಬೆನ್ನಿನ ಭಾಗದಲ್ಲಿ ಹೊಟ್ಟೆಯ ಕಡೆ ಸಾಗುವ ಒಂದು ಪ್ರಾಕೃತಿಕ ರೇಖೆಯಿರುತ್ತದೆ. ಈ ರೇಖೆ ವಿದ್ಯುತ್ ಪ್ರವಾಹದಂತೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಯಜ್ಞೋಪವೀತವನ್ನು ಧರಿಸುವುದರಿಂದ ಈ ರೇಖೆಯ ಶಕ್ತಿ ಕಡಿಮೆಯಾಗುತ್ತದೆ. ಆಗ ವ್ಯಕ್ತಿಯ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು ನಿಯಂತ್ರಣವಾಗುತ್ತವೆ.

7) ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.

8) ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವಾಗ ಕಿವಿಯನ್ನು ಹಿಂಡಲಾಗುತ್ತಿತ್ತು. ಇದಕ್ಕೆ ಕಾರಣ ಕಿವಿಗೂ ಹಾಗೂ ಮೆದುಳಿಗೂ ಇರುವ ಸಂಪರ್ಕ. ಕಿವಿಯನ್ನು ಎಳೆದಾಗ ವಿದ್ಯಾರ್ಥಿಯ ಮೆದುಳು ಜಾಗೃತವಾಗುತ್ತಿತ್ತು. ವಿದ್ಯಾರ್ಥಿಯ ಆಲಸ್ಯತನ ದೂರವಾಗುತ್ತಿತ್ತು. ಹಾಗೇ ಯಜ್ಞೋಪವೀತವನ್ನೂ ಕಿವಿಯ ಮೇಲೆ ಹಾಕಿ ಕೊಂಡಾಗ ನಮ್ಮಲ್ಲಿರುವ ಆಲಸ್ಯತನ ದೂರಾಗಿ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ.

ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.


------------------ Hari Om -----------------

 

 
 

 
 

 

 

Sunday, August 23, 2026

ಶಾಕವ್ರತದಲ್ಲಿ ತಯಾರಿಸಿ ಸ್ವೀಕರಿಸಬಹುದಾದ ಕೆಲವು ಆಹಾರ ಪದಾರ್ಥಗಳು - ShakaVrita Foods

 

                                                                 Shaka Vrita Foods

 

ಶಾಕವ್ರತದಲ್ಲಿ ತಯಾರಿಸಿ ಸ್ವೀಕರಿಸಬಹುದಾದ ಕೆಲವು 

ಆಹಾರ ಪದಾರ್ಥಗಳು


Some food items that can be prepared and
consumed during the Shaka Vrata.


ಪಾಯಸ, ಸಿಹಿ ಭಕ್ಷ್ಯಗಳನ್ನು ತಯಾರಿಸುವಾಗ ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, ಕುಂಕುಮ ಕೇಸರಿ, ಯಾವುದೇ ತರದ ಬಣ್ಣ ಉಪಯೋಗಿಸುವಂತಿಲ್ಲ.ಒಗ್ಗರಣೆಗೆ ತೆಂಗಿನ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಉಪಯೋಗಿಸಬಹುದು.

ಉಪ್ಪಿನ ಕಾಯಿ - ಮೆಣಸಿನ ಖಾರ ಹಾಕದ, ಸಾಸಿವೆ ಮಸಾಲೆ ಹಾಕಿ ತಯಾರಿಸಿದ ಮಾವಿನಕಾಯಿ ಉಪ್ಪಿನ ಕಾಯಿ, ಮಾವಿನ ಕಾಯಿ ಕೆತ್ತೆಯ ಉಪ್ಪಿನ ಕಾಯಿ.

ಕೋಸಂಬರಿ - ಹೆಸರು ಬೇಳೆ ಕೋಸಂಬರಿ, ಹೆಸರು ಕಾಳು ಕೋಸಂಬರಿ, ಅರಳು ಕೋಸಂಬರಿ

ಚಟ್ಟಿ- ಎಳ್ಳು ಚಟ್ನಿ ಒಂದೆಲಗ (ಬ್ರಾಹ್ಮ ತುಳುವಿನಲ್ಲಿ "ತಿಮರೆ") ಸೊಪ್ಪಿನ ಚಟ್ನಿ ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪಿನ ಚಟ್ನಿ , ಉದ್ದಿನ ಬೇಳೆ ಚಟ್ನಿ , ಮಾವಿನ ಕಾಯಿ ಚಟ್ನ, ಮಾವಿನ ಹಣ್ಣಿನ ಗೊಜ್ಜು, ಮಾವಿನ ಹಣ್ಣಿನ ಸಾಸ್ಮಿ, ಉದ್ದಿನ ಬೇಳೆ ಉದ್ನೀಟ್

ಪಲ್ಯ - ಹೆಸರು ಕಾಳು ಪಲ್ಯ, ಅರಳು ಪಲ್ಯ,ಮಾವಿನ ಕಾಯಿ ಹುಳಿ ಪಲ್ಯ, ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪಿನ ಪಲ್ಯ, ಹೆಸರು ಬೇಳೆ ಪಲ್ಯ

ಚಿತ್ರಾನ- ಸಾಸಿವೆ ಚಿತ್ರಾನ್ನ, ಮಾವಿನ ಕಾಯಿ ಚಿತ್ರಾನ್ನ, ಕಡುಬು ಚಿತ್ರಾನ್ನ, ಶ್ಯಾವಿಗೆ ಚಿತ್ರಾನ್ನ

ತೊವ್ವೆ - ಹೆಸರು ಬೇಳೆ ತೊವ್ವೆ

ತಂಬುಳಿ - ಸಾಸಿವೆ ತಂಬುಳಿ, ಜೀರಿಗೆ ತಂಬುಳಿ, ಒಂದೆಲಗ (ಬ್ರಾಹ್ಮ ತುಳುವಿನಲ್ಲಿ "ತಿಮರೆ") ಸೊಪ್ಪಿನ ತಂಬುಳಿ, ಹೊನ್ನಂಗಣೆ ಸೊಪ್ಪಿನ ತಂಬುಳಿ, ಅಗಸೇ ಸೊಪ್ಪಿನ ತಂಬುಳಿ, ಜೀರಿಗೆ ತಂಬುಳಿ, ಎಳ್ಳು ತಂಬುಳಿ, ಉದ್ದಿನಬೇಳೆ ತಂಬುಳಿ, ಮಾವಿನ ಕಾಯಿ ತಂಬುಳಿ

ಸಾರು - ಕಾಳುಮೆಣಸಿನ (ಕರಿ ಮೆಣಸು) ಸಾರು, ಜೀರಿಗೆ ಸಾರು,ಉಕ್ಕು ತಿಳಿ ಸಾರು, ಹೆಸರು ಬೇಳೆ ಸಾರು, ಹೆಸರು ಕಾಳು ಸಾರು, ಜೀರಿಗೆ ಕಾಳುಮೆಣಸಿನ (ಕರಿ ಮೆಣಸು) ಸಾರು, ಕಟ್ಟಿ ಸಾರು

ಮೆಣಸ್ಕಾಯಿ - ಮಾವಿನ ಹಣ್ಣಿನ ಮೆಣಸ್ಕಾಯಿ,ಮಾವಿನ ಹಣ್ಣಿನ ಮಾಂಬಳದ ಮೆಣಸ್ಕಾಯಿ

ಹುಳಿ - ಹೆಸರು ಕಾಳು ಹುಳಿ, ಹೊನ್ನಂಗಣೆ ಸೊಪ್ಪಿನ ಹುಳಿ, ಅಗಸೆ ಸೊಪ್ಪಿನ ಹುಳಿ

 

                                                                      PIC-1

 

ಕರಿದ ತಿಂಡಿಗಳು - ಗೋಳಿ ಬಜೆ, ಉದ್ದಿನ ಬೇಳೆ ಬೋಂಡ, ಚಕ್ಕುಲಿ, ಗೋದಿ ಹಿಟ್ಟಿನ ತುಕ್ಕುಡಿ,ಅಕ್ಕಿ ಹಿಟ್ಟಿನ ತೆಂಗಾಲ್, ರವೆ ವಡೆ, ಗಟ್ಟಿ ವಡೆ, ಕಾಯಿ ವಡೆ, ಪೂರಿ

ಸಿಹಿ ಭಕ್ಷಗಳು - ಮನೋಹರ, ಅಕ್ಕಿ - ಉದ್ದಿನ ಬೇಳೆ ಮನೋಹರ, ತಟ್ಟಪ್ಪ, ಎಲೆಯಪ್ಪ, ಸಿಹಿ ಗುಳಿಯಪ್ಪ, ಹೆಸರು ಬೇಳೆ ಸುಕುನುಂಡೆ, ಅರಳು ಸುಕುನುಂಡೆ, ಹಾಲು ಬಾಯಿ, ಹೆಸರು ಹಿಟ್ಟಿನ ಲಾಡು, ಗೋದಿ ಹಿಟ್ಟಿನ ಲಾಡು, ಅರಳಿನ ಲಾಡು, ಎಳ್ಳು ಲಾಡು, ಮೋದಕ ,ಉಂಡೂಕ, ಗೋದಿ ಹಲ್ವ, ಮೈದಾ ಹಲ್ವ, ಸಿರಾ(ಕೇಸರಿ ಬಾತ್), ರವೆ ಹೋಳಿಗೆ, ರವೆ ಲಾಡು, ಕಾಯಿ ಹೋಳಿಗೆ, ಕಾಯಿ ಕಡುಬು, ಸಾಟ್, ಬಾದೂಷಹ, ಮಂಡಿಗೆ, ಪಾಕ ಚಿರೋಟಿ, ಚಿರೋಟಿ, ಮಾಲ್ಪುರಿ ಅತಿರಸ (ಅತ್ರಸ), ಕೊಬ್ಬರಿ ಮಿಠಾಯಿ

ಮಜ್ಜಿಗೆ ಹುಳಿ - ಪಾಪಟೆಕಾಯಿಯ ಮಜ್ಜಿಗೆ ಹುಳಿ, ಹೊನ್ನಂಗಣೆ ಸೊಪ್ಪಿನ ಮಜ್ಜಿಗೆ ಹುಳಿ

ಪಾಯಸಗಳು - ದಪ್ಪ ಅವಲಕ್ಕಿ ಪಾಯಸ, ಪರಡಿ ಪಾಯಸ, ಹಪ್ಪಳ (ಅಪ್ಪಿ) ಪಾಯಸ, ಅಕ್ಕಿ ಪಾಯಸ, ಹೆಸರು ಬೇಳೆ ಪಾಯಸ, ಶ್ಯಾವಿಗೆ ಪಾಯಸ, ಗೋದಿ ಕಡಿ ಪಾಯಸ, ರವೆ ಪಾಯಸ

ರಸಾಯನ - ಮಾವಿನ ಹಣ್ಣಿನ ರಸಾಯನ, ಮಾವಿನ ಹಣ್ಣಿನ ಮಾಂಬಳದ ರಸಾಯನ

ಇತರ ತಿಂಡಿಗಳು - ಸಿಹಿ ಅವಲಕ್ಕಿ, ಅರಳು ಪಂಚಕಜ್ಜಾಯ, ಗುಳಿಯಪ್ಪ,ಬರೀ ಅಕ್ಕಿಯ ನೀರು ದೋಸೆ, ಬರೀ ಅಕ್ಕಿಯ ಸಿಹಿಯಾದ ದೋಸೆ, ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆ (ಪುಂಡಿ ಗಟ್ಟಿ),ಅವಲಕ್ಕಿ ಒಗ್ಗರಣೆ, ರವೆ ದೋಸೆ,ಗೋದಿ ಹಿಟ್ಟಿನ ದೋಸೆ, ಗೋದಿ ಕಡಿ ದೋಸೆ, ಉದ್ದಿನ ಬೇಳೆ ಅಕ್ಕಿ ದೋಸೆ, ಶಾವಿಗೆ, ಶ್ಯಾವಿಗೆ ಕಾಯಿ ಹಾಲು ಶ್ಯಾವಿಗೆ ಚಿತ್ರಾನ್ನ, ಕಡುಬು, ಕಡುಬು ಚಿತ್ರಾನ್ನ, ಅಕ್ಕಿ ಮಜ್ಜಿಗೆ ಅಥವಾ ಮೊಸರು ಹಾಕಿ ಮಾಡಿದ ದೋಸೆ, ಅರಳಿನ ಉಪ್ಕರಿ , ಪೂರಿ, ಚಪಾತಿ, ತೆಂಗಿನಕಾಯಿ ಹಾಲು ಹಾಕಿದ ಗಂಜಿ, ಹೆಸರು ಬೇಳೆ ಗಂಜಿ, ತುಪ್ಪಾನ್ನ, ಕ್ಷೀರಾನ್ನ "

 

 

                                                                             PIC-2

 
 

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಹುದಾದ ಯೋಗ್ಯ ಪದಾರ್ಥಗಳು

ದ್ವಿದಳ ವ್ರತ ಕಾಲದಲ್ಲಿ ಕೆಳಗೆ ಕೊಟ್ಟಿರುವ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸ್ವೀಕರಿಸಬಹುದು.

ಗೆಡ್ಡೆ-ಗೆಣಸು (ಸುವರ್ಣ ಗೆಡ್ಡೆ, ಸಾಂಬ್ರಾಣಿ, ಸಿಹಿ ಗೆಣಸು, ಶುಂಠಿ, ಅರಶಿನ, ಆಲೂಗಡ್ಡೆ [ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಲೂಗಡ್ಡೆಯನ್ನು ಉಪಯೋಗಿಸುವುದಿಲ್ಲ, ಅರಶಿನ, ಅರಶಿನದ ಎಲೆ, ಬಾಳೆಹಣ್ಣು, ಬಾಳೆಕಾಯಿ, ಬಾಳೆದಿಂಡು, ಕಾಳು (ಕರಿ)ಮೆಣಸು, ತೆಂಗಿನಕಾಯಿ, ಜೀರಿಗೆ, ಅರಶಿನ ಪುಡಿ, ಎಳ್ಳು, ಗೋದಿ, ಗೋದಿಹಿಟ್ಟು, ರವೆ, ಬೆಲ್ಲ, ಸಕ್ಕರೆ , ಅಕ್ಕಿ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಮಾವಿನಕಾಯಿ, ಮಾವಿನಹಣ್ಣು, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿಯನ್ನು ಹುಣಸೆ ಹಣ್ಣಿನ ಬದಲು ಉಪಯೋಗಿಸಬಹುದು.

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಾರದ ನಿಷಿದ ಪದಾರ್ಥಗಳು

ಮೆಂತ್ಯ, ಕೊತ್ತಂಬರಿ, ಸಾಸಿವೆ, ಉದ್ದು, ಒಣಮೆಣಸು, ಉದ್ದಿನ ಬೇಳೆ, ಹೆಸರುಬೇಳೆ, ಹೆಸರು ಕಾಳು, ಕಡಲೆ, ಕಡಲೇಬೇಳೆ, ಹುರುಳಿ, ಅವರೆ, ತೊಗರಿ, ಅಲಸಂಡೆ, ಹುಣಸೇ ಹಣ್ಣು, ಏಲಕ್ಕಿ, ಲವಂಗ, ದಾಲ್ಕಿನ್ನಿ, ಗೋಡಂಬಿ, ದ್ರಾಕ್ಷಿ, ಬಹುಬೀಜವಿರುವ ತರಕಾರಿ, ಹಣ್ಣುಗಳು, ಯಾವುದೇ ಬಗೆಯ ಸೊಪ್ಪನ್ನು, ಜೇನು ತುಪ್ಪ, ಕಡೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ಪಾಮೋಲಿವ್ (ತಾಳ) ಎಣ್ಣೆ ಉಪಯೋಗಿಸಬಾರದು.ಇಂಗನ್ನು ಉಪಯೋಗಿಸಬಾರದು.


ಶಾಕವ್ರತದಲ್ಲಿ ಸ್ವೀಕರಿಸಬಹುದಾದ ಪದಾರ್ಥಗಳು

ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಇತರ ಅಷ್ಟ ಮಠಗಳಲ್ಲಿ ಅಗಸೆ( ಅತಸೀ) ಸೊಪ್ಪು, ತುಳಸೀ, ಹೊನ್ನಂಗಣೆ( ಪೊನ್ನಂಗಣೆ) ಸೊಪ್ಪು, ಬ್ರಾಹ್ಮ (ಒಂದೆಲಗ ಅಥವಾ ತಿಮರೆ) ಸೊಪ್ಪು, ಮಾವಿನ ಹಣ್ಣು, ಮಾವಿನ ಕಾಯಿ, ತೆಂಗಿನಕಾಯಿ, ಎಳ್ಳು, ಹೆಸರುಕಾಳು, ಹೆಸರುಬೇಳೆ, ಉದ್ದು, ಉದ್ದಿನ ಬೇಳೆ, ಸಾಸಿವೆ,ಜೀರಿಗೆ, ಕಾಳು(ಕರಿ)ಮೆಣಸು, ಪಾವಟೆಕಾಯಿ, ಗೋದಿ, ಗೋದಿಹಿಟ್ಟು, ರವೆ, ಅರಳು, ಅಕ್ಕಿ , ಬೆಲ್ಲ, ಸಕ್ಕರೆ ಉಪಯೋಗಿಸುವರು. ಹುಣಸೆ ಹಣ್ಣಿನ ಬದಲು ಮಾವಿನಕಾಯಿ, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿ ಉಪಯೋಗಿಸಬಹುದು. ಒಣಶುಂಠಿ, ಅಡಿಕೆ, ತಾಂಬೂಲವನ್ನು ಉಪಯೋಗಿಸಬಹುದು. ತೆಂಗಿನೆಣ್ಣೆ, ಎಳ್ಳೆಣ್ಣೆ ಉಪಯೋಗಿಸಬಹುದು

 

                                                                             PIC-3

 

 ಶಾಕವ್ರತದಲ್ಲಿ ಸ್ವೀಕರಿಸಬಾರದ ನಿಷಿಧ್ಧ ಪದಾರ್ಥಗಳು

 

ಬೇರಿಗೆ ಸಂಬಂಧಿಸಿದ ಗೆಡ್ಡೆ ಗೆಣಸುಗಳು, ಅರಶಿನ ಪುಡಿ, ಅರಶಿನ ಕೋಡು, ಶುಂಠಿ, ಸುವರ್ಣ ಗೆಡ್ಡೆ, ನೆಲಗಡಲೆ, ಸಿಹಿಗೆಣಸು, ಆಲೂಗಡ್ಡೆ, ಏಲಕ್ಕಿ ಇತ್ಯಾದಿ.ಎಲ್ಲಾ ತರಹದ ಸೊಪ್ಪುಗಳು- ಕರಿಬೇವು,ಕೊತ್ತಂಬರಿ ಸೊಪ್ಪು, ಹರಿವೆ ಸೊಪ್ಪು, ಮೆಂತೆಸೊಪ್ಪು ಇತ್ಯಾದಿ ತಂಬುಳಿಗೆ ಬಳಸುವ ಯಾವುದೇ ಕುಡಿ,ಬಿದಿರಿನ ಮೊಳಕೆ, ಬಾಳೆದಂಟು, ಹರಿವೆಸೊಪ್ಪಿನ ದಂಟು, ಲವಂಗ ಮೊದಲಾದ ಚಿಗುರುಗಳು ದಾ ಮೊದಲಾದ ಮರದ ತೊಗಟೆ, ಹೂವುಗಳು - ಕುಂಬಳದ ಹೂವು, ದಾಸವಾಳ ಹೂವು, ಕುಂಕುಮ ಕೇಸರಿ.ಎಲ್ಲಾ ತರದ ಫಲ ಹಣ್ಣುಗಳು - ಬಾಳೇ ಹಣ್ಣು, ಸೇಬು, ಕಿತ್ತಳೆ, ಮುಸಂಬಿ, ಅಂಜೂರ, ಲಿಂಬೇ ಹಣ್ಣು, ಹುಣಸೇ ಹಣ್ಣು, ಹಣ್ಣಿನ ಸಿಪ್ಪೆಗಳು ಇತ್ಯಾದಿ. ಎಲ್ಲಾ ತರದ ತರಕಾರಿ - ಕಾಯಿ ಪಲ್ಲೆಗಳು, ಜೇನು ತುಪ್ಪ, ಕಡ್ಲೆ ಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ತಾಳೆ ಎಣ್ಣೆ (ಪಾಮೋಲಿವ್) ಉಪಯೋಗಿಸ ಬಾರದು.ಇಂಗನ್ನು ಉಪಯೋಗಿಸ ಬಾರದು.


ಶ್ರಾವಣಮಾಸ ಶುಕ್ಷ ಪಕ್ಷದ ದ್ವಾದಶಿಯಿಂದ ಭಾದ್ರಪದ ಶುಕ್ಲ ಪಕ್ಷದ ಏಕಾದಶಿಯವರೆಗೆ ದಧಿ (ಮೊಸರಿನ) ವತವನ್ನು ಆಚರಿಸಬೇಕು.ದಧಿ ವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು [ಮೊಸರನ್ನ ಅಥವಾ ಮೊಸರಿನಿಂದ ತಯಾರಿಸಿದ ಇತರ ಯಾವುದೇ ಆಹಾರ ಪದಾರ್ಥಗಳು] ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸುವಂತಿಲ್ಲ. ಪಿತೃ ಕಾರ್ಯದಲ್ಲಿ ಮೊಸರನ್ನು ಅರ್ಪಿಸುವಂತಿಲ್ಲ. ಕೆನೆ ಭರಿತ ಮೊಸರನ್ನು ಕಡೆದಾಗ ಅದರಿಂದ ಬೆಣ್ಣೆಯನ್ನು ಬೇರ್ಪಡಿಸಿ ತೆಗೆದಾಗ ಉಳಿದ ಅಂಶವಾದ ಮಜ್ಜಿಗೆಯನ್ನು ಮಾತ್ರ ಸ್ವೀಕರಿಸಬೇಕು.ಮೊಸರಿಗೆ ನೀರನ್ನು ಬೆರೆಸಿ ಅಥವಾ ಗಟ್ಟಿ ಮೊಸರನ್ನು ಚೆನ್ನಾಗಿ ಕಲಕಿ ಅಥವಾ ಮೊಸರಿಗೆ ದರ್ಬೆಯನ್ನು ಹಾಕಿ ಕಡೆದಂತೆ ಮಾಡಿ ಅಥವಾ ಕಡೆಗೋಲನ್ನು ಮೊಸರಿನಲ್ಲಿ ಮುಳುಗಿಸಿ ಕಡೆದು ಬೆಣ್ಣೆಯನ್ನು ಬೇರ್ಪಡಿಸದೇ ಮಜ್ಜಿಗೆಯೆಂದು ಉಪಯೋಗಿಸುವುದು - ಇದ್ಯಾವುದೂ ಮಜ್ಜಿಗೆಯಾಗುವುದಿಲ್ಲ.

ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಮೊಸರನ್ನು ದೇವರಿಗೆ ಸಮರ್ಪಿಸಿ ದಧಿ ವ್ರತವನ್ನು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಸಮರ್ಪಿಸಬೇಕು.


ಕ್ಷೀರ ವ್ರತದ ಆಚರಣೆ

ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಅಶ್ವಯುಜ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಕ್ಷೀರ [ಹಾಲಿನ] ವ್ರತವನ್ನು ಆಚರಿಸಬೇಕು.ಕ್ಷೀರ ವ್ರತ ಕಾಲದಲ್ಲಿ ಹಾಲನ್ನು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು [ಹಾಲು ಪಾಯಸಕೀರಾನ್ನ, ಹಾಲಿನಿಂದ ತಯಾರಿಸಿದ ಸಿಹಿ ಭಕ್ಷ್ಯ, ಪಾಯಸ ಅಥವಾ ಇತರ ಯಾವುದೇ ಆಹಾರ ಪದಾರ್ಥಗಳು] ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸುವಂತಿಲ್ಲ.


ಪಿತೃ ಕಾರ್ಯದಲ್ಲಿ ಹಾಲನ್ನು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು ಅರ್ಪಿಸುವಂತಿಲ್ಲ. ಕೆಲವರು ಹಾಲನ್ನು ಬೇರೆ ರೀತಿಯಿಂದ ಚಹ, ಕಾಫೀ, ಕಷಾಯ ಮಾಡಿ ಕುಡಿಯುವರು. ಹೀಗೆ ಉಪಯೋಗಿಸುವಂತಿಲ್ಲ.

ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಕ್ಷೀರಾನ್ನವನ್ನು ದೇವರಿಗೆ ಸಮರ್ಪಿಸಿ ಕ್ಷೀರ ವ್ರತವನ್ನು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಸಮರ್ಪಿಸಬೇಕು.


------------------ Hari Om ------------------



 

 
 

 

 

Saturday, August 22, 2026

ಶಬರಿ -- Shabari

 

                                                                       Shabari

 

ಶಬರಿ -- Shabari


ಅದೊಂದು ದಟ್ಟ ಅಡವಿ.ಅಲ್ಲಿ ಒಂದು ಆಶ್ರಮ.ಒಬ್ಬಳು ಸಾಧಕಿ. ತನ್ನ ಸಣ್ಣ ವಯಸ್ಸಿನಿಂದ ಭಗವಂತನ ದರ್ಶನಕ್ಕಾಗಿ ಕಾದವಳು. ಅವಳಿಗೊಬ್ಬ ಗುರು .


ಗುರುವಿನ ಮಾತಿನಂತೆ ಭಗವಂತನಿಗೋಸ್ಕರ ಜೀವನ ಪೂರ್ತಿ ಕಾಯುವಿಕೆ. ಬಹಳ ವರ್ಷಗಳು ಉಳಿದವು. ಸಾಧಕಿ ಮುದುಕಿಯಾದಳು. ಹಣ್ಣು ಹಣ್ಣು ಆದ ಬಾಗಿದ ದೇಹ.ಇಂದಲ್ಲ ,ನಾಳೆ ,ನನ್ನ ಸ್ವಾಮಿ ಬರುವ.ನನ್ನ ಗುರುಗಳ ಮಾತು ಹುಸಿಯಾಗದು ಅನ್ನುವ ನಂಬಿಕೆ. ಮತ್ತು ಕಾಯುವಿಕೆ.
ಕೊನೆಗೊಮ್ಮೆ ಅವಳ ಜಾಗಕ್ಕೆ ಅವಳ ಸ್ವಾಮಿ ಬಂದ. ಬಂದು ಅವಳು ಕೊಟ್ಟ ಹಣ್ಣು ತಿಂದು,ಅವಳನ್ನು ಉದ್ದಾರ ಮಾಡಿದವ ಸೀತಾಪತಿಯಾದ ಶ್ರೀ ರಾಮಚಂದ್ರ ದೇವರು. ಹಣ್ಣಿನ ಮೂಲಕ ತನ್ನ ಜೀವನವನ್ನು ತನ್ನನ್ನು ಸಮರ್ಪಣೆ ಮಾಡಿಕೊಂಡು ಉದ್ದಾರವಾದ ಆ ಮಹಾತಾಯಿ ಬೇರೆ ಯಾರು ಅಲ್ಲ ಅವಳೇ ಶಬರಿ. ಶ್ರೀರಾಮಚಂದ್ರ ದೇವರ ಸೇವಾಭಾಗ್ಯ ಪಡೆದ ಶಬರಿಯು ನಮಗಿಂತ ಸಾವಿರ ಪಟ್ಟು ಉತ್ತಮಳು. ಇಷ್ಟು ಕತೆ ಎಲ್ಲಾ ರಿಗು ಗೊತ್ತು.

 

                                                Shabari with Lord Rama & Lakshmana


 
ಶ್ರೀ ಮದ್ ರಾಮಾಯಣದ ಈ ಕತೆಯ ಸಾರಾಂಶ ಇಷ್ಟೇ


ಭಗವಂತನ ಬಳಿ ಹೋಗುವುದು ನಮಗೆಲ್ಲ ಅಸಾಧ್ಯ.
ಹೇಗೆ ಮಗು ತಾಯಿಗೊಸ್ಕರ ಕಾಯುತ್ತಾ ಇರುವಾಗ ಅದರ ಬಳಿ ತಾಯಿ ಓಡೋಡಿ ಬರುವಳೋ,
ಅದೇ ರೀತಿ ಭಗವಂತನ ಗೊಸ್ಕರವಾಗಿ ನಾವು ಕಾಯ್ದರೆ, ಅವನು ಓಡೋಡಿ ಬರುವ.
ಅವನಿಗಾಗಿ ನಮ್ಮ ಜೀವನ ಮುಡಿಪಾಗಿರಲಿ.


ಚದುರೆ ಶಬರಿಯಿತ್ತ ಬದರಿಯ ಫಲವನು| ಮುದದಿ ಸೇವಿಸಿದ ರಾಮ ಹರೇ||
ರಾಮ ರಾಮ ಎಂದು ಪ್ರೇಮದಿ ಭಜಿಪರ| ಕಾಮಿತ ಫಲದ ಶ್ರೀ ರಾಮ ಹರೇ||
ಪ್ರೇಮದಿ ಭಕ್ತರ ಪಾಲಿಪ| ಶ್ರೀ ವರದೇಶ ವಿಠ್ಠಲ ಶೀಕೃಷ್ಣ ಹರೇ||
ರಾಮ ಹರೇ ಹರೇ ರಾಮ ಹರೇ| ಕೃಷ್ಣ ಹರೇ| ಹರೇ ಕೃಷ್ಣ ಹರೇ|


ಶ್ರೀ ಕಪಿಲಾಯ ನಮಃ


ಶ್ರೀ ಕೃಷ್ಣಾರ್ಪಣ ಮಸ್ತು

--------------------- Hari Om -------------------