Monday, October 7, 2024

Navaratri Vrita -- Fasting types & its Rules & Benefits

 

ನವರಾತ್ರಿ ನವ ದಿನಗಳವರೆಗೆ ವ್ರತ ಆಚರಿಸುವುದು ಹೇಗೆ..? ಹೀಗಿದೆ 

ನೋಡಿ ನಿಯಮ..!

How to observe fasting & its Rules during Nine (9) days of Navaratri
 
 
Navaratri Vrita & Fasting
 

ನವರಾತ್ರಿಯ ಹಬ್ಬವನ್ನು ಸ್ವಚ್ಛತೆ ಮತ್ತು ಪರಿಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗಿದೆ. ನವರಾತ್ರಿಯ ಉಪವಾಸದಲ್ಲಿ ನಿಯಮಗಳು ಮತ್ತು ಸಂಯಮವನ್ನು ಅನುಸರಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ನವರಾತ್ರಿಯ ಉಪವಾಸಕ್ಕಾಗಿ ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ.

 

ನವರಾತ್ರಿಯ ಉಪವಾಸವನ್ನು ಯಾರು ಬೇಕಾದರೂ ಮಾಡಬಹುದು, ಆದರೆ 9 ದಿನಗಳ ಕಾಲ ಉಪವಾಸ ಮಾಡುವುದು ಹೇಗೆ ಎಂದು ಕೆಲವು ಪ್ರಮುಖ ವಿಷಯಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

 

ನವರಾತ್ರಿಯ ಎಲ್ಲಾ ದಿನ ಉಪವಾಸ ವ್ರತ ಆಚರಿಸಲು ನಿಯಮಗಳಿದ್ದರೂ, ಎಲ್ಲಾ ದಿನಗಳಲ್ಲಿ ಉಪವಾಸ ವ್ರತ ಮಾಡಲಾಗದವರು ಅಥವಾ ಅವರಲ್ಲಿ ಅಷ್ಟು ಶಕ್ತಿಯಿಲ್ಲದಿದ್ದರೂ, ಈ ಆಯ್ಕೆಗಳನ್ನು ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ.

 

                                                                     
 

                                                                                Pic -1

 

ಸಪ್ತರಾತ್ರ ಉಪವಾಸ

ಮೊದಲ ವಿಧವನ್ನು ಸಪ್ತರಾತ್ರ ಉಪವಾಸ ಎಂದು ಹೇಳಲಾಗುತ್ತದೆ. ಈ ಉಪವಾಸವನ್ನು ಪ್ರತಿಪದೆಯಿಂದ ಸಪ್ತಮಿಯವರೆಗೆ ಆಚರಿಸಲಾಗುತ್ತದೆ. ಈ ರೀತಿಯಾಗಿ ಉಪವಾಸ ಮಾಡುವ ಮೂಲಕ, ಒಬ್ಬರು ಸಂಪೂರ್ಣ ಫಲಿತಾಂಶಗಳನ್ನು ಪಡೆಯುತ್ತಾರೆ.

ಏಕಭುಕ್ತ ಉಪವಾಸ

ಯಾರಿಗೆ 9 ದಿನಗಳವರೆಗೆ ಸಂಪೂರ್ಣ ಉಪವಾಸವನ್ನು ಆಚರಿಸಲು ಸಾಧ್ಯವಿಲ್ಲವೋ ಅವರು ಪಂಚಮಿಯಂದು ಮಾತ್ರ ಏಕಭುಕ್ತ ಉಪವಾಸವನ್ನು ಮಾಡಬಹುದು. ಈ ಉಪವಾಸದಲ್ಲಿ, ನೀವು ಒಂದು ಸಮಯದಲ್ಲಿ ಒಂದು ಊಟ ಮಾಡಬಹುದು.

ವಕ್ತವ್ರತ ಉಪವಾಸ

ವಕ್ತವ್ರತ ಉಪಾಸ ವ್ರತ ಅಂದರೆ ಭೋಜನದೊಂದಿಗೆ ಉಪವಾಸವನ್ನು ಷಷ್ಠಿಯಂದು ಮತ್ತು ಅಯಾನಿತ ಉಪವಾಸವನ್ನು ಸಪ್ತಮಿಯಂದು ಮಾಡಬಹುದು. ಇದರರ್ಥ ವ್ಯಕ್ತಿಯು ಪೂಜೆಯ ನಂತರ ಆಹಾರವನ್ನು ತೆಗೆದುಕೊಳ್ಳಬಹುದು.

ತ್ರಿರಾತ್ರ ಉಪವಾಸ

ಎಲ್ಲಾ ದಿನ ಉಪವಾಸ ವ್ರತವನ್ನು ಆಚರಿಸಲು ಸಾಧ್ಯವಾಗದ ಕೆಲವರು ಸಪ್ತಮೀ, ಅಷ್ಟಮೀ ಮತ್ತು ನವಮೀ ದಿನಗಳಂದು ಉಪವಾಸವನ್ನು ಆಚರಿಸಬಹುದು. ಇದನ್ನು ತ್ರಿರಾತ್ರ ವ್ರತ ಎಂದು ಕರೆಯಲಾಗುತ್ತದೆ.

ಯುಗ್ಮರಾತ್ರ ಉಪವಾಸ


ಪ್ರತಿಪದೆ ಮತ್ತು ಅಷ್ಟಮೀ ಉಪವಾಸ ವ್ರತ ಆಚರಿಸುವುದನ್ನು ಯುಗ್ಮರಾತ್ರ ಉಪವಾಸಗಳು ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಉಪವಾಸದ ಆರಂಭ ಮತ್ತು ಅಂತ್ಯವನ್ನು ಮಾತ್ರ ಆಚರಿಸುವ ವ್ರತವನ್ನು ಏಕರಾತ್ರ ಉಪವಾಸ ಎಂದು ಕರೆಯಲಾಗುತ್ತದೆ.

 

                                                                          Pic -2

 

 

ವ್ರತಧಾರಿಗಳಿಗೆ ವ್ರತದ ನಿಯಮಗಳು


ಉಪವಾಸ ವ್ರತ ಆಚರಿಸುವ ವ್ಯಕ್ತಿಯು ಹಾಸಿಗೆಯ ಬದಲು ನೆಲದ ಮೇಲೆ ಮಲಗಬೇಕು. ನಿಮಗೆ ನೆಲದ ಮೇಲೆ ಮಲಗಲು ಸಾಧ್ಯವಾಗದಿದ್ದರೆ, ನೀವು ಮರದ ಹಲಗೆಯ ಮೇಲೆ ಮಲಗಬಹುದು.



ವ್ರತಧಾರಿಗಳು ಇವುಗಳನ್ನು ಸೇವಿಸಬಹುದು


ನವರಾತ್ರಿಯಂದು ಉಪವಾಸ ವ್ರತವನ್ನು ಮಾಡುವವರು ಹೆಚ್ಚು ಆಹಾರವನ್ನು ಸೇವಿಸಬಾರದು. ನಿಮಗೆ ಹಣ್ಣುಗಳು ಅಥವಾ ಸ್ವಲ್ಪ ಬೇಕಾದರೆ, ನೀವು ಹುರುಳಿಯನ್ನು ಆಹಾರದಲ್ಲಿ ಬಳಸಬಹುದು.



ಬ್ರಹ್ಮಚರ್ಯವನ್ನು ಅನುಸರಿಸಿ


ಉಪವಾಸ ಆಚರಿಸುವ ವ್ಯಕ್ತಿಯು ಬ್ರಹ್ಮಚರ್ಯವನ್ನು ಆಚರಿಸಬೇಕು. ಇದರೊಂದಿಗೆ, ನಿಮ್ಮ ನಡವಳಿಕೆಯಲ್ಲಿ ಕ್ಷಮೆ, ಉದಾರತೆ ಮತ್ತು ಉತ್ಸಾಹದ ಭಾವನೆ ಇರಬೇಕು. ಕಾಮ, ಕೋಪ, ದುರಾಸೆ ಮತ್ತು ಬಾಂಧವ್ಯದಿಂದ ದೂರವಿರಬೇಕು.



ನಡವಳಿಕೆ ಹೀಗಿರಬೇಕು


ಉಪವಾಸ ಆಚರಿಸುವ ವ್ಯಕ್ತಿಯು ಸುಳ್ಳು ಹೇಳುವುದನ್ನು ತಪ್ಪಿಸಬೇಕು ಮತ್ತು ಸತ್ಯವನ್ನು ಅನುಸರಿಸಬೇಕು. ಮನಸ್ಸನ್ನು ಮಿತವಾಗಿ ಇಟ್ಟುಕೊಳ್ಳಬೇಕು. ಯಾರೊಂದಿಗೂ ಅವಾಚ್ಯ ಶಬ್ದಗಳನ್ನು ಮಾತನಾಡುವುದನ್ನು ತಪ್ಪಿಸಿ.



ಇವುಗಳನ್ನು ಸೇವಿಸಬೇಡಿ


ಉಪವಾಸದ ಸಮಯದಲ್ಲಿ ಹೊರಗಿನ ಪದಾರ್ಥಗಳು ಮತ್ತು ಗುಟ್ಕಾ, ತಂಬಾಕು ಮತ್ತು ಮಸಾಲೆಯುಕ್ತ ಆಹಾರವನ್ನು ಎಂದಿಗೂ ಸೇವಿಸಬಾರದು.

 

 

                                                          Navaratriya Durga Mata
 

 

ನವರಾತ್ರಿ ಉಪವಾಸದ ಪ್ರಯೋಜನಗಳು -- Uses of Navaratri Fasting


ಗ್ರಂಥಗಳಲ್ಲಿ ನವರಾತ್ರಿಯ ಮಹತ್ವವನ್ನು ಪರಿಗಣಿಸಲಾಗಿದೆ. ನಿಯಮಗಳನ್ನು ಪಾಲಿಸದೆ ಉಪವಾಸ ಆಚರಿಸುವ ವ್ಯಕ್ತಿಯು ಅನಾರೋಗ್ಯದಿಂದ ಮತ್ತು ಮಕ್ಕಳಿಲ್ಲದೆ ಉಳಿಯುತ್ತಾನೆ ಎಂದು ನಂಬಲಾಗಿದೆ.


ಅದೇ ಸಮಯದಲ್ಲಿ, ಪೂರ್ಣ ಭಕ್ತಿಯಿಂದ ಉಪವಾಸ ಮಾಡುವ ವ್ಯಕ್ತಿ, ತಾಯಿ ಭಗವತಿಯ ಅನುಗ್ರಹವನ್ನು ಪಡೆಯುತ್ತಾರೆ ಮತ್ತು ಅವರ ಎಲ್ಲಾ ಆಸೆಗಳು ಶೀಘೃದಲ್ಲೇ ಈಡೇರುವಂತಾಗುತ್ತದೆ.


------------ Hari om -----------

 



 

Sunday, October 6, 2024

Navaratriya - Nava Durgas

 

ನವದುರ್ಗೆಯರಲ್ಲಿದೆ ನವಗ್ರಹ ಭಾವ -- Navaratriya - Nava 

Durgas

Navagraha Bhava is present in Navadurga devi's

 


 
                                                                 Nava Durga Devis

 

ನವರಾತ್ರಿಯ ಆಯಾ ದಿನಗಳಲ್ಲಿ ಆಯಾ ಬಣ್ಣದ ವಸ್ತ್ರವನ್ನು ಧರಿಸಿ ಆಯಾ ಗ್ರಹಕ್ಕೆ ಹಾಗೂ ಆಯಾದೇವಿಗೆ ತಕ್ಕಂತೆ ಆರಾಧನೆ ಮಾಡಿ ನೈವೇದ್ಯವನ್ನು ಇಡುವುದರಿಂದ ಜಗನ್ಮಾತೆಯ ಕೃಪೆ ಉಂಟಾಗುತ್ತದೆ.


ಶೈಲಪುತ್ರೀ:


ಶೈಲರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಸುಶೋಭಿತವಾಗಿದೆ.

ನವರಾತ್ರಿಯ ಮೊದಲನೇ ದಿನ ಇವಳ ಉಪಾಸನೆಯನ್ನು ಮಾಡಲಾಗುತ್ತದೆ. ಈ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸಿರುತ್ತಾರೆ. ಇಲ್ಲಿಂದಲೇ ಅವರ ಯೋಗಸಾಧನೆಯು ಪ್ರಾರಂಭವಾಗುತ್ತದೆ. ಅಂದಿನ ಗ್ರಹ - ಚಂದ್ರ, ನೈವೇದ್ಯ – ಮುದ್ಗಾನ್ನ.


ಬ್ರಹ್ಮಚಾರಿಣಿ:


ಬ್ರಹ್ಮ ಎಂದರೆ ತಪಸ್ಸು. ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಆಚರಿಸುವವಳು ಎಂದರ್ಥ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ.


ದೇವಿ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಬಹಳ ಕಠಿಣವಾದ ತಪಸ್ಸನ್ನು ಮಾಡಿದಳು. ಇಂತಹ ಕಠಿಣ ತಪಸ್ಸಿನ ಕಾರಣ ಇವಳನ್ನು ಬ್ರಹ್ಮಚಾರಿಣಿ ಎಂದು ಕರೆಯಲಾಯಿತು. ಬ್ರಹ್ಮಚಾರಿಣಿಯ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿ ಆಗುತ್ತದೆ. ಜೀವನದ ಕಠಿಣ ಸಂದರ್ಭದಲ್ಲಿಯೂ ಅವನ ಮನಸ್ಸು ಕರ್ತವ್ಯ ಪಥದಿಂದ ವಿಚಲಿತವಾಗುವುದಿಲ್ಲ.

ನವರಾತ್ರಿಯ ಎರಡನೆಯ ದಿನ ಇವಳ ಪೂಜೆಯಿಂದ ಸಾಧಕನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿತವಾಗುತ್ತದೆ. ಅಂದಿನ ಗ್ರಹ - ಕುಜ, ನೈವೇದ್ಯ - ಮೊಸರನ್ನ.



ಚಂದ್ರಘಂಟಾ:


ನವರಾತ್ರಿಯ ಮೂರನೇ ದಿನ ಆರಾಧಿಸುವ ದುರ್ಗಿ ಚಂದ್ರಘಂಟಾ. ಮಹಾಗೌರಿ ಶಿವನನ್ನು ಮದುವೆಯಾದ ಮೇಲೆ ಅವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಇದರಿಂದ ಈಕೆಯೇ ಚಂದ್ರಘಂಟಾ ದೇವಿಯಾಗುತ್ತಾಳೆ. ಈಕೆಯ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತದೆ. ಈಕೆಯನ್ನು ಆರಾಧಿಸುವವರ ಮನಸ್ಸು ಮಣಿಪೂರ ಚಕ್ರದಲ್ಲಿ ಸ್ಥಿತವಾಗಿ ಸೌಮ್ಯತೆ, ವಿನಮ್ರತೆಗಳ ವಿಕಾಸವುಂಟಾಗಿ ಪರಾಕ್ರಮಿ ಹಾಗೂ ನಿರ್ಭಯರಾಗುವರು. ಅಂದಿನ ಗ್ರಹ - ಶುಕ್ರ, ನೈವೇದ್ಯ - ಸಿಹಿ ಪೊಂಗಲ್‌.



                                                                       another Picture

 

ಕೂಷ್ಮಾಂಡ:


'ಕು' ಎಂದರೆ ಸ್ವಲ್ಪ, ಉಷ್ಮ ಎಂದರೆ ಬಿಸಿ, ಅಂಡ ಎಂದರೆ ಅಂತರಿಕ್ಷೀಯ ಮೊಟ್ಟೆ. ಅಂದರೆ ಬ್ರಹ್ಮಾಂಡದ ಸೃಷ್ಟಿಕರ್ತಳು ಎಂದರ್ಥ. ಸೃಷ್ಟಿಯ ಮೊದಲಲ್ಲಿ ಎಲ್ಲೆಲ್ಲೂ ಕತ್ತಲಿದ್ದು ತಾಯಿಯು ಸೂರ್ಯ ಮಂಡಲದಲ್ಲಿದ್ದು ಎಲ್ಲೆಲ್ಲೂ ಬೆಳಕು ಹರಸಿದಳು.


ನವರಾತ್ರಿಯ ನಾಲ್ಕನೇ ದಿನ ಪೂಜಿಸಲ್ಪಡುವ ದೇವಿ ಕೂಷ್ಮಾಂಡ. ಅಷ್ಟಭುಜವನ್ನು ಹೊಂದಿದ್ದಾಳೆ. ಈಕೆಯ ಉಪಾಸನೆಯಿಂದ ಮನಸ್ಸು ಅನಾಹತ ಚಕ್ರದಲ್ಲಿ ನೆಲೆಸಿ, ಪೂಜಿಸಿದವರಿಗೆ ಶೋಕನಾಶ, ಆಯುರಾರೋಗ್ಯ, ಐಶ್ವರ್ಯಾದಿಗಳ ವೃದ್ಧಿ, ಯಶೋಕೀರ್ತಿಗಳ ಲಭ್ಯತೆ, ಪರಮಪದ ಪ್ರಾಪ್ತಿಯಾಗುತ್ತದೆ. ಅಂದಿನ ಗ್ರಹ - ರವಿ, ನೈವೇದ್ಯ – ಘೃತಾನ್ನ.


ಸ್ಕಂದಮಾತಾ:


ದೇವಿಯು ಕುಮಾರ ಕಾರ್ತಿಕೇಯನಿಗೆ ಜನ್ಮ ಕೊಟ್ಟಿದ್ದರಿಂದ ಸ್ಕಂದಮಾತಾ ಎಂಬ ಹೆಸರು ಬಂತು. ಸ್ಕಂದಮಾತೆಗೆ ನಾಲ್ಕು ಭುಜಗಳಿರುತ್ತವೆ. ಇವಳು ಬಲಗಡೆಯ ಮೇಲಿನ ಕೈಯಿಂದ ಸ್ಕಂದನನ್ನು ತೊಡೆಯಲ್ಲಿ ಹಿಡಿದಿರುವಳು. ಇವಳು ಸಿಂಹವಾಹಿನಿ.

ನವರಾತ್ರಿ ಐದನೆ ದಿನ ಪೂಜೆಗೊಳ್ಳುವ ಸ್ಕಂದಮಾತೆಯನ್ನು ಆರಾಧಿಸುವವರ ಮನಸ್ಸು ವಿಶುದ್ಧ ಚಕ್ರದಲ್ಲಿ ನೆಲೆಗೊಂಡು ಐಹಿಕ ಬಂಧನಗಳಿಂದ ಮುಕ್ತನಾಗುತ್ತಾನೆ. ಇವರಿಗೆ ಅಲೌಕಿಕ ತೇಜಸ್ಸು ಹಾಗೂ ಶಾಂತಿ ಲಭಿಸುವುದು. ಅಂದಿನ ಗ್ರಹ-ಬುಧ, ನೈವೇದ್ಯ- ಪಾಯಸಾನ್ನ.


ಕಾತ್ಯಾಯನಿ:


ಮಹರ್ಷಿ ಕಾತ್ಯಾಯನರು ಭಗವತಿ ಪರಾಂಬಿಕೆಯ ಉಪಾಸನೆ ಮಾಡುತ್ತಾ ಅನೇಕ ವರ್ಷಗಳವರೆಗೆ ಕಠಿಣ ತಪಸ್ಸನ್ನಾಚರಿಸಿದರು. ಅವರ ಪ್ರಾರ್ಥನೆಯಂತೆ ದೇವಿಯು ಕಾತ್ಯಾಯನಿಯಾಗಿ ಜನಿಸಿದಳು. ಸಿಂಹವಾಹಿನಿಯಾಗಿ ಬಂಗಾರ ವರ್ಣವನ್ನು ಹೊಂದಿದ

ಈಕೆಯನ್ನು ನವರಾತ್ರಿಯ ಆರನೇ ದಿನ ಪೂಜಿಸುತ್ತಾರೆ. ಅಂದು ಸಾಧಕನ ಮನಸ್ಸು ಆಜ್ಞಾಚಕ್ರದಲ್ಲಿ ನೆಲೆಗೊಳ್ಳುತ್ತದೆ. ಇದರಿಂದ ಚತುರ್ವಿಧ ಫಲಪುರುಷಾರ್ಥಗಳ ಪ್ರಾಪ್ತಿಯಾಗುವುದರೊಂದಿಗೆ ರೋಗ, ಶೋಕ, ಭಯ, ಸಂತಾಪ ದೂರಾಗುತ್ತವೆ ಹಾಗೂ ಪೂರ್ವಜನ್ಮಕೃತ ಪಾಪನಾಶವಾಗುತ್ತವೆ. ಅಂದಿನ ಗ್ರಹ-ಗುರು, ನೈವೇದ್ಯ- ಹುಗ್ಗಿ.


ಕಾಲರಾತ್ರಿ:


ತಾಯಿಯ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ಈಕೆಯ ವಾಹನ ಗಾರ್ಧಭ. ರಕ್ತಬೀಜಾಸುರನನ್ನು ಕೊಲ್ಲುವ ಸಲುವಾಗೇ ಮಹಾಕಾಳಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನ ರಕ್ತ ಕೆಳಗೆ ಬೀಳದಂತೆ ಅದನ್ನು ಕುಡಿಯುತ್ತಿದ್ದ ತಾಯಿ ಮದದಿಂದ ನರ್ತಿಸುತ್ತಿರುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರವಷ್ಟೇ ಆಕೆಗೆ ಸಹಜ ಸ್ಥಿತಿಗೆ ಬರುವುದು.

ಈಕೆಯನ್ನು ನವರಾತ್ರಿಯ ಏಳನೇ ದಿನ ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳ ನಾಶವಾಗಿ ಪುಣ್ಯಲೋಕ ಪ್ರಾಪ್ತಿಯುಂಟಾಗುವುದು. ಯಾವ ರೀತಿಯ ಭಯವೂ ಆಗಲಾರದು. ಭೂತ, ಪ್ರೇತ, ಪಿಶಾಚಿಗಳೆಲ್ಲವೂ ಓಡಿಹೋಗುತ್ತವೆ. ಅಂದಿನ ಗ್ರಹ-ಶನಿ, ನೈವೇದ್ಯ- ಎಲ್ಲಾ ರೀತಿಯ ಅನ್ನ, ಎರಿಯಪ್ಪ.


ಮಹಾಗೌರಿ:


ಪಾರ್ವತಿಯು 8 ರಿಂದ 16ನೇ ವಯಸ್ಸಿನವಳಾಗಿದ್ದಾಗ ತುಂಬಾ ಸುಂದರಿಯೂ ಅತೀ ಗೌರವರ್ಣದವಳೂ ಆಗಿದ್ದಳು. ಶಿವನನ್ನು ಪತಿಯಾಗಿ ಪಡೆಯಲು ಘೋರ ತಪಸ್ಸನ್ನು ಆಚರಿಸಿದ ಕಾರಣ ಶರೀರ ಮಾಸುತ್ತದೆ. ಶಿವನ ಕೃಪೆಯಿಂದ ಸ್ವರ್ಣದಂತೆ ಗೌರವ ವರ್ಣವನ್ನು ಮರಳಿ ಪಡೆಯುತ್ತದೆ. ಸ್ವರ್ಣಗೌರಿಯಾಗುತ್ತಾಳೆ.


ನವರಾತ್ರಿಯ ಎಂಟನೇ ದಿನ ಮಹಾಗೌರಿಯನ್ನು ಆರಾಧಿಸುತ್ತಾರೆ. ಇವಳು ವೃಷಭವಾಹಿನಿ. ಈಕೆಯ ಉಪಾಸನೆಯಿಂದ ಸಾಧಕನ ಮನಸ್ಸು ಸಹಸ್ರಾರದ ಬ್ರಹ್ಮರಂಧ್ರದಲ್ಲಿ ನೆಲೆಸುತ್ತದೆ. ಸಹಸಾರ ಪದ್ಮದ ಸಾವಿರದಳಗಳ ಮಧ್ಯೆ ಸರ್ವವರ್ಣ ಶೋಭಿತಳಾದ ದೇವಿಯ ದರ್ಶನದಿಂದ ಸಾಧಕನು ಸರ್ವಬಂಧದ ವಿಮುಕ್ತಿ ಹೊಂದುತ್ತಾನೆ. ಅವನಿಗೆ ಹಿಂದಿನ ಜನ್ಮದ ಪಾಪಶಮನವಾಗಿ ಎಂದೆಂದಿಗೂ ದೈನ್ಯ, ದುಃಖ, ಪಾಪಗಳು ಸುಳಿಯದು. ಅಂದಿನ ಗ್ರಹ-ರಾಹು, ನೈವೇದ್ಯ- ಗುಡಾನ್ನ, ಆಂಬೊಡೆ.


ಸಿದ್ಧಿದಾತ್ರಿ:


ಸೃಷ್ಟಿಯ ಆರಂಭದಲ್ಲಿ ಮಹಾದೇವನು ಸೃಷ್ಟಿಯ ಕಾರ್ಯಕ್ಕಾಗಿ ಆದಿಶಕ್ತಿಯನ್ನು ಕುರಿತು ತಪಸ್ಸು ಮಾಡಿದನು. ಶಿವನ ತಪಸ್ಸಿಗೆ ಮೆಚ್ಚಿದ ಆದಿಶಕ್ತಿ ಸಿದ್ಧಿದಾತ್ರಿಯ ರೂಪದಲ್ಲಿಶಿವನ ವಾಮಭಾಗದಿಂದ ಅವಿರ್ಭವಿಸುತ್ತಾಳೆ. ಶಿವನು ಅರ್ಧನಾರೀಶ್ವರನೆಂದು ಹೆಸರಾಗುತ್ತಾನೆ. ಸಿದ್ಧಿದಾತ್ರಿ ಸಿಂಹವಾಹಿನಿ.


ನವರಾತ್ರಿಯ ಒಂಭತ್ತನೇ ದಿನ ಈಕೆಯನ್ನು ಆರಾಧಿಸುವುದರಿಂದ ಸಾಧಕರಿಗೆ ಎಲ್ಲಾ ಸಿದ್ಧಿಗಳು ಪ್ರಾಪ್ತವಾಗುತ್ತವೆ. ಅವನು ಭಗವತಿಯ ದಿವ್ಯಲೋಕಗಳಲ್ಲಿ ಸಂಚರಿಸುತ್ತಾ ಅವಳ ಕೃಪಾರಸವನ್ನು ನಿರಂತರವಾಗಿ ಪಾನಮಾಡುತ್ತಾ ಅವಳ ಪರಮ ಸಾನ್ನಿಧ್ಯವನ್ನು ಹೊಂದುತ್ತಾನೆ. ಅಂದಿನ ಗ್ರಹ-ಕೇತು, ನೈವೇದ್ಯ- ಶಾಲ್ಯಾನ್ನ.

ಈ ನವರಾತ್ರಿಯ 9 ದಿನಗಳು ಕೂಡ ದಿನನಿತ್ಯ ಲಲಿತಾ ಸಹಸ್ರನಾಮವನ್ನು ಪಠಿಸಿ (ಉಪದೇಶ ಆಗಿದ್ದರೆ ಮಾತ್ರ) ಜಗನ್ಮಾತೆಯ ಕೃಪೆಗೆ ಪಾತ್ರರಾಗೋಣ.

 

----- Hari Om -----

Saturday, October 5, 2024

Navaratri -- Akanda Jyothi or Deepa

 

ಅಖಂಡ ಜ್ಯೋತಿ or ದೀಪ ------ Akanda Jyothi or Deepa


Rules & Regulation’s of One must be follow while Burning Akanda Jyothi Lamp 

 

                                                     Akanda Jyothi or Deepa


 

ನವರಾತ್ರಿಯ ಸಮಯಯಲ್ಲಿ "ಅಖಂಡ ಜ್ಯೋತಿ" ಬೆಳಗುವುದೇಕೆ ? ಈ ಧಾರ್ಮಿಕ ನಿಯಮಗಳನ್ನು ಪಾಲಿಸಲೇಬೇಕು

ನವರಾತ್ರಿಯ ಸಮಯದಲ್ಲಿ ಬಹುತೇಕ ಮನೆಗಳಲ್ಲಿ ಅಖಂಡ ಜ್ಯೋತಿ ಬೆಳಗುತ್ತಿರುತ್ತದೆ. ಅಖಂಡ ಜ್ಯೋತಿ ಎಂದರೆ ಹಚ್ಚಿದ ದೀಪ 9 ದಿನಗಳ ಕಾಲ ನಿರಂತರವಾಗಿ ಉರಿಯುತ್ತಲೇ ಇರಬೇಕು. ಅಖಂಡ ಜ್ಯೋತಿ ಬೆಳಗಿದರೆ ಮನೆಗೆ ಬಹಳ ಒಳ್ಳೆಯದು, ಆದರೆ ಅಷ್ಟೇ ಎಚ್ಚರಿಕೆವಹಿಸಬೇಕಾಗಿದೆ, ಯಾರಾದರೂ ಒಬ್ಬರು ಮನೆಯಲ್ಲಿ ದೀಪ ಕೆಡದಂತೆ ಜಾಗ್ರತೆವಹಿಸಬೇಕು.

ಅಖಂಡ ಜ್ಯೋತಿಯ ಮಹತ್ವ :


ಅಖಂಡ ಜ್ಯೋತಿಯನ್ನು ಒಂಭತ್ತು ದಿನಗಳವರೆಗೆ ಬೆಳಗುವುದರಿಂದ ದೇವಿಯ ಕೃಪೆ ಆ ಮನೆಯ ಮೇಲಿರುತ್ತದೆ. ಇದರಿಂದ ನಿಮ್ಮ ಎಲ್ಲಾ ಕಾರ್ಯದಲ್ಲಿ ಯಶಸ್ಸು ಪಡೆಯುತ್ತೀರಿ, ದೇವಿಯ ಕೃಪೆಯಿಂದಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ, ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುವುದು.

 

                                                                                Pic -1

 

 

ನವರಾತ್ರಿ ಅಖಂಡ ಜ್ಯೋತಿ ಹೇಗೆ ಹಚ್ಚಬೇಕು ?


ಅಖಂಡ ಜ್ಯೋತಿಗೆ ನೀವು ದಪ್ಪವಾದ ಬತ್ತಿ ಬಳಸಬೇಕು
ಹಿತ್ತಾಳೆ, ತಾಮ್ರ, ಬೆಳ್ಳಿ ಅಥವಾ ಮಣ್ಣಿನ ದೀಪ ಬೆಳಗಿಸಬಹುದು
ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಹಸುವಿನ ಶುದ್ಧ ತುಪ್ಪ ಬಳಸಬಹುದು


ಅಖಂಡ ಜ್ಯೋತಿ ಹಚ್ಚಿಡುವ ಕಡೆ ಸ್ವಚ್ಛ ಮಾಡಿ ಅಲ್ಲಿ ಅಷ್ಟದಳ ಬರೆದು, ಅದರಲ್ಲಿ ದೀಪವನ್ನು ಇಡಬೇಕು. ದುರ್ಗಾ ದೇವಿಯ ಬಲಭಾಗದಲ್ಲಿ ದೀಪವನ್ನು ಹಚ್ಚಬೇಕು, ಎಡಭಾಗದಲ್ಲಿ ಪೂಜೆಗೆಬಳಸುವ ಎಣ್ಣೆಯನ್ನು ಇಡಬೇಕು. ಎಣ್ಣೆ ದೀಪವಾದರೆ ಅಷ್ಟ ದಳದ ಎಡಭಾಗದ ತುಪ್ಪದ ದೀಪವಾದರೆ ಅಷ್ಟದಳದ ಬಲಭಾಗ ಹಚ್ಚಿಡಬೇಕು.


ದೇವಿ ಮಂತ್ರವನ್ನು ಹೇಳುತ್ತಾ ಶುಭ ಸಮಯದಲ್ಲಿ ದೀಪವನ್ನು ಬೆಳಗಿಸಬೇಕು.


ಏನು ಮಾಡಬೇಕು ?


ತುಂಬಾ ಭಕ್ತಿ ಹಾಗೂ ಶ್ರದ್ಧೆಯಿಂದ ದೀಪವನ್ನು ಹಚ್ಚಬೇಕು


ಬತ್ತಿ ದಪ್ಪವಾಗಿರಬೇಕು, ಒಂಭತ್ತು ದಿನಗಳು ಬರುವಷ್ಟು ಉದ್ದವಿರಬೇಕು


ದೀಪ ಯಾವಾಗಲೂ ಬೆಳಗುವಂತೆ ನೋಡಿಕೊಳ್ಳಿ


ಎಣ್ಣೆ ಅಥವಾ ತುಪ್ಪ ಕಡಿಮೆಯಾಗಲು ಬಿಡಬೇಡಿ, ದೀಪಕ್ಕೆ ಆಗಾಗ ಹಾಕುತ್ತಲೇ ಇರಿ,

ರಾತ್ರಿಯಲ್ಲೂ ಅಷ್ಟೇ.


ಅವಶ್ಯಕತೆ ಇದ್ದರೆ, ಅಖಂಡ ದೀಪವನ್ನು ಗಾಜಿನಿಂದ ಮುಚ್ಚಿ ಮಾಡಿ, ಇದರಿಂದ ಗಾಳಿ ಬೀಸಿದಾಗ ಆರುವುದಿಲ್ಲ ಬತ್ತಿಯನ್ನು ಸರಿಪಡಿಸುವಾಗ, ಎಣ್ಣೆ ಹಾಕುವಾಗ ಬತ್ತಿ ಕೆಡದಂತೆ ನೋಡಿಕೊಳ್ಳಿ.
9 ದಿನಗಳು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು.

 

                                                                          Pic-2

 

 

ದೀಪವನ್ನು ಊದಿ ಕೆಡಿಸಬಾರದು, ಮಕ್ಕಳು ಅದರ ಸುತ್ತ ಆಡದಂತೆ ಜಾಗ್ರತೆವಹಿಸಿ


ಗಟ್ಟಿ ತುಪ್ಪವನ್ನು ಹಾಕಬೇಡಿ, ಕರಗಿಸಿ ಹಾಕಿದರೆ ಒಳ್ಳೆಯದು
ದೀಪದ ಪಕ್ಕದ ಗೋಡೆ ಟಾಯ್ಲೆಟ್‌, ಬಾತ್‌ರೂಂ ಆಗಿರಬಾರದು
ಅಖಂಡ ಜ್ಯೋತಿ ಹಚ್ಚಿದ ಮೇಲೆ ಅದರ ಬಗ್ಗೆ ನಿರ್ಲಕ್ಷ್ಯ ಮಾಡಲೇಬೇಡಿ.
ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ಬಳಸಬಾರದು
ಇಟ್ಟ ದೀಪವನ್ನು 9 ದಿನಗಳವರೆಗೆ ಅಲುಗಾಡಿಸಬಾರದು
ದಂಪತಿಗಳು 9 ದಿನ ವ್ರತ ನಿಯಮ ಪಾಲಿಸಬೇಕು, ದೈಹಿಕ ಸಂಪರ್ಕ ಮಾಡಬಾರದು.

 

Happy Navaratri    _--- Hari Om -----

 

 



Thursday, October 3, 2024

Navaratri - 9 days Festival

                                                                Navaratri - 9 Devis photo

 
 

Navaratri – 9 Days Festival --- ನವರಾತ್ರಿ - 9 ದಿನಗಳ ಉತ್ಸವ


1ನೇ ದಿನ ---- ಶೈಲಪುತ್ರಿ ದೇವಿ


ಬಣ್ಣ ----- ಕಿತ್ತಳೆ
ನೈವೇದ್ಯ --- ಖರಾಪೊಂಗಲ್, ಶುದ್ಧ ಹಸುವಿನ ತುಪ್ಪ
ಹೂವು --- ಕೆಂಪು ದಾಸವಾಳ
ಫಲ ---- ಆರೋಗ್ಯ ಭಾಗ್ಯ


2ನೇ ದಿನ --- ಬ್ರಹ್ಮಚಾರಿಣಿ ದೇವಿ


ಬಣ್ಣ ----------- ಬಿಳಿ
ನೈವೇದ್ಯ --- ಪುಳಿಯೋಗರೆ ಮತ್ತು ಸಕ್ಕರೆ
ಹೂವು ---- ಹಳದಿ ಸೇವಂತಿಗೆ
ಫಲ ----- ಆಯಸ್ಸು ವೃದ್ಧಿ


3 ನೇ ದಿನ---- ಚಂದ್ರಘಂಟ ದೇವಿ


ಬಣ್ಣ -------- ಕೆಂಪು
ನೈವೇದ್ಯ ---- ಕಾಯಿ ಅನ್ನ ಮತ್ತು ಹಾಲು ಅಥವಾ ಹಾಲಿನ ಪದಾರ್ಥ
ಹೂವು ------ ಕಮಲ
ಫಲ -------- ಸುಖ ಸಮೃದ್ಧಿ ಗಾಗಿ


4ನೇ ದಿನ --- ಕುಷ್ಮಾoಡ ದೇವಿ


ಬಣ್ಣ --------- ನೀಲಿ
ನೈವೇದ್ಯ ---- ಪಾಯಸ ಮತ್ತು ಮಾಲ್ ಪೋವಾ
ಹೂವು ---- ಜಾಜಿ ಮರ್ಲೆ
ಫಲ ----- ಬುದ್ದಿ ವೃದ್ಧಿ ಗಾಗಿ



5 ನೇ----ದಿನ ಸ್ಕಂದ ಮಾತಾ ದೇವಿ


ಬಣ್ಣ ---- ಹಳದಿ
ನೈವೇದ್ಯ ----- ಮೊಸರನ್ನ ಮತ್ತು ಬಾಳೆಹಣ್ಣು
ಹೂವು ಹಳದಿ ರೋಜ್
ಫಲ ----- ಆರೋಗ್ಯ ವೃದ್ಧಿ



6ನೇ ದಿನ -- ಕಾತ್ಯಯಿನಿ ದೇವಿ


ಬಣ್ಣ ---- ಹಸಿರು
ನೈವೇದ್ಯ ---- ರವೆ ಸಜ್ಜಿಗೆ, ಜೇನುತುಪ್ಪ
ಹೂವು ---- ಹಳದಿ ಚೆಂಡು ಹೂವು ಹಾಗೂ ಮಲ್ಲಿಗೆ
ಫಲ----- ನೆಮ್ಮದಿ ಶಾಂತಿ ವೃದ್ಧಿಗಾಗಿ



7ನೇ ದಿನ ಕಾಳರಾತ್ರಿ ದೇವಿ


ಬಣ್ಣ --- ಬೂದಿ ಅಥವಾ ಕಪ್ಪು
ನೈವೇದ್ಯ --- ಬಿಸಿಬೇಳೆ ಬಾತು ಮತ್ತು ಬೆಲ್ಲ, ಡ್ರೈ ಫ್ರೂಟ್
ಹೂವು ----- ನೀಲಿ ಸ್ಪಟಿಕ, ನೀಲಿ ಶಂಕುಹೂವು, ನೀಲಿ ಸೇವಂತಿಗೆ
ಫಲ --- ದುರ್ಗತಿ ನಾಶ ದುಃಖ ನಿವಾರಣೆ ಗಾಗಿ

 


8ನೇ ದಿನ ಮಹಾಗೌರಿ ದೇವಿ


ಬಣ್ಣ -------- ನೇರಳೆ
ನೈವೇದ್ಯ -- ಸಕ್ಕರೆ ಪೊಂಗಲ್, ತೆಂಗಿನ ಕಾಯಿ
ಹೂವು ----- ಮಲ್ಲಿಗೆ
ಫಲ --- ಸಂತಾನ ಭಾಗ್ಯ



9ನೇ ದಿನ ಸಿದ್ಧಿಧಾತ್ರಿ


ಬಣ್ಣ ---- ರಾಮ ಹಸಿರು
ನೈವೇದ್ಯ - ಪಾಯಸಾನ್ನ , ಗುಡಾನ್ನ ಎಳ್ಳಿನ ಪದಾರ್ಥ
ಹೂವು --- ಸಂಪಿಗೆ
ಫಲ ---- ಭಯ ನಿವಾರಣೆ



🙏ನವರಾತ್ರಿ🙏 ----------- Hari Om ------------