Sunday, May 26, 2019

Power of Hari Nama Reciting

Power of Hari Nama Reciting or Smarane


                                                                        Sri Hari


                                                                    Sri Narayana
 
ಹರಿನಾಮಸ್ಮರಣೆಯ ಮಹತ್ವ

Power of Hari Nama Reciting


ಭಗವಂತನ ಸ್ಮರಣೆಯನ್ನು. ಯಾವಾಗಲೂ. ಮಾಡುತ್ತಿರಬೇಕು ಇದಕ್ಕೆ ಕಾರಣವೂ ಇದೆ .
ಜನ್ಮಲಾಭಃ ಪರಂ ಪುಂಸಾಂ ಅಂತೆ ನಾರಾಯಣಸ್ಮೃತಿಃ |
ಶ್ರೀಮದ್ ಭಾಗವತ(2 -1 -6)

ಜೀವನದ ಕೊನೆಯ ಗಳಿಗೆಯಲ್ಲಿ ನಾರಾಯಣನ ಸ್ಮರಣೆ ಬರಬೇಕು . ಆಗಲೇ ಜನದ್ಮಸಾರ್ಥಕತೆ ಲಾಭ ಎನಿಸುತ್ತದೆ . ಹೀಗೆ ಅಂತ್ಯಕಾಲದಲ್ಲಿ ಸ್ಮರಣೆ ಬರಬೇಕಾದರೆ ಮನುಷ್ಯನು ಸಂತತವಾಗಿ ಹರಿಸ್ಮರಣೆ ಮಾಡುತ್ತಿರಬೇಕು..

ಜಗದ್ಗುರು ಶ್ರೀಮಧ್ವಾಚಾರ್ಯರು


ಸಂತತಂ ಚಿಂತಯೇsನಂತಂ ಅಂತಕಾಲೆ ವಿಶೇಷತಃ
ಶ್ರೀಹರಿಯ ಸ್ಮರಣೆಯ ಅಂತ್ಯಕಾಲದಲ್ಲಿ ಬರಬೇಕಾದರೆ ಅವನನ್ನು ಸದಾ ಸ್ಮರಿಸುತ್ತಿರಬೇಕು ಎಂದು ದ್ವಾದಶಸ್ತೋತ್ರ( 1 -12) ದಲ್ಲಿತಿಳಿಸಿದ್ದಾರೆ .ಹಾಗೂ ತಮ್ಮ ಇನ್ನೊಂದು ಗ್ರಂಥದಲ್ಲಿ ಹರಿಸ್ಮರಣೆ ಕುರಿತು ಹೀಗೆ. ಹೇಳುತ್ತಾರೆ .
ಸ್ಮೃತತವ್ಯಂ ಸತತಂ ವಿಷ್ಣುಃ. ವಿಸ್ಮೃತವ್ಯೋ ನ ಜಾತುಚಿತ್ |
ಸರ್ವೆ ವಿಧಿನಿಷೇಧಾಸ್ಯುರೇತರೇಯೋರೇವ ಕಿಂಕರಾಃ || 


ಶ್ರೀಹರಿಯನ್ನು. ಯಾವಾಗಲೂ ಸ್ಮರಿಸುತ್ತಿರಬೇಕು ಯಾವಕಾಲದಲ್ಲಿಯೂ ಮರೆಯಲಾಗದು .ಏಕೆಂದರೆ ಸಮಸ್ತವಾದ ವಿಹಿತಗಳ ಅನುಷ್ಠಾನವಿಧಿಯೂ ನಿಷಿದ್ಧಗಳ ನಿಷೇಧವಿಧಿಯೂ ಈ ಹರಿಸ್ಮರಣ ವಿಸ್ಮರಣಗಳ ಅಧೀನ ಎಂದು ಸದಾಚಾರಸ್ಮೃತಿಯಲ್ಲಿ.ತಿಳಿಸಿದ್ದಾರೆ .
ವಿಪದ್ವಿಸ್ಮರಣಂ ವಿಷ್ಣೋಃ ಸಂಪನ್ನಾರಾಯಣ ಸ್ಮೃತಿಃ ||


ಉಕ್ತಿಯಂತೆ ವಿಸ್ಮರಣೆ ಅಂದರೆ ಸ್ಮರಣೆ ಮಾಡದಿರುವುದು ನಿಜವಾದ ವಿಪತ್ತು ಎನಿಸುತ್ತದೆ .ಮತ್ತು ಭಗವಂತನ ಸ್ಮರಣೆಯೇ ನಿಜವಾದ ಸಂಪತ್ತು ಎಂಬುದಾಗಿ ತಿಳಿದುಬರುತ್ತದೆ .
ಹರಿಸ್ಮರಣೆ ಕುರಿತು ಶ್ರೀಮದ್ ಭಾಗವತಕಾರರು ಹೀಗೆ ಹೇಳುತ್ತಾರೆ -
ಹರಿಸ್ಮೃತಿಃ ಸರ್ವ ವಿಪದ್ವಿಮೋಕ್ಷಿಣಿ |
ಶ್ರೀಹರಿಯ ಸ್ಮರಣೆಯು.ನಮ್ಮ. ಎಲ್ಲ ವಿಪತ್ತುಗಳನ್ನು ನಾಶಮಾಡುತ್ತದೆ .

ಶೃಣ್ವನ್ ಗೃಣನ್ ಸಂಸ್ಮರಯಂಶ್ಚ ಚಿಂತಯನ್
ನಾಮಾನಿ ರೂಪಾಣಿ ಚ. ಮಂಗಲಾನಿ ತೇ |
ಕ್ರಿಯಾಸು ಯಸ್ತ್ವಚ್ಚರಣಾರವಿಂದಯೋ
ರಾವಿಷ್ಟಚಿತ್ತೋ ನ ಭವಾಯ ಕಲ್ಪತೇ ||


ಶ್ರೀಹರಿಯ ಪವಿತ್ರವಾದ. ನಾಮಗಳನ್ನು ಕೇಳುತ್ತ.ಉಚ್ಚರಿಸುತ್ತ ಸ್ಮರಿಸುತ್ತ ಧ್ಯಾನಿಸುತ್ತ ನಿತ್ಯಕರ್ಮಗಳನ್ನು ಆಚರಿಸುತ್ತ ಅವನ ಪಾದರವಿಂದಗಳಲ್ಲಿ ಇಡಲ್ಪಟ್ಟ ಚಿತ್ತವುಳ್ಳವರು ಸಂಸಾರ ಬಂಧನಕ್ಕೆ ಒಳಗಾಗುವುದಿಲ್ಲ .


ಹರಿ ನಾಮದಲ್ಲಿಯೆ ಅಂತಹ ಒಂದು ವೈಶಿಷ್ಟ್ಯವಿದೆ ಎಂದು ಶ್ರೀಕೃಷ್ಣಾಮೃತಮಹಾರ್ಣವ ಗ್ರಂಥದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ

ಸಕೃದುಚ್ಚಾರಿತಂ ಯೇನ ಹರಿರಿತ್ಯಕ್ಷರದ್ವಯಂ |
ಬದ್ಧಃಪರಿಕರ ಹಸ್ತೇನ ಮೋಕ್ಷಾಯ ಗಮನಂ ಪ್ರತಿ ||

ಯಾರು ಎರಡು ಎರಡು ಆಕ್ಷರಗಳಿಂದ ಕೊಡಿದ ಹರಿ ಎಂಬ ನಾಮವನ್ನು ಒಮ್ಮೆಯಾದರೂ ಭಕ್ತಿಯಿಂದ ಉಚ್ಚರಿಸುವರೋ ಅವರಿಗೆ ಮೋಕ್ಷ ಮಾರ್ಗದ ಸಾಧನಗಳು ಸಿದ್ಧ ವಾದಂತೆಯೇ ಸರಿ .

ನಾಮ್ನೋಸ್ತಿ ಯಾವತಿಶಕ್ತಿಃ ಪಾಪನಿರ್ಹರಣೇ ಹರೇಃ |
ತಾವತ್ಕರ್ತುಂ ನ ಶಕ್ನೋತಿ ಪಾತಕಂ ಪಾತಕಿಜನಃ ||

ಹರಿ ಎಂದು ಭಕ್ತಿಯಿಂದ ಕರೆದಾಕ್ಷಣ ಮಾನವನ ಅದೆಷ್ಟು ಪಾಪಗಳು ನಾಶವಾಗುವುವೋ ಅಷ್ಟು ಪಾಪಗಳನ್ನು ಪಾಪಿಯೂ ಮಾಡಲು ಸಾಧ್ಯವಿಲ್ಲ.

ಹೇ ಜಿಹ್ವೇ ಮಮ ನಿಃಸ್ನೇಹೇ ಹರಿಂ ಕಿಂ ನಾನುಭಾಷಸೇ |
ವದಸ್ವ ಕಲ್ಯಾಣಿ ಸಂಸಾರೋದಧಿ ನೌ ಹರಿಃ ||

ನನಲ್ಲಿ ಪ್ರೀತಿಯಿಲ್ಲದ ನಾಲಿಗೇಯೇ ! ನೀನು ಹರಿಯನ್ನೇಕೆ ಕೀರ್ತನೆಮಾಡುತ್ತಿಲ್ಲ ? ಎಲೈ ಮಂಗಳಸ್ವರೂಪಿಯೇ ! ಸಂಸಾರವನ್ನು ದಾಟಲು ನೌಕೆಯಂತಿರುವ ಶ್ರೀಹರಿ ನಾಮವನ್ನು ಇನ್ನು ಮೇಲಾದರೂ ಉಚ್ಚರಿಸು .

ಕೃತೇಪಾಪೇsನುತಾಪೋ ವೈ ಪುಂಸಃ. ಪ್ರಜಾಯತೇ |
ಪ್ರಾಯಶ್ಚಿತ್ತಂ ತು.ತಸ್ಯೋಕ್ತಂ ಹರಿಸಂಸ್ಮರಣಂ ಪರಮ್ ||

ತಿಳಿಯದೇ ಪಾಪಗಳನ್ನು ಮಾಡಿ ಅನಂತರ ಪಶ್ಚಾತ್ತಾಪಪಡುವ ಪುರುಷನಿಗೆ ಉತ್ತಮ ಪ್ರಾಯಶ್ಚಿತ್ತವೆಂದರೆ ಶ್ರೇಷ್ಠವಾದ ಶ್ರೀಹರಿ ಸಂಸ್ಮರಣೆಯೇ ಆಗಿದೆ.

ಹರಯೇನಮಃ ಇತ್ಯುಚ್ಚೈರ್ಮುಚ್ಯತೆ. ಸರ್ವಪಾತಕಾತ್

ಹರಯೇ ನಮಃ ಎಂಬುದಾಗಿ ಉಚ್ಛಧಧ್ವನಿಯಿಂದ ಹೇಳುವವರು ಎಲ್ಲ ಪಾತಕಗಳಿಂದ ಮುಕ್ತರಾಗುತ್ತಾರೆ

ಭಾಗವತ ಪುರಾಣ || 12-12-46

ಹರತಿ ಅಹರತಿ ಸ್ವಸ್ಮಿನ್ ಸರ್ವಗುಣಾನ್ ಇತಿ ಹರಿಃ
ಸರ್ವಗುಣಪಪೂರ್ಣನಾದ್ದರಿಂದ ಇವನು ಹರಿ.

ಸ್ವಸ್ಮರಣಾದೇವ ಭಕ್ತಾನಾಂ ಅನೇಕಜನ್ಮರ್ಜಿತಪಾಪಸಂಚಯಂ ಅಪಹರತೀತಿ ಹರಿಃ |
ಸ್ಮರಣೆಮಾತ್ರದಿಂದ ಭಕ್ತರ ಅನೇಕ ಜನ್ಮಗಳ ಪಾಪಸಮೂಹವನ್ನು ಅಪಹರಿಸುವುದರಿಂದ ಇವನು ಹರಿ .

ಚಿತ್ತಸ್ಥಃಸನ್ ಕಲಿಕೃತಾನ್ ಸರ್ವಾನ್ ಪರಿಹರತೀತಿಹರಿಃ |
ಮನಸಿನಲ್ಲಿದ್ದು ಕಲಿಕೃತವಾದ ಎಲ್ಲ. ದೋಷಗಳನ್ನು ಪರಿಹರಿಸುವುದರಿಂದ ಇವನು ಹರಿ.

ಸರ್ವಯಜ್ಞಾದಿ ಭಾಗಹರಣಾತ್ ಹರಿಃ
ಎಲ್ಲ ಯಜ್ಞಗಳ ಭಾಗವನ್ನು ಸ್ವೀಕರಿಸುವುದರಿಂದ ಇವನು ಹರಿ.

ಯೇ ಸ್ಭರಂತಿ ಸದಾ ವಿಷ್ಣುಃ ವಿಶುದ್ಧೇನಾಂತರಾತ್ಮನಾ |
ತೇ ಪ್ರಯಾಂತಿ ಭವತ್ಯಕ್ತ್ವಾ ವಿಷ್ಣುಲೋಕ ಮನಾಮಯಃ ||


ಯಾರು ನಿರ್ಮಲ ಅಂತಃಕರಣದಿಂದ ಯಾವಾಗಲೂ ಶ್ರೀಹರಿಯನ್ನು ಸ್ಮರಿಸುವರೋ ಅವರು ಸಂಸಾರವನ್ನು ಬಿಟ್ಟು ದುಃಖಾದಿದೋಷಗಳಿಲ್ಲದ ಶ್ರೀಹರಿಯ ಲೋಕವನ್ನು ಪಡೆಯುವರು ಎಂದು ಜಗದ್ಗುರು ಶ್ರೀಮಧ್ವಾಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿದ್ದಾರೆ .

||
ಶ್ರೀಕೃಷ್ಣಾರ್ಪಣಮಸ್ತು|

                                             -------- Hari Om --------



No comments:

Post a Comment