Monday, May 29, 2023

Different Types & Forms of Bhakti -- ಭಕ್ತಿಯ ರೂಪಗಳು

 

Different Types & Forms of Bhakti -- ಭಕ್ತಿಯ ರೂಪಗಳು

 


 

ಭಕ್ತಿ ಮರದಂತೆ.. ನಾವು ಮರಕ್ಕೆ ನೀರು ಹಾಕಿದಾಗ ಅದು ಹೇಗೆ ಫಲ ನೀಡುತ್ತದೆಯೋ ಅದೇ ರೀತಿ ಭಕ್ತಿಗೆ ನಾವು ಪ್ರಾಮುಖ್ಯತೆಯನ್ನು ನೀಡಿದಾಗ ಆಳವಾದ ಚಿಂತನೆಯು ಕ್ಷಣಗಳಲ್ಲಿ ಅರಳುತ್ತದೆ. ನಾವು ದೇವತೆಯೊಂದಿಗೆ ಐಕ್ಯವನ್ನು ಸಾಧಿಸಿದಾಗ ಅದು ಫಲ ನೀಡುತ್ತದೆ. ಹಾಗಾದರೆ, ನಿಜವಾಗಿಯೂ ಭಕ್ತಿಯೆಂದರೇನು..? ಭಕ್ತಿಯ 9 ರೂಪಗಳಾವುವು..?

ಶ್ರೀಮದ್ ಭಗವತ್ ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ತನ್ನ ತಂದೆ ಅಸುರ, ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ. ಅವುಗಳೆಂದರೆ ಶ್ರವಣ, ಕೀರ್ತನ, ಸ್ಮರಣೆ, ಪಾದ-ಸೇವೆ, ಅರ್ಚನೆ, ವಂದನೆ, ದಾಸ್ಯ, ಸಾಖ್ಯ ಮತ್ತು ಆತ್ಮ-ನಿವೇದನೆ.

ಶ್ರವಣ

ಶ್ರವಣ ಎಂದರೆ ದೇವರ ಹೆಸರುಗಳು, ಕಥೆಗಳು ಮತ್ತು ಲೀಲೆಗಳನ್ನು ಕೇಳುವುದು. ನಂಬಿಕೆ ಮತ್ತು ಭಕ್ತಿಯ ಕುರಿತಾದ ಧರ್ಮಗ್ರಂಥಗಳು ಅಥವಾ ಕಥೆಗಳನ್ನು ಕೇಳುವುದರಿಂದ ಆ ವ್ಯಕ್ತಿಯು ದೇವರಿಗೆ ಹತ್ತಿರವಾಗುತ್ತಾನೆ. ಅದರ ಅತೀಂದ್ರಿಯ ಅರ್ಥವೆಂದರೆ ಅನಾಹದ ಶಬ್ದವನ್ನು ಕೇಳುವುದು, ಇದು ನಮ್ಮೊಳಗೆ ನಿರಂತರವಾಗಿ ಪ್ರತಿಧ್ವನಿಸುವ ವಿಶ್ವ ಶಬ್ದವಾಗಿದೆ.

ಕೀರ್ತನ

ಇದರ ಅರ್ಥ "ನಿರೂಪಿಸಲು, ಪಠಿಸಲು, ವಿವರಿಸಲು." ಸಾಮಾನ್ಯವಾಗಿ ಸಂಗೀತ ವಾದ್ಯಗಳನ್ನು ಬಳಸಿ ಮತ್ತು ಹೆಚ್ಚಾಗಿ ಗುಂಪಿನಲ್ಲಿ ಪವಿತ್ರ ಶ್ಲೋಕಗಳನ್ನು ಪಠಿಸುವ ಅಥವಾ ಹಾಡುವ ಮೂಲಕ ದೇವರನ್ನು ಮಹಿಮೆಪಡಿಸುವುದು ಇದರ ಉದ್ದೇಶವಾಗಿದೆ. ಕೀರ್ತನವು ಉತ್ತಮವಾದ ಭಾವನೆಗಳನ್ನು ಮತ್ತು ದೈವಿಕ ನಂಬಿಕೆಯನ್ನು ಉತ್ತೇಜಿಸುವ ಶಕ್ತಿಯನ್ನು ಹೊಂದಿದೆ. ಇದು ನಮ್ಮನ್ನು ಉಲ್ಲಾಸದಿಂದ ನೃತ್ಯ ಮಾಡಲು ಅಥವಾ ವಿಚಿತ್ರವಾದ ಕೆಲಸಗಳನ್ನು ಮಾಡುವಂತೆ ಮಾಡುತ್ತದೆ. ಇದು ವೈದಿಕ ಅನುಕೀರ್ತನಾ ಸಂಪ್ರದಾಯದಿಂದ ಬಂದಿದೆ. ಇದು ಕರೆ ಮತ್ತು ಪ್ರತಿಕ್ರಿಯೆ ಶೈಲಿಯನ್ನು ಹೊಂದಿದೆ ಮತ್ತು ಸಂಗೀತದೊಂದಿಗೆ ಹೊಂದಿಕೆಯಾಗಿರುತ್ತದೆ. ಅನೇಕ ಕಲಾವಿದರು ಪುರಾಣವನ್ನು ಪುನರಾವರ್ತಿಸಲು ಅಥವಾ ವಿವರಿಸಲು, ದೇವರಿಗೆ ಭಕ್ತಿಯನ್ನು ವ್ಯಕ್ತಪಡಿಸಲು ಅಥವಾ ಆಧ್ಯಾತ್ಮಿಕ ವಿಚಾರಗಳ ಚರ್ಚೆಯಲ್ಲಿ ತೊಡಗಲು ಕೀರ್ತನೆಯನ್ನು ರೂಢಿಸಿಕೊಳ್ಳುತ್ತಾರೆ.

ಸ್ಮರಣೆ

ಸ್ಮರಣೆಯಲ್ಲಿ ಭಕ್ತನು ಭಗವಂತನ ನಾಮ ಮತ್ತು ರೂಪಗಳನ್ನು ಸ್ಮರಿಸುತ್ತಾನೆ. ಇದು ಕಥೆಗಳನ್ನು ನೆನಪಿಸಿಕೊಳ್ಳುವುದು, ದೇವರ ಮಹಿಮೆಯ ಬಗ್ಗೆ ಇತರರಿಗೆ ಕಲಿಸುವುದು ಮತ್ತು ಹೇಳುವುದು, ದೇವರ ಅಂಶಗಳನ್ನು ಧ್ಯಾನಿಸುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ದೇವರನ್ನು ಸ್ಮರಿಸುವ ಇನ್ನೊಂದು ವಿಧಾನವೆಂದರೆ ಜಪ. ಕೆಲವರು ಜಪ ಮಾಡುವಾಗ ಚಿಕ್ಕ ಮಾಲೆ ಇಟ್ಟುಕೊಳ್ಳುತ್ತಾರೆ. ದೇವರನ್ನು ಸ್ಮರಿಸುವುದು ನಮ್ಮನ್ನು ಯಾವಾಗಲೂ ದೇವರಿಗೆ ಹತ್ತಿರವಾಗಿಸುತ್ತದೆ. ಸ್ಮರಣೆ ಒಂದು ಕಠಿಣ ರೂಪವಾಗಿದ್ದು, ಅದಕ್ಕೆ ಮನಃಪೂರ್ವಕತೆಯ ಅಗತ್ಯವಿರುತ್ತದೆ. ಮಂತ್ರ ಅಥವಾ ಪವಿತ್ರ ಹೆಸರನ್ನು ನಿರಂತರವಾಗಿ ಪುನರಾವರ್ತಿಸುವುದು ನಮಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದು ಮನಸ್ಸಿನ ಕೆಟ್ಟ ಪ್ರಚೋದನೆಗಳನ್ನು ನಿಯಂತ್ರಿಸುತ್ತದೆ ಮತ್ತು ಒಬ್ಬರ ಪ್ರಜ್ಞೆಯನ್ನು ಉನ್ನತೀಕರಿಸುತ್ತದೆ.

 


 

ಪಾದ-ಸೇವೆ

ಪಾದ-ಸೇವೆಯು ನಮ್ಮ ಸೇವೆಯನ್ನು ಭಗವಂತನ ಅಥವಾ ಜೀವಂತ ಗುರುಗಳ ಪಾದದಲ್ಲಿ ಅರ್ಪಿಸುವಂಗತದ್ದಾಗಿದೆ. ಒಂದು ವೇಳೆ ಗುರುಗಳು ಅಥವಾ ದೇವರ ವಿಗ್ರಹ ಇಲ್ಲದಿದ್ದರೆ, ಅವನ ದೈವಿಕ ಅನುಗ್ರಹವನ್ನು ಪ್ರತಿನಿಧಿಸುವ ಅವನ ಪಾದುಕೆಗಳಿಗೆ ನಮಸ್ಕಾರವನ್ನು ಮಾಡಬಹುದು. ಸಂತರ ಪಾದಗಳನ್ನು ಸ್ಪರ್ಶಿಸುವುದು ಅಥವಾ ಅವರ ದೈಹಿಕ ಅಗತ್ಯಗಳನ್ನು ಗೌರವದಿಂದ ಪೂರೈಸುವುದು ಇದರಲ್ಲಿ ಸೇರಿದೆ. ಪಾದ ಸೇವೆಯು ವ್ಯಕ್ತಿಗೆ ತಾಳ್ಮೆಯನ್ನು ಕಲಿಸುತ್ತದೆ.

ಅರ್ಚನೆ

ದೇವರ ಆಶೀರ್ವಾದ ಪಡೆಯಲು ಅರ್ಚನೆ - ಪೂಜೆ ಮಾಡುತ್ತಾರೆ. ಸಾಂಪ್ರದಾಯಿಕ ಸಂಪ್ರದಾಯದಲ್ಲಿ, ಇದನ್ನು ಷೋಡಶೋಪಚಾರ ಅಥವಾ ಹದಿನಾರು ವಿಧಾನಗಳಿಂದ ಮಾಡುವ ಪೂಜೆಯಾಗಿದೆ. ಒಬ್ಬರು ದೇವರನ್ನು ಆವಾಹನೆ ಮಾಡುತ್ತಾರೆ, ಆಸನವನ್ನು ನೀಡುತ್ತಾರೆ ಮತ್ತು ದೇವತೆಗೆ ವಿಧ್ಯುಕ್ತ ಸ್ನಾನವನ್ನು ನೀಡುತ್ತಾರೆ. ನಂತರ ನಾವು ದೇವರನ್ನು ಅಲಂಕರಿಸಬೇಕು ಮತ್ತು ಅವುಗಳನ್ನು ಪವಿತ್ರ ದಾರದಿಂದ ಅಲಂಕರಿಸಬೇಕು. ಶ್ರೀಗಂಧದ ಪೇಸ್ಟ್ ಅನ್ನು ಹಚ್ಚಿದ ನಂತರ, ಪೂಜೆಯ ಮೊದಲು ಪವಿತ್ರವಾದ ನೀರು, ಧೂಪ, ಹೂವುಗಳು, ದೀಪ, ವೀಳ್ಯದೆಲೆ, ನೈವೇದ್ಯ, ಅಕ್ಷತೆ ಇತ್ಯಾದಿಗಳನ್ನು ಅರ್ಪಿಸಬೇಕು. ಇದು ಬಾಹ್ಯ ಪೂಜೆಯಾಗಿದೆ. ಆಂತರಿಕ ಪೂಜೆಗಾಗಿ, ನಾವು ಯಾವುದೇ ಭೌತಿಕ ವಸ್ತುಗಳನ್ನು ಬಳಸದೆ ನಮ್ಮ ಮನಸ್ಸಿನಲ್ಲಿ ಮಾಡುತ್ತೇವೆ. ಆರಾಧನೆಯು ಗುಣಲಕ್ಷಣಗಳಿಲ್ಲದೆ ದೇವರ ಅಥವಾ ಸಂಪೂರ್ಣ ಜೀವಿಗಳ ಪ್ರಾತಿನಿಧ್ಯಕ್ಕೆ ನಿರ್ದೇಶಿಸಲ್ಪಟ್ಟಿದೆ.

ವಂದನೆ

ವಂದನೆಯು ಕೃತಜ್ಞತೆಯನ್ನು ವ್ಯಕ್ತಪಡಿಸಲು ದೇವತೆ, ಗುರು ಅಥವಾ ಪವಿತ್ರ ವ್ಯಕ್ತಿಯ ಮುಂದೆ ಸಾಷ್ಟಾಂಗ ನಮಸ್ಕಾರವನ್ನು ಮಾಡುವುದಾಗಿದೆ. ನಮ್ರತೆಯಿಂದ ನಮಸ್ಕರಿಸುವುದು ಮತ್ತು ಎಂಟು ಅಂಗಗಳಿಂದ (ಸಾಷ್ಟಾಂಗ-ನಮಸ್ಕಾರ) ಭೂಮಿಯನ್ನು ಸ್ಪರ್ಶಿಸುವುದು, ನಂಬಿಕೆ ಮತ್ತು ಗೌರವದಿಂದ, ದೇವರ ಪ್ರತಿಮೆಯ ಮುಂದೆ, ಅಥವಾ ಒಂದೇ ದೇವರಾಗಿರುವ ಎಲ್ಲಾ ಜೀವಿಗಳಿಗೆ ನಮಸ್ಕರಿಸುವುದು - ಇದು ವಂದನೆ. ನಾಯಿ, ಕತ್ತೆ, ಚಾಂಡಾಲ, ಹಸು ಸೇರಿದಂತೆ ಎಲ್ಲ ಜೀವಿಗಳಿಗೂ ನಮಸ್ಕರಿಸಿ ಪೂಜಿಸಬೇಕೆಂದು ಶ್ರೀಕೃಷ್ಣನು ಹೇಳಿದ್ದಾನೆ.

ದಾಸ್ಯ

ಈ ಸಂಸ್ಕೃತ ಪದದ ಅರ್ಥ "ಸೇವೆ" ಅಥವಾ "ಗುಲಾಮಗಿರಿ". ದಾಸ್ಯವು ದಾಸ್ಯದ ಮೂಲಕ ವ್ಯಕ್ತಪಡಿಸುವ ದೇವರ ಮೇಲಿನ ಪ್ರೀತಿ ಮತ್ತು ಭಕ್ತಿ. ಅಂದರೆ ದೇವರನ್ನು ಅಥವಾ ಗುರುವನ್ನು ಸಮರ್ಪಣಾ ಭಾವದಿಂದ ಸೇವೆ ಮಾಡುವುದು. ದೇವಸ್ಥಾನವನ್ನು ಶುಚಿಗೊಳಿಸುವುದು, ಬಡವರ ಸೇವೆ ಮಾಡುವುದು, ಧರ್ಮಗ್ರಂಥಗಳನ್ನು ಧ್ಯಾನಿಸುವುದು ಅಥವಾ ದೇವರ ಸೇವಕನಾಗಿ ಯಾವುದೇ ಕೆಲಸವನ್ನು ಮಾಡುವುದು - ಇದು ದಾಸ್ಯ ಭಕ್ತಿ.

ಸಾಖ್ಯ

ಸಾಖ್ಯ ಭಕ್ತಿಯು ದೇವರೊಂದಿಗೆ ಸ್ನೇಹಿತರಾಗುವುದು. ಅವನು ಆತ್ಮೀಯ ಸ್ನೇಹಿತ ಅಥವಾ ಸಂಬಂಧಿಯಾಗುತ್ತಾನೆ. ಆತ್ಮೀಯ ಸ್ನೇಹಿತರಂತೆ, ಭಕ್ತನು ಯಾವಾಗಲೂ ದೇವರೊಂದಿಗೆ ಒಟ್ಟಿಗೆ ಇರುತ್ತಾನೆ ಮತ್ತು ತನ್ನಂತೆಯೇ ಅವನನ್ನು ಪ್ರೀತಿಸುತ್ತಾನೆ. ಭಕ್ತನು ದೇವರಿಗಾಗಿ ಏನನ್ನಾದರೂ ಮಾಡಲು ಬಯಸುತ್ತಾನೆ ಮತ್ತು ಇತರ ಪ್ರಮುಖ ಅಥವಾ ತುರ್ತು ಕೆಲಸವನ್ನು ನಿರ್ಲಕ್ಷಿಸುತ್ತಾನೆ. ವಿಭೀಷಣ, ಉದ್ಧವ, ಸುಗ್ರೀವ, ಸುದಾಮ, ಅರ್ಜುನ, ಇತ್ಯಾದಿ, ಈ ರೀತಿಯ ಭಕ್ತಿ ಅಥವಾ ಸಾಖ್ಯ ಭಾವವನ್ನು ವ್ಯಕ್ತಪಡಿಸಿದ ಭಕ್ತರ ಉದಾಹರಣೆಗಳಾಗಿವೆ.

ಆತ್ಮ-ನಿವೇದನೆ

ಆತ್ಮ-ನಿವೇದನೆಯಲ್ಲಿ, ಭಕ್ತನು ತನ್ನ ದೇಹ, ಮನಸ್ಸು ಮತ್ತು ಆತ್ಮವನ್ನು ದೇವರಿಗೆ ಅರ್ಪಿಸುತ್ತಾನೆ ಮತ್ತು ಅವನಲ್ಲಿ ಆಶ್ರಯ ಪಡೆಯುತ್ತಾನೆ. ಅವನು ಯಾವಾಗಲೂ ಸಾರ್ವತ್ರಿಕ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತಾನೆ. ಅದು ಸಂತೋಷವಾಗಲಿ, ದುಃಖವಾಗಲಿ, ಭಕ್ತನು ಅದನ್ನು ದೇವರ ಉಡುಗೊರೆಯಾಗಿ ನೋಡುತ್ತಾನೆ. ಅವನು ತನ್ನನ್ನು ದೇವರ ಸಾಧನವಾಗಿ ನೋಡುತ್ತಾನೆ.

 

----------- Hari Om ----------

Friday, April 28, 2023

ಪುಷ್ಕರ – Pushkara ---- Holy Bathing

 

 

ಪುಷ್ಕರ – Pushkara ---- Holy Bathing

 

                                                          Ganges River at Haridwar

 

Holy Bathing on 12 Specific Rivers during 

Pushkara timings & its Virtue of Benefits



ಗಂಗಾದಿ ಮೊದಲಾದ ೧೨ ಪವಿತ್ರ ನದಿಗಳಲ್ಲಿ ಸಾರ್ಧತ್ರಿಕೋಟಿ ತೀರ್ಥ ಸಹಿತ ಪುಷ್ಕರನು ನಿವಾಸಮಾಡುವ ಕಾಲಕ್ಕೆ "ಪುಷ್ಕರ" ಎಂದು ಹೆಸರು.

ಮೇಷ ಮೊದಲಾದ ೧೨ ರಾಶಿಗಳಲ್ಲಿ ದೇವಗುರ ಬೃಹಸ್ಪತಿ ಸಂಚರಿಸುವ ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುವನು.

 

                                                                     Ganges River 

 

                                                                    Bhima River

 

ಬೃಹಸ್ಪತಿಯು ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ ಸಂಚರಿಸುವನು.

ಆಗ ಆಯಾ ನದಿಗಳಲ್ಲಿ ಮೂರುವರೆಕೋಟಿ ತೀರ್ಥಗಳಿಂದ ಸಹಿತನಾದ ಪುಷ್ಕರನು (ತೀರ್ಥರಾಜ) ಹಾಗೂ ಸಕಲಮುನಿಗಳು ವಾಸಿಸುವರು.

 

                                                                 Brahmaputra River

 

                                                                       Cauvery River


 

ಆದಕಾರಣ ವ್ರವೇಶ ದಿನದಿಂದ ೧೨ ದಿನಗಳು-ಆದಿಪುಷ್ಕರ ಎಂದೂ,
ಕೊನೆಯ ೧೨ ದಿನಗಳು-ಅಂತ್ಯ ಪುಷ್ಕರ ಎಂದು ಪ್ರಸಿದ್ಧಿಯಾಗಿದೆ.

ಈ ದಿನಗಳಲ್ಲಿ ನದೀ ತೀರ್ಥಗಳಲ್ಲಿ ಮಾಡುವ ಕ್ಷೇತ್ರೋವಾಸ, ತೀರ್ಥ ಶ್ರಾದ್ಧ/-ಸ್ನಾನ- ದಾನ- ವ್ರತ-ಜಪ-ತಪ-ಪೂಜಾದಿಗಳೆಲ್ಲವೂ ಅನಂತ ಫಲಪ್ರದವಾಗಿದೆ.

೬೦ ಸಾವಿರ ವರ್ಷ ಗಂಗೆಯಲ್ಲಿ ಮಿಂದ ಫಲ ಪುಷ್ಕರ ಸಮಯದಲ್ಲಿ ಒಂದು ದಿನ ಸ್ನಾನ ಮಾಡಿದರೆ ಬರುವುದು.

 


                                                                   Godavari River

 

                                                                        Krishna River

 

 

) ಮೇಷ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಗಂಗಾ ನದಿಗೆ ಪುಷ್ಕರ

) ವೃಷಭ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ನರ್ಮದಾ ನದಿಗೆ ಪುಷ್ಕರ

) ಮಿಥುನ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಸರಸ್ವತಿ ನದಿಗೆ ಪುಷ್ಕರ

) ಕರ್ಕಾಟಕ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಯಮುನಾ ನದಿಗೆ ಪುಷ್ಕರ

) ಸಿಂಹ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಗೋದಾವರೀ ನದಿಗೆ ಪುಷ್ಕರ

) ಕನ್ಯಾ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಕೃಷ್ಣಾ ನದಿಗೆ ಪುಷ್ಕರ

) ತುಲಾ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಕಾವೇರಿ ನದಿಗೆ ಪುಷ್ಕರ

) ವೃಶ್ಚಿಕ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಭೀಮಾರಥಿ ನದಿಗೆ ಪುಷ್ಕರ

) ಧನುರ್ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಪುಷ್ಕರವಾಹಿನಿ (ಬ್ರಹ್ಮಪುತ್ರಾ) ನದಿ ಗೆ ಪುಷ್ಕರ

೧೦) ಮಕರ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ತುಂಗಭದ್ರಾ ನದಿಗೆ ಪುಷ್ಕರ

೧೧) ಕುಂಭ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಸಿಂಧು ನದಿಗೆ ಪುಷ್ಕರ

೧೨) ಮೀನ ರಾಶಿ ಯಲ್ಲಿ ಪ್ರವೇಶ ಮಾಡಿದಾಗ ಪ್ರಣೀತಾ ನದಿಗೆ ಪುಷ್ಕರ

 

                         Narmada River

 

                        Narmada River-another pic

 

 

ಮೇಷೇ ಗಂಗಾ ವೃಷೇ ರೇವಾ ಗತೇ ಯುಗ್ಮೇ ಸ್ರಸ್ವತಿ
ಯಮುನಾ ಕರ್ಕಟೇ ಚೈವ ಗೊದಾವರ್ಯಪಿ ಸಿಂಹಗೇ!!
ಕನ್ಯಾಯಾಂ ಕೃಷ್ಣವೇಣೀ ಚ ಕಾವೇರಿ ಚ ತುಲಾಗತೇ
ವೃಸ್ಚಿಕೇ ಸ್ಯಾದ್ಭೀಮರಥೀ ಸಿಂಧುಃ ಪ್ರಣಿತಾ ತಟಿನೀ ಝುಷೇ
ಮೇಷೇಗುರೌ ಪ್ರವಿಷ್ಟೇ ಗಂಗಾ ಪುಷ್ಕರಯುತಾ ಭವತೀತಿವತ್
ಸರ್ವತ್ರಾನ್ವಯಃ!!


ಜನ್ಮ ಪ್ರಭೃತಿ ಯತ್ಪಾಪಂ ಸ್ತ್ರೀಯಾ ವಾ ಪುರುಷೇಣ ವಾ
ಪುಷ್ಕರೇ ಸ್ನಾತಮಾತ್ರಸ್ಯ ಸರ್ವಮೇವ ಪ್ರಣಶ್ಯತಿ!!

ಸ್ತ್ರೀಯರಾಗಲಿ ಪುರುಷರಾಗಲೀ ಹುಟ್ಟಿದಾರಾಭ್ಯ ಮಾಡಿದ ಪಾಪಗಳು
ಪುಷ್ಕರ ಸಮಯದಲ್ಲಿ ಸ್ನಾನ ಮಾಡುವುದರಿಂದ ಅನಂತ ಪುಣ್ಯಫಲಗಳು ಪ್ರಾಪ್ತವಾಗುತ್ತವೆ.

 

                                                                 Pranahita River

 

                                                      Pranahita River - another Pic

 

ಸಮುದ್ರ ಸೇರದ ನದಿಗಳಲ್ಲಿ ಮಿಂದರೆ ಮೂರು ದಿನ ಉಪವಾಸ ಮಾಡಿದ ಫಲ,

ಸಮುದ್ರ ಸೇರುವ ನದಿಗಳಲ್ಲಿ ೧೫ ದಿನದ ಫಲ,

ತಿಂಗಳು ಉಪವಾಸ ಗೈದ ಫಲ ಸಮುದ್ರ ಸ್ನಾನದಿಂದ, ೬ ತಿಂಗಳ ಫಲ ಗೋದಾವರಿಯ ಮಜ್ಜನದಿಂದ,

ಗಂಗಾ ಸ್ನಾನದಿಂದ ಒಂದು ವರ್ಷ ಉಪವಾಸದ ಫಲ, ಅದುವೇ ಭಕ್ತಿಯಿಂದ ಒಂದು ಬಾರಿ ವಿಷ್ಣು ಪಾದೋದಕ ಸೇವಿಪ ಮನುಜ ಪೊಂದುವ ೧೨ ವರ್ಷ ಉಪವಾಸದ ಫಲ, ಇದೇ ತೀರ್ಥದ ಮಹಿಮೆ

 

                                                                  Saraswathi River

 

                                                                        Sindhu River

 

                                                                   Yamuna River

 

ಇದೇ ಏಪ್ರಿಲ್ 21, 2023 ರ ಶುಕ್ರವಾರ ರಾತ್ರಿ 5:30 ಗಂಟೆಗೆ ಗುರು ಮೇಷ ರಾಶಿ ಪ್ರವೇಶ 

ಮಾಡುತ್ತಿದ್ದಾರೆ. ಈ ವರ್ಷ ಗಂಗಾ ನದಿ ಪುಷ್ಕರ ನಡೆಯುತ್ತದೆ.


 2023 ---- ಪುಷ್ಕರದ ಅವಧಿ : ಏಪ್ರಿಲ್ 22, 2023 ಶನಿವಾರ ದಿಂದ 

ಮೇ 3, 2023 ಬುಧವಾರ -- ಗಂಗಾ ನದಿ


---------- Hari Om ----------


 


 


 




 


 


 




 


 

Wednesday, March 29, 2023

Ugadi -- its Importance, History , Sceintific & Celebration




Chandramana Ugadi -- its Importance, History , Astronomical,  Scientific & its Celebrations


ಚಾಂದ್ರಮಾನ ಯುಗಾದಿ ಹಬ್ಬ ಇತಿಹಾಸ ಮತ್ತು ಆಚರಣೆ ಮತ್ತು ವೈಜ್ನಾನಿಕ ವಿಶ್ಲೇಷಣೆ.

ವೈಜ್ನಾನಿಕ ಮತ್ತು ಖಗೋಳಿಕ ಹಿನ್ನಲೆ


ಹೆಸರೇ ಸೂಚಿಸುವಂತೆ ಈ ಹಬ್ಬದ ಹೆಸರೇ ಯುಗಾದಿ. “ಯುಗಸ್ಯ ಆದಿಃ” ಅಂದರೆ ಯುಗದ ಆರಂಭ . ಹೊಸ ಸಂವತ್ಸರದ ಮೊದಲ ದಿನ ಎಂದಾಗುತ್ತದೆ ,ಹೊಸ ವರ್ಷದ ಪ್ರಾರಂಭ ಎಂದರ್ಥ.
ಈ ದಿನದಂದೇ ವಸುಧೆ ತನ್ನನ್ನು ತಾನು ಸುತ್ತುತ್ತ ಸೂರ್ಯನ ಸುತ್ತ ಕಕ್ಷೆಯಲ್ಲಿ ತಿರುಗುವ ತನ್ನ ವಾರ್ಷಿಕ ಲೆಕ್ಕವನ್ನು ಮುಗಿಸಿ ಹೊಸ ಸುತ್ತನ್ನು ಪ್ರಾರಂಭಿಸುತ್ತಾಳೆ . ಹಾಗೇ ಭೂಮಿಯ ಉಪಗ್ರಹ ಚಂದ್ರ ಕೂಡ ಭೂಮಿಯ ಸುತ್ತ ತನ್ನ ಪಥವನ್ನು ಹೊಸತಾಗಿ ಪ್ರಾರಂಭಿಸುತ್ತಾನೆ.


1 -- ಅಂದರೆ, 15 ದಿನಕ್ಕೆ 1 ಪಕ್ಷ ಹುಣ್ಣಿಮೆ- ಅಮವಾಸ್ಯೆ, (ಕೃಷ್ಣ ,ಶುಕ್ಲ ಪಕ್ಷ), 2 ಪಕ್ಷಕ್ಕೆ 1u ಮಾಸ
(ಚೈತ್ರ, ವೈಶಾಖ,),2 ಮಾಸಕ್ಕೆ 1ಋತು, (ವಸಂತ,ಗ್ರೀಷ್ಮ),(ಉತ್ತರಾಯಣ, ದಕ್ಶಿಣಾಯಾಣ) 6, ಋತುಗಳಿಗೆ 1ಸಂವತ್ಸರ ಇವೆಲ್ಲಾ ಅದ್ಭುತ ಲೆಕ್ಕಾಚಾರ ಎಂದು ಆಯಿತಲ್ಲ,


2 -- “ವಸಂತ ಋತು” ಎಂದರೆ ಅದು ನವೋಲಾಸದ ಸಂಕೇತ ಯಾಕೆಂದರೆ ಎಲೆ ಉದುರಿ ಬೋಳಾಗಿದ್ದ ಮರಗಳೆಲ್ಲ…. ಹೊಸ ಚಿಗುರನ್ನು ಬಿಟ್ಟು ನಳನಳಿಸುತ್ತ…. ಭೂರಮೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತವೆ. ವಿಶೇಷವಾಗಿ ಮಾವು ಚಿಗುರಿ ತನ್ನ ಸುವಾಸನಾಪೂರಿತ ವಸ್ತ್ರಗಳಿಂದ ಹೊಸ ಪ್ರಪಂಚವನ್ನೇ ತೆರೆಯುತ್ತದೆ


3 -- ವೈಜ್ನಾನಿಕವಾಗಿ ತಿಥಿ -,ಪಕ್ಷ -, ಮಾಸ- ಋತು,-ಸಂವತ್ಸರ ಹೀಗೆ ಎಲ್ಲವನ್ನೂ ನಮ್ಮ ಪೂರ್ವಜರು ಶತಶತಮಾನಗಳ ಹಿಂದೆಯೇ…. ಲೆಕ್ಕ ಹಾಕಿ ಪಂಚಾಂಗವನ್ನು ತಯಾರಿಸಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ . ಅವರು ಹಾಕಿಕೊಟ್ಟ ಅಧ್ಭುತ ವೈಜ್ನಾನಿಕ ದೂರದೃಷ್ಟಿ, ಅವರ ಜ್ಞಾನ ಮತ್ತು ಪ್ರಬುದ್ಧತೆಗೆ ಸಾಕ್ಷಿ. ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು (ಪಾಡ್ಯ) ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.



                                                                        Torana  

ನೈಸಗಿಕ ಕಾರಣಗಳು, ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ - ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.


ಐತಿಹಾಸಿಕ ಕಾರಣಗಳು: ಈ ದಿನದಂದು ರಾವಣನ ವಧೆಯಾದ ನಂತರ ಅಯೋಧ್ಯೆಗೆ ಆಗಮಿಸಿದ ಶ್ರೀರಾಮಚಂದ್ರ ಯುಗಾದಿ ದಿನದಿಂದಲೇ ನೂತನ ರಾಜ್ಯಭಾರಸೂತ್ರವನ್ನು ವಹಿಸಿಕೊಂಡನಂತೆ. ಹಾಗೂ ವಿಜಯೋತ್ಸವ ಆಚರಿಸುವಂತೆ ಮಾಡಿದನಂತೆ. ಆ ವಿಜಯದ ಸಂಕೇತವೇ ಈ ಯುಗಾದಿ ಹಬ್ಬ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದುದಾಗಿತ್ತು.


ಆಧ್ಯಾತ್ಮಿಕ ಕಾರಣಗಳು, ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು


ಚೈತ್ರ ಮಾಸಿ ಜಗದ್ಬ್ರಹ್ಮಾ ಸಸೃಜ ಪ್ರಥಮೇ ಹನಿ |
ಶುಕ್ಲಪಕ್ಷೇ ಸಮಗ್ರಂ ತು ತಥಾ ಸೂರ್ಯೋದದೇ ಸತಿ


ಈ ಮೊದಲ ತಿಂಗಳಿಗೆ,ಚೈತ್ರ ಎಂಬ ಹೆಸರು ಬರಲೂ ಕಾರಣವಿದೆ. ಪೂರ್ಣಿಮೆಯ ದಿನ ಚಂದ್ರನು ಯಾವ ನಕ್ಷತ್ರದೊಂದಿಗೆ ಇರುತ್ತಾನೆಯೋ ಅದನ್ನನುಸರಿಸಿ ಆ ತಿಂಗಳನ್ನು ಹೆಸರಿಸುತ್ತಾರೆ. ಯಾವ ಪೂರ್ಣಿಮೆಯ ದಿನ ಚಂದ್ರನು ಚಿತ್ರಾ ನಕ್ಷತ್ರದೊಡನೆ ಇರುತ್ತಾನೋ ಅದು ಚೈತ್ರಮಾಸ. ಆದ್ದರಿಂದಲೇ ಆ ಪೂರ್ಣಿಮೆಯನ್ನು,ಚಿತ್ರಾ,ಪೂರ್ಣಿಮೆ’ ಎನ್ನುತ್ತಾರೆ.


ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.


ಕ್ರಿ.. ಆರನೆಯ ಶತಮಾನದ ಖ್ಯಾತ ಖಗೋಳಶಾಸ್ತ್ರಜ್ಞ ವರಾಹ-ಮಿಹಿರನು ಚೈತ್ರ ಶುದ್ಧ ಪಾಡ್ಯಮಿಯ ದಿನ ಮೊದಲನೇ ನಕ್ಷತ್ರ ಅಶ್ವಿನಿ ಇದ್ದು (ಎಲ್ಲ ಚೈತ್ರಶುದ್ಧಪಾಡ್ಯಗಳಲ್ಲಿ ಅಶ್ವಿನ ನಕ್ಷತ್ರವಿರುವುದಿಲ್ಲ.) ಋತುಗಳ ರಾಜನಾದ ಮೊದಲನೆಯ ಋತು ವಸಂತನ ಆಗಮನವಾಗುವುದರಿಂದ ಅದನ್ನೇ ವರ್ಷಾರಂಭವೆಂದು ನಿಗದಿಪಡಿಸಿದ. ಯುಗಾದಿಯ ವಿಚಾರ ಅಥರ್ವಣವೇದ, 🌹ಶತಪಥಬ್ರಾಹ್ಮಣ, 🌹ಧರ್ಮಸಿಂಧು, 🌹ನಿರ್ಣಯಸಿಂಧು, 🌹ಬ್ರಹ್ಮಾಂಡಪುರಾಣ ಮತ್ತು 🌹ಮಹಾಭಾರತಗಳಲ್ಲಿ ಬರುತ್ತದೆ. ಜಗತ್ತು ಸೃಷ್ಟಿಯಾದದ್ದು ಚೈತ್ರ ಶುದ್ಧ ಪಾಡ್ಯಮಿ ಎಂದು ಬ್ರಹ್ಮಾಂಡಪುರಾಣ ತಿಳಿಸುತ್ತದೆ.


ಮತ್ತೊಂದು ದೃಷ್ಟಿಯಿಂದಲೂ ಇದು ಶುಭಮಾಸ. ಚೈತ್ರಮಾಸ ಉತ್ತರಾಯಣದಲ್ಲಿ ಬರುತ್ತದೆ. ಆಯನಗಳಲ್ಲಿ ಉತ್ತರಾಯಣ ಶ್ರೇಷ್ಠ. ಭಗವದ್ಗೀತೆಯಲ್ಲೂ ಇದನ್ನು ಶ್ರೀಕೃಷ್ಣ ಪ್ರಶಂಸಿಸಿದ್ದಾನೆ.


ಅಗ್ನಿರ್ಜ್ಯೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್,
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋಜನಾಃ,


ಅಗ್ನಿ, ಹಗಲು, ಜ್ಯೋತಿ, ಶುಕ್ಲಪಕ್ಷ ಹಾಗೂ ಉತ್ತರಾಯಣದ ಆರು ಮಾಸಗಳು-ಈ ಮಾರ್ಗದಲ್ಲಿ ಪ್ರಯಾಣ ಮಾಡಿದ ಬ್ರಹ್ಮಜ್ಞಾನಿಗಳಾದ ಜನರು ಬ್ರಹ್ಮನನ್ನು ಸೇರುತ್ತಾರೆ. ಸ್ವರ್ಗಾಕಾಂಕ್ಷಿಗಳಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಈ ಉತ್ತರಾಯಣದಲ್ಲಿ ವಸಂತಋತುವನ್ನು ಭಗವಂತನು “ಋತೂನಾಂ,ಕುಸುಮಾಕರಃ,ಎಂದು ಬಣ್ಣಿಸಿದ್ದಾನೆ.


ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೊಡನೆ ಮುಖ ತೊಳೆದು ಮಂಗಳದ್ರವ್ಯದರ್ಶನ ಮಾಡುವುದು. ಫಲ-ಪುಷ್ಪ-ಕನ್ನಡಿ-ಹೇಮಾಭರಣ-ಕುಂಕುಮದ್ರವ್ಯ-ತಳಿರು ತೋರಣ-ರಂಗೋಲಿ-ತಾಂಬೂಲ ಇವು ಮಂಗಳ ದ್ರವ್ಯಗಳು.


                                                       Bevu & Bella ( Neem & Jaggery )


ಆಚರಣೆ
ಯುಗಾದಿಯಂದು ನಮ್ಮ ಆಚರಣೆ,


ಮಂಗಲಸ್ನಾನ
ಮನೆಗೆಮಾವಿನ ಎಲೆ ತೋರಣ
ಮನೆದೇವರಿಗೆ ವಿಶೇಷ ಪೂಜೆ
ಪಂಚಾಂಗ ಪೂಜೆ
ಬೇವು ಬೆಲ್ಲ ಪರಮಾನ್ನಾದಿ ಅರ್ಪಣೆ
ನೂತನವಸ್ತ್ರ ಪೂಜನೆ , ಧಾರಣೆ
ಹಿರಿಯರ ಆಶೀರ್ವಾದ ಸ್ವೀಕಾರ
ಬೇವು ಬೆಲ್ಲ ಸ್ವೀಕಾರ


ಪಂಚಾಂಗ ಶ್ರವಣ
ದೇವರ ಭೇಟಿ


ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಶರೀರದ ಸರ್ವಾವಯವಗಳಿಗೂ ಎಣ್ಣೆ ಹಚ್ಚಿ ಮಾಡುವ ಸ್ನಾನವನ್ನು ಅಭ್ಯಂಗಸ್ನಾನವೆನ್ನುವರು* . ಕೆಲವೆಡೆ, ಕಿರಿಯರೆಲ್ಲರನ್ನೂ ಒಂದೆಡೆ ಕೂಡಿಸಿ, ಅರಿಶಿನ (ಸ್ತ್ರೀಯರಿಗೆ), ಕುಂಕುಮಾದಿಗಳನ್ನು ಹಣೆಗೆ ಹಚ್ಚಿ, ನೆತ್ತಿ (ಸುಳಿಯ ಮೇಲೆ), ಮುಂಗೈ ಹಾಗೂ ಮುಂಗಾಲುಗಳ ಮೇಲೆ, ಗರಿಕೆ ಇಲ್ಲವೆ ಪುಷ್ಪ ಮುಖೇನ ಮೂರು ಮೂರು ಬಾರಿ ತೈಲವನ್ನು ಹಚ್ಚುತ್ತಾರೆ. ನಂತರ ತೈಲವನ್ನು ಹಚ್ಚುವ ಪೂರ್ವದಲ್ಲಿ ಹಾಗೂ ನಂತರ, ಆರತಿ ಎತ್ತುವುದು ಕೆಲವೆಡೆ ರೂಢಿಯಲ್ಲಿದೆ. ಈ ಪ್ರಕ್ರಿಯೆಗಳ ಒಳಾರ್ಥವೇನೆಂದರೆ ಕುಳಿತಿರುವವರೆಲ್ಲರೂ ಶ್ರೀ ಲಕ್ಷ್ಮೀ, ಶ್ರೀ ಮನ್ನಾರಾಯಣರ ಅಂಶರೆಂದೂ ತೈಲಾಭ್ಯಂಜನಕ್ಕೆ ದೇವರನ್ನು ಅನುಗೊಳಿಸುತ್ತಿರುವಂತೆಯೂ ಭಾವಿಸಿ ಅನುಸಂಧಾನ ಮಾಡಬೇಕು.


ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕಾರ್ಯಗಳು
ಅಭ್ಯಂಗಸ್ನಾನ: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು.


ತೋರಣವನ್ನು ಕಟ್ಟುವುದು: ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು.
ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಶರೀರದ ಸರ್ವಾವಯವಗಳಿಗೂ ಎಣ್ಣೆ ಹಚ್ಚಿ ಮಾಡುವ ಸ್ನಾನವನ್ನು ಅಭ್ಯಂಗಸ್ನಾನವೆನ್ನುವರು. ಕೆಲವೆಡೆ, ಕಿರಿಯರೆಲ್ಲರನ್ನೂ ಒಂದೆಡೆ ಕೂಡಿಸಿ, ಅರಿಶಿನ (ಸ್ತ್ರೀಯರಿಗೆ), ಕುಂಕುಮಾದಿಗಳನ್ನು ಹಣೆಗೆ ಹಚ್ಚಿ, ನೆತ್ತಿ (ಸುಳಿಯ ಮೇಲೆ), ಮುಂಗೈ ಹಾಗೂ ಮುಂಗಾಲುಗಳ ಮೇಲೆ, ಗರಿಕೆ ಇಲ್ಲವೆ ಪುಷ್ಪ ಮುಖೇನ ಮೂರು ಮೂರು ಬಾರಿ ತೈಲವನ್ನು ಹಚ್ಚುತ್ತಾರೆ.


ಅಭ್ಯಂಗಸ್ನಾನದಿಂದ ರಜತಮೋಗುಣಗಳ ನಾಶವಾಗಿ ಸಾತ್ವಿಕಗುಣ ಉದ್ದೀಪನಗೊಳ್ಳುತ್ತದೆಂದು ಶಾಸ್ತ್ರಗಳು ಹೇಳುತ್ತವೆ.


ಈ ದಿನ


ನೂತನ ವಸ್ತ್ರಧಾರಣೆ, ಪರಮಾನ್ನಾದಿ ಭಕ್ಷ್ಯವನ್ನು ದೇವರಿಗೆ ನಿವೇದಿಸಿ ನೂತನ ಪಂಚಾಂಗವನ್ನು ದೇವರಮನೆಯಲ್ಲಿ ಪಂಚಾಂಗಪಠನ-ಶ್ರವಣದೊಂದಿಗೆ ವರ್ಷದ ರಾಜ-ಮಂತ್ರಿ ಮುಂತಾದ ಸಂವತ್ಸರಫಲ ಮತ್ತು ಗ್ರಹಸ್ಥಿತಿಯನ್ನು ತಿಳಿಯಬೇಕು.
ಅಭ್ಯಂಗಸ್ನಾನದಿಂದ ರಜತಮೋಗುಣಗಳ ನಾಶವಾಗಿ ಸಾತ್ವಿಕಗುಣ ಉದ್ದೀಪನಗೊಳ್ಳುತ್ತದೆಂದು ಶಾಸ್ತ್ರಗಳು ಹೇಳುತ್ತವೆ.


ಈ ದಿನ ದೇವರ ಕೋಣೆಯನ್ನು ಮನೆಯ ಮುಂಬಾಗಿಲನ್ನು ಮಾವಿನ ಎಲೆಯ ತೋರಣಗಳಿಂದ ಸಿಂಗರಿಸಿ ಮನೆಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ;
ನೂತನ ಪಂಚಾಂಗಕ್ಕೆ ಪೂಜೆಯನ್ನು ಸಲ್ಲಿಸಿ.


                                                       Bevu, Bella & Tamrind Mix


ನೂತನವಸ್ತ್ರ, ಬೇವು ಬೆಲ್ಲ ಪರಮಾನ್ನಾದಿ ಭಕ್ಷ್ಯವನ್ನು ದೇವರಿಗೆ ನಿವೇದಿಸಿ ನೂತನ ವಸ್ತ್ರಧಾರಣೆ ಮಾಡಿಕೊಂಡು ಹಿರಿಯರ ಆಶೀರ್ವಾದವನ್ನು ಪಡೆದು ಬೇವು ಬೆಲ್ಲ ವನ್ನು
ಈ ಕೆಳಗಿನ ಮಂತ್ರವನ್ನು ಹೇಳಿಕೊಂಡು ಸ್ವೀಕಾರ ಮಾಡುವುದು. ಪಂಚಾಂಗಪಠನ-ಶ್ರವಣದೊಂದಿಗೆ ವರ್ಷದ ರಾಜ-ಮಂತ್ರಿ ಮುಂತಾದ ಸಂವತ್ಸರಫಲ ಮತ್ತು ಗ್ರಹಸ್ಥಿತಿಯನ್ನು ತಿಳಿಯುವುದು.
ಜೀವನದಲ್ಲಿ ಒದಗುವ ಸುಖದುಃಖಗಳ, ಕಹಿ-ಸಿಹಿಗಳ ಪ್ರತೀಕವೆನಿಸುವ,ಬೇವು ಬೆಲ್ಲಗಳನ್ನು ದೇವರಿಗೆ ನಿವೇದಿಸಿ.


ಶತಾಯುರ್ವಜ್ರದೇಹಾಯ ಸರ್ವಸಂಪತ್ಸಮೃದ್ಧಯೇ,
ಸರ್ವಾರಿಷ್ಟವಿನಾಶಾಯ ಗುಡನಿಂಬಕಭಕ್ಷಣಮ್,


ಶತಾಯುಷ್ಯದ, ಗಟ್ಟಿದೇಹಕ್ಕಾಗಿ, ಸರ್ವಸಂಪತ್ಸಮೃದ್ಧಿಗಾಗಿ, ಸರ್ವಾರಿಷ್ಟನಿವೃತ್ತಿಗಾಗಿ ಬೇವು-ಬೆಲ್ಲಗಳನ್ನು ತಿನ್ನುತ್ತೇನೆ’ ಈ ಶ್ಲೋಕದ ಪಠಣದೊಂದಿಗೆ ’ಸುಖ ದುಃಖೇ ಸಮೇ ಕೃತ್ವಾ’ ಎಂಬ ಗೀತಾಚಾರ್ಯನ ಯೋಗದ ಅನುಸಂಧಾನದೊಂದಿಗೆ ಬೇವು-ಬೆಲ್ಲಗಳನ್ನು ಸ್ವೀಕರಿಸಬೇಕು.
ಹಿಂದಿನ ವರ್ಷವೆಂಬ ಕಾಲಪುರುಷನ ಮರಣ ಮತ್ತು ಹೊಸವರ್ಷದ ರೂಪದ ಶಿಶುವಿನ ಜನನಸೂಚಕ, ಈ ಸಂವತ್ಸರಾರಂಭ ಕಾಲ.


ಸಂವತ್ಸರವು ಯಜ್ಞಗಳಿಗೆ ಮೂಲ. ಅದು ಕೇವಲ ಕಾಲಪರಿಮಾಣ ಮಾತ್ರವಲ್ಲ; ಆಧ್ಯಾತ್ಮಿಕತೆಯ ಅಡಿಪಾಯವೂ ಹೌದು. ಸಂವತ್ಸರವನ್ನು ಅಶ್ವಕ್ಕೆ ಹೋಲಿಸಿ, ಒಂದು ವರ್ಷ ಪೂರ್ಣವಾಗಿ ನಡೆಯುವ ಅಶ್ವಮೇಧಯಜ್ಞ ಈ ಸಂವತ್ಸರ ಎಂದು ವೇದಗಳು ಸಾರುತ್ತವೆ.


ಎಲ್ಲರ ಜೀವನವೂ ಸುಖ-ದು:, ಲಾಭ-ನಷ್ಟ, ಮಾನ-ಅಪಮಾನ, ಜಯ-ಅಪಜಯ - ಈ ದ್ವಂದ್ವಗಳ ಸಮ್ಮಿಲನ. ಯಾರಿಗೂ ದು:, ನಷ್ಟ, ಅಪಮಾನ, ಪರಾಜಯಗಳು ಸ್ಥಿರವಲ್ಲ. ಹಾಗೆಯೇ ಸುಖ, ಲಾಭ, ಮಾನ, ಜಯಗಳು. ಇವೆಲ್ಲ ಒಂದಾದ ಮೇಲೆ ಒಂದರಂತೆ ಬಂದು ಹೋಗುತ್ತಿರುತ್ತವೆ.
ಆದ್ದರಿಂದ ಮಾನವನು ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ, ಈ ದ್ವಂದ್ವಗಳನ್ನು ಜಯಿಸಿ, ಸಮತೆ ಸಾಧಿಸಬೇಕು, ಸ್ಥಿತಪ್ರಜ್ಞನಾಗಬೇಕು,ಇದು ಯುಗಾದಿಯ ಬೇವು-ಬೆಲ್ಲಗಳ ಸಂದೇಶ.



----------- Hari Om ----------



Tuesday, February 21, 2023

Anjaneya Dandakam

Sri Anjaneya Dandakam 

 


                                      Lord Anjaneya or Mukyaprana

 

ಶ್ರೀ ಆಂಜನೇಯಂ ಪ್ರಸನ್ನಾಂಜನೇಯಂ
ಪ್ರಭಾದಿವ್ಯಕಾಯಂ ಪ್ರಕೀರ್ತಿ ಪ್ರದಾಯಂ
ಭಜೇ ವಾಯುಪುತ್ರಂ ಭಜೇ ವಾಲಗಾತ್ರಂ ಭಜೇಹಂ ಪವಿತ್ರಂ
ಭಜೇ ಸೂರ್ಯಮಿತ್ರಂ ಭಜೇ ರುದ್ರರೂಪಂ
ಭಜೇ ಬ್ರಹ್ಮತೇಜಂ ಬಟಂಚುನ್ ಪ್ರಭಾತಂಬು
ಸಾಯಂತ್ರಮುನ್ ನೀನಾಮಸಂಕೀರ್ತನಲ್ ಜೇಸಿ
ನೀ ರೂಪು ವರ್ಣಿಂಚಿ ನೀಮೀದ ನೇ ದಂಡಕಂ ಬೊಕ್ಕಟಿನ್ ಜೇಯ
ನೀ ಮೂರ್ತಿಗಾವಿಂಚಿ ನೀಸುಂದರಂ ಬೆಂಚಿ ನೀ ದಾಸದಾಸುಂಡವೈ
ರಾಮಭಕ್ತುಂಡನೈ ನಿನ್ನು ನೇಗೊಲ್ಚೆದನ್
ನೀ ಕಟಾಕ್ಷಂಬುನನ್ ಜೂಚಿತೇ ವೇಡುಕಲ್ ಚೇಸಿತೇ
ನಾ ಮೊರಾಲಿಂಚಿತೇ ನನ್ನು ರಕ್ಷಿಂಚಿತೇ
ಅಂಜನಾದೇವಿ ಗರ್ಭಾನ್ವಯಾ ದೇವ
ನಿನ್ನೆಂಚ ನೇನೆಂತವಾಡನ್
ದಯಾಶಾಲಿವೈ ಜೂಚಿಯುನ್ ದಾತವೈ ಬ್ರೋಚಿಯುನ್
ದಗ್ಗರನ್ ನಿಲ್ಚಿಯುನ್ ದೊಲ್ಲಿ ಸುಗ್ರೀವುಕುನ್-ಮಂತ್ರಿವೈ
ಸ್ವಾಮಿ ಕಾರ್ಯಾರ್ಥಮೈ ಯೇಗಿ


ಶ್ರೀರಾಮ ಸೌಮಿತ್ರುಲಂ ಜೂಚಿ ವಾರಿನ್ವಿಚಾರಿಂಚಿ
ಸರ್ವೇಶು ಬೂಜಿಂಚಿ ಯಬ್ಭಾನುಜುಂ ಬಂಟು ಗಾವಿಂಚಿ
ವಾಲಿನಿನ್ ಜಂಪಿಂಚಿ ಕಾಕುತ್ಥ್ಸ ತಿಲಕುನ್ ಕೃಪಾದೃಷ್ಟಿ ವೀಕ್ಷಿಂಚಿ
ಕಿಷ್ಕಿಂಧಕೇತೆಂಚಿ ಶ್ರೀರಾಮ ಕಾರ್ಯಾರ್ಥಮೈ ಲಂಕ ಕೇತೆಂಚಿಯುನ್
ಲಂಕಿಣಿನ್ ಜಂಪಿಯುನ್ ಲಂಕನುನ್ ಗಾಲ್ಚಿಯುನ್
ಯಭ್ಭೂಮಿಜಂ ಜೂಚಿ ಯಾನಂದಮುಪ್ಪೊಂಗಿ ಯಾಯುಂಗರಂಬಿಚ್ಚಿ
ಯಾರತ್ನಮುನ್ ದೆಚ್ಚಿ ಶ್ರೀರಾಮುನಕುನ್ನಿಚ್ಚಿ ಸಂತೋಷಮುನ್‌ಜೇಸಿ
ಸುಗ್ರೀವುನಿನ್ ಯಂಗದುನ್ ಜಾಂಬವಂತು ನ್ನಲುನ್ನೀಲುಲನ್ ಗೂಡಿ
ಯಾಸೇತುವುನ್ ದಾಟಿ ವಾನರುಲ್‍ಮೂಕಲೈ ಪೆನ್ಮೂಕಲೈ
ಯಾದೈತ್ಯುಲನ್ ದ್ರುಂಚಗಾ ರಾವಣುಂಡಂತ ಕಾಲಾಗ್ನಿ ರುದ್ರುಂಡುಗಾ ವಚ್ಚಿ
ಬ್ರಹ್ಮಾಂಡಮೈನಟ್ಟಿ ಯಾ ಶಕ್ತಿನಿನ್‍ವೈಚಿ ಯಾಲಕ್ಷಣುನ್ ಮೂರ್ಛನೊಂದಿಂಪಗಾನಪ್ಪುಡೇ ನೀವು


ಸಂಜೀವಿನಿನ್‍ದೆಚ್ಚಿ ಸೌಮಿತ್ರಿಕಿನ್ನಿಚ್ಚಿ ಪ್ರಾಣಂಬು ರಕ್ಷಿಂಪಗಾ
ಕುಂಭಕರ್ಣಾದುಲ ನ್ವೀರುಲಂ ಬೋರ ಶ್ರೀರಾಮ ಬಾಣಾಗ್ನಿ
ವಾರಂದರಿನ್ ರಾವಣುನ್ ಜಂಪಗಾ ನಂತ ಲೋಕಂಬು ಲಾನಂದಮೈ ಯುಂಡ
ನವ್ವೇಳನು ನ್ವಿಭೀಷುಣುನ್ ವೇಡುಕನ್ ದೋಡುಕನ್ ವಚ್ಚಿ ಪಟ್ಟಾಭಿಷೇಕಂಬು ಚೇಯಿಂಚಿ,
ಸೀತಾಮಹಾದೇವಿನಿನ್ ದೆಚ್ಚಿ ಶ್ರೀರಾಮುಕುನ್ನಿಚ್ಚಿ,
ಯಂತನ್ನಯೋಧ್ಯಾಪುರಿನ್‍ಜೊಚ್ಚಿ ಪಟ್ಟಾಭಿಷೇಕಂಬು ಸಂರಂಭಮೈಯುನ್ನ
ನೀಕನ್ನ ನಾಕೆವ್ವರುನ್ ಗೂರ್ಮಿ ಲೇರಂಚು ಮನ್ನಿಂಚಿ ಶ್ರೀರಾಮಭಕ್ತ ಪ್ರಶಸ್ತಂಬುಗಾ
ನಿನ್ನು ಸೇವಿಂಚಿ ನೀ ಕೀರ್ತನಲ್ ಚೇಸಿನನ್ ಪಾಪಮುಲ್‍ಲ್ಬಾಯುನೇ ಭಯಮುಲುನ್
ದೀರುನೇ ಭಾಗ್ಯಮುಲ್ ಗಲ್ಗುನೇ ಸಾಮ್ರಾಜ್ಯಮುಲ್ ಗಲ್ಗು ಸಂಪತ್ತುಲುನ್ ಕಲ್ಗುನೋ
ವಾನರಾಕಾರ ಯೋಭಕ್ತ ಮಂದಾರ ಯೋಪುಣ್ಯ ಸಂಚಾರ ಯೋಧೀರ ಯೋವೀರ
ನೀವೇ ಸಮಸ್ತಂಬುಗಾ ನೊಪ್ಪಿ ಯಾತಾರಕ ಬ್ರಹ್ಮ ಮಂತ್ರಂಬು ಪಠಿಯಿಂಚುಚುನ್ ಸ್ಥಿರಮ್ಮುಗನ್
ವಜ್ರದೇಹಂಬುನುನ್ ದಾಲ್ಚಿ ಶ್ರೀರಾಮ ಶ್ರೀರಾಮಯಂಚುನ್ ಮನಃಪೂತಮೈನ ಎಪ್ಪುಡುನ್ ತಪ್ಪಕನ್
ತಲತುನಾ ಜಿಹ್ವಯಂದುಂಡಿ ನೀ ದೀರ್ಘದೇಹಮ್ಮು ತ್ರೈಲೋಕ್ಯ ಸಂಚಾರಿವೈ ರಾಮ
ನಾಮಾಂಕಿತಧ್ಯಾನಿವೈ ಬ್ರಹ್ಮತೇಜಂಬುನನ್ ರೌದ್ರನೀಜ್ವಾಲ
ಕಲ್ಲೋಲ ಹಾವೀರ ಹನುಮಂತ ಓಂಕಾರ ಶಬ್ದಂಬುಲನ್ ಭೂತ ಪ್ರೇತಂಬುಲನ್ ಬೆನ್
ಪಿಶಾಚಂಬುಲನ್ ಶಾಕಿನೀ ಢಾಕಿನೀತ್ಯಾದುಲನ್ ಗಾಲಿದಯ್ಯಂಬುಲನ್
ನೀದು ವಾಲಂಬುನನ್ ಜುಟ್ಟಿ ನೇಲಂಬಡಂ ಗೊಟ್ಟಿ ನೀಮುಷ್ಟಿ ಘಾತಂಬುಲನ್
ಬಾಹುದಂಡಂಬುಲನ್ ರೋಮಖಂಡಂಬುಲನ್ ದ್ರುಂಚಿ ಕಾಲಾಗ್ನಿ
ರುದ್ರುಂಡವೈ ನೀವು ಬ್ರಹ್ಮಪ್ರಭಾಭಾಸಿತಂಬೈನ ನೀದಿವ್ಯ ತೇಜಂಬುನುನ್ ಜೂಚಿ
ರಾರೋರಿ ನಾಮುದ್ದು ನರಸಿಂಹ ಯನ್‍ಚುನ್ ದಯಾದೃಷ್ಟಿ
ವೀಕ್ಷಿಂಚಿ ನನ್ನೇಲು ನಾಸ್ವಾಮಿಯೋ ಯಾಂಜನೇಯಾ
ನಮಸ್ತೇ ಸದಾ ಬ್ರಹ್ಮಚಾರೀ


ನಮಸ್ತೇ ನಮೋವಾಯುಪುತ್ರಾ ನಮಸ್ತೇ ನಮಃ 

 

                                                  Lord Hanuman or Vayuputra

Anjaneya Dandakam is powerful Mantra if one Recites it full devotion one can expect immediate results.

--------------- Hari Om -----------------
 

Thursday, January 26, 2023

Uses of Dried Tulasi Plant

 

Uses Of Dried Tulasi its Leaves, Stem & Flower and Plant

 

                
                                      Tulasi Plant


ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?



ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ(ಸತ್ತು) ಹೋಗುತ್ತದೆ



ತುಳಸಿಕಟ್ಟೆಯ ಅಥವ ಮನೆಯ ಹತ್ತಿರದ ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು

 

                                                                     Dried Tulasi Plant

 

ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯಬಾರದು.. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು



ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವುದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.

                                                                    Dried Tulasi Leaves



ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು.
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ಕೆಲವು ಹೋಮ ಹವನಗಳಲ್ಲಿ ಬಳಸುವುದರಿಂದ ಹತ್ತಿರದ ವೈದಿಕರಿಗೆ ಮತ್ತು ದೇವಾಲಯಗಳಲ್ಲಿ ನೀಡಬಹುದು .
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು. ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ



ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು



ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ

 

                                                                                Pic1

 

ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ಇದು ದೇವರಿಗೆ ಅತ್ಯಂತ ಪ್ರಿಯ



ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ



ಯದ್ಯೇಕಂ ತುಲಸೀಕಾಷ್ಠಂ
ಮಧ್ಯೇ ಕಾಷ್ಠಶತಸ್ಯ ಚ
ದಾಹಕಾಲೇ ಭವೇನ್ಮುಕ್ತಿಃ
ಪಾಪಕೋಟಿಯುತಸ್ಯ ಚ



ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು


                                                                              Pic2


ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ತುಳಸೀ ಕಾಷ್ಟದಿಂದ ಮಣಿಗಳ ಮಾಡಿ ಧಾರಣೆ ಮಾಡಬಹುದು ಇದು ಶರೀರ ಹಾಗೂ ಮನಸ್ಸನ್ನು ಶುದ್ಧೀಕರಿಸುವುದು. ದೇವರ ಪೂಜೆಗೆ ತುಳಸಿ ಸಿಗದಿದ್ದಾಗ ತುಳಸೀ ಕಾಷ್ಟವನ್ನಾದರೂ ಉಪಯೋಗಿಸಬಹುದು


ತುಲಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ।

ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ।


ಯಾವ ಕಾರಣಕ್ಕೂ ಬಿಸಾಡಬಾರದು.

 

The above is a wonderful article on the Uses of Dried Tulasi  and No one must discard or throw it outside.

 

----------- Hari Om ----------