ಅಶ್ವಿನಿದೇವತೆಗಳು ------- Ashwini Gods
Ashwini God
ಅಸ್ತು ದೇವತೆ
ಸಂಚಾರ ಮಾಡುವ ಸಮಯದಲ್ಲಿ ಈ ಮಂತ್ರ
ಹೇಳಿದ್ರೆ ನಿಮ್ಮ ಎಲ್ಲ ಕೋರಿಕೆ
ಸಿದ್ದಿ
ನಮಸ್ಕಾರ
ಸ್ನೇಹಿತರೆ ಸಾಮಾನ್ಯವಾಗಿ ಅಶ್ವಿನಿ
ಕುಮಾರರ ಹೆಸರನ್ನು ಕೇಳಿರುತ್ತೀರಿ
ಇವರು ವೈದ್ಯ ದೇವತೆಗಳು ಋಗ್ವೇದದಲ್ಲಿ
ದೈವಿಕ ಅವಳಿ ಕುದುರೆ ಸವಾರರು,
ಮೋಡಗಳ ದೇವತೆಗಳು
ಇವರು ಸೂರ್ಯೋದಯ ಮತ್ತು ಸೂರ್ಯಾಸ್ತದ
ಹೊಳಪನ್ನು ಸಂಕೇತಿಸುತ್ತಾರೆ.
ಸೂರ್ಯೋದಯಕ್ಕೆ
ಮುಂಚೆ ಆಕಾಶದಲ್ಲಿ ಸುವರ್ಣ
ರಥದಲ್ಲಿ ಕಾಣಿಸಿಕೊಳ್ಳುತ್ತಾರೆ
ಮತ್ತು ಮನುಷ್ಯರಿಗೆ ಸಂಪತ್ತನ್ನು
ದಯಪಾಲಿಸುತ್ತಾರೆ ಮತ್ತು
ಅನಾರೋಗ್ಯವನ್ನು ದೂರ ಮಾಡುತ್ತಾರೆ,
ಇವರ
ಕೆಲಸವೇನೆಂದರೆ ಯಾವಾಗಲೂ ತಥಾಸ್ತು
ಅಸ್ತು ಎಂದು ಹೇಳುವುದು,
ಹೆಚ್ಚಾಗಿ
ಹೋಮ ಹವನಗಳು ನಡೆಯುವಂತಹ ಸ್ಥಳಗಳಲ್ಲಿ
ಇವರು ಇರುತ್ತಾರೆ ಅಶ್ವಿನಿ
ಕುಮಾರರು ಮುಸ್ಸಂಜೆ ವೇಳೆಯಲ್ಲಿ
ಭೂಲೋಕ ಸಂಚಾರವನ್ನು ಮಾಡುತ್ತಾರೆ.
ಅಶ್ವಿನಿ
ಕುಮಾರರು ಯಾರು ಮತ್ತು ಇವರು
ಸಂಚರಿಸುವ ಸಮಯದಲ್ಲಿ ಸಂಕಲ್ಪವನ್ನು
ಮಾಡಿಕೊಂಡು ಈ ಒಂದು ಮಂತ್ರವನ್ನು
ಜಪಿಸಿದರೆ ಅಶ್ವಿನಿ ದೇವತೆಗಳ
ಕೃಪೆ ಸಿಗುತ್ತದೆ,
ಅಂದರೆ
ನೀವು ಅಂದುಕೊಂಡ ಕೆಲಸಗಳು ಆಗುತ್ತದೆ.
ಅಶ್ವಿನಿ
ದೇವತೆಗಳು ಸೂರ್ಯ ಭಗವಾನ್ ಮತ್ತು
ಸಂಧ್ಯಾ ದೇವಿಗೆ ಜನಿಸಿದ ಅವಳಿ
ಮಕ್ಕಳೇ ಅಶ್ವಿನಿ ಕುಮಾರರು,
ಸಾಮಾನ್ಯ
ಮಾನವನ ಶರೀರ ಮತ್ತು ಕುದುರೆಯ
ಮುಖವನ್ನು ಹೊಂದಿರುವವರೇ ಅಶ್ವಿನಿ
ಕುಮಾರರು ಹಾಗಾದರೆ ಅಶ್ವಿನಿ
ಕುಮಾರರಿಗೆ ಕುದುರೆಮುಖ ಹೇಗೆ
ಬಂತು ಎಂಬುದನ್ನು ಮೊದಲು
ತಿಳಿದುಕೊಳ್ಳೋಣ.
Ashwini Kumaragalu
ಸೂರ್ಯ ದೇವನ
ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ
ಭಗವಾನರ ತಾಪವನ್ನು ತಾಳಲಾರದೆ
ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ,
ಇನ್ನು ಸೂರ್ಯ
ಭಗವಂತನು ತನ್ನ ತಾಪವನ್ನು ಕಡಿಮೆ
ಮಾಡಿಕೊಳ್ಳಲು ಬಯಸಿದರೆ
ಜಗತ್ತಿನಲ್ಲಿರುವ ಎಲ್ಲ ಜೀವ
ರಾಶಿಗಳಿಗೆ ಅಪಾರ ಕಷ್ಟಗಳು
ಉಂಟಾಗುತ್ತವೆ ಎಂದು ಯೋಚಿಸಿದ
ಸಂಧ್ಯಾದೇವಿ ಯು ಹಿಮಾಲಯ ಪರ್ವತ
ದತ್ತ ಸ್ವಲ್ಪ ವಿಶ್ರಾಂತಿ
ವಿರಾಮಕ್ಕಾಗಿ ಹೋಗುತ್ತಾರೆ,
ಅಲ್ಲಿ
ಯಾರಿಗೂ ಗುರುತು ಸಿಗದ ಹಾಗೆ
ಕುದುರೆಯ ಅವತಾರವನ್ನು ತಾಳಿ
ಹಿಮಾಲಯದ ತಪ್ಪಲಿನಲ್ಲಿ
ವಿಹರಿಸುತ್ತಿರುವಾಗ ಸೂರ್ಯ
ದೇವನು ಕುದುರೆಯ ರೂಪದಲ್ಲಿ ಇರುವ
ಸಂಧ್ಯಾ ದೇವಿಯನ್ನು ಗುರುತಿಸಿ
ತಾವು ಸಹ ಕುದುರೆಯ ರೂಪವನ್ನು
ದರಿಸುತ್ತಾರೆ ಹಾಗೆಯೇ ಅಶ್ವಗಳ
ಅವತಾರದಲ್ಲಿ ಆದ ಅವರಿಬ್ಬರ ಮಿಲನದ
ಸಂಕೇತವಾಗಿ ಜನಿಸಿದವರೇ ಅಶ್ವಿನಿ
ಕುಮಾರರು.
ನೀವು
ಅಂದುಕೊಂಡ ಕೆಲಸಗಳು ಆಗಬೇಕು
ಮತ್ತು ಸಂಸಾರಿಕ ಜೀವನವು
ಚೆನ್ನಾಗಿರಬೇಕು ಎಂದರೆ ಪ್ರತಿಯೊಬ್ಬರು
ಕೂಡ ಈ ಒಂದು ಸಮಯದಲ್ಲಿ ಅಶ್ವಿನಿ
ದೇವತೆಗಳು ಸಂಚಾರ ಮಾಡುವ ಸಮಯದಲ್ಲಿ
ಈ ಒಂದು ಮಂತ್ರವನ್ನು ಹೇಳಿ
ಸಂಕಲ್ಪವನ್ನು ಮಾಡಿಕೊಂಡರೆ ಸಾಕು
ಅಶ್ವಿನಿ ದೇವತೆಗಳ ಅನುಗ್ರಹದಿಂದ
ಅಂದುಕೊಂಡ ಕೆಲಸಗಳು ನೆರವೇರುತ್ತದೆ.
another Picture of Ashwini Gods
ಇನ್ನು ಜೀವನದಲ್ಲಿ
ವಿಪರೀತ ಕಷ್ಟಗಳನ್ನು ಅನುಭವಿಸುತ್ತಿದ್ದರೆ
ತೊಂದರೆಗಳಿಂದ ಮುಕ್ತಿಯನ್ನು
ಹೊಂದಬೇಕು ಜೊತೆಗೆ ಆರೋಗ್ಯ
ವೃದ್ಧಿಯಾಗಬೇಕು ಎಲ್ಲಾ ಶುಭ
ಫಲಗಳು ಪ್ರಾಪ್ತಿಯಾಗಬೇಕು ಎಂದರೆ
ಮುಸ್ಸಂಜೆ ಅಂದರೆ ಸೂರ್ಯಮುಳುಗುವುದಗಿಂತ
ಮುಂಚಿತವಾದ 24 ನಿಮಿಷ
ಗಳನ್ನು ಬಂಗಾರದ ಸಮಯ ಎಂದು
ಹೇಳಲಾಗುತ್ತದೆ, ಈ
ಒಂದು ಸಮಯದಲ್ಲಿ ಅಶ್ವಿನಿ ದೇವತೆಗಳು
ಸಂಚಾರವನ್ನು ಮಾಡುತ್ತಿರುತ್ತಾರೆ,
ಈ
ಒಂದು ಸಮಯವನ್ನು ಪಂಚಾಂಗದಲ್ಲಿ
ನೋಡಿಕೊಳ್ಳಬೇಕು ಈ ಒಂದು ಸಮಯದಲ್ಲಿ
ದೇವರಿಗೆ ತುಪ್ಪದ ದೀಪವನ್ನು
ಹಚ್ಚಿ ಸಂಕಲ್ಪವನ್ನು ಮಾಡಿಕೊಂಡು
ಅಶ್ವಿನಿ ದೇವತೆಗಳಿಗೆ ಸಂಬಂಧಪಟ್ಟ
ಈ ಒಂದು ಮಂತ್ರವನ್ನು ಪಠಿಸಿದರೆ
ನಿಮಗೆ ಇರುವಂತಹ ಕಷ್ಟಗಳು
ದೂರವಾಗುತ್ತದೆ.
ಒಂದು ಶಕ್ತಿಶಾಲಿಯಾದ ಮಂತ್ರ ಹೀಗಿದೆ, "ಓಂ ಶ್ರೀ ಅಶ್ವಿನೈ ನಮಹ". ಅಶ್ವಿನಿ ದೇವತೆಗಳ ಈ ಒಂದು ಮಂತ್ರವನ್ನು ಪ್ರತಿದಿನ ಒಂದು ಬಾರಿ ಅಥವಾ ಮೂರು ಬಾರಿ ಅಥವಾ 21 ಬಾರಿ ಅಥವಾ 108 ಬಾರಿ ಪಠಿಸಿದರೆ ನಿಮಗೆ ಇರುವಂತಹ ಕಷ್ಟಗಳೆಲ್ಲ ದೂರವಾಗುತ್ತದೆ ಇನ್ನು ಉದ್ಯೋಗರಂಗದಲ್ಲಿ ಒಳ್ಳೆಯದಾಗಬೇಕು ಎಂದು ಸಂಕಲ್ಪವನ್ನು ಮಾಡಿಕೊಂಡಿದ್ದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.
Ashwini Gods - a Rare picture
ನೀವು ಅಂದುಕೊಂಡ
ಅಂತಹ ಕೋರಿಕೆಗಳು ಈಡೇರಲಿ ಎಂದು
ಈ ಒಂದು ಮಂತ್ರವನ್ನು ಪಠಿಸುತ್ತಾ
ಅಶ್ವಿನಿ ದೇವರನ್ನು ನಮಸ್ಕರಿಸಿದರೆ
ಅಶ್ವಿನಿ ದೇವತೆಗಳ ಅನುಗ್ರಹದಿಂದ
ನಿಮ್ಮ ಕೋರಿಕೆಗಳು ಈಡೇರುತ್ತವೆ,
ಅದ್ಭುತವಾದ
ಫಲಗಳು ಪ್ರಾಪ್ತಿಯಾಗುತ್ತದೆ
ಮತ್ತು ಜೀವನದಲ್ಲಿ ಏಳಿಗೆಯಾಗುತ್ತದೆ,
ಆದ್ದರಿಂದ
ಪ್ರತಿ ಮುಸ್ಸಂಜೆಯ ಸಮಯದಲ್ಲಿ
ಅಶ್ವಿನಿ ದೇವತೆಗಳು ಸಂಚರಿಸುತ್ತಿರುವಾಗ
ತಪ್ಪದೇ ನೀವು ಈ ಒಂದು ಕೆಲಸವನ್ನು
ಮಾಡಿ ಈ ಒಂದು ಮಂತ್ರವನ್ನು ಹೇಳಿದರೆ
ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಹ
ನೆರವೇರುತ್ತವೆ.
ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ
ಧರ್ಮೋ
ರಕ್ಷತಿ ರಕ್ಷಿತಃ
ಹರಿ
ಸರ್ವೋತ್ತಮ ವಾಯು ಜೀವೋತ್ತಮ
ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು.
----------------- Hari Om ----------------