Friday, June 29, 2018

20 Essential Sutra's for Perfect Living

20 Essential Sutra's for Perfect Living


 
ಈ ವರ್ಷದಿಂದ ಪ್ರಾರಂಭಮಾಡಿ
ಈ ಇಪ್ಪತ್ತು ಸೂತ್ರಗಳು..
ಯಾಕೆಂದರೆ ಈ ಜೀವನ ಚಿಕ್ಕದು.

1.
ದಿನಾಲು 10 ರಿಂದ 30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ.
10
ನಿಮಿಷಗಳ ಮೌನ ಆಚರಿಸಿ,
ಕನಿಷ್ಠ 6 ಘಂಟೆಗಳ ಕಾಲ ನಿದ್ದೆ ಮಾಡಿ.!!

2.
ದಿನಾಲೂ ಮಾಡುವ ಪ್ರಾರ್ಥನೆ, ಧ್ಯಾನವು ಮನಸ್ಸನ್ನು ಹತೋಟಿಯಲ್ಲಿಡುತ್ತದೆ.
ಜೀವನದ ಜಂಜಾಟವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.

3.
ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ.

4.
ಹಗಲು ಧಾರಾಳವಾಗಿ ನೀರು ಕುಡಿಯಿರಿ.
ರಾತ್ರಿ ಮಲಗುವಾಗ ನೀರು ಮಿತವಾಗಿರಲಿ.

5.
ಮುಂಜಾನೆಯ ತಿಂಡಿ ರಾಜನಂತೆ ತಿನ್ನಿ,
ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ, ರಾತ್ರಿ ಊಟ ಭಿಕ್ಷುಕನಂತೆ ಇರಲಿ.

6.
ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ.

7.
ಜಾಸ್ತಿ ಮುಗುಳು ನಗಿ.
ಹೆಚ್ಚೆಚ್ಚು ನಕ್ಕುಬಿಡಿ.
ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ.

8.
ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
ಆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ.

9.
ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕಳೇಯಬೇಡಿ.
ಜೀವನ ಚಿಕ್ಕದು.
ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ.
ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ.

10.
ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರೊಡನೆ ಕಾಲ ಕಳೆಯಿರಿ.

11.
ಎಲ್ಲಾ ವಾದಗಳನ್ನೂ ಗೆಲ್ಲಬೇಕಿಂದಿಲ್ಲ.
ಸೋತು ಗೆದ್ದುಬಿಡಿ.

12.
ನಿಮ್ಮ ಸಂಗಾತಿಗೆ ಅವರ ಹಿಂದಿನ ತಪ್ಪುಗಳನ್ನು ಜ್ಞಾಪಿಸಿ ನಿಮ್ಮ ಇಂದಿನ ಸಂತೋಷವನ್ನು ಕೊಲ್ಲಬೇಡಿ.

13.
ನಿಮ್ಮನ್ನು ನೀವೇ ಗಂಭೀರವಾಗಿ ತೆಗೆದುಕೊಳ್ಳಬೇಡಿ.
ಯಾಕೆಂದರೆ ಬೇರೆ ಯಾರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

14.
ಜೀವನ ಒಂದು ಶಾಲೆಯಿದ್ದಂತೆ. ಸಮಸ್ಯೆಗಳು ಬೀಜಗಣಿತದ ಲೆಕ್ಕಗಳಂತೆ ಕರಗಿ ಉತ್ತಮ ಪಾಠ ಕಲಿಸುತ್ತವೆ. ಸಮಸ್ಯೆಗಳನ್ನು ಉತ್ಸಾಹದಿಂದ ಎದುರಿಸಿ.

15.
ನಿಮ್ಮ ಉದ್ಯೋಗ ನಿಮ್ಮನ್ನು ನೀವು ನಿವೃತ್ತಿಯಾಗುವವರೆಗೂಪ ಕಾಯುವುದು. ನಿಮ್ಮ ಕುಟುಂಬ, ಸಂಬಂಧಿಗಳು ಮತ್ತು ಮಿತ್ರರು ಮಾತ್ರ ನಿಮ್ಮೊಡನೆ ಯಾವಾಗಲೂ ಇರುವವರು.
ಅವರಿಗೆ ಯಾವಾಗಲೂ ಸಮಯ ಕೊಡಿ.

16.
ಎಲ್ಲರನ್ನೂ ಕ್ಷಮಿಸುತ್ತಾ, ಅವರ ತಪ್ಪುಗಳನ್ನು ಮರೆಯುತ್ತಾ ಮುಂದೆ ಸಾಗಿ.

17.
ಸಿಟ್ಟು ತನ್ನ ವೈರಿ,
ಶಾಂತಿ ಪರರ ವೈರಿ ಎಂಬುದನ್ನು ಎಂದಿಗೂ ಮರೆಯದಿರಿ.

18.
ನನ್ನನ್ನು ದ್ವೇಷಿಸುವವರನ್ನು ದ್ವೇಷಿಸಲು ನನಗೆ ಸಮಯವಿಲ್ಲ,
ಏಕೆಂದರೆ ನನ್ನನ್ನು ಪ್ರೀತಿಸುವವರ ಪ್ರೀತಿಯಲ್ಲಿ ನಾನು ತುಂಬಾ ಬ್ಯೂಜಿಯಾಗಿದ್ದೇನೆ.
ಎಂಬುದು ನಿಮ್ಮ ಮನೋಧೋರಣೆಯಾಗಿರಲಿ.

19.
ನೀವು ಬೇಯಿಸುವ ಅನ್ನದ ನೀರು
ಅದು ನಿಮ್ಮ ಬೆವರಿನ ಹನಿಯಾಗಿರಬೇಕೆ ಹೊರತು,
ಬೇರೆಯವರ ಕಣ್ಣೀರಾಗದಂತೆ ನೋಡಿಕೊಳ್ಳಿ.

20.
ಪ್ರತಿ ದಿನವೂ ಇದು ನಮ್ಮ ಕೊನೆಯ ದಿನವೆಂದು ತಿಳಿದು ಗಳಿಸಬೇಕು,
ಪ್ರತಿ ದಿನವೂ ಇದು ನಮ್ಮ ಮೊದಲ ದಿನವೆಂದು ತಿಳಿದು ಉಳಿಸಬೇಕು.

----------- Hari Om ----------

Tuesday, May 29, 2018

Names of Anjaneya & its Places

Names of Lord Sri Anjaneya or Hanuman & its associated Places

                                                        Yelahanka  Sri Anjaneya swami


                                                            Bidadi Anjaneya swami


 Different Names of Lord Anjaneya OR Lord Hanuman and its associated Temple Places.

1)Sri Anjaneya  – Found all over India

2)sri Byelanjaneya  – Ulsoor,Bangalore-Karnataka

3)sri Abhaya Anjaneya  – Cottonpet Bangalore– Karnataka

4)sri Bande Sathya Anjaneya  – Nandidurga Road, Bangalore– Karnataka

5)sri Vira Anjaneya  – Found all over india

6)sri Panchamukhi Anjaneya – Ganadala,near Mantralaya – AP

7)sri Dodda Anjaneya – Banaswadi,Bangalore– Karnataka

8)sri Putta Anjaneya – Hennur road ,Bangalore -Karnataka

9)sri Sundara Anjaneya  – Indiranagar,Bangalore– Karnataka

10)sri Prasanna Anjaneya  – Found all over Karnataka

11)sri Prasanna Veera Anjaneya – Found all over Karnataka

12)sri Gali Anjaneya  – Mysore road – Bangalore– Karnataka

13)sri Rama Anjaneya  – Found all over India

14)sri Bhaktha Anjaneya  – Found all over India

15)sri Daari Anjaneya – yeshwantpur,Bangalore– Karnataka

16)sri Kaadu Hanumantharaya swami – Dharapuram , Tamilnadu

17)sri Gunda Anjaneya – Sahakara nagar,Bangalore– Karnataka

18)sri Anu Anjaneya -Yelahanka junction,Bangalore– Karnataka

19)sri Mutthuraya Swami Anjaneya – Muthatti, Malavalli tq Karnataka

20)sri Durga Anjaneya Swami -Singanamala, Ananthpur- AP

21)sri Shiva Anjaneya – Porur-Tamilnadu

22)sri Ashwatha Anjaneya – Sirsi town – Karnataka

23)sri Daasa Anjaneya – vijayawada – AP

24)Sri Jaya Veera Anjaneya -- Perur - Coimbatore,Tamilnadu

25)Sri Veera Mangala Anjaneya - Nallathur - Tiruppur,Tamilnadu

26)sri Sanjeevani Anjaneya – Mysore road,Bidadi,Karnataka

27)sri Karanji Anjaneya – Basavanagudi,Bangalore , Karnataka

28)sri Karya siddi Anjaneya – Girinagar,Bangalore Karnataka

29)Sri Jaya Mangala Anjaneya -- Idugampalyam Metupalyam, coimbatore dist

30)Sri Erattai Anjaneya - Pateeswaram ,Tamilnadu

31)Sri Veera Pratapa Anjaneya - Hosadurga,Chitradurga - Karnataka

32)Sri Ganajuru Anjaneya - Ganajuru, Karajgi, Haveri Tq Karnataka

33)Sri ShivaLinga Anjaneya - Tiruvarur, Tamilnadu

34)Sri Thanumalaya Anjaneya swami - Suchidram, Tamilnadu

35)Sri Periya Anjaneya swami - Ambur, near Vellore,Tamilnadu

36)Sri Varada Anjaneya - Avinashi Road,Coimbatore, Tamilnadu

37)Sri Kallukuzi Anjaneya - Trichy,Tamilnadu

38)Sri Kalyana Anjaneya - Thailavaram, Guduvancheri

39)Sri Jayaveera Abhayahasta Anjaneya - Krishnapuram,Kadayanallur,Tirunelveli,TN

40)Sri Bala Anjaneya - Hampi,Hospet Karnataka

41)Sri Jhool Anjaneya - Kadapa , Andrapradesh

42)Sri Sankata Mochana Anjaneya - Varanasi, UP

43)Sri Jakhoo Anjaneya - Shimal, Himachal pradesh

44)Sri Mahavir Anjaneya - Patna, Bihar

45)Sri Kashtbhanjan Anjaneya - Sarangpur, Gujarat

46)Sri Hanumandhara Anjaneya - Chitrakoot, UP

47)Sri Salasar Anjaneya - Salasar, Rajasthan

48)Sri Balaji Anjaneya - Mehandipur, Rajasthan

49)Sri Camp Anjaneya - Ahmedabad, Gujarat

50)Sri Bhadra Anjaneya - Khuldabad, Maharastra






                                                            Sri Anjaneya Swami

51)Sri Ragigudda Anjaneya - JP Nagar, Bangalore

52)Sri Prasanna Yoga Anjaneya - Chromepet, Chennai, TN

53)Sri Yoga Anjaneya - Sholingur, Tamilnadu

54)Sri Veera Abhaya  Hasta Anjaneya - Paritala, Vijayawada,AP

55)Sri Jaya Anjaneya - Karur, Tamilnadu

56)Sri Yantrodaraka Anjaneya - Hampi, Hospet,Karnataka

57)Sri Kere Anjaneya - Sringeri, Karnataka

58)Sri Nettikanti Anjaneya - Kasapuram, Ananthapur, AP

59)sri Gandi Veera Anjaneya - Cuddapah, AP

60)Sri Jabaali Anjaneya - Tirupati, AP

61)Sri Bigam Anjaneya - Ahobilam, Kurnool, AP

62)Sri Sanjeeviraya Anjaneya - Vellala,Cuddapah, AP

63)Sri Markata Anjaneya - Yamuna Bazaar, Delhi

64)Sri Dandi Anjaneya - Bet Dwaraka , Gujarat

65)Sri Bihdbhanjan Anjaneya - Harni, Vadodara, Gujarat

66)Sri Kasht Nivaran Anjaneya - Somanath, Gujarat

67)Sri Digambara Anjaneya - Sidhabari, Himachal Pradesh

68)sri Monkey Anjaneya - Kasauli , Himachal Pradesh

69)sri Hulikunteraya Anjaneya - Bommaghatta, Bellary, Karnataka

70)Sri Karekallu Anjaneya - Mysore Road Bengaluru,Karnataka

71)Sri Gutte Anjaneya - Lalbagh west, Bengaluru,Karnataka

72)Sri Kamali Anjaneya - Bhopal, Madhya pradesh

73)Sri Vishwaroopa Anjaneya - Nerul, Navi Mumbai, Maharastra

74)Sri Sharminda Anjaneya - Nasik, Maharastra

75)Sri Vadavrikshak Anjaneya - Dadar west, Mumbai

76)Sri Bara Anjaneya - Langoorwala, Amritsar,Punjab

77)Sri Mukya Prana Anjaneya - Triplicane, Chennai

78)Sri Anuvavi Anjaneya - Coimbatore, Tamilnadu

79)Sri Sapthaswara Anjaneya - Kozhikuthi, Mayiladudurai, Tamilnadu

80)Sri Satya Vijaya Anjaneya - S.V Nagar,Arani, Tamilnadu

81)Sri Panki Anjaneya - Panki, Kanpur

82)Sri Bhava bhoda Anjaneya - Srirangam , Tamilnadu

83)Sri Sita Rama Dasa Anjaneya - Dharmapuri, Tamilnadu

84)Sri Pavanasutha Anjaneya - Banasankari , Bengalure , Karnataka

85)Sri Bhajarang bali Anjaneya - Varanasi , Uttar Prasdesh

86)Sri Manojavam Anjaneya - Sulya, South Kanara , Karnataka

87)Sri Dhyana Anjaneya -  Puthuru, South Kanara, Karnataka

88)Sri Biguru Anjaneya - Tumkuru , Karnataka

89)Sri Anjaneya temple - Port Dickson, Colombo , SriLanka

90)Sri Dhooka Anjaneya - Katmandu , Nepal

91)Sri Anjaneya Temple - 85 feeet in Tranidad , Carapichaima, West Indies

92)Sri Rama bhakta Anjaneya - Ayipettai , Cuddalore, Tamilnadu

93)Sri Paritala Anjaneya - Paritala, Vijayavada , Andrapradesh

94)Sri Rojhri Anjaneya - Rawla Mandi , GangaNagar , Rajasthan

95)Sri O.T.C Anjaneya - Palayam, Trivandram , Kerala

96)Sri Anjanadri Anjaneya - Anegondi, Hampi, Karnataka

97)Sri Sarangpur Anjaneya - Sarangpur , Gujarat

98)Sri Mounagiri Anjaneya - Ananthpur, Andrapradesh

99)Sri Shinganwadi Anjaneya - Satara, Maharastra

100)Sri Tuppada Anjaneya - R.T Street, Bengaluru , Karnataka



                                                           Namakkal Anjaneya swami


101)Sri Kamali Anjaneya - Bhopal , Madhya pradesh

102)Sri Viswaroopa Anjaneya - Nerul , Navi Mumbai, Maharastra

103)Sri Gutte Anjaneya - Lalbagh west gate, Bengalure, Karnataka

104)sri Kanaspatre Anjaneya - near Minto Hospital,City Marlet, Bengaluru, Karnataka

105)Sri Bara Anjanaya - Langoorwala, Amritsar, Punjab

106)Sri Vada Vrishak Anjaneya - Dadar West, Mumbai, Maharastra

107)Sri Bade Anjaneya - Devprayag, TehriGarhwal, Uttarakhand

108)Sri Yalaguru Anjaneya - Yalguru, Bijapur, Karnataka

109)Sri Parad Anjaneya - Sagar Cantt, Sagar, Madhya pradesh

110)Sri Chola Anjaneya - Bhopal, Madhya pradesh

111)Sri Siri Anjaneya- Chamundi Hills, Mysuru, Karnataka

112)Sri Bhadra Anjaneya - Khuldabad , Maharastra

113)Sri Anuvavi Anjaneya - Coimbatore, Tamilnadu

114)Sri Twin Anjanaya - Pattiswaram, Kumbhakonam, Tamilnadu

115)Sri Siddi Anjaneya - Naandhi, Chitrakoot, Uttarpradesh

116)Sri Sitarama Anjaneya - Santhepettai, Gudiyattam, Vellore, T.N

117)Sri Gomay Anjaneya - Takli, Nasik, Maharastra

118)Sri Ellaikarai Anjaneya - Srirangam, Tamilnadu

119)Sri shakti Anjaneya - Kumbhalgarh, Rajasthan

120)Sri Rokadia Anjaneya - Porbahdar, Gujarat

121)Sri Markata Babaji Anjaneya - Yamuna Bazaar, New Delhi

122)Sri Setu Bhandana jaya veera Anjaneya - Setukarai,Ramanathapuram, T.N




                                                               Biguru Anjaneya Swami

                                                     Abaya Anjaneya Swami


There are many more such Anjaneya temples in India and Abroad i will keep Updating it from time to time.

May Lord Anjaneya or Hanuman Bless us with good Health, Success, Power and Happiness to all.



sri Anjaneya Mangalashtakam:

`Suvarchalaa kalathraaya chaturbhuja dharaaya cha

Ushtraa roodhaya veeraya mangalam Sri Hanumathe.''



-------------- Hari Om -------------











 
 

Saturday, April 28, 2018

Benefits of Sleeping on the Left side

Benefits of Sleeping on Your Left side




Benefits of Sleeping on Your Left Side.
In Ayurveda it is called Vamkukshi.

1. Prevents Snoring
2. Helps in better Blood Circulation
3. Helps in proper Digestion after meals
4. Gives relief to people having Back and Neck pain
5. Helps in filtering and purifying toxins, Lymph fluids and wastes
6. Prevents serious illness as accumulated toxins are flushed out easily
7. Liver and kidneys work better
8. Helps in smooth Bowel movements
9. Reduces workload on Heart and maintain its proper functioning
10. Prevents acidity and Heartburn
11. Prevents Fatigue during in the morning
12. Fat gets digested easily
13. Positive impact on the Brain
14. It delays onset of Parkinson’s and Alzheimer’s Disease
15. It delays Ageing Process.

It is also considered to be the best sleeping position according to Ayurveda.

In brief below is explanation for it:

1. It bolsters the lymphatic system.

We all know that duration of sleep is critical for mental and physical wellbeing, but it turns out that sleep position may be another important factor in the quest for optimum health.
Specifically, a small body of research suggests that, for many people, sleeping on the left side may be the ticket to better health and better sleep. The theory stems from Ayurveda, a holistic approach to health and medicine that originated in India.
So why all the fuss about sleeping on the left side? Turns out it may be good for our digestion, our backs, and even our hearts due to the positions of different organs. Here are six potential benefits that may be derived from catching some Zzzs while lying on your left side.Health benefits of sleeping on you left side
According to Ayurvedic medicine, sleeping on your left side allows your body to better filter lymph fluid and waste via the lymph nodes as the left side of our body is the dominant lymphatic side. Western research has also found that sleeping on the left side can help the body process waste materials from the brain. In contrast, sleeping on your right side can decrease the lymphatic system’s efficiency.

2. It may improve digestion.

When it comes to digestion, sleeping on the left side may be preferable to the right due to the simple matter of gravity. Specifically, lying on the left side allows food waste to easily move from the large intestine into the descending colon (meaning you’re more likely to have a bowel movement upon waking). Sleeping on the left side also allows the stomach and pancreas to hang naturally (our stomach lies on the left side of the body), which can keep the development of pancreatic enzymes and other digestive processes humming. (Need help visualizing this process? Consult the image above).

3. It’s good for your heart.

Doctors have long recommended that pregnant women sleep on their left side in order to improve circulation to the heart. Even if you’re not pregnant (or a woman), sleeping on the left side may help to take some pressure off the heart, as gravity can facilitate both lymph drainage toward and aortic circulation away from the heart. That said, it should be noted that there’s some debate over whether sleeping on the left or right side is best for heart health.

4. It’s ideal for pregnant women.

Sleeping on the left side doesn’t only improve pregnant women’s circulation. It can also help to relieve pressure on the back, keep the uterus from squeezing the liver, and increase blood flow to the uterus, kidneys, and fetus. For this reason, doctors tend to recommend that pregnant women spend as much of their sleep time as possible on their left sides.

5. It may reduce heartburn.

A study published in The Journal of Clinical Gastroenterology found that lying on the left side can help reduce acid reflux symptoms. Again this is because our stomach lies on the left side. Conversely, lying on the right side may aggravate these symptoms. The effects are fairly immediate; if you’re struggling with heartburn after a meal, try taking a 10-minute lie-down on your left side.

6. It may relieve back pain.

People who suffer from chronic back pain may benefit from switching to left-side sleeping. That’s because sleeping on your side can relieve pressure on the spine. Feeling more comfortable, in turn, will improve your chances of getting a good night’s sleep.

Note

While all of these factors point to compelling reasons to start sleeping on your left side, it’s important to note that some people—including those with heart disease, sleep apnea, glaucoma, and carpal tunnel syndrome—may not benefit from side sleeping. If you’re unsure about what sleep positions may be best for you, it’s always a good idea to consult a medical professional.


 

Sleeping on the Left side of the Bed makes you More Cheerful and Positive.

                       ----------- Hari Om ----------

Friday, March 30, 2018

Value of Japa or Meditation

Values of Japa or Meditation

 

                                                     After effects of doing Meditation - 1



                                                        After effects of doing Meditation -2




After effects of doing Meditation -3


After effects of doing Meditation -4


ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ...

"
ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು.

"
ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ

"
" ಕಾರೋ ಜನ್ಮ ವಿಚ್ಚೇದನ
"
" ಕಾರೋ ಪಾಪನಾಶಕl
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕll

"
"ಕಾರವು ಜನ್ಮ ವಿನಾಶಕವಾದದ್ದೆಂದೂ "" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಜನ್ಮ ಪವಿತ್ರವಾಗ ಬೇಕಾದರೆ "ಜಪ" ಅವಶ್ಯಕವೆಂದಾಗುತ್ತದೆ.

"
ಜಪ" ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ. ಜಪಿಸುವ "ಬೀಜ" ಮಂತ್ರವಾಗಲೀ, "ತಾರಕ" ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.

"
ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆಂದರೆ: 🔹ವಾಚಕ 🔹ಉಪಾಂಶು 🔹ಮಾನಸೀ ಜಪ.
ವಾಚಕ: ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು.
ಉಪಾಂಶು:ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು.
ಮಾನಸಿಕ ಜಪ: ಮನಸ್ಸಿನಲ್ಲಿ ಧ್ಯಾನಿಸುವುದು.
ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು. ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ. ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆಂದು ಕರೆಯಲಾಗುತ್ತದೆ.

ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ ಹೀಗಿದೆ "ಗು" ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) "ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.

ಗುರುವು ಉಪದೇಶ ಮಾಡುವ ಮಂತ್ರವು, 🔸ಏಕಾಕ್ಷರಿ🔸ದ್ವೈಕ್ಷರಿ 🔸ಪಂಚಾಕ್ಷರಿ🔸ಅಷ್ಟಾಕ್ಷರಿ 🔸ದಶಾಕ್ಷರಿ🔸ಪಂಚ ದಶಾಕ್ಷರಿ 🔸ಶೋಡಶಾಕ್ಷರಿ. ಇವುಗಳಲ್ಲಿ ಯಾವುದೇ ಇರ ಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.

ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣ ಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ.

ಜಪಸರದಲ್ಲಿ ೧೦೮ ಮಣಿಗಳಿರ ಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.

ಜಪದಲ್ಲಿ ವಿಧಗಳಿವೆ.
1)
ನಿತ್ಯ ಜಪ
2)
ವೈಯಕ್ತಿಕ ಜಪ
3)
ಪ್ರಾಯಶ್ಚಿತ್ತ ಜಪ
4)
ಅಚಲ ಜಪ
5)
ಜಲ ಜಪ
6)
ಅಖಂಡ ಜಪ
7)
ಪ್ರದಕ್ಷಿಣ ಜಪ
8)
ಲಿಖಿತ ಜಪ
9)
ಕಾಮ್ಯ ಜಪ

ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ ಪಠಿಸಲಾಗುತ್ತದೆ.


ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು
ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರ ಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡ ಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸ ಬೇಕು.

ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (೧೦೮) ಜಪ ಮಾಡ ಬೇಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೋಗಿಸ ಬೇಕು. ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ. ಮಾಡುವ ಜಪವನ್ನು ಲೆಕ್ಕ ಮಾಡಿ ಕೊಳ್ಳ ಬೇಕು.

ಅಸಂಖ್ಯಾ ಮಸುರಂ ಯಸ್ಮಾತ್l
ತಸ್ಮಾದತೆ ಗಣೀಯತೆ ದೈವಂll

ಎಂಬುದಾಗಿ ತಿಳಿಸಲಾಗಿದೆ. ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರ ಬೇಕು.

ಪ್ರತಿ ನಿತ್ಯವೂ ಜಪ ಮಾಡುವುದರಿಂದ ಅನೇಕ ಅನುಕೂಲತೆಗಳಿವೆ. ಈ ವಿಷಯವನ್ನು ಅನುಭವಿಗಳು ಈ ರೀತಿ ತಿಳಿಸಿದ್ದಾರೆ.

ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ. ಮನಸ್ಸನ್ನು ಭಗವಂತನ ಕಡೆಗೆ ವಂತೆ ಮಾಡುವುದೇ ಅಲ್ಲದೆ ದುಷ್ಕಾರ‍್ಯಗಳನ್ನು ಮಾಡದಂತೆ ತಡೆ ಹಿಡಿಯುತ್ತದೆ. ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿ ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ. ರಜೋ ಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ. ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ. ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ.

                                    ------------ Hari Om -----------

Sunday, February 25, 2018

Naka Stuti

Nakha-Stuti


                                                            Sri Laxmi Narasimha






                                                            Naka Stuti in Kannada


                                                            another Picture


1
paantvasmaanpuruhuutavairi balavaN matangamAdyat ghaTa
kumbOkshAdrivipATanAdikapaTu pratyEka vajrAyitA.h

O Sri Narasimha, who is omnipresent, may your nails protect me and others at all times. Just as a lion attacks powerful elephant groups and splits apart their heads with its nails and the vajrayudha (Indra's defense weapon) splits the highest mountains, in the similar way, the Asuras (who through the blessings of Sri Brahma, Rudra and the demigods) are like powerful exhilarating elephants who are easily killed by each of Sri Narasimha's nails which are precious and powerful.
2
shriimadkanTeeravAsya prathathasunakharA dAritAratiduura
pradvastha dvAnta shAnta pravitatamansA bAvitAbuuribhAgai.h

All demigods are devoted to and praying to this nail, which eliminates all bad elements in this world. They are very [devoted to] this nail as it will give all six senses of a brahman or devataas. This nail will even give complete knowledge and the gods will come out of the darkness (of ignorance). By praying to this nail, they will get peace and knowledge of all the qualities of Sri Hari.

3
lakshmiikAnta samantatOpi kalayaN naiveshitustEsamam
pashyAmittamavastu duuritaratOpastham rasOyasTama.h

O Sri Narasimha, who has Sri Lakshmi, there is no body equal to you. If there is any thing which is equal, it is 'astama rasa' the famous six essences. Similarly, there is nobody equal or uttama [more excellent] than you.
4
yadrOshakkharadakshaNEtra kuTilaprAntOpitAgnispurat
khadhyOtOpama vishpulinga basitA brahmEsha shakrOtkarA.h

There are many Brahma's, many Rudra's, many Indra's and all of these and other demigods became ashes because of your smallest vision. Your vision is like the smallest firefly [a twinkling insect which glows in night], yet it has the brightness of the sun's rays.


                                                     another pic of Laxmi Narasimha

WORD TO WORD MEANINGS

First sloka:

pa.nTu - protect us
asmAn - all of us
puruhuuta - Indra
vairi - enemies like Asuras
balavat - stronger or powerful
matanga - elephants
mAdhyat - exhilirating or plump
ghata - group(s)
kummbO -frontal globe of an elephant's head
ucchAdri - highest mountains
vipATanA - breaking
AdikapaTu - highest support
pratyEka - each one
vajrAyitA.h - looks to be vajrayudha (Indra's defensive weapon)

Second Sloka:

prathatha - omini present
shriimadkanTeeravAsya - Sri Narasimha along with Sri Lakshmi Devi
sunakaraH - your precious
dAritA - destroyed
arati - six duties of a brahman
duura pradvastaha - solved since ancient times
dvAnta - darkness of poor knowledge or ag^nyana
shaAnta - One who is devoted to Sri Vishnu
pravitita - One who knows qualities of Sri vishnu
manasa - obliged or sensitive
bhavitaH - prayed by
bhuribhagai - Brahma and other devataas who are all devoted devataas

Sloka Three:

lakshmiikAnta - One who has Sri Lakshmi, Sri Narasimha,
samantata - everywhere
kalayaN opi - in search of
eshita - one who has complete knowledge
tE - like you
samam - no equal
pashyAmi naiv - I cannot find or I cannot see

yah - which is
uttamavastu - there is nothing which is equal or greater than door
ataratah - at any distance
appastam - nothing I could find or there is nothing to find.
asTama rasaH - even astama rasa also; who is called astamarasa

Sloka Four:

yad - whose
rOksha - wilderness
utkara - glowing rays
daksha - capable of burning this world or brahmanda
NEtra - eyes
kuTila - hapazard or curved
prAnt - from the end
Opita - wake up
Agni - fire
spurat - glowing or brighness
khadhyOtOpama - Though it look to be a small like twinkling insect (smallesh
insect which twinkles at night times) but glowing like sun
vishpulinga - sparks
basita - ashes
brahma - many Brahma's of previous kalpa
Esha - many rudras
shakra - many Indra's
OtkarA.h - groups



One must read this sincerely to get wonderful benefits daily during the morning pooja.

----------- Hari Om ----------

Friday, January 26, 2018

Sri Madhwacharya

ಶ್ರೀ ಮಧ್ವಾಚಾರ್ಯರು


                                                             Sri Madhwacharya
 

Today being Madhwa Navami - 26th January 2018 a small article on Sri Madhwacharya.
 
  • ಶ್ರೀ ಗುರುಭ್ಯೋ ನಮಃ ಹರಿಃ ಓಂ
    "
    ವ್ಯಾಸಾಯ ಭವ ನಾಶಾಯ ಶ್ರೀಶಾಯ ಗುಣ ರಾಶಯೇ
    ಹೃದ್ಯಾಯ ಶುದ್ಧ ವಿದ್ಯಾಯ ಮಧವಾಯಚ ನಮೋ ನಮಃ "
    "
    ಆಚಾರ್ಯಃ ಪವನೋ ಅಸ್ಮಾಕಂ ಆಚಾರ್ಯಣೀಚ ಭಾರತೀ
    ದೇವೋ ನಾರಾಯಣಃ ಶ್ರೀಶಃ ದೇವಿ ಮಂಗಲದೇವತಾ "
    "
    ಮೂಕೋ ಅಪಿ ಯತ್ಪ್ರಸಾದೇನ ಮುಕುಂದ ಶಯನಾಯತೆ
    ರಾಜ ರಾಜಯತೆ ರಿಕ್ತೋ ರಾಘವೇಂದ್ರಮ್ ತಮ್ ಆಶ್ರಯೇತ್"


    ***

    ನಮ್ಮ ಈ ಪವಿತ್ರವಾದ ಭಾರತ ದೇಶದಲ್ಲಿ ಮನುಷ್ಯನ ಆಧ್ಯಾತ್ಮಿಕ ಪ್ರಗತಿಯನ್ನು ಉನ್ನತಿಯೊಂದಿಗೆ ಸಾಧಿಸಿ ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದು ಹೇಗೆ ಎಂದು ಇಡೀ ಪ್ರಪಂಚಕ್ಕೆ ಹೇಳಿ, ಪ್ರತಿಪಾದಿಸಿ, ತೋರಿಸಿ ಮತ್ತು ಅನುಷ್ಠಾನದಿಂದ ನಡೆದುಕೊಂಡವರು ಆಚರ್ಯತ್ರಯರಲ್ಲಿ ಶ್ರೇಷ್ಠರಾದ ಜಗದ್ಗುರುಗಳಾದ ಸಾಕ್ಷಾತ್ ವಾಯುದೇವರ ಅವತಾರವಾದ ಶ್ರೀ ಮನ್ಮಧ್ವಾಚಾರ್ಯರು.

    ಶ್ರೀ ಮಧ್ವಾಚಾರ್ಯರು ಈಗಣ ಉಡುಪಿ ಜಿಲ್ಲೆಯ ಪಾಜಕ ಎಂಬ ಗ್ರಾಮದ ನಡಿಲ್ಲಾಯ ಮನೆತನದಲ್ಲಿ ಮಧ್ಯಗೇಹ ಮತ್ತು ವೇದವತಿ ಎಂಬ ಸತ್ ಸಂಪ್ರದಾಯಸ್ಥ ಬ್ರಾಹ್ಮಣ ದಂಪತಿಗಳಿಗೆ ವಿಜಯ ದಶಮಿ ಸೆಪ್ಟೆಂಬರ್ ೧೯, ಕ್ರಿ.. ೧೨೦೦ ರಂದು ಜನಿಸಿ ಅವರ ಸ್ವರೋಪೋದ್ಧಾರ ಮಾಡಿದರು. ಇವರ ಕಾಲಮಾನ ಕ್ರಿ.. ೧೨೦೦ ರಿಂದ ೧೨೮೦ ಎಂಬುದು ಪಂಡಿತ ನಾರಾಯಣ ತೀರ್ಥರು ರಚಿಸಿದ ಸುಮಧ್ವ ವಿಜಯ ಎಂಬ ಗ್ರಂಥದಿಂದ ತಿಳಿದು ಬರುತ್ತದೆ. ಇವರ ಜನ್ಮ ತಿಥಿಯನ್ನು 'ಮಧ್ವ ನವಮಿ' ಎಂದು ಮಾಧ್ವರು ಆಚರಿಸುವ ಸಂಪ್ರದಾಯವು ಇಂದಿಗೂ ಬೆಳೆದು ಬಂದಿದೆ.

    ಆಚಾರ್ಯರು ತಮ್ಮ ಬಾಲ್ಯದಲ್ಲಿಯೇ ಅನೇಕ ಮಹಿಮೆಗಳನ್ನು ತೋರಿದವರು. ಅವರು ಬಾಲ್ಯಾವಸ್ಥೆಯಲ್ಲಿದ್ದಾಗ ಒಮ್ಮೆ ಅವರ ತಾಯಿ ಮನೆಯಲ್ಲಿ ಇವರನ್ನು ಬಿಟ್ಟು ತಮ್ಮ ಹಿರಿಯ ಮಗಳಿಗೆ ಕೂಸನ್ನು ನೋಡಿಕೊಳ್ಳಲು ಹೇಳಿ ಹೊರಗಡೆ ಕೆಲಸದ ನಿಮಿತ್ಯ ಹೋಗಿದ್ದರು. ಆಗ ಈ ಬಾಲಕನಿಗೆ ಹಸಿವಾಗತೊಡಗಿತು ತದ ಕಾರಣ ಜೋರಾಗಿ ಅಳಲು ಪ್ರಾರಂಭಿಸಿತು. ಅಲ್ಲಿಯೇ ಇದ್ದ ಅವರ ಅಕ್ಕನಿಗೆ ಏನು ತೋಚದೆ ಆಕಳಿಗೆ ಇಟ್ಟಿದ್ದ ಬಹಳಷ್ಟು ಹುರಳಿಯನ್ನು ತಿನ್ನಿಸಿದಳು. ಸ್ವಲ್ಪ ಸಮಯದ ನಂತರ ಅವರ ತಾಯಿ ಬಂದು ವಿಚಾರಿಸಲಾಗಿ ನಡೆದ ಸುದ್ದಿಯನ್ನು ಹೇಳಿದಳು. ಅವರು ಗಾಬರಿಯಾಗಿ ಕೂಡಲೇ ವೈದ್ಯರೆಡೆಗೆ ಕರೆದುಕೊಂದು ಹೋದಾಗ ಏನೂ ಆಗಿಲ್ಲ ಎಂದು ಹೇಳಿದರು. ಆಚಾರ್ಯರಿಗೆ ಅಂಗುಷ್ಠ ಮಾತ್ರ ಜೀರ್ಣ ಶಕ್ತಿ ಇದ್ದುದರಿಂದ ಈ ರೀತಿಯಾಗಿ ಅಪಾರ ಮಹಿಮೆಗಳನ್ನು ತೋರಿದರು. ಸ್ವತಃ ವಾಯದೇವರ ಅವತಾರವಾದ ಆಚಾರ್ಯರಿಗೆ ಇವ್ಯಾವುದು ಮಹತ್ವದ ಸಂಗತಿಯೇ ಅಲ್ಲ. ಈ ಮಹಿಮೆಗಳನ್ನು ತೋರಿದ ಇವರಿಗೆ ವೇದಗಳು 'ಪಿತುಮಾನ್' ಎಂದು ಕರೆದಿವೆ.

    ಆಚಾರ್ಯರ ಪೂರ್ವಾಶ್ರಮದ ಹೆಸರು ವಾಸುದೇವ ಎಂದು. ಅವರ ಗುರುಗಳಾದ ಅಚ್ಯುತ ಪ್ರಜ್ಞರು ಅವರಿಗೆ ಹನ್ನೊಂದನೇ ವಯಸ್ಸಿನಲ್ಲಿ ಪರಮಹಂಸ ಸನ್ಯಾಸಾಶ್ರಮವನ್ನು ನೀಡಿ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು

    ಒಮ್ಮೆ ಅಚ್ಯುತ ಪ್ರಜ್ಞರು ಮಧ್ವರಿಗೆ ಮತ್ತು ಇನ್ನುಳಿದ ಶಿಷ್ಯವೃಂದಕ್ಕೆ ಪಾಠ ಮಾಡುತ್ತಿರುವಾಗ ಭಾಗವತದ ಒಂದು ಶ್ಲೋಕವನ್ನು ತಪ್ಪಾಗಿ ಅರ್ಥೈಸಿದರು ಮತ್ತು ಅದು ಸರಿಯೆಂದು ಹೇಳಿದರು ಆಗ ಅಲ್ಲಿಯೇ ಇದ್ದ ಮದಾಚಾರ್ಯರು ಅವರ ತಪ್ಪುಗಳನ್ನು ಎತ್ತಿ ಹಿಡಿದು ತೋರಿಸಿ ಒಂದೊಂದೇ ಅರ್ಥ ಹೇಳತೊಡಗಿದರು. ಪ್ರತಿ ಪದದ ಅರ್ಥವನ್ನು ಯಥಾವತ್ತಾಗಿ ಮೂಲ ಅರ್ಥಕ್ಕೆ ಚ್ಯುತಿ ಬಾರದಂತೆ ಹೇಳಿದರು.
    ಅಂದೇ ಕೊನೆ ಯಾಯಿತು ಅವರ ಗುರುಗಳ ಪಾಠ. ಹೀಗೆ ಅವರ ಒಂದು ವಿದ್ವತ್ತಿನ ಪ್ರವಾಹವು ಹರಿದು ಸಜ್ಜನರ ಒಡಲನ್ನು ತುಂಬತೊಡಗಿತು.

    ಅವರು ಸಾರಿದ ಪ್ರಮುಖ ತತ್ವ ವೆಂದರೆ "ಹರಿ ಸರ್ವೋತ್ತಮತ್ವ ವಾಯು ಜೀವೋತ್ತಮತ್ವ". ಕುದಿಪುಸ್ತೂರವನೆಂಬ ದುರ್ವಾದಿಯನ್ನು ಸೋಲಿಸಿ ಮೆರೆದ ತತ್ವವೇ ಈ ಅವಳಿ ತತ್ವಗಳು. ಇವರ ಮೊದಲ ಶಾಸ್ತ್ರ ಕೃತಿ "ಗೀತಾ ಭಾಷ್ಯ". ಶ್ರೀ ಮನ್ನಾರಯಣನ ಆದೇಶದ ಮೇರೆಗೆ ಬ್ರಹ್ಮ ಸೂತ್ರ ಭಾಷ್ಯಗಳನು ರಚಿಸಿದರು. ಆದರೆ ಇದರ ಲಿಪಿಕಾರರು ಶ್ರೀ ಸತ್ಯತೀರ್ಥರು.

    ಹೀಗೆಯೇ ಅವರು ಮೂವತ್ತೆರಡು ಶ್ಲೋಕಗಳನ್ನು ಒಳಗೊಂಡ ಅಣು ಭಾಷ್ಯವನ್ನು ರಚಿಸಿ ತಮ್ಮ ಗುರುಗಳಾದ ಅಚ್ಯುತ ಪ್ರಜ್ನರಿಗೆ ಕಾಣಿಕೆಯಾಗಿ ನೀಡಿದರು. ಇದನ್ನು ರಚಿಸಿದ್ದಕ್ಕಾಗಿ "ಅಭಿನವ ವೇದವ್ಯಾಸ" ಎಂಬ ಬಿರುದು ಇವರನ್ನು ಅರಸಿ ಬಂದಿತು. ಪದ್ಮ ಪುರಾಣದಲ್ಲಿ ತಿಳಿಸಿರುವಂತೆ ತಪ್ತ ಮುದ್ರ ಧಾರಣದ ಅವಶ್ಯಕತೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಸದಾಚಾರದಿಂದ ಹೇಗೆ ಜೀವನವನ್ನು ನಡೆಸಬೇಕು ಎಂಬುದರ ಬಗ್ಗೆ "ಸದಾಚಾರ ಸ್ಮೃತಿ " ಎನ್ನುವ ಗ್ರಂಥವನ್ನು ರಚಿಸಿದರು.

    ಶ್ರೀ ಮಧ್ವರು ಬರುವುದಕ್ಕಿಂತ ಪೂರ್ವದಲ್ಲಿ ತತ್ವಂ ಅಸಿ ಎಂಬುದೇ ಧ್ಯೇಯ ಸಿದ್ಧಾಂತ ಆಗಿತ್ತು. ವೇದಗಳು ಅಪ್ರಮಾಣ ಎಂದು ನಂಬಲಾಗಿತ್ತು. ಇದನ್ನು ವಿರೋಧಿಸಿದವರು ಪ್ರಥಮವಾಗಿ ಶ್ರೀ ರಾಮಾನುಜಾಚಾರ್ಯರೇ ಆದರೂ ಅವರಿಗೆ ಈ ಅವಳಿತತ್ವಗಳ ಸಾರವೇ ಹೊಳೆಯಲಿಲ್ಲ. ತದ ನಂತರ ಇದನ್ನು ವಿರೋಧಿಸಿದ್ದಲ್ಲದೆ ಸಮರ್ಥವಾಗಿ ತತ್ವವಾದವನ್ನು ಮಂಡಿಸಿದವರು ಜಗದ್ಗುರು ಮಧ್ವಾಚಾರ್ಯರು. ಹರಿ ಸರ್ವೋತ್ತಮನೆಂಬ ಶ್ರೇಷ್ಠವಾದ ಮತ್ತು ಅದನ್ನು ಒಪ್ಪುವಂತೆ ಅವರು ಕೊಟ್ಟ ನಿದರ್ಶನಗಳು ವೇದ ಪ್ರಮಾಣಗಳು ಅವರನ್ನು ಇಡೀ ಮಾನವ ಸಮುದಾಯದ ಹರಿಕಾರರೆಂದು ಸಮಾಜವು ಕೊಂಡಾಡಿತು. ಜಗತ್ತು ಮಿಥ್ಯೆ ಎಂಬ ವಾದವನ್ನು ಖಂಡ ತುಂಡು ಮಾಡಿ ಜಗತ್ತು ಸತ್ಯ ಮತ್ತು ಅದು ಭಗವಂತನ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಸರ್ವ ವೇದದ ಮೂಲಕ ಪ್ರಮಾಣ ಮಾಡಿ ಹೇಳಿದರು.

    ಜೀವಕ್ಕೆ ಸಾತ್ವಿಕ ರಾಜಸ ತಾಮಸ ಎಂಬ ತ್ರಿವಿಧದ ಸ್ವಭಾವವಿದೆ ಎಂದು ಹೇಳಿದ ಪ್ರಥಮ ಗುರುಗಳು ಶ್ರೀ ಆಚಾರ್ಯರು. ಮೋಕ್ಷವೆಂಬುದು ಸರೂಪದ ಅರಿವು ಮತ್ತು ಅದರ ತಿಳುವಳಿಕೆ. ಇದನ್ನು ಬಲವಾಗಿ ಸಮರ್ಥಿಸುವ ಒಂದು ಅಂಶ ಎಂದರೆ ಬಿಂಬ- ಪ್ರತಿಬಿಂಬದ ವಿವರಣೆ. ಭಗವಂತನ ಅನುಗ್ರಹ ಮಾತ್ರದಿದಂದ ಈ ಜೀವಕ್ಕೆ ಸ್ವರೂಪೋದ್ಧಾರ ಎಂದು ಸರಳವಾಗಿ ತಿಳಿ ಹೇಳಿದರು.ಕರ್ಮದಿಂದ ಉಂಟಾಗುವ ಸುಖ ದುಖ ಗಳನ್ನೂ ವಿವರಿಸಿದ ಜಗತ್ತಿನ ಮೊದಲ ಜ್ಞಾನಿ

    ಶಂಕರಾಚಾರ್ಯರ ಪ್ರಕಾರ ಎಲ್ಲವು ಆತ್ಮ ಸ್ವರೂಪ. ಸುಖ ದುಖ ಗಳೇ ಇಲ್ಲ. ಎಲ್ಲವೂ ಬರೀ ಭ್ರಮೆ ಮಾಯೆ ಎಂದು ಹೇಳುತ್ತಾರೆ. ಹಾಗಾದರೆ ಈ ಜಗತ್ತು, ನಾವು ಪ್ರತಿನಿತ್ಯ ಕಾಣುವ ಅನುಭವಿಸುವ ವಸ್ತುಗಳು ಮಿಥ್ಯವೆಂದಾಯ್ತು. ಉದಾಹರಣೆಗೆ ಒಂದು ಹಗ್ಗವು ಹಾವಾಗಿ ಕಂಡರೆ ಅದನ್ನು ಭ್ರಮೆ ಎನ್ನುತ್ತಾರೆ ಆದರೆ ವಾಸ್ತವವಾಗಿ ಅದು ಹಗ್ಗವೇ ಆಗಿರುತ್ತದೆ. ಆಗ ಇಲ್ಲ ಇದು ಭ್ರಮೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ಎಲ್ಲವು ಪರಾತ್ಪರನಾದ ಪರಬ್ರಹ್ಮನ ಸ್ವರೂಪವಾದರೆ ನಮಗೆ ದುಃಖ ಏಕಾಗುತ್ತದೆ ? ಹಾಗಾದರೆ ಪರಬ್ರಹ್ಮ ತತ್ವವಾದ ಈ ಆತ್ಮಕ್ಕೆ ಅಜ್ಞಾನ ಎಂಬುದೇ ಜ್ಞಾನವೇ? ಇದಕ್ಕೆ ಉತ್ತರ ಈ ರೀತಿ ಹೇಳಿದರು. ಅನುಕಸ್ಯ ಅಜ್ಞಾನಮ್ ? ಅಂದರೆ ಯಾರಿಗೆ ಅಜ್ಞಾನ. ಕೇವಲ ತರ್ಕದಿಂದ ಅದರ ಅರ್ಥವನ್ನು ವಿವರಿಸುವ ಒಂದು ಕೆಟ್ಟ ರೀತಿಯನ್ನು ಬಿಂಬಿಸಿದ ಹಾಗಾಯ್ತು. ಇದರ ಅರ್ಥ ಅವರ ಬಳಿಯಲ್ಲಿಯೂ ಇರಲಿಲ್ಲ ಮತ್ತು ಅವರಿಗೂ ಗೊತ್ತಿರಲಿಲ್ಲ. ಪ್ರಾಯಶಃ ಆ ವರೆಗಿನ ಬಂದ ಎಲ್ಲ ಜ್ಞಾನಿ ಅಂತ ತಿಳಿದುಕೊಂಡವರಿಗೆ ಇದರ ಅರ್ಥವೇ ಗೊತ್ತಿರಲಿಲ್ಲ. ಇದನ್ನು ಜಗತ್ತಿಗೆ ಮನ ಮುಟ್ಟುವಂತೆ ಹೇಳಿದವರು ಆಚಾರ್ಯ ಶ್ರೀ ಮಧ್ವರು.ಇದರ ಬಗ್ಗೆ ಅವರು ಹೇಳಿದ ಪ್ರಥಮ ವಾಕ್ಯವೆಂದರೆ ಜೀವಿಗೆ ಕರ್ತೃತ್ವ ಎಂಬುದು ಇಲ್ಲ ಏಕೆಂದರೆ ಈ ಜೀವಿಯು ಬಿಂಬರೂಪಿಯಾದ ಭಗವಂತನ ಪ್ರತಿಬಿಂಬ.ಎಲ್ಲವೂ ಪರಾತ್ಪರನಾದ ಭಗವಂತನಿಂದಲೇ ಸಂಭವಿಸುವದು. "ತೇ ನ ವಿನಾ ತೃಣ ಮಪಿ ನ ಚಲತಿ" ಎಂದು ಘಂಟಾಘೋಷವಾಗಿ ಹೇಳಿದರು.

    ಪ್ರತಿಯೊಬ್ಬ ಜೀವಿಗೂ ತನ್ನದ ಆದ ಸ್ವಭಾವವಿದೆ ಮತ್ತು ಅದು ತನ್ನ ಸ್ವರೂಪವನ್ನು ಭಗವಂತನ ಮೂಲಕವೇ ಅರಿತುಕೊಂಡು ಅನುಗ್ರಹವನ್ನು ಪಡೆದುಕೊಳ್ಳುತ್ತದೆ. ತನ್ನ ಜನ್ಮಕ್ಕೆ ಅಂಟಿದ ಕರ್ಮದ ಫಲಕ್ಕೆ ತಕ್ಕಂತೆ ಸುಖ ಮತ್ತು ದುಃಖವನ್ನು ಆ ಜೀವಿಯು ಅನುಭವಿಸುತ್ತದೆ. ತದ ನಂತರ ತನ್ನ ಪೂರ್ಣ ಸ್ವರೂಪ ಜ್ಞಾನದಿಂದ ಮೋಕ್ಷವನ್ನು ಹೊಂದುತ್ತದೆ. ಉದಾಹರಣೆಗೆ ಒಬ್ಬ ತೋಟದ ಮಾಲಿಯು ಒಂದು ಸಣ್ಣ ಬೀಜದಿಂದ ವೃಕ್ಷವನ್ನು ಬೆಳೆದು ಅನೇಕಾನೇಕ ವರ್ಷಗಳವರೆಗೆ ಫಲಗಳನ್ನು ಬೆಳೆಸುತ್ತಾನೆಯೋ ಹಾಗೆಯೇ ಭಗವಂತನು ಮೊಕ್ಷಾರ್ಹವಾದ ಸಾತ್ವಿಕ ಸ್ವಭಾವಗಳಿಂದ ಕೂಡಿದ ಜೀವರಿಗೆ ಸಾಧನೆಯನ್ನು ಮಾಡಿಸುತ್ತಾನೆ.

    ಹೀಗೆ ದುರ್ವಾದಿಗಳನ್ನು ಜಯಿಸುತ್ತ ತಮ್ಮ ಅಖಂಡವಾದ ತತ್ವಜ್ಞಾನವನ್ನು ಜಗತ್ತಿನಾದ್ಯಂತ ಪಸರಿಸುತ್ತಾ ೮೦
    ವರ್ಷಗಳಷ್ಟು ಕಾಲ ಶಿಷ್ಯವೃಂದಕ್ಕೆ ಚರಾಚರ ಸ್ಥಿತಿಗಳನ್ನು ವೇದೋಕ್ತವಾದ ತತ್ವಜ್ಞಾನವನ್ನು ಭಗವಂತನ ಸಾನ್ನಿಧ್ಯಕ್ಕೆ ಕೊಂಡೊಯ್ಯುವ ಸನ್ಮಾರ್ಗವನ್ನು ತೋರಿ ನಡೆದರು.

  • ಒಮ್ಮೆ ಅವರು ಬದರಿ ಸಂಚಾರದಿಂದ ಬರುವಾಗ ಶೋಭನ ಭಟ್ಟರೆಂಬ ಅದ್ವೈತ ವಿದ್ವಾಂಸರೆದುರು ವಾಗ್ವಾದವಾಯಿತು. ಅವರನ್ನು ಸೋಲಿಸಿ ಹರಿ ಸರ್ವೋತ್ತಮ ವಾಯು ಜೀವೋತ್ತಮ ಎಂದು ಸಾರಿದರು. ಆಗ ಮೇಧಾವಿ ಪಂಡಿತರು ಆಚಾರ್ಯರ ಪಾದಕ್ಕೆರಗಿ ಶರಣಾದರು. ಆಗ ಆಚಾರ್ಯರು ಅವರ ವಿನಯಕ್ಕೆ ಮಾರು ಹೋಗಿ ಅವರನ್ನು ಪ್ರಿಯ ಶಿಷ್ಯರನ್ನಾಗಿ ಸ್ವೀಕರಿಸಿದ್ದಲ್ಲದೇ ಮುಂದೆ ಸನ್ಯಾಸಾಶ್ರಮವನ್ನು ನೀಡಿದರು. ಅವರೇ ಶ್ರೀ ಪದ್ಮನಾಭ ತೀರ್ಥರೆಂದು ಪ್ರಖ್ಯಾತರಾದರು. ಪ್ರಪ್ರಥಮ ಬ್ರಹ್ಮ ಸೂತ್ರ ಭಾಷ್ಯದ ಶ್ರೋತೃಗಳು ಇವರೇ ಎಂಬುದು ವಿಶೇಷ.
    ಮಲ್ಪೆಯಲ್ಲಿ ಒಂದು ದಿನ ಶ್ರೀಗಳವರು ಸಮುದ್ರ ತೀರಕ್ಕೆ ಬಂದಾಗ ಅಲ್ಲಿ ಒಂದು ಹಡಗು ಮುಳುಗುತ್ತಿರುವಾಗ ಅದನ್ನು ತಮ್ಮ ತಪಶಕ್ತಿಯಿಂದ ದಡಕ್ಕೆ ಮುಟ್ಟಿಸಿದರು ಆಗ ಅದರ ಮಾಲಿಕನು ಇವರು ಕೇಳಿದ್ದನ್ನು ಕೊಡುತ್ತೆನೆನ್ನಲು ಅವನ ಹಡಗಿನಲ್ಲಿದ್ದ ಗೋಪಿ ಚಂದನದ ಗಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ಬೇಡಿದರು.

    ಆ ಪ್ರತಿಮೆಯನ್ನು ಉಡುಪಿಯಲ್ಲಿ ಕ್ರಿ. ಶ ೧೨೩೮ ವಿಳಂಬಿ ಸಂವತ್ಸರ ಮಾಘ ಶುಕ್ಲ ತ್ರತೀಯ ದಂದು ಪ್ರತಿಷ್ಠಾಪಿಸಿದರು.
    ತಮ್ಮ ಉತ್ತರಾಧಿಕಾರಿಯಾಗಿ ಎಂಟು ಮಂದಿ ಬಾಲಸನ್ಯಾಸಿಗಳನ್ನು ವೇದಾಂತ ಪಂಡಿತರನ್ನಾಗಿ ಮಾಡಿ ಪ್ರಪಂಚದ ಉದ್ದ ಅಗಲಕ್ಕೂ ತತ್ವವಾದವನ್ನು ಪ್ರಚಾರ ಮಾಡಿದರು.ಅವರೇ ಇಂದಿಗೂ ಕೂಡ ಉಡುಪಿಯ ಅಷ್ಟ ಬಾಲ ಯತಿಗಳು ಎಂದು ಪ್ರಖ್ಯಾತಿ ಪಡೆದವರು.

    ಕ್ರಿ. ಶ ೧೯೮೦ ಈಶ್ವರ ಸಂವತ್ಸರ, ಮಾಘ ಶುದ್ಧ ನವಮಿಯಂದು ಉಡುಪಿಯ ಅನಂತೆಶ್ವರನ ದೇವಸ್ಥಾನದಲ್ಲಿ ಶ್ರೀ ಮನ್ಮಧ್ವಾಚಾರ್ಯರು ಉಪನ್ಯಾಸ ಮಾಡುವಾಗ ದೇವತೆಗಳು ಪುಷ್ಪ ವೃಷ್ಟಿಗೈದರು. ತದ ನಂತರ ಅವರು ಬದರಿಗೆ ತೆರಳಿದರು.ಆ ನಂತರ ಇಂದಿನವರೆಗೂ ಅವರು ಬದರಿಕಾಶ್ರಮದಲ್ಲಿ ಶ್ರೀ ಮನ್ನಾರಯಣನ ಸೇವೆಯನ್ನು ಮಾಡುತ್ತಿದ್ದಾರೆಂದು ಪ್ರತೀತಿ.


                                                               Acharya Madhwa


        ------------- Hari Om -----------