Tuesday, March 30, 2021

Satya Bodha Tirtharu

 

ಶ್ರೀ ಗುರುಭ್ಯೋ ನಮಃ 

                                        Sri Satya Bodha Tirthara Moola Brindavana                                                                                in Savanuru near Haveri, Karnataka
 

ಶ್ರೀ ಸತ್ಯಬೋಧತೀರ್ಥರು (ಸವಣೂರು)


ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |

नैवेद्यगविषं रामे वीक्ष्य तद्भुक्तिभाग् गुरु:
योदर्शयद्रविं रात्रौ सत्यबोधोस्तु मे मुदे ।


ಶ್ರೀಸತ್ಯಭೋಧೊ ನಿಜಕಾಮಧೇನು/
ಮಾಯಾತಮಃಖಂಡನ ಚಂಡಭಾನುಃ/
ದುರಂತಪಾಪ ಪ್ರದಹೇ ಕೃಶಾನುಃ
ದೇಯಾನ್ಮಮೇಷ್ಟಂ ಗುರುರಾಜಸೂನುಃ/

ಇಂದುಶ್ರೀಸತ್ಯಭೋಧತೀರ್ಥರ #ಆರಾಧನೆನಿಮಿತ್ಯಈ_ಲೇಖನಮಾಲಿಕೆಸಮರ್ಪಣೆ

ಶ್ರೀಸತ್ಯಭೋಧ ತೀರ್ಥರು ಅಂದಿನ ರಾಜಕೀಯ ವಿಷಮ ಗಳಿಗೆಯಲ್ಲೂ,ಮದ್ವ ಮತದ ಪ್ರವರ್ಧಮಾನಕ್ಕೆ ಕಾರಣಕರ್ತರು.


ದಾಸ ಸಾಹಿತ್ಯವನ್ನು ವಿಶೇಷವಾಗಿ ಬೆಳೆಸಿ ಪೋಷಿಸಿದರು.

ಗುರುಗಳಾದ ಶ್ರೀ ಸತ್ಯಪ್ರಿಯತೀರ್ಥರಿಂದ ಸನ್ಯಾಸ ದೀಕ್ಷೆ‌ಪಡೆದು , ಉತ್ತರಾಧಿ ಮಠದ ಹಂಸನಾಮಕ‌ ಪೀಠದಲ್ಲಿ ಶ್ರೀ ಸತ್ಯಭೋಧ ತೀರ್ಥ ರಂದು ನಾಮಕರಣ ಗೊಂಡು ಪೀಠಾಧಿಪತಿ ಗಳಾದರು. ಇವರು ಮಾರ್ಕಾಂಡೇಯ ಮುನಿಗಳ ಅಂಶ ಸಂಭೂತರು. ಕಕ್ಷಾತಾರತಮ್ಯ ೨೭.

ಸತ್ಯಭೋಧರು ಅತ್ಯದ್ಭುತ ವಾಗ್ಮಯಿಗಳು ಮತ್ತು ಪ್ರವಚನಕಾರರಾಗಿದ್ದರು. ಕಲಿಯುಗದ ಕಲ್ಪವೃಕ್ಷ ಕಾಮಧೇನು ಆಗಿದ್ದರು. ನೂರಾರು ಪಂಡಿತರನ್ನು ನಿರ್ಮಿಸಿದ್ದರು. ಹಾಗೇ ಹರಿದಾಸ ವರಣ್ಯೇರಿಗೆ ಮತ್ತು ದಕ್ಷಿಣ ಭಾರತದಲ್ಲಿ ಮತ್ತು ಎಲ್ಲ ಪಂಥದ ಜನರಿಗೂ ಪರಮ ಪೂಜ್ಯ ಶ್ರೀಗಳಾಗಿದ್ದರು.ಇವರು ರಾಜಕೀಯ, ಸಾಮಾಜಿಕ, ಎಲ್ಲ ಕ್ಷೇತ್ರಗಳಲ್ಲೂ ಪಾತ್ರ ವಹಿಸುತ್ತಿದ್ದಲ್ಲದೇ ತ್ರಿವಿಕ್ರಮ ಸಾಧಿಸುತ್ತಿದ್ದರು.


ಬೃಂದಾವನ ಪ್ರವೇಶ ಕ್ರಿ..೧೭೮೩ ( 1783 ) ಇವರ ಕಾಲಾವಧಿ ೧೭೪೪-೧೭೮೩. ( 1744 - 1783 )

ಜೀವನ ಚರಿತ್ರೆ

ರಾಯಚೂರಿನ ಹರಿ ಆಚಾರ್ಯ ಮತ್ತು ಅರಳಮ್ಮ ದಂಪತಿಗಳು ವಾಸವಾಗಿದ್ದರು. ಶ್ರೀ ರಾಮನ ಉಪಾಸನೆ ಯಿಂದ , ಮುದ್ದಾದ ಗಂಡುಮಗು ಜನನವಾಯಿತು.ಆ ಮಗುವಿಗೆ ರಾಮಚಂದ್ರ ಆಚಾರ್ಯ ಎಂದು ನಾಮಕರಣ ಮಾಡಿದರು.

ತಮ್ಮ ಗುರುಗಳಾದ ಶ್ರೀ ಸತ್ಯ ತೀರ್ಥರಲ್ಲಿ ಸಕಲ ಶಾಸ್ತ್ರಗಳನ್ನು ಕಲೆತರು. ಮುಂದೆ ಶಕೆ ೧೭೪೪" ರುದಿರೋದ್ಗಾರಿ"ಸಂವತ್ಸರದ ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಶ್ರೀ ಹಂಸನಾಮಕ ಪೀಠವನ್ನು ಅಲಂಕರಿಸಿದರು. ಗುರುಗಳು;ಇವರಿಗೆ "ಸತ್ಯಭೋದತೀರ್ಥ"ರೆಂದು ನಾಮಕರಣಮಾಡಿದರು.

ಸವಣೂರಿನ ನವಾಬ ಖಂಡೇರಾಯ, ಸರದಾರ ಜಾನೋಜಿ ನಿಂಬಾಳಕರ, ತ್ರಿಕಟಾಪಲ್ಲಿಯಭೀಮರಾಯ,ತಂಜಾವೂರಿನ ಪ್ರತಾಪಸಿಂಹ ಹೀಗೆ ಅನೇಕ ರಾಜಕೀಯ ವ್ಯಕ್ತಿಗಳು ಇವರ ಒಡನಾಡಿಯಾಗಿ ದ್ದರಲ್ಲದೇ..ಇವರ ಶಿಷ್ಯರಾಗಿದ್ದರು.

ಶ್ರೀ ಸತ್ಯಸಂಧ ತೀರ್ಥರು, ಶ್ರೀ ಸತ್ಯವರತೀರ್ಥರು,ಶ್ರೀ ಸತ್ಯಧರ್ಮ ತೀರ್ಥರು, ಶ್ರೀ ಸತ್ಯಸಂಕಲ್ಪ ತೀರ್ಥರಾದಿ ಯತಿವರೇಣ್ಯರು ಇವರ ಶಿಷ್ಯರಾಗಿದ್ದರು.
ಮಾದನೂರಿನ ವಿಷ್ಣು ತೀರ್ಥರು,ವ್ಯಾಸತತ್ವಜ್ಞರು,ರಾಯರ ಮಠದ ಧೀರೆಂದ್ರತೀರ್ಥರು, ವರದೇಂದ್ರತೀರ್ಥರು .


ಇವರೆಲ್ಲ ಸತ್ಯಭೋಧರ ಸಮಕಾಲಿನರು ಹಾಗೂ ಗೌರವ ಪ್ರಧಾನ ಪಾತ್ರರಾಗಿದ್ದರು.

ಗಲಗಲಿ ಮುದ್ಗಲ ಆಚಾರ್ಯರರು (ಗಲಗಲಿ ಅವ್ವನವರ ಪತಿ), ಪಾಂಡುರಂಗಿ ನರಸಿಂಹ ಆಚಾರ್ಯರರು, ಮನ್ನಾರಿ ಶ್ರೀನಿವಾಸ ಆಚಾರ್ಯರರು, ಗುರ್ಲಪಾಡಿಶ್ರೀನಿವಾಸ ಆಚಾರ್ಯರರು,ಉಮರ್ಜಿ ಕೃಷ್ಣಾಚಾರ್ಯರರು,ಬಿದರಹಳ್ಳಿ ಶ್ರೀಪತ್ಯ ಆಚಾರ್ಯರು ಹೀಗೆ ಅನೇಕ ಮುಂತಾದ ವರು ಇವರಲ್ಲಿ ಶಾಸ್ತ್ರ ಪ್ರವೀಣರಾದ ವಿದ್ವಾಂಸರು.

ವಿಜಯದಾಸರು,ಗೋಪಾಲ ದಾಸರು(ಇವರ ಅಣ್ಣತಮ್ಮಂದಿರು),
ಜಗನ್ನಾಥ ದಾಸರು, ಮೋಹನದಾಸರು, ಶ್ರೀದ ವಿಠ್ಠಲ ದಾಸರು, ಅನೇಕರಿಗೆ ಗುರು ಸ್ಥಾನದಲ್ಲಿದ್ದು ತತ್ವೋಪದೇಶಗಳನ್ನು ನೀಡಿ
ಮಾರ್ಗದರ್ಶಕರಾಗಿದ್ದರು

ಇವರು ತಿರುಚನಾಪಳ್ಳಿ, ಶ್ರೀ ಮುಷ್ಣಂ,ಅರಣಿ,ಕನ್ಯಾಕುಮಾರಿ,ಶ್ರೀರಂಗಂ,ತಿರುಪತಿ,ಕಡಪ,ಹೈದ್ರಾಬಾದ,ರಾಯಚೂರ,ಸುರಪುರ,ಗುಲ್ಬರ್ಗಾ,ಬಳ್ಳಾರಿ,ಚಿತ್ರದುರ್ಗ, ಹರಿಹರ ಮೊದಲಾದ ಊರಗಳಲ್ಲಿ ದ್ವಿಗ್ವಿಜಯ ಯಾತ್ರೆ ಮುಗಿಸಿ, ಕೊನೆಗೆಸವಣೂರನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.ಅಲ್ಲಿಯೇ ತಮ್ಮ ಕಾರ್ಯಕ್ಷೇತ್ರ ವನ್ನಾಗಿಸಿ ಬಹಳ ದಿನಗಳವರಿಗೆ ಅಲ್ಲಿಯೇ ವಾಸ ಇದ್ದರು.



Tanka Saale 
 

ಟಂಕಸಾಲೆಯನ್ನು ನಿರ್ಮಿಸಿ ಬೆಳ್ಳಿ ಮತ್ತು ಬಂಗಾರದ ತಮ್ಮ ಭಾವಚಿತ್ರವುಳ್ಳ‌ ನಾಣ್ಯಗಳನ್ನು ದಕ್ಷಿಣ ಭಾರತದಲ್ಲಿ ಚಲಾವಣೆಗೆ ತಂದರು. ಇವರ ಕಾಲಕ್ಕೆ ಈ ಮಹಾ ಸಂಸ್ಥಾನಕ್ಕೆ "ಶ್ರೀ ಸತ್ಯಭೋಧ ಮಠ" ಎಂದು ಪ್ರಸಿದ್ಧಿಯಾಗಿತ್ತು.ಹಾಗೆಯೇ ಕರೆಯುತ್ತಿದ್ದರು.

ಇವರ ಮಹಿಮೆಯು ಬಹಳ ಅಪಾರ.


)ಪೇಶ್ವೆಯ ಸಹೋದರಮಾವ ಆನಂದಿರಾಯನಿಗೆ ರೋಗ ಪರಿಹರಿಸಿಅನುಗ್ರಹಿಸಿದರು


)ವಿಷ ಪರಿಹಾರಕ್ಕಾಗಿ ರಾತ್ರಿ ಪೂಜೆ ಮಾಡಿ ಸೂರ್ಯನಾರಯಣನ ದರ್ಶನ ಮಾಡಿಸಿದವರು


) ಕಪಿ ರೂಪದ ಕೊನ್ಹೇರಿ ಆಚಾರ್ಯರಿಗೆ ಗೀತಾ ಭಾಷ್ಯ ಪಾಠ ಹೇಳಿ ಉದ್ಧರಿಸಿದರು.


)ಸವಣೂರ ವಿಜಯದಶಮಿ ಯಂದು ಬಾವಿಯಲ್ಲಿ ಗಂಗೆಯು ಒಲಿದುಬಂದಳು.ಅದೇ"ವಿಷ್ಣು ತೀರ್ಥ"ವೆನಿಸಿತು.


)ಗೋಪಾಲ ದಾಸರು ಮತ್ತು ಅವರ ಅನುಜರನ್ನು ಪ್ರತ್ಯಕ ಕೂಡಿಸಿ
"
ಮಾರಮದಘನ್ನ" ಎಂಬ ಸಾಹಿತ್ಯ ಬರೆಯಿಸಿ ಅವರ ಶಕ್ತಿಯನ್ನು ಪರಿಚಯಿಸಿ ದರು.


)ಜಗನ್ನಾಥ ದಾಸರಿಗೆ ಅನುಗ್ರಹಿಸಿ,
ಸವಣೂನರಿನಲ್ಲಿಯೇ ಹರಿಕಥಾಮೃತಸಾರ
ಬರೆಯಿಸಿ , ಕೊನೆಗೆ ಆಶಿರ್ವಾದ ರೂಪದಲ್ಲಿ ತಮ್ಮ ಪಾದುಕೆ‌ ಮತ್ತು
ಮಣೆಯನ್ನು ನೀಡಿ, ಶಿಷ್ಯರಾದ ಜಗನ್ನಾಥ ದಾಸರ ಗೋಪಾಳಬುಟ್ಟಿ ಯಲ್ಲಿ ಮಂತ್ರಾಕ್ಷತೆ ನೀಡತೊಡಗಿದರು.


) ಶ್ರೀ ಸತ್ಯಸಂಧತೀರ್ಥರಿಗೆ ೧೦ ಆಯುಷ್ಯ ದಾನ ಮಾಡಿದರು.

ಶ್ರೀ ಮುಷ್ಣ ಭೂವರಹಾ ದೇವರಿಗೆ ಲಕ್ಷ ತುಳಸಿ,ಲಕ್ಷ ಹೂಗಳಿಂದ, ಅರ್ಚಿಸಿದರು. ಕೊನೆಗೆ ತಮ್ಮ ೭೪ ನೇ ವಯಸ್ಸಿನಲ್ಲಿ "ಫಾಲ್ಗುಣ ಕೃಷ್ಣ ಪ್ರತಿಪಾದ" ದಂದು, ಸವಣೂರಿನಲ್ಲಿ ವೃಂದಾವನ ಪ್ರವೇಶಿಸಿದರು.

ವಿಜಯದಾಸರಾದಿ ೧೪ ಜನ ಹರಿದಾಸರುಇವರ ಸ್ತೋತ್ರಪದ ರಚಿಸಿದ್ದಾರೆ

ದಾಸ ಮತ್ತು ವ್ಯಾಸ ಸಾಹಿತ್ಯವನ್ನುಉನ್ನತ ಸ್ಥಾನಕ್ಕೆ ಕರೆದೋಯ್ದ ಕೀರ್ತಿ ಇವರದು.

ಶ್ರೀಕೃಷ್ಣಾರ್ಪಣಮಸ್ತು        ----------- Hari Om -----------


Sunday, March 21, 2021

Ahwata or Peepal or Arali Tree Pooja

Importance of  Ahwata or Peepal or Arali Tree Pooja

 

                                                           Aswata or Peepal or Arali Tree
                                 

ಅಶ್ವತ್ಥ ಪೂಜೆ or Peepal tree or Arali tree Pooja



ಅಶ್ವಥ್ ವೃಕ್ಷವನ್ನು ಶನಿವಾರದ ದಿನ ಮಾತ್ರ ಮುಟ್ಟಿಪೂಜೆ ಮಾಡಬೇಕು.
ಬೇರೆ ದಿನಗಳಲ್ಲಿ ಮುಟ್ಟಬಾರದು.


ಏಕೆ??

ನಾವು ಚಿಕ್ಕವರಿದ್ದಾಗ ನಮ್ಮ ಮನೆ ಹತ್ತಿರಾನೆ ದತ್ತ ಮಂದಿರ ಇತ್ತು , ಎಲ್ಲಿ ದತ್ತ ದೇವಸ್ಥಾನ ಇರುತ್ತದೆಯೊ ಅಲ್ಲಿ ಅರಳಿ ಮರ ಇರಲೇ ಬೇಕು. ಅದಕ್ಕೆ ಅಶ್ವಥ್ ವೃಕ್ಷ ಅಂತಾ ಹೇಳುತ್ತೇವೆ.. ನಮ್ಮ ತಾಯಿ ನಮಗೆ ಬೆಳಿಗ್ಗೆ ಎದ್ದು ತಕ್ಷಣ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಅಶ್ವಥ್ ಕಟ್ಟೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ ಬಂದ ಮೇಲೆನೆ ಕಾಫಿ ,ಹಾಲು ಕುಡಿಯುವುದಕ್ಕೆ ಕೊಡ್ತಿದ್ರು...ಆವಾಗ ಅಮ್ಮ ಹೇಳ್ತಿದ್ರು ಅಶ್ವಥ್ ವೃಕ್ಷ ಮುಟ್ಟಬೇಡˌ ಪ್ರದಕ್ಷಿಣೆ ಹಾಕಿ ದೂರದಿಂದ ನಮಸ್ಕಾರ ಮಾಡಿ ಬಾ ಅಂತ , ಆದರೆ ಶನಿವಾರ ಮಾತ್ರ ಅದನ್ನು ಮುಟ್ಟಿ ನಮಸ್ಕಾರ ಮಾಡುತ್ತಿದ್ದೆ ವು....

ಅಶ್ವಥ್ ವೃಕ್ಷ ಎಷ್ಟು ಶ್ರೇಷ್ಠ ಅಂದರೆ

ಕೃಷ್ಣ ಹೇಳುತ್ತಾನೆ: “ಸರ್ವ ವೃಕ್ಷಗಳಲ್ಲಿ ಅಶ್ವತ್ಥ ನಾನು” ಎಂದು.


ಅಶ್ವತ್ಥ ವೃಕ್ಷದ ಮಧ್ಯಭಾಗದಲ್ಲಿ ವಿಷ್ಣು, ತುದಿಯಲ್ಲಿ ರುದ್ರ, ಮೂಲಭಾಗದಲ್ಲಿ ಬ್ರಹ್ಮ ದೇವರು ನೆಲೆಸಿರುವ ಈ ವೃಕ್ಷವು ಯಜ್ಞ ಮಾಡುವಾಗ ಶಮಿ ಮತ್ತು ಅರಣಿ(ಅರಳಿ) ಸಮಿತೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿತೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿತೆಯನ್ನು ಕಾಷ್ಟವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಠ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿತೆ ಒಂದು ಪ್ರಮುಖ ಸಾಧನ.

ಸಾಡೇ ಸಾಥ್ ಶನಿ ದೋಷವನ್ನು ಕೂಡ ಅಶ್ವತ್ಥ ಮರ ದೂರ ಮಾಡುತ್ತದೆ....

ಇಂತಹ ಅರಳಿ ಮರವನ್ನು ಯಾಕೆ ಉಳಿದ ದಿನದಲ್ಲಿ ಮುಟ್ಟಬಾರದು ಈ ಪ್ರಶ್ನೆಗೆ ಉತ್ತರ ಹೇಳ್ತೇನೆ ಕೇಳಿ ...

ಇದು ಪದ್ಮಪುರಾಣದ ನೂರಾ ಹದಿನೆಂಟನೇಯ ಅಧ್ಯಾಯದಲ್ಲಿ ಸೂತರಿಗೆ ಋಷಿಗಳು ಪ್ರಶ್ನಿಸುತ್ತಿದ್ದಾರೆ... ಆಗ ಶ್ರೀಕೃಷ್ಣ ಸತ್ಯಭಾಮೆಗೆ ಹೇಳಿದ ಉತ್ತರವನ್ನು ಋಷಿಗಳಿಗೆ ಸೂತರು ಹೇಳುತ್ತಾರೆ...


ಎಲ್ಲ ಋಷಿಗಳು ಕೇಳುತ್ತಾರೆ

ಅಸ್ಪೃಶ್ಯತ್ವಂ ಕಥಂ ಯಾತಃ ಸೂತ ಭೋಧಿತರುಸ್ತ್ವಯಂ l
ಸ್ಪೃಶ್ಯ ತ್ವಂ ಚ ಕಥಂ ಪ್ರಾಪ್ತಃ ತದಾಯಂ ಶನಿವಾಸರೇ ll
ಏತದ್ವಿಸ್ತರತಸ್ಸರ್ವಂ ವಕ್ತುಮರ್ಹಸಿ ನೋ ಭಗವಾನ್.

ಎಲೈ ಸೂತನೇ ಶನಿವಾರ ಹೊರತು ಮಿಕ್ಕ ದಿನಗಳಲ್ಲಿ ಏಕೆ ಅರಳಿ ಮರವನ್ನು ಮುಟ್ಟಬಾರದು ವಿಸ್ತಾರವಾಗಿ ಹೇಳು..


ಆಗ ಸೂತ ಮಹರ್ಷಿಗಳು ಹೇಳುತ್ತಾರೆ

ಸಮುದ್ರ ಮಥನದಿಂದ ನಾನಾ ವಸ್ತುಗಳು ಬಂದವು ಅದರಲ್ಲಿ ಮೊದಲು ಬಂದವಳು ಅಲಕ್ಷ್ಮೀ ಅಂದರೆ ದಾರಿದ್ರ್ಯ ಲಕ್ಷ್ಮೀ ನಂತರ ಬಂದವಳು ಮಹಾಲಕ್ಷ್ಮೀ ,ದೇವತೆಗಳು ಹೊಂದಿದ ರತ್ನಗಳಲ್ಲಿ ಮಹಾಲಕ್ಷ್ಮಿಯನ್ನೂ , ಕೌಸ್ತುಭವನ್ನೂ , ಆ ದೇವತೆಗಳು ವಿಷ್ಣುವಿಗೆ ಕೊಟ್ಟರು. ವಿಷ್ಣುವು ಲಕ್ಷ್ಮಿಯನ್ನು ಹೆಂಡತಿಯನ್ನಾಗಿ ಒಪ್ಪಿಕೊಂಡಾಗ ಆಕೆಯು ವಿಷ್ಣುವಿಗೆ ಇಂತೆಂದು ವಿಜ್ಞಾಪಿಸಿಕೊಂಡಳು..


ಎಲೆ ಮಧುಸೂದನನೇ ನನಗಿಂತ ಮೊದಲು ಹುಟ್ಟಿದ ಈ ಅಲಕ್ಷ್ಮೀಗೆ ಮೊದಲು ವಿವಾಹ ರೂಪವಾದ ಸಂಸ್ಕಾರವಾಗದೆ ನನ್ನನ್ನು ಹೇಗೆ ಮದುವೆಯಾಗುತ್ತೀಯಾ ? ಈಕೆಗೆ ಮೊದಲು ಮದುವೆ ಮಾಡಿ ಅನಂತರ ನನ್ನನ್ನು ಮದುವೆಯಾಗಿ ಕರೆದುಕೊಂಡು ಹೋಗು ಎಂದು ಬಿನ್ನವಿಸಿದಾಗ.


ಆಗ ಲೋಕಮಾನ್ಯ ನಾದ ವಿಷ್ಣುವು ಆಕೆಯ ಈ ಮಾತನ್ನು ಕೇಳಿ ಧೀರ್ಘವಾಗಿ ತಪಸ್ಸು ಮಾಡಿದ.. ನಂತರ ಉದ್ಧಾಲಕ ನೆಂಬ ಋಷಿಗೆ ಲಕ್ಷ್ಮಿಯ ಮಾತಿನಂತೆ ಅಲಕ್ಷ್ಮೀ ಯನ್ನು ಕೊಟ್ಟು ಮದುವೆ ಮಾಡಿದ .


ವಿಕಾರ ರೂಪವುಳ್ಳ ಅಲಕ್ಷ್ಮೀಯನ್ನು ಉದ್ದಾಲಕನು ವಿಷ್ಣುವಿನ ಮಾತನ್ನು ಮೀರಲಾರದೆ ಒಪ್ಪಿ ಮದುವೆ ಮಾಡಿಕೊಂಡ , ಅನಂತರ ಅಲಕ್ಷ್ಮೀಯನ್ನು ಉದ್ಧಾಲಕನು ತನ್ನ ಆಶ್ರಮಕ್ಕೆ ಕರೆದುಕೊಂಡು ಬಂದ. ಹೋಮದ ಧೂಮ ಉಳ್ಳ ,ಸುವಾಸನೆಯಾದ , ವೇದಘೋಷ ಗಳಿಂದ ಕೂಡಿರುವ ಆ ಆಶ್ರಮವನ್ನು ದೂರದಿಂದಲೇ ನೋಡಿ ಆಕೆಯು ದುಃಖಗೊಂಡು ಇಂತೆಂದಳು... ನಾನು ನಿನ್ನ ಆಶ್ರಮಕ್ಕೆ ಬರಲಾರೆ ಕಾರಣ
ವೇದ ಧ್ವನಿಯಿಂದ ಕೂಡಿದ, ಪೂಜಾ ಪಾಠ ನಡೆಯುವ ಸ್ಥಳ ಶಾಂತವಾಗಿರುವ ಈ ಸ್ಥಳವು ನನ್ನ ವಾಸಕ್ಕೆ ಯೋಗ್ಯವಲ್ಲ , ಅಂತ ಹೇಳಿದಾಗ
ಉದ್ಧಾಲಕ ನಿನ್ನ ವಾಸ ಸ್ಥಳ ಯಾವುದು ಅಂತ ಕೇಳುತ್ತಾನೆ ಆಗ ಆ ದಾರಿದ್ರ್ಯ ಲಕ್ಷ್ಮೀ ಹೇಳುತ್ತಾಳೆ…


ಒಬ್ಬೊಬ್ಬರಿಗೆ ಸ್ನೇಹದಿಂದ ದಂಪತಿಗಳಿರುವಲ್ಲಿಯೂ , ಪೂಜೆ ಪುನಸ್ಕಾರ ನಡೆಯುವಲ್ಲಿ , ಹಿರಿಯರಿಗೆ ಗೌರವಾದರ ನಡೆಯುವಲ್ಲಿ, ಅತಿಥಿಸತ್ಕಾರ ನಡೆಯುವಲ್ಲಿ ನೀತಿವಂತರ ಮನೆಯಲ್ಲಿ ನನ್ನ ವಾಸ ಇರುವುದಿಲ್ಲ…


ಎಲ್ಲಿ ಪ್ರತಿದಿನ ಯಾವತ್ತೂ ಯಾವ ಮನೆಯಲ್ಲಿ ಜಗಳ ನಡೆಯುವುದು , ಅತಿಥಿಗಳು ನಿರಾಶರಾಗಿ ಎಲ್ಲಿಂದ ಹೊರಹೋಗುತ್ತಾರೆ, ಜೂಜು ನಡೆಯಲ್ಲಿ ಪರರ ಹಣವನ್ನು ಕದಿಯುವಲ್ಲಿ , ಕಸಕಡ್ಡಿಗಳಿಂದ ತುಂಬಿದ ಮನೆಯಲ್ಲಿ , ಪೂಜೆ ಪುನಸ್ಕಾರ ನಡೆಯದ ಸ್ಥಳದಲ್ಲಿ , ಗೋವಧೆ ಮಧ್ಯಪಾನ ತುಂಬಿರುವಲ್ಲಿ ನಾನು ವಾಸಿಸುತ್ತೇನೆ ಅಂದಾಗ ...
ಉದ್ದಾಲಕನು ಹೇಳಿದ ಎಲೈ ಅಲಕ್ಷ್ಮೀಯೇ ನೀನು ಅರಳಿ ಮರದ ಬುಡದಲ್ಲೇ ಕ್ಷಣ ಕಾಲವಿರು . ನಿನ್ನ ವಾಸಕ್ಕೆ ಸರಿಯಾದ ಮನೆಯನ್ನು ನೋಡಿಕೊಂಡು ಬರುತ್ತೇನೆ ,ಹೀಗೆಂದು ಹೇಳಿ ಆಕೆಯನ್ನು ಅಲ್ಲಿ ಉದ್ದಾಲಕನು ಕುರಿಸಿ ಹೊರಟುಹೋದನು ಬಹಳಹೊತ್ತು ನೋಡಿದರು ಉದ್ದಾಲಕನ ಬಾರದಿರಲು ಗಂಡನು ತನ್ನನ್ನು ಬಿಟ್ಟು ದರಿಂದ ಆಕೆಯೂ ಬಹುವಾಗಿ ಅತ್ತಳು.
ವೈಕುಂಠದಲ್ಲಿರುವ ಲಕ್ಷ್ಮಿಯು ಈ ಅಲಕ್ಷ್ಮಿ ಅಳುವಿನ ಧ್ವನಿಯನ್ನು ಕೇಳಿ ತಾನೂ ಕಿನ್ನಳಾಗಿ ವಿಷ್ಣುವಿಗೆ ಇಂತೆಂದಳು..


ಸ್ವಾಮಿ ನನ್ನ ಅಕ್ಕನ ಗಂಡನು ಬಿಟ್ಟು ಬಿಟ್ಟಿದ್ದರಿಂದ ದುಃಖ ಗೊಂಡಿದ್ದಾಳೆ ಆಕೆಯನ್ನು ಸಮಾಧಾನಪಡಿಸು ,
ಆ ಮಾತಿನಿಂದ ವಿಷ್ಣು ವು ಲಕ್ಷ್ಮೀ ಒಡಗೂಡಿ ಅಲ್ಲಿಗೆ ಬಂದು ಆಕೆಯನ್ನು ಸಮಾಧಾನಪಡಿಸುತ್ತ ಹೀಗೆ ಹೇಳಿದನು…


ಎಲೈ ಅಲಕ್ಷ್ಮಿಯೇ ನೀನು ಯಾವಾಗಲೂ ಅರಳಿ ಮರವನ್ನು ಆಶ್ರಯಿಸಿಕೊಂಡಿರು ಅರಳಿ ಮರವು ನನ್ನ ಅಂಶದಿಂದ ಹುಟ್ಟಿದ್ದು ಆದರೆ ಶನಿವಾರದ ದಿವಸ ಮಾತ್ರ ಅಲ್ಲಿ ನಿನ್ನ ವಾಸ ಬೇಡ .. ಕಾರಣ ಶನಿವಾರ ದಿವಸ ಲಕ್ಷ್ಮಿಯು ಶನಿವಾರ ದಿವಸ ಇಲ್ಲಿಗೆ ಬರುತ್ತಾಳೆ. ಆದ್ದರಿಂದ ಅರಳಿ ಮರವು ಶನಿವಾರ ದಲ್ಲಿ ಪೂಜ್ಯವಾದುದು....


ಪ್ರತಿದಿನ ಅರಳಿ ಮರವನ್ನು ಮುಟ್ಟಿ ಪೂಜೆ ಮಾಡುವವರು ಅವರಲ್ಲಿ ಈ ಕನಿಷ್ಠ ಲಕ್ಷ್ಮೀ ಸ್ಥಿರವಾಗಿ ಇರುವಳು ಎಂದು ವರ ಕೊಟ್ಟು ವೈಕುಂಠಕ್ಕೆ ಹೊರಟು ಹೋದನು....
ಆದ್ದರಿಂದ ಅರಳಿ ಮರವನ್ನು ಶನಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಮುಟ್ಟಿ ಪೂಜೆ ಮಾಡಬಾರದು ಪ್ರದಕ್ಷಿಣೆ ದೂರದಿಂದಲೇ ನಮಸ್ಕಾರ ಮಾಡಬೇಕು... ಶನಿವಾರದ ದಿನ ಅಶ್ವಥ್ ವೃಕ್ಷ ಪೂಜಿಸಿದರೆ ರೋಗವನ್ನು ಪಾಪವನ್ನು ನಾಶಮಾಡುತ್ತದೆ. ಒಳ್ಳೆಯ ಬುದ್ದಿಯನ್ನು ಕೊಡುತ್ತದೆ ಒಳ್ಳೆಯ ಮಕ್ಕಳು ಐಶ್ವರ್ಯಕ್ಕೆ ಕಾರಣ ವಾಗುತ್ತದೆ..…


ಶ್ರೀಕೃಷ್ಣ ಸತ್ಯಭಾಮೆಗೆ ಹೇಳಿದ ಉತ್ತರವನ್ನು ಋಷಿಗಳಿಗೆ ಸೂತರು ಹೇಳುತ್ತಾರೆ......,


ಅದಕ್ಕೆ ಸ್ನೇಹಿತರೆ ಮನೆಯಲ್ಲಿ ಮೂಲೆಮೂಲೆಗೆ ಕಸ ಇಡಬೇಡಿ , ಯಾವಾಗಲೂ ಜಗಳ ಮಾಡುತ್ತಿರುವ ಬೇಡಿ , ದೇವರಮನೆಯಲ್ಲಿ ದೀಪವಿಲ್ಲದೆ ಇರಬೇಡಿ , ಆದಷ್ಟು ಮನೆಯಲ್ಲಿ ಪೂಜೆ-ಪುನಸ್ಕಾರ ಮಾಡುತ್ತಿದ್ದರೆ ,


ಮನೆ ಸ್ವಚ್ಛವಾಗಿದ್ದರೆ ಅಲಕ್ಷ್ಮಿ ಪ್ರವೇಶವಾಗುವದಿಲ್ಲ , ಒಂದು ಸಲ ಅಲಕ್ಷ್ಮಿ ಪ್ರವೇಶವಾದರೆ ಮನೆಯಲ್ಲಿ ದಾರಿದ್ರ್ಯ ರೋಗರುಜಿನ ಕಡತಗಳು ಶುರುವಾಗುತ್ತದೆ.....

Il
ಶ್ರೀಕೃಷ್ಣಾರ್ಪಣಮಸ್ತು ll      -------- Hari Om --------

 

 


🍃 ಅಶ್ವತ್ಥಮರದಲ್ಲಿ ಭಗವಂತನು ಹಯಗ್ರೀಯ ರೂಪದಿಂದ ವಿಶೇಷವಾಗಿ ಅಭಿವ್ಯಕ್ತನಾಗಿ ಈ ಮರವು ಉಳಿದೆಲ್ಲಾ ಮರಗಳಿಗಿಂತ ಹೆಚ್ಚು ಯೋಗ್ಯವೆಂದು ತೋರಿಸುತ್ತಾನೆ .

🍃
ಅಶ್ವತ್ಥ ವೃಕ್ಷದ ಮಧ್ಯಭಾಗದಲ್ಲಿ ವಿಷ್ಣು, ತುದಿಯಲ್ಲಿ ರುದ್ರ, ಮೂಲಭಾಗದಲ್ಲಿ ಬ್ರಹ್ಮ ದೇವರು ನೆಲೆಸಿರುವರು.

🍃
ಅಶ್ವತ್ಥಮರದ ದರ್ಶನ ಪಾಪನಾಶಕ, ಸ್ಪರ್ಶ ಶ್ರೀಕಾರಕ , ಪ್ರದಕ್ಷಿಣೆ ಆಯುಷ್ಯಕಾರಕ ಎಂದು ಪದ್ಮ ಪುರಾಣ ಹೇಳುತ್ತದೆ.

🍃
ಪ್ರತಿದಿನ ಈ ವೃಕ್ಷದ ಸ್ಪರ್ಶ ನಿಷಿದ್ಧ ಶನಿವಾರದಂದು ಮಾತ್ರ ಸ್ಪರ್ಶಿಸಬೇಕೆಂದು ಧರ್ಮಶಾಸ್ತ್ರಗಳು ವಿಧಿಸುತ್ತವೆ.

🍃
ಸಂಧ್ಯಾಕಾಲದಲ್ಲಿ ಸೂರ್ಯಾಸ್ತವಾದ ಮೇಲೆ ಪ್ರದಕ್ಷಿಣೆ ಮಾಡಬಾರದು ಎಂದು ಪದ್ಮಪುರಾಣ ಹೇಳುತ್ತದೆ

🍃
ಏಳು ಪ್ರದಕ್ಷಿಣೆ ಮಾಡಿದರೆ 10,000 ಗೋದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಬೇರೆ ಯಾವ ವೃಕ್ಷವು ಇಷ್ಟು ಪುಣ್ಯಪ್ರದವಲ್ಲ.

🍃
ಅಶ್ವತ್ಥ ಮರವನ್ನು ನೆಟ್ಟರೆ ಮೂರು ಸಂಪಿಗೆ ಮತ್ತು ಎಕ್ಕೆಗಿಡ, ಏಳು ಆಲದಮರ , ಎಂಟು ಬಿಲ್ವಪತ್ರೆಗಿಡ , ಮತ್ತು ನಿಂಬೆಮರ ನೆಟ್ಟಷ್ಟು ಫಲ.

🍃
ಜಲಾಶಯ , ನದಿ ಸಮೀಪದಲ್ಲಿ ಅಶ್ವತ್ಥಮರವನ್ನು ನೆಟ್ಟರೆ ಪಿತೃಗಳಿಗೆ ಬಹಳ ತೃಪ್ತಿಯಿಗುತ್ತದೆ. ಅದರ ಎಲೆಗಳು ಪರ್ವಕಾಲದಲ್ಲಿ ನೀರಿನಲ್ಲಿ ಬಿದ್ದಾಗಲೆಲ್ಲಾ ಪಿಂಡ ಸಮಾನವಾಗಿ ಪಿತೃಗಳಿಗೆ ಅಕ್ಷಯಲೋಕಗಳನ್ನು ಕೊಡುತ್ತದೆ.



Ashwatha Tree Leaves
 


Trimurti Gods reside on this tree ( Brahma in Roots & Vishnu in Middle Stem & Shiva on Top )
Among trees, the Aswatha is the most important. In most of the places, an idol or Murthy of Serpent God is consecrated below this tree. In Kerala and Tamil Nadu the family which plants the tree does sacred thread ceremony to the tree and then conducts its marriage with the Neem tree. Most of the Serpent Temples in Karnataka and over South India and Ganesha temples in Tamil Nadu are constructed below this tree.

Moola Mantra:

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ
ಅಗ್ರತಃ ಶಿವರೂಪಾಯ ಅಶ್ವತ್ಥಾಯ ನಮೋ ನಮಃ

Moolatho Brahma roopaya, madhyatho Vishnu roopine,
Agratha Shiva roopaya Vruksha rajaya they namah||
 

मूलतो ब्रह्मरूपाय मध्यतो विष्णुरूपिणे।
अग्रतः शिवरूपाय अश्वत्थाय नमो नमः।। 
 
5 Mantras associated with Ashwatha Tree or Vruksha

) ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತೋ ರುದ್ರರೂಪಾಯ ವೃಕ್ಷರಾಜಾಯ ತೇ ನಮಃ ||
) ಅಶ್ವತ್ಥ ಹುತಭುಕ್ ವ್ಯಾಸೋ ಗೋವಿಂದಸ್ಯ ಸದಾಶ್ರಯಃ |
ಅಶೇಷಂ ಹರ ಮೇ ಶೋಕಂ ವೃಕ್ಷರಾಜ ನಮೋಸ್ತುತೇ ||
) ಅಮಂಗಲಾನಾಂ ಶಮನೀಂ ಶಮನೀಂ ದುಷ್ಕ್ರತಸ್ಯ ಚ |
ದುಸ್ವಪ್ನನಾಶಿನೀಂ ಧನ್ಯಾಂ ಪ್ರಪದ್ಯೇಹಂ ಶಮೀಂ ಶುಭಾಮ್|
ಶಮಿ ಶಮಯ ಮೇ ಪಾಪಂ ಶಮಿ ಶತ್ರುವಿನಾಶಿನಿ |
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನಿ ||
) ದೇವಕಿಸುತಗೋವಿಂದ ದೇವದೇವ(ವಾಸುದೇವ) ಜಗತ್ಪತೇ |
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ||
) ಹಿಮವತ್ಯುತ್ತರೇ ಪಾರ್ಶ್ವೇ ಸುರಸಾ ನಾಮ ಯಕ್ಷಿಣೀ |
ತಸ್ಯಾಃ ಸ್ಮರಣ ಮಾತ್ರೇಣ ವಿಶಲ್ಯಾ ಗರ್ಬಿಣೀ ಭವೇತ್ ||



1) moolatO brahmaroopAya madhyatO viShNuroopiNE |
agratO rudraroopAya vRukSharAjAya tE namaH ||
2) ashwattha hutaBuk vyAsO gOviMdasya sadAshrayaH |
ashEShaM hara mE shOkaM vRukSharAja namOstutE ||
3) amaMgalAnAM shamanIM shamanIM duShkratasya cha |
duswapnanAshinIM dhanyAM prapadyEhaM shamIM shubhAm|
shami shamaya mE paapaM shami shatruvinaashini |
arjunasya dhanurdhaari rAmasya priyadarshini ||
4) dEvakisutagOviMda dEvadEva(vAsudEva) jagatpatE |
dEhi mE tanayaM kRuShNa tvAmahaM sharaNaM gataH ||
5) himavatyuttarE pArshvE surasA nAma yakShiNI |
tasyAH smaraNa mAtrENa vishalyA garbiNI bhavEt ||



Purport or Meaning of the Aswatha Mantra’s:

Moolatho Brahma roopaya, madhyatho Vishnu roopine,
Agratha Shiva roopaya Vruksha rajaya they namah|| 1
 
My salutations to the king of trees.
Whose root is the form of Brahma,
Middle is the form of Lord Vishnu,
And top is the form of Lord Shiva.

Aswatha sarva papani satha janma arjithanicha,
Nudhaswa mama vrakshendra, sarva aiswarya pradho bhava|| 2
 
The holy fig(banyan) tree pushes away, all sins earned,
In several hundred births, and Oh king of trees,
Please grant me all different types of wealth.

Ayurbalam yaso varcha, praja pasu vasooni cha,
Brahma prajnam cha medham cha thwam nodehi Vanaspathe|| 3
 
Would you not give me, Oh product of the forest.
Long life, fame, splendour, children, cattle and riches,
As also knowledge of God and intellectual wisdom.

Sathatham varuno raksheth thwamarad vrushtirasrayedh,
Parithasthwam nishevantham thrunani sukhamasthu they|| 4
 
You are always protected by Varuna as you are rain dependent,
And you do not allow any grass to grow in the shade round you.


                                                      another Picture of Ashwatha tree
Akshi spandham bhujaspandham duswapnam dhurvichinthanam,
Sathroonam cha samuthanam hyaswastha samaya Prabho|| 5
 
Oh Lord Aswatha, please control pain in the eye,
Pain of hands, bad dreams, bad and evil thoughts,
And help me in destruction of my enemies.

Aswathaya varenyaya sarva aiswarya pradhayine,
Namo duswapna nasaya, suswapna phala dhayine|| 6
 
Oh Aswatha who blesses us and grants all type of wealth,
My salutations to you, who destroys bad dreams and grants good dreams.

Yaam drushtwa muchythe rogai,
Sprushtwa papapai pramuchyathe,
Yad ashrayath chiran jeevi,
Tham Aswatham namamyaham|| 7
 
I salute that Aswatha,
Seeing which diseases flee,
Touching which sins are destroyed,
And surrendering to which,
You get long healthy life.

Aswatha sumaha bhaga, subhaga, Priya Darshana
Ishta kamam cha may dehi shatrubhyascha parabhavam|| 8
 
Oh great Lord Aswatha, who is pretty and looks pretty,
Please fulfill all my desires and give disappointment to my enemies.

Aayu prajam dhanam dhanyam soubhagyam sarva sampadam,
Dehi deva maha Vruksha, thwam aham saranam gatha|| 9
 
I surrender fully to you and,
So be pleased to give, oh great tree,
Long life, sons, wealth, cereals,
Great luck all types of wealth.


Rig yajur sama manthrathma, sarva roopi, parathpara,
Aswatho Veda moolo asou rishibhi prochyathe sada|| 10
 
 
Great sages go in search of Aswatha,
As it is the soul of Rig, Yajur and sama Vedas,
And takes all forms, greater than the greatest,
And is the root of all the three Vedas.



Brahmaha guruha chaiva daridhro vyadhi peeditha,
Aavarthya laksha sankhyam tham sthothram yedath sukhee bhavth|| 11
 
If this prayer is repeated one hundred thousand times,
Even those cursed by Brahma or the teacher,
And those who are poor and diseased,
Would get cured of all ills and lead a pleasant life.

Vyaktha avyaktha swaroopaya, srushti sthithyantha karine,
Adhi madhyanth soonyaya vishtarasravase nama|| 12
 
Salutations to the very stable one,
Who has clear and unclear forms,
Who creates, looks after and destroys,
And who does not have beginning, middle and end.

Ravim rava vadharaogye,
Shivam some Shivaya cha,
Shakthim bhoume jayarthi cha,
Vanijyarthi budhe sarana|| 13
 
Gurou gurum cha Vidhyarthi,
Dhanarthi bhargave sriyam,
Sarva dukha vimoksharthee,
Sarvesam mandha vasare|| 14
 
Sarvada sarva devam scha,
Viseshanmada somayo,
Aswatha roopino deva,
Vruksha rajo prapoojayeth|| 15
 
 
Go round on Sundays and worshiping Sun to get heath,
Go round on Mondays and
worshiping Shiva to get pleasant life,
Go round on Tuesdays and
worshiping Parvathi to get victory
Go round on Wednesdays and
worshiping Devas, to get luck in business,
Go round on Thursdays and
Worshiping Guru to get good knowledge
Go round on Fridays and
worshiping Goddess Lakshmi to get wealth
Go round on Saturdays and
worshiping the greatest god to get rid of all sorrow.
Always all gods especially Saturn and the moon
Worship the God in the form of Aswatha
And offer prayers to this Lord of all trees.


-------- - Hari Om --------

 

                         

Tuesday, February 23, 2021

Bhishma Ekadasi & Vishnu Sahasranama Jayanthi day - 23rd February 2021

 

 Bhishma Ekadasi & Vishnu Sahasranama Jayanthi day - 23rd February 2021

 

                                                            Sri Bhishmacharyaru 

ಭೀಷ್ಮ ಏಕಾದಶಿ ಅಂದೇ ವಿಷ್ಣು ಸಹಸ್ರನಾಮ ಜಯಂತಿ

on 23rd February 2021


Bhisma Ekadasi and Vishnu Sahasra Nama Jayanthi falls on 23rd February 2021

 

Bhishma informs the Power of Vishnu Sahasranama:



ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು.

. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ

. ವಿಷ್ಣುಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.

. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

. ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

. ವಿಷ್ಣುಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

. ಶುದ್ಧಮನದಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ.

. ವಿಷ್ಣುಸಹಸ್ರನಾಮ ಅಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠನ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಕ್ಯಾನ್ಸೆರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತವರಣವೇ ಬದಲಾಗುತ್ತದೆ. ಮನೆಯವ ಮೈಯಲ್ಲಿ ಮನಸ್ಸಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.

೧೦. ವಿಷ್ಣುಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲವಯಸ್ಸಿನವರು ಪಠಿಸಬಹುದಾಗಿದೆ.

11.
ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪರಣ ಮಾಡಿ ಬರಬಹುದು . ಸಮಯ ವಿಲ್ಲದವರು ತಮ್ಮ ತಮ್ಮ ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.

12. *
ಪ್ರಾಕೃತಿಕ ಸಮತೋಲನಕ್ಕಾಗಿ,
ಗ್ರಾಮದ ಶಾಂತಿಗಾಗಿ,
ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ

ನಿತ್ಯ ಪಠಿಸೋಣ*
***

ಮನುಷ್ಯನ ಆಯಸ್ಸು ನೂರು ವರ್ಷ…

ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.

ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ.
****

ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ .…


ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀ ರಾಮಾನುಜರ ಬಳಿ ದೂರು ಕೊಟ್ಟರು.


ಇದನ್ನು ಕೇಳಿದ ಶ್ರೀ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..


ವಿಚಾರ ತಿಳಿದ ಶ್ರೀ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು…


ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ... ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ... ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು ಭೂತ-ಭೃತ್: ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ ಶ್ರೀ ಭೂತ-ಭೃತ್ಯಯೇ ನಮಃ ಅನ್ನುವಂತೆ ಉಪದೇಶಿಸಿದರು..


ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು…


ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ .…


ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..


ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು...

▬▬▬
ஜ۩۞۩ஜ▬▬▬*▬▬▬ஜ۩۞۩ஜ▬▬
ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು
'
ಸರ್ವೇ ಜನಾಃ ಸುಖಿನೋ ಭವಂತು'

ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು*
▬▬▬
ஜ۩۞۩ஜ▬▬▬▬▬▬ஜ۩۞۩ஜ▬▬▬


------------ Hari OM ------------

Thursday, February 18, 2021

Ratha Saptami

                                                      Lord Surya / Sun God / Bhagavan
 

🌞 ☀️ "ರಥಸಪ್ತಮಿ" ☀️ 🌞


Ratha Saptami Muhurata Or Timings

Ratha Saptami on Friday, February 19, 2021


Snana Muhurata on Ratha Saptami -Day – between 05:03 AM to 06:40 AM

Duration - 01 Hour 38 Minutes

Main timing for Ratha Saptami - 06:19 AM

 

Observing or Viewing Sun time on Ratha Saptami day - 06:40 AM

Saptami Tithi Begins - 08:17 AM on Feb 18, 2021

Saptami Tithi Ends - 10:58 AM on Feb 19, 2021

 

                                                                        Pic1


🕉️ ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ 🕉



🌞🌺ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು.

🌞🌺
ಪಾಡ್ಯ- ಉಗಾದಿ ಪಾಡ್ಯ, ಬಿದಿಗೆ-ಭಾನು ಬಿದಿಗೆ, ತದಿಗೆ-ಅಕ್ಷ ತದಿಗೆ, ಚೌತಿ-ವಿನಾಯಕನ ಚೌತಿ. . . . ಹೀಗೆ ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು.

🌞🌺
ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದರು.ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ಅರಿತಾಗ ಅರ್ಥಪೂರ್ಣ ಆಚರಣೆಯಾಗುತ್ತದೆ.

🌞🌺
ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

🌞🌺 “
ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನಂತೆ” ಅಂತ ಅಜ್ಜಿ ಹೇಳುತ್ತಿದ್ದುದು ನೆನಪಾಗುತ್ತದೆ.

🌞🌺
ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ.

🌞🌺
ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ.

🌞🌺
ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟಿ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ.

🌞🌺
ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ.

🌞🌺
ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ.

🌞🌺
ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ನಾಳೆ (ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ ತಿಥಿ-ಗುರುವಾರ) ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ.

ಆರೋಗ್ಯಂ ಭಾಸ್ಕರಾದಿಚ್ಛೇತ್...

🌞🌺
ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ‘

🌞🌺
ಆರೋಗ್ಯಂ ಭಾಸ್ಕರಾದಿಚ್ಛೇತ್’ ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ.

🌞🌺
ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

🌞🌺
ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

🌞🌺
ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧ ನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ.

🌞🌺
ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ.

🌞🌺
ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ.

🌞🌺
ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ.

🌞🌺
ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

🌞🌺
ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್‌, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ.

🌞🌺108
ಸೂರ್ಯ ನಮಸ್ಕಾರ ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ.

🌞🌺
ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

🌞🌺
ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ.

🌞🌺
ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ.

 

                                                                             Pic2
       


ಪೌರಾಣಿಕ ಹಿನ್ನೆಲೆಯೇನು?



🌞🌺
ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ.

🌞🌺
ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ.

🌞🌺
ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು.

🌞🌺
ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು.

🌞🌺
ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.

🌞🌺
ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ.

🌞🌺
ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

🌞🌺
ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.

🌞🌺
ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

🌞🌺
ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ.

🌞🌺
ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ.

🌞🌺
ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ.

🌞🌺
ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ.

🌞🌺
ಇನ್ನು, ‘ಭೂರ್ಭುವಸ್ವಃ'. . . ಎಂಬಮಂತ್ರದಲ್ಲಿ ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

🌞🌺
ಎಕ್ಕದೆಲೆಯ ಸ್ನಾನ ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು.

🌞🌺
ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

🌞🌺
ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

🌞🌺
ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುವ ಬದಲು ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಯಾವುದೇ ಜಾತಿಭೇದ, ಧರ್ಮದ ಚೌಕಟ್ಟಿಲ್ಲದ ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದೀನದಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವ?

*
ಸಪ್ತ ಸಪ್ತ ಮಹಾಸಪ್ತ
ಸಪ್ತ ದ್ವೀಪ ವಸುಂಧರ*

*
ಸಪ್ತಾರ್ಕ ಪ್ರಣಮಾಧ್ಯಾಯ
ಸಪ್ತಮಿ ರಥ ಸಪ್ತಮಿ*

ಎಂದು ಈ ಶ್ಲೋಕವನ್ನು ಹೇಳಿಕೊಂಡು ತಲೆಗೆ ಸ್ನಾನ ಮಾಡಿದರೆ ಓಳ್ಳಯದು

ಈ ಮೇಲಿನ ಎಲ್ಲಾ ಸಂಗತಿಗಳನ್ನು ಓದಿ, ನಿಮ್ಮ ಕುಟುಂಬ, ಬಂದು, ಬಳಗ, ಮತ್ತು ವಿಶೇಷ ವಾಗಿ ಇಂದಿನ ಮಕ್ಕಳಿಗೆ ಮನವರಿಕೆ ಮಾಡಿ.


ನಮ್ಮ ಸಂಸ್ಕೃತಿ ಉಳಿಸಲು ನಿಮ್ಮ ಕೊಡುಗೆ ಇರಲಿ.


                                                                             Pic3                                                 


                                                             ----------- Hari Om -----------








 

 

 

Tuesday, January 12, 2021

27 Nakshatra or Star --- Mantras

27 Nakshatra or Star ---- Mantras

 

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು: ಜಾತಕದಲ್ಲಿ ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಪೂರ್ವಾಭಿಮುಖವಾಗಿ ಸೂರ್ಯನ ನೋಡುತ್ತಾ ೯ರಿಂದ ೧೦೮ ಮಂತ್ರ ಜಪಿಸುವುದರಿಂದ ವಿಶೇಷ ನಕ್ಷತ್ರ ಸಂಬಂಧವಾದ ಶಕ್ತಿ ದೊರೆಯುತ್ತದೆ

 

These are the 27 different Nakshatra Mantras pertaining to each Nakshatras and very powerful need to Recite minimum 9 times to 108 times to their respective it is allocated based on individual Birth Date.Each persons Nakshatras can be known if correct given Birth day Date.

Each respective Mantra are to be Recited facing East wards looking at the SUN in early morning one will get induced with Cosmic/Positive Energy.



1.
ಅಶ್ವಿನಿ:


ಓಂ ಶ್ವೇತವರ್ಣೈ ವಿದ್ಮಹೇl
ಸುಧಾಕರಾಯೈ ಧೀಮಹಿl
ತನ್ನೋ ಅಶ್ವಿನೇನ ಪ್ರಚೋದಯಾತ್ ll

2.
ಭರಣಿ:


ಓಂ ಕೃಷ್ಣವರ್ಣೈ ವಿದ್ಮಹೇl
ದಂಡಧರಾಯೈ ಧೀಮಹಿl
ತನ್ನೋ ಭರಣೀ ಪ್ರಚೋದಯಾತ್ ll

3.
ಕೃತ್ತಿಕಾ:


ಓಂ ವಣ್ಣಿದೇಹಾಯೈ ವಿದ್ಮಹೇl
ಮಹಾತಪಾಯೈ ಧೀಮಹಿl
ತನ್ನೋ ಕೃತ್ತಿಕಾ ಪ್ರಚೋದಯಾತ್ ll

4.
ರೋಹಿಣಿ:


ಓಂ ಪ್ರಜಾವಿರುದ್ಧೈ ಚ ವಿದ್ಮಹೇl
ವಿಶ್ವರೂಪಾಯೈ ಧೀಮಹಿl
ತನ್ನೋ ರೋಹಿಣೀ ಪ್ರಚೋದಯಾತ್ ll

5.
ಮಗಶಿರಾ:


ಓಂ ಶಶಿಶೇಖರಾಯ ವಿದ್ಮಹೇl
ಮಹಾರಾಜಾಯ ಧೀಮಹಿl
ತನ್ನೋ ಮಗಶೀರ್ಷಾಃ ಪ್ರಚೋದಯಾತ್ ll

6.
ಆರ್ದ್ರಾ:


ಓಂ ಮಹಾಶ್ರೇಷ್ಠಾಯ ವಿದ್ಮಹೇl
ಪಶುಂ ತನಾಯ ಧೀಮಹಿl
ತನ್ನೋ ಆರ್ದ್ರಾ ಪ್ರಚೋದಯಾತ್ ll

7.
ಪುನರ್ವಸು:


ಓಂ ಪ್ರಜಾವರುಧ್ಯೈ ಚ ವಿದ್ಮಹೇl
ಅದಿತಿ ಪುತ್ರಾಯ ಧೀಮಹಿl
ತನ್ನೋ ಪುನರ್ವಸು ಪ್ರಚೋದಯಾತ್ ll


8. ಪುಷ್ಯಾ:


ಓಂ ಬ್ರಹ್ಮವರ್ಚಸಾಯ ವಿದ್ಮಹೇl
ಮಹಾದಿಶಾಯಾಯ ಧೀಮಹಿl
ತನ್ನೋ ಪುಷ್ಯಃ ಪ್ರಚೋದಯಾತ್ ll

9.
ಆಶ್ಲೇಷಾ:


ಓಂ ಸರ್ಪರಾಜಾಯ ವಿದ್ಮಹೇl
ಮಹಾರೋಚನಾಯ ಧೀಮಹಿl
ತನ್ನೋ ಆಶ್ಲೇಷಃ ಪ್ರಚೋದಯಾತ್ ll

10.
ಮಖಾ:


ಓಂ ಮಹಾ ಅನಗಾಯ ವಿದ್ಮಹೇl
ಪಿತ್ರಿಯಾದೇವಾಯ ಧೀಮಹಿl
ತನ್ನೋ ಮಖಃ ಪ್ರಚೋದಯಾತ್ ll

11.
ಪುಬ್ಬಾ:


ಓಂ ಅರಿಯಂನಾಯ ವಿದ್ಮಹೇl
ಪಶುದೇಹಾಯ ಧೀಮಹಿl
ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ ll

12.
ಉತ್ತರಾ:


ಓಂ ಮಹಾಬಕಾಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಧೀಮಹಿl
ತನ್ನೋ ಉತ್ತರ ಫಲ್ಗುಣಿ ಪ್ರಚೋದಯಾತ್ ll

13.
ಹಸ್ತಾ:


ಓಂ ಪ್ರಯಚ್ಚತಾಯೈ ವಿದ್ಮಹೇl
ಪ್ರಕೃಪ್ರಣೀತಾಯೈ ಧೀಮಹಿl
ತನ್ನೋ ಹಸ್ತಾ ಪ್ರಚೋದಯಾತ್ ll


 

14. ಚಿತ್ತಾ:


ಓಂ ಮಹಾದೃಷ್ಟಾಯೈ ವಿದ್ಮಹೇl
ಪ್ರಜಾರಪಾಯೈ ಧೀಮಹಿl
ತನ್ನೋ ಚೈತ್ರಾಃ ಪ್ರಚೋದಯಾತ್ ll

15.
ಸ್ವಾತಿ:


ಓಂ ಕಾಮಸಾರಾಯೈ ವಿದ್ಮಹೇl
ಮಹಾನಿಷ್ಠಾಯೈ ಧೀಮಹಿl
ತನ್ನೋ ಸ್ವಾತಿ ಪ್ರಚೋದಯಾತ್ ll

16. ವಿಶಾಖಾ:


ಓಂ ಇಂದ್ರಾಗ್ನೇಸ್ಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಚ ಧೀಮಹಿl
ತನ್ನೋ ವಿಶಾಖಾ ಪ್ರಚೋದಯಾತ್ ll

17.
ಅನೂರಾಧಾ:


ಓಂ ಮಿತ್ರದೇಯಾಯೈ ವಿದ್ಮಹೇl
ಮಹಾಮಿತ್ರಾಯ ಧೀಮಹಿl
ತನ್ನೋ ಅನೂರಾಧಾ ಪ್ರಚೋದಯಾತ್ ll

18.
ಜ್ಯೇಷ್ಠಾ:


ಓಂ ಜ್ಯೇಷ್ಠಾಯೈ ವಿದ್ಮಹೇl
ಮಹಾಜ್ಯೇಷ್ಠಾಯೈ ಧೀಮಹಿl
ತನ್ನೋ ಜ್ಯೇಷ್ಠಾ ಪ್ರಚೋದಯಾತ್ ll

19
ಮೂಲಾ:


ಓಂ ಪ್ರಜಾಧಿಪಾಯೈ ವಿದ್ಮಹೇl
ಮಹಾಪ್ರಜಾಧಿಪಾಯೈ ಧೀಮಹಿl
ತನ್ನೋ ಮೂಲಾ ಪ್ರಚೋದಯಾತ್ ll

20.
ಪೂರ್ವಾಷಾಢಾ:


ಓಂ ಸಮುದ್ರಕಾಮಾಯೈ ವಿದ್ಮಹೇl
ಮಹಾಬೀಜಿತಾಯೈ ಧೀಮಹಿl
ತನ್ನೋ ಪೂರ್ವಾಷಾಢಾ ಪ್ರಚೋದಯಾತ್ ll

21.
ಉತ್ತರಾಷಾಢಾ:


ಓಂ ವಿಶ್ವೇದೇವಾಯ ವಿದ್ಮಹೇl
ಮಹಾಷಾಢಾಯ ಧೀಮಹಿl
ತನ್ನೋ ಉತ್ತರಾಷಾಢಾ ಪ್ರಚೋದಯಾತ್ ll

22.
ಶ್ರವಣಾ:


ಓಂ ಮಹಾಶ್ರೇಷ್ಠಾಯೈ ವಿದ್ಮಹೇl
ಪುಣ್ಯಶ್ಲೋಕಾಯ ಧೀಮಹಿl
ತನ್ನೋ ಶ್ರವಣ ಪ್ರಚೋದಯಾತ್ ll

23.
ಧನಿಷ್ಠಾ:


ಓಂ ಅಗ್ರನಾಥಾಯ ವಿದ್ಮಹೇl
ವಸೂಪ್ರೀತಾಯ ಧೀಮಹಿl
ತನ್ನೋ ಶರ್ವಿಷ್ಠಾ ಪ್ರಚೋದಯಾತ್ ll

24.
ಶತಭಿಷಾ:


ಓಂ ಭೇಷಜಾಯ ವಿದ್ಮಹೇl
ವರುಣದೇಹಾಯ ಧೀಮಹಿl
ತನ್ನೋ ಶತಭಿಷಾ ಪ್ರಚೋದಯಾತ್ ll

25.
ಪೂರ್ವಾಭಾದ್ರ:


ಓಂ ತೇಜಸ್ಕರಾಯ ವಿದ್ಮಹೇl
ಅಜರಕ ಪಾದಾಯ ಧೀಮಹಿl
ತನ್ನೋ ಪೂರ್ವಪ್ರೋಷ್ಟಪತ ಪ್ರಚೋದಯಾತ್ ll

26.
ಉತ್ತರಾಭಾದ್ರ:


ಓಂ ಅಹಿರಬುಧ್ನಾಯ ವಿದ್ಮಹೇl
ಪ್ರತಿಷ್ಠಾಪನಾಯ ಧೀಮಹಿl
ತನ್ನೋ ಉತ್ತರಪ್ರೋಷ್ಟಪತ ಪ್ರಚೋದಯಾತ್ ll

27.
ರೇವತಿ:


ಓಂ ವಿಶ್ವರೂಪಾಯ ವಿದ್ಮಹೇl
ಪೂಷ್ಣ ದೇಹಾಯ ಧೀಮಹಿl
ತನ್ನೋ ರೇವತಿ ಪ್ರಚೋದಯಾತ್ ll

 

Please Recite respective Mantra according their Nakshatra derived from their Birth dates and achieve Positive Energy and get good Health, Success and get greater achievements in Life.


----------- Hari Om ----------