Tuesday, November 4, 2025

Garuda Temple

 

                                                                         Garuda Devaru

 

ಗರುಡ ದೇವಾಲಯ ---- Garuda Temple

ಏಕೈಕ ಗರುಡನ ದೇವಾಲಯ ಎಲ್ಲಿದೆ ಗೊತ್ತಾ?

Garuda Temple in Koladevi just 12 kms from Mulbagal and 85 Kms from Bangalore


Garuda ---- (Vehicle Of Lord Vishnu)

Garuda Temple , koladevi, Mulbagal, Kolar Distt -- Karnataka-563131 ,  India

The only Garuda temple is in Karnataka and in the World.

Garuda - Vishnu – Lakshmi devi – Hanuman or Anjaneya temples are there

 

                                                                                   Garuda 

This is one of the rare temples built for Garuda –1200 Years old and the temple people claimed to be the only temple for Garuda. But this Garuda Temple has importance in 2 ways. One is The Garuda carrying both Sri Maha Vishnu & Lakshmi Devi on his shoulders. The 2nd one is related to place. It is believed that this is the place where Jatayu fell down during a fight with Ravana while trying to rescue Sita Devi when she was kidnapped by Ravana and being taken in Pushpaka Vimana.

As this is Garuda Temple, naturally important for Kala Sarpa Dosha Nivarana.

There is a small, just like cave temple dedicated to Hanuman.

This Temple is the World's One and Only Temple Dedicated to Garuda Deva, Lord Vishnu's Vahana.

Another story comes from the Mahabharata, where Arjuna’s sin of burning forests and killing snakes was absolved by building a Garuda temple, hinting this site’s karmic cleansing powers. 

Lord Garuda is 5.5 feet tall. Surrounded with 8 Serpents as his Jewels.

It is said that the idol was installed by Brighu Maharishi and later a temple re-built by Sri Ramanujacharya.

  

 

                                                               Garuda Alankara


ನಮ್ಮ ಸನಾತನ ಧರ್ಮದಲ್ಲಿ ಪ್ರತಿಯೊಂದು ಜೀವಿ ಹಾಗು ವಸ್ತುವಿನಲ್ಲಿಯು ದೈವತ್ವವನ್ನುಕಾಣುವುದು ಸಾಮಾನ್ಯವಾದುದು. ಗರುಡ ಒಂದು ಜಾತಿಯ ಪಕ್ಷಿ. ಪುರಾಣಗಳ ಪ್ರಕಾರ ಗರುಡ ಶ್ರೀಮಹಾವಿಷ್ಣುವಿನ ವಾಹನ ಎಂದೇ ಗುರುತಿಸಿಕೊಂಡಿದೆ. ಗರುಡನಿಗೂ ಕೂಡ ಒಂದು ಮಹಿಮಾನ್ವಿತವಾದದೇವಾಲಯವಿದೆ. ಆ ದೇವಾಲಯಕ್ಕೆ ಭೇಟಿ ನೀಡಿದರೆ ಸಂತಾನ ಇಲ್ಲದೇ ಇರುವವರಿಗೆಸಂತಾನವಾಗುತ್ತದೆ ಎಂದು ನಂಬಲಾಗಿದೆ.

ಹಾಗಾಗಿಯೇ ಆ ದೇವಾಲಯಕ್ಕೆ ದಿನನಿತ್ಯವು ನೂರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.ಅಸಲಿಗೆ ಆ ದೇವಾಲಯ ಇರುವುದು ಬೇರೆ ಎಲ್ಲೂ ಅಲ್ಲ, ನಮ್ಮ ಕರ್ನಾಟಕದ ಕೋಲಾರಜಿಲ್ಲೆಯಲ್ಲಿ. ಕೋಲಾರದ ಮುಳಬಾಗಿಲು ತಾಲೂಕಿನಿಂದ 18 ಕಿ.ಮೀ ದೂರದಲ್ಲಿರುವ ಒಂದುಗ್ರಾಮದಲ್ಲಿ. ಈ ದೇವಾಲಯದಲ್ಲಿರುವ ವಿಗ್ರಹದ ಹಾಗೆ ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲ ಎಂದು ಗುರುತಿಸಲಾಗಿದೆ.


                                                                      Anjaneya

ಹಾಗಾದರೆ ಬನ್ನಿ ಆ ದೇವಾಲಯದ ಮಹಿಮೆಯ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ. 

 

                                                             Anjaneya Devaru

 

1.ಇದು ಗರುಡನ ಮಹಿಮಾನ್ವಿತವಾದ ದೇವಾಲಯ


ಭಾರತ ದೇಶದ ಪ್ರತಿ ಗ್ರಾಮದಲ್ಲಿಯು ವಿಷ್ಣುವಿನ ದೇವಾಲಯ ಇರುವುದು ಸರ್ವೆ ಸಾಮಾನ್ಯ. ಅದೇವಿಷ್ಣುವಿನ ವಾಹನವಾದ ಗರುಡನಿಗೆ ಇರುವ ದೇವಾಲಯಗಳು ಕೆಲವು ಮಾತ್ರ ಎಂದೇ ಹೇಳಬಹುದು.ಅಂತಹ ದೇವಾಲಯಗಳಲ್ಲಿ ಕರ್ನಾಟಕದಲ್ಲಿನ ದೇವಾಲಯವು ಒಂದು.

 

                                                                    Lord Garuda
 

ಈ ದೇವಾಲಯದ ಬಗ್ಗೆ ಅಷ್ಟುಪ್ರಚಾರ ಇಲ್ಲದೆ ಇರುವ ಕಾರಣದಿಂದ ಅಷ್ಟು ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ. ಆದರೆಪ್ರಸ್ತುತ ಉತ್ತಮವಾದ ಸಾರಿಗೆ ಸಂಪರ್ಕ ಹೊಂದುತಿರುವುದರಿಂದ ಇತ್ತೀಚೆಗೆ ಭಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಾ ಇದೆ.

                                                                  another Picture

 2.ವಿಷ್ಣುವಿನ ವಾಹನ


ಈ ದೇವಾಲಯದಲ್ಲಿ ಪ್ರಧಾನವಾಗಿ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರುವುದು ವಿಷ್ಣುವಿನವಾಹನವಾದ ಗರುಡ. ಇಲ್ಲಿರುವ ಹಾಗೆ ಗರುಡ ಮೂರ್ತಿಯು ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ಗರುಡನು ಒಂದು ಕಾಲನ್ನು ಕೆಳಗೆ ಮಡಚಿ, ಮತ್ತೊಂದುಕಾಲಿನ ಮೇಲೆ ನಿಂತು, ಎಡ ಭುಜದ ಮೇಲೆ ಲಕ್ಷ್ಮೀ ದೇವಿಯನ್ನು ಹೊಂದಿದ್ದಾನೆ. ಅಷ್ಟೇ ಅಲ್ಲಇಲ್ಲಿನ ವಿಗ್ರಹಕ್ಕೆ ಹಾವುಗಳು ಆಭರಣಗಳಾಗಿವೆ.



                                                                          Pic-1

 3.ಸ್ಥಳ ಪುರಾಣ


ರಾವಣಾಸುರನು ಸೀತಾ ದೇವಿಯನ್ನು ಅಪಹರಿಸುತ್ತಿದ್ದ ಸಮಯದಲ್ಲಿ ಒಂದು ಗರುಡ ಪಕ್ಷಿಯುರಾವಣನ ಜೊತೆ ಪ್ರಸ್ತುತ ದೇವಾಲಯವಿರುವ ಪ್ರದೇಶದಲ್ಲಿ ಹೋರಾಟ ಪ್ರಾರಂಭ ಮಾಡಿ, ಕೊನೆಗೆ ಆಹೋರಾಟದಲ್ಲಿ ಮರಣ ಹೊಂದುತ್ತದೆ. ಗರುಡ ಪಕ್ಷಿಯ ಕೊನೆಯ ಕ್ಷಣದಲ್ಲಿ ರಾಮ... ರಾಮ....ಎಂದು ಕರೆಯಿತಂತೆ.

ಈ ವಿಷಯವನ್ನು ದೂರದೃಷ್ಟಿಯಿಂದ ನೋಡಿದ ರಾಮನು ಆ ಗರುಡ ಪಕ್ಷಿಗೆಮೋಕ್ಷವನ್ನು ಪ್ರಸಾದಿಸಿದ್ದಲ್ಲದೆ ಆ ಪ್ರದೇಶವನ್ನು ಪ್ರಮುಖ ಪುಣ್ಯಕ್ಷೇತ್ರವಾಗಿಕಂಗೊಳಿಸಲಿ ಎಂದು ವರವನ್ನು ನೀಡಿದನಂತೆ. ಅಂದಿನಿಂದ ಈ ಪ್ರದೇಶವು ಪುಣ್ಯಕ್ಷೇತ್ರವಾಗಿ ಹೆಸರು ವಾಸಿಯಾಯಿತು.

 

                                                                        Pic-2

ಇನ್ನೊಂದು ಕಥೆಯಂತೆ -- ಹಿಂದೆ ದ್ವಾಪರಯುಗದಲ್ಲಿ ಅರ್ಜುನನೊಮ್ಮೆ ಬೇಟೆಯಾಡಲು ಕಾಡಿಗೆ ತೆರಳಿ ಬಾಣಗಳನ್ನು ಬಿಡುತ್ತಿದ್ದಾಗ ಅವುಗಳ ರಭಸ ಹಾಗೂ ಶಕ್ತಿಯಿಂದ ಕಾಡಲ್ಲಿ ಬೆಂಕಿ ಹತ್ತಿ ಸಾಕಷ್ಟು ಹಾವುಗಳು ಸಾಯಲ್ಪಟ್ಟವು. ಇದರಿಂದೆ ಅರ್ಜುನನಿಗೆ ಸರ್ಪದೋಷ್ ಉಂಟಾಗಿ ಅದರಿಂದ ಮುಕ್ತಿ ಪಡೆಯಲು ಗರುಡನನ್ನು ಪೂಜಿಸಬೇಕೆಂಬ ಪರಿಹಾರವು ಋಷಿ ಮುನಿಗಳಿಂದ ಸಲಹೆ ರುಪದಲ್ಲಿ ಸಿಕ್ಕಿತು. ಹೀಗಾಗಿ ಅರ್ಜುನನೆ ಸ್ವತಃ ಪ್ರತಿಷ್ಠಾಪಿಸಿದ ಗರುಡ ದೇವಾಲಯ ಇದಾಗಿದೆ ಎಂಬ ಪ್ರತೀತಿಯಿದೆ

 

                                                                                Pic-3

4.ಕೋರಿಕೆಗಳು ನೆರವೇರುತ್ತವೆ


ಸಾಧಾರಣವಾಗಿ ಈ ದೇವಾಲಯಕ್ಕೆ ಸಂತಾನ ಇಲ್ಲದೇ ಇರುವ ದಂಪತಿಗಳು ಹೆಚ್ಚಾಗಿ ಭೇಟಿನೀಡುತ್ತಿರುತ್ತಾರೆ. ಈ ದೇವಾಲಯದಲ್ಲಿ ಪೂಜೆ ಮಾಡಿದವರಿಗೆ ತಪ್ಪದೇ ಸಂತಾನ ಉಂಟಾಗುತ್ತದೆಎಂದು ಕೇವಲ ಸ್ಥಳೀಯರೇ ಅಲ್ಲದೇ, ಸುತ್ತ-ಮುತ್ತಲಿನ ಗ್ರಾಮದವರು ಕೂಡ ನಂಬುತ್ತಾರೆ.

 

                                                                               Pic-4

 

5.ಭಕ್ತಿ-ಭಾವ ಉಕ್ಕಿಸುವ ಹನುಮನ ವಿಗ್ರಹ


ಈ ದೇವಾಲಯದ ಅವರಣದಲ್ಲಿ ಭಕ್ತಿ-ಭಾವವನ್ನು ಹೆಚ್ಚಿಸುವ ಹನುಮಂತನ ವಿಗ್ರಹವಿದೆ. ಈವಿಗ್ರಹವು ನೇರವಾಗಿ ಗರುಡ ವಿಗ್ರಹದ ಎದುರಿಗೆ ಇದ್ದು, ಒಂದೊಕ್ಕೊಂದು ನೋಡುತ್ತಿರುವ ಹಾಗೆ ಭಾಸವಾಗುತ್ತದೆ.



                                                                              Pic-5

6.ಎಲ್ಲಿದೆ?


ಈ ಮಹಿಮಾನ್ವಿತವಾದ ದೇವಲಯವು ಕರ್ನಾಟಕ ರಾಜ್ಯದಲ್ಲಿನ ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲೂಕಿನ ಕೊಲದೇವಿ ಎಂಬ ಗ್ರಾಮದಲ್ಲಿ ಇದೆ. ಸಂತಾನ ಇಲ್ಲದೇ ಇರುವವರು ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ.

ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ. ಪ್ರತಿ ಶನಿವಾರ ಹಾಗೂ ಭಾನುವಾರ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿಗೆ ಬಂದಿರುವ ಭಕ್ತರಲ್ಲಿ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ. ನೆರೆ ರಾಜ್ಯದ ಭಕ್ತರೂ ಇಲ್ಲಿನ ಗರುಡನ ದರ್ಶನ ಪಡೆಯಲು ಬರುತ್ತಾರೆ.


---------------- Hari Om ----------------



 


 

 
 

 


 


 

 


 
 

 

No comments:

Post a Comment