Thursday, February 6, 2025

Sri Madhwacharya --- ಶ್ರೀ ಮಧ್ವಾಚಾರ್ಯರು ಮತ್ತು ಹರಿದಾಸ ಸಾಹಿತ್ಯ

 

ಶ್ರೀ ಮಧ್ವಾಚಾರ್ಯರು ಮತ್ತು ಹರಿದಾಸ ಸಾಹಿತ್ಯ

 


           
  Sri Madhwacharya  


ಶ್ರೀಯುತ ಮಧ್ವಾಚಾರ್ಯರನ್ನು ಹರಿದಾಸರೆಲ್ಲರೂ ಪ್ರೇರಕ ಶಕ್ತಿ ದಾಸ ಶ್ರೇಷ್ಠರು ಎಂದೇ ಐತಿಹಾಸಿಕ ಗ್ರಂಥಗಳಲ್ಲಿ ದಾಖಲು ಮಾಡಿದ್ದಾರೆ. ಭಗವಂತನನ್ನು ಕಾಣುವ ಮತ್ತು ಭಗವಂತನ ಅಸ್ಮಿತೆಯನ್ನು ಭಕ್ತಿ ಮಾರ್ಗದ ಮೂಲಕ ಜನಸಾಮಾನ್ಯರಿಗೆ ಶ್ರೀಯುತ ಮಧ್ವಾಚಾರ್ಯರು ತಿಳಿಸಿದರು. ಅದರಲ್ಲೂ ಅವರಿಂದ ರಚಿತವಾದ ದ್ವಾದಶಸ್ತೋತ್ರ ಹರಿದಾಸರಿಗೆ ತಮ್ಮ ಕಾವ್ಯ ಪ್ರತಿಭೆಯ ಮೂಲ ಆಧಾರ ಕಾವ್ಯವಾಗಿದೆ. ದ್ವಾರಕೆಯ ಕೃಷ್ಣನನ್ನು ಕಂಡಾಗ ಮಧ್ವಾಚಾರ್ಯರು ಹಾಡಿ ಕುಣಿದ ದ್ವಾದಶ ಸ್ತೋತ್ರ ಭಕ್ತಿ ಭಾವ ಗೀತೆ ಸ್ಪೂರ್ತಿ ಪ್ರದಾಯಕ ಆಗಿತ್ತು. ಶ್ರೀಯುತ ಮಧ್ವಾಚಾರ್ಯರು 1236 ಜನಿಸಿದವರು ಸಂಗೀತದಲ್ಲಿ ಬಹಳ ಸಾಧನೆ ಮಾಡಿದ್ದರು. ಅವರ ಸಂಗೀತ ನಾದಕ್ಕೆ ಇಡೀ ಸಭೆಯೇ ಮೈಮರೆಯುತ್ತಿದ್ದು ಸಂಗೀತ ಸಾಗರದಲ್ಲಿ ಭಕ್ತರು ಮಿಂದೆದ್ದು ಪವಿತ್ರ ಆಗಿದ್ದರು.


ಶ್ರೀ ಮಧ್ವಾಚಾರ್ಯರ ಈ ಭಕ್ತಿಪ್ರಧಾನ ಜೀವನ ಹರಿದಾಸರಿಗೆ ಕನ್ನಡದಲ್ಲಿ ತಮ್ಮ ಕೃತಿಗಳನ್ನು ಕೀರ್ತನೆಗಳನ್ನು ರಚಿಸುವುದಕ್ಕೆ ಆದರ್ಶಮಯವಾಗಿತ್ತು.

ಆಚಾರ್ಯರು ಕನ್ನಡದಲ್ಲಿ ಕೃತಿ ಕೀರ್ತನೆಗಳನ್ನು ರಚಿಸಿದ ದಾಖಲೆ ಇತಿಹಾಸದಲ್ಲಿ ಸಿಕ್ಕಿಲ್ಲ. ಅದು ಸಿಕ್ಕಿಲ್ಲ ಎಂದು ಅವರು ಕೃತಿಗಳನ್ನು ರಚಿಸಿಲ್ಲ ಎಂದು ಹೇಳಲು ಆಗುವುದಿಲ್ಲ. ಇದು ಸಂಶೋಧಕರ ತೀರ್ಮಾನಕ್ಕೆ ಬಿಟ್ಟ ವಿಷಯ ಆಗಿದೆ.ಅವರ ನೇರ ಶಿಷ್ಯರಾದ ಹೃಷಿಕೇಶ ತೀರ್ಥರು ತುಳು ಭಾಷೆಯಲ್ಲಿ ಮಧ್ವರ ಗ್ರಂಥಗಳನ್ನು ಲಿಪಿ ಬದ್ಧ ಗೊಳಿಸಿದ್ದಾರೆ. ಆಚಾರ್ಯ ಮಧ್ವರ ಇನ್ನೊಬ್ಬ ನೇರ ಶಿಷ್ಯರು ನರಹರಿ ತೀರ್ಥರ ಆರು ಕನ್ನಡದ ಕೃತಿಗಳು ಸಿಕ್ಕಿದೆ ಎಂದು ಇತಿಹಾಸಕಾರರು ತಿಳಿಸುತ್ತಾರೆ.


ಶ್ರೀಯುತ ಮಧ್ವಾಚಾರ್ಯರು ಯಕ್ಷಗಾನದಲ್ಲಿ ಭಾಗವತದ ಆಟಗಳನ್ನು ಆಡಿಸಲು ಸ್ಪೂರ್ತಿ ಆಗಿದ್ದರು. ಮಹಾಭಾರತ ರಾಮಾಯಣದ ಕಥೆಗಳನ್ನು ಯಕ್ಷಗಾನದಲ್ಲಿ ಅಳವಡಿಸಲು ಪ್ರೋತ್ಸಾಹ ನೀಡಿದರು. ವಸ್ತುಸ್ಥಿತಿ ಇದು ಆಗಿರಬೇಕಾದರೆ ಆಚಾರ್ಯ ಮಧ್ವರು ಕನ್ನಡದಲ್ಲಿ ಕೃತಿ ರಚಿಸಿಲ್ಲ ಎಂದರೆ ಆ ಕಾಲದ ಇತಿಹಾಸಕ್ಕೆ ಲೋಪ ಮಾಡಿದಂತೆ ಆಗುವುದು.



ಕಾಲಗರ್ಭದ ಇತಿಹಾಸದಲ್ಲಿ 800 ವರ್ಷಗಳ ಕೆಳಗೆ ಈ ಘಟನೆಗಳು ನಡೆದಿವೆ. ಸಾಕಷ್ಟು ಕಾಲ ಸಂದಿದೆ. ಆದರೆ ಅವರು ರಚಿಸಿರಬಹುದು ಅವು ನಮಗೆ ಲಭ್ಯವಾಗದೇ ಇರಬಹುದು ಎನ್ನುವುದು ಅನೇಕ ಪ್ರಾಜ್ಞರ ಭಾವನೆ ಆಗಿದೆ. ಅಷ್ಟೇ ಏಕೆ ಆಚಾರ್ಯ ಮಧ್ವರ ನಂತರ ಬಂದ ಅನೇಕ ಹರಿದಾಸರ ಕೃತಿ ಕೀರ್ತನೆಗಳು ಇಂದಿಗೂ ಲಭ್ಯ ಇಲ್ಲ. ಹಾಗಿರಬೇಕಾದರೆ ಮಧ್ವಾಚಾರ್ಯರು ರಚಿಸಿರಬಹುದಾದ ಸಂಪೂರ್ಣ ಕೃತಿ ಎಲ್ಲವೂ ಸಿಕ್ಕಿಲ್ಲ. ಇದನ್ನು ಸಂಶೋಧಕರ ಮರ್ಜಿಗೆ ಬಿಡುವುದು ಒಳ್ಳೆಯದು ಎನ್ನುವುದು ಉತ್ತಮ ತೀರ್ಮಾನ ಎನಿಸುತ್ತದೆ.

 

                                                                    sri Ananda Tirtharu

 

ಪ್ರಾಜ್ಞರು ಗಮನಿಸಿದಂತೆ ಆಚಾರ್ಯ ಮಧ್ವರು ದೇಶ ಕಂಡ ಅಂದಿನ ಕಾಲದಲ್ಲಿ ಶ್ರೇಷ್ಠ ಸಂನ್ಯಾಸಿಗಳಲ್ಲಿ ಪ್ರಮುಖರಾಗಿದ್ದರು. ಅವರೊಂದಿಗೆ ಅಂದಿನ ಕಾಲದ ವಿವಿಧ ಮತ ಪಂಥಗಳ ಅನೇಕ ದೊಡ್ಡ ದೊಡ್ಡ ವಿದ್ವಾಂಸರು ಪಂಡಿತರು ಅವರ ಸಂಪರ್ಕದಲ್ಲಿದ್ದರು. ಅವರೊಂದಿಗೆ ವಾದ-ವಿವಾದ ಸ್ನೇಹ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದರು.


ಆಚಾರ್ಯ ಮಧ್ವರು ಕೇವಲ ದೊಡ್ಡ ದೊಡ್ಡ ಪಂಡಿತರು ಮತ್ತು ವಿದ್ವಾಂಸರೊಂದಿಗೆ ಮಾತ್ರ ಸ್ನೇಹ ಸಲಿಗೆಯಿಂದ ಇರುತ್ತಿರಲಿಲ್ಲ ಜನಸಾಮಾನ್ಯರ ಬಳಿಯೂ ಸಹ ಅಷ್ಟೇ ಗೌರವ ಪ್ರೀತಿ ವಿಶ್ವಾಸಗಳಿಂದ ನಡೆದುಕೊಳ್ಳುತ್ತಿದ್ದರು.ಅವರ ಭಕ್ತಿ ಭಾವನೆಗಳಿಗೆ ಪೂರ್ವಕವಾಗಿ ಸ್ಪಂದಿಸುತ್ತಿದ್ದರು. ಜನಸಾಮಾನ್ಯರು ನೇರವಾಗಿ ಅವರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು.ಅವರ ಆಶೀರ್ವಾದ ಮತ್ತು ಕೃಪೆಗೆ ಪಾತ್ರರಾಗಲು ಇಷ್ಟಪಡುತ್ತಿದ್ದರು.

ಆಚಾರ್ಯ ಮಧ್ವರು ಜನಸಾಮಾನ್ಯರಲ್ಲಿ ಭಕ್ತಿಭಾವ ಜಾಗೃತ ಮಾಡಲಿಕ್ಕಾಗಿಯೇ ಅವತರದ ಪ್ರಮುಖ ಕಾರಣಗಳಲ್ಲಿ ಒಂದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಇಂತಹ ಭಾವನೆ ಇರುವ ಆಚಾರ್ಯ ಮಧ್ವರು ಜನಸಾಮಾನ್ಯರು ಬಳಸುತ್ತಿದ್ದ ಕನ್ನಡದ ಭಾಷೆಯಲ್ಲಿ ಕೃತಿ ಕೀರ್ತನೆಗಳು ರಚಿಸಿಲ್ಲ ಎಂದರೆ ನಂಬುವುದು ಕಷ್ಟವೆ ಆಗುತ್ತದೆ. ಈ ಎಲ್ಲಾ ಕಾರಣಗಳಿಂದ ಮಧ್ವಾಚಾರ್ಯರು ಕೃತಿ ಕನ್ನಡದಲ್ಲಿ ಬಂದಿರಬಹುದು ಆದರೆ ನಮಗೆ ಸಿಕ್ಕಿಲ್ಲ ಎನ್ನುವುದೇ ಸತ್ಯವಾದ ಮಾತು ಎನ್ನುವುದು ಪ್ರಾಜ್ಞರ ಅನಿಸಿಕೆ ಆಗಿದೆ .

 
ಗುರು ಮಧ್ವಾಚಾರ್ಯರಿಂದ ಗೀತಗತಿ ಪಡೆದ ಹರಿದಾಸ ಸಾಹಿತ್ಯವು ನರಹರಿತೀರ್ಥರಿಂದ ಆರಂಭವಾಯಿತಾದರೂ, ಅದು ಇನ್ನೂ ಶೈಶಾವಸ್ಥೆಯಲ್ಲಿ ಇತ್ತು. ಶ್ರೀ ಪಾದರಾಜರಿಂದ ಅದಕ್ಕೆ ಮಠ ಮಂದಿರಗಳಲ್ಲಿ ಮಹತ್ವ ದೊರೆಯಿತು. ಅಲ್ಲಿಯವರೆಗೂ ಕನ್ನಡಕ್ಕೆ ಮಾನ್ಯತೆ ಇರಲಿಲ್ಲ. ಜನಸಾಮಾನ್ಯರಿಂದ ಮತ್ತು ಅವರು ಆಡುವ ಭಾಷೆಯಿಂದ ದೂರವಾದ ಯಾವುದೇ ಮತ ಪಂಥ ಅದರ ರಸಮೃತ ಜನಜೀವನದಲ್ಲಿ ಬೆರೆಯಲು ಸಾಧ್ಯವೇ ಇಲ್ಲ ಎಂಬುದನ್ನು ಶ್ರೀಪಾದರಾಜರು ಮನಗಂಡರು.ಈ ದಿಶೆಯಲ್ಲಿ ಸುತ್ತಲೂ ಇದ್ದ ಎಲ್ಲಾ ಪಟ್ಟಪದ್ರ ಹಿತಾಸಕ್ತಿ ಮನಸ್ಸುಗಳನ್ನು ಮೆಟ್ಟಿ ನಿಂತರು. ಕೇವಲ ಸಸಿಯ ರೂಪದಲ್ಲಿ ಇದ್ದ ಹರಿದಾಸ ಸಾಹಿತ್ಯಕ್ಕೆ ನೀರು ಗೊಬ್ಬರ ಹಾಕಿ ಪ್ರಬಲವಾಗಿ ಗಟ್ಟಿಯಾಗಿ ಬೆಳೆಯಲು ತಕ್ಕ ವಾತಾವರಣ ನಿರ್ಮಿಸಿದರು.

 

                                                                              Pic -1
 

ಮುಂದೆ ವ್ಯಾಸರಾಯದಿಂದ ಪ್ರೇರೇಪಿತವಾದ ದಾಸ ಕೂಟ ಇನ್ನಷ್ಟು ಮತ್ತಷ್ಟು ಹರಿದಾಸ ಸಾಹಿತ್ಯವನ್ನು ದಿಗಂತದ ಎತ್ತರಕ್ಕೆ ಬೆಳೆಸಿದರು. ಹರಿದಾಸ ಸಾಹಿತ್ಯಕ್ಕೆ ಪ್ರಬುದ್ಧ ಪಾತ್ರವನ್ನು ಪುರಂದರದಾಸರಿಂದ ಸಾತ್ವಿಕತೆಯ ತಾತ್ವಿಕ ಯಶಸ್ಸು ವಿಜಯದಾಸರಿಂದ ಗಾಂಭೀರ್ಯತೆ ಮತ್ತು ಮಾಧುರ್ಯ ಜಯಶೀಲತೆಯ ಸಾಹಿತ್ಯ ಜಗನ್ನಾಥದಾಸರಿಂದ ಎತ್ತರದ ಮಜಲನ್ನು ಮುಟ್ಟಿತು.


ವಾದಿರಾಜರಂತೂ ವ್ಯಾಸ ಕೂಟ ಮತ್ತು ದಾಸ ಕೂಟಗಳ ನಡುವೆ ಸುಸಂಸ್ಕೃತ ಸೇತುವೆಯಂತೆ ಕಾರ್ಯನಿರ್ವಹಿಸಿದರು. ಆನೆ ನಡೆದದ್ದೇ ದಾರಿ ಎಂಬಂತೆ ಹರಿದಾಸರ ನಡೆದದ್ದಲ್ಲ ಜಾಗವೆಲ್ಲ ತೀರ್ಥಯಾತ್ರೆ, ಅವರ ಸಕಲ ಎಲ್ಲ ಕರ್ಮಗಳು ಹರಿ ಸೇವೆಗೆ ಮೀಸಲು ಆಗಿದೆ. ಹರಿಯ ಹುಚ್ಚು ಹಿಡಿಸಿಕೊಂಡ ಹಲ ಕೆಲವು ಹರಿ ದಾಸರಿಗೆ ಅಪರೋಕ್ಷ ಜ್ಞಾನವು ಸಿದ್ಧಿಸಿತ್ತು. ಅದರ ಪ್ರಸಾದದ ಫಲ ಶೈಕ್ಷಣಿಕ ಸಮಾಜ ದಕ್ಕಿಸಿಕೊಂಡಿತು.



ಇಂತಹ ಹರಿದಾಸರ ಸಾಹಿತ್ಯ ವೈವಿಧ್ಯಮಯವಾಗಿ ಸಾಹಿತ್ಯಲೋಕವನ್ನು ಅಲಂಕರಿಸಿದ್ದು ಜನಸಾಮಾನ್ಯರಿಗೆ ಭಕ್ತಿಯ ರಸಪಾಕದ ಅಮೃತವನ್ನೇ ಕುಡಿಸಿತು. ಕೀರ್ತನೆಗಳು , ಸುಳಾದಿಗಳು , ಉಗಭೋಗಗಳು , ದಂಡಕ ಮುಂಡಿಗೆಗಳು ರಸದೌತಣವನ್ನೇ ಬಡಿಸಿದವು. ಇನ್ನು ಕಾವ್ಯ ಪ್ರಭೇದಗಳಲ್ಲಿ ವೃತ್ತನಾಮ ತ್ರಿಪದಿ ಚೌಪದಿ ಷಟ್ಪದಿ ಸುವ್ವಾಲಿ ಕಂದಪದ್ಯ ವೈಶಿಷ್ಟತೆ ಸಾಹಿತ್ಯದಲ್ಲಿ ಮೂಡಿ ಬಂದಿತು. ಈ ಸಾಹಿತ್ಯ ಭಕ್ತಿಯ ಕಣಜವೇ ಆಗಿದೆ. ಧರ್ಮ ಶ್ರದ್ಧೆ ಆತ್ಮ ಉದ್ಧಾರಾಕ್ಕಾಗಿ ಭಾವ ಶುದ್ದಿಗಾಗಿ ಮನಶುದ್ದಿಗಾಗಿ ಕಡೆಗೆ ಹೃದಯ ಶುದ್ದಿಗಾಗಿ ಹರಿದಾಸ ಸಾಹಿತ್ಯ ಉತ್ತಮ ಕೊಡುಗೆಯಾಗಿ ಸಮಾಜಕ್ಕೆ ಸಿಕ್ಕಿದೆ. ಅದು ಎಲ್ಲರಲ್ಲಿಯೂ ಎಲ್ಲೆಡೆಯೂ ಸುಸಂಸ್ಕೃತ ಜೀವನ ತಂದು ಕೊಡುತ್ತದೆ ಯಾವುದೇ ಸಂಶಯ ಇರುವುದಿಲ್ಲ.



ಕನ್ನಡ ನಾಡಿಗೆ ಕೀರ್ತಿ ಮತ್ತು ಹೆಮ್ಮೆಯ ಆಸ್ತಿ ಎನಿಸಿದ ಶ್ರೀ ಮಧ್ವಾಚಾರ್ಯರನ್ನು ವಿಶ್ವಗುರು ಎಂದು ಅವರ ಭಕ್ತರು ಅಭಿಮಾನಿಗಳು ಗುರುತಿಸುತ್ತಾರೆ. ಏಕೆಂದರೆ ಆಚಾರ್ಯ ಶ್ರೀ ಮಧ್ವರು ಬೋಧಿಸಿದ ತತ್ವ ಆದರ್ಶ ಸಿದ್ಧಾಂತಗಳು ಸರ್ವಮಾನ್ಯ ಆಗಿದೆ.ಅವು ಯಾವುದೋ ಒಂದು ಮತ ಅಥವಾ ಪಂಥಕ್ಕೆ ಸೀಮಿತವಾಗಿಲ್ಲ. ಸಮಸ್ತ ಮಾನವ ಕುಲಕ್ಕೆ ಅವು ಮಾರ್ಗದರ್ಶನ ಮಾಡುತ್ತದೆ.


ಇಂತಹ ಮಧ್ವಾಚಾರ್ಯರ ಜಯಂತಿ ವಿಜಯದಶಮಿ ಹಬ್ಬದ ದಿವಸವೇ ಆಗಿದೆ. ಅವರು ಸಮಸ್ತ ಹಿಂದೂ ಸಮಾಜಕ್ಕೆ ಅಷ್ಟೇ ಅಲ್ಲ ಇಡೀ ಮನುಕುಲಕ್ಕೆ ಮಾರ್ಗದರ್ಶನ ಮಾಡಿದ್ದಾರೆ

 

 

                     Hanuma -- Bhima --- Madhwa
                                                                          

ಇಂತಹ ಶ್ರೀ ಮಧ್ವಾಚಾರ್ಯ ಗುರುಗಳನ್ನು ಹಲವು ಕೆಲವು ಮತಾಂಧ ಶಕ್ತಿಗಳು, ಮಠದಲ್ಲಿ ಮಡಿಯ ನೆಪದಲ್ಲಿ ಕಟ್ಟಿ ಹಾಕುವ ಪ್ರಯತ್ನ ಹಿಂದೆ ಮಾಡಿದ್ದಾರೆ ಈಗಲೂ ಮಾಡುತ್ತಿದ್ದಾರೆ ಬಹುಶಃ ಮುಂದೆಯೂ ಮಾಡಬಹುದು. ಆದರೆ ಇಂತಹ ಯಾವ ಬಂಧನಗಳಿಂದ ಮಧ್ವಾಚಾರ್ಯರ ವಿಶ್ವ ಮಾನವ ಪ್ರೀತಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಅವರ ವಿಚಾರ ಶಕ್ತಿಯನ್ನು ತಡೆಯಲು ಸಾಧ್ಯವಿಲ್ಲ.


ಆದರೂ ಇತ್ತೀಚೆಗೆ ಹಲವು ವರ್ಷಗಳಿಂದ ಅನೇಕ ಮಾಧ್ಯ ತತ್ವಶಾಸ್ತ್ರದಲ್ಲಿ ಮತ್ತು ಸಂಪ್ರದಾಯದಲ್ಲಿ ಸಂಶೋಧನೆ ಮಾಡಿದ ವಿದ್ವಾಂಸರು ಪಂಡಿತರು ಆಚಾರ್ಯ ಶ್ರೀ ಮಧ್ವರನ್ನು ಮತ್ತು ಅವರ ಗ್ರಂಥಗಳನ್ನು ವಿಶ್ವಮಟ್ಟಕ್ಕೆ ಪರಿಚಯ ಮಾಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.



ಉಡುಪಿಯ ಅಷ್ಟಮಠಗಳಲ್ಲಿ ಪ್ರಖ್ಯಾತವಾದ ಪುತ್ತಿಗೆ ಮಠ ಅದರ ಶ್ರೀ ಪಾದಂಗಳವರು ಒಬ್ಬ ಸ್ವಾಮೀಜಿಯಾಗಿ ವಿಶ್ವಪರ್ಯಾಟನೆ ಮಾಡುತ್ತಾ ವಿದೇಶಗಳಲ್ಲಿ ಕೃಷ್ಣಮಠ ಕಟ್ಟಿ ಶ್ರೀ ಮಧ್ವಾಚಾರ್ಯರ ಮತ್ತು ಅವರ ಗ್ರಂಥಗಳನ್ನು ಸತತವಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.


ಉಡುಪಿಯ ಅಷ್ಟಮಠಗಳನ್ನು ಸ್ವತಹ ಶ್ರೀ ಮದ್ವಾಚಾರ್ಯರೇ ಶ್ರೀ ಕೃಷ್ಣನ ಸೇವೆಗಾಗಿ ಕಟ್ಟಿದರು. ಅಲ್ಲಿಂದ ಇಲ್ಲಿಯವರೆಗೂ ಪ್ರತಿಯೊಂದೂ ಅಷ್ಟಮಠವು ಕ್ರಮಬದ್ಧವಾಗಿ ಶ್ರೀಕೃಷ್ಣನ ಸೇವೆ ಮಾಡುತ್ತ-- ಪೂಜೆಯ ಸೇವಾ ಅವಧಿ ಎರಡು ವರ್ಷ ಇರುತ್ತದೆ.


ಶ್ರೀ ಕೃಷ್ಣಾರ್ಪಣಮಸ್ತು --- ಹರೇ ಶ್ರೀನಿವಾಸ.  

---------- Hari Om -------



Wednesday, February 5, 2025

Vishnu Sahasranama Jayanti

 

Importance of Sri Vishnu Sahasranama:


Today is Bhishmashtami means Vishnu Sahasranama Jayanthi


Supreme Sri Vishnu Sahasranama


                                               Vishnu Sahasranama


Vishnu himself exists completely in the supernatural voice of his name. So, it would be better to recite Vishnu Sahasranama for more and more.

All Vedic mantras will be included in Vishnu Sahasranama. So by reciting this mantra, not only those who say, but also those who listen will benefit.

There is no difference between reciting Vishnu Sahasranama. Well there are no hard and fast rules for teaching. You can teach anywhere, at any time.

Reciting Vishnu Sahasranama will free you from the reactions of your previous births.

Devotees who recite Vishnu Sahasranama are never afraid. From this, special radiance, virtue, confidence, morality, body strength senses can increase good health.

If you recite Vishnu Sahasranama daily, the difficulties that come in life will be solved.

If you recite Vishnu Sahasranama with a pure heart, relief and spiritual sufferings will be given.

Vishnu Sahasranama means Maha Vishnu's Sahasranama recitation.

Many achievers have seen and experienced that there is supernatural power. Vishnu Sahasranama recitation can cure from terrible disease like cancer to other diseases too.

If you recite a mass recitation at home, the atmosphere of the house will change. You feel like a spirituality in the mind in the body of the family. There is such a special power in mass recitation.

೧೦ There is no difference between male-female-shudra-brahmin for Vishnu Sahasranama. This is the Panchama Veda given by God to all the people of caste. So this hymn can be recited by all categories and ages.

೧೧. We can visit religious faith centers and come to death by ourselves. If the timeless learn daily at their own homes, we and the environment around us will gain special power.

೧೨. For natural balance, For the peace of the village,For the protection of the family, for the Up-Liftment of all of us.

 

                                                              Lord Vishnu

 

Let's recite daily ---- The life of a man is hundred years...

There are 36 thousand days and 36 thousand nights in these hundred years. The human body is from 72 thousand lands. In these states, 36 thousand states are on the left side and 36 thousand states are on our right side. Blood circulation is correct in these pulses, but humans cannot get any disease.

There are one thousand mantras in the essence of Vedas, and this one thousand mantra has 72,000 letters. Vedavyasa has blessed us with the essence of one thousand mantras in the form of one thousand names.. - Sri Vishnu Sahasra Nama ..

Reciting Vishnu Sahasranama makes us like chanting 72 thousand letters of Brahathisahasra. This will bring full amount of blood circulation in our 72 thousand states. So Vishnu Sahasranama Bhavaroga solution. But it is important to know the meaning and recite with full of devotion.

Vedas have at least 3 meanings, if Mahabharata verses have at least 10

meanings, every name of Sri Vishnu Sahasranama has at least hundred meanings !! For this reason the ancient people have considered Bhagavadgita and Sri Vishnu Sahasranama as the most valuable book. There are one thousand mantras in the essence of Vedas, and this one thousand mantra has 72,000 letters. Vedavyasa (Sakshat Srihari) has blessed us with the essence of one thousand mantras in the form of one thousand names.

Listened to an elderly about Sri Vishnu Sahasranama and its importance ....

Sriranganatha Temple in Tiruchirapalli in Tamil Nadu, after morning worship, distributing the prasada to the devotees who were offered to the God is a routine. Likewise, when all the devotees came in line and received it with devotion to receive it, a very poor elderly used to stand in the line and went forward and holding a big vessel in hand and asking for prasada. I'm poor I have 6 kids, if they don't get this they all need to be hunger. But it was embarrassing the temple distributing prasada, so they complained directly to Sri Ramanuja.

 

Sri Ramanuja who asked this to see that poor man and come to distribute prasad and see that poor elders and ask why do you do this. Those poor elders sir I'm poor I have 6 small children, stomach is no limit so I'll put them all behind and ask for prasada in the vessel. If you stand in the queue, the prasada will be empty..

Sri Ramanuja who knows the thought, I am not the elders to say whether they know to say Sri Vishnu Sahasranama.. But heard a little bit here at the temple.. Sri Vishnu Sahasranama…

 

                                                                       Pic - 1
 

Then tell me as much as you can, he is Vishwam Vishnurvashatkaro, Bhootabhatprabhuha |


Ghostly ghostly ghostly... If you say Sri Rama means you will get only six names in the thousand names of Sri Vishnu .. Yeah I am not a learnt one.. Then Sripadas are not sad about it, the sixth name that comes in it is Bhoota-Bhrut: that means the one who nourishes all living beings, chant the sixth name with devotion and full devotion and that will solve your difficulties, he taught him to say Sri Bhoota-Bhrutyae Namah..


After a few days, when Sripada asked the prasad distributors in that elderly issue, he is not coming now. Don't know what happened. It's been a long time without seeing them.. But one thought was dedicated to God after the Prasad Pooja, it looks like someone has taken it. The elders suspected whether they would somehow come and remove it. Seeing what Sripada had been reduced to see one day after Prasada Pooja...When Sripadas crossed the river to see the elders, the elders bowed down to the feet of Sripadas and all our problems were solved. No need to come there for prasada, the boy you sent is coming and giving us as much prasada as we want. Sripadas came to know all this is the glory of Sri Lord Ranganatha


Ghost-ghost: The one who nurtures all living beings remembered in his heart how he will leave the elders who worshiped with devotion. Also, I remembered what Sri Krishna said in Bhagavadgita. Bhutani is a dancing mastani .. Pashyami Yoga Maswaram..


Every name of Sri Vishnu Sahasranama has its own significance, it is better to read it after understanding it.


------------ Hari Om -----------




 


Bhismastami

 

ಭೀಷ್ಮಾಷ್ಟಮಿ ----- Bhismastami

 

                     
                               Bhismacharya

 

ಮಾಘ ಮಾಸದ ಶುದ್ಧ ಅಷ್ಟಮಿ. ಆಜೀವ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆ ಎಂದು ಶಪಥ ಮಾಡಿ, ಮಹಾಭಾರತದಲ್ಲಿ ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸಿ ಪಿತಾಮಹರೇ ಎನಿಸಿದ್ದ ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಇಚ್ಛಾಮರಣಿಗಳಾಗಿ ತಮ್ಮ ಜೀವನವನ್ನು ತ್ಯಜಿಸಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾಯುತ್ತಿದ್ದ ಶ್ರೀ ಭೀಷ್ಮಾಚಾರ್ಯರು ತಮ್ಮ ದೇಹತ್ಯಾಗವನ್ನು ಮಾಡಿದ ದಿನ. ಹಾಗಾಗಿ ಈ ದಿನವನ್ನು ಭೀಷ್ಮಾಷ್ಟಮಿ ಎಂದೂ ಕರೆಯಲಾಗುತ್ತದೆ.



ಮಹಾಭಾರತದಲ್ಲಿ ಶಂತನು ಮತ್ತು ಗಂಗಾದೇವಿಯ ಪುತ್ರನಾಗಿ ಜನಿಸಿದ್ದ ದೇವವ್ರತ ಸಹಜವಾಗಿಯೇ ಶಂತನುವಿನ ಉತ್ತರಾಧಿಕಾರಿಗಳಾಗಿರುತ್ತಾರೆ. ವಯಸ್ಸಿಗೆ ಬಂದ ಮಗನಿದ್ದರೂ ಯೋಜನಗಂಧಿಯನ್ನು ಮೋಹಿಸಿ ಮದುವೆ ಆಗಲು ಶಂತನು ನಿರ್ಧರಿಸಿದಾಗ ಆಕೆಯ ತಂದೆ, ತನ್ನ ಮಗಳ ಮಕ್ಕಳಿಗೆ ಪಟ್ಟಾಭಿಷೇಕ ಮಾಡುತ್ತೇನೆ ಎಂದು ವಚನ ಕೊಡದ ಹೊರತು ತನ್ನ ಮಗಳನ್ನು ಮದುವೆ ಮಾಡಿಕೊಡಲಾರೆ ಎಂದು ಪಟ್ಟು ಹಿಡಿದಿದ್ದಾಗ, ತಂದೆಯ ಆಸೆಯನ್ನು ತೀರಿಸುವ ಸಲುವಾಗಿ ತಾನು ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡಿ ಭೀಷ್ಮ ಪ್ರತಿಜ್ಞೆ ಎಂದೇ ಪ್ರಖ್ಯಾತವಾಗಿ ದೇವವ್ರತರು ಮುಂದೇ ಭೀಷ್ಮಾಚಾರ್ಯರೆಂದೇ ಪ್ರಖ್ಯಾತರಾಗುತ್ತಾರೆ.



ತನಗಾಗಿ ತನ್ನ ಯೌವ್ವನದ ಜೀವನವನ್ನೇ ಮುಡುಪಾಗಿಟ್ಟ ಕಾರಣ, ಅವರ ತಂದೆ ಆತನಿಗೆ ಇಚ್ಛಾಮರಣಿ ಆಗುವಂತೆ ವರ ಕೊಡುತ್ತಾರೆ. ಅಂದಿನಿಂದ ಭೀಷ್ಮಾಚಾರ್ಯರು ಇಡೀ ಜೀವನಪೂರ್ತಿ ಬ್ರಹ್ಮಚರ್ಯವನ್ನು ಪಾಲಿಸುತ್ತಲೇ ಹಸ್ತಿನಾಪುರದ ಒಳಿತಿಗಾಗಿ ಶ್ರಮಿಸುತ್ತಾರಲ್ಲದೇ, ಇಷ್ಟವಿಲ್ಲದಿದ್ದರೂ ಕುರುಕ್ಷೇತ್ರದಲ್ಲಿ ಅನಿವಾರ್ಯವಾಗಿ ಕೌರವರ ಪರ ಪಾಂಡವರ ವಿರುದ್ಧ ಯುದ್ಧಕ್ಕೆ ಇಳಿಯುತ್ತಾರೆ.



ಯುದ್ಧದಲ್ಲಿ ಭೀಷ್ಮಾಚಾರ್ಯರನ್ನು ಸೋಲಿಸುವುದು ಕಷ್ಟ ಎಂದು ಅರಿತ ಶ್ರೀ ಕೃಷ್ಣನು ಶಿಖಂಡಿಯನ್ನು ಅವರ ಮುಂದೆ ಯುದ್ದಕ್ಕೆ ತಂದಾಗ, ವಿಧಿ ಇಲ್ಲದೇ ಭೀಷ್ಮಾಚಾರ್ಯರು ಶಸ್ತ್ರತ್ಯಾಗ ಮಾಡಿ ಯುದ್ದದಿಂದ ವಿಮುಕ್ತರಾಗುತ್ತಾರೆ.


ಯುದ್ಧದಲ್ಲಿ ಬಾಣಗಳಿಂದ ಜರ್ಜರಿತರಾಗಿದ್ದರೂ ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗ ಮಾಡಲು ಇಚ್ಚಿಸಿದ ಕಾರಣ, ಶ್ರೀ ಕೃಷ್ಣನ ಸಲಹೆಯಂತೆ, ಅರ್ಜುನನು ಬಾಣಗಳಿಂದ ಹಾಸಿಗೆಯಂತೆ ಮಾಡಿ ಅವರನ್ನು ಶರಶಯ್ಯೆಯಲ್ಲಿ ಮಲಗಿಸುತ್ತಾನಲ್ಲದೇ ಕುಡಿಯಲು ನೀರನ್ನು ಕೇಳಿದಾಗ ಆ ಸಂದರ್ಭದಲ್ಲಿ ಮತ್ತೆ ಶ್ರೀ ಕೃಷ್ಣನು ಅರ್ಜುನನಿಗೆ ಗಂಗಾಮಾತೆಯನ್ನೇ ಅಲ್ಲಿಗೆ ತರಲು ಸೂಚಿಸಿದಾಗ, ಅರ್ಜುನನು ನೆಲಕ್ಕೆ ಬಾಣ ಹೊಡೆದು ಗಂಗಾಜಲ ನೇರವಾಗಿ ಭೀಷ್ಮಾಚಾರ್ಯರ ಬಾಯಿಗೆ ಬೀಳುವಂತೆ ಮಾಡುತ್ತಾನೆ.



ಹೀಗೆ ದೇಹ ತ್ಯಾಗಕ್ಕಾಗಿ ಉತ್ತರಾಯಣದ ಪುಣ್ಯಕಾಲದಲ್ಲಿ ವೀರೋಚಿತವಾದ ಮರಣವನ್ನು ಹೊಂದಲು ಶರಶಯ್ಯೆಯನ್ನು ಮಲಗಿದ್ದ ಭೀಷ್ಮಾಚಾರ್ಯರನ್ನು ನೋಡಲು ಪಾಂಡವರು ಬಂದಾಗ, ಭೀಷ್ಮಾಚಾರ್ಯರು ತ್ಯಾಗದ ಭಾವನೆಗೆ ಮೂಲವಾದ ಆಧ್ಯಾತ್ಮಿಕ ಜ್ಞಾನದ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಫಲವೇ, ಧರ್ಮರಾಯನಿಗೆ ಉಪದೇಶಿಸಿದ ವಿಷ್ಣುಸಹಸ್ರನಾಮ ಮತ್ತು ಇತರೇ ಧಾರ್ಮಿಕ ಉಪದೇಶಗಳು. ಶ್ರೀಕೃಷ್ಣನೇ ಪರಮಜ್ಞಾನಿಗಳಾದ ಭೀಷ್ಮರ ಮುಖಾಂತರ ಲೋಕಕ್ಕೆ ನಾನಾ ಧಾರ್ಮಿಕ ರಹಸ್ಯಗಳನ್ನು ತಿಳಿಯಪಡಿಸಿದನು ಎಂದರು ತಪ್ಪಾಗದು.

 

ವಿಷ್ಣು ಸಹಸ್ರನಾಮದಂತಹ ಅದ್ಭುತ ಶ್ಲೋಕವನ್ನು ನಮಗೆ ನೀಡಿದ ಭೀಷ್ಮಾಚಾರ್ಯರನ್ನು ಇದೇ ಮಕರಮಾಸದ ಮಾಘ ಶುದ್ಧ ಅಷ್ಟಮಿಯಂದೇ ತಮ್ಮ ದೇಹತ್ಯಾಗ ಮಾಡಿದ ಕಾರಣ ಈ ದಿನವನ್ನು ಭೀಷ್ಮಾಷ್ಠಮಿ ಎಂದೇ ಕರೆಯಲಾಗುತ್ತದೆ.

ಹಾಗಾಗಿ ಈ ದಿನ ತಮ್ಮ ಪಿತೃಗಳಿಗೆ ಕನಿಷ್ಮ ಪಕ್ಷ ನೀರಿನಿಂದಲಾದರೂ ತರ್ಪಣವನ್ನು ಕೊಟ್ಟಲ್ಲಿ ಸಂತಾನ ಅಭಿವೃದ್ಧಿಯಾಗುವುದಲ್ಲದೇ, ತಮ್ಮ ಇಡೀ ಕುಟುಂಬಕ್ಕೆ ಶೇಯಸ್ಕರ ಎಂದು ಈ ಶ್ಲೋಕದಲ್ಲಿ ವಿವರಿಸಲಾಗಿದೆ.

                                                                                 pic -1

 

ಮಾಘೇ ಮಾಸಿ ಸಿತಾಷ್ಟಮ್ಯಾಂ ಸಲಿಲಂ ಭೀಷ್ಮವರ್ಮಣೇ!
ಶ್ರಾದ್ಧಂ ಚ ಯೇ ನರಾಃ ಕುರ್ಯುಃ ತೇ ಸ್ಯುಃ ಸಂತತಿಭಾಗಿನಃ

ಅದೇ ರೀತಿ ಭೀಷ್ಮ ತರ್ಪಣ ಕೊಡದಿದ್ದಲ್ಲಿ ವರ್ಷವಿಡೀ ಮಾಡಿದ ಪುಣ್ಯಗಳು ನಾಶವಾಗುತ್ತದೆ ಎಂದು ಈ ಶ್ಲೋಕ ಹೇಳುತ್ತದೆ.

ಬ್ರಾಹ್ಮಣಾದ್ಯಾಶ್ಚ ಯೇ ವರ್ಣಾಃ ದದ್ಯುಃ ಭೀಷ್ಮಾಯ ನೋ ಜಲಂ |
ಸಂವತ್ಸರಕೃತಂ ತೇಷಾಂ ಪುಣ್ಯಂ ನಶ್ಯತಿ ಸತ್ತಮ ||

ತರ್ಪಣ ಕೊಡುವ ವಿಧಾನ


ತಂದೆ ಇರದವರು ಜನಿವಾರವನ್ನು ಪ್ರಾಚೀನವೀತಿ (ಎಡಕ್ಕೆ ಹಾಕಿಕೊಂಡು) ಮೂರು ಬಾರಿ ಈ ಮಂತ್ರವನ್ನು ಹೇಳಿಕೊಂಡು ತರ್ಪಣವನ್ನು ಕೊಡಬೇಕು.

ತಂದೆ ತಾಯಿ ಇದ್ದವರು ಜನಿವಾರವನ್ನು ಎಡ ಹೆಬ್ಬೆರಳಿಗೆ ಸಿಕ್ಕಿಸಿಕೊಂಡು ಪೂರ್ವಾಭಿಮುಖವಾಗಿ ಕುಳಿತು ಮೂರು ಬಾರಿ ಕೇವಲ ನೀರಿನಿಂದ ತರ್ಪಣವನ್ನು ಕೊಡಬೇಕು.

ಭೀಷ್ಮಃಶಾಂತನವೊ ವೀರಃ ಸತ್ಯವಾದೀ ಜಿತೇಂದ್ರಿಯಃ |
ಆಭಿರದ್ಭಿರವಾಪ್ನೋತಿ ಪುತ್ರಪೌತ್ರೋಚಿತಾಂ ಕ್ರಿಯಾಂ |
ವೈಯಾಘ್ರಪಾದಗೋತ್ರಾಯ ಸಾಂಕೃತಿಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಣೇ |
ಗಂಗಾಪುತ್ರಾಯ ಭೀಷ್ಮಾಯ ಇದಮರ್ಘ್ಯಮ್ ||
ವಸೂನಾಮವತಾರಾಯ ಶಂತನೋರಾತ್ಮಜಾಯ ಚ |
ಅರ್ಘ್ಯಂ ದದಾಮಿ ಭೀಷ್ಮಾಯ ಆಬಾಲಬ್ರಹ್ಮಚಾರಿಣೇ |
ಗಂಗಾಪುತ್ರಾಯ ಭೀಷ್ಮಾಯ ಇದಮಸ್ತು ತಿಲೋದಕಮ್ |

ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಬೋಧಿಸಿದ ವಿಷ್ಣು ಸಹಸ್ರನಾಮವನ್ನು ಹೇಗೆ ದಾಖಲಿಸಲಾಯಿತು ? ಎಂಬುದನ್ನು ಕಂಚಿಯ ಮಹಾ ಪೆರೆಯವರ್ ಎಂದೇ ಪ್ರಖ್ಯಾತರಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಮಹಾಸ್ವಾಮಿಗಳು ಅದ್ಭುತವಾಗಿ ವಿವರಿಸಿದ್ದಾರೆ.



50 ರ ದಶಕದಲ್ಲಿ ಕಂಚಿ ಜಗದ್ಗುರುಗಳನ್ನು ಸಂದರ್ಶಿಸುತ್ತಿದ್ದವರೊಬ್ಬರು ಟೇಪ್ ರೆಕಾರ್ಡರ್ ಬಳಸುತ್ತಿದ್ದದ್ದನ್ನು ಗಮಿಸಿದ ಸ್ವಾಮಿಗಳು, ಜಗತ್ತಿನ ಅತ್ಯಂತ ಹಳೆಯ ಟೇಪ್ ರೆಕಾರ್ಡರ್ ಯಾವುದು ಎಂದು ನಿಮಗೆ ತಿಳಿದಿದೆಯೇ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಯಾರಿಂದಲೂ ಉತ್ತರ ಬಾರದಿದ್ದಾಗ, ವಿಷ್ಣು ಸಹಸ್ರನಾಮವು ನಮಗೆ ಹೇಗೆ ಲಭ್ಯವಾಯಿತು? ಎಂದಾಗ ಅಲ್ಲಿದ್ದವರೊಬ್ಬರು. ಭೀಷ್ಮ ಪಿತಾಮಹರಿಂದ ವಿಷ್ಣು ಸಹಸ್ರನಾಮ ಉಪದೇಶಿಸಲ್ಪಟ್ಟಿತು ಎಂದು ತಿಳಿಸಿದಾಗ ಸಂತೋಷಗೊಂಡ ಸ್ವಾಮಿಗಳು, ಯುದ್ಧಭೂಮಿಯಲ್ಲಿ ಎಲ್ಲರೂ ಭೀಷ್ಮರ ಮಾತುಗಳನ್ನು ಆಲಿಸುತ್ತಿರುವಾಗ ಅದನ್ನು ಬರೆದುಕೊಂಡವರು ಯಾರು ? ಎಂದು ಪ್ರಶ್ನಿಸಿದಾಗ ಎಲ್ಲರೂ ಮೌನಕ್ಕೆ ಜಾರುತ್ತಾರೆ.

ಆಗ ತಮ್ಮ ಮಾತನ್ನು ಮುಂದಿವರೆಸಿದ ಶ್ರೀಗಳು.

ಭೀಷ್ಮ ಪಿತಾಮಹರು ಸಹಸ್ರನಾಮದೊಂದಿಗೆ ಶ್ರಿ ಕೃಷ್ಣನನ್ನು ವೈಭವೀಕರಿಸುತ್ತಿದ್ದಾಗ, ಪಾಂಡವರು, ಶ್ರೀಕೃಷ್ಣ ಮತ್ತು ವೇದವ್ಯಾಸರು ಸೇರಿದಂತೆ ಎಲ್ಲರ ಚಿತ್ತ ಅವರತ್ತವೇ ಇತ್ತು. ಭೀಷ್ಮರು 1000 ನಾಮಗಳನ್ನು ಮುಗಿಸಿದ ನಂತರ ಎಲ್ಲರೂ ಕಣ್ಣು ತೆರೆದಾದ ಕೂಡಲೇ ಧರ್ಮರಾಯನು, ಪಿತಾಮಹರು ವಾಸುದೇವನ 1000 ಅದ್ಭುತವಾದ ನಾಮಗಳನ್ನು ಜಪಿಸಿ ನಮ್ಮನ್ನೆರನ್ನೂ ಪಾವನ ಮಾಡಿದ್ದಾರಾದರೂ ಅದನ್ನು ಕೇಳುವ ಭರದಲ್ಲಿ ಅದನ್ನು ನಾವ್ಯಾರೂ ದಾಖಲೆಯೇ ಮಾಡಿಕೊಳ್ಳಲಿಲ್ಲವಲ್ಲಾ | ಎಂದು ಚಿಂತಾಕ್ರಾಂತನಾಗಿ ಶ್ರೀಕೃಷ್ಣನ ಕಡೆಗೆ ತಿರುಗಿ ಅವನ ಸಹಾಯವನ್ನು ಕೋರುತ್ತಾರೆ.

 

 

                                                                     Pic -2


ಆಗ ಶ್ರೀ ಕೃಷ್ಣನೂ ಸಹಾ, "ನಾನೂ ಕೂಡಾ ನಿಮ್ಮಂತೆಯೇ ಅದನ್ನೇ ಕೇಳುವುದರಲ್ಲಿ ತಲ್ಲೀನರಾಗಿದ್ದ ಕಾರಣ ಅವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲಾಗಲಿಲ್ಲ. ಆದರೆ, ಸಹದೇವ ಮತ್ತು ವ್ಯಾಸರ ಸಹಾಯದಿಂದ ಸಂಪೂರ್ಣವಾಗಿ ಮರಳಿ ಪಡೆಯಬಹುದಾಗಿದೆ' ಎಂದಾಗ ಎಲ್ಲರ ಮುಖದಲ್ಲಿ ಮಂದಹಾಸ ಮೂಡುತ್ತದೆ.

ನಮ್ಮೆಲ್ಲರಲ್ಲಿ ಸಹದೇವನೊಬ್ಬನು ಮಾತ್ರವೇ ಶುದ್ಧ ಸ್ಫಟಿಕವನ್ನು ಧರಿಸಿರುವ ಕಾರಣ ಅವನು ಶುದ್ಧಮನಸ್ಸಿನಿಂದ ಶಿವನನ್ನು ಪ್ರಾರ್ಥಿಸುತ್ತಾ ಧ್ಯಾನವನ್ನು ಮಾಡಿದರೆ, ಶಿವನ ಅನುಗ್ರಹದಿಂದ ಸ್ಫಟಿಕವನ್ನು ಶಬ್ದದ ಅಲೆಗಳಾಗಿ ಪರಿವರ್ತಿಸಬಹುದು ಮತ್ತು ವ್ಯಾಸರು ಅದನ್ನು ಬರೆದು ಕೊಳ್ಳಬಹುದು ಎಂದು ಶ್ರೀ ಕೃಷ್ಣನು ತಿಳಿಸುತ್ತಾನೆ. ಆಗ ಸಹದೇವ ಮತ್ತು ವ್ಯಾಸ ಇಬ್ಬರೂ ವಿಷ್ಣುಸಹಸ್ರನಾಮವನ್ನು ಪಠಿಸಿದ ಭೀಷ್ಮ ಪಿತಾಮಹನ ಕೆಳಗೆ ಒಂದೇ ಸ್ಥಳದಲ್ಲಿ ಕುಳಿತುಕೊಂಡಿದ್ದಲ್ಲದೇ, ಸ್ಫಟಿಕದಿಂದ ಧ್ವನಿ ತರಂಗಗಳನ್ನು ಪಡೆದುಕೊಳ್ಳುವ ಸಲುವಾಗಿ ಸಹದೇವನು ಶಿವನ ಕುರಿತು ಧ್ಯಾನವನ್ನು ಮಾಡಲು ಪ್ರಾರಂಭಿಸಿದನು.

ಶ್ವೇತಾಂಬರ ಮತ್ತು ಸ್ಫಟಿಕನಾದ ಮಹೇಶ್ವರನ ಸರಿಯಾದ ಧ್ಯಾನದಿಂದ ಹಿಂತಿರುಗಬಹುದಾದ ಶಾಂತ ವಾತಾವರಣದಲ್ಲಿ ಶಬ್ದಗಳನ್ನು ಸೆರೆಹಿಡಿಯುವುದು ಸ್ಫಟಿಕ ಸ್ವರೂಪವಾಗಿರುವ ಕಾರಣ, ಭೀಷ್ಮಾಚಾರ್ಯರು ಬೋಧಿಸಿದ ಅದ್ಭುತವಾದ ವಿಷ್ಣುಸಹಸ್ರನಾಮವನ್ನು ಸಂಪೂರ್ಣವಾಗಿ ದಾಖಲು ಮಾಡಿಕೊಳ್ಳಲು ಸಾಧ್ಯವಾಗಿರುವ ಕಾರಣ ಈ ಸ್ಫಟಿಕವೇ ಪ್ರಪಂಚದ ಮೊತ್ತ ಮೊದಲ ಟೇಪ್ ರೆಕಾರ್ಡರ್ ಆಗಿದೆ ಎಂದು ಶ್ರೀಗಳು ಹೇಳಿದಾಗ ಅಲ್ಲಿ ಕುಳಿತಿದ್ದವರೆಲ್ಲರು ಅಚ್ಚರಿಗೊಂಡರು. ಹೀಗೆ ಸ್ಫಟಿಕ ಧ್ವನಿಮುದ್ರಣದಿಂದ ವೇದವ್ಯಾಸರ ಮೂಲಕ ವಿಷ್ಣುಸಹಸ್ರನಾಮವು ಗ್ರಂಥರೂಪದಲ್ಲಿ ಈ ಲೋಕಕ್ಕೆ ಸಮರ್ಪಣೆಯಾಯಿತು.

ಭಗವಂತನನ್ನು ತಲುಪಲು ಪ್ರಾರ್ಥನೆಯೇ ಮುಖ್ಯವಾಹಿನಿಯಾಗಿರುವ ಕಾರಣ, ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಒಳ್ಳೆಯತನ, ಆನಂದ ಮತ್ತು ಶಾಂತಿ ದೊರೆಯುವುದಲ್ಲದೇ, ಖಂಡಿತವಾಗಿಯೂ ಭಗವಂತನ ಕೃಪಾಶೀರ್ವಾದ ದೊರಕುತ್ತದೆ.

ಸ್ತ್ರೋತ, ಮಂತ್ರಗಳು ಮತ್ತು ಶ್ಲೋಕಗಳ ಪ್ರತೀ ಪದಗಳನ್ನು ಸರಿಯಾದ ಉಚ್ಚಾರದೊಂದಿಗೆ ಪಠಿಸಿದಾಗ, ಮನಸ್ಸಿನ ಏಕಾಗ್ರತೆ ಹೆಚ್ಚಾಗಿ ಜೀವನದಲ್ಲಿ ಗಮನವನ್ನು ಕೇಂದ್ರೀಕರಿಸಲು ನಮಗೆ ಸಹಾಯ ಮಾಡುತ್ತದಲ್ಲದೇ, ಪ್ರತೀ ಪದವನ್ನು ಸರಿಯಾಗಿ ಉಚ್ಚರಿಸಿದಾಗ ಅದರಿಂದ ಉಂಟಾಗುವ ತರಂಗಗಳು ದೇಹದ ಅತ್ಯಂತ ಚಿಕ್ಕ ಜೀವಕೋಶಗಳನ್ನು ಉತ್ತೇಜಿಸುತ್ತದೆ ಮತ್ತು ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ, ಒತ್ತಡ ಮತ್ತು ಅನಾರೋಗ್ಯದಿಂದ ಮುಕ್ತಗೊಳಿಸಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ವಿಷ್ಣು ಸಹಸ್ರನಾಮವನ್ನು ನಿಯಮಿತವಾಗಿ ಪಠಣ ಮಾಡುವುದರಿಂದಾಗಲೀ ಅಥವಾ ಕನಿಷ್ಟ ಪಕ್ಷ ಪ್ರತಿ ದಿನವೂ ಕೇಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ಅದೇ ರೀತಿ ವಿಷ್ಣು ಸಹಸ್ರನಾಮವನ್ನು ನಿರಂತರವಾಗಿ ಪಠಿಸುವುದರಿಂದ ಜನನ, ಮರಣ ಮತ್ತು ಪುನರ್ಜನ್ಮದ ಕೆಟ್ಟ ಚಕ್ರದಿಂದ ಜನರನ್ನು ಮುಕ್ತಗೊಳಿಸುವುದಲ್ಲದೇ ಮರಣದ ನಂತರ ನೇರವಾಗಿ ವೈಕುಂಠಕ್ಕೆ ಹೋಗುತ್ತಾರೆ ಎಂದೇ ನಂಬಲಾಗಿದೆ.

ಇಂತಹ ಅದ್ಭುತವಾದ ವಿಷ್ಣು ಸಹಸ್ರನಾಮವನ್ನು ನಮಗೆ ನೀಡಿದ ಶ್ರೀ ಭೀಷ್ಮಾಚಾರ್ಯರನ್ನು ಅವರು ದೇಹತ್ಯಾಗ ಮಾಡಿದ ದಿನದಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಅಲ್ಲವೇ..


---------- Hari Om ---------


 

Tuesday, February 4, 2025

Ratha Saptami according to Purana's

 

ಪುರಾಣಗಳಲ್ಲಿ ರಥ ಸಪ್ತಮಿ

Ratha Saptami according to Purana’s

 


                                         Lord Surya 

 

ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು ಅಚಲ ಸಪ್ತಮಿ ಎಂದು ಕರೆಯಲಾಗುತ್ತದೆ. ಮಾಘ ತಿಂಗಳ ಸಪ್ತಮಿ ಆಗಿರುವುದರಿಂದ ಇದನ್ನು ಮಾಘಿ ಸಪ್ತಮಿ ಎಂದೂ ಕರೆಯುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನ ಭಗವಾನ್ ಸೂರ್ಯದೇವನು ತನ್ನ ದೈವಿಕ ಬೆಳಕಿನಿಂದ ಇಡೀ ವಿಶ್ವವನ್ನು ಬೆಳಗಿಸುತ್ತಾನೆ. ಆದ್ದರಿಂದ, ಈ ದಿನ ಸೂರ್ಯ ದೇವರನ್ನು ಪೂಜಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.



ಅಚಲ ಸಪ್ತಮಿಯನ್ನು ರಥ ಆರೋಗ್ಯ ಸಪ್ತಮಿ, ಭಾನು ಸಪ್ತಮಿ, ಆರ್ಕ ಸಪ್ತಮಿ, ಸೂರ್ಯರಥ ಸಪ್ತಮಿ, ಸಂತಾನ ಸಪ್ತಮಿ ಮತ್ತು ಮಾಘಿ ಸಪ್ತಮಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಪ್ತಮಿಯನ್ನು ವರ್ಷದ ಸಪ್ತಮಿಯಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಪುರಾಣಗಳಲ್ಲಿ, ಸಪ್ತಮಿ ತಿಥಿಯ ಸಂಬಂಧವನ್ನು ಸೂರ್ಯದೇವನಿಗೆ ಹೇಳಲಾಗುತ್ತದೆ. ಈ ದಿನ, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ಬಟ್ಟೆಗಳನ್ನು ದಾನ ಮಾಡುವುದು, ಏಳು ಜನ್ಮಗಳ ಪಾಪಗಳನ್ನು ತೊಡೆದುಹಾಕುತ್ತದೆ ಎನ್ನುವ ನಂಬಿಕೆಯಿದೆ.



ರಥ ಸಪ್ತಮಿಯ ಮಹತ್ವ

ರಥ ಸಪ್ತಮಿ ದೇಶದ ಎಲ್ಲಾ ಸ್ಥಳಗಳಲ್ಲಿ ಧಾರ್ಮಿಕ ಮತ್ತು ಸಂಬಂಧಿತ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಇದನ್ನು ಪೂರ್ಣ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಾಘ ಜಯಂತಿ ಮತ್ತು ಸೂರ್ಯ ಜಯಂತಿ ಎಂದೂ ಕರೆಯುತ್ತಾರೆ. ಈ ದಿನದಿಂದ, ಭಗವಾನ್ ಸೂರ್ಯನು ಇಡೀ ಜಗತ್ತನ್ನು ಪ್ರಬುದ್ಧಗೊಳಿಸಲು ಪ್ರಾರಂಭಿಸಿದನು ಮತ್ತು ಈ ದಿನವನ್ನು ಭಗವಾನ್ ಸೂರ್ಯನ ಜನ್ಮದಿನವೆಂದು ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಹಿಂದೂ ಪಂಚಾಂಗದ ಪ್ರಕಾರ, ಈ ವಿಶೇಷ ಹಬ್ಬವನ್ನು ಮಾಘ ತಿಂಗಳ ಶುಕ್ಲ ಪಕ್ಷದ ಸಪ್ತಮಿಯಲ್ಲಿ ಆಚರಿಸಲಾಗುತ್ತದೆ.

ರಥ ಸಪ್ತಮಿ ದಂತಕಥೆ

 
ದಂತಕಥೆಯ ಪ್ರಕಾರ, ಗಣಿಕಾ ಎಂಬ ಮಹಿಳೆ ತನ್ನ ಇಡೀ ಜೀವನದಲ್ಲಿ ಯಾವುದೇ ದಾನ ಕಾರ್ಯಗಳನ್ನು ಮಾಡಿರಲಿಲ್ಲ. ಆ ಮಹಿಳೆಯ ಅಂತ್ಯ ಬಂದಾಗ ಅವಳು ವಸಿಷ್ಠ ಮುನಿಯ ಬಳಿಗೆ ಹೋದಳು. ನಾನು ಯಾವತ್ತೂ ಯಾವುದೇ ದಾನ ಮಾಡದಿವಳಲ್ಲ, ಹಾಗಾಗಿ ನಾನು ಹೇಗೆ ವಿಮೋಚನೆ ಪಡೆಯುತ್ತೇನೆ ಎಂದು ಮಹಿಳೆ ಋಷಿಗೆ ಕೇಳಿದಳು. ಆಗ ಋಷಿಗಳು ಮಾಘ ಮಾಸದ ಸಪ್ತಮಿ ದಿನದಂದು ಅಂದರೆ ಅದು ರಥ ಸಪ್ತಮಿ ದಿನವಾಗಿರುತ್ತದೆ. ಈ ದಿನದಂದು ದಾನ ಮಾಡುವುದರಿಂದ ಜನ್ಮ ಜನ್ಮಗಳ ಪುಣ್ಯದ ಫಲ ಪ್ರಾಪ್ತವಾಗುತ್ತದೆ ಎಂದು ಹೇಳುತ್ತಾರೆ.



ಈ ದಿನ, ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ, ಸೂರ್ಯ ಭಗವಂತನಿಗೆ ಅರ್ಘ್ಯ ನೀಡಿ ಮತ್ತು ದೀಪ ದಾನ ಮಾಡಬೇಕು ಮತ್ತು ದಿನಕ್ಕೆ ಒಮ್ಮೆ ಉಪ್ಪು ಇಲ್ಲದೇ ಆಹಾರವನ್ನು ಸೇವಿಸಬೇಕು. ಇದನ್ನು ಮಾಡುವುದರಿಂದ ಆ ವ್ಯಕ್ತಿಯು ಮಹಾನ್‌ ಪುಣ್ಯವನ್ನು ಪಡೆಯುತ್ತಾನೆಂದು ಹೇಳುತ್ತಾರೆ. ವಸಿಷ್ಠ ಮುನಿಗಳ ಸಲಹೆಯಂತೇ ಆಕೆ ರಥ ಸಪ್ತಮಿ ದಿನದಂದು ದೀಪದಾನ ಮಾಡಿ, ವ್ರತದ ವಿಧಿಗಳನ್ನು ಪಾಲಿಸುತ್ತಾಳೆ. ಕೆಲವು ದಿನಗಳ ನಂತರ ಆಕೆ ತನ್ನ ದೇಹವನ್ನು ತ್ಯಜಿಸಿ ಸ್ವರ್ಗದ ರಾಜ ಇಂದ್ರನ ಅಪ್ಸರೆಗಳ ಮುಖ್ಯಸ್ಥನಾಗುವ ಭಾಗ್ಯವನ್ನು ಪಡೆದಳು ಎಂದು ಹೇಳಲಾಗಿದೆ.

 

                                                               Rangoli Ratha

 

ರಥ ಸಪ್ತಮಿ ಪೂಜೆ ವಿಧಾನ


ಅಚಲ ಸಪ್ತಮಿ ದಿನವನ್ನು ಸೂರ್ಯದೇವನ ಜನ್ಮದಿನವಾಗಿ ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವರನ್ನು ಆರಾಧಿಸುವ ಮೂಲಕ, ನೀವು ಎಲ್ಲಾ ರೋಗಗಳನ್ನು ಮತ್ತು ಅನಾರೋಗ್ಯವನ್ನು ನಿವಾರಿಸಿಕೊಳ್ಳಬಹುದು. ಭಕ್ತರು ಸೂರ್ಯದೇವನನ್ನು ಪೂಜಿಸುವ ಮೂಲಕ ಅನಾರೋಗ್ಯದಿಂದ ಗುಣಮುಖರಾಗುತ್ತಾರೆ.


ರಥ ಸಪ್ತಮಿ ದಿನದಂದು ಎಲ್ಲಾ ಜನರು ಸ್ನಾನ ಮಾಡಿ ಸೂರ್ಯ ದೇವನಿಗೆ ಅಕ್ಕಿ, ಎಳ್ಳು, ದುರ್ವಾ, ಶ್ರೀಗಂಧದ ತುಂಡು ಮತ್ತು ಹಣ್ಣು ಇತ್ಯಾದಿಗಳನ್ನು ಅರ್ಪಿಸಿ ಪೂಜಿಸಬೇಕು. ಈ ದಿನ ಸೂರ್ಯದೇವನಿಗೆ ಅರ್ಘ್ಯ ನೀಡುವುದನ್ನು ಸಹ ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ನೀವು ಸೂರ್ಯ ದೇವನಿಗೆ ದಿನನಿತ್ಯ ಅರ್ಘ್ಯವನ್ನು ಅರ್ಪಿಸಲು ಬಯಸಿದರೆ ಈ ದಿನದಿಂದ ಪ್ರಾರಂಭಿಸಬಹುದು.

ಸೂರ್ಯ ದೇವನನ್ನು ಪೂಜಿಸುವುದರ ಕಾರಣ


ಧರ್ಮಗ್ರಂಥಗಳ ಪ್ರಕಾರ, ಈ ದಿನ ಸೂರ್ಯದೇವನನ್ನು ಪೂಜಿಸಿದ ನಂತರ, ಉಪ್ಪು ತಿನ್ನದೇ ಇಡೀ ದಿನ ಫಲಹಾರ ಸೇವಿಸುವ ವ್ಯಕ್ತಿಯು ಸೂರ್ಯದೇವನನ್ನು ಒಮ್ಮೆಗೇ ಪೂಜಿಸುವ ಅರ್ಹತೆಯನ್ನು ಪಡೆಯುತ್ತಾನೆ. ಅಲ್ಲದೆ, ಜಾತಕದಲ್ಲಿ ಸೂರ್ಯನ ಸ್ಥಾನವು ಪ್ರಬಲವಾಗುತ್ತದೆ, ಇದರಿಂದಾಗಿ ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ.


ನವಗ್ರಹಗಳ ರಾಜನಾದ ಸೂರ್ಯನ ಬಲವಾದ ಸ್ಥಾನದಿಂದಾಗಿ, ಸರ್ಕಾರಿ ವಲಯ, ಅಧಿಕೃತ ವರ್ಗ, ಘನತೆ, ಸಾಮಾಜಿಕ ಸಮೃದ್ಧಿ ಮುಂತಾದ ವಿಷಯಗಳ ಬಗ್ಗೆ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ರಥ ಸಪ್ತಮಿ ಪ್ರಯೋಜನ

 
ಅಚಲ ಸಪ್ತಮಿ ದಿನದಂದು, ಸೂರ್ಯೋದಯದ ಕೆಂಪು ಸಮಯದಲ್ಲಿ, ಪೂರ್ವಕ್ಕೆ ಎದುರಾಗಿ ನಿಂತು ಸ್ನಾನ ಮಾಡಬೇಕು. ಅಲ್ಲದೆ, ನೀವು ಕುಂಭದಲ್ಲಿ ಸ್ನಾನ ಮಾಡಿದರೆ ಅದು ವಿಶೇಷ ಪ್ರಯೋಜನವನ್ನು ನೀಡುತ್ತದೆ. ಸ್ನಾನದ ನಂತರ, ಸೂರ್ಯದೇವನಿಗೆ ದೀಪ ದಾನವನ್ನು ಸಹ ಮಾಡಬೇಕು, ಇದು ಅಪೇಕ್ಷಿತ ಫಲಿತಾಂಶವನ್ನು ನೀಡುತ್ತದೆ. ಇದರೊಂದಿಗೆ ಸೌಭಾಗ್ಯ, ಸಂತಾನ ಮತ್ತು ಸಂತೋಷ ಇತ್ಯಾದಿಗಳನ್ನು ಸಾಧಿಸಲಾಗುತ್ತದೆ.

 


                                                                              Pic-1

 

ರಥ ಸಪ್ತಮಿಯಂದು ಉಪ್ಪು ತಿನ್ನದಿರುವುದರ ಪ್ರಯೋಜನ


. ಧರ್ಮಗ್ರಂಥಗಳಲ್ಲಿ, ಮಾಘ ಮಾಸದ ಪ್ರತಿದಿನವೂ ಪವಿತ್ರವೆಂದು ಹೇಳಲಾಗುತ್ತದೆ ಆದರೆ ಇದಕ್ಕೆ ಸಪ್ತಮಿ, ಪೂರ್ಣಿಮಾ ಮತ್ತು ಅಮಾವಾಸ್ಯೆಯ ದಿನಕ್ಕೆ ವಿಶೇಷ ಸ್ಥಾನವಿದೆ.

. ಭವಿಷ್ಯ ಪುರಾಣದಲ್ಲಿ, ಅಚಲ ಸಪ್ತಮಿ ದಿನದಂದು ಉಪ್ಪು ಸೇವಿಸುವುದನ್ನು ನಿಷೇಧಿಸಲಾಗಿದೆ. ಉಪ್ಪು ಇಲ್ಲದೇ ಉಪವಾಸ ಮಾಡಿದರೆ, ಈ ಉಪವಾಸವು ಜನ್ಮ ಜನ್ಮಗಳ ಪ್ರಯೋಜನವನ್ನು ನೀಡುತ್ತದೆ.

. ಪುರಾಣಗಳಲ್ಲಿ, ಈ ಉಪವಾಸವು ಅದೃಷ್ಟವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ತರುತ್ತದೆ ಎಂದು ಅಚಲ ಸಪ್ತಮಿಯ ಬಗ್ಗೆ ಹೇಳಲಾಗಿದೆ. ಈ ಉಪವಾಸ ಮಾಡುವುದರಿಂದ ಸೂರ್ಯನಿಂದ ಶುಭ ಫಲಿತಾಂಶ ಸಿಗುತ್ತದೆ.

. ಅಚಲ ಸಪ್ತಮಿ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ ನಂತರ ಸೂರ್ಯನಿಗೆ ದಾನ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ.

. ಅಚಲ ಸಪ್ತಮಿಯ ದಿನ ಸೂರ್ಯನ ಆರಾಧನೆ, ಹಿಂದಿನ ಮತ್ತು ವರ್ತಮಾನದ ಪಾಪಗಳನ್ನು ತೊಡೆದುಹಾಕಿ ಮೋಕ್ಷವನ್ನು ಪಡೆಯುತ್ತದೆ. ಉತ್ತಮ ಆರೋಗ್ಯವನ್ನೂ ನೀಡುತ್ತದೆ.


------------ Hari Om -----------

 
 



Ratha Saptami Acharane

 

ರಥಸಪ್ತಮಿ ಆಚರಣೆ---- Rathasaptami -- celebration

 

 

                                                                 Lord Surya or Sun God


ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯ ಆಗಿರುವುದರಿಂದ, ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ.

ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.



ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ.



ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ.



ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ 'ಅರ್ಘ್ಯ' ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ.

‌ ‌ ‌
ರಥ ಸಪ್ತಮಿಯು ಯಾವಾಗಲೂ ಅರುಣೋದಯ ವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು.

 

ಏಳು ಎಕ್ಕದ ಎಲೆಯನ್ನು ತಲೆ, ಭುಜ, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು -

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |

ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ||

ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |

ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ||

ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ |

ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || || 

 

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)

 

                                                          Ratha Saptami Rangoli


ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿ ತಿಥಿಗೆ ಅರ್ಘ್ಯ -

ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನಿಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

ಸೂರ್ಯಾರ್ಘ್ಯ ಮಂತ್ರ -

ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |

ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||

ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.

ಸಪ್ತಮೀ ಅರ್ಘ್ಯಮಂತ್ರ -

ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ |

ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ ||

ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.

ರಥಸಪ್ತಮಿಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.


---------- Hari Om ---------

 




Ratha Saptami

 

ರಥಸಪ್ತಮಿ ---- Ratha Saptami

 

ರಥಸಪ್ತಮಿ ಸೂರ್ಯ ನಮಸ್ಕಾರ ತಾರೀಕು 04/02/ 2025 ಮಂಗಳವಾರ, ಈ ದಿನದಂದು ಶ್ರೀಸೂರ್ಯದೇವನನ್ನು ಆರಾಧಿಸಲು ಮೀಸಲಾದ ದಿನ.

 

                                                                Lord Surya Bhagawan


 

ಆರೋಗ್ಯಕಾರಕನಾದ ಸೂರ್ಯದೇವ, ಚರ್ಮ ರೋಗಾದಿಗಳನ್ನು ನಿವಾರಿಸಿ, ನಮ್ಮದೇಹವನ್ನುಸದೃಢಗೊಳಿಸುವ ದಿವಾಕರ ನೂ ಹೌದು. ಇಂತಹ ಖಗ ಇಂದಿನಿಂದಗತಿಬದಲಿಸಲಿದ್ದಾನೆ. ಮಕರ ಸಂಕ್ರಮಣದ ನಂತರ, ಉತ್ತರಕ್ಕೆ ಚಲಿಸುವ ಭಾನು ವಿನ ವೇಗ ಈ ದಿನದಿಂದ ಕ್ಷಿಪ್ರವಾಗಲಿದೆ.


ರಥಸಪ್ತಮಿಯ ಪರ್ವಕಾಲದ ನಂತರ ಮಿತ್ರ ನು, ಶಿಶಿರ ಋತುವಿನ ಚಳಿಯನ್ನು ಮಾಯಮಾಡಿ ಸುಡು ಬಿಸಿಲು ಹೆಚ್ಚಿಸಲಿದ್ದಾನೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಅರ್ಕ ನು ನಮ್ಮ ಆರೋಗ್ಯ ಹೆಚ್ಚಿಸಲೆಂದು ಈ ಪರ್ವಕಾಲದಲ್ಲಿಪ್ರಾರ್ಥಿಸೋಣ.


ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||


ಈ ದಿನದ ಸ್ನಾನ ಅತಿ ವಿಶೇಷವಾದುದಾಗಿದೆ. ಈ ಸ್ನಾನವನ್ನು ಹೆಚ್ಚಿನ ಫಲ ನೀಡುತ್ತದೆ.


ಈ ದಿನ ಸೂರ್ಯನಿಗೆ ಪ್ರಿಯವಾದ ಏಳು ಎಕ್ಕದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು. ಪಾದಗಳ ಮೇಲೆ ಒಂದೊಂದು, ಮಂಡಿಗಳ ಮೇಲೆ ಒಂದೊಂದು, ಭುಜಗಳ ಮೇಲೆ ಒಂದೊಂದು ಹಾಗೂ ತಲೆಯ ಮೇಲೆ ಒಂದನ್ನು ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯೂ ಇದೆ. ನದಿ ಅಥವಾ ಸರೋವರದಲ್ಲಾದರೇ ಏಳು ಸಲ ಮುಳುಗಬೇಕು. ಮನೆಯಲ್ಲಾದರೆ ನೀರನ್ನು ದೇಹದ ಮೇಲೆ ಸುರಿದುಕೊಳ್ಳಬೇಕು.


ಧಾರ್ಮಿಕವಾಗಿ ಎಕ್ಕದೆಲೆಯ ಸ್ನಾನಕ್ಕೆ ಮನ್ನಣೆ ನೀಡಲಾಗಿದೆ. ಈ ದಿನ ಎಕ್ಕದೆಲೆಯ ಸ್ನಾನ ಸಪ್ತವಿಧದ ಪಾಪ ನಿವಾರಣೆ ಮಾಡುತ್ತದೆ ಎನ್ನುತ್ತದೆ ಧರ್ಮಶಾಸ್ತ್ರ.


1) ಈ ಜನ್ಮದಲ್ಲಿ ಮಾಡಿದ ಪಾಪ

2) ಹಿಂದಿನ ಆರು ಜನ್ಮದಲ್ಲಿ ಮಾಡಿದ ಪಾಪ

3) ದೈಹಿಕವಾಗಿ ಮಾಡಿದ ಪಾಪ

4) ಮಾತಿನ ಮೂಲಕ ಮಾಡಿದ ಪಾಪ

5) ಮನಸ್ಸಿನ ಮೂಲಕ ಮಾಡಿದ ಪಾಪ

6) ತಿಳಿದು ಮಾಡಿದ ಪಾಪ

7) ತಿಳಿಯದೇ ಮಾಡಿದ ಪಾಪ

 

ಇವು ಸಪ್ತವಿಧ ಪಾಪಗಳು.


ಇದರ ಜತೆವೈಜ್ಞಾನಿಕವಾಗಿಯೂ ಅರ್ಕ ಪತ್ರೆ ಸ್ನಾನ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಯುರ್ವೇದದ ಪ್ರಕಾರ ದೇಹದ ಕೀಲು, ಹಲ್ಲು ಹಾಗೂ ಹೊಟ್ಟೆ ನೋವು ನಿವಾರಣೆಗೆ ಎಕ್ಕದ ಎಲೆಗಳಲ್ಲಿರುವ ಔಷಧೀಯ ಗುಣಗಳು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.


ಈ ದಿನ ಅರುಣೋದಯ ಕಾಲದಲ್ಲಿ ಎಕ್ಕದ ಎಲೆ ಸಹಿತ ಸ್ನಾನ ಮಾಡುವಾಗ


ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||#ಏತಜ್ಜನ್ಮಕೃತಂ ಪಾಪಂ ಯಚ್ಚಜನ್ಮಾಂತರಾರ್ಜಿತಮ್ |#ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||


ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ ಸಪ್ತವ್ಯಾದಿಸಮಾಯುಕ್ತಂಹರಮಾಕರಿಸಪ್ತಮೀ ||

ಎಂಬ ಶ್ಲೋಕ ಪಠಿಸಬೇಕು.

 

                                                             Happy Ratha Saptami 

 
 

ಸ್ನಾನ ಮಾಡುವಾಗ ಹೇಳುವ ಧ್ಯಾನಶ್ಲೋಕ ಮತ್ತು ಮಂತ್ರಗಳು

ಸಪ್ತ ಸಪ್ತ ಮಹಾಸಪ್ತ ಸಪ್ತದ್ವೀಪಾ ವಸುಂಧರಾ |

ಸಪಾರ್ಕಪರ್ಣಮಾದಾಯ ಸಪ್ತಮ್ಯಾಂಸ್ನಾನ ಮಾಚರೇತ್ ||

ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ
ಶ್ರೀ ಶೋಭನನಾಮ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ......ವಾಸರ ಯುಕ್ತಾಯಾಂ, ಶುಭ ಯೋಗ, ಶುಭ ಕರುಣೆ, ರಥಸಪ್ತಮೀ ಪ್ರಯುಕ್ತ, ಲಕ್ಷ್ಮೀ ವೆಂಕಟೇಶ/ನರಸಿಂಹ ಪ್ರೀತ್ಯರ್ಥಂ ಸ್ನಾನಮಹಂ ಕರಿಷ್ಯೇ.

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |

 

                                                           Ratha done on Rangoli powder


ಸ್ನಾನಾನಂತರ ಒಂದು ಮಣೆ ಮೇಲೆ ರಂಗೋಲಿ ಹಿಟ್ಟಿನಿಂದ ಒಂಟಿ ಚಕ್ರದ ರಥದಲ್ಲಿ ಸೂರ್ಯದೇವನು ಕುಳಿತಿರುವಂತೆ ಬರೆದು ನಂತರ ಈ ನಮಸ್ಕಾರಗಳನ್ನು ಮಾಡಬೇಕು,


1) ಓಂ ಮಿತ್ರಾಯ ನಮಃ |

2) ಓಂ ರವಯೇ ನಮಃ

3) ಓಂ ಸೂರ್ಯಾಯ ನಮಃ |

4) ಓಂ ಖಗಾಯ ನಮಃ

5) ಓಂ ಭಾನುವೇ ನಮಃ |

6) ಓಂ ಪೂಷ್ಣೇ ನಮಃ

7) ಓಂ ಹಿರಣ್ಯಗರ್ಭಾಯ ನಮಃ |

8) ಓಂ ಮರೀಚಯೇ ನಮಃ |

9) ಓಂ ಆದಿತ್ಯಾಯ ನಮಃ |

10) ಓಂ ಸವಿತ್ರೇ ನಮಃ |

11) ಓಂ ಅರ್ಕಾಯ ನಮಃ |

12) ಓಂ ಭಾಸ್ಕರಾಯ ನಮಃ |

13) ಓಂ ಸರ್ವರೋಗ ಹರಾಯ ನಮಃ |

14) ಓಂ ಸರ್ವ ಸಂಪತ್ಪದಾಯ ನಮಃ

15) ಓಂಸರ್ವಲೋಕಹಿತಾಯ ನಮಃ | ಎಂದು ಅರ್ಚಿಸಬೇಕು.

( ಅಥವಾ ಸೂರ್ಯನಮಸ್ಕಾರವನ್ನು, ಮಾಡಬೇಕು)


ಹಾಲು ಮಿಶ್ರಿತ ಗೋಧಿ ಪಾಯಸವನ್ನು ನಿವೇದಿಸಿ ಪೂಜಿಸಬೇಕು.ಇದಾದ ಮೇಲೆ ಸೂರ್ಯಾಂತರ್ಗತಸವಿತೃನಾಮಕ. ಲಕ್ಷ್ಮೀನಾರಾಯಣ ದೇವರಿಗೆ ಅರ್ಘ್ಯವನ್ನು ನೀಡಬೇಕು.
ಇದರ ಜೊತೆಗೆ ----

1) ಮಿತ್ರಾಯನಮಃ ಇದಮರ್ಘ್ಯಂ ಎಂದು ಹೇಳಿ--- ಇದೇ ರೀತಿ,
2) ರವಯೇ ನಮಃ |
3) ಸೂರ್ಯಾಯ ನಮಃ |
4) ಭಾನವೇ ನಮಃ |
5) ಖಗಾಯ ನಮಃ |
6) ಪೂಷ್ಣೇ ನಮಃ |
7) ಹಿರಣ್ಯಗರ್ಭಾಯ ನಮಃ |
8) ಮರೀಚಯೇ ನಮಃ |
9) ಆದಿತ್ಯಾಯ ನಮಃ |
10) ಸವಿತ್ರೇ ನಮಃ |
11) ಅರ್ಕಾಯ ನಮಃ |
12) ಭಾಸ್ಕರಾಯ ನಮಃ


ಇದಮರ್ಘ್ಯಂ | ಎಂದು 12 ಬಾರಿ ಅರ್ಘ್ಯ ನೀಡಬಹುದು.

ನಂತರ ನಮಿಸಿ,ಪೂಜೆಯ ಆರೋಗ್ಯಾದಿ ಸಕಲ ಭಾಗ್ಯ ನೀಡುವಂತೆ ಕುಟುಂಬ ಸಮೇತ ಪ್ರಾರ್ಥಿಸಬೇಕು. ಕೆಂಪು ಹೂವು, ಕೆಂಪು ಬಣ್ಣದ ಗಂಧವನ್ನು ಸಮರ್ಪಿಸುವುದು ವಿಶೇಷವಾಗಿದೆ.
ಸೂರ್ಯನಾರಾಯಣ ಸ್ವಾಮಿ ಎಲ್ಲರನ್ನೂ ಸಲಹಿ ಕಾಪಾಡಲಿ.


----------- Hari Om ----------