Wednesday, January 29, 2025

Purandara Dasaru

 

ಶ್ರೀ ಪುರಂದರದಾಸರು ------ Sri Purandara dasaru

 


                                            
Sri Purandara Dasaru

 

ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್ l
ಪುರಂದರಗುರುಂ ವಂದೇ ದಾಸಶ್ರೇಷ್ಠಮ್ ದಯಾನಿಧಿಮ್ ll


ನಾರದ ಮುನಿ ಹರಿಯಾಜ್ಞೆಯಿಂದಲಿ ಪುರಂದರ ದಾಸರಾಗಿ ಜನಿಸಿದ|
ದಾಸವರ್ಯರಿಗೊಂದಿಪೆ||
ನಾರಾಯಣನ ದಿವ್ಯ ನಾಮದ ಮಹಿಮೆ ಮೂರು ಲೋಕಗಳಲ್ಲಿ ಹರುಹಿದ|
ದಾಸ ವರ್ಯರಿಗೊಂದಿಪೆ|
ದಾಸವರ್ಯರ ಪಾದಕ್ಕೆರಗಿ ಜನ್ಮಾಂತರದ ದೋಷವ ಪರಿಹರಿಸಿಕೊಂಬೆ||

ದಾಸರೆಂದರೆ ಪುರಂದರ ದಾಸರಯ್ಯ ----- ಇಂದು ಅವರ ಆರಾಧನಾ ದಿನ - 29th January 2025

 

                                                                             Pic - 1

 

ಪುರಂದರಗಡದಲ್ಲಿ ವರದಪ್ಪನಾಯಕ ಮತ್ತು ಲಕ್ಷ್ಮಮ್ಮ ಎನ್ನುವ ದಂಪತಿಗಳಿಗೆ
ಅವರ ಮಗನಾಗಿ ಜನಿಸಿ ಶ್ರೀನಿವಾಸ ಎಂಬ ನಾಮದಿಂದ ಪ್ರಸಿದ್ಧಿಯಾದರು.
ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಅರಮನೆಗೆ ವಜ್ರ ವೈಡೂರ್ಯ ಮುಂತಾದ ಆಭರಣಗಳನ್ನು ನೇರವಾಗಿ ಮಾರಾಟ ಮಾಡುವದು ಇವರ ವೃತ್ತಿ. ಆಭರಣಗಳನ್ನು ಮಾರಾಟ ಮಾಡುತ್ತಾ ಇದ್ದರಿಂದ ನವಕೋಟಿ ನಾರಾಯಣ ಎನ್ನುವ ಹೆಸರು ಬಂತು.


ದ್ರವ್ಯದ ಈ ಸಂಬಂಧ ಇವರಿಂದ ಕಡಿದು ಹಾಕುವುದಕ್ಕೆ ಶ್ರೀ ಹರಿ ವೃದ್ದ ಬ್ರಾಹ್ಮಣ ನಾಗಿ ರೂಪ ಧರಿಸಿ ತನ್ನ ಮಗನ ಮುಂಜಿಗೊಸ್ಕರ ಹಣ ಕೇಳುವ ದಕ್ಕೆ ಯಾಚಕನಂತೆ ಆರು ತಿಂಗಳು ಅವರ ಅಂಗಡಿಗೆ ತಿರುಗುತ್ತಾನೆ. ಆದರು ಅವರು ಕೊಡಲಿಲ್ಲ. ‌ಭಗವಂತ ಬಿಡಲಿಲ್ಲ. ಕೊನೆಗೆ ಶೀನಪ್ಪ ನಾಯಕರಿಗೆ ಬೇಸರವಾಗಿ ಸವಕಳಿ ಹೊಂದಿದ ನಾಣ್ಯಗಳು ಇರುವ ಚೀಲವನ್ನು ಭಗವಂತನ ಮುಂದೆ ಹಾಕಿ ಇದರಲೊಂದು ದುಡ್ಡು ತೆಗೆದುಕೊಂಡು ಹೋಗು ಅಂತ ಹೇಳಿದರು.


ಭಗವಂತನು ಅದರಲ್ಲಿ ಯಾವುದೇ ಹಣ ತೆಗದುಕೊಳ್ಳದೇ ನೇರವಾಗಿ ಅವರ ಪತ್ನಿಯಾದ ಸರಸ್ವತಿ ಬಾಯಿಯ ಬಳಿ ದ್ರವ್ಯ ಸಹಾಯವನ್ನು ಯಾಚಿಸಿದಾಗ ಆ ಹೆಣ್ಣು ಮಗಳು ತನ್ನ ಬಳಿ ಇದ್ದ ಮುತ್ತಿನ ಮೂಗುತಿಯನ್ನು ಭಗವಂತನಿಗೆ ದಾನ ಮಾಡುತ್ತಾಳೆ ಮತ್ತೆ ಆ ಮೂಗುತಿಯನ್ನು ಮಾರಾಟ ಮಾಡಲು ಅವರ ಅಂಗಡಿಗೆ ಭಗವಂತನು ಹೋದಾಗ,ಇದು ತಮ್ಮ ಪತ್ನಿಯ ಮೂಗುತಿ ಅಂತ ಸಂದೇಹ ಬಂದು ಅಲ್ಲಿ ಅಂಗಡಿಯಲ್ಲಿ ಆ ಬ್ರಾಹ್ಮಣ ರೂಪಿ ಪರಮಾತ್ಮನನ್ನು ಕೂಡಿಸಿ ಆ ಮುತ್ತಿನ ಮೂಗುತಿಯನ್ನು ಭದ್ರವಾಗಿ ಪೆಟ್ಟಿಗೆಯಲ್ಲಿ ಇಟ್ಟು ಮನೆಗೆ ಬಂದು ಹೆಂಡತಿಗೆ ಕೇಳಿದಾಗ
ಆ ಹೆಣ್ಣು ಮಗಳು ದಾನ ಕೊಟ್ಟ ವಿಷಯ ತಿಳಿದರೆ ಇನ್ನೂ ದೊಡ್ಡ ಹಗರಣವಾಗಬಹುದು!!


ದಾನ ಮಾಡಿದ್ದು ಗೊತ್ತಾಗಬಾರದು.ಈ ರೀತಿಯಲ್ಲಿ ಅಪಮಾನ ಆಗುವದರ ಬದಲು ಸಾಯುವದೇ ಮೇಲೆಂದು ವಿಷವನ್ನು ಕುಡಿಯಲು ಬಟ್ಟಲು ಎತ್ತಿದಾಗ ಶ್ರೀ ಹರಿ ಅದರಲ್ಲಿ ಮೂಗುತಿ ಹಾಕುತ್ತಾನೆ... ತಕ್ಷಣ ತಮ್ಮ ಪತಿಗೆ ಬಂದು ತೋರಿಸಲು, ಅದನ್ನು ತೆಗೆದುಕೊಂಡು ಅಂಗಡಿಗೆ ಬಂದಾಗ ಅಲ್ಲಿ ಪೆಟ್ಟಿಗೆ ಯಲ್ಲಿ ಮೂಗುತಿ ಇರುವದಿಲ್ಲ.ಮತ್ತು ಬ್ರಾಹ್ಮಣ ಸಹ ಮಾಯವಾಗಿದ್ದ.


 

                                                                             Pic -2

ಬಹು ಸೋಜಿಗದಿಂದ ಹೆಂಡತಿಗೆ ಕೇಳಿದಾಗ ನಡೆದ ಸಂಗತಿ ತಿಳಿದು, ತಮ್ಮ ಸಂಪತ್ತಿನ ಮೇಲೆ ವಿರಕ್ತ ರಾಗಿ ಎಲ್ಲಾ ಸಮಸ್ತ ಆಸ್ತಿಯನ್ನು ದಾನ ಮಾಡಿ ಕುಟುಂಬ ಸಮೇತರಾಗಿ ಪಂಡರಿನಾಥನ ಬಳಿ ಬರುತ್ತಾರೆ. ಪಾಂಡುರಂಗ ನ ಬಳಿ ಬಂದಾಗ ಸ್ವಪ್ನದಲ್ಲಿ ಶ್ರೀವಿಠ್ಠಲದೇವರು ಬಂದು
ವಿಜಯನಗರ ದಲ್ಲಿ ಇರುವ ಶ್ರೀವ್ಯಾಸರಾಯರು ನಿನಗೆ ಗುರುಗಳು. ಅವರ ಬಳಿ ಅಂಕಿತ ತೆಗೆದುಕೊಂಡು ನನ್ನ ದಾಸನಾಗು ಎಂದು ಸೂಚಿಸಲು ವಿಜಯನಗರ ಕ್ಕೆ ಬಂದು ಗುರು ವ್ಯಾಸರಾಯರಿಂದ * ಪುರಂದರ ವಿಠ್ಠಲ * ಎಂಬ ಅಂಕಿತ ತೆಗೆದುಕೊಂಡು ಅನೇಕ ಕೃತಿಗಳನ್ನು ರಚಿಸಿದ್ದಾರೆ.


ಒಟ್ಟು 4,75,೦೦೦ ಕೃತಿಗಳನ್ನು ದಾಸರು ರಚಿಸಿದ್ದಾರೆ.
5ಲಕ್ಷ ಕೃತಿಗಳನ್ನು ರಚಿಸಬೇಕೆಂಬ ಸಂಕಲ್ಪ. ಆದರೇನು ಮಾಡುವದು.ಹರಿ ಇಚ್ಚೆ. ಉಳಿದ 25,೦೦೦ ಕೃತಿಗಳನ್ನು ತಮ್ಮ ಮಕ್ಕಳಾದ ಗುರು ಮಧ್ವ ಪತಿಗೆ ಮುಂದಿನ ಜನ್ಮ ದಲ್ಲಿ ರಚಿಸಿ ಪರಿಪೂರ್ಣ ಗೊಳಿಸಲು ಹೇಳುತ್ತಾರೆ.


ಅವರೇ ಮುಂದೆ ಶ್ರೀವಿಜಯದಾಸರಾಗಿ ಅವತರಿಸಿ ಅದನ್ನು ಸಂಪೂರ್ಣಗೊಳಿಸುತ್ತಾರೆ.


ಶ್ರೀಪುರಂದರ ದಾಸರು ತಮ್ಮ ಕೊನೆಯ ಕಾಲದಲ್ಲಿ ವಿಜಯನಗರ ದಲ್ಲಿ ವಾಸವಾಗಿದ್ದು ಶಾ.ಶಕ ರಕ್ತಾಕ್ಷಿ ಸಂವತ್ಸರ ಪುಷ್ಯ ಬಹುಳ ಅಮವಾಸ್ಯೆ ಭಾನುವಾರ ಶುಭದಿನದಂದು ತಮ್ಮ ಅವತಾರವನ್ನು ಸಮಾಪ್ತಗೊಳಿಸಿದರು.


                                                                          Pic - 3


ರಾಯರ ಭಾಗ್ಯವಿದು ಪುರಂದರ ರಾಯರ ಭಾಗ್ಯವಿದು|
ಶ್ರೀಯರಸನ ಪ್ರಿಯ ಪುರಂದರ ರಾಯರ ಭಾಗ್ಯವಿದು||
ನಾರದ ಮುನಿ ಕರದಲಿ ವೀಣಾ ಧಾರಿಯಾಗಿ ಧರಾತಳದೊಳಗೆ|
ಶ್ರೀ ರಮಣನ ವಿಸ್ತರಾ ಮಹಿಮೆಯನು|
ಬೀರುತ ಭವ ಮಂದಿರ ಪೊಕ್ಕಾ||

ದಾಸೋತ್ತಮರ ವಿಶೇಷ ಮಹಿಮೆಗಳ
ನೇಸು ಜನ್ಮದಿ ಪೇಳಲೊಶವಲ್ಲ|
ವಾಸುದೇವ ಪ್ರಾಣೇಶ ವಿಠ್ಠಲ|
ಪ್ರಕಾಶಿಪ ಮನದಲ್ಲಿ ಇವರ ನಂಬಿದರೆ||

 

                                                  Purandara Dasara Mantapa in Hampi 

 

ಶ್ರೀಪುರಂದರದಾಸರು 'ದಾಸನೆಂತಾಗುವೆನು ಧರೆಯೊಳಗೆ ನಾನು' ಎಂದು ತಮ್ಮ ಅಳಲನ್ನು ತೋಡಿಕೊಂಡರು. ತಮ್ಮ ಮನೋಧರ್ಮ, ಸಾಧನೆಗೆ ಬಂದ ಅಡ್ಡಿಗಳನ್ನು ತೋಲಗಿಸಿಕೊಂಡು ಆಡಿದ ಮಾತು.

 

                                                        Pic - 4

 
 

ದಾಸನ್ನ ಮಾಡಿಕೊ ಎನ್ನ ಸ್ವಾಮಿ l
ಸಾಸಿರ ನಾಮದ ವೆಂಕಟರಮಣ ll ll

ಹೇ ಸ್ವಾಮಿ ! ನೀನು ಈಶ, ಅದಕ್ಕೇ ನನ್ನನ್ನು ದಾಸನನ್ನಾಗಿಸಿಕೊಂಡು ಉದ್ಧರಿಸೆಂದು ಬೇಡಿದರು ದಾಸರು. 'ದಾಸನ್ನ ಮಾಡಿಕೊ ಎನ್ನ' ಈ ಕೂಗು ಎಲ್ಲ ಸಜ್ಜನರದ್ದಾಗಲೆಂದು ದಾಸರು ಸೂಚಿಸುವರು. ಇದಕ್ಕೆ ಕಾರಣ ಕೊಡದೆ ಸುಮ್ಮನಾಗಲಿಲ್ಲ ದಾಸರು. ನನ್ನ ದುರಿತರಾಶಿಗಳೆಲ್ಲವನು ಕಳಿ ಎಂದು ಪ್ರಾರ್ಥಿಸುವರು.



ದುರುಳ ಬುದ್ಧಿಗಳನ್ನೆಲ್ಲ ಬಿಡಿಸೋ ನಿನ್ನ
ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ
ಚರಣ ಸೇವೆ ಎನಗೆ ಕೊಡಿಸೊ ಅಭಯ
ಕರಪುಷ್ಪ ಎನ್ನಯ ಶಿರದೊಳು ಮುಡಿಸೊ ll 1 ll

ಜೀವನವನ್ನು ಸನ್ಮಾರ್ಗದಲ್ಲಿ ರೂಪಿಸಿಕೊಳ್ಳಲು ಆಡಿದ ಮಾತುಗಳಿವು. 'ನಾನು ನಿಜಾರ್ಥದಲ್ಲಿ ದಾಸನೆನಿಸಲು, ನನ್ನಲ್ಲಿರುವ ದೋಷಗಳನ್ನು ನೀನೇ ನಿವಾರಿಸು' ಎನ್ನುವರು. ಭಗವಂತನ ಕರುಣೆಯ ಕವಚ ಹರಣಕ್ಕೆ (ಪ್ರಾಣಕ್ಕೆ) ಇರಲಿ ಎನ್ನುವರು. ಜೊತೆಗೆ ಭಯಗ್ರಸ್ತನಾದ ನನಗೆ ನಿನ್ನ ಅಭಯ ಹಸ್ತವಿರಲೆನ್ನುವರು.

 

                                                                                 Pic -5

 

ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ
ಅಡಿಗೆರಗುವೆನಯ್ಯ ಅನುದಿನ ಪಾಡಿ l
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ l
ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ ll 2 ll

ಶ್ರೀಹರಿಯ ಒಲುಮೆ ಬೇಕಾದಲ್ಲಿ ಅವನಲ್ಲಿ ಅಚಲವಾದ, ನೀರ್ವ್ಯಾಜಭಕ್ತಿ ಇರಬೇಕು. ಮಹಾತ್ಮ್ಯಜ್ಞಾನಪೂರ್ವಕದ ಭಕ್ತಿಬೇಕು. ಅದನ್ನೂ ನೀನೆ ದಯಪಾಲಿಸು ಎಂದರು. ಶುದ್ಧಮನಸ್ಕನಾಗಿ ಮಾಡುವ ಸಾಧನೆ ಮಾತ್ರ ಫಲದಾಯಕ. ಅದನ್ನೇ ಬೇಡುವರು.



                                                                              Pic - 6

 

 

ಮೊರೆಹೊಕ್ಕವರ ಕಾಯ್ವ ಬಿರುದು ನೀ
ಮರೆಯದಲೆ ರಕ್ಷಣೆ ಮಾಡೆನ್ನ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸ್ವಾಮಿ
ಪುರಂದರವಿಟ್ಠಲ ಕರುಣದಿ ಕರೆದು ll 3 ll - ಶ್ರೀಪುರಂದರದಾಸರು.

'ಶ್ರೀಹರಿ ಭಕ್ತವತ್ಸಲ, ಅನಿಮಿತ್ತಬಂಧು, ಕರುಣಾಸಾಗರ, ದಯಾಮಯ, ಪರಮಾಪ್ತ ಇಂತೆಲ್ಲಾ ವಾಸ್ತವಿಕೆ ಇರಲು ನನ್ನನ್ನು ನಿನ್ನ ಭಕ್ತನೆಂದು ಪರಿಗಣಿಸಿ ರಕ್ಷಿಸು ದೇವ' ಎಂದು ಕೇಳುವರು. ಇದಕ್ಕೆಲ್ಲಾ ಮೊದಲು ನನ್ನನ್ನು ದಾಸನನ್ನಾಗಿ ಸ್ವೀಕರಿಸು ಎಂದು. ಈ ಕೊರಗು ಜೊತೆಗೆ ಕೂಗು ನಮ್ಮದಾಗಬೇಕು. ಆಗ ಮಾತ್ರ ತೇರ್ಗಡೆ - ಉದ್ಧಾರ.

ಶ್ರೀ ಕೃಷ್ಣಾರ್ಪಣಮಸ್ತು -------- Hari Om -------


 

 

 
 

Sunday, January 19, 2025

Triveni Stothram -- ತ್ರಿವೇಣೀಸ್ತೋತ್ರಮ್

 

ತ್ರಿವೇಣೀಸ್ತೋತ್ರಮ್---- Triveni Stothram

 

 

Kumbha mela period from 13th January 2025 to 26th February 2025


During the Kumbha mela period if one Recites daily these following Triveni Stothram & he gets Punya or Virtue equivalent to one who Physically Visited Kumbha mela and had Bathing or Snana in Triveni Sangam which has confluence of 3 Rivers – Ganga – Yamuna & invisible Saraswati.

 

                                                       Triveni Sangam

 

ನಾಳೆಯಿಂದ ಕುಂಭಮೇಳ. ಈ ಸ್ತೋತ್ರವನ್ನು ಹೇಳಿಕೊಂಡರೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ. ಹೇಳಿಕೊಳ್ಳಿ ಆದವರು.

 

                                                   another picture of Triveni Sangam

 
 

ತ್ರಿವೇಣೀಸ್ತೋತ್ರಮ್ ---- Triveni Stothram


ಮುಕ್ತಾಮಯಾಲಂಕೃತಮುದ್ರವೇಣೀ ಭಕ್ತಾಭಯತ್ರಾಣಸುಬದ್ಧವೇಣೀ ।
ಮತ್ತಾಲಿಗುಂಜನ್ಮಕರನ್ದವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 1

 

ಲೋಕತ್ರಯೈಶ್ವರ್ಯನಿದಾನವೇಣೀ ತಾಪತ್ರಯೋಚ್ಚಾಟನಬದ್ಧವೇಣೀ ।
ಧರ್ಮಾ-ಽರ್ಥಕಾಮಾಕಲನೈಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 2

 

ಮುಕ್ತಾಂಗನಾಮೋಹನ-ಸಿದ್ಧವೇಣೀ ಭಕ್ತಾನ್ತರಾನನ್ದ-ಸುಬೋಧವೇಣೀ ।
ವೃತ್ತ್ಯನ್ತರೋದ್ವೇಗವಿವೇಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 3

 

ದುಗ್ಧೋದಧಿಸ್ಫೂರ್ಜಸುಭದ್ರವೇಣೀ ನೀಲಾಭ್ರಶೋಭಾಲಲಿತಾ ಚ ವೇಣೀ ।
ಸ್ವರ್ಣಪ್ರಭಾಭಾಸುರಮಧ್ಯವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 4

 

ವಿಶ್ವೇಶ್ವರೋತ್ತುಂಗಕಪರ್ದಿವೇಣೀ ವಿರಿಂಚಿವಿಷ್ಣುಪ್ರಣತೈಕವೇಣೀ ।
ತ್ರಯೀಪುರಾಣಾ ಸುರಸಾರ್ಧವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 5

 

ಮಾಂಗಲ್ಯಸಮ್ಪತ್ತಿಸಮೃದ್ಧವೇಣೀ ಮಾತ್ರಾನ್ತರನ್ಯಸ್ತನಿದಾನವೇಣೀ ।
ಪರಮ್ಪರಾಪಾತಕಹಾರಿವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 6

 

ನಿಮಜ್ಜದುನ್ಮಜ್ಜಮನುಷ್ಯವೇಣೀ ತ್ರಯೋದಯೋಭಾಗ್ಯವಿವೇಕವೇಣೀ ।
ವಿಮುಕ್ತಜನ್ಮಾವಿಭವೈಕವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 7

 

ಸೌನ್ದರ್ಯವೇಣೀ ಸುರಸಾರ್ಧವೇಣೀ ಮಾಧುರ್ಯವೇಣೀ ಮಹನೀಯವೇಣೀ ।
ರತ್ನೈಕವೇಣೀ ರಮಣೀಯವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 8

 

ಸಾರಸ್ವತಾಕಾರ-ವಿಘಾತವೇಣೀ ಕಾಲಿನ್ದಕನ್ಯಾಮಯಲಕ್ಷ್ಯವೇಣೀ ।
ಭಾಗೀರಥೀರೂಪ-ಮಹೇಶವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 9

 

ಶ್ರೀಮದ್ಭವಾನೀಭವನೈಕವೇಣೀ ಲಕ್ಷ್ಮೀಸರಸ್ವತ್ಯಭಿಮಾನವೇಣೀ ।
ಮಾತಾ ತ್ರಿವೇಣೀ ತ್ರಯೀರತ್ನವೇಣೀ ಶ್ರೀಮತ್ಪ್ರಯಾಗೇ ಜಯತಿ ತ್ರಿವೇಣೀ ॥ 10

 
ತ್ರಿವೇಣೀದಶಕಂ ಸ್ತೋತ್ರಂ ಪ್ರಾತರ್ನಿತ್ಯಂ ಪಠೇನ್ನರಃ ।
ತಸ್ಯ ವೇಣೀ ಪ್ರಸನ್ನಾ ಸ್ಯಾದ್ ವಿಷ್ಣುಲೋಕಂ ಸ ಗಚ್ಛತಿ ॥ 11

 

---------- ----------- ---------- ---------- ------------ --------- ----------- -----------

 

                                                          Pic -1
 

 

                                       Migratory Birds over Triveni sangam
                                   


ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ತ್ರಿವೇಣೀಸ್ತೋತ್ರಂ ಸಮ್ಪೂರ್ಣಮ್


------------- Hari Om --------------




Saturday, January 18, 2025

Kumbhamela-2025

 

ಕುಂಭಮೇಳ ------ Kumbhamela

 

From January 13th 2025 to 26th February 2025 ---- 44 Days of Event

ಚಿರಂಜೀವಿಗಳು, ಮಹಾನ್ ತಪಸ್ವಿಗಳು ಬಂದು ಪಾಲ್ಗೊಳ್ಳುತ್ತಾರೆ ಎಂದು ಪ್ರತೀತಿ ಇರುವ ಮಹಾಕುಂಭಮೇಳ‌ದ ಬಗ್ಗೆ ಸಣ್ಣ ವರದಿ

 

                          Maha Kumbhamela

 

ಇದು 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವಲ್ಲ,ಮನುಷ್ಯನ ಏಳೂ ಜನ್ಮಗಳ ಪಾಪಗಳನ್ನೆಲ್ಲಾ ಒಂದೇ ಸಲಕ್ಕೆ ತೊಳೆಯಬಲ್ಲಂತಹ, ಶತಮಾನಗಳಿಗೊಮ್ಮೆ ಘಟಿಸುವ ದಿವ್ಯಾದ್ಭುತ ಪುಣ್ಯಸ್ನಾನದ ಮಹಾಕುಂಭಮೇಳ.

ಈ ಬಾರಿ ಪ್ರಯಾಗರಾಜ್, ಇದೇ ಸಂಕ್ರಾಂತಿಯಿಂದ ಇಂಥಹದ್ದೊಂದು ಮಹಾ ಅದ್ಭುತಕ್ಕೆ ತೆರೆದುಕೊಳ್ಳುತ್ತಿದೆ.


ಅದ್ಯಾವ ಜನ್ಮದಲಿ ಅದೇನು ಪುಣ್ಯ ಮಾಡಿದ್ವೋ ನಾವೆಲ್ಲಾ, ಮನುಷ್ಯನಿಗೆ ಏಳು ಜನ್ಮಕ್ಕೊಮ್ಮೆ ಮಾತ್ರ ಪ್ರಾಪ್ತಿಯಾಗೋ ಪುಣ್ಯವೆನ್ನಲಾಗುವ, ಬರೋಬ್ಬರಿ 144ವರ್ಷಕ್ಕೊಮ್ಮೆ ಘಟಿಸೋ ಮಹಾಕುಂಭಮೇಳಕ್ಕೆ ಇದೇ ಜನವರಿ 13ರ ಪುಷ್ಯ ಹುಣ್ಣಿಮೆಯಂದು ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ.

ಇದೇ ಸಂಕ್ರಾಂತಿಯಿಂದ ಶುರುವಾಗುವ ಪ್ರಯಾಗರಾಜ್ ಮಹಾಕುಂಭಮೇಳವು ಫೆಬ್ರವರಿ 26ರ ಶಿವರಾತ್ರಿಯಂದು ಕೊನೆಗೊಳ್ಳಲಿದೆ.

ಕುಂಭಮೇಳದ ಕೆಲವೊಂದು ವಿಶೇಷ ಸ್ನಾನಗಳು.

ಜನವರಿ 13 : ಪುಷ್ಯಹುಣ್ಣಿಮೆ
ಜನವರಿ 14 : ಮಕರಸಂಕ್ರಾಂತಿ.
ಜನವರಿ 29 : ಮೌನಿ ಅಮವಾಸ್ಯೆ
ಫೆಬ್ರವರಿ 03 : ವಸಂತಪಂಚಮಿ.
ಫೆಬ್ರವರಿ 12 : ಮಾಘಹುಣ್ಣಿಮೆ. ಹಾಗೂ,
ಫೆಬ್ರವರಿ 26 : ಮಹಾಶಿವರಾತ್ರಿ.

 

                                                                             Pic - 1
 

ಕುಂಭಮೇಳದಲ್ಲಿ ಮೂರು ವಿಧ – 3 -Types of Kumbha Mela


1. ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸೋದು ಪೂರ್ಣ ಕುಂಭಮೇಳ. ಇದನ್ನು ಪ್ರಯಾಗರಾಜ್

 ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಲ್ಲಿ ಆಚರಿಸಲಾಗುತ್ತದೆ.

2. ಈ ಪೂರ್ಣಕುಂಭ ಮೇಳವು 12 ಬಾರಿ ನಡೆದು ಒಂದು ವೃತ್ತ ಪೂರ್ಣವಾದಾಗ (12×12 = 144) ಅಂದರೆ 144ವರ್ಷಗಳಿಗೊಮ್ಮೆ ನಡೆಯೋದು ಮಹಾಕುಂಭಮೇಳ.ಈ ಬಾರಿ ನಡೀತಿರೋದು ಕೂಡಾ ಇದೇ.

3. ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧಕುಂಭದ ಹೆಸರಲ್ಲಿ ಕುಂಭಮೇಳದ ಆಯೋಜನೆಯಾಗುತ್ತದೆ. ಆದರೆ ಇದು ಪ್ರಯಾಗರಾಜ್ ಹಾಗೂ ಹರಿದ್ವಾರದಲ್ಲಿ ಮಾತ್ರ ಆಚರಿಸಲಾಗುತ್ತದೆ.

ನಾಲ್ಕು ವರ್ಷಕ್ಕೊಮ್ಮೆ ಕುಂಭಮೇಳವಾಗುವುದಿಲ್ಲ, ಇದು ತಪ್ಪುಮಾಹಿತಿ. ನಾಲ್ಕೂ ಕುಂಭಮೇಳಗಳೂ ಪ್ರತ್ಯೇಕ ವರ್ಷಗಳಲ್ಲಿ ( ಪ್ರಯಾಗ್ ರಾಜ್ ಹಾಗೂ ಹರಿದ್ವಾರ ಒಂದೇ ವರ್ಷ ಅಥವಾ ಒಂದು ವರ್ಷದ ಆಸುಪಾಸಲ್ಲಿ ಬಂದ್ರೆ, ನಾಸಿಕ್ ಹಾಗೂ ಉಜ್ಜೈನಿಯು ಇದಾದ ಒಂದೆರಡು ವರ್ಷದ ನಂತರ ಒಟ್ಟಿಗೇ ಅಥವಾ ಒಂದುವರ್ಷದ ಅಂತರದಲ್ಲಿ ಬರುತ್ತವೆ).

 

                                                                            Pic - 2

 

ಅದರದ್ದೇ ಆದ ಘಳಿಗೆಗಳಲ್ಲಿಯೇ ನಡೆಯೋ ಹಾಗೂ ಅವುಗಳ ನಡುವಲ್ಲಿ ಎರಡು ಅರ್ಧ ಕುಂಭಮೇಳಗಳು ಕೂಡಾ ಬಂದುಹೋಗೋ ಕಾರಣ ಹೆಚ್ಚೂ ಕಡಿಮೆ ಮೂರು ವರ್ಷಗಳಿಗೊಮ್ಮೆ ಈ ನಾಲ್ಕು ಕ್ಷೇತ್ರಗಳಲ್ಲಿ ಯಾವುದಾದರೂ ಒಂದೆಡೆ ಕುಂಭಮೇಳ ನಡೆಯುವ ಅನುಭೂತಿ ಕೊಡುತ್ತದೆ.



ಕುಂಭಮೇಳವು ಈ ನಾಲ್ಕು ಜಾಗಗಳಲ್ಲಿ ಮಾತ್ರ ಯಾಕೆ ಎಂದರೆ, ಅಮೃತಕ್ಕಾಗಿ ಸಮುದ್ರಮಂಥನವಾದ ಜಾಗವೇ ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮಕ್ಷೇತ್ರ ಪ್ರಯಾಗ್ ರಾಜ್.ಅಮೃತಕ್ಕಾಗಿ ಕಿತ್ತಾಟ ನಡೆದಾಗ ಮೋಹಿನಿ ಅವತಾರವೆತ್ತುವ ಮಹಾವಿಷ್ಣು, ಆ ಅಮೃತ ತುಂಬಿದ್ದ ಕುಂಭವನ್ನು ಹೊತ್ತೊಯ್ಯುವಾಗ ಅದರ ನಾಲ್ಕು ಹನಿಗಳು ಭೂಮಿಯ ನಾಲ್ಕು ಕಡೆ ಬಿದ್ದವಂತೆ. ಆ ನಾಲ್ಕು ಹನಿಗಳು ಬಿದ್ದ ಜಾಗವೇ ಈ ನಾಲ್ಕು ಪುಣ್ಯಕ್ಷೇತ್ರಗಳು.


Four Shrines are 1) Prayagraj or Allahabad  2) Haridwar  3) Nasik  4) Ujjain

 


                                                            Pic - 3

 

ಕೊನೆಯದಾಗಿ :

ಸನಾತನ‌ಧರ್ಮದ ಸರ್ವನಾಶಕ್ಕೆಂದೇ ಹುಟ್ಟಿಬಂದವರಂತೆ ಭಾರತಕ್ಕೆ ಕಾಲಿಟ್ಟ ಮೊಘಲರು, ಅಯೋಧ್ಯೆಯ ರಾಮ, ಮಥುರೆಯ ಕೃಷ್ಣ, ಕಾಶಿಯ ಶಿವ ವಿಷ್ಣು, ಜ್ಯೋತಿರ್ಲಿಂಗಗಳು ಹೀಗೆ ಹಿಂದೂ ಧರ್ಮದ ಅಸ್ತಿತ್ತ್ವಗಳನ್ನೇ ನೆಲಸಮ ಮಾಡಿದೆವೆಂದು ಬೀಗಿದರೂ ಕೂಡಾ,ಮುನ್ನೂರಕ್ಕೂ ಅಧಿಕ ವರ್ಷಗಳ ಕಾಲ ಮುಘಲರ ಹತ್ತಾರು ತಲೆಮಾರುಗಳೇ ಬಂದು ಹೋದರೂ,ಕೊನೆಗೆ ಅವರೇ ಸರ್ವನಾಶವಾದರೇ ಹೊರತು.


ಅಷ್ಟೂ ವರ್ಷಗಳಲ್ಲಿ ಒಬ್ಬನೇ ಒಬ್ಬನ ಕೈಲೂ, ಒಂದೇ ಒಂದು ಕುಂಭಮೇಳವನ್ನು ತಡೆಯೋದಿರಲಿ, ಕುಂಭಮೇಳಕ್ಕೆ ಆಗಮಿಸೋ ಒಂದೇ ಒಂದು ಸಾಧುಗಳನ್ನು ಬರದಂತೆ ತಡೆದು ನಿಲ್ಲಿಸೋದು ಕೂಡಾ ಸಾಧ್ಯವಾಗಲಿಲ್ಲ ಅಂದ್ರೆ ಅದಿನ್ನೆಂತಾ ಶಕ್ತಿಶಾಲಿ ಇರಬಹುದೋ ಕುಂಭಮೇಳ ತಾಕತ್ತನ್ನು ಕಲ್ಪಿಸಿಕೊಳ್ಳಿ.

 ------------- Hari OM ------------

 




 

 

Tuesday, January 14, 2025

Makara Sankranti

 

ಮಕರ ಸಂಕ್ರಾಂತಿ --- Makara Sankranti

 

                                                    Pic -1

                    

ಮಕರ ಸಂಕ್ರಾಂತಿ ದಿನ : ಷಡ್ತಿಲ ಕರ್ಮಾನುಷ್ಠಾನ ಆಚರಣೆ ಮಾಡಬೇಕು. ಅಂದರೆ ಎಳ್ಳಿನ ಸಂಬಂಧಿತ ಆರು ಕರ್ಮಾನುಷ್ಠಾನ.

) ಎಳ್ಳು ಹಚ್ಚಿ ಸ್ನಾನ,
) ಎಳ್ಳುದಾನ,
) ಎಳ್ಳು ಹೋಮ
) ಎಳ್ಳು ಭಕ್ಷಣ,
) ಎಳ್ಳಿನಿಂದ ತರ್ಪಣ,
) ಎಳ್ಳೆಣ್ಣೆಯ ದೀಪ


ಸಂಕ್ರಮಣ ಪರ್ವಕಾಲದಲ್ಲಿ ದ್ವಾದಶ ಪಿತೃಗಳಿಗೆ ತರ್ಪಣ ರೂಢಿಯಲ್ಲಿದೆ. ಸರ್ವಪಿತೃಗಳಿಗೂ ತರ್ಪಣ ಕೊಡಬೇಕು ಕನಿಷ್ಠ ದ್ವಾದಶಪಿತೃಗಳಿಗಾದರೂ ಕೊಡಬೇಕು.

ಸಂಕ್ರಾಂತಿ ಎಂದರೇನು ?


ಸೂರ್ಯನ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವುದನ್ನು “ಸಂಕ್ರಮಣ” ಎನ್ನುತ್ತಾರೆ.

ಒಟ್ಟು ಎಷ್ಟು ಸಂಕ್ರಮಣಗಳಿವೆ?


ಒಟ್ಟು ಹನ್ನೆರಡು ಸಂಕ್ರಮಣಗಳಿವೆ.

ಮಕರ ಸಂಕ್ರಮಣ ಎಂದರೇನು?


ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯವನ್ನು ಮಕರ ಸಂಕ್ರಮಣ ಅಥವ ಉತ್ತರಾಯಣ ಪರ್ವಕಾಲವೆನ್ನುತ್ತಾರೆ.

ಸಂಕ್ರಮಣದ ಪರ್ವಕಾಲವೆಂದರೇನು ?


ಸೂರ್ಯನು ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಮಯವನ್ನು ಸಂಕ್ರಮಣ ಪರ್ವಕಾಲವೆನ್ನುತ್ತಾರೆ.


ದಕ್ಷಿಣಾಯಣ ಪುಣ್ಯಕಾಲದಲ್ಲಿ ಉತ್ತರಾಯಣ ಮುಗಿಯುವ ಮುನ್ನದ ಕೆಲವು ಘಳಿಗೆ ಪ್ರಶಸ್ತ. ಉತ್ತರಾಯಣ ಪುಣ್ಯಕಾಲದಲ್ಲಿ ಮಕರ ರಾಶಿಯ ಪ್ರವೇಶಿಸಿದ ನಂತರದ ಘಳಿಗೆ ಪ್ರಶಸ್ತ.


ಮಕರ ಸಂಕ್ರಮಣದ ಪರ್ವಕಾಲ ಎಷ್ಟು ಸಮಯ ವಿರುತ್ತದೆ ?


ಉತ್ತರ : ಮಕರ ಸಂಕ್ರಮಣದ ಪರ್ವಕಾಲ ಸಂಕ್ರಮಣದ ನಂತರದ 16 ಘಳಿಗೆ (20 ಘಳಿಗೆ ಕೆಲವರ ಸಂಪ್ರದಾಯ). ಅರ್ಥಾತ್ ಒಂದು ಘಳಿಗೆ ಅಂದರೆ 48 ನಿಮಿಷ.



                                                                              Pic - 2

 

ಈ ಸಲದ ಮಕರ ಸಂಕ್ರಮಣದ ಪರ್ವಕಾಲ ಸಮಯ ಯಾವುದು ?
ಉತ್ತರ : ಈ ಸಮಯ ಸಂಕ್ರಮಣ ಪರ್ವಕಾಲ 14.1.25 ಮಂಗಳವಾರ ಮಧ್ಯಾಹ್ನ 2.43ರಿಂದ ಸೂರ್ಯಾಸ್ತವರೆಗೂ ಉತ್ತರಾಯಣ ಪರ್ವಕಾಲ ಇರುತ್ತದೆ,

ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಶ್ರೇಷ್ಟ ಎನ್ನುತ್ತಾರೆ. ಆದರೆ ಅಲ್ಲಿಗೆ ಹೋಗಲು ಅನುಕೂಲ ಇಲ್ಲದವರು ಏನು ಮಾಡಬೇಕು?


ಉತ್ತರ : ಎಲ್ಲರೂ ಸಂಕ್ರಮಣ ಸಂದರ್ಭದಲ್ಲಿ ನದಿ ಸ್ನಾನಕ್ಕೆ ಹೋಗಲು, ಅಥವಾ ಬಾವಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಅಂತಹವರು ಮನೆಯಲ್ಲಿಯೇ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳನ್ನು ನೆನೆದು ಸ್ನಾನ ಮಾಡತಕ್ಕದ್ದು.

ಮಕರ ಸಂಕ್ರಮಣದಂದು ಪೂಜೆಯನ್ನು ಸಂಕ್ರಮಣದ ನಂತರವೇ ಮಾಡಬೇಕೆ ಅಥವಾ ಮುನ್ನವೇ ಮಾಡಬಹುದೇ?

ಉತ್ತರ : ಮಕರ ಸಂಕ್ರಮಣದಲ್ಲಿ ಪೂಜೆಯನ್ನು ಸಂಕ್ರಮಣಕ್ಕಿಂತ ಮುನ್ನವೇ ಮಾಡಬಹುದು. ದೇವರಿಗೆ ನೈವೇದ್ಯವನ್ನೂ ಮಾಡಬಹುದು.

ತರ್ಪಣಾಧಿಕಾರಿಗಳು ತರ್ಪಣ ಕೊಡುವ ಸಮಯ ಯಾವುದು ?


ಉತ್ತರ : ಮಕರ ಸಂಕ್ರಮಣ ಪರ್ವಕಾಲ ಸಮಯದಲ್ಲಿ. 14.1.2025 ಮಧ್ಯಾಹ್ನ 2.43 pm ರಿಂದ ಸೂರ್ಯಾಸ್ತದವರೆಗೂ ತರ್ಪಣ ಕೊಡಬಹುದು.

ಮಕರ ಸಂಕ್ರಮಣ ದಿನವೇ ಶ್ರಾದ್ಧ ಇದ್ದರೆ ಏನು ಮಾಡಬೇಕು ?


ಉತ್ತರ : ಶ್ರಾದ್ಧವನ್ನು ಸಂಕ್ರಮಣ ಮುನ್ನವೂ ಮಾಡಬಹುದು. ಪರ್ವಕಾಲದಲ್ಲಿ ಮಾಡಿದರೆ ಶ್ರೇಷ್ಟ.

ದಾನವನ್ನು ಯಾವಾಗ ಕೊಡಬೇಕು?


ಉತ್ತರ : ದಾನವನ್ನು ಸಂಕ್ರಮಣ ಸಮಯದಲ್ಲಿ ಅಥವಾ ನಂತರ ಕೊಡಬಹುದು. ಅನುಕೂಲವಿದ್ದರೆ ದಾನ ಆ ಸಮಯದಲ್ಲೇ ಕೊಡಿ. ಇಲ್ಲದಿದ್ದರೆ ಮೀಸಲಿಟ್ಟು ನಂತರ ದಾನವನ್ನು ಕೊಡಬಹುದು.

ತಂದೆಯಿರುವವರು, ಸ್ತ್ರೀಯರು, ಮಕ್ಕಳು ಬೆಳಿಗ್ಯೆ ಫಲಹಾರ ಮಾಡಬಹುದಾ?


ಉತ್ತರ : ಅವರುಗಳು ಉಪವಾಸವಿರಬೇಕೆಂದಿಲ್ಲ. ಬೆಳಿಗ್ಯೆ ಪೂಜೆ ಮುಗಿಸಿ, ಹಣ್ಣು, ಫಲಹಾರ ಮಾಡಿ, ಸಂಕ್ರಮಣದ ನಂತರ ಭೋಜನ ಮಾಡತಕ್ಕದ್ದು.

ಸ್ತ್ರೀಯರು, ಸಂಕ್ರಮಣ ಸಮಯದಲ್ಲಿ ತಲೆಗೆ ಸ್ನಾನ ಮಾಡಬಹುದಾ ?


ಉತ್ತರ : ಸ್ತ್ರೀಯರು ಯಾವ ಕಾಲದಲ್ಲೂ ಬರೀ ಸ್ನಾನವನ್ನು ಮಾಡುವಂತಿಲ್ಲ. ಎಣ್ಣೆ ನೀರು ಹಾಕಿಕೊಳ್ಳುವವರು ಮಾತ್ರ ತಲೆಗೆ ಸ್ನಾನ ಮಾಡಬಹುದು.

ಸಂಕ್ರಮಣಕ್ಕೂ ಮುನ್ನವೇ ಅಡಿಗೆ ಮಾಡಬಹುದಾ ಅಥವಾ ಗ್ರಹಣದ ರೀತಿ ನಂತರ ಮಾಡಬೇಕೆ?


ಉತ್ತರ : ಗ್ರಹಣಕ್ಕೂ ಸಂಕ್ರಮಣಕ್ಕೂ ಬಹಳ ವ್ಯತ್ಯಾಸವಿದೆ. ಸಂಕ್ರಮಣಕ್ಕೂ ಮುನ್ನವೇ ಅಡಿಗೆ ಸಿದ್ಧಪಡಿಸಿ, ಮುನ್ನವೇ ನೈವೇದ್ಯವನ್ನೂ ದೇವರಿಗೆ ಮಾಡಬಹುದು. ಸ್ವೀಕಾರ ಮಾತ್ರ ಸಂಕ್ರಮಣ ನಂತರ.

  

                                           

                                                  Pic-3

 

ಉತ್ತರಾಯಣ ಪರ್ವಕಾಲದಲ್ಲಿ ತಿಲದ ಪ್ರಾಮುಖ್ಯತೆ ಏನು ?


ಉತ್ತರ : ಈ ಕಾಲದಲ್ಲಿ ಆರು ತಿಲ ಕರ್ಮಗಳನ್ನು ಮಾಡತಕ್ಕದ್ದು.


) ತಿಲ ಸ್ನಾನ,
) ತಿಲ ದೀಪ,
) ತಿಲ ತರ್ಪಣ,
) ತಿಲ ಹೋಮ,
) ತಿಲ ದಾನ,
) ತಿಲ ಭಕ್ಷಣ.

ಸ್ನಾನ ಸಮಯದಲ್ಲಿ ತಿಲವನ್ನು ಹಚ್ಚಿಕೊಂಡು ಮಾಡಬೇಕು.

ಉತ್ತರಾಯಣ ಕಾಲದಲ್ಲಿ ಮಾಡಿದ ದಾನ ಸಾಮಾನ್ಯ ದಿನಗಳಲ್ಲಿ ಮಾಡಿದ ದಾನಕ್ಕಿಂತಲೂ ಕೋಟಿಪಾಲು ಪುಣ್ಯಪ್ರದ. ಯಥಾಶಕ್ತಿ ದಾನ ಮಾಡಬೇಕು. ಸಾಲವ ಮಾಡಾದರೂ ದಾನ ಮಾಡಬೇಕಾಗಿಲ್ಲ.

ಇಂದು ಗೋವುಗಳನ್ನು ವಿಶೇಷವಾಗಿ ಪೂಜಿಸಬೇಕು. ಹಸುಗಳಿಗೆ ವಿಶೇಷವಾಗಿ ಸ್ನಾನ ಮಾಡಿಸಿ ಅರಿಶಿನ ಹಚ್ಚಿ, ಕೊಂಬುಗಳಿಗೆ ಮತ್ತು ಇಡೀ ಗೋವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.



---------- Hari Om ---------




                      

Friday, January 10, 2025

Vaikunta Ekadasi

 

ವೈಕುಂಠ ಏಕಾದಶಿ ------ Vaikunta Ekadasi 

 

                                        Lord Venkateswara

 

ತಾರೀಕು 09/01/2025 -- ಮಧ್ಯಾಹ್ನ12:22pm ರಿಂದ ಆರಂಭವಾಗಿ ತಾರೀಕು 10:/01/2025ರಬೆಳಗ್ಗೆ10:19am ತನಕ


ಹಿಂದೂ ಕ್ಯಾಲೆಂಡರ್ ಪ್ರಕಾರ ಈ ವರ್ಷದ ವೈಕುಂಠ ಏಕಾದಶಿ ಜನವರಿ 9 ರಂದು ಮಧ್ಯಾಹ್ನ12:22ಕ್ಕೆಪ್ರಾರಂಭವಾಗುತ್ತದೆ. ಈ ತಿಥಿ ಮರುದಿನ ಅಂದರೆ ಜನವರಿ 10 ರಂದು ಬೆಳಗ್ಗೆ10:19ಕ್ಕೆಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನವರಿ 10 ರಂದು ಉದಯ ತಿಥಿಯಂತೆ ವೈಕುಂಠ ಏಕಾದಶಿ ಉಪವಾಸವನ್ನುಆಚರಿಸಬೇಕು

 

                                                                      Lord Govinda 

 

Vaikunta Ekadasi ---- ವೈಕುಂಠ ಏಕಾದಶಿ

ವೈಕುಂಠ ಏಕಾದಶಿ ------ ಮುಕ್ಕೋಟಿ ದ್ವಾದಶಿ

ವೈಕುಂಠ ಏಕಾದಶಿ ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲೇ ಧನುರ್ಮಾಸ ಆಚರಿಸುವುದರಿಂದ ಆ ಸಮಯದಲ್ಲಿ ಯಾವ ಶುಕ್ಲ ಪಕ್ಷದಲ್ಲಿ ಏಕಾದಶಿ ಬರುವುದೋ ಅಂದೇ ಆಚರಿಸಲಾಗುತ್ತದೆ



ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ ನಾರಾಯಣ ದೇವರು ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ಪ್ರತೀತಿ. ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರ ರೂಪಿಸಿ, ಭಕ್ತರಿಗೆ ಪ್ರವೇಶ ಕಲ್ಪಿಸಿರುತ್ತಾರೆ

 

                                                                        Lord Vishnu

 

ಏಕಾದಶಿಗೆ ಸಂಬಂಧಿಸಿದ ಕೃಷ್ಣಕಥೆ ಭಾಗವತದಲ್ಲಿ ಬಂದಿದೆ

 

ನಂದಗೋಪನು ಶ್ರೀಕೃಷ್ಣನ ಸನ್ನಿಧಾನದಲ್ಲಿ ಏಕಾದಶಿ ವ್ರತವನ್ನು ತಪ್ಪದೇ ಆಚರಿಸುತ್ತಿದ್ದ. ಒಮ್ಮೆ ಏಕಾದಶಿ ವ್ರತಮಾಡಿ ಮರುದಿನ ಅಲ್ಪದ್ವಾದಶಿ ಇದ್ದುದರಿಂದ ನಸುಕಿನಲ್ಲಯೇ ಯಮುನಾ ನದಿಯಲ್ಲಿ ಸ್ನಾನಕ್ಕೆ ಇಳಿಯುತ್ತಾನೆ.



ಆ ಸಮಯ ಇನ್ನೂ ರಾಕ್ಷಸರ ಸಂಚಾರಕಾಲವಾಗಿತ್ತು. ರಾತ್ರಿ ಕಾಲದಲ್ಲಿ ನದೀ ಸ್ನಾನಕ್ಕೆ ಹೋಗಬಾರದು. ಆ ತಪ್ಪಿಗೆ ಶಿಕ್ಷೆಯಾಗಿ ವರುಣನ ಭೃತ್ಯನೊಬ್ಬ ನಂದಗೋಪನನ್ನು ಎಳೆದುಕೊಂಡು ವರುಣ ಲೋಕಕ್ಕೆ ಬರುತ್ತಾನೆ. ಇತ್ತ ನಂದಗೋಪ ಸ್ನಾನಕ್ಕೆಂದು ನದಿಗೆ ಹೋದ ನಂದಗೋಪ ಬಾರದೇ ಇದ್ದುದರಿಂದ ಗೋಪಾಲಕರೆಲ್ಲ ಚಿಂತಿತರಾಗಿ ಕೃಷ್ಣ ಬಲರಾಮರಿಗೆ ತಿಳಿಸುತ್ತಾರೆ.



ಶ್ರೀಕೃಷ್ಣನು ವಿಷಯ ತಿಳಿದವನಾಗಿ ಎಲ್ಲ ಗೋಪಾಲಕರಿಗೆ ಅಭಯವನ್ನು ಕೊಡುತ್ತಾನೆ. ಕೃಷ್ಣಾವತಾರದಲ್ಲಿ ತಂದೆಯಾದ ನಂದಗೋಪನನ್ನು ಕರೆತರುವದಾಗಿ ಗೋಪಾಲಕರಿಗೆ ತಿಳಿಸಿ ವರುಣಲೋಕಕ್ಕೆ ಹೋಗುತ್ತಾನೆ.



ವರುಣಲೋಕದಲ್ಲಿ ಶ್ರೀಕೃಷ್ಣನನ್ನು ನೋಡಿದ ವರುಣ ಸಂತೋಷದಿಂದ ಬರಮಾಡಿಕೊಳ್ಳುತ್ತಾನೆ, ತನ್ನ ಸೇವಕನಿಂದ ಆದ ಪ್ರಮಾದವನ್ನು ಕ್ಷಮಿಸುವಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾನೆ. ಶ್ರೀಕೃಷ್ಣ ವರುಣನಿಗೆ ಆಶೀರ್ವದಿಸಿ ನಂದಗೋಪನೊಂದಿಗೆ ಯಮುನಾತೀರಕ್ಕೆ ಬರುತ್ತಾನೆ.



ಗೋಪಾಲಕರಿಗೆ ನಂದಗೋಪನು ವರುಣಲೋಕದಲ್ಲಿ ಕಂಡ ಶ್ರೀಕೃಷ್ಣನ ನಿಜರೂಪವನ್ನು ಮತ್ತು ಅಲ್ಲಿ ದೊರೆತ ಭವ್ಯ ಸ್ವಾಗತವನ್ನು ವರ್ಣಿಸುತ್ತಿದ್ದರೆ ಎಲ್ಲ ಗೋಪಾಲಕರು ಭಕ್ತಿಯುಕ್ತರಾಗಿ ಆಲಿಸುತ್ತಿದ್ದರು. ನಮಗೆ ಶ್ರೀಮನ್ನಾರಾಯಣನ ದಿವ್ಯದರ್ಶನದ ಭಾಗ್ಯ ಇಲ್ಲವಾಯಿತಲ್ಲ ಎಂದು ಪರಿತಪಿಸುತ್ತಿದ್ದರು.



ಇದನ್ನು ತಿಳಿದ ಶ್ರೀಕೃಷ್ಣ ಎಲ್ಲ ಗೋಪಾಲಕರಿಗೆ ಯಮುನಾತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ. ಗೋಪಾಲಕರು ಸ್ನಾನಮಾಡಿ ಬರುತ್ತಿದ್ದಂತೆ ವೈಕುಂಠಲೋಕ ಗೋಚರಿಸಿತು. ಶ್ರೀಕೃಷ್ಣನ ದಿವ್ಯವಾದ ಅನೇಕ ರೂಪಗಳು ಅವರಿಗೆ ಕಂಡವು.

 

                                                                       Lord Srinivasa                                                                   

 

ಮುಕ್ಕೋಟಿ ದ್ವಾದಶಿ ಅಂದರೇನು?

ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ. ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.

ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಿದರೆ ಶ್ರೇಷ್ಠ?


ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ ಮಾಡುವುದು ಶ್ರೇಷ್ಠ. ಅವುಗಳು – ತಿರುಮಲ, ಶ್ರೀಮುಷ್ಣಂ, ತೋತಾದ್ರಿ, ಶ್ರೀರಂಗ, ಇತ್ಯಾದಿ. ಇಲ್ಲಿ ಮಾಡಲಾಗದಿದ್ದರೆ ವೈಷ್ಣವ ಸಂಪ್ರದಾಯದ ದೇವಸ್ಥಾನ ಗಳಲ್ಲಿ ಕೂಡ ಮಾಡಬಹುದು.

 

                                                                               Pic -1
 

 

ವೈಕುಂಠ ಏಕಾದಶಿ.......


ಏಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನವೇ ವೈಕುಂಠ ಏಕಾದಶಿ.

ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುವರು. ಈ ದಿನ ದೇವಾಲಯದ ಉತ್ತರ ದ್ವಾರದಲ್ಲಿ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸುತ್ತಾರೆ.



ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಧನುರ್ಮಾಸದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ. ಸೂರ್ಯನು ಧನಸ್ಸು ರಾಶಿ ಪ್ರವೇಶ ಮಾಡಿ ಮಕರ ಸಂಕ್ರಮಣದವರೆಗೂ ಈ ರಾಶಿಯಲ್ಲಿ ಇರುತ್ತಾನೆ.



ಗರುಡವಾಹನನಾದ ವಿಷ್ಣು ವೈಕುಂಠದಿಂದ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕದಲ್ಲಿ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದುದರಿಂದ ಈ ದಿನವನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಈ ದಿನ ಉಪವಾಸವಿದ್ದು ವಿಷ್ಣುವಿನ ದರ್ಶನ ಮಾಡಬೇಕು. ಮಾಸದ ಏಕಾದಶಿಯ ದಿನ ಶ್ರೀಮನ್ನಾರಾಯಣನು ಯೋಗನಿದ್ರೆಯಿಂದ ಏಳುವನು. ಈ ದಿನ ವಿಷ್ಣು ದರ್ಶನ ಮಾತ್ರದಿಂದ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನಕ್ಕೆ ಅಷ್ಟು ಮಹತ್ವವಿದೆ



ಮಹಾವಿಷ್ಣುವು ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೇ ಇದು. ಬಹಳ ದಿನಗಳವರೆಗೆ ಮುರ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ. ಅದಕ್ಕಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು. ಏಕಾದಶಿ ದೇವಿಯನ್ನು ಉಪವಾಸದಿಂದ ದರ್ಶನದಿಂದ ಪೂಜಿಸಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಐದು ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು ಒಟ್ಟು 11- ಹನ್ನೊಂದು ಇಂದ್ರಿಯಗಳನ್ನು ನಿಗ್ರಹ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.



ಅಮೃತ ಮತ್ತು ಹಾಲಾಹಲ ಉದ್ಭವಿಸಿದ ದಿನವಿದು. ಶಿವ ನೀಲಕಂಠನಾದ ದಿನ. ಈ ದಿನ ದೇವರ ದರ್ಶನ ಮಾಡಿ ಹರಿ ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ತುಳಸಿ ಎಲೆ ಅರ್ಪಿಸಬೇಕು. ಇದರಿಂದ ಮೋಕ್ಷ ಪ್ರಾಪ್ತಿ ಖಂಡಿತವಾಗಿ ಲಭಿಸುವುದು. ಪುಷ್ಯ ಮಾಸವನ್ನು ಶೂನ್ಯಮಾಸವೆಂತಲು ಕರೆಯುವರು. ಈ ಸಮಯದಲ್ಲಿ ಯಾವುದೇ ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಕಾರಣ ಇಲ್ಲಿ ಪ್ರತಿಫಲ ಶೂನ್ಯ. ಆದ್ದರಿಂದ ಈ ಪೂರ್ತಿ ಮಾಸವನ್ನು ವಿಷ್ಣುವನ್ನು ಆರಾಧಿಸುವುದರ ಮೂಲಕ ವಿಷ್ಣುವಿಗೆ ಅರ್ಪಣೆ ಮಾಡಬೇಕು.


 

                                                                            Pic -2

 

ಈ ದಿನ ಶ್ರೀ ವಿಷ್ಣುವನ್ನು ಪೂಜಿಸುವುದು. ಉಪವಾಸ ಮಾಡುವುದು ಮತ್ತು ದಾನ ಮಾಡುವುದು ಸಹ ಬಹಳ ಪುಣ್ಯವೆಂದು ಪರಿಗಣಿಸಲಾಗಿದೆ.

ಈ ವರ್ಷದ ಮೊದಲ ವೈಕುಂಠ ಏಕಾದಶಿ, ಎಲ್ಲಾ 24 ಏಕಾದಶಿಗಳಲ್ಲಿ, ಅತ್ಯಂತ ಶ್ರೇಷ್ಠವಾದ ಏಕಾದಶಿ ಎಂದರೆ ಅದು ವೈಕುಂಠ ಏಕಾದಶಿ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ.

ಹಾಗಾದರೆ ವೈಕುಂಠ ಏಕಾದಶಿಯಂದು ಈ ವಸ್ತುಗಳನ್ನು ದಾನ ಮಾಡುವುದು ಶುಭ ಮತ್ತು ಈ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

 

                                                                              Pic -3


 

ಈ ವಸ್ತುಗಳನ್ನು ದಾನ ಮಾಡಿರಿ ---- Donate during Vaikunta Ekadasi Day


ವೈಕುಂಠ ಏಕಾದಶಿಯಂದು ಬಡವರಿಗೆ ಅನ್ನ, ವಸ್ತ್ರ, ಧನ ದಾನ ಮಾಡಿದರೆ ಶ್ರೇಯಸ್ಕರ ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ.


ಈ ದಿನ ತುಳಸಿ ಗಿಡ, ಕಂಬಳಿ, ಧಾನ್ಯ ದಾನ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ.


ಈ ದಿನ ಗೋವನ್ನು ದಾನ ಮಾಡುವ ಸಂಪ್ರದಾಯವೂ ಇದೆ. ಹೀಗೆ ಮಾಡುವುದರಿಂದ ಸಕಲ ಸಂಪತ್ತು ಸಿಗುತ್ತದೆ. ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ನಂಬಿಕೆ ಇದೆ.


ವೈಕುಂಠ ಏಕಾದಶಿಯಂದು ಈ ರೀತಿ ಮಾಡಬಾರದು - Never Do this on Vaikunta Ekadasi Day


ವೈಕುಂಠ ಏಕಾದಶಿಯಂದು ಕೆಟ್ಟ ಆಲೋಚನೆಗಳನ್ನು ಮಾಡಬೇಡಿ.
ಇಂದು ಸುಳ್ಳು ಹೇಳಬೇಡಿ, ಕೋಪಗೊಳ್ಳಬೇಡಿ.
ಈ ದಿನ ಮಾಂಸಾಹಾರ ಸೇವಿಸಬೇಡಿ.
ಈ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸಬೇಡಿ.

 

                                                                            Pic -4

 
 

ವೈಕುಂಠ ಏಕಾದಶಿಯ ಮಹತ್ವ ---- Importance of Vaikunta Ekadasi


ವೈಕುಂಠ ಏಕಾದಶಿ ದಿನವನ್ನು ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದೆ. ಈ ದಿನದಂದು ಶ್ರೀ ಮಹಾವಿಷ್ಣುವಿನ ಆರಾಧನೆ ಮತ್ತು ಉಪವಾಸ ಮಾಡುವುದರಿಂದ ಮನಸ್ಸಿನಲ್ಲಿರುವ ಕಲ್ಮಶಗಳು ದೂರವಾಗುತ್ತವೆ. ಮನಸ್ಸು ಶುದ್ಧ ಮತ್ತು ಪವಿತ್ರವಾಗುತ್ತದೆ.

ಈ ದಿನ ವಿಷ್ಣುವನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದರಿಂದ ಮನೆಯಲ್ಲಿನ ತೊಂದರೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಮನೆಯಲ್ಲಿ ಸುಖ ಸಂತೋಷ ಸದಾ ಇರುತ್ತದೆ. ಈ ದಿನದಂದು ಪೂಜೆ ಮತ್ತು ಉಪವಾಸ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ಸ್ವರ್ಗವನ್ನು ತಲುಪುತ್ತದೆ ಎಂದು ನಂಬಲಾಗಿದೆ. ಮರಣದ ನಂತರ ಮರುಜನ್ಮವಿಲ್ಲದೆ ಮೋಕ್ಷವನ್ನು ಪಡೆಯುತ್ತಾನೆ ಮತ್ತು ವೈಕುಂಠ ಧಾಮದಲ್ಲಿ ಸ್ಥಾನವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

 

                                                                            Pic -5

 
 

Importance of Vaikunta Ekadasi explained :


01 - ವೈಕುಂಠ ಏಕಾದಶಿ ಎಂದರೆ ಶ್ರೀಮನ್ನಾರಾಯಣನ್ನು ಯೋಗ ನಿದ್ರೆಯಿಂದ ಏಳುವ ದಿನ, ಅಂದರೆ ದಕ್ಷಿಣಾಯನ ಪ್ರಾರಂಭಿಸುವಾಗ ಶ್ರೀಮನ್ನಾರಾಯಣನು ಯೋಗ ನಿದ್ರೆಗೆ ಜಾರುತ್ತಾನೆ ಮತ್ತೆ ಉತ್ತರಾಯಣ ಪ್ರಾರಂಭವಾಗುವ ಸಮಯದಲ್ಲಿ ಶುಕ್ಲ ಪಕ್ಷದ ಏಕಾಶಿಯ ದಿನ ಶ್ರೀಮನ್ನಾರಾಯಣನು ಯೋಗ ನಿದ್ರೆಯಿಂದ ಏಳುತ್ತಾನೆ.


02 -ಈ ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುತ್ತಾರೆ ಈ ದಿನ ವಿಷ್ಣುವಿನ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ,


03 - ಈ ವೈಕುಂಠ ಏಕಾದಶಿಯ ದಿನ ವೈಕುಂಠದ ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಇನ್ನೂ ಈ ದಿನ ಮಹಾ ವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ ಅನ್ನುವ ನಂಬಿಕೆ ಇದೆ ಆದ್ದರಿಂದ ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂಬದಾಗಿ ಕರೆಯುತ್ತಾರೆ.


04 - ಈ ಮುಕ್ಕೋಟಿ ಏಕಾದಶಿಯು ಮೂರು ಕೋಟಿ ಏಕಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿದೆ.


05 - ಏಕೆಂದರೆ ಈ ವೈಕುಂಠ ಏಕಾದಶಿಯ ದಿನ ಹಲಾಹಲಾ -ಅಮೃತ ಎರಡು ಹುಟ್ಟಿದವು ಈ ದಿನವೇ ಶಿವನು ಹಾಲಹಾಲವನ್ನು ನುಂಗಿದ.


06 - ಮಹಾಭಾರತದ ಯುದ್ಧದಲ್ಲಿ ಭಗದ್ವತ್ಗೀತೆಯನ್ನು ಶ್ರೀ ಕೃಷ್ಣನು ಅರ್ಜುನನಿಗೆ ಇದೇ ದಿನ ಉಪದೇಶಿಸಿದ ಎಂಬ ನಂಬಿಕೆ ಇದೆ,


07 - ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಿಗಿಂತ ಈ ವೈಕುಂಠ ಏಕಾದಶಿವ ಅತ್ಯಂತ ವಿಶಿಷ್ಟವಾದದ್ದು,

 


                                                                             Pic -6

 

08 - ವೈಕುಂಠ ಏಕಾದಶಿಯ ದಿನ ಒಂದು ದಿನ ಉಪವಾಸ ಇದ್ದರೆ ಉಳಿದ 24 ಏಕಾದಶಿಗಳಲ್ಲಿ ಉಪವಾಸ ಮಾಡಿದ್ದಕ್ಕೆ ಸಮನಾಗಿರುತ್ತದೆ.


09 - ವೈಕುಂಠ ಏಕಾದಶಿಯ ದಿನ ವಿಷ್ಣು ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆದಿರುವ ದಿನ ಎಂದು ಹೇಳಲಾಗುತ್ತದೆ ಆದುದರಿಂದ ಈ ದಿನ ಉಪವಾಸವಿದ್ದು ಶ್ರೀಮನ್ನಾರಾಯಣ ಅಥವಾ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ, ನಾವುಗಳು ಮಾಡಿರುವ ಏಳೇಳು ಜನ್ಮಗಳ ಪಾಪವು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ, ಹಾಗೂ ನಾವು ಈ ಲೋಕವನ್ನು ತ್ಯಜಿಸಿದಾಗ ಸ್ವರ್ಗಪ್ರಾಪ್ತಿಯಾಗುತ್ತದೆ, ಎಂಬ ನಂಬಿಕೆಯೂ ಸಹ ಇದೆ.


10 - ಈ ದಿನದಂದು ಅಕ್ಕಿಯಿಂದ ಮಾಡಿದ ಯಾವುದೇ ಪದಾರ್ಥಗಳನ್ನು ತಿನ್ನಬಾರದು ಹಾಗೂ ಅನ್ನದ ನೈವೇದ್ಯವನ್ನು ದೇವರಿಗೆ ಇಡಬಾರದು, ಒಂದು ವೇಳೆ ಅನ್ನವನ್ನು ತಿಂದರೆ ಹುಳುಗಳನ್ನು ತಿಂದಿದ್ದಕ್ಕೆ ಸಮವಾಗುತ್ತದೆ ಹಾಗೂ ನಕರಾತ್ಮಕ ಗುಣಗಳು ರಾಕ್ಷಸ ಗುಣಗಳು ನಮ್ಮಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಜಡತ್ವ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.


11 - ವೈಕುಂಠ ಏಕಾದಶಿಯ ದಿನದಂದು ವಿಷ್ಣುವಿನ ಮಂತ್ರವನ್ನು ಪಠಣೆ ಮಾಡಬೇಕು ಇದರಿಂದ ವಿಷ್ಣುವಿನಕೃಪೆಗೆಪಾತ್ರರಾಗುತ್ತಾರೆ, ಹಾಗೂ ಇಷ್ಟಾರ್ಥ ಸಿದ್ಧಿಗಳು ಪ್ರಾಪ್ತವಾಗುತ್ತದೆ.


12 - ಈ ವೈಕುಂಠ ಏಕಾದಶಿಯ ದಿನದಂದು ಹಳದಿ ಬಟ್ಟೆಯನ್ನು ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ ವಿಷ್ಣುವಿನ ನೆಚ್ಚಿನ ಬಣ್ಣ ಹಳದಿಯಾಗಿರುವುದರಿಂದ ವಿಷ್ಣುವಿನ ಆಶೀರ್ವಾದ ಲಭಿಸುತ್ತದೆ.

 

                                                                              Pic -7
 


13 - ಹಾಗೂ ವಿಷ್ಣು ದೇವರಿಗೆ ಹಳದಿ ಹೂವಿನ ಜೊತೆ ತುಳಸಿಯನ್ನು ಸಹ ಅರ್ಪಿಸಿ ಪಂಚಾಮೃತ ಅಭಿಷೇಕವನ್ನು ಸಹ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ.


14 - ಏಕಾದಶಿಯ ದಿನದಂದು ಅರಳಿಮರದ ಬೇರಿಗೆ ನೀರನ್ನು ಅರ್ಪಣೆ ಮಾಡುವುದರಿಂದ ಶ್ರೀಮನ್ನಾರಾಯಣನ ಆಶೀರ್ವಾದ ಲಭಿಸುತ್ತದೆ ಹಾಗೂ ಕಷ್ಟಗಳು ದೂರವಾಗುತ್ತದೆ ಎನ್ನಲಾಗಿದೆ, ಏಕೆಂದರೆ ಶ್ರೀಹರಿ ವಿಷ್ಣು ಅರಳಿ ಮರದಲ್ಲಿ ನೆಲೆಸಿರುತ್ತಾರೆ ಎನ್ನುವ ನಂಬಿಕೆ ಇದೆ.


15 - ವಸ್ತ್ರವನ್ನು ದಾನ ಮಾಡುವುದು ಹಳದಿ ಬೇಳೆ ಕಾಳುಗಳು ಹಳದಿ ಬಟ್ಟೆ ಹಳದಿ ಹೂವು ಹೀಗೆ ಒಟ್ಟಾರೆ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ.


16 - ಚಿಕ್ಕ ಮಕ್ಕಳು ಅಂದರೆ ಐದು ವರ್ಷದಿಂದ ಕೆಳಗಿರುವ ಮಕ್ಕಳು ಹಾಗೂ ಗರ್ಭಿಣಿಯರು ಬಾಣಂತಿಯರು ಮತ್ತು 80 ವರ್ಷಕ್ಕೆ ಮೇಲ್ಪಟ್ಟವರು ಹಾಗೂ ರೋಗಿಗಳು ಈ ವೈಕುಂಠ ಏಕಾದಶಿಯ ದಿನದಂದು ಉಪವಾಸವನ್ನು ಮಾಡಬಾರದು.

 

                                                                         Pic -8

 

|| ಕೃಷ್ಣಾರ್ಪಣಾಮಸ್ತು ||         

 ------------- Hari Om -------------