Wednesday, March 29, 2023

Ugadi -- its Importance, History , Sceintific & Celebration




Chandramana Ugadi -- its Importance, History , Astronomical,  Scientific & its Celebrations


ಚಾಂದ್ರಮಾನ ಯುಗಾದಿ ಹಬ್ಬ ಇತಿಹಾಸ ಮತ್ತು ಆಚರಣೆ ಮತ್ತು ವೈಜ್ನಾನಿಕ ವಿಶ್ಲೇಷಣೆ.

ವೈಜ್ನಾನಿಕ ಮತ್ತು ಖಗೋಳಿಕ ಹಿನ್ನಲೆ


ಹೆಸರೇ ಸೂಚಿಸುವಂತೆ ಈ ಹಬ್ಬದ ಹೆಸರೇ ಯುಗಾದಿ. “ಯುಗಸ್ಯ ಆದಿಃ” ಅಂದರೆ ಯುಗದ ಆರಂಭ . ಹೊಸ ಸಂವತ್ಸರದ ಮೊದಲ ದಿನ ಎಂದಾಗುತ್ತದೆ ,ಹೊಸ ವರ್ಷದ ಪ್ರಾರಂಭ ಎಂದರ್ಥ.
ಈ ದಿನದಂದೇ ವಸುಧೆ ತನ್ನನ್ನು ತಾನು ಸುತ್ತುತ್ತ ಸೂರ್ಯನ ಸುತ್ತ ಕಕ್ಷೆಯಲ್ಲಿ ತಿರುಗುವ ತನ್ನ ವಾರ್ಷಿಕ ಲೆಕ್ಕವನ್ನು ಮುಗಿಸಿ ಹೊಸ ಸುತ್ತನ್ನು ಪ್ರಾರಂಭಿಸುತ್ತಾಳೆ . ಹಾಗೇ ಭೂಮಿಯ ಉಪಗ್ರಹ ಚಂದ್ರ ಕೂಡ ಭೂಮಿಯ ಸುತ್ತ ತನ್ನ ಪಥವನ್ನು ಹೊಸತಾಗಿ ಪ್ರಾರಂಭಿಸುತ್ತಾನೆ.


1 -- ಅಂದರೆ, 15 ದಿನಕ್ಕೆ 1 ಪಕ್ಷ ಹುಣ್ಣಿಮೆ- ಅಮವಾಸ್ಯೆ, (ಕೃಷ್ಣ ,ಶುಕ್ಲ ಪಕ್ಷ), 2 ಪಕ್ಷಕ್ಕೆ 1u ಮಾಸ
(ಚೈತ್ರ, ವೈಶಾಖ,),2 ಮಾಸಕ್ಕೆ 1ಋತು, (ವಸಂತ,ಗ್ರೀಷ್ಮ),(ಉತ್ತರಾಯಣ, ದಕ್ಶಿಣಾಯಾಣ) 6, ಋತುಗಳಿಗೆ 1ಸಂವತ್ಸರ ಇವೆಲ್ಲಾ ಅದ್ಭುತ ಲೆಕ್ಕಾಚಾರ ಎಂದು ಆಯಿತಲ್ಲ,


2 -- “ವಸಂತ ಋತು” ಎಂದರೆ ಅದು ನವೋಲಾಸದ ಸಂಕೇತ ಯಾಕೆಂದರೆ ಎಲೆ ಉದುರಿ ಬೋಳಾಗಿದ್ದ ಮರಗಳೆಲ್ಲ…. ಹೊಸ ಚಿಗುರನ್ನು ಬಿಟ್ಟು ನಳನಳಿಸುತ್ತ…. ಭೂರಮೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತವೆ. ವಿಶೇಷವಾಗಿ ಮಾವು ಚಿಗುರಿ ತನ್ನ ಸುವಾಸನಾಪೂರಿತ ವಸ್ತ್ರಗಳಿಂದ ಹೊಸ ಪ್ರಪಂಚವನ್ನೇ ತೆರೆಯುತ್ತದೆ


3 -- ವೈಜ್ನಾನಿಕವಾಗಿ ತಿಥಿ -,ಪಕ್ಷ -, ಮಾಸ- ಋತು,-ಸಂವತ್ಸರ ಹೀಗೆ ಎಲ್ಲವನ್ನೂ ನಮ್ಮ ಪೂರ್ವಜರು ಶತಶತಮಾನಗಳ ಹಿಂದೆಯೇ…. ಲೆಕ್ಕ ಹಾಕಿ ಪಂಚಾಂಗವನ್ನು ತಯಾರಿಸಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ . ಅವರು ಹಾಕಿಕೊಟ್ಟ ಅಧ್ಭುತ ವೈಜ್ನಾನಿಕ ದೂರದೃಷ್ಟಿ, ಅವರ ಜ್ಞಾನ ಮತ್ತು ಪ್ರಬುದ್ಧತೆಗೆ ಸಾಕ್ಷಿ. ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು (ಪಾಡ್ಯ) ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.



                                                                        Torana  

ನೈಸಗಿಕ ಕಾರಣಗಳು, ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ - ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.


ಐತಿಹಾಸಿಕ ಕಾರಣಗಳು: ಈ ದಿನದಂದು ರಾವಣನ ವಧೆಯಾದ ನಂತರ ಅಯೋಧ್ಯೆಗೆ ಆಗಮಿಸಿದ ಶ್ರೀರಾಮಚಂದ್ರ ಯುಗಾದಿ ದಿನದಿಂದಲೇ ನೂತನ ರಾಜ್ಯಭಾರಸೂತ್ರವನ್ನು ವಹಿಸಿಕೊಂಡನಂತೆ. ಹಾಗೂ ವಿಜಯೋತ್ಸವ ಆಚರಿಸುವಂತೆ ಮಾಡಿದನಂತೆ. ಆ ವಿಜಯದ ಸಂಕೇತವೇ ಈ ಯುಗಾದಿ ಹಬ್ಬ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದುದಾಗಿತ್ತು.


ಆಧ್ಯಾತ್ಮಿಕ ಕಾರಣಗಳು, ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು


ಚೈತ್ರ ಮಾಸಿ ಜಗದ್ಬ್ರಹ್ಮಾ ಸಸೃಜ ಪ್ರಥಮೇ ಹನಿ |
ಶುಕ್ಲಪಕ್ಷೇ ಸಮಗ್ರಂ ತು ತಥಾ ಸೂರ್ಯೋದದೇ ಸತಿ


ಈ ಮೊದಲ ತಿಂಗಳಿಗೆ,ಚೈತ್ರ ಎಂಬ ಹೆಸರು ಬರಲೂ ಕಾರಣವಿದೆ. ಪೂರ್ಣಿಮೆಯ ದಿನ ಚಂದ್ರನು ಯಾವ ನಕ್ಷತ್ರದೊಂದಿಗೆ ಇರುತ್ತಾನೆಯೋ ಅದನ್ನನುಸರಿಸಿ ಆ ತಿಂಗಳನ್ನು ಹೆಸರಿಸುತ್ತಾರೆ. ಯಾವ ಪೂರ್ಣಿಮೆಯ ದಿನ ಚಂದ್ರನು ಚಿತ್ರಾ ನಕ್ಷತ್ರದೊಡನೆ ಇರುತ್ತಾನೋ ಅದು ಚೈತ್ರಮಾಸ. ಆದ್ದರಿಂದಲೇ ಆ ಪೂರ್ಣಿಮೆಯನ್ನು,ಚಿತ್ರಾ,ಪೂರ್ಣಿಮೆ’ ಎನ್ನುತ್ತಾರೆ.


ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.


ಕ್ರಿ.. ಆರನೆಯ ಶತಮಾನದ ಖ್ಯಾತ ಖಗೋಳಶಾಸ್ತ್ರಜ್ಞ ವರಾಹ-ಮಿಹಿರನು ಚೈತ್ರ ಶುದ್ಧ ಪಾಡ್ಯಮಿಯ ದಿನ ಮೊದಲನೇ ನಕ್ಷತ್ರ ಅಶ್ವಿನಿ ಇದ್ದು (ಎಲ್ಲ ಚೈತ್ರಶುದ್ಧಪಾಡ್ಯಗಳಲ್ಲಿ ಅಶ್ವಿನ ನಕ್ಷತ್ರವಿರುವುದಿಲ್ಲ.) ಋತುಗಳ ರಾಜನಾದ ಮೊದಲನೆಯ ಋತು ವಸಂತನ ಆಗಮನವಾಗುವುದರಿಂದ ಅದನ್ನೇ ವರ್ಷಾರಂಭವೆಂದು ನಿಗದಿಪಡಿಸಿದ. ಯುಗಾದಿಯ ವಿಚಾರ ಅಥರ್ವಣವೇದ, 🌹ಶತಪಥಬ್ರಾಹ್ಮಣ, 🌹ಧರ್ಮಸಿಂಧು, 🌹ನಿರ್ಣಯಸಿಂಧು, 🌹ಬ್ರಹ್ಮಾಂಡಪುರಾಣ ಮತ್ತು 🌹ಮಹಾಭಾರತಗಳಲ್ಲಿ ಬರುತ್ತದೆ. ಜಗತ್ತು ಸೃಷ್ಟಿಯಾದದ್ದು ಚೈತ್ರ ಶುದ್ಧ ಪಾಡ್ಯಮಿ ಎಂದು ಬ್ರಹ್ಮಾಂಡಪುರಾಣ ತಿಳಿಸುತ್ತದೆ.


ಮತ್ತೊಂದು ದೃಷ್ಟಿಯಿಂದಲೂ ಇದು ಶುಭಮಾಸ. ಚೈತ್ರಮಾಸ ಉತ್ತರಾಯಣದಲ್ಲಿ ಬರುತ್ತದೆ. ಆಯನಗಳಲ್ಲಿ ಉತ್ತರಾಯಣ ಶ್ರೇಷ್ಠ. ಭಗವದ್ಗೀತೆಯಲ್ಲೂ ಇದನ್ನು ಶ್ರೀಕೃಷ್ಣ ಪ್ರಶಂಸಿಸಿದ್ದಾನೆ.


ಅಗ್ನಿರ್ಜ್ಯೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್,
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋಜನಾಃ,


ಅಗ್ನಿ, ಹಗಲು, ಜ್ಯೋತಿ, ಶುಕ್ಲಪಕ್ಷ ಹಾಗೂ ಉತ್ತರಾಯಣದ ಆರು ಮಾಸಗಳು-ಈ ಮಾರ್ಗದಲ್ಲಿ ಪ್ರಯಾಣ ಮಾಡಿದ ಬ್ರಹ್ಮಜ್ಞಾನಿಗಳಾದ ಜನರು ಬ್ರಹ್ಮನನ್ನು ಸೇರುತ್ತಾರೆ. ಸ್ವರ್ಗಾಕಾಂಕ್ಷಿಗಳಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಈ ಉತ್ತರಾಯಣದಲ್ಲಿ ವಸಂತಋತುವನ್ನು ಭಗವಂತನು “ಋತೂನಾಂ,ಕುಸುಮಾಕರಃ,ಎಂದು ಬಣ್ಣಿಸಿದ್ದಾನೆ.


ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೊಡನೆ ಮುಖ ತೊಳೆದು ಮಂಗಳದ್ರವ್ಯದರ್ಶನ ಮಾಡುವುದು. ಫಲ-ಪುಷ್ಪ-ಕನ್ನಡಿ-ಹೇಮಾಭರಣ-ಕುಂಕುಮದ್ರವ್ಯ-ತಳಿರು ತೋರಣ-ರಂಗೋಲಿ-ತಾಂಬೂಲ ಇವು ಮಂಗಳ ದ್ರವ್ಯಗಳು.


                                                       Bevu & Bella ( Neem & Jaggery )


ಆಚರಣೆ
ಯುಗಾದಿಯಂದು ನಮ್ಮ ಆಚರಣೆ,


ಮಂಗಲಸ್ನಾನ
ಮನೆಗೆಮಾವಿನ ಎಲೆ ತೋರಣ
ಮನೆದೇವರಿಗೆ ವಿಶೇಷ ಪೂಜೆ
ಪಂಚಾಂಗ ಪೂಜೆ
ಬೇವು ಬೆಲ್ಲ ಪರಮಾನ್ನಾದಿ ಅರ್ಪಣೆ
ನೂತನವಸ್ತ್ರ ಪೂಜನೆ , ಧಾರಣೆ
ಹಿರಿಯರ ಆಶೀರ್ವಾದ ಸ್ವೀಕಾರ
ಬೇವು ಬೆಲ್ಲ ಸ್ವೀಕಾರ


ಪಂಚಾಂಗ ಶ್ರವಣ
ದೇವರ ಭೇಟಿ


ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಶರೀರದ ಸರ್ವಾವಯವಗಳಿಗೂ ಎಣ್ಣೆ ಹಚ್ಚಿ ಮಾಡುವ ಸ್ನಾನವನ್ನು ಅಭ್ಯಂಗಸ್ನಾನವೆನ್ನುವರು* . ಕೆಲವೆಡೆ, ಕಿರಿಯರೆಲ್ಲರನ್ನೂ ಒಂದೆಡೆ ಕೂಡಿಸಿ, ಅರಿಶಿನ (ಸ್ತ್ರೀಯರಿಗೆ), ಕುಂಕುಮಾದಿಗಳನ್ನು ಹಣೆಗೆ ಹಚ್ಚಿ, ನೆತ್ತಿ (ಸುಳಿಯ ಮೇಲೆ), ಮುಂಗೈ ಹಾಗೂ ಮುಂಗಾಲುಗಳ ಮೇಲೆ, ಗರಿಕೆ ಇಲ್ಲವೆ ಪುಷ್ಪ ಮುಖೇನ ಮೂರು ಮೂರು ಬಾರಿ ತೈಲವನ್ನು ಹಚ್ಚುತ್ತಾರೆ. ನಂತರ ತೈಲವನ್ನು ಹಚ್ಚುವ ಪೂರ್ವದಲ್ಲಿ ಹಾಗೂ ನಂತರ, ಆರತಿ ಎತ್ತುವುದು ಕೆಲವೆಡೆ ರೂಢಿಯಲ್ಲಿದೆ. ಈ ಪ್ರಕ್ರಿಯೆಗಳ ಒಳಾರ್ಥವೇನೆಂದರೆ ಕುಳಿತಿರುವವರೆಲ್ಲರೂ ಶ್ರೀ ಲಕ್ಷ್ಮೀ, ಶ್ರೀ ಮನ್ನಾರಾಯಣರ ಅಂಶರೆಂದೂ ತೈಲಾಭ್ಯಂಜನಕ್ಕೆ ದೇವರನ್ನು ಅನುಗೊಳಿಸುತ್ತಿರುವಂತೆಯೂ ಭಾವಿಸಿ ಅನುಸಂಧಾನ ಮಾಡಬೇಕು.


ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕಾರ್ಯಗಳು
ಅಭ್ಯಂಗಸ್ನಾನ: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು.


ತೋರಣವನ್ನು ಕಟ್ಟುವುದು: ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು.
ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಶರೀರದ ಸರ್ವಾವಯವಗಳಿಗೂ ಎಣ್ಣೆ ಹಚ್ಚಿ ಮಾಡುವ ಸ್ನಾನವನ್ನು ಅಭ್ಯಂಗಸ್ನಾನವೆನ್ನುವರು. ಕೆಲವೆಡೆ, ಕಿರಿಯರೆಲ್ಲರನ್ನೂ ಒಂದೆಡೆ ಕೂಡಿಸಿ, ಅರಿಶಿನ (ಸ್ತ್ರೀಯರಿಗೆ), ಕುಂಕುಮಾದಿಗಳನ್ನು ಹಣೆಗೆ ಹಚ್ಚಿ, ನೆತ್ತಿ (ಸುಳಿಯ ಮೇಲೆ), ಮುಂಗೈ ಹಾಗೂ ಮುಂಗಾಲುಗಳ ಮೇಲೆ, ಗರಿಕೆ ಇಲ್ಲವೆ ಪುಷ್ಪ ಮುಖೇನ ಮೂರು ಮೂರು ಬಾರಿ ತೈಲವನ್ನು ಹಚ್ಚುತ್ತಾರೆ.


ಅಭ್ಯಂಗಸ್ನಾನದಿಂದ ರಜತಮೋಗುಣಗಳ ನಾಶವಾಗಿ ಸಾತ್ವಿಕಗುಣ ಉದ್ದೀಪನಗೊಳ್ಳುತ್ತದೆಂದು ಶಾಸ್ತ್ರಗಳು ಹೇಳುತ್ತವೆ.


ಈ ದಿನ


ನೂತನ ವಸ್ತ್ರಧಾರಣೆ, ಪರಮಾನ್ನಾದಿ ಭಕ್ಷ್ಯವನ್ನು ದೇವರಿಗೆ ನಿವೇದಿಸಿ ನೂತನ ಪಂಚಾಂಗವನ್ನು ದೇವರಮನೆಯಲ್ಲಿ ಪಂಚಾಂಗಪಠನ-ಶ್ರವಣದೊಂದಿಗೆ ವರ್ಷದ ರಾಜ-ಮಂತ್ರಿ ಮುಂತಾದ ಸಂವತ್ಸರಫಲ ಮತ್ತು ಗ್ರಹಸ್ಥಿತಿಯನ್ನು ತಿಳಿಯಬೇಕು.
ಅಭ್ಯಂಗಸ್ನಾನದಿಂದ ರಜತಮೋಗುಣಗಳ ನಾಶವಾಗಿ ಸಾತ್ವಿಕಗುಣ ಉದ್ದೀಪನಗೊಳ್ಳುತ್ತದೆಂದು ಶಾಸ್ತ್ರಗಳು ಹೇಳುತ್ತವೆ.


ಈ ದಿನ ದೇವರ ಕೋಣೆಯನ್ನು ಮನೆಯ ಮುಂಬಾಗಿಲನ್ನು ಮಾವಿನ ಎಲೆಯ ತೋರಣಗಳಿಂದ ಸಿಂಗರಿಸಿ ಮನೆಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ;
ನೂತನ ಪಂಚಾಂಗಕ್ಕೆ ಪೂಜೆಯನ್ನು ಸಲ್ಲಿಸಿ.


                                                       Bevu, Bella & Tamrind Mix


ನೂತನವಸ್ತ್ರ, ಬೇವು ಬೆಲ್ಲ ಪರಮಾನ್ನಾದಿ ಭಕ್ಷ್ಯವನ್ನು ದೇವರಿಗೆ ನಿವೇದಿಸಿ ನೂತನ ವಸ್ತ್ರಧಾರಣೆ ಮಾಡಿಕೊಂಡು ಹಿರಿಯರ ಆಶೀರ್ವಾದವನ್ನು ಪಡೆದು ಬೇವು ಬೆಲ್ಲ ವನ್ನು
ಈ ಕೆಳಗಿನ ಮಂತ್ರವನ್ನು ಹೇಳಿಕೊಂಡು ಸ್ವೀಕಾರ ಮಾಡುವುದು. ಪಂಚಾಂಗಪಠನ-ಶ್ರವಣದೊಂದಿಗೆ ವರ್ಷದ ರಾಜ-ಮಂತ್ರಿ ಮುಂತಾದ ಸಂವತ್ಸರಫಲ ಮತ್ತು ಗ್ರಹಸ್ಥಿತಿಯನ್ನು ತಿಳಿಯುವುದು.
ಜೀವನದಲ್ಲಿ ಒದಗುವ ಸುಖದುಃಖಗಳ, ಕಹಿ-ಸಿಹಿಗಳ ಪ್ರತೀಕವೆನಿಸುವ,ಬೇವು ಬೆಲ್ಲಗಳನ್ನು ದೇವರಿಗೆ ನಿವೇದಿಸಿ.


ಶತಾಯುರ್ವಜ್ರದೇಹಾಯ ಸರ್ವಸಂಪತ್ಸಮೃದ್ಧಯೇ,
ಸರ್ವಾರಿಷ್ಟವಿನಾಶಾಯ ಗುಡನಿಂಬಕಭಕ್ಷಣಮ್,


ಶತಾಯುಷ್ಯದ, ಗಟ್ಟಿದೇಹಕ್ಕಾಗಿ, ಸರ್ವಸಂಪತ್ಸಮೃದ್ಧಿಗಾಗಿ, ಸರ್ವಾರಿಷ್ಟನಿವೃತ್ತಿಗಾಗಿ ಬೇವು-ಬೆಲ್ಲಗಳನ್ನು ತಿನ್ನುತ್ತೇನೆ’ ಈ ಶ್ಲೋಕದ ಪಠಣದೊಂದಿಗೆ ’ಸುಖ ದುಃಖೇ ಸಮೇ ಕೃತ್ವಾ’ ಎಂಬ ಗೀತಾಚಾರ್ಯನ ಯೋಗದ ಅನುಸಂಧಾನದೊಂದಿಗೆ ಬೇವು-ಬೆಲ್ಲಗಳನ್ನು ಸ್ವೀಕರಿಸಬೇಕು.
ಹಿಂದಿನ ವರ್ಷವೆಂಬ ಕಾಲಪುರುಷನ ಮರಣ ಮತ್ತು ಹೊಸವರ್ಷದ ರೂಪದ ಶಿಶುವಿನ ಜನನಸೂಚಕ, ಈ ಸಂವತ್ಸರಾರಂಭ ಕಾಲ.


ಸಂವತ್ಸರವು ಯಜ್ಞಗಳಿಗೆ ಮೂಲ. ಅದು ಕೇವಲ ಕಾಲಪರಿಮಾಣ ಮಾತ್ರವಲ್ಲ; ಆಧ್ಯಾತ್ಮಿಕತೆಯ ಅಡಿಪಾಯವೂ ಹೌದು. ಸಂವತ್ಸರವನ್ನು ಅಶ್ವಕ್ಕೆ ಹೋಲಿಸಿ, ಒಂದು ವರ್ಷ ಪೂರ್ಣವಾಗಿ ನಡೆಯುವ ಅಶ್ವಮೇಧಯಜ್ಞ ಈ ಸಂವತ್ಸರ ಎಂದು ವೇದಗಳು ಸಾರುತ್ತವೆ.


ಎಲ್ಲರ ಜೀವನವೂ ಸುಖ-ದು:, ಲಾಭ-ನಷ್ಟ, ಮಾನ-ಅಪಮಾನ, ಜಯ-ಅಪಜಯ - ಈ ದ್ವಂದ್ವಗಳ ಸಮ್ಮಿಲನ. ಯಾರಿಗೂ ದು:, ನಷ್ಟ, ಅಪಮಾನ, ಪರಾಜಯಗಳು ಸ್ಥಿರವಲ್ಲ. ಹಾಗೆಯೇ ಸುಖ, ಲಾಭ, ಮಾನ, ಜಯಗಳು. ಇವೆಲ್ಲ ಒಂದಾದ ಮೇಲೆ ಒಂದರಂತೆ ಬಂದು ಹೋಗುತ್ತಿರುತ್ತವೆ.
ಆದ್ದರಿಂದ ಮಾನವನು ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ, ಈ ದ್ವಂದ್ವಗಳನ್ನು ಜಯಿಸಿ, ಸಮತೆ ಸಾಧಿಸಬೇಕು, ಸ್ಥಿತಪ್ರಜ್ಞನಾಗಬೇಕು,ಇದು ಯುಗಾದಿಯ ಬೇವು-ಬೆಲ್ಲಗಳ ಸಂದೇಶ.



----------- Hari Om ----------



Tuesday, February 21, 2023

Anjaneya Dandakam

Sri Anjaneya Dandakam 

 


                                      Lord Anjaneya or Mukyaprana

 

ಶ್ರೀ ಆಂಜನೇಯಂ ಪ್ರಸನ್ನಾಂಜನೇಯಂ
ಪ್ರಭಾದಿವ್ಯಕಾಯಂ ಪ್ರಕೀರ್ತಿ ಪ್ರದಾಯಂ
ಭಜೇ ವಾಯುಪುತ್ರಂ ಭಜೇ ವಾಲಗಾತ್ರಂ ಭಜೇಹಂ ಪವಿತ್ರಂ
ಭಜೇ ಸೂರ್ಯಮಿತ್ರಂ ಭಜೇ ರುದ್ರರೂಪಂ
ಭಜೇ ಬ್ರಹ್ಮತೇಜಂ ಬಟಂಚುನ್ ಪ್ರಭಾತಂಬು
ಸಾಯಂತ್ರಮುನ್ ನೀನಾಮಸಂಕೀರ್ತನಲ್ ಜೇಸಿ
ನೀ ರೂಪು ವರ್ಣಿಂಚಿ ನೀಮೀದ ನೇ ದಂಡಕಂ ಬೊಕ್ಕಟಿನ್ ಜೇಯ
ನೀ ಮೂರ್ತಿಗಾವಿಂಚಿ ನೀಸುಂದರಂ ಬೆಂಚಿ ನೀ ದಾಸದಾಸುಂಡವೈ
ರಾಮಭಕ್ತುಂಡನೈ ನಿನ್ನು ನೇಗೊಲ್ಚೆದನ್
ನೀ ಕಟಾಕ್ಷಂಬುನನ್ ಜೂಚಿತೇ ವೇಡುಕಲ್ ಚೇಸಿತೇ
ನಾ ಮೊರಾಲಿಂಚಿತೇ ನನ್ನು ರಕ್ಷಿಂಚಿತೇ
ಅಂಜನಾದೇವಿ ಗರ್ಭಾನ್ವಯಾ ದೇವ
ನಿನ್ನೆಂಚ ನೇನೆಂತವಾಡನ್
ದಯಾಶಾಲಿವೈ ಜೂಚಿಯುನ್ ದಾತವೈ ಬ್ರೋಚಿಯುನ್
ದಗ್ಗರನ್ ನಿಲ್ಚಿಯುನ್ ದೊಲ್ಲಿ ಸುಗ್ರೀವುಕುನ್-ಮಂತ್ರಿವೈ
ಸ್ವಾಮಿ ಕಾರ್ಯಾರ್ಥಮೈ ಯೇಗಿ


ಶ್ರೀರಾಮ ಸೌಮಿತ್ರುಲಂ ಜೂಚಿ ವಾರಿನ್ವಿಚಾರಿಂಚಿ
ಸರ್ವೇಶು ಬೂಜಿಂಚಿ ಯಬ್ಭಾನುಜುಂ ಬಂಟು ಗಾವಿಂಚಿ
ವಾಲಿನಿನ್ ಜಂಪಿಂಚಿ ಕಾಕುತ್ಥ್ಸ ತಿಲಕುನ್ ಕೃಪಾದೃಷ್ಟಿ ವೀಕ್ಷಿಂಚಿ
ಕಿಷ್ಕಿಂಧಕೇತೆಂಚಿ ಶ್ರೀರಾಮ ಕಾರ್ಯಾರ್ಥಮೈ ಲಂಕ ಕೇತೆಂಚಿಯುನ್
ಲಂಕಿಣಿನ್ ಜಂಪಿಯುನ್ ಲಂಕನುನ್ ಗಾಲ್ಚಿಯುನ್
ಯಭ್ಭೂಮಿಜಂ ಜೂಚಿ ಯಾನಂದಮುಪ್ಪೊಂಗಿ ಯಾಯುಂಗರಂಬಿಚ್ಚಿ
ಯಾರತ್ನಮುನ್ ದೆಚ್ಚಿ ಶ್ರೀರಾಮುನಕುನ್ನಿಚ್ಚಿ ಸಂತೋಷಮುನ್‌ಜೇಸಿ
ಸುಗ್ರೀವುನಿನ್ ಯಂಗದುನ್ ಜಾಂಬವಂತು ನ್ನಲುನ್ನೀಲುಲನ್ ಗೂಡಿ
ಯಾಸೇತುವುನ್ ದಾಟಿ ವಾನರುಲ್‍ಮೂಕಲೈ ಪೆನ್ಮೂಕಲೈ
ಯಾದೈತ್ಯುಲನ್ ದ್ರುಂಚಗಾ ರಾವಣುಂಡಂತ ಕಾಲಾಗ್ನಿ ರುದ್ರುಂಡುಗಾ ವಚ್ಚಿ
ಬ್ರಹ್ಮಾಂಡಮೈನಟ್ಟಿ ಯಾ ಶಕ್ತಿನಿನ್‍ವೈಚಿ ಯಾಲಕ್ಷಣುನ್ ಮೂರ್ಛನೊಂದಿಂಪಗಾನಪ್ಪುಡೇ ನೀವು


ಸಂಜೀವಿನಿನ್‍ದೆಚ್ಚಿ ಸೌಮಿತ್ರಿಕಿನ್ನಿಚ್ಚಿ ಪ್ರಾಣಂಬು ರಕ್ಷಿಂಪಗಾ
ಕುಂಭಕರ್ಣಾದುಲ ನ್ವೀರುಲಂ ಬೋರ ಶ್ರೀರಾಮ ಬಾಣಾಗ್ನಿ
ವಾರಂದರಿನ್ ರಾವಣುನ್ ಜಂಪಗಾ ನಂತ ಲೋಕಂಬು ಲಾನಂದಮೈ ಯುಂಡ
ನವ್ವೇಳನು ನ್ವಿಭೀಷುಣುನ್ ವೇಡುಕನ್ ದೋಡುಕನ್ ವಚ್ಚಿ ಪಟ್ಟಾಭಿಷೇಕಂಬು ಚೇಯಿಂಚಿ,
ಸೀತಾಮಹಾದೇವಿನಿನ್ ದೆಚ್ಚಿ ಶ್ರೀರಾಮುಕುನ್ನಿಚ್ಚಿ,
ಯಂತನ್ನಯೋಧ್ಯಾಪುರಿನ್‍ಜೊಚ್ಚಿ ಪಟ್ಟಾಭಿಷೇಕಂಬು ಸಂರಂಭಮೈಯುನ್ನ
ನೀಕನ್ನ ನಾಕೆವ್ವರುನ್ ಗೂರ್ಮಿ ಲೇರಂಚು ಮನ್ನಿಂಚಿ ಶ್ರೀರಾಮಭಕ್ತ ಪ್ರಶಸ್ತಂಬುಗಾ
ನಿನ್ನು ಸೇವಿಂಚಿ ನೀ ಕೀರ್ತನಲ್ ಚೇಸಿನನ್ ಪಾಪಮುಲ್‍ಲ್ಬಾಯುನೇ ಭಯಮುಲುನ್
ದೀರುನೇ ಭಾಗ್ಯಮುಲ್ ಗಲ್ಗುನೇ ಸಾಮ್ರಾಜ್ಯಮುಲ್ ಗಲ್ಗು ಸಂಪತ್ತುಲುನ್ ಕಲ್ಗುನೋ
ವಾನರಾಕಾರ ಯೋಭಕ್ತ ಮಂದಾರ ಯೋಪುಣ್ಯ ಸಂಚಾರ ಯೋಧೀರ ಯೋವೀರ
ನೀವೇ ಸಮಸ್ತಂಬುಗಾ ನೊಪ್ಪಿ ಯಾತಾರಕ ಬ್ರಹ್ಮ ಮಂತ್ರಂಬು ಪಠಿಯಿಂಚುಚುನ್ ಸ್ಥಿರಮ್ಮುಗನ್
ವಜ್ರದೇಹಂಬುನುನ್ ದಾಲ್ಚಿ ಶ್ರೀರಾಮ ಶ್ರೀರಾಮಯಂಚುನ್ ಮನಃಪೂತಮೈನ ಎಪ್ಪುಡುನ್ ತಪ್ಪಕನ್
ತಲತುನಾ ಜಿಹ್ವಯಂದುಂಡಿ ನೀ ದೀರ್ಘದೇಹಮ್ಮು ತ್ರೈಲೋಕ್ಯ ಸಂಚಾರಿವೈ ರಾಮ
ನಾಮಾಂಕಿತಧ್ಯಾನಿವೈ ಬ್ರಹ್ಮತೇಜಂಬುನನ್ ರೌದ್ರನೀಜ್ವಾಲ
ಕಲ್ಲೋಲ ಹಾವೀರ ಹನುಮಂತ ಓಂಕಾರ ಶಬ್ದಂಬುಲನ್ ಭೂತ ಪ್ರೇತಂಬುಲನ್ ಬೆನ್
ಪಿಶಾಚಂಬುಲನ್ ಶಾಕಿನೀ ಢಾಕಿನೀತ್ಯಾದುಲನ್ ಗಾಲಿದಯ್ಯಂಬುಲನ್
ನೀದು ವಾಲಂಬುನನ್ ಜುಟ್ಟಿ ನೇಲಂಬಡಂ ಗೊಟ್ಟಿ ನೀಮುಷ್ಟಿ ಘಾತಂಬುಲನ್
ಬಾಹುದಂಡಂಬುಲನ್ ರೋಮಖಂಡಂಬುಲನ್ ದ್ರುಂಚಿ ಕಾಲಾಗ್ನಿ
ರುದ್ರುಂಡವೈ ನೀವು ಬ್ರಹ್ಮಪ್ರಭಾಭಾಸಿತಂಬೈನ ನೀದಿವ್ಯ ತೇಜಂಬುನುನ್ ಜೂಚಿ
ರಾರೋರಿ ನಾಮುದ್ದು ನರಸಿಂಹ ಯನ್‍ಚುನ್ ದಯಾದೃಷ್ಟಿ
ವೀಕ್ಷಿಂಚಿ ನನ್ನೇಲು ನಾಸ್ವಾಮಿಯೋ ಯಾಂಜನೇಯಾ
ನಮಸ್ತೇ ಸದಾ ಬ್ರಹ್ಮಚಾರೀ


ನಮಸ್ತೇ ನಮೋವಾಯುಪುತ್ರಾ ನಮಸ್ತೇ ನಮಃ 

 

                                                  Lord Hanuman or Vayuputra

Anjaneya Dandakam is powerful Mantra if one Recites it full devotion one can expect immediate results.

--------------- Hari Om -----------------
 

Thursday, January 26, 2023

Uses of Dried Tulasi Plant

 

Uses Of Dried Tulasi its Leaves, Stem & Flower and Plant

 

                
                                      Tulasi Plant


ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?



ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ(ಸತ್ತು) ಹೋಗುತ್ತದೆ



ತುಳಸಿಕಟ್ಟೆಯ ಅಥವ ಮನೆಯ ಹತ್ತಿರದ ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು

 

                                                                     Dried Tulasi Plant

 

ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯಬಾರದು.. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು



ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವುದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.

                                                                    Dried Tulasi Leaves



ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು.
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ಕೆಲವು ಹೋಮ ಹವನಗಳಲ್ಲಿ ಬಳಸುವುದರಿಂದ ಹತ್ತಿರದ ವೈದಿಕರಿಗೆ ಮತ್ತು ದೇವಾಲಯಗಳಲ್ಲಿ ನೀಡಬಹುದು .
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು. ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ



ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು



ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ

 

                                                                                Pic1

 

ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ಇದು ದೇವರಿಗೆ ಅತ್ಯಂತ ಪ್ರಿಯ



ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ



ಯದ್ಯೇಕಂ ತುಲಸೀಕಾಷ್ಠಂ
ಮಧ್ಯೇ ಕಾಷ್ಠಶತಸ್ಯ ಚ
ದಾಹಕಾಲೇ ಭವೇನ್ಮುಕ್ತಿಃ
ಪಾಪಕೋಟಿಯುತಸ್ಯ ಚ



ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು


                                                                              Pic2


ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ತುಳಸೀ ಕಾಷ್ಟದಿಂದ ಮಣಿಗಳ ಮಾಡಿ ಧಾರಣೆ ಮಾಡಬಹುದು ಇದು ಶರೀರ ಹಾಗೂ ಮನಸ್ಸನ್ನು ಶುದ್ಧೀಕರಿಸುವುದು. ದೇವರ ಪೂಜೆಗೆ ತುಳಸಿ ಸಿಗದಿದ್ದಾಗ ತುಳಸೀ ಕಾಷ್ಟವನ್ನಾದರೂ ಉಪಯೋಗಿಸಬಹುದು


ತುಲಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ।

ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ।


ಯಾವ ಕಾರಣಕ್ಕೂ ಬಿಸಾಡಬಾರದು.

 

The above is a wonderful article on the Uses of Dried Tulasi  and No one must discard or throw it outside.

 

----------- Hari Om ----------


 


 

Tuesday, December 27, 2022

Garuda Purana - a Gist on Non Performance of any Functions upon a Death for 1 Year - Valid Reasons Given

 

Garuda Purana - a Gist on Non Performance of any Functions

upon a Death for 1 Year - Valid Reasons Given.

 


                                          Lord Vishnu


ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ?

ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? 😨

"
ಮನುಷ್ಯನು" ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ

ಅವು


) ಮಲಿನ ಷೋಡಶ


) ಮಧ್ಯಮ ಷೋಡಶ

 
) ಉತ್ತಮ ಷೋಡಶ


ಎಂಬುದಾಗಿ ಮೂರು ವಿಭಾಗಗಳು .


ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ "ಮಲಿನ ಷೋಡಶ" ಎಂದು ಹೆಸರು .

"
ಮೊದಲನೆಯ ಪಿಂಡವನ್ನು ವಿಷ್ಣುವಿಗೆ" "ಎರಡನೆಯದನ್ನು ಶಿವನಿಗೆ" , "ಮೂರನೆಯದನ್ನು ಯಮನ ಕುಟುಂಬದವರಿಗೆ" , "ನಾಲ್ಕನೆಯದನ್ನು ಚಂದ್ರನಿಗೆ ," "ಐದನೆಯದನ್ನು ಅಗ್ನಿಗೆ ," "ಆರನೆಯದನ್ನು ಕವ್ಯವಾಹನಿಗೆ ," "ಏಳನೆಯದನ್ನು ಕಾಲನಿಗೆ ," "ಎಂಟನೆಯದನ್ನು ರುದ್ರನಿಗೆ ," "ಒಂಬತ್ತನೆಯದನ್ನು ಪರಮ ಪುರುಷನಿಗೆ", "ಹತ್ತನೆಯದನ್ನು ಪ್ರೇತಕ್ಕೆ" , "ಹನ್ನೊಂದನೆಯ ದನ್ನು ವಿಷ್ಣುವಿಗೆ" , "ಹನ್ನೆರಡನೆಯದನ್ನು ಬ್ರಹ್ಮನಿಗೆ ," "ಹದಿಮೂರನೆಯದನ್ನು ವಿಷ್ಣುವಿಗೆ ", "ಹದಿನಾಲ್ಕನೆಯದನ್ನು ಶಿವನಿಗೆ ", "ಹದಿನೈದನೆಯದನ್ನು ಯಮನಿಗೆ ", ಮತ್ತು "ಹದಿನಾರನೆಯದನ್ನು ತತ್ಪುರುಷನಿಗೆ"

ಕೊಡಬೇಕು,,, ಹೀಗೆ ""ಹದಿನಾರು ಪಿಂಡದಾನಗಳು



ಮಧ್ಯಮ ಷೋಡಶ ಎನಿಸಿಕೊಳ್ಳುವವು .



ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |
ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||
ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|
ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||



ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) ( 1 ) ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು .



ಇವುಗಳು ಉತ್ತಮ ಷೋಡಶ ಎಂದು ಕರೆಸಿಕೊಳ್ಳುವವು .



ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ "ಸೌಮ್ಯ" ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ ಉತ್ತಮ ಷೋಡಶ ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ .



ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ .



ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು .



ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ.



ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ .



ಹೀಗಾಗಿ ಕನ್ಯಾದಾನ ಮಾತ್ರ ಬರ್ತದೆ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವುದಿಲ್ಲಾ ,



ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡು ಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .



ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ .



-------------- Hari Om --------------





Sunday, November 6, 2022

Parijatha

Parijatha   -- ಪಾರಿಜಾತ


 

 

ಪುಷ್ಪ ಗಳಲ್ಲಿ ಶ್ರೇಷ್ಠವಾದ ಹೂ ಪಾರಿಜಾತ – Parijatha – The Best Flower & its significance


Among all the Flowers Parijatha flower is considered to be the Best and Powerful. It has been described in Old Indian Scriptures of several thousands of Years ago.


ಸಮುದ್ರ ಮಥನ ಸಮಯದಲ್ಲಿ ಪಾರಿಜಾತ ಗಿಡ ಉದ್ಭವಿಸಿತು. ಪಾರಿಜಾತ ಗಿಡವನ್ನು ಇಂದ್ರನು ತಂದು ತನ್ನ ಉದ್ಯಾನವನದಲ್ಲಿ ನೆಡುತ್ತಾನೆ. ಆದ್ದರಿಂದ ಇದು ಸ್ವರ್ಗ ಲೋಕದ ಹೂವು, ದೇವಲೋಕದ ಪುಷ್ಪ ,ಎಂದು ಪ್ರಸಿದ್ಧಿ ಪಡೆದಿದೆ. ಹರಿವಂಶ ಪುರಾಣದಲ್ಲಿ ಇದನ್ನು ಕಲ್ಪವೃಕ್ಷ ಎಂದು ಕರೆಯಲಾಗಿದೆ. ಸಮುದ್ರ ಮಥನದಲ್ಲಿ ದೊರೆತ ಕಾರಣ ಪಾರಿಜಾತ ದೈವಿಕ ಶಕ್ತಿಯುಳ್ಳ ಮರ ಎಂದು ನಂಬಲಾಗಿದೆ.


ಪೌರಾಣಿಕ_ಹಿನ್ನೆಲೆ:- ತ್ರೇತಾಯುಗದಲ್ಲಿ ಸೀತಾಮಾತೆಗೆ ಪಾರಿಜಾತದ ಹೂಗಳು ಎಂದರೆ ಬಹಳ ಪ್ರಿಯ, ರಾಮ ಲಕ್ಷ್ಮಣರ ಜೊತೆ ವನವಾಸದಲ್ಲಿದ್ದಾಗ, ಪಾರಿಜಾತದ ಹೂವುಗಳನ್ನು ಬಿಡಿಸಿ ಮಾಲೆ ಮಾಡಿಕೊಂಡು ಇಷ್ಟಪಟ್ಟು ಧರಿಸುತ್ತಿದ್ದಳಂತೆ. ಹಾಗಾಗಿ ಈ ಹೂವನ್ನು ಶೃಂಗಾರ ಹಾರ- ಹರ ಸಿಂಗಾರ ಎಂದು ಕರೆಯುತ್ತಾರೆ

 


ಇನ್ನೊಂದು ಕಥೆಯ ಪ್ರಕಾರ ಇಂದ್ರನು ಸ್ವರ್ಗದಲ್ಲಿ ಪಾರಿಜಾತ ಗಿಡವನ್ನು ನೆಟ್ಟ ಮೇಲೆ ಸುಗಂಧಭರಿತ ಸುಂದರವಾದ ಹೂಗಳು ಗಿಡದ ತುಂಬಾ ಅರಳಿದ ಪುಷ್ಪವನ್ನು ನೋಡುವುದೇ ಒಂದು ಸೊಬಗು. ಒಮ್ಮೆ ದ್ವಾರಕಾದಲ್ಲಿ ಕೃಷ್ಣ ರುಕ್ಮಿಣಿ‌ಯರು ಉಯ್ಯಾಲೆಯಲ್ಲಿ ಜೊತೆಯಾಗಿ ಕುಳಿತಿರುವಾಗ, ನಾರದರು ಸುಂದರವಾದ ಪಾರಿಜಾತದ ಹೂವಿನ ಮಾಲೆಯೊಂದಿಗೆ ಬಂದು ಶ್ರೀಕೃಷ್ಣನಿಗೆ ಕೊಡುಗೆಯಾಗಿ ಕೊಟ್ಟರು. ಕೃಷ್ಣನು ಅದನ್ನು ಪ್ರೀತಿಯಿಂದ ತನ್ನ ಪಟ್ಟದ ರಾಣಿ ರುಕ್ಮಿಣಿಗೆ ಹಾಕಿ ಸಂತೋಷ ಪಟ್ಟನು. ರುಕ್ಮಿಣಿ ಕೊರಳಲ್ಲಿ ಹಾರವನ್ನು ನೋಡಿದ ನಾರದರು, ಮಾತೇ ಈ ಪಾರಿಜಾತವನ್ನು ಧರಿಸಿದ ನೀವು, ಕೃಷ್ಣನ ಉಳಿದೆಲ್ಲ ಪತ್ನಿಯರಿಗಿಂತ ಸುಂದರವಾಗಿ ಕಾಣುತ್ತೀರಿ ಎಂದರು. ಈ ವಿಷಯ ಅಂತಪುರದಲ್ಲಿದ್ದ ಕೃಷ್ಣನ ಪ್ರೀತಿಯ ಪತ್ನಿ ಸತ್ಯಭಾಮೆಗೆ ತಿಳಿಯಿತು. ಅವಳು ಕೃಷ್ಣನಲ್ಲಿ, ನನಗೆ ಪಾರಿಜಾತ ಪುಷ್ಪದ ಮರವೇ ಬೇಕು ಎಂದು ಹಠ ಹಿಡಿಯುತ್ತಾಳೆ. ಕೃಷ್ಣನು ಸ್ವರ್ಗದ ಸ್ವತ್ತು ನಾವು ಭೂಲೋಕಕ್ಕೆ ತರಬಾರದು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಶ್ರೀಕೃಷ್ಣನು ಸತ್ಯಭಾಮಾ ಸಹಿತ ಸ್ವರ್ಗಲೋಕಕ್ಕೆ ಹೋಗಿ ಪಾರಿಜಾತ ವೃಕ್ಷ ಕೊಡುವಂತೆ ಇಂದ್ರನನ್ನು ಕೇಳುತ್ತಾನೆ. ಇಂದ್ರನು ಕೊಡುವುದಿಲ್ಲ ಎಂದಾಗ ಕೃಷ್ಣನು, ಇಂದ್ರ ನೊಂದಿಗೆ ಯುದ್ಧ ಮಾಡಿ ಇಂದ್ರನು ಸೋತು, ಮನಸ್ಸಿಲ್ಲದ ಮನಸ್ಸಿನಿಂದ ಪಾರಿಜಾತ ವೃಕ್ಷವನ್ನು ಕೃಷ್ಣನಿಗೆ ಕೊಡುತ್ತಾನಂತೆ. ಸ್ವರ್ಗದ ಸ್ವತ್ತನ್ನು ಭೂಲೋಕಕ್ಕೆ ಭಾಗ ಮಾಡುವುದು ಇಂದ್ರನಿಗೆ ಇಷ್ಟವಿರಲಿಲ್ಲ. ಕೃಷ್ಣನು ಪಾರಿಜಾತವನ್ನು ಭೂಲೋಕಕ್ಕೆ ತಂದ ಮೇಲೆ, ಬಹಳ ಬೇಸರಗೊಂಡ ಇಂದ್ರನು, ಪಾರಿಜಾತ ವೃಕ್ಷದ ಹೂಗಳು ರಾತ್ರಿ ಮಾತ್ರ ಅರಳಲಿ ಸೂರ್ಯೋದಯವಾಗುತ್ತಿದ್ದಂತೆ
ಬಾಡಿ ಉದುರಿ ಕೆಳಗೆ ಬೀಳಲಿ ಎಂದು ಶಾಪ ಕೊಟ್ಟನು. ಇತ್ತ ಶ್ರೀಕೃಷ್ಣನು ಸತ್ಯಭಾಮಾಗೆ ಬುದ್ಧಿ ಕಲಿಸಬೇಕೆಂದು ಪಾರಿಜಾತ ಗಿಡವನ್ನು ಸತ್ಯಭಾಮೆ ಇಷ್ಟದಂತೆ ಅವಳ ಮನೆಯಂಗಳದಲ್ಲಿ ನೆಟ್ಟನು. ಅದರ ಹೂವುಗಳನ್ನು ಪಟ್ಟದರಸಿ ರುಕ್ಮಿಣಿ ಮನೆಯಂಗಳದಲ್ಲಿ ಬೀಳುವಂತೆ ಮಾಡುತ್ತಾನೆ. ಈ ಉದುರಿದ ಹೂಗಳನ್ನೆಲ್ಲ ಆರಿಸಿಕೊಂಡು ರುಕ್ಮಿಣಿ ದೇವರ ಪೂಜೆಗೆ ಹಾಗೂ ತನ್ನ ಅಲಂಕಾರಕ್ಕೆ ಉಪಯೋಗಿಸುತ್ತಿದ್ದಳು. ಉದುರಿದ ಹೂವುಗಳನ್ನು ದೇವರಿಗೆ ಏರಿಸುವುದಿಲ್ಲ ಆದರೆ, ಉದುರಿ ಬಿದ್ದ ಹೂವನ್ನು, ದೇವರಿಗೆ ಅಲಂಕರಿಸುವ ಪುಷ್ಪಗಳಲ್ಲಿ ಪಾರಿಜಾತ ಮತ್ತು ರಂಜದ ಹೂವುಗಳು ಶ್ರೇಷ್ಠವಾದುದು ಎಂದು ಪರಿಗಣಿಸಿದ್ದಾರೆ.(ರಂಜದ ಹೂವನ್ನು ಬಕುಳ ಪುಷ್ಪವೆಂದು ಕರೆಯುತ್ತಾರೆ.



ಈ ಪಾರಿಜಾತದ ಹೂವಿನ ಕುರಿತು ಇನ್ನೂ ಒಂದು ದಂತ ಕಥೆ ಇದೆ:- 


ಪಾರಿಜಾತಕ ಎಂಬ ಸುಂದರ ರಾಜಕುಮಾರಿ ಇದ್ದಳು. ಅವಳು ಆಕಾಶದಲ್ಲಿ ಬೆಳಗುವ ಸೂರ್ಯನನ್ನು ತುಂಬಾ ಇಷ್ಟಪಟ್ಟಳು. ಆದರೆ ಸೂರ್ಯದೇವ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ಬೇಸರಗೊಂಡ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಆ ಬೂದಿಯ ರಾಶಿಯಲ್ಲಿ ಹುಟ್ಟಿದ ಗಿಡವೇ ಈ ಪಾರಿಜಾತ ವೃಕ್ಷ. ಈ ಗಿಡದಲ್ಲಿ ಅರಳಿದ ಪಾರಿಜಾತಕ ರಾಜಕುಮಾರಿ ಹೂವುಗಳಿಗೆ, ಬೆಳಿಗ್ಗೆ ಸುಂದರವಾಗಿ ಅರಳಿ, ತಾನು ಇಷ್ಟಪಟ್ಟು ಪ್ರೀತಿಸಿದ ಸೂರ್ಯನ ಮುಖವನ್ನು ನೋಡಿದ ಕೂಡಲೇ ಅವಳಿಗೆ ನೋವಾಗುತ್ತಿತ್ತು. ಆದ ಕಾರಣ ಪಾರಿಜಾತ ಸೂರ್ಯಾಸ್ತದ ಮೇಲೆ ಅರಳಿ ಸೂರ್ಯೋದಯದ ಬೆಳಗಿನ ಸಮಯ ಬೇಸರದಿಂದ ಬಾಡಿ ಉದುರಿ ಬೀಳುತ್ತದೆ ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ, ಪಾರಿಜಾತ ಪ್ರೇಮಿಗಳ ಮರ, ದುಃಖ ಕೊಡುವ ಮರ ಎಂದು ಹೇಳುತ್ತಾರೆ.



ಇಂತಹ ಸುಗಂಧಭರಿತ ಸುಂದರವಾದ ಪಾರಿಜಾತದ ಮರದ ಬೇರು, ಎಲೆ, ತೊಗಟೆ, ಹೂವು, ಎಲ್ಲವೂ ಔಷಧಯುಕ್ತವಾಗಿದೆ. ಸುಗಂಧವನ್ನು ಈ ಹೂವಿನಿಂದಲೇ ತಯಾರಿಸುತ್ತಾರೆ. ಬಿಳಿ ಮೋಹಕ ಬಣ್ಣದ ದಳ ಹಾಗೂ ಕಿತ್ತಲೆ ಬಣ್ಣದ ತೊಟ್ಟಿರುವ ಈ ಹೂವು ನಕ್ಷತ್ರದಂತೆ ಎಲ್ಲರನ್ನು ಆಕರ್ಷಿಸುತ್ತಿದೆ. ಸ್ವರ್ಗದ 5 ವೃಕ್ಷಗಳಲ್ಲಿ ಪಾರಿಜಾತವು ಒಂದು, (ಅಶ್ವತ್ತ, ಅರಳಿ ಅಥವಾ ಅರಣಿ, ಅತ್ತಿಮರ, ಶಮೀವೃಕ್ಷ , ಪಾರಿಜಾತ, ) ಪಾರಿಜಾತದ ಎಲೆಗಳು ತಂಪಾಗಿರುವ ಕಾರಣ, ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಉರಿ, ಊತ, ತುರಿಕೆಗೆ, ಪಾರಿಜಾತ ಎಲೆಗಳಿಂದ ತಯಾರಿಸಿದ ಎಣ್ಣೆ ಬಳಸು ವುದರಿಂದ ಕಡಿಮೆಯಾಗುತ್ತದೆ. ಮತ್ತು ಮಲಬದ್ಧತೆ ,ಜಾಂಡಿಸ್, ಪಿತ್ತ ಮುಂತಾದ ತೊಂದರೆಗಳಿಗೆ ಇದರ ಬೀಜವನ್ನು ಔಷಧಿಯಾಗಿ ಬಳಸುತ್ತಾರೆ. ಹೀಗೆ ಹಲವಾರು ಔಷಧಿಗೆ ಉಪಯುಕ್ತವಾಗಿದೆ, ಇದರ ತೊಗಟೆ ಜ್ವರಕ್ಕೆ ಉತ್ತಮವಾದ ಔಷಧಿ.



ಈ ಎಲ್ಲಾ ಗುಣಗಳಿಂದಾಗಿ ಪಾರಿಜಾತ ಮರ ಹಾಗೂ ಬಿಡುವ ಹೂಗಳು ಭಾರತೀಯರಿಗೆ ಮಹತ್ವಪೂರ್ಣವಾದ, ಪವಿತ್ರ ಸಂಕೇತದ ವೃಕ್ಷವಾಗಿದೆ.


ಆದಕಾರಣ ಅಯೋದ್ಯದಲ್ಲಿ ರಾಮಮಂದಿರದ ಭೂಮಿ ಪೂಜೆಯಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪಾರಿಜಾತದ ಸಸಿಯನ್ನು ನೀಡುವುದರ ಮೂಲಕ ಕಾರ್ಯವನ್ನು ಸಂಪನ್ನ ಗೊಳಿಸಿದರು. ಇದು ಸೀತಾಮಾತೆಗೆ ಬಹಳ ಪ್ರಿಯವಾದ ಹೂವು ಆದಕಾರಣ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ಶುಭ ಸಂಕೇತವಾಗಿ ಈ ಸಸಿಯನ್ನು ನೆಡಲಾಯಿತು.



ಅಚ್ಯುತಂ ಕೇಶವಂ ರಾಮ ನಾರಾಯಣಂ ಕೃಷ್ಣ ದಾಮೋದರಂ ವಾಸುದೇವಂ ಹರಿಂ!
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕಿ ನಾಯಕಂ ರಾಮಚಂದ್ರಂ ಭಜೆ ! 

 

Medicinal Values of Parijatha Tree its Leaf , Bark , Stem , Seeds and Flower

The Juice of its Leaves is bitter and saline in taste and

 provides effective relief in the treatment of several types

 of inflammation and fever including malaria, intermittent

 fever, common cough and cold.

    The juice of its Leaves when mixed with a little sugar

     is a good medicine for treatment of stomach ailments

     of children.


    In the treatment of skin diseases and constipation, the

     seeds of the Parijatha tree are used.

    The plant is also useful for dyeing. The flowers can be

     used as a source of yellow dye for clothes. They are

     also used to make perfume owing to its rich aroma.

    The leaves are anti-bacterial, anti-inflammatory, anti-

    pyretic, anti-oxidative and anti-fungal.

    The flowers are diuretic, anti-oxidative, anti-

    inflammatory and sedative.

    The flower oil is also very prominently used as a 

    perfume.

The flower has a very strong fragrance, hence is used for

 making incense sticks.

------- Hari Om -------


 


Wednesday, October 12, 2022

Durga Temple in Yelahanka New Town

 

 

                                               Sri Durga, Ganesha & Subramanya temple

 

This Durga Temple is in Udaya Layout 2 furlong from Yelahanka New Town Bus stand and
very Powerful and it has a Blissful Look and after the Darshan one has their own Satisfying Experiences,and Devi Blesses all the Devotees.

During this Navaratri Festival different Alankaras were Done for all the 9 Days and on 10 th Day of  Vijaya Dasami  also. 

 

ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಿಕೇ ಗೌರಿ ನಾರಾಯಣೀ ನಮೋಸ್ತುತೆ.

 

                                                                             1st Day
 
                                                                   Kumkuma alankara

 

                                                                            2nd Day

                                                                     Chandana alankara

 

                                                                          3rd Day 

                                                                      Pushpa alankara

 

                                                                         4th Day

                                                                      Dhruvya alankara

 

                                                                          5th day

 

                                                                   Ardha Nariswara alankara

 

 

                                                                             6th Day


 

                                                                       Patregala alankara

 

                                                                        7th Day

                                                                   Saraswati devi alankara

 

                                                                          8th Day


 

                                                                       Kali alankara

 

                                                                            9th Day

                                                                       Saregala alankara


ಯಾ ದೇವಿ ಸರ್ವ ಭೂತೇಷು, ಮಾತ್ರಿ ರೂಪೇಣಾ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಬುದ್ಧಿ ರೂಪೇಣಾ ಸಂಗ್ಸ್ತಿತ

ಯಾ ದೇವಿ ಸರ್ವ ಭೂತೇಷು, ಶಾಂತಿ ರೂಪೇಣಾ ಸಂಗ್ಸ್ತಿತ
ಯಾ ದೇವಿ ಸರ್ವ ಭೂತೇಷು, ಶಕ್ತಿ ರೂಪೇಣಾ ಸಂಗ್ಸ್ತಿತ
ನಮಸ್ತಸೈ, ನಮಸ್ತಸೈ, ನಮಸ್ತಸೈ, ನಮೋ ನಮಃ

 


                                                             Vijaya Dasami Day
 

                                                                     another picture
                       

                                                                 Sri Chandrasekhar sharma - Archakaru
 


Please if you all happen to pass through Yelahanka new Town please do visit to this temple and Get Durga devi' s Blessings.

------------------ Hari Om ----------------