Wednesday, July 29, 2026

ದೇವಾಲಯದಲ್ಲಿ ನಾವು ಮಾಡೋ ಅಪರಾಧಗಳು -- Mistakes to Avoid while Visiting Temples

 

                                                 Avoid these Mistakes while Visiting Temples

 

 

ದೇವಾಲಯದಲ್ಲಿ ನಾವು ಮಾಡೋ 

ಅಪರಾಧಗಳು.


Mistakes to Avoid while Visiting Temples



1)
ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.

2)
ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು.

3)
ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ, ಸಾಕ್ಸ್ ಕೈಯಿಂದ ತೆಗೆದು,ಕೈ 

ತೊಳೆಯದೇ ಪ್ರವೇಶ ಮಾಡುವುದು.

4)
ಭಗವಂತನ ಮಂದಿರಕ್ಕೆ ಸಿಗರೇಟು, ಬೀಡಾ, ಸರಾಯಿ, ಮಾಂಸ ಸೇವಿಸಿ ಪ್ರವೇಶಿಸುವದು.

5)
ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್, ಚಪ್ಪಲಿ, ಕೈ ಚೀಲ ಧರಿಸಿ ಕೊಂಡು ಹೋಗುವುದು.

6)
ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.

7)
ಭಗವಂತನಿಗೆ ಕೆಟ್ಟ/ಕೊಳೆತ/ಒಣಗಿದ ಹಣ್ಣುಗಳನ್ನು ಅರ್ಪಿಸುವುದು.

8)
ಭಗವಂತನ ಮಂದಿರದಲ್ಲಿ ಭಕ್ತರಿಂದ ಹಣ ಪಡೆದು ಕಳಪೆ/ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು.


9)
ದೇವಾಲಯದ ಹೊಸ್ತಿಲು,ಕಿಟಕಿಗಳಲ್ಲಿ ಕರ್ಪೂರ ಹಚ್ಚುವುದು.

10)
ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ 

ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.

11)
ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು.ದೇವರ ಹುಂಡಿ,ಕಾಣಿಕೆ ಹಣ

ದುರುಪಯೋಗ ಮಾಡುವುದು.

12)
ದೇವರಿಗೆ ಸಂಭಂದಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು 

ಅವುಗಳ ದರ್ಶನ ಪಡೆಯದಿರುವುದು..

13)
ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು.

14)
ಒಂದೇ ಹಸ್ತದಿಂದ ನಮಸ್ಕರಿಸುವುದು.

15)
ಭಗವಂತನ ಸಮ್ಮುಖ ದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. , ನೆಲಕ್ಕೆ ಬಾಗಿ 

ನಮಸ್ಕಾರ ಮಾಡದೇ ಇರುವುದು.

16)
ದೇವಾಲಯಕ್ಕೆ ಪ್ರದಕ್ಷಿಣೇ ಬರದೇ ಇರುವುದು..

17)
ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ ,

 ಆಸನಗಳ ಮೇಲೆ ಕುಳಿತುಕೊಳ್ಳುವುದು..

18)
ಭಗವಂತನ ಸಮ್ಮುಖ ಭೋಜನ ಮಾಡುವುದು..

19)
ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು..

20)
ದೇವಾಲಯದಲ್ಲಿ ಜೋರಾಗಿ ಮಾತಾಡೋದು , ಅಪಭ್ರಂಶ ಮಾತನಾಡುವುದು.

 


                                                   A typical  Sacred Temple Gopurams

 

21) ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು..

22)
ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು 

ಹಾಕಿಸಿಕೊಳ್ಳುವುದು..

23)
ಭಗವಂತನ ಸಮ್ಮುಖ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು..

24)
ತುಂಬಾ ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು..

25)
ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು..

26)
ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು..

27)
ನಿಮ್ಮನ್ನು ನೀವೇ ಪ್ರಶಂಸೆ ಮಾಡಿಕೊಳ್ಳುವುದು..

28)
ದೇವರ ಪ್ರಸಾದ ಸ್ವೀಕರಿಸದೇ ಬರುವುದು.

29)
ಯಾವುದೇ ದೇವರನ್ನು ನಿಂದಿಸುವುದು..

30)
ಭಗವಂತನ ವಿಗ್ರಹಕ್ಕೆ ಬೆನ್ನುತೋರಿಸಿ ಕೂಡುವುದು..

31)
ಗುರುಗಳ ಸ್ಮರಣೆ ಮಾಡದೇ ಇರುವುದು..

32)
ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು..

33)
ದೇವಾಲಯದಲ್ಲಿ ಕಣ್ಣು,ಕಿವಿ,ಮೂಗುಗಳಲ್ಲಿ ಬೆರಳು ಹಾಕಿ ಕಸ ತೆಗೆಯುವುದು.


34)
ದೇವಾಲಯದಲ್ಲಿ ಉಗುರು ಕಡಿಯುವುದು,ಕತ್ತರಿಸುವುದು.

35)
ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು,ಕಾಯಿ,ಹೂವು,ಇತ್ಯಾದಿಗಳನ್ನು 

ಅಲ್ಲಿಯೇ ದೊಡ್ಡಸ್ತಿಕೆಯಿಂದ ಬೇರೆಯವರಿಗೆ, ಬಿಕ್ಷುಕರಿಗೆ ನೀಡುವುದು.

36)
ದೇವಾಲಯದ ಹೊರಗೆ ಕುಳಿತಿರುವ ಬಿಕ್ಷುಕರಿಗೆ ಬಿಕ್ಷೆ ನೀಡಿ ಬಿಕ್ಷಾವೃತ್ತಿಯನ್ನು 

ಉತ್ತೇಜಿಸುವುದು.

37)
ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು.

38)
ದೇವಾಲಯದ/ಧಾರ್ಮಿಕ ಸಂಸ್ಥೆಗಳ ಅಭಿವೃಧ್ದಿ ಕಾರ್ಯಗಳಿಗೆ ಅಡ್ಡಿ ಬರುವುದು.

39)
ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ 

ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.

40)
ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ ಮುಟ್ಟುವುದು/ ಅದಕ್ಕೆ 

ಅವಕಾಶ ಮಾಡಿ ಕೊಡುವುದು.

41)
ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು.

42)
ದೇವರಿಗೆ ಅರ್ಪಿಸುವ ಮೊದಲು ಹೂವು.ಹಣ್ಣು,ಊದು ಬತ್ತಿಗಳನ್ನು 

ಆಘ್ರಾಣಿಸುವುದು(ಮೂಸಿ ನೋಡುವುದು).

43)
ದೇವಾಲಯದ ಆಸ್ತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬಾಡಿಗೆಗೆ ಪಡೆಯುವುದು/ - 

 ಕೊಡುವುದು. ಕಡಿಮೆ ಬಾಡಿಗೆಗೆ ಪಡೆದು ಹೆಚ್ಚನ ಬಾಡಿಗೆಗೆ ಬೇರೆಯವರಿಗೆ ನೀಡುವುದು.

44)
ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು.

45)
ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.


ನಮಗೆ ಗೊತ್ತಿದ್ದೂ/ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ..


We are doing it, whether knowingly or unknowingly.

ಈ ಅಂಶಗಳನ್ನು ಎಚ್ಚರಿಕೆಯಾಗಿ ದೇವಾಲಯಗಳಲ್ಲಿ ಪ್ರಚಾರ ಮಾಡಿ

ದಯವಿಟ್ಡು ನಮ್ಮ ಸಂಸ್ಕೃತಿಯನ್ನು ಉಳಿಸಿರಿ.


Please Carefully Propagate these Points in Temples 
and Help Preserve our Culture. 
 
 --------------- Hari Om ---------------


 

 

 



 

Sunday, July 26, 2026

ಹಸುವಿನ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು -- Cow -- Some interesting Facts

 

                                                                      Sacred COW

  

ಹಸುವಿನ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು.

Cow -- Some interesting Facts


1. ಹಸು ನಿಂತು ಶಾಂತಿಯಿಂದ ಉಸಿರಾಡುವ ಸ್ಥಳ, ವಾಸ್ತು ದೋಷಗಳು ನಿವಾರಣೆಯಾಗುತ್ತವೆ.


2. ಹಸು ಸಂತೋಷದಿಂದ ಮೇಯಲು ಪ್ರಾರಂಭಿಸುವ ಸ್ಥಳ, ದೇವಿ- ದೇವತೆಗಳು ಹೂವಿನ ಮಳೆಗರೆಯುತ್ತಾರೆ.


3. ಹಸುವಿನ ಕುತ್ತಿಗೆಗೆ ಗಂಟೆ ಕಟ್ಟಬೇಕು; ಹಸುವಿನ ಕುತ್ತಿಗೆಗೆ ಕಟ್ಟಲಾದ ಗಂಟೆಯ ಬಾರಿಸುವಿಕೆಯನ್ನು ಗೋ ಆರತಿ ಎಂದು ಪರಿಗಣಿಸಲಾಗುತ್ತದೆ.


4. ಹಸುವನ್ನು ಸೇವಿಸುವ ಮತ್ತು ಪೂಜಿಸುವ ವ್ಯಕ್ತಿಗೆ, ಹಸು ಅವನಿಗೆ ಬರುವ ಎಲ್ಲಾ ರೀತಿಯ ವಿಪತ್ತುಗಳನ್ನು ದೂರ ಮಾಡುತ್ತದೆ.


5. ಹಸುವಿನ ಗೊರಸಿನಲ್ಲಿ ಸರ್ಪ ದೇವರು ವಾಸಿಸುತ್ತಾನೆ. ಹಸು ಅಲೆದಾಡುವ ಸ್ಥಳಕ್ಕೆ ಹಾವುಗಳು ಮತ್ತು ಚೇಳುಗಳು ಬರುವುದಿಲ್ಲ.


6. ಲಕ್ಷ್ಮಿ ದೇವಿಯು ಹಸುವಿನ ಸಗಣಿಯಲ್ಲಿ ವಾಸಿಸುತ್ತಾಳೆ.


7. ಹಸುವಿನ ಒಂದು ಕಣ್ಣಿನಲ್ಲಿ ಸೂರ್ಯ ಮತ್ತು ಇನ್ನೊಂದು ಕಣ್ಣಿನಲ್ಲಿ ಚಂದ್ರ ವಾಸಿಸುತ್ತಾರೆ.


8. ಹಸುವಿನ ಹಾಲಿನಲ್ಲಿ ಚಿನ್ನದ ಅಂಶವಿದ್ದು, ಇದು ರೋಗಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.


9. ಹನುಮಂತನು ಹಸುವಿನ ಬಾಲದಲ್ಲಿ ವಾಸಿಸುತ್ತಾನೆ. ಯಾರಾದರೂ ಕೆಟ್ಟ ಕಣ್ಣಿನಿಂದ ಪ್ರಭಾವಿತರಾಗಿದ್ದರೆ, ಹಸುವಿನ ಬಾಲದಿಂದ ಕೆಟ್ಟ ಕಣ್ಣನ್ನು(ಕೆಟ್ಟ ದೃಷ್ಠಿ) ಗುಡಿಸುವ ಮೂಲಕ ಕೆಟ್ಟ ಕಣ್ಣನ್ನು ತೆಗೆದುಹಾಕಬಹುದು.


10. ಹಸುವಿನ ಹಿಂಭಾಗದಲ್ಲಿ ಎತ್ತರಿಸಿದ ಗೂನು ಇರುತ್ತದೆ, ಆ ಗೂನುದಲ್ಲಿ ಸೂರ್ಯ ಕೇತು ನಾಡಿ ಇರುತ್ತದೆ. ಪ್ರತಿದಿನ ಬೆಳಿಗ್ಗೆ ಅರ್ಧ ಗಂಟೆ ಹಸುವಿನ ಗೂನು ಉಜ್ಜುವುದರಿಂದ ರೋಗಗಳು ನಾಶವಾಗುತ್ತವೆ.

 

                                                               Cow with Calf

 
 11. ಹಸುವಿಗೆ ಮೇವು ನೀಡುವುದರಿಂದ ಮೂವತ್ತಮೂರು ಕೋಟಿ ದೇವರು ಮತ್ತು ದೇವತೆಗಳಿಗೆ ಆಹಾರವನ್ನು ಅರ್ಪಿಸಲಾಗುತ್ತದೆ.


12. ವ್ಯಕ್ತಿಯ ವಿಧಿ ರೇಖೆಯು ಸುಪ್ತವಾಗಿದ್ದರೆ, ಆ ವ್ಯಕ್ತಿಯು ತನ್ನ ಅಂಗೈಯಲ್ಲಿ ಬೆಲ್ಲವನ್ನು ಇಟ್ಟು ಹಸು ಅದನ್ನು ತನ್ನ ನಾಲಿಗೆಯಿಂದ ನೆಕ್ಕುವಂತೆ ಮಾಡಬೇಕು. ಹಸು ಅಂಗೈಯ ಮೇಲೆ ಇಟ್ಟಿರುವ ಬೆಲ್ಲವನ್ನು ತನ್ನ ನಾಲಿಗೆಯಿಂದ ನೆಕ್ಕುವುದರಿಂದ, ಆ ವ್ಯಕ್ತಿಯ ಸುಪ್ತ ವಿಧಿ ರೇಖೆಯು ತೆರೆಯುತ್ತದೆ.


13. ಹಸುವಿನ ನಾಲ್ಕು ಕಾಲುಗಳ ಮೂಲಕ ಹಾದು ಪರಿಕ್ರಮ ಮಾಡುವುದರಿಂದ, ವ್ಯಕ್ತಿಯು ಭಯದಿಂದ ಮುಕ್ತನಾಗುತ್ತಾನೆ.


14. ಹಸುವಿನ ಹಾಲು, ತುಪ್ಪ, ಬೆಣ್ಣೆ, ಮೊಸರು, ಸಗಣಿ ಮತ್ತು ಗೋಮೂತ್ರದಿಂದ ತಯಾರಿಸಿದ ಪಂಚಗವ್ಯವು ಸಾವಿರಾರು ರೋಗಗಳಿಗೆ ಔಷಧವಾಗಿದೆ. ಅದನ್ನು ಸೇವಿಸುವುದರಿಂದ ಗುಣಪಡಿಸಲಾಗದ ರೋಗಗಳು ಗುಣವಾಗುತ್ತವೆ.


15. ಮಹಾನ್ ವಿದ್ವಾಂಸ ಮತ್ತು ಧರ್ಮ ರಕ್ಷಕ ಗೋಕರ್ಣ ಮಹಾರಾಜರು ಹಸುವಿನ ಗರ್ಭದಿಂದ ಜನಿಸಿದರು.


16. ದೇವರು ಮತ್ತು ದೇವತೆಗಳು ಹಸುವಿನ ಸೇವೆ ಮಾಡಲು ಈ ಭೂಮಿಯ ಮೇಲೆ ಅವತರಿಸಿದ್ದಾರೆ.

 

                                                                  Cow is So Sacred

17. ಹಸು ಕರುವಿಗೆ ಜನ್ಮ ನೀಡಿದಾಗ, ಬಂಜೆತನ ಹೊಂದಿರುವ ಮಹಿಳೆಗೆ ಮೊದಲ ಹಾಲು ನೀಡಿದರೆ, ಅವಳ ಬಂಜೆತನ ನಿವಾರಣೆಯಾಗುತ್ತದೆ.


18. ಆರೋಗ್ಯವಂತ ಹಸುವಿನ ಎರಡು ತೊಲ ಗೋಮೂತ್ರವನ್ನು ಏಳು ಪದರಗಳ ಬಟ್ಟೆಯ ಮೂಲಕ ಶೋಧಿಸಿ ಪ್ರತಿದಿನ ಸೇವಿಸಿದರೆ, ಎಲ್ಲಾ ರೋಗಗಳು ಗುಣವಾಗುತ್ತವೆ.


19. ಹಸುವಿನ ತಾಯಿ ಯಾರನ್ನು ಪ್ರೀತಿಯಿಂದ ನೋಡುತ್ತಾರೋ, ಅವರ ಮೇಲೆ ತನ್ನ ಆಶೀರ್ವಾದವನ್ನು ಸುರಿಸುತ್ತಾಳೆ.


20.  ಹಿಂದೂ ಪುರಾಣದ ಪ್ರಕಾರ ಮುಕ್ಕೋಟಿ ದೇವತೆಗಳು ಗೋವಿನಲ್ಲಿ ವಾಸ ಮಾಡುತ್ತಾರೆ. ಹೀಗಾಗಿಯೇ ಗೋವುಗಳಿಗೆ ನೀವು ಎಷ್ಟು ಗೌರವವನ್ನು ಕೊಡುತ್ತಿರೋ ಅಷ್ಟೇ ಗೌರವಗಳು ನಿಮಗೆ ಸಮಾಜದಲ್ಲಿ ಸಿಗುತ್ತದೆ, ಇದರ ಜೊತೆಗೆ ಪೂರ್ವ ಜನ್ಮದ ಪಾಪ ಕರ್ಮಗಳು ಕೂಡ ಕಳೆಯುತ್ತದೆ ಎಂದು ಹೇಳಲಾಗುತ್ತದೆ.

 

                                                         Kamadhenu Cow

 


ಗೋವನ್ನು ದಾನ ಮಾಡುವುದು ಹಿಂದೂ ಧರ್ಮದಲ್ಲಿ ಪ್ರಮುಖ ಮತ್ತು ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ಗೋದಾನ ಎಂದರೆ ಗೋವನ್ನು ದಾನವಾಗಿ ಇತರರಿಗೆ ನೀಡುವುದಾಗಿದೆ ಮತ್ತು ಅದರ ಆರೈಕೆಯ ಕರ್ತವ್ಯವನ್ನು ನಿರ್ವಹಿಸುವುದಾಗಿದೆ.


ಕಾಮಧೇನುವನ್ನು ಅದರ ಕರುವಾದ ನಂದಿನಿಯೊಂದಿಗೆ ಪೂಜಿಸುವುದು ಮಂಗಳಕರವಾಗಿದೆ. ವ್ಯಕ್ತಿಯು ಮೂರು ಪ್ರಧಾನ ದೇವತೆಗಳಾದ ಲಕ್ಷ್ಮಿ, ಸರಸ್ವತಿ ಮತ್ತು ದುರ್ಗೆಯ ಆಶೀರ್ವಾದವನ್ನು ಪಡೆಯುತ್ತಾನೆ.

 

                                                                       PIC-1


 

  • ಕಾಮಧೇನುವು ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಮತ್ತು ನಿಮ್ಮ ಮನೆಗೆ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಕಾಮಧೇನುವು ನಿಮ್ಮ ಜೀವನದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸುವ ಮೂಲಕ ನಿಮಗೆ ವೃತ್ತಿಪರ, ಭೌತಿಕ ಮತ್ತು ಆಧ್ಯಾತ್ಮಿಕ ಯಶಸ್ಸನ್ನು ನೀಡಬಹುದು. ವಾಸ್ತು ಕಾಮಧೇನು ಹಸು ಮತ್ತು ಕರುವಿನ ಪ್ರತಿಮೆಯನ್ನು ಪೂಜಿಸುವುದರಿಂದ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಬಂಜೆತನದ ಮಹಿಳೆಯರಿಗೆ ಪ್ರಯೋಜನವಾಗುತ್ತದೆ.


--------------------- Hari Om ---------------------



 

 

Thursday, July 23, 2026

ಪಂಚಭೂತ ಕ್ಷೇತ್ರಗಳು--Panchabootha Places

                                                           Pancha Bootha Kshetrs / Places

 

                                                                   another Picture


ಪಂಚಭೂತ ಕ್ಷೇತ್ರಗಳು--Panchabootha  

Places


ಪಂಚಭೂತ ತತ್ವಗಳ ದಿವ್ಯ ಕ್ಷೇತ್ರಗಳು


5 ( Five ) Divine Temple sites/Places associated with 
the principles of the Five Elements.



ಆಧ್ಯಾತ್ಮಿಕವಾಗಿ ಮಾನವನ ಶರೀರವು ಪಂಚಭೂತ ಅಥವಾ ಐದು ತತ್ವಗಳಿಂದ (ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿ) ಮಾಡಲ್ಪಟ್ಟಿದ್ದು ಅದರ ಒಡೆಯನಾದ ಶಿವ ಪರಮಾತ್ಮನಿಗೆ ಸಮರ್ಪಿತವಾದ ಪ್ರತ್ಯೇಕ ದೇವಸ್ಥಾನಗಳನ್ನು ಪಂಚಭೂತ ಸ್ಥಳಗಳೆನ್ನುತ್ತಾರೆ. ಈ ಪಂಚಭೂತ ಸ್ಥಳಗಳಲ್ಲಿ ಐದು ಶಿವಲಿಂಗಗಳಿದ್ದು ಅದರಲ್ಲಿ ನಾಲ್ಕು ಸ್ಥಳಗಳು ತಮಿಳುನಾಡಿನಲ್ಲಿದ್ದು, ಒಂದು ಸ್ಥಳವು ಪ್ರಸ್ತುತ ಆಂಧ್ರ ಪ್ರದೇಶದಲ್ಲಿದೆ.

ಪಂಚಭೂತಂ ಕುರಿತು ಸಂಕ್ಷಿಪ್ತ ಮಾಹಿತಿ


ಹಿಂದೂ ತತ್ವದ ಅನುಸಾರ ಜಗತ್ತಿನ ಸಕಲ ಜೀವರಾಶಿಗಳು, ಸೌರವ್ಯೂಹದಲ್ಲಿರುವ ಗ್ರಹಗತಿ ಹಾಗು ಪಂಚ ತತ್ವಗಳಾದ ಗಾಳಿ, ನೀರು, ಅಗ್ನಿ, ಆಕಾಶ ಮತ್ತು ಭೂಮಿಗಳಿಂದ ರಚನೆಯಾಗಿವೆ. ಭೂತವೆಂದರೆ ಸಂಸ್ಕೃತದಲ್ಲಿ ಕಣ ಅಥವಾ ಅಂಶವೆಂದೂ ಮಹಾಭೂತವೆಂದರೆ ಮಹಾನ್ ಕಣ ಅಥವಾ ಅಂಶ ಎಂದಾಗುತ್ತದೆ.

ಪುರಾತನ ಹಿಂದೂ ವೈದ್ಯಶಾಸ್ತ್ರ ಆಯುರ್ವೇದದ ಪ್ರಕಾರ, ಶರೀರ ಹಾಗೂ ಪಂಚಭೂತಗಳ ನಡುವಿನ ಸಮತೋಲನವು ಕೆಲವು ಪ್ರಧಾನ ಅಂಶಗಳಿಂದ ನಿರ್ವಹಿಸಲ್ಪಡುತ್ತದೆ. ಅವುಗಳೆಂದರೆ ಶ್ಲೇಷ್ಮ (ಕಫ), ಪಿತ್ತರಸ (ಪಿತ್ತ), ವಾಯು, ಧಾತು ಹಾಗು ಮಲ (ಕಸ).



ಹಾಗಾದರೆ ಬನ್ನಿ ಒಮ್ಮೆ ಆ ಪವಿತ್ರ ಐದು ಪಂಚಭೂತ ಸ್ಥಳಗಳ 

ದರುಶನ ಮಾಡಿಕೊಂಡು ಬರೋಣ.

 

                                        

                                      Kanchipuram Temple Gopuram

 


                                           Kanchi Ekabareswarar

 

1) ಏಕಾಂಬರೇಶ್ವರರ್ ದೇವಾಲಯ (ಪೃಥ್ವಿ ಅಥವಾ ಭೂಮಿ) -- 

ಕಾಂಚೀಪುರಂ

Ekambareswarar Temple - Kanchipuram ( Earth )

 

ತಮಿಳುನಾಡಿನ ಕಾಂಚೀಪುರಂ ಪಟ್ಟಣದಲ್ಲಿರುವ ಈ ಬೃಹತ್ ದೇವಾಲಯವು ಪಂಚಭೂತಗಳಲ್ಲೊಂದಾದ ಭೂಮಿ ಅಥವಾ ಪೃಥ್ವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಪಟ್ಟಣದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ಈ ದೇವಾಲಯವು 59 ಮೀ ಎತ್ತರದ ಗೋಪುರವನ್ನು ಹೊಂದಿದ್ದು, ಭಾರತದಲ್ಲಿರುವ ಎತ್ತರದ ಗೋಪುರ ದೇವಾಲಯಗಳ ಪೈಕಿ ಒಂದೆನಿಸಿದೆ. ಮುಖ್ಯ ಬಸ್ ನಿಲ್ದಾಣದಿಂದ 1.6 ಕಿ.ಮೀ ದೂರದಲ್ಲಿರುವ ಈ ದೇವಾಲಯವನ್ನು ರಾಜಾ ಸ್ಟ್ರೀಟ್ ಮೂಲಕ ಸುಲಭವಾಗಿ ತಲುಪಬಹುದು.

 


                                                    Tiruannamalai Temple Gopuram

 

                                                         Sri Annamalaiyar Swamy


 

2) ಅರುಣಾಚಲೇಶ್ವರರ್ ದೇವಾಲಯ (ಅಗ್ನಿ) -- 

ತಿರುವಣ್ಣಾಮಲೈ

Arunachaleswarar Temple – Tiruannamalai ( Agni or Fire )

ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದ ಅಣ್ಣಾಮಲೈ ಬೆಟ್ಟ ಶ್ರೇಣಿಗಳಲ್ಲಿ ನೆಲೆಸಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಅಗ್ನಿ ತತ್ವಕ್ಕೆ ಸಂಬಂಧಿಸಿದ ದೇವಾಲಯವಾಗಿದೆ. ಇಲ್ಲಿರುವ ಶಿವಸ್ವರೂಪಿ ಲಿಂಗವನ್ನು ಅಣ್ಣಮಲಯರ್ ಅಥವಾ ಅರುಣಾಚಲೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. 10 ಹೆಕ್ಟೇರ್ ಪ್ರದೇಶದಲ್ಲಿ ಬೃಹತ್ತಾಗಿ ಹರಡಿರುವ ಈ ದೇವಾಲಯ ಸಂಕೀರ್ಣವು ಹಲವು ಎತ್ತರದ ಗೋಪುರಗಳನ್ನು ಹೊಂದಿದ್ದು ಪೂರ್ವಭಾಗದ ಗೋಪುರವು ಅತ್ಯಂತ ಎತ್ತರದ ಗೋಪುರವಾಗಿದೆ. ಇದರ ಎತ್ತರ ಸುಮಾರು 217 ಅಡಿ ಅಥವಾ 66 ಮೀಟರ್ ಗಳಷ್ಟು.

ಪ್ರತಿದಿನ ಆರು ಪೂಜಾ ವಿಧಿ ವಿಧಾನಗಳು ಇಲ್ಲಿ ಜರುಗುತ್ತಿದ್ದು ಬೆಳಿಗ್ಗೆ 5.30 ರಿಂದ ರಾತ್ರಿ 10 ಘಂಟೆಯಯವರೆಗೆ ತೆರೆದಿರುತ್ತದೆ. ತಿರುವಣ್ಣಾಮಲೈ ರೈಲು ನಿಲ್ದಾಣದಿಂದ ಕೇವಲ 1.6 ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.

 

                                                       Jambukeswara Temple Gopuram


 

                                                            Sri Jambukeshwarar

 

3) ಜಂಬುಕೇಶ್ವರ ದೇವಾಲಯ (ಜಲ) – ತಿರುವನೈಕಾವಲ್

Jambukeshwarar Temple – Tiruvanaikaval ( Jala or Water )


ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಈ ದೇವಾಲಯವು ಜಂಬುಕೇಶ್ವರ ದೇವಾಲಯವೆಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದು ಪಂಚಭೂತಗಳಲ್ಲೊಂದಾದ ನೀರಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಮತ್ತೊಂದು ಪ್ರಸಿದ್ಧ ಯಾತ್ರಾಕ್ಷೇತ್ರವಾದ ಶ್ರೀ ರಂಗನಾಥಸ್ವಾಮಿ ದೇವಾಲಯವಿರುವ ಶ್ರೀರಂಗಂನ ದ್ವೀಪದಲ್ಲಿ ನೆಲೆಸಿದೆ. ಜಂಬುಕೇಶ್ವರ ದೇವಾಲಯದ ಗರ್ಭಗುಡಿಯ ಕೆಳಗೆ ಎಂದಿಗೂ ಬತ್ತಲಾರದ ಚಿಲುಮೆಯೊಂದಿದ್ದು, ಸುಮಾರು 1800 ವರ್ಷಗಳ ಇತಿಹಾಸವನ್ನು ಈ ದೇವಾಲಯ ಹೊಂದಿದೆ.

ಇಲ್ಲಿನ ಶಿವಸ್ವರೂಪಿ ಲಿಂಗವನ್ನು ಅಪ್ಪು ಲಿಂಗಂ ಅಥವಾ ನೀರಿನ ಲಿಂಗ ಎಂದು ಕರೆಯಲಾಗುತ್ತದೆ. ಈ ಜಂಬುಕೇಶ್ವರ ಅಖಿಲಾಂಡೇಶ್ವರಿ ದೇವಾಲಯವು ಪಟ್ಟಣದ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

 

                                                        Chidambaram Temple Gopuram


 

                                                          Thillai Nartaraja Swamy

 

4) ತಿಳ್ಳೈ ನಟರಾಜ ದೇವಾಲಯ (ಆಕಾಶ) – ಚಿದಂಬರಂ

Thillai Nataraja Temple – Chidambaram - ( Akasa or Sky )

ತಮಿಳುನಾಡಿನ ಪೂರ್ವ ಮಧ್ಯ ಭಾಗದ ಚಿದಂಬರಂ ಪಟ್ಟಣದಲ್ಲಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ಆಕಾಶಕ್ಕೆ ಸಮರ್ಪಿತವಾದುದಾಗಿದೆ. ಇಲ್ಲಿನ ಶಿವಸ್ವರೂಪಿ ಲಿಂಗವನ್ನು ತಿಳ್ಳೈ ನಟರಾಜನ ರೂಪದಲ್ಲಿ ಪೂಜಿಸಲಾಗುತ್ತದೆ. ವೈದಿಕ ಬ್ರಾಹ್ಮಣರಾದ ದಿಕ್ಷೀತರ್ ರಿಂದ ಈ ದೇವಸ್ಥಾನವು ನಿರ್ವಹಿಸಲ್ಪಡುತ್ತದೆ. ಇವರನ್ನು ಪತಂಜಲಿಯವರು ದೇವಾಲಯದ ವಿಧಿವತ್ತಾದ ನಿರ್ವಹಣೆಗಾಗಿ ಕೈಲಾಸ ಪರ್ವತದಿಂದ ಕರೆತಂದಿದ್ದರು ಎನ್ನಲಾಗಿದೆ.

ಈ ದೇವಾಲಯವು ಚಿದಂಬರಂ ಬಸ್ಸು ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿ ನೆಲೆಸಿದ್ದು ಪಟ್ಟಣದ ಯಾವುದೇ ಭಾಗದಿಂದ ಸುಲಭವಾಗಿ ತಲುಪಬಹುದಾಗಿದೆ.

 

                                                          Sri Kalahasti Temple Gopuram


 

                                                                  Sri Kalahastiswarar

 

5) ಶ್ರೀಕಾಳಹಸ್ತಿ ದೇವಾಲಯ (ವಾಯು) -- ಶ್ರೀಕಾಳಹಸ್ತಿ

Sri Kalahasti Temple – Sri Kalahasti ( Vayu or Air )


ಪ್ರಸ್ತುತ ಆಂಧ್ರಪ್ರದೇಶ ರಾಜ್ಯದ ಶ್ರೀಕಾಳಹಸ್ತಿ ಯಲ್ಲಿರುವ ಈ ದೇವಾಲಯವು ಪಂಚಭೂತಗಳಲ್ಲೊಂದಾದ ವಾಯುವಿಗೆ ಸಂಬಂಧಿಸಿದುದಾಗಿದೆ. ಶಿವಸ್ವರೂಪಿಯಾದ ವಾಯುಲಿಂಗಂ ಅನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಈ ಸ್ಥಳವು ಮತ್ತೊಂದು ವಿಶ್ವವಿಖ್ಯಾತ ತಾಣವಾದ ತಿರುಪತಿಯಿಂದ ಈಶಾನ್ಯ ಭಾಗಕ್ಕೆ ಕೇವಲ 36 ಕಿ.ಮೀ ದೂರದಲ್ಲಿ ನೆಲೆಸಿದೆ. ಶ್ರೀಕಾಳಹಸ್ತಿ ರೈಲು ನಿಲ್ದಾಣದಿಂದ 2.6 ಕಿ.ಮೀ ದೂರದಲ್ಲಿ ನೆಲೆಸಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದಾಗಿದೆ.


Please Visit to all the above Temples once in your Life time and our Human Body is Composed of these above 5 Elements so get the Blessings from the Lords of Divine.


--------------------- Hari Om --------------------



 

 
                                                  

Sunday, July 19, 2026

ಭಗವದ್ಗೀತೆ-ಪೀಠಿಕೆ-Bhagavad Gita-Introduction

 

                                                                   Sri Bhagavad Gita

 

ಭಗವದ್ಗೀತೆ-ಪೀಠಿಕೆ-Bhagavad Gita-

Introduction


ಭಗವದ್ಗೀತೆ ನಮ್ಮ ಶಾಸ್ತ್ರ ಪರಂಪರೆ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ ಎಂದು ಹೆಸರುಪಡೆದಿದೆ. ಪ್ರಾಚೀನರು ಭಗವದ್ಗೀತೆಗೆ ವೇದಕ್ಕಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಇದಕ್ಕೆ ಸರಿಸಾಟಿಯಾದ ಕೃತಿ ಇನ್ನೊಂದಿಲ್ಲ. ಎಲ್ಲ ಅದ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರ-ಭಗವದ್ಗೀತೆ. ಅರ್ಥದ ಭಾರದಿಂದ ತುಂಬಿರುವ ಮಹಾಭಾರತ ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂಥಹ ಮಹಾಭಾರತದಲ್ಲಿ ಭಗವದ್ಗೀತೆ ಶ್ರೇಷ್ಠ. ಭಗವದ್ಗೀತೆಯನ್ನು ಸಮಗ್ರವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗಾಗುತ್ತದೆ.


ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೆಯಿಂದ ತೆರೆದುಕೊಳ್ಳುತ್ತದೆ. ಭಗವದ್ಗೀತೆ ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮಹಾಭಾರತದ ಸಾರವನ್ನು ಸೆರೆಹಿಡಿದಿದೆ. ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸವಲ್ಲ, ಬದಲಿಗೆ ಮನಃಶಾಸ್ತ್ರ ಮತ್ತು ಅಧ್ಯಾತ್ಮ.

ಮಹಾಭಾರತ ಎಳುಪಾತ್ರಗಳ ಮೂಲಕ ಹದಿನೆಂಟು ( 18 ) ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಅವುಗಳೆಂದರೆ:

. ಧರ್ಮರಾಜ - ಧರ್ಮ()
. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ(೧೧).
. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ(೧೪)
.. ನಕುಲ-ಸಹದೇವ - ಶೀಲ ಮತ್ತು ವಿನಯ(೧೬)
. ದ್ರೌಪದಿ - ವೇದವಿದ್ಯೆ(೧೭)
. ಶ್ರೀಕೃಷ್ಣ – ವೇದವೇದ್ಯ(೧೮)

ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ,ಮನನ ಮತ್ತು ನಿದಿಧ್ಯಾಸನದೊಂದಿಗೆ ಶೀಲ ಮತ್ತು ವಿನಯಗಳು ನಮ್ಮ ನಿತ್ಯ ಸಂಗಾತಿಗಳಾಗಿರಬೇಕು. ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪುವುದೇ ಗೀತೆಯ ಒಟ್ಟು ಸಾರಾಂಶ. ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು.



                                            Gita Upadesha by Lord Krishna to Arjuna

 

ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು . ಇದು ತತ್ವಶಾಸ್ತ್ರದ ಎಲ್ಲ ರಹಸ್ಯವನ್ನು ಬಸಿರಲ್ಲಿ ಬಚ್ಚಿಟ್ಟುಕೊಂಡ ಸಂಖ್ಯೆ. ಮಹಾಭಾರತದಲ್ಲಿ ಕೂಡ ಈ ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ.
ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ.


ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ,ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ.


ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ಮಾನವನ ಜೀವನ್ಮೊಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ. ಬನ್ನಿ ಇಂತಹ ಅಪೂರ್ವ ಕೃತಿಯನ್ನು ನಮ್ಮ ಯೋಗ್ಯತೆ ಇದ್ದಷ್ಟು ಅರಿಯಲು ಪ್ರಯತ್ನಿಸೋಣ.

ಕೃಪೆ: ಶ್ರೀ ಬನ್ನಂಜೆ ಗೋವಿಂದಾಚಾರ್ಯ.


--------------------- Hari Om ----------------------

Wednesday, July 15, 2026

ಜಪ ---- JAPA

 

ಜಪ ---- JAPA


'ಜಪ' ಎಂಬುದು ಸಂಸ್ಕೃತ ಪದವಾಗಿದ್ದು, ಇದು ಮಂತ್ರ ಅಥವಾ ದೈವಿಕ ನಾಮದ ಧ್ಯಾನಪೂರ್ವಕ ಪುನರಾವರ್ತನೆಯ

Japa is a Sanskrit word meaning the Meditative Repetition of a 

Mantra or a Divine Name.


ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ.

"
ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು.

"
ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ

"
" ಕಾರೋ ಜನ್ಮ ವಿಚ್ಚೇದನ
"
" ಕಾರೋ ಪಾಪನಾಶಕl
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕll

"
"ಕಾರವು ಜನ್ಮ ವಿನಾಶಕವಾದದ್ದೆಂದೂ "" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಜನ್ಮ ಪವಿತ್ರವಾಗ ಬೇಕಾದರೆ "ಜಪ" ಅವಶ್ಯಕವೆಂದಾಗುತ್ತದೆ.

 

                                                               Tulasi Japa Male

 

"ಜಪ" ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ.  

ಜಪಿಸುವ "ಬೀಜ" ಮಂತ್ರವಾಗಲೀ, "ತಾರಕ" ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.

"
ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆಂದರೆ:

1) ವಾಚಕ

2) ಉಪಾಂಶು

3) ಮಾನಸೀ ಜಪ.

ವಾಚಕ: ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು.
ಉಪಾಂಶು:ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು.
ಮಾನಸಿಕ ಜಪ: ಮನಸ್ಸಿನಲ್ಲಿ ಧ್ಯಾನಿಸುವುದು.
ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು. ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ. ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆಂದು ಕರೆಯಲಾಗುತ್ತದೆ.

ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ ಹೀಗಿದೆ "ಗು" ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) "ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.

ಗುರುವು ಉಪದೇಶ ಮಾಡುವ ಮಂತ್ರವು, a) ಏಕಾಕ್ಷರಿ b) ದ್ವೈಕ್ಷರಿ c) ಪಂಚಾಕ್ಷರಿ d) ಅಷ್ಟಾಕ್ಷರಿ e) ದಶಾಕ್ಷರಿ f) ಪಂಚ ದಶಾಕ್ಷರಿ g) ಶೋಡಶಾಕ್ಷರಿ. ಇವುಗಳಲ್ಲಿ ಯಾವುದೇ ಇರ ಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.

ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣ ಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ.

ಜಪಸರದಲ್ಲಿ ೧೦೮ ಮಣಿಗಳಿರ ಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.


                                                      Japa done with Tulasi male


ಜಪದಲ್ಲಿ ವಿಧಗಳಿವೆ ---- Types of Japa


1)
ನಿತ್ಯ ಜಪ
2)
ವೈಯಕ್ತಿಕ ಜಪ
3)
ಪ್ರಾಯಶ್ಚಿತ್ತ ಜಪ
4)
ಅಚಲ ಜಪ
5)
ಜಲ ಜಪ
6)
ಅಖಂಡ ಜಪ
7)
ಪ್ರದಕ್ಷಿಣ ಜಪ
8)
ಲಿಖಿತ ಜಪ
9)
ಕಾಮ್ಯ ಜಪ



ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ ಪಠಿಸಲಾಗುತ್ತದೆ.

ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು
ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರ ಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡ ಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸ ಬೇಕು.

ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (೧೦೮) ಜಪ ಮಾಡ ಬೇಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳ ನಡುವೆ ಜಪ ಮಣಿ // ಜಪಮಾಲೆ ಏನಿಸಬೇಕು.


------------------- Hari Om -------------------