Sunday, September 13, 2026

ವರಾಹ ಅವತಾರ ---- Varaha Avathara

                                                                 Lord Varaha Swamy

 

ವರಾಹ ಅವತಾರ ---- Varaha Avathara

 

ಭಾಗವತ ಪುರಾಣದ ಮೂರನೆಯ ಸ್ಕಂದದಲ್ಲಿ ಭಗವಂತನ ವರಾಹ ಅವತಾರದ ಕಥೆ ಬಂದಿದೆ. ಭೂಮಿ ಪ್ರಳಯ ಜಲದಲ್ಲಿ ಮುಳುಗುವುದು; ಭಗವಂತನು ವರಾಹರೂಪದಲ್ಲಿ ಬಂದು ಭೂಮಿಯನ್ನು ಮೇಲೆತ್ತುವುದು ಮತ್ತು ಹಿರಣ್ಯಾಕ್ಷ ವಧೆ ಇಲ್ಲಿ ಕಾಣಬರುತ್ತದೆ.

ಇತರ ಪುರಾಣಗಳಲ್ಲೂ ಈ ಕಥೆ ಬಂದಿದೆ. ಇದರಲ್ಲಿ ಒಂದು ಮಹತ್ವಪೂರ್ಣವಾದ ಸಾಂಕೇತಿಕತೆ ಅಡಗಿದಂತಿದೆ. ಪುರಾಣದಲ್ಲಿ ಬರುವ ಹೆಚ್ಚಿನ ಕಥೆಗಳು ಸಾಂಕೇತಿಕವಾಗಿಯೇ ಇರುತ್ತವೆ. ಒಂದು ಪುರಾಣ ವರಾಹಾವತಾರದ ಕಥೆಯನ್ನು ಹೀಗೆ ವರ್ಣಿಸುತ್ತದೆ:

ಒಮ್ಮೆ ಭೂಮಿ ತನ್ನ ಕಕ್ಷೆಯಿಂದ ಕಳಚಿಕೊಂಡಿತಂತೆ. ಸೃಷ್ಟಿಯಾದ ಅನೇಕ ಕಾಲದ ಅನಂತರ ನಡೆದ ಘಟನೆಯಿದು. ಪರಿಣಾಮವಾಗಿ ಭೂಮಿ ಪರಸ್ಪರ ಆಕರ್ಷಣಶಕ್ತಿಯ ಸ್ಥಿರಕೇಂದ್ರವನ್ನು ಕಳೆದುಕೊಂಡು ಕುಸಿಯತೊಡಗಿತಂತೆ. ಆಗ ಭಗವಂತ ವರಾಹರೂಪ ತೊಟ್ಟು ಬಂದ. ಭೂಮಿಯನ್ನು ಮೊದಲಿನಂತೆಯೆ ಅದರ ಕಕ್ಷೆಯಲ್ಲಿರಿಸಿದ. ಹೀಗೆ ಭೂಮಿ ಮತ್ತು ಇತರ ವಿಶ್ವಗಳ ಚಲನೆಯನ್ನು ವ್ಯವಸ್ಥೆಗೊಳಿಸಿದ. ಹೀಗೆ ಇದೊಂದು ದರ್ಶನ. ಹಲವು ಅವತಾರಗಳು ಜ್ಞಾನಿಗಳ, ಋಷಿಮುನಿಗಳ ಅರಿವಿಗೆ ಗೋಚರವಾದ ದರ್ಶನಗಳೆ. ಕಣ್ಮುಚ್ಚಿ ಧ್ಯಾನಕ್ಕೆ ಕೂತಾಗ ನಾವೂ ಹಲವು ಬಗೆಯ 'ರೂಪ'ಗಳನ್ನು ಕಾಣಬಲ್ಲೆವು. ಈ ಸಂದರ್ಭದಲ್ಲಿ ಬ್ರಹ್ಮಾದಿದೇವತೆಗಳ, ಋಷಿಗಳ 'ಒಳಗಣ್ಣಿಗೆ' ಭಗವಂತ ವರಾಹರೂಪದಲ್ಲಿ ಕಾಣಿಸಿಕೊಂಡ.



                                                                Laxmi Varaha Swamy

  

ಇನ್ನು ನಾವು ಕೇಳಿರುವ ಕಥೆಯರೂಪದಲ್ಲಿ ಈ ಘಟನೆಯನ್ನು ಮಕ್ಕಳಂತೆ ಅನುಭವಿಸೋಣ.

ತುಂಬ ಹಿಂದೆ ಹಿರಣ್ಯಾಕ್ಷನೆಂಬ ರಾಕ್ಷಸ ರಾಜ ಇದ್ದ. ಅವನು ಶಕ್ತಿವಂತನಾಗಿ ಬೆಳೆದುಬಿಟ್ಟಿದ್ದ. ಅವನು ಅಹಂಕಾರದಿಂದ ಮೆರೆಯುತ್ತಿದ್ದ. ಅವನಿಗೆ ಇಡೀ ಭೂಮಿಯನ್ನೇ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಅವನ ಬಳಿ ಬ್ರಹ್ಮನಿಂದ ಪಡೆದಿದ್ದ ವರಗಳೂ ಇದ್ದವು.

ರಾಕ್ಷಸರು ಸಾವೇ ಬೇಡ ಎಂದು ವರ ಪಡೆಯವ ಹಾಗಿರಲಿಲ್ಲ. ಹಾಗಾಗಿ ಮನುಷ್ಯನೂ ಅಲ್ಲ ಮೃಗವೂ ಅಲ್ಲದ ಜೀವದಿಂದಲೋ, ಕೋತಿಯಿಂದಲೋ, ಹಂದಿಯಿಂದಲೋ, ಸಾಮಾನ್ಯ ನರಪಿಳ್ಳೆಯಿಂದಲೋ ಬಂದ್ರೆ ಬರಲಿ ಎಂದು ಉಡಾಫೆಯಿಂದ exception ಕೇಳಿಕೋತಾ ಇದ್ರು. ಭಗವಂತ ಅದನ್ನೆಲ್ಲ ಚೆನ್ನಾಗಿ ಸ್ಟಡಿ ಮಾಡಿ, ಅವರನ್ನು ಮುಗಿಸಲು ಬರ್ತಾ ಇದ್ದ. ಅಷ್ಟು ಸ್ಟಡಿ ಮಾಡಕ್ಕೆ ಅವನಿಗೆ ತುಂಬಾ ಸಮಯ ಬೇಕಾಗ್ತಿತ್ತು. ಇಲ್ಲ ಏನ್ ಮಾಡ್ತಾನೋ ಈ ರಾಕ್ಷಸ ನೋಡೇಬಿಡೋಣ ಅಂತ ಸಾಕಷ್ಟು ತಮಾಷೆ ನೋಡಿ, ಅಪ್ಪಾ ಕಾಪಾಡಪ್ಪ ಅಂತ ಎಲ್ಲರೂ ಬಾಯಿಬಡಿದುಕೊಂಡು ವಿಪರೀತಕ್ಕಿಟ್ಟುಕೊಂಡಿತು ಅನಿಸಿದ ಮೇಲೆ ಬರ್ತಾ ಇದ್ದ. ಹಿರಣ್ಯಾಕ್ಷ ತನಗೆ ಹಂದಿಯಿಂದ ಸಾವು ಬಂದರೆ ಬರಲಿ, ಅದು ಹೇಗೆ ಹಂದಿಗೆ ತನ್ನನ್ನು ಕೊಲ್ಲಲು ಸಾಧ್ಯ ಆಗುತ್ತೆ ಅಂತ ತಾನು ಆಡಿದ್ದೇ ಆಟ ಅಂತ ಮೆರೀತಿದ್ದ.



                                                                             PIC-1

 

ಒಮ್ಮೆ ಹಿರಣ್ಯಾಕ್ಷ “ನನ್ನಲ್ಲಿರುವ ವರಗಳಿಂದ ದೇವತೆಗಳ ಶಕ್ತಿ ಕುಂದಿಸುವೆ” ಎಂದು ಗರ್ಜಿಸಿದ. ಅದಕ್ಕೆ ಅವನು ಮಾಡಿದ್ದೇನು?

ಭೂಮಿಯನ್ನು ಸಮುದ್ರಕ್ಕೆ ಎಸೆದ. ಆಗ ಪೃಥ್ವಿಯು ಮುಳುಗುತ್ತಾ ಸಮುದ್ರದ ತಳದಲ್ಲಿ ಕುಗ್ಗತೊಡಗಿತು. 'ಅಯ್ಯಯ್ಯೋ!’ ಎಂದು ದೇವತೆಗಳು ಚೀರಿದರು. 'ನಮ್ಮ ಗತಿ ಏನು’ ಎಂದು ಭೂಮಿಯ ಮೇಲಿನ ಎಲ್ಲ ಜೀವಿಗಳೂ ಭಯಭೀತರಾದರು. 'ಕಾಪಾಡು, ಕಾಪಾಡು,’ ಎಂದು ದೇವತೆಗಳು ವಿಷ್ಣುವಿನ ಮೊರೆ ಹೊಕ್ಕರು. ಆಗ ಭಗವಂತನು ವರಾಹ ಅವತಾರ ತಾಳಿದ.

ಅಸುರ ಹಿರಣ್ಯಾಕ್ಷನು ಭೂಮಿಯನ್ನು ಸಮುದ್ರಕ್ಕೆ ಎಸೆದಿದ್ದ. ಆದ್ದರಿಂದ‌ ಮೊದಲು ಅದರ ರಕ್ಷ‌ಣೆ ಮಾಡಬೇಕಾಗಿತ್ತು. ಹೀಗಾಗಿ ವರಾಹ ರೂಪದಲ್ಲಿದ್ದ ವಿಷ್ಣುವು ಗರ್ಜಿಸುತ್ತ ಜಲಪ್ರವೇಶಿಸಿದ. !, ಸಾಗರ ತಳದಲ್ಲಿ ಭೂ ಮಂಡಲ ಇದೆ” ಎಂದು ಕಂಡುಕೊಂಡ. ತತ್‌ಕ್ಷಣ ಭೂಮಿಯನ್ನು ತನ್ನ ಕೋರೆ ಹಲ್ಲುಗಳ ಮಧ್ಯೆ ಹಿಡಿದಿಟ್ಟುಕೊಂಡ. ಆ ರೀತಿ ಕೋರೆಗಳ ಮಧ್ಯೆ ಇರಿಸಿಕೊಂಡೇ ಪೃಥ್ವಿಯನ್ನು ಮೇಲಕ್ಕೆ ತಂದ. ಆಗ ರಾಕ್ಷಸ ಹಿರಣ್ಯಾಕ್ಷನು “ಎಲೆ ಮೃಗವೇ, ನೀನೇನು ಭೂಮಿಯನ್ನು ಎತ್ತುವುದು?” ಎಂದು ಹಾಸ್ಯದ ಧ್ವನಿಯಲ್ಲಿ ವರಾಹನನ್ನು ಕೆಣಕಲು ಪ್ರಯತ್ನಿಸಿದ.ಪ್ರಾಣಿಯಾದ ನೀನು ನನ್ನನ್ನು ಅದು ಹೇಗೆ ಎದುರಿಸುವೆ?” ಎಂದು ಇನ್ನಷ್ಟು ಕೆಣಕಿದ.

 

                                                                           PIC-2

 

ಹಿರಣ್ಯಾಕ್ಷ‌ನ ಮಾತಿಗೆ ವರಾಹ ಉತ್ತರಿಸಿದ, ನೀನು ಹೇಳುವಂತೆ ನಾವು ಕಾಡು ಮೃಗಗಳೇ. ನಿನ್ನಂತಹ ಬೇಟೆ ನಾಯಿಗಳಿಗಾಗಿ ಹುಡುಕುತ್ತಿದ್ದೇವೆ.” ತನ್ನನ್ನು ಕೊಲ್ಲಲು ಬಂದ ಅಸುರನಿಗೆ ವರಾಹ ಸವಾಲು ಒಡ್ಡಿದ. ಆಗ ಆ ರಾಕ್ಷಸನು ಕೆರಳಿದ ಸರ್ಪದಂತೆ ಬುಸುಗುಟ್ಟಿದ. ವರಾಹನ ಮೇಲೆ ಎರಗಿ ತನ್ನ ಗದಾಪ್ರಹಾರ ಮಾಡಿದ. ವರಾಹನಿಗೆ ಪೆಟ್ಟೂ ಕೊಟ್ಟ. ಇಬ್ಬರೂ ಕೋಪದಿಂದ ಹೋರಾಡಿದರು. ರಾಕ್ಷಸನ ಪೆಟ್ಟಿನಿಂದ ವರಾಹನು ಕಿಂಚಿತ್ತೂ ನೋವು ಅನುಭವಿಸಲಿಲ್ಲ. ಹಿರಣ್ಯಾಕ್ಷ ಮಾತ್ರ ವರಾಹ ರೂಪದ ಭಗವಂತನು ಕೊಟ್ಟ ಪೆಟ್ಟಿನಿಂದ ಕೆಳಗುರುಳಿದ. 'ಸದ್ಯ, ರಾಕ್ಷಸನ ಸಂಹಾರವಾಯಿತಲ್ಲಾ’ ಎಂದು ಎಲ್ಲರಿಗೂ ಸಮಾಧಾನ.

ಕೃಪೆ: ಬನ್ನಂಜೆ ಗೋವಿಂದಾಚಾರ್ಯರ ಸಂಗ್ರಹ ಭಾಗವತ ನೀಡಿದ ಹೊಳಹು ಮತ್ತು ಚಿಕ್ಕಂದಿನಿಂದ ಕಥೆ ಓದಿ ಕೇಳಿದ್ದ ನೆನಪುಗಳ ಜೊತೆಯಲ್ಲಿ.


---------------------- Hari Om -----------------------

 

 
 

Thursday, September 10, 2026

ಹನುಮಂತನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಮಂಗಳವಾರ ಯಾವ ಮಂತ್ರಗಳನ್ನು ಪಠಿಸಬೇಕು ಗೊತ್ತೇ.-- Anjaneya Mantras to be Recited on Every Tuesdays

 

                                                                      Lord Anjaneya

 

ಹನುಮಂತನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ 

ನಾವು ಮಂಗಳವಾರ ಯಾವ ಮಂತ್ರಗಳನ್ನು ಪಠಿಸಬೇಕು 

ಗೊತ್ತೇ.


Anjaneya Mantras to be Recited on Every Tuesdays

 

ಮಂಗಳವಾರ ಪಠಿಸಬೇಕಾದ ಮಂತ್ರ

ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಆಂಜನೇಯ ಸ್ವಾಮಿಗೆ ಮತ್ತು ನವಗ್ರಹಗಳಲ್ಲಿ ಒಂದಾದ ಮಂಗಳ ಗ್ರಹಕ್ಕೆ ಸಮರ್ಪಿಸಲಾಗಿದೆ. ಆಂಜನೇಯ ಸ್ವಾಮಿಯು ನಮ್ಮೆಲ್ಲಾ ಸಂಕಷ್ಟಗಳನ್ನು ದೂರ ಮಾಡುವುದರಿಂದ ಆತನನ್ನು ಸಂಕಟಮೋಚನ ಎಂದು ಕರೆಯಲಾಗುತ್ತದೆ. ಹನುಮಂತನ ಮತ್ತು ಮಂಗಳನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಮಂಗಳವಾರ ಯಾವ ಮಂತ್ರಗಳನ್ನು ಪಠಿಸಬೇಕು ಗೊತ್ತೇ..? ಮಂಗಳವಾರ ನೀವು ಈ ಮಂತ್ರವನ್ನು ಪಠಿಸಬೇಕು.

ಮಂಗಳ ಮಂತ್ರ:


''ಅಂ ಅಂಗಾರಕಾಯ ಮಹಾಭಾಗಾಯ ನಮಃ''


ಮಂಗಳ ಮಂತ್ರವನ್ನು ಪಠಿಸುವುದು ಹೇಗೆ..?


ಮಂಗಳವಾರದಂದು ಸೂರ್ಯೋದಯದ ಸಮಯದಲ್ಲಿ ಈ ಮಂತ್ರವನ್ನು ಪಠಿಸಿ.
ಮಂತ್ರವನ್ನು ಪ್ರಾರಂಭಿಸುವ ಮುನ್ನ ಗಣಪತಿಯನ್ನು ಪೂಜಿಸಿ.
ಈಶಾನ್ಯ ದಿಕ್ಕಿಗೆ ಮುಖ ಮಾಡಿ ಕುಳಿತು ನೀವು ಈ ಮಂತ್ರವನ್ನು ಪಠಿಸಬೇಕು.
ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ, ಈ ಮಂತ್ರವನ್ನು ಪಠಿಸಬೇಕು.


ಒಂದು ಕಲಶಕ್ಕೆ ನೀರು, ಕೆಂಪು ಹೂವುಗಳು ಮತ್ತು ಕೆಂಪು ಚಂದನವನ್ನು ಬೆರೆಸಿ ಕಡುಗೆಂಪು

ಬಟ್ಟೆಯ ಮೇಲೆ ಕಲಶವನ್ನು ಸ್ಥಾಪಿಸಿ. ಹಸುವಿನ ತುಪ್ಪದಿಂದ ದೀಪವನ್ನು ಬೆಳಗಿಸಿ.
ಕೆಂಪು ಚಂದನ, ಕೆಂಪು ಹೂವು, ಅಕ್ಷತೆ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿಯನ್ನು ಅರ್ಪಿಸಿ.
ಇದರ ಬಳಿಕ ಮೇಲೆ ಹೇಳಲಾದ ಮಂತ್ರವನ್ನು 108 ಬಾರಿ ಜಪಿಸಿ. 21 ಮಂಗಳವಾರಗಳವರೆಗೆ ನೀವು ಇದನ್ನು ಮಾಡಬೇಕು.


ಮಂತ್ರವನ್ನು ಪಠಿಸಿದ ನಂತರ ಕಲಶವನ್ನು ಅರಳಿ ಮರದ ಕೆಳಗೆ ಇಡಿ ಅಥವಾ ಕಲಶದಲ್ಲಿನ ನೀರನ್ನು ಅರಳಿ ಮರಕ್ಕೆ ಅರ್ಪಿಸಿ.

 

                                                                    Lord Hanuman


ಮಂಗಳವಾರ ಮಂಗಳ ಮಂತ್ರ ಪಠಿಸುವುದರ ಪ್ರಯೋಜನಗಳು:


ಮಂಗಳ ಮಂತ್ರ ಪಠಿಸುವುದರಿಂದ ಜಾತಕದಲ್ಲಿನ ಮಂಗಳ ದೋಷ ದೂರಾಗುವುದು.
ಜೀವನದಲ್ಲಿನ ಅಡೆತಡೆಗಳನ್ನು ದೂರಾಗಿಸಿ, ಸಂತೋಷವನ್ನು ನೀಡುತ್ತದೆ.
ಮಂಗಳ ಮಂತ್ರವು ಓರ್ವ ವ್ಯಕ್ತಿಯನ್ನು ಬಡತನ, ಸಾಲ, ಚರ್ಮರೋಗಗಳಂತಹ ಸಮಸ್ಯೆಗಳಿಂದ ಮುಕ್ತಗೊಳಿಸುತ್ತದೆ.


ಮಂಗಳ ಮಂತ್ರದ ಪಠಣವು ಧೈರ್ಯ, ಚೈತನ್ಯ ಮತ್ತು ಗೌರವವನ್ನು ನೀಡುತ್ತದೆ.
ಮಂಗಳ ಮಂತ್ರವು ಕ್ರೋಧ, ಸುಳ್ಳು ಮತ್ತು ಅಸೂಯೆಯನ್ನು ತೆಗೆದುಹಾಕುತ್ತದೆ ಮತ್ತು ಧೈರ್ಯವನ್ನು ನೀಡುತ್ತದೆ.


ಜೀವನದ ಗುರಿ ಮತ್ತು ಉದ್ದೇಶವನ್ನು ಸಾದಿಸಲು ಸಹಕಾರಿ.
ಜೀವನದಲ್ಲಿ ಎಂತಹುದ್ದೇ ಸಮಸ್ಯೆಗಳಿದ್ದರೂ ಅದನ್ನು ನಿಭಾಯಿಸಲು ನಿಮಗೆ ಸಹಾಯವನ್ನು ಮಾಡುತ್ತದೆ.


ಮಂಗಳವಾರ ಈ ಮೇಲಿನ ಮಂತ್ರವನ್ನು ಪಠಿಸುವುದು ಕೇವಲ ಮಂಗಳ ದೋಷವನ್ನು ನಿವಾರಿಸಿ, ಜೀವನದಲ್ಲಿ ಪ್ರಗತಿ ಸಾಧಿಸುವಂತೆ ಮಾಡುವುದು ಮಾತ್ರವಲ್ಲ, ಹನುಮಂತನ ಆಶೀರ್ವಾದವನ್ನು ಪಡೆದುಕೊಳ್ಳಲು ಕೂಡ ಸಹಕಾರಿಯಾಗಿದೆ.

----------------------------- Hari Om ----------------------


Monday, September 7, 2026

ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು -- Benefits of eating while sitting on the floor

                                                               Having Food on the Floor
 

ನೆಲದ ಮೇಲೆ ಕುಳಿತು ಊಟ ಮಾಡುವುದರ ಲಾಭಗಳು

Benefits of eating while sitting on the
floor

ಊಟ ಮಾಡುವುದು ಕೇವಲಒಂದುಚಟುವಟಿಕೆಎಂದಾಗಿರುವ ಈ ಕಾಲದಲ್ಲಿ ನೆಲದ ಮೇಲೆ ಕುಳಿತು ಊಟಮಾಡುವುದು ಎಂದರೆ ಕಷ್ಟದ ಕೆಲಸದಂತಾಗಿದೆ.ಅದರಲ್ಲೂ ಯುವಕರಲ್ಲಿಅಸಡ್ಡೆಯ ಜೊತೆಗೆ ಅಸಾಧ್ಯದ ಭಾವನೆಯೇ ಎದ್ದು ಕಾಣುತ್ತದೆ ಈಗಿನ ಜೀವನ ಶೈಲಿಯಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಊಟಕ್ಕೆ ಕೂರುವುದು ಎಂದರೆ ಅದು ಎಲ್ಲರ ಸೌಭಾಗ್ಯವೆ ಸರಿ.


ನಮ್ಮ ಸನಾತನ ಧರ್ಮದಲ್ಲಿ ಊಟ ಎಂದರೆ ಅದೊಂದು ಗೌರವ ಪೂರ್ವಕವಾಗಿ ನಡೆಸುವ ದೈನಂದಿನ ಯಜ್ಞವಿದ್ದಂತೆ.ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆ ಅಲ್ಲ.ನೆಲದ ಮೇಲೆ ಪದ್ಮಾಸನದಲ್ಲಿ {ಸುಖಾಸನ}ಕುಳಿತು ಕೈ ಮುಗಿದು ಪ್ರಾರ್ಥಿಸಿ , ನಿಶ್ಚಿಂತೆಯಿಂದ ಬರಿಗೈಯಲ್ಲಿ ಸೇವಿಸುವ ಆಹಾರನಮ್ಮ ಜಠರಕ್ಕೆ, ಅಷ್ಟೇ ಅಲ್ಲದೆ ಆತ್ಮಕ್ಕೂ ತೃಪ್ತಿ ನೀಡುವುದು .ಊಟದ ನಂತರ "ಅನ್ನ ದಾತೋ ಸುಖೀ ಭವ" ಎಂಬ ಒಂದು ವ್ಯಾಖ್ಯಾನ ಅಡಿಗೆ ತಯಾರಿಸಿದವರ ಪಾಲಿಗೆ ಸಾರ್ಥಕತೆಯ ಅನುಭವನೀಡುತ್ತದೆ.

 

                                                                PIC-1

 

ನೆಲದ ಮೇಲೆ ಕುಳಿತು ಊಟ ಮಾಡುವುದರ ಹಿಂದಿನ ವೈಜ್ಞಾನಿಕ

 ವಿಚಾರ

The scientific reason behind eating while sitting on the floor.


1) ಯೋಗಾಸನದಲ್ಲಿ ಪ್ರಮುಖ ಆಸನವಾದ ಪದ್ಮಾಸನದಲ್ಲಿ ಕುಳಿತಾಗ ನಮ್ಮ ಕಿಬ್ಬೊಟ್ಟೆಯ ಮೇಲಿನ ಭಾಗಗಳೆಲ್ಲವೂ ಬೆನ್ನು ಹುರಿಯ ಸಹಾಯದಿಂದ ನೇರವಾಗುತ್ತದೆ ಹಾಗು ಪೆಲ್ವಿಕ್ ಸ್ನಾಯುಗಳು ಹಿಗ್ಗುತ್ತದೆ.ಇದರಿಂದ ನಮ್ಮ ಜೀರ್ಣಾಂಗ ವ್ಯೂಹವು ಉತ್ತಮ ಸ್ಥಿತಿಯನ್ನು ತಲುಪಿ ಜೀರ್ಣಕ್ಕೆ ಸಹಕರಿಸುತ್ತದೆ.


2) ನೆಲದ ಮೇಲೆಕುಳಿತಾಗ ಮನಸ್ಸು ಪ್ರಶಾಂತಗೊಳ್ಳುತ್ತದೆ ಹಾಗು ಸ್ಥಿರತೆಯನ್ನು ವೃದ್ಧಿಗೊಳಿಸಿ ಆಹಾರದತ್ತ ಗಮನಹರಿಸಲು ಸಾಧ್ಯವಾಗುತ್ತದೆ.

3) ನಮ್ಮಕುಟುಂಬದಸದಸ್ಯರೊಡನೆ ಸಮಯ ಕಳೆಯಲು ಇದೊಂದು ಸುಯೋಗವಿದ್ದಂತ್ತೆ.ಎಲ್ಲರ ಅಭಿರುಚಿ ತಿಳಿಯುವ ವೇದಿಕೆಯೂ ಹೌದು.

4) ಕೆಲವು ಅಧ್ಯಯನಗಳ ಪ್ರಕಾರ ಕೆಳಗೆಕೂತು ಊಟಮಾಡುವವರು ಯಾವುದೇ ಸಹಾಯವಿಲ್ಲದೆ ಏಳಲು ಶಕ್ತರಾಗಿದಲ್ಲಿ ಅವರ ಆಯಸ್ಸು ವೃದ್ಧಿಸುತ್ತದೆ.


5) ಮೊಣಕೈ ಹಾಗು ಕಾಲುಗಳಿಗೆ ವ್ಯಾಯಾಮ ದೊರೆಯುತ್ತದೆ,ಇದರಿಂದ ಸಂಧಿವಾತ ಹಾಗು ಓಸ್ಟಿಯೋಪೋರೆಸಿಸ್ಕಾಯಿಲೆಗಳನ್ನು ತಡೆಯಬಹುದು.


6) ಬರಿಗೈಯಲ್ಲಿ ಊಟ ಮಾಡುವಾಗ ನಮ್ಮ ಐದು ಬೆರಳುಗಳು ಸೇರಿ ಒಂದು ಮುದ್ರೆ ರಚನೆಗೊಳ್ಳು ತ್ತದೆ ಇದು ಪಂಚೇಂದ್ರಿಯಗಳನ್ನು ಪ್ರೇರೇಪಿಸಿ ಮೆದುಳಿಗೆ ಸಂದೇಶ ರವಾನಿಸುತ್ತದೆ,ಆಗ ಜೀರ್ಣ ಕ್ರಿಯೆಗೆ ಬೇಕಾದ ಜೀರ್ಣರಸಗಳು, ಸಹಜವಾಗಿ ಬಿಡುಗಡೆಗೊಳ್ಳುತ್ತದೆ.


7) ಕೈಯಲ್ಲಿ ತಿನ್ನುವಾಗ ಆಹಾರದ ಬಿಸಿಹಾಗೂಮೃದುತ್ವ ನಮ್ಮ ಗಮನಕ್ಕೆ ಬರುತ್ತದೆ.


8) ವೈದಿಕ ಶಾಸ್ತ್ರದ ಪ್ರಕಾರ ನಮ್ಮ ಕೈ ಬೆರಳುಗಳು ಪಂಚ ತತ್ವಗಳಿಂದಕೂಡಿದೆಹೆಬ್ಬೆರಳು-ಅಗ್ನಿ,ತೋರುಬೆರಳು ವಾಯು, ಮಧ್ಯಬೆರಳು-ಆಕಾಶ,ಉಂಗುರ ಬೆರಳು -ಭೂಮಿ,ಕಿರುಬೆರಳು - ನೀರು.


9) ಊಟ ಮಾಡುವಾಗ ಬಾಗಿ ಏಳುವಪರಿಆಹಾರವನ್ನು ಸುಲಭವಾಗಿ ಜಠರಕ್ಕೆ ಜಾರಲು ಸಹಕರಿಸುತ್ತದೆ, ಹಾಗೂ ಆರೋಗ್ಯ ವೃದ್ಧಿಯಾಗಿ ದೀರ್ಘಾಯುಷ್ಯನ್ನು ಪಡೆಯಬಹುದು.


------------------------ Hari Om --------------------------

 
 

Sunday, September 6, 2026

ಧನ್ವಂತರಿ ಶ್ರೀ ನಾರಾಯಣ ದೇವಸ್ಥಾನ--ಕುದುರೆಗೆರೆ -- Dhanvantari Sri Narayana Temple -- Kuduregere

 

                                                                   Lord Dhanvantari Deva

 

ಧನ್ವಂತರಿ ಶ್ರೀ ನಾರಾಯಣ ದೇವಸ್ಥಾನ--ಕುದುರೆಗೆರೆ

Dhanvantari Sri Narayana Temple -- Kuduregere

 

    Lord Dhanvantari

 

ಕುದುರೆಗೆರೆಯಲ್ಲಿರುವ ಧನ್ವಂತರಿ ದೇವಾಲಯವನ್ನು ಶ್ರೀ ಧನ್ವಂತರಿ 

ನಾರಾಯಣ ಸ್ವಾಮಿ ದೇವಾಲಯ ಅಥವಾ ಧನ್ವಂತರಿ ಶ್ರೀ ನಾರಾಯಣ 

ಸಂಸ್ಕೃತಿ ಭವನ (ಶ್ರೀ ನಾರಾಯಣ ಧಾಮ) ಎಂದು ಕರೆಯಲಾಗುತ್ತದೆ

ಇದು ಕರ್ನಾಟಕದ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿ ಕುದುರೆಗೆರೆ ಪ್ರದೇಶದಲ್ಲಿದೆ. 

 

                                                                 God Ananthsayana

                                                                  Lord Dattatreya


 

                                                                  Lord Dakshina Murthi


ಉತ್ತಮ ಆರೋಗ್ಯ ಮತ್ತು ಗುಣಮುಖರಾಗಲು ಪ್ರಾರ್ಥಿಸುವ ಜನರು ಭೇಟಿ
ನೀಡುವ, ನಗರದ ಹೊರವಲಯದಲ್ಲಿರುವ ಶಾಂತಿಯುತ ಆಧ್ಯಾತ್ಮಿಕ
ಕೇಂದ್ರವಿದು. ಇದನ್ನು ಶ್ರೀ ಆದಿಚುಂಚನಗಿರಿ ಮಠವು ಸುಸ್ಥಿತಿಯಲ್ಲಿ 
ನಿರ್ವಹಿಸುತ್ತಿದೆ..
 
Our Group Photo

ಬೆಂಗಳೂರಿನಿಂದ ಈ ದೇವಾಲಯವನ್ನು ತಲುಪಲು ಯಾವುದೇ 
ಬಸ್ ಸೌಲಭ್ಯವಿಲ್ಲ.ಇದು ಬೆಂಗಳೂರಿನಿಂದ ಕೇವಲ 24 ಕಿಲೋಮೀಟರ್
ದೂರದಲ್ಲಿದೆ.  
PIC-1
PIC-2

 
PIC-3
 

It is just 24 Kms from Bangalore and a quiet suburban spiritual

center visited by people praying for Good Health and Healing. 

Well-maintained by Sri Adichunchanagiri Mutt.There are No bus facilities available to reach the temple from Bangalore.

 

 

          PIC-4

                                                        PIC-5


 

                                                          PIC-6

 

ವಿಳಾಸ: ಕುದುರೆಗೆರೆ, ತಮ್ಮೇನಹಳ್ಳಿ , ಸೋಸುವೆ ಘಟ್ಟ ಕ್ರಾಸ್
ಮಾದನಾಯಕನ ಹಳ್ಳಿ, ಬೆಂಗಳೂರು, ಕರ್ನಾಟಕ -- 562162


Address: Kuduregere, Thammenahalli Village, Sosuve ghatta Cross, 

Madanayakana Halli, Bengaluru, Karnataka 562162

 

                            
                                                          PIC-7

 

                                                        PIC-8


 

                                                        PIC-9

ದಯವಿಟ್ಟು ಈ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಧನ್ವಂತರಿ ದೇವರ
ಆಶೀರ್ವಾದವನ್ನು ಪಡೆಯಿರಿ.


Please visit this Temple and get Blessings from Lord Dhanvantari Deva.

 

 

                                                      PIC-10

 


----------------------- Hari Om --------------------


 

 

 



  


 


 

 



Saturday, September 5, 2026

ಚಿತ್ರಾಹುತಿ -- Chitrahuti

 

                                                                       Chitrahuti 

 

 

ಚಿತ್ರಾಹುತಿ -- Chitrahuti


ಊಟಕ್ಕೆ ಕುಳಿತಾಗ ಚಿತ್ರಾಹುತಿ ನೀಡುವ ಕ್ರಮ..

The practice of offering a symbolic portion of the
Meal before eating!


ಸನಾತನ ಧರ್ಮದಲ್ಲಿ ಮಾನವರು ಪಶು ಪಕ್ಷಿ ಗಳಂತೆ ಆಹಾರವನ್ನು ಎಲೆ ಅಥವ ತಟ್ಟೆಯಲ್ಲಿ ಹಾಕಿದೊಡನೇ ಮುಕ್ಕಲು ಪ್ರಾರಂಭಿಸುವುದಿಲ್ಲ ..ಅವರು ಊಟವನ್ನು ಒಂದು ಯಜ್ಞ ಎಂದು ಭಾವಿಸುತ್ತಾರೆ. ಪಂಡಿತರಿಂದ ಒಬ್ಬ ಸಾಮಾನ್ಯ ಗೃಹಸ್ತರಾದಿಯಾಗಿ ಅವರ ಊಟದ ಪದ್ಧತಿ ಹೀಗಿರುತ್ತದೆ ----

ಭೋಜನ ಸ್ವೀಕಾರಕ್ಕೂ ಮೊದಲು -- Before Partaking of the Meal



1) ಪರಿಷಿಂಚನೆ

ಎಲ್ಲಾ ಪದಾರ್ಥ ವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:

ಓಂ ಭೂರ್ಭುವಃ ಸ್ವಃ |

ಸತ್ಯಂ ತ್ವರ್ತೇ ನ ಪರಿಷಿಂಚಾಮಿ || (ಹಗಲಿಗೆ)
ಋತಂ ತ್ವಾ ಸತ್ಯೇನ ಪರಿಷಿಂಚಾಮಿ ||(ರಾತ್ರಿಗೆ)

ವಿಷ್ಣೋರನ್ನಂ ರಕ್ಷಸ್ವ

ಈ ಮಂತ್ರ ಹೇಳಿಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ಸುತ್ತ ವೃತ್ತಾಕಾರದಲ್ಲಿ ನೀರು ಸುತ್ತುಗಟ್ಟುವದು. ಇದುವೇ ಪರಿಷಿಂಚನೆ.

 

                                         Sprinkling Water around the Food before Eating

 

2) ಹವಿಸ್ಸು ಸಮರ್ಪಣೆ:

ಬಾಳೆ ಎಲೆಯ ಬಲ ಭಾಗದಲ್ಲಿ ಪ್ರಾರಂಭ ಮಾಡಿ ಯಮಾದಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ.

ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |
ಈ ನಾಲ್ಕು ಮಂತ್ರದಿಂದ

ಕೆಳಗಿನಿಂದ ಮೇಲಕ್ಕೆ ಉದ್ದ ನೆಟ್ಟಗೆ ಸಾಲಾಗಿ ನಾಲ್ಕು ಸಲ ಕಿಂಚಿತ್ ಅನ್ನ ಇಡುವುದು

ಚಿತ್ರಾಯ ನಮ:
ಚಿತ್ರಗುಪ್ತಾಯ ನಮ:
ಯಮಾಯ ನಮ:
ಯಮಧರ್ಮಾಯ ನಮ:

ಈ ನಾಲ್ಕು ಮಂತ್ರದಿಂದ ಕೆಳಗಿನಿಂದ ಮೇಲಕ್ಕೆ ಉದ್ದ ಸಾಲಾಗಿ ನಾಲ್ಕು ಕಡೆಗಳಲ್ಲಿಟ್ಟ ಅನ್ನದ ಮೇಲೆ ಕಿಂಚಿತ್ ನೀರು ಬಿಡುವುದು

 

                                                               another Picture

3) ಪ್ರಾರ್ಥನೆ:

ಬಲ ಕೈಲಿ ನೀರು ಹಿಡಿದುಕೊಂಡು ಈ ಕೆಳಗಿನ ಮಂತ್ರ ಪ್ರಾರ್ಥನೆ (ಅಭಿಮಂತ್ರಣೆ) ಮಾಡಿ
ಆ ನೀರನ್ನು ಶಬ್ದ ಮಾಡದೆ ಕುಡಿಯಬೇಕು.

'ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ' ಉತ್ತಿಷ್ಠ, ಲೋಹಿತ, ಪಿಂಗಲಾಕ್ಷ ,ಅಜಪುರುಷ, ಅಮೃತಋಷೀ, ಸತ್ಯೋದೇವತಾ,ಗಾಯತ್ರೀ ಛಂಧಃ, ಅಮೃತೋಪಸ್ತರಣಮಸಿ ಸ್ವಾಹಾ ||


                                                                    Chitrahuti-1

 

4) ಅನ್ನಪ್ರಾಶನ:

ಓಂ ಪ್ರಾಣಾಯ ಸ್ವಾಹಾ ||
ಓಂ ಅಪಾನಾಯ ಸ್ವಾಹಾ ||
ಓಂ ವ್ಯಾನಾಯ ಸ್ವಾಹಾ ||
ಓಂ ಉದಾನಾಯ ಸ್ವಾಹಾ ||
ಓಂ ಸಮಾನಾಯ ಸ್ವಾಹಾ ||

(ಅಗುಳು ನುಂಗುವುದು) ಈ ಮೇಲಿನ ಮಂತ್ರದಿಂದ
ಒಂದೊಂದು ಮಂತ್ರಕ್ಕೂ ಸ್ವಲ್ಪ ಸ್ವಲ್ಪ ಅನ್ನವನ್ನು ಭಕ್ಷಿಸುವುದು

 

                                                                     PIC-1   

5). ಆಪೋಶನ :


ದೇವರ ಪ್ರಸಾದವೆಂದು ಭಾವಿಸಿ ಊಟ ಮಾಡುವುದು ಮತ್ತು ಊಟ ಮಾಡುವಾಗ
ಭಗವಂತನ ಮಹಿಮೆಯನ್ನು ಕೀರ್ತಿಸುವುದು.


To Eat Food or Meal as Prasadam is a  God's Gift and Reciting Glory of the Lord 

in between while having the Meal.


--------------------------- Hari Om -----------------------

      
 


 
 

 

 
 

Friday, September 4, 2026

ಕೃಷ್ಣಾಷ್ಟಮಿಯ ಅರ್ಘ್ಯ – Krishnashtami Arghya

 

                                                                Krishnasthami Arghya

 

ಕೃಷ್ಣಾಷ್ಟಮಿಯ ಅರ್ಘ್ಯ – Krishnashtami Arghya

ಕೃಷ್ಣಾಷ್ಟಮಿ ದಿನದಿಂದ ಅರ್ಘ್ಯ ನೀಡಿದರೆ ಸಮಸ್ತ ಭೂಮಂಡಲ ದಾನ ಮಾಡಿದ ಪುಣ್ಯ ಬರುತ್ತದೆ.

ಭವಿಷ್ಯತ್ ಪುರಾಣ ಕೃಷ್ಣಾಷ್ಟಮಿಯಂದು ಮಾಡಿದ ಉಪವಾಸ ಇಪ್ಪತ್ತು ಕೋಟಿ ಏಕಾದಶಿ ಮಾಡಿದ ಪುಣ್ಯಕ್ಕೆ ಸಮ. ಆದರೆ ಕೃಷ್ಣಾಷ್ಟಮಿ ಮಾತ್ರ ಉಪವಾಸ ಮಾಡಿ ಏಕಾದಶಿಯನ್ನು ಬಿಡುವ ಹಾಗಿಲ್ಲ. ಬಿಟ್ಟರೆ ಪಾಪ ಬರುತ್ತೆ.

ಪರಮಾತ್ಮನ ವಿವಿಧ ರೂಪಗಳಲ್ಲಿ , ಅವತಾರಗಳಲ್ಲಿ ಭೇದ ಚಿಂತನೆ ಮಾಡಬಾರದು. ಆದರೂ ಕಾಲರೀತ್ಯ ಕೃಷ್ಣಾವತಾರ ಕಲಿಯುಗಕ್ಕೆ ಹತ್ತಿರವಿರುವುದರಿಂದ , ಅರ್ಘ್ಯ ಸಮರ್ಪಿಸಿ ಉಪವಾಸ ಮಾಡಬೇಕು.

ಕೃಷ್ಣಾಷ್ಟಮಿ ದಿನ ಪೂರ್ತಿ ಉಪವಾಸ ಮಾಡತಕ್ಕದ್ದು. ರಾತ್ರಿ ಅರ್ಘ್ಯ ಕೊಟ್ಟು ಮೇಲೆ ಫಲಾಹಾರ ಮಾಡಬಹುದಾ ? ಇಲ್ಲ. ಅರ್ಘ್ಯ ನಂತರ ತೀರ್ಥ ಸ್ವೀಕರಿಸಿ, ಅಂಗಾರ ಅಕ್ಷತೆಯನ್ನು ಧರಿಸಿ, ಶಯನ ಮಾಡಬಹುದು.

ಕೃಷ್ಣಾರ್ಘವನ್ನು ಚಂದ್ರೋದಯ ನಂತರವೇ ಕೊಡತಕ್ಕದ್ದು.

ನೈವೇದ್ಯ ದೇವರಿಗೆ ಮಾತ್ರ. ರಮಾನೈವೇದ್ಯ, ವೈಶ್ವದೇವ, ಹಸ್ತೋದಕ, ಬ್ರಹ್ಮಯಜ್ಞ ಇವುಗಳನ್ನು ಮಾರನೇ ದಿನವೇ ಮಾಡತಕ್ಕದ್ದು. ಉತ್ತರಾದಿ ಮಠ ಮತ್ತು ರಾಯರ ಮಠದವರು ತಿಥ್ಯಾಂತೇ ರಮಾ ನೈವೇದ್ಯಾದಿಗಳ ಮಾಡಬೇಕು.

ಯೋಗಾಯ ಯೋಗಪತಯೇ ಯೋಗೇಶ್ವರಾಯ ಯೋಗ ಸಂಭವಾಯ ಶ್ರೀ ಗೋವಿಂದಾಯ ನಮ: |

ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ ದೇವಕೀಂ ನಂದಗೋಪಂ ಯಶೋದಾಂ ಚ ಸುಭದ್ರಾಂ ತತ್ರ ಪೂಜಯೇತ್ |

ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇದೇವಕೀ ಸಹಿತ ಶ್ರೀ ಕೃಷ್ಣಾಯ ನಮ: | ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ಸಮರ್ಪಯಾಮಿ | (ಮೂರು ಸಾರಿ ಅರ್ಘ್ಯ ಕೊಡಬೇಕು)

ಕ್ಷೀರೋದಾರ್ಣವ ಸಂಬೂತ ಅತ್ರಿನೇತ್ರ ಸಮುದ್ಭವ ಗೃಹಾಣಾರ್ಘ್ಯಂ ಮಯಾ ದತ್ತ ರೋಹಿಣೀ ಸಹಿತಾಯ ಶಶಿನೇ ನಮ: | ರೋಹಿಣೀಸಹಿತಾಯ ಚಂದ್ರಮಸೇ ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ |

 

ಶ್ರೀ ಕೃಷ್ಣ ಪರಮಾತ್ಮನ ದುಷ್ಟ ನಿಗ್ರಹ

ಪೂತನಾಜೀವಿತಹರ : ದುರ್ಗೆಯಿಂದ ಕೃಷ್ಣನು ಬೇರೊಂದು ಕಡೆ ಬೆಳೆಯುತ್ತಿರುವ ವಿಷಯವರಿತ ಕಂಸ ತನ್ನ ಭೃತ್ಯಳಾದ ಪೂತನೆಯನ್ನು ಕೃಷ್ಣ ಸಂಹಾರಾರ್ಥ ನಿಯೋಜಿಸಿದ. ಕಂಸನ ದಾಸಿ ಪೂತನಿ ಮಾಯೆಯಿಂದ ಸ್ಫುರದ್ರೂಪಿಯಾಗಿ ವಿಷದ ಸ್ತನ್ಯಪಾನ ಮಾಡಿಸುತ್ತಾ ಮಕ್ಕಳನ್ನು ಕೊಲ್ಲುತ್ತಾ ಬಂದಳು. ಕೃಷ್ಣನನ್ನು ಎತ್ತಿಕೊಂಡಳು. ಕೃಷ್ಣನಿಗೆ ಸ್ತನ್ಯಪಾನ ಮಾಡಿಸುವ ನೆಪದಲ್ಲಿ ವಿಷವನುಣಿಸಿದಳು. ಕೃಷ್ಣನಾದರೋ ಹಾಲು ಹೀರುತ್ತಾ ಆಕೆಯ ಪ್ರಾಣವನ್ನೂ ಹೀರಿದನು. ಪೂತನೆಯು “ಹೋ” ಎಂದು ಅರಚುತ್ತಾ ನಿಜರೂಪದಲ್ಲಿ ಬಿದ್ದಾಗ, ಅವಳ ದೇಹ ಒಂದು ಯೋಜನೆವರೆಗೂ ಹರಡಿ ಬಿದ್ದು ಮರಗಿಡಗಳೆಲ್ಲ ಬಿದ್ದುಹೋಯಿತು. ಅವಳ ದೇಹದ ಮೇಲೆ ಕುಳಿತು ಕೃಷ್ಣ ಆಟವಾಡುತ್ತಿದ್ದನು. ಈ ಪೂತನಿಯಲ್ಲಿ ಜೀವದ್ವಯಾವೇಷವಿದ್ದು ರಾಕ್ಷಸಿ ಪೂತನಿ ನರಕಕ್ಕೆ ಹೋದರೆ, ಊರ್ವಶಿಯು ಸ್ವರ್ಗ ಸೇರಿದಳು.

 

                                                                 Lord Krishna ( Udupi )

 

ದ್ಯೂತದ ಕಾಲದಲ್ಲಿ ಕೃಷ್ಣ ಎಲ್ಲಿದ್ದ?

ಸಾಳ್ವ ಮಹಾರಾಜ ದ್ವಾರಕೆಯನ್ನು ಮುತ್ತಿಗೆ ಹಾಕಿದ್ದರಿಂದ ಅಲ್ಲಿಗೆ ತೆರಳಿ ಅವನೊಂದಿಗೆ ಯುದ್ಧನಿರತನಾಗಿದ್ದರಿಂದ ಕೃಷ್ಣ ದ್ಯೂತಕಾಲ ದಲ್ಲಿ ಅಲ್ಲಿರಲಿಲ್ಲ. ಕೃಷ್ಣ ಸರ್ವಶಕ್ತ, ಸರ್ವನಿಯಾಮಕ ಆದರೂ ಲೋಕರೀತ್ಯ ತಾನು ದೂರ ಇದ್ದುದರಿಂದ ದ್ಯೂತದ ವಿಷಯ ತಿಳಿಯಲಿಲ್ಲ ಎಂದು ವಿಡಂಬನೆ ಮಾಡಿದ. ಕೃಷ್ಣನಿಗೆ ನಿಜಕ್ಕೂ ಅದು ಅಜ್ಞಾತವಿರಲಿಲ್ಲ ಎಂಬುದಕ್ಕೆ ತಾನಾಗಿಯೇ ದ್ರೌಪದಿಗೆ ಅಕ್ಷಯವಸ್ತ್ರ ನೀಡಿದ್ದು ನಿದರ್ಶನ.

ಸಾಳ್ವ ವಧೆ – ಸಾಳ್ವ ವಿಮಾನದಲ್ಲಿ ಕುಳಿತು ದ್ವಾರಕೆಯ ನನ್ನು ಹಿಂಸಿಸುತ್ತಿದ್ದ. ಕೃಷ್ಣ ಪುತ್ರ ಪ್ರದ್ಯುಮ್ನ ಸಾಳ್ವನೊಂದಿಗೆ ಯುದ್ದ ಮಾಡುತ್ತಿರುತ್ತಾನೆ. ಯುದ್ದಕ್ಕೆ ಬಂದವನು ಕೃಷ್ಣನಲ್ಲ, ಕೃಷ್ಣ ಪುತ್ರ ಪ್ರದ್ಯುಮ್ನ ಎಂದು ತಿಳಿದು, ಸಾಳ್ವ ವಿಮಾನದಿಂದ ಇಳಿದು ರಥವನೇರಿ ಯುದ್ಧ ಆರಂಭಿಸಿದ. ಪ್ರದ್ಯುಮ್ನನಾದರೋ, ಸಾಳ್ವ ನನ್ನು ಕೊಲ್ಲಲು ಕೃಷ್ಣ ನೀಡಿದ್ದ ವಿಶೇಷ ಬಾಣವನ್ನು ಪ್ರಯೋಗಿಸಲು ಉದ್ಯುಕ್ತನಾದ. ಆಗ ಅಶರೀರವಾಣಿ ನುಡಿಯಿತು – “ಸಾಳ್ವ ನನ್ನು ಕೊಲ್ಲಲು ಕೃಷ್ಣನ ಸಂಕಲ್ಪವಿದೆ. ನೀನು ಕೊಲ್ಲಲು ಪ್ರಯತ್ನಿಸಬೇಡ”. ಈ ಮಾತನ್ನು ಕೇಳಿದ ಪ್ರದ್ಯುಮ್ನ ಬಾಣವನ್ನು ಪ್ರಯೋಗಿಸಲಿಲ್ಲ. ಸಾಳ್ವ ವಿಮಾನ ವೇರಿ ತನ್ನ ರಾಜ್ಯಕ್ಕೆ ಹಿಂತಿರುಗಿದ. ದ್ವಾರಕೆಯನ್ನು ಹಾಳು ಮಾಡಿದ್ದು ಸಾಳ್ವನನ್ನು ಬೆನ್ನಟ್ಟಿ ಹೋದ ಕೃಷ್ಣ. ಸಾಳ್ವನಾದೂರು ಕೃಷ್ಣನ ಮೇಲೆ ಶಸ್ತ್ರಗಳ ಮತ್ತು ಮಹಾಸ್ತ್ರಗಳನ್ನು ಮಾಯೆಯಿಂದ ಪ್ರಯೋಗಿಸಿದ. ಆಗ ಸಾಳ್ವ ಪ್ರಯೋಗಿಸಿದ ಮಾಯೆಯಿಂದ ಕೃಷ್ಣ ಕೆಳಗೆ ಬಿದ್ದಂತೆಯೂ, ಆ ದಾನವರು ಆಯುಧಗಳಿಂದ ತಿವಿದು ಕೊಲ್ಲುತ್ತಿದ್ದಂತೆಯೂ ಕಾಣಿಸಿತು. ಆಗ ಕೃಷ್ಣನು ವಿಜ್ಞಾನಾಸ್ತ್ರದಿಂದ ಮಾಯೆಯನ್ನು ನಾವು ಮಾಡಿದ. ಸಾಳ್ವ ಬೆಟ್ಟಗಳ ಮಳೆಗರೆದಾಗ, ಕೃಷ್ಣನು ಸಾಳ್ವನ ಸೌಭ ವಿಮಾನವನ್ನು ಉರುಳಿಸಿ, ಬೀಳಿಸಿದಾಗ, ಅವನು ರಥವನೇರಿ ಯುದ್ದಕ್ಕೆ ಬರಲು, ಅವನ ತೋಳುಗಳನ್ನು, ಶಿರಸ್ಸನ್ನೂ ತುಂಡರಿಸಿ, ಸಾಳ್ವ ನನ್ನು ಸಂಹರಿಸಿದನು.

ಮತ್ತೆ ಕೃಷ್ಣಾರ್ಘ್ಯ ಮಂತ್ರ

ಶ್ರೀ ಕೃಷ್ಣಾರ್ಘ್ಯ ಮಂತ್ರ

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ II ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ II ದೇವಕೀಸಹಿತ-ಶ್ರೀಕೃಷ್ಣಾಯ ನಮಃ I ಇದಮರ್ಘ್ಯಂ ಸಮರ್ಪಯಾಮಿ

ಚಂದ್ರಾರ್ಘ್ಯ ಮಂತ್ರ:

ಕ್ಷೀರೋದಾರ್ಣವ ಸಂಭೂತ ಅತಿಗೋತ್ರಸಮುದ್ಭವ ಗೃಹಾಣಾರ್ಘ್ಯಂ ಮಯಾ ದತ್ತಂ ರೋಹಿಣ್ಯಾ ಸಹಿತಃ ಶಶಿನ್

ಸರ್ವಜನ ಸುಖಿನೋಭವತು -- ಶ್ರೀ ಕೃಷ್ಣಾರ್ಪಣಮಸ್ತು

------------------ Hari Om -----------------