Sunday, August 17, 2025

Krishna Janamastami

 

ಶ್ರೀಕೃಷ್ಣ ಜನ್ಮಾಷ್ಟಮಿ / Sri Krishna Janmastami

 


                                       Lord Krishna

 

ಪುರಾಣಗಳ ಪ್ರಕಾರ, ಕೃಷ್ಣನು ಮಥುರಾದ ಯಾದವ ಕುಲಕ್ಕೆ ಸೇರಿದ ರಾಜಕುಮಾರಿ ದೇವಕಿ ಮತ್ತು ಅವಳ ಪತಿ ವಸುದೇವನ ಎಂಟನೇ ಮಗ. ಆ ಸಮಯದಲ್ಲಿ ಮಥುರಾದ ರಾಜನಾಗಿದ್ದ ದೇವಕಿಯ ಸಹೋದರ ಕಂಸನು ದೇವಕಿಯ ಎಂಟನೇ ಮಗನಿಂದ ಕಂಸನನ್ನು ಕೊಲ್ಲುತ್ತಾನೆ ಎಂದು ಹೇಳಲಾದ ಭವಿಷ್ಯವಾಣಿಯನ್ನು ತಡೆಯಲು ದೇವಕಿಯಿಂದ ಜನ್ಮ ನೀಡಿದ ಎಲ್ಲಾ ಮಕ್ಕಳನ್ನು ಕೊಂದನು. ಕೃಷ್ಣ ಜನಿಸಿದಾಗ, ವಾಸುದೇವನು ಮಥುರಾದ ಜಿಲ್ಲೆಯ ಗೋಕುಲದಲ್ಲಿರುವ ತನ್ನ ಸ್ನೇಹಿತನ ಮನೆಗೆ ಕೃಷ್ಣನನ್ನು ಕರೆದುಕೊಂಡು ಹೋದನು. ನಂತರ, ಕೃಷ್ಣನನ್ನು ನಂದ ಮತ್ತು ಅವನ ಹೆಂಡತಿ ಯಶೋದೆ ಗೋಕುಲದಲ್ಲಿ ಬೆಳೆಸಿದರು.

ಶ್ರೀಕೃಷ್ಣ ಜಯಂತಿಯ ಇತರ ಹೆಸರುಗಳು:


ಕೃಷ್ಣಾಷ್ಟಮಿ, ಜನ್ಮಾಷ್ಟಮಿ, ಸತತ ಆಟಂ, ಅಸ್ತಮಿ ರೋಹಿಣಿ, ಗೋಕುಲಾಷ್ಟಮಿ, ಶ್ರೀ ಜಯಂತಿ, ನಂದೋತ್ಸವ ಇತ್ಯಾದಿಗಳಾಗಿವೆ.

 


                                                                                Pic-1

ಕೃಷ್ಣ ಜನ್ಮಾಷ್ಟಮಿ ಹಬ್ಬದ ಮಹತ್ವ:


ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶ್ರೀ ಕೃಷ್ಣನು ಮಥುರಾ ಪಟ್ಟಣದಲ್ಲಿ ಅಷ್ಟಮಿ ತಿಥಿ ಅಥವಾ ಭಾದ್ರಪದ ಮಾಸದ ಎಂಟನೇ ದಿನದಂದು ದೇವಕಿ ಮತ್ತು ವಸುದೇವನಿಗೆ ಜನಿಸಿದನು. ದೇವಕಿ ಮಥುರಾದ ರಾಕ್ಷಸ ರಾಜ ಕಂಸನ ಸಹೋದರಿ. ಒಂದು ಭವಿಷ್ಯವಾಣಿಯ ಪ್ರಕಾರ, ಕಂಸನ ಪಾಪಗಳಿಗೆ ಶಿಕ್ಷೆಯಾಗುತ್ತದೆ ಮತ್ತು ಅವನು ಎಂಟನೆಯ ಮಗ ದೇವಕಿಯಿಂದ ಕೊಲ್ಲಲ್ಪಡುತ್ತಾನೆ ಎಂಬುದಾಗಿತ್ತು. ಆದ್ದರಿಂದ, ಕಂಸನು ತನ್ನ ಸ್ವಂತ ಸಹೋದರಿ ಮತ್ತು ಅವಳ ಪತಿಯನ್ನು ಬಂಧಿಸಿದನು. ಭವಿಷ್ಯವಾಣಿಯು ನಿಜವಾಗುವ ಸಾಧ್ಯತೆಯನ್ನು ತೊಡೆದುಹಾಕಲು ಅವರು ಜನಿಸಿದ ತಕ್ಷಣ ದೇವಕಿಯ ಮಕ್ಕಳನ್ನು ಕೊಲ್ಲಲು ಪ್ರಯತ್ನಿಸಿದರು.

ದೇವಕಿಗೆ ಎಂಟನೆಯ ಮಗ ಜನಿಸಿದಾಗ, ಇಡೀ ಅರಮನೆಯು ಮಾಂತ್ರಿಕವಾಗಿ ಪ್ರಚೋದಿತವಾದ ಗಾಢ ನಿದ್ರೆಯಲ್ಲಿ ಮುಳುಗಿತು, ಮತ್ತು ವಸುದೇವನು ಮಧ್ಯರಾತ್ರಿಯಲ್ಲಿ ವೃಂದಾವನದಲ್ಲಿರುವ ಯಶೋಧ ಮತ್ತು ನಂದನ ಮನೆಗೆ ಮಗುವನ್ನು ವರ್ಗಾಯಿಸುವ ಮೂಲಕ ಕಂಸನ ಕೋಪದಿಂದ ಮಗುವನ್ನು ಉಳಿಸುವಲ್ಲಿ ಯಶಸ್ವಿಯಾದನು. ಈ ಶಿಶುವು ಭಗವಾನ್ ವಿಷ್ಣುವಿನ ಅವತಾರವಾಗಿತ್ತು ಮತ್ತು ಅಂತಿಮವಾಗಿ ಕಂಸನನ್ನು ಕೊಂದ ಶ್ರೀ ಕೃಷ್ಣ ಎಂದು ಕರೆಯಲ್ಪಟ್ಟಿತು.



                                                                              Pic -2

 

ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ:


1) ಮಂಜಾನೆ ಎದ್ದು ಸ್ನಾನ ಮಾಡಿ ಮತ್ತು ಹೊಸ ಅಥವಾ ಶುದ್ಧವಾದ ಬಟ್ಟೆಗಳನ್ನು ಧರಿಸಿ.
2) ಶ್ರೀಕೃಷ್ಣನ ಪಲ್ಲಕ್ಕಿ ಅಥವಾ ತೊಟ್ಟಿಲನ್ನು ಅಲಂಕರಿಸುವ ಮೂಲಕ ಪೂಜೆಯ ಸಿದ್ಧತೆಗಳನ್ನು ಪ್ರಾರಂಭಿಸಿ ಮತ್ತು ದೇವಾಲಯವನ್ನು ಸ್ವಚ್ಛಗೊಳಿಸಲು ಗಂಗಾಜಲವನ್ನು ಬಳಸಿ.
3) ಪೂಜೆಯನ್ನು ಪ್ರಾರಂಭಿಸಲು ಧ್ಯಾನವನ್ನು ಮಾಡಿ. ಶ್ರೀಕೃಷ್ಣನ ವಿಗ್ರಹ ಅಥವಾ ಫೋಟೋವನ್ನು ಪೂಜಾ ಪೀಠದ ಮೇಲೆ ಸ್ಥಾಪಿಸಿ.
4) ಶ್ರೀಕೃಷ್ಣನ ಪಾದಗಳಿಗೆ ನೀರನ್ನು ಅರ್ಪಿಸುವುದನ್ನು ಪಾಡ್ಯ ಎಂದು ಕರೆಯಲಾಗುತ್ತದೆ. ಭಗವಂತನಿಗೆ ಅರ್ಘ್ಯವನ್ನು ಅರ್ಪಿಸಿ.
5) ಆಚಮನವನ್ನು ಮಾಡಿ, ಇದು ಭಗವಂತನಿಗೆ ನೀರನ್ನು ಅರ್ಪಿಸಿ ನಂತರ ಅದನ್ನು ಕುಡಿಯುವ ಕ್ರಿಯೆಯಾಗಿದೆ.
6) ಪಂಚಾಮೃತಾಭಿಷೇಕವನ್ನು ಮಾಡಿ.
7) ವಿಗ್ರಹವನ್ನು ಹೂವು, ಬಟ್ಟೆಗಳಿಂದ ಅಲಂಕರಿಸಿ.
8) ಪವಿತ್ರವಾದ ಜನೇವುವನ್ನು ಅರ್ಪಿಸಿ, ಚಂದನವನ್ನು ಹಚ್ಚಿ.
9) ಕೃಷ್ಣನಿಗೆ ಪ್ರಿಯವಾದ ಹೂವುಗಳು ಮತ್ತು ತುಳಸಿ ಎಲೆಗಳನ್ನು ನೀಡಿ. ಧೂಪದ್ರವ್ಯ ಮತ್ತು ಎಣ್ಣೆ ದೀಪವನ್ನು ಬೆಳಗಿಸಿ.
10) ಶ್ರೀಕೃಷ್ಣನಿಗೆ ಭೋಗವನ್ನು ಅರ್ಪಿಸಿ.
11) ಆರತಿಯನ್ನು ಮಾಡಿ ಪ್ರದಕ್ಷಿಣೆ ಹಾಕಿ.

ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣನ ಬಾಲ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನ ಜನನ ಕಥೆಯನ್ನು ಕೇಳುವುದು, ಆತನಿಗೆ ಸಮರ್ಪಿತವಾದ ಮಂತ್ರಗಳನ್ನು ಪಠಿಸುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.


--------------- Hari Om ----------------



 

 

 

Tuesday, August 12, 2025

Haridasaru Kanda Raghavendra swamy

 

                                                                     Guru Raghavendra

 

ಹರಿದಾಸರು ಕಂಡ ರಾಘವೇಂದ್ರ


ಶ್ರಾವಣ ಬಹುಳ ಬಿದಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ l
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ll

ದೇವರೆಂದರೆ ವೆಂಕಪ್ಪ ಗುರುಗಳೆಂದರೆ ರಾಘಪ್ಪ' ಇದು ಸಾಮಾನ್ಯವಾಗಿ ಕೇಳುವ ನಾಣ್ಣುಡಿ. ಶ್ರೀರಾಯರ ಬಗ್ಗೆ ಅಪ್ಪಣ್ಣಾಚಾರ್ಯರ ನುಡಿಮುತ್ತುಗಳು ಹೀಗಿದೆ -

ಶ್ರೀಮಧ್ವಮತದುಗ್ದಾಬ್ಧಿ ಚಂದ್ರೋsವತು ಸದಾನಘಹ l
ಶ್ರೀಮಧ್ವಮತ ವರ್ಧನಃ l
ಅಪೇಕ್ಷಿತಪ್ರದಾತಾನ್ಯೋ ರಾಘವೇಂದ್ರಾನ್ನವಿದ್ಯತೇ l ...

ಶ್ರೀಮಧ್ವಮತದ ಚಂದ್ರಮರಾಗಿ, ಭಕ್ತರ ಅಭೀಷ್ಟಗಳನ್ನು ಸುರಿಸುವವರಾಗಿ ಮಂತ್ರಾಲಯದಿ ನೆಲೆಸಿರುವ ಶ್ರೀರಾಯರನ್ನು ಯಾರು ತಾನೆ ಸೇವಿಸರು-ಭಜಿಸರು. 'ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ' ಆಗಿರುವರು. ಹರಿದಾಸಸಾಹಿತ್ಯದ ಎರಡನೆಯ ಘಟ್ಟದ ಸ್ಫೂರ್ತಿದಾಯಕರು ಶ್ರೀರಾಘವೇಂದ್ರರು. ನಂತರ ಇವರನ್ನು ಕೀರ್ತಿಸದ, ಸ್ತುತಿಸದ ಹರಿದಾಸರಿಲ್ಲ. ಪಂಡಿತ ಪಾಮರರಿಗೂ ಜ್ಞಾನಾದಿ ಅಭೀಷ್ಟಪರಾಗಿ ಮಾನ್ಯರಾಗಿರುವರು. ಗುರುಗಳ ಮಹಿಮೆಯನ್ನು ಹರಿದಾಸರು ಬಹುವಾಗಿ ತಮ್ಮ ಪದಪದ್ಯಗಳಿಂದ ಹಾಡಿದ್ದನ್ನು ಕಾಣುತ್ತೇವೆ. ಶ್ರೀವಿಜಯದಾಸರು -

ನೋಡಿದೆ ಗುರುಗಳ ನೋಡಿದೆ ll ll

ನೋಡಿದೆನು ಗುರುರಾಘವೇಂದ್ರರ
ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ಈಡು ಇಲ್ಲದೆ ಮೆರೆವ ಮಹಿಮೆಯ ll ಅ ಪ ll

ಟಿಪ್ಪಣ್ಯಾಚಾರ್ಯ ಚಕ್ರವರ್ತಿಯೆಂದೇ ಪ್ರಸಿದ್ಧರಾದ ಶ್ರೀರಾಘವೇಂದ್ರಸ್ವಾಮಿಗಳ ಗ್ರಂಥರಚನಾ ವೈಭವವು ಗಾತ್ರ ಹಾಗೂ ಸತ್ವದಲ್ಲಿ ಶ್ರೇಷ್ಠಮಟ್ಟದ್ದಾಗಿ ವಿಜೃಂಭಿಸಿವೆ. ರಾಯರ ಐಕತ್ತಕ್ಕೂ ಹೆಚ್ಚಿನ ಗ್ರಂಥಗಳು ಎಲ್ಲ ಪ್ರಕಾರಗಳಿಂದಲೂ ವ್ಯಾಪಿಸಿವೆ. ಟೀಕಾ, ಟಿಪ್ಪಣಿ, ಸ್ವತಂತ್ರಗ್ರಂಥಗಳು, ಸ್ತೋತ್ರ ಹೀಗೆ ಆವರಿಸಿ ಪೂರ್ಣತೆಯನ್ನು ಪಡೆದಿವೆ. ಪರಿಮಳಾಚಾರ್ಯ, ಭಾವದೀಪಕಾರರು ಮುಂತಾದವು ಸಾಕ್ಷಿಯಾಗಿವೆ. ಪ್ರಾಕೃತ ಭಾಷೆಯಲ್ಲೂ ಕೃತಿಗಳನ್ನು ರಚಿಸಿ ಹರಿದಾಸಸಾಹಿತ್ಯಕ್ಕೂ ಮೆರುಗನ್ನು ನೀಡಿದ ಮಹಿಮಾನ್ವಿತರು ಶ್ರೀರಾಘವೇಂದ್ರಯತಿವರ್ಯರು. ಅದಕ್ಕೆಂದೆ ಶ್ರೀಜಗನ್ನಾಥದಾಸರು -

ಹೊಂದಿ ಬದುಕಿರೋ ರಾಘವೇಂದ್ರ ರಾಯರ ll
ಕುಂದದೆಮ್ಮನು ಕರುಣದಿಂದ ಪೊರೆವರ ll ಎಂದು ಕೊಂಡಾಡಿದರು.

 

                                                                               Pic - 1

ಶ್ರೀವಿದ್ಯಾಪ್ರಸನ್ನ ತೀರ್ಥರು :

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ll

ಶ್ರೀಗೋಪಾಲದಾಸರು :

ರಾಯೆನ್ನೆ ರಾಶಿ ದೋಷಗಳ ದಹಿಸುವರು
ಘಾಯನ್ನೆ ಘನ ಜ್ಞಾನ ಭಕುತಿಯನಿತ್ತು l
ವೇ ಯೆನ್ನೆ ವೇಗಾದಿ ಜನನ ಮರಣ ಗೆದ್ದು
ದ್ರಾ ಯೆನ್ನೆ ದ್ರವಿಣೋದ ಶ್ರುತಿಗೇವೆ ಘನಕಾಂಬ ll

ಶ್ರೀಪ್ರಾಣೇಶದಾಸರು :

ಶ್ರೀರಾಮಚಂದ್ರಾಂಘ್ರಿ ನರಸಿಂಹ ಭೃಂಗನಿಗೆ
ಧೀರ ಸುಧೀಂದ್ರಕರ ಸಂಭೂತನಿಗೆ
ವಾರಾಹಿತೀರ ಮಂತ್ರಾಲಯ ನಿಕೇತನಗೆ
ಶ್ರೀರಾಘವೇಂದ್ರರಾಯರ ಚರಣಕೆ
ಜಯಮಂಗಳಂ ನಿತ್ಯಶುಭಮಂಗಳಂ ll

ಇಂದು ಶ್ರೀರಾಘವೇಂದ್ರವಿಜಯ ಗ್ರಂಥ ಪಾರಾಯಣ, ಆರಾಧನಾ ಸಮಾರಂಭದಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ. ಶ್ರೀರಾಘವೇಂದ್ರ ಸ್ತೋತ್ರದ ಅಷ್ಟೋತ್ತರ, ರಾಘವೇಂದ್ರವಿಜಯ, ಗುರುಗುಣಸ್ತವನ, ಹರಿದಾಸರ ಪದ-ಪದ್ಯಗಳ ಪಾರಾಯಣ ಆಗಬೇಕು. ಹಿರಿಯ ವಿದ್ವಾಂಸರಿಂದ ರಾಯರ ಜೀವನ - ಸಾಧನೆಗಳ ಬಗ್ಗೆ ಅರಿಯಬೇಕು. ಕಲಿಯುಗದ ಕಲ್ಪತರುವೆಂದು ಪ್ರಸಿದ್ಧರಾದ ಶ್ರೀರಾಯರ ಅನುಗ್ರಹ ಪ್ರತಿಯೊಬ್ಬರಿಗೂ ಬೇಕಿದೆ. ಸಶರೀರ ಪ್ರವೇಶ ಮಾಡಿದ ಮೂಲವೃಂದಾವನ ದರ್ಶನಾದಿಗಳು ಅತ್ಯಾವಶ್ಯಕ.

ವಿಶ್ವೇಂದ್ರತೀರ್ಥರು -

ಮಧ್ವಮತವೆಂಬ ದುಗ್ಧಸಾಗರದೊಳು l
ಉದ್ಭವಿಸಿದ ಪೂರ್ಣ ಹಿಮಕರ ತೇಜ ll

ಶ್ರೀವಿದ್ಯಾಪ್ರಸನ್ನತೀರ್ಥರು -

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ll ಎಂದರು.

ಮೂಕೋಪಿ ಯತ್ಪ್ರಸಾದೇನ ಮುಕುಂದಶಯನಾಯತೇ l
ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ll


-------------- Hari Om ------------


ಗುರುರಾಯರ ನಿಗೂಢ ಪವಾಡಗಳು

Guru Raghavendra Swamy Miracles

 


                                   Raghavendra swamy

 

ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ರಾಯರ ನೆನೆಯೋಣ ಗುರುರಾಯರ ನೆನೆಯೋಣ.‌

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ದೈವಾಂಶ ಸಂಭೂತರು. ಅವರ ತಪಸ್ಸು ಶ್ರದ್ಧೆ- ಜ್ಞಾನ ಮತ್ತು ಕರುಣೆಯ ಜೀವಂತಿಕೆಯ ಸಾಕ್ಷಿಯಾಗಿದ್ದರು. ಅವರು ಮಾಡಿದ ಅದ್ಭುತವಾದ ಪವಾಡಗಳು, ಜನಗಳ ಬಾಯಿಂದ ಬಾಯಿಗೆ ಹರಡಿ ಅದೆಷ್ಟೊ ಭಕ್ತರ ಜೀವನವನ್ನು ಬೆಳಗಿಸಿದೆ. ಕೇಳರಿಯದ ಅಪರೂಪದ ಕೆಲವು ಪವಾಡಗಳು.

ಈ ಘಟನೆ ನೂರಾರು ವರ್ಷಗಳ ಹಿಂದಿನ ಘಟನೆ ಆಗಿರಬಹುದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಧರ್ಮಸ್ಥಳದ ಸಮೀಪದ ಒಂದು ಹಳ್ಳಿಯಲ್ಲಿ ವಿಷ್ಣು ಭಕ್ತರಾದ ಒಬ್ಬ ಬ್ರಾಹ್ಮಣನಿದ್ದನು. ಇವರಿಗೆ 12 ವರ್ಷದ ಒಬ್ಬ ಮಗನಿದ್ದ.


ಕಡು ಬಡತನ ಊಟವಿಲ್ಲದ ದಿನಗಳೇ ಹೆಚ್ಚು. ನಿಲ್ಲಲು ಸರಿಯಾದ ನೆಲೆ ಇರಲಿಲ್ಲ ಆದರೂ ಬ್ರಾಹ್ಮಣ ಮಾತ್ರ ದಿನಂಪ್ರತಿ ಗುರುಗಳ ಸ್ಮರಣೆ ಮಾಡುತ್ತಿದ್ದರು. ಇವನ ಮಗನಿಗೆ ಸಹಜವಾದ ಆಸೆಗಳಿದ್ದರೂ ಪೂರೈಸುವುದು ಅಸಾಧ್ಯವಾಗಿತ್ತು. ಬ್ರಾಹ್ಮಣ ಒಂದಷ್ಟು ಮಕ್ಕಳಿಗೆ ವೇದ ಪಾಠ ಹೇಳಿಕೊಡುತ್ತಿದ್ದರು. ಮಗನು ಕಲಿಯಲಿ ಎಂದು ಆಸೆ ಇದ್ದರೂ, ಮಗನಿಗೆ ಕಲಿಕೆಯಲ್ಲಿ ಎಂದು ಆಸಕ್ತಿ ಇರಲಿಲ್ಲ

 

                                                                               Pic-2

 

ಮಗ ವೇದ - ಉಪನಿಷತ್ತು-ಪುರಾಣ ಮಂತ್ರಗಳನ್ನು ಕಲಿಯಲಿ, ಬಡತನ ವಿದ್ದರೆ ಇರಲಿ ಮಗ ವೇದ ಕಲಿತು ಪಂಡಿತನಾಗಲಿ ಎಂಬ ಆಸೆ. ಎಷ್ಟೋ ಸಲ ಬ್ರಾಹ್ಮಣನು ಮಗನಿಗೆ ಬುದ್ಧಿವಾದ ಹೇಳಿದರೂ ಅವನು ಕೇಳಲಿಲ್ಲ ನಿರಾಶೆ ಗೊಂಡ ಬ್ರಾಹ್ಮಣ ಒಮ್ಮೆ ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡುತ್ತಾ, ಗುರುಗಳೇ ನನಗಿರುವ ಬಡತನದ ಬಗ್ಗೆ ಚಿಂತೆ ಇಲ್ಲ, ಆದರೆ ನನ್ನ ಮಗನ ಮನಸ್ಸು ದೈವ ಚಿಂತನೆಯಲ್ಲಿ ಅವನ ಮನಸ್ಸು ತೊಡಗುವಂತೆ ಮಾಡಿರಿ ಎಂದು ಪ್ರಾರ್ಥಿಸಿದ. ಹುಡುಗನ ಹಣೆಯಲ್ಲಿ ವಿದ್ಯೆ ಬರೆದಿತ್ತೋ ಅಥವಾ ಬ್ರಾಹ್ಮಣನ ಪ್ರಾರ್ಥನೆಯಯು ಗುರುಗಳಿಗೆ ಮುಟ್ಟಿತೋ ಗೊತ್ತಿಲ್ಲ. ಅದೇ ದಿನ ರಾತ್ರಿ ಬಾಲಕನ ಕನಸಿನಲ್ಲಿ ರಾಘವೇಂದ್ರ ಸ್ವಾಮಿಗಳು ದರ್ಶನ ಕೊಟ್ಟು, ಮಗು ನಿನಗೆ ಜಗತ್ತಿನಲ್ಲಿ ಎಲ್ಲಾ ಸಂಪತ್ತುಗಳು ಸಿಕ್ಕಿದರೂ, ಸಿಗದಿದ್ದರೂ, ಒಳಗಿನ ಶಾಂತಿ ಕೇವಲ ಮಂತ್ರ ಜಪದಿಂದ ಮಾತ್ರ ನಿನಗೆ ಸಿಗುವುದು ಇದು ನಿನ್ನ ಹಿಂದಿನ ಜನ್ಮದ ಜ್ಞಾನದ ಪುಣ್ಯ ಫಲ ನಿನಗಿದೆ ಇದು ನಿನಗೆ ನೆನಪಿರಲಿ” ಎಂದು ಹೇಳಿ ಆ ಹುಡುಗನಿಗೆ ಅರ್ಥವಾಗುವ ರೀತಿಯಲ್ಲಿ ಒಂದೇ ವಾಕ್ಯದಲ್ಲಿ ಗುರು ಮಂತ್ರವನ್ನು ಅವನ ಇಡಿಯಲ್ಲಿ ಉಪದೇಶ ಮಾಡಿದರು ಆ ಕ್ಷಣದಿಂದಲೇ ಬಾಲಕನ ಮನಸ್ಸು ಬದಲಾಯಿತು.

ಮರುದಿನದಿಂದಲೇ ಅವನ ಆಲೋಚನಾ ಶಕ್ತಿ ಧರ್ಮಮಾರ್ಗದತ್ತ ಹೊರಳಿತು.
ಬುದ್ಧಿ ಶಕ್ತಿಯಲ್ಲಿ ಜ್ಞಾನದಲ್ಲಿ ಪ್ರೌಢನಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ. ತಂದೆ ಹೇಳಿಕೊಡುತ್ತಿದ್ದ ವೇದಾಧ್ಯಯನವನ್ನು ಶ್ರದ್ಧೆಯಿಂದ ಕಲಿಯುತ್ತಾ ಬಂದನು. ಕಾಲಕ್ರಮೇಣ ವೇದ ವೇದಾಂಗ ಪಂಡಿತರ ಸಾಲಿಗೆ ಸೇರಿದನು.

ಗುರುಗಳು ಬಾಲಕನ ಸಾಮರ್ಥ್ಯವನ್ನು ಗುರುತಿಸಿ ಅನುಗ್ರಹ ಮಾಡಿ, ಅವನ ಕನಸಿನಲ್ಲಿ ಭಕ್ತಿಯ ಬೀಜವನ್ನು ಬಿತ್ತುವ ಮೂಲಕ ಹುಡುಗನ ಜೀವನದ ದಿಕ್ಕನ್ನೇ ಬದಲಿಸಿದ ಮಹಾಮಹಿಮರು ಗುರುರಾಯರು.

ಹೀಗೆ ಇನ್ನೊಂದು ಅಪರೂಪದ ಪವಾಡ ನಡೆದಿತ್ತು. ಬಿಜಾಪುರದ ಸಮೀಪದ ಒಂದು ಹಳ್ಳಿ ರಾಘವೇಂದ್ರರು ತಮ್ಮ ಸಂಚಾರದ ಸಮಯದಲ್ಲಿ ಈ ಹಳ್ಳಿಗೆ ಬಂದರು. ಅಲ್ಲಿ ಕೆಲವು ಹೆಣ್ಣು ಮಕ್ಕಳು ಕುಳಿತು ಆಟವಾಡುತ್ತಿದ್ದರು. ಗುರುಗಳು ಅವುಗಳ ಸಮೀಪ ಬಂದು ಕೇಳಿದರು. ನೀವೆಲ್ಲಾ ಗುರುಕುಲದಲ್ಲಿ ಕಲಿಯುತ್ತಿದ್ದೀ ರಾ ಮಕ್ಕಳೇ ಎಂದು ಕೇಳಿದರು. ಮಕ್ಕಳು ಹೇಳಿದವು ಸ್ವಾಮಿಗಳೇ ನಮ್ಮಂತವರಿಗೆ ಓದಲು ಅವಕಾಶವಿಲ್ಲ ನಾವು ಶಾಸ್ತ್ರ- ಧರ್ಮವನ್ನು ಅರಿಯಲಾರೆವು ಎಂದರು. ಆ ಮಕ್ಕಳ ಶುದ್ಧವಾದ, ನಿಷ್ಕಲ್ಮಶವಾದ ನುಡಿಗೆ ಗುರುಗಳ ಹೃದಯ ಕರಗಿತು. ಅವರು ತಕ್ಷಣ ಹೇಳಿದರು, ಮಕ್ಕಳೇ ಚಿಂತಿಸಬೇಡಿ ನಾನು ನಿಮಗೆ ಇಂದು ಒಂದು ಮಂತ್ರವನ್ನು ಉಪದೇಶಿಸುವೆ ನಿತ್ಯವೂ ಇದನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಜಪ ಮಾಡಿ ಮುಂದೆ ಎಲ್ಲಾ ತರಹದ ಜ್ಞಾನವು ನಿಮಗೆ ದೊರೆಯುತ್ತದೆ ಎಂದು ಮಂತ್ರವನ್ನು ಉಪದೇಶಿಸಿ ಹೊರಟರು


                                                                               Pic -3

 

 ಅಕ್ಷರಭ್ಯಾಸ ಎಂದರೆ ಏನು ಎಂದು ಅರಿಯದ ಮಕ್ಕಳು ಗುರುಗಳು ಉಪದೇ ಶಿಸಿದ ಮಂತ್ರವನ್ನು ಗುರುಗಳು ಹೇಳಿದಂತೆ ಶ್ರದ್ದೆ ಹಾಗೂ ಭಕ್ತಿಯಿಂದ ಜಪ ಮಾಡುತ್ತಾ ಬಂದವು. ಅವುಗಳ ಜ್ಞಾನ ಗುರುಗಳ ಅನುಗ್ರಹದಿಂದ ತನ್ನಿಂದ ತಾನೇ ಅಭಿವೃದ್ಧಿಯಾಗುತ್ತಾ ಬಂದಿತು. ಮುಂದೆ ಈ ಮಕ್ಕಳೆಲ್ಲ ವಿದ್ಯಾವಂತರು- ಮಹಾನ್ ಜ್ಞಾನಿಗಳು ಆದರು. ಗುಂಪಿನಲ್ಲಿದ್ದ ಒಬ್ಬ ಹುಡುಗಿ ಎಷ್ಟು ಜ್ಞಾನಿಯಾಗಿದ್ದಳು ಎಂದರೆ ಆಕೆಯ ಸುಮಾರು 80 ವರ್ಷಗಳ ನಂತರವೂ ‘ಶತಾವಧಾನಿ’ಯಾಗಿ ವೇದ ಶಾಸ್ತ್ರ ವಾಂಙ್ಮಯಳಾಗಿ ಜನಮನದಲ್ಲಿ ಅಚ್ಚಳಿಯದೆ ಉಳಿದಳು. ಇದೆಲ್ಲ ವೂ ಸಾಧ್ಯವಾಗಿದ್ದು ಗುರುಗಳ ಆಶೀರ್ವಾದದಿಂದ ನಾನು ಗುರುಗಳಿಂದ ಜ್ಞಾನ ಪಡೆದೆ ಎಂದು ಹೇಳುತ್ತಿದ್ದ ಹುಡುಗಿಯ ಹೆಸರು ದಾಖಲಾಗಿದೆ ಎನ್ನುತ್ತಾರೆ.

ಗುರುಗಳ ದೃಷ್ಟಿಯಲ್ಲಿ ವಿದ್ಯೆಯನ್ನು ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಎಲ್ಲರೂ ಕಲಿಯುವ ಸ್ವಾತಂತ್ರ್ಯವಿದೆ ಎಂದು ತೋರಿಸಿಕೊಟ್ಟರು. ಅವರು ಉಪದೇಶಿಸಿದ ಸರಳವಾದ ಒಂದು ಮಂತ್ರೋಪದೇಶದಿಂದಲೇ ಅಕ್ಷರ ಜ್ಞಾನವಿಲ್ಲದ ಮಕ್ಕಳು ಮೇಧಾವಿಗಳಾದರು.

ಇನ್ನೊಂದು ಅದ್ಭುತ ಪವಾಡ:- ಅದು ಮೈಸೂರಿನ ಸಮೀಪ ನಡೆದ ಘಟನೆ.
ಒಮ್ಮೆ ರಾಘವೇಂದ್ರ ಗುರುಗಳು ಸಂಚಾರ ಮಾಡುತ್ತಿದ್ದಾಗ ಒಂದು ಮನೆಯ ಮುಂದೆ ದಾರಿ ಮಧ್ಯದಲ್ಲಿ ಒಂದು ಶವ ಇಡಲಾಗಿತ್ತು. ಕಾರಣಾಂತರದಿಂದ ಅದನ್ನು ಮುಟ್ಟಲು ಜನರು ಹಿಂದೇಟು ಹಾಕಿದ್ದರು. ಹಾಗಂತ ಆ ಶವ ದಾರಿ ಮಧ್ಯದಲ್ಲಿದ್ದರೆ ಅದನ್ನು ದಾಟಿ ಮುಂದೆ ಹೋಗುವಂತಿಲ್ಲ. ಹೀಗಾಗಿ ಜನಗಳು ಏನು ಮಾಡಲು ತೋಚದೆ ಚಿಂತಿಸುತ್ತಿದ್ದರು. ಇದನ್ನೆಲ್ಲ ಗಮನಿಸಿದ ಗುರುಗಳು ತಮ್ಮ ಶಿಷ್ಯನನ್ನು ಕರೆದು ಹೇಳಿದರು. ನೋಡು ಅಲ್ಲಿ ಮಲಗಿದ ಆ ವ್ಯಕ್ತಿ ಸತ್ತಿಲ್ಲ ಅವನ ಕಿವಿಯಲ್ಲಿ ನಾನು ಹೇಳಿಕೊಡುವ ಮಂತ್ರ ಹೇಳಿ ಬಾಯಿ ಬಳಿ ‘ಉಫ್’ ಎಂದು ಊದು ಎಂದರು. ಗುರುಗಳು ಹೇಳಿದಂತೆ ಅವನ ಕಿವಿಯಲ್ಲಿ ‘ಪ್ರಾಣಾಯಾಮದ ಗುಪ್ತ ಮಂತ್ರ’ವನ್ನು ಹೇಳಿ, ಶವದ ಬಾಯಿ ಮೇಲೆ ಉಫ್ ಎಂದು ಜೋರಾಗಿ ಊದಿದ. ಇಷ್ಟೇ ತಕ್ಷಣ ಶವದ ಕೈಕಾಲು ಅಲುಗಾಡಿತು. ಸ್ವಲ್ಪ ಹೊತ್ತಿಗೆ ಶವವಾಗಿ ಮಲಗಿದ್ದವನು ದೊಡ್ಡದಾಗಿ ಕಣ್ಣು ಬಿಟ್ಟನು. ಝಝಝ ಕಣ್ಣು ಬಿಟ್ಟದ್ದನ್ನು ನೋಡಿ ಜನರು ಭಯಭೀತರಾಗಿ ಚದುರಿದರು

                                                                              Pic -4

 

ಗುರುಗಳು ಯಾರು ಗಾಬರಿಯಾಗಬೇಡಿ ಅವನು ಸತ್ತಿರಲಿಲ್ಲ ಎಂದು ಹೇಳಿ ಆಶೀರ್ವದಿಸಿ ಮುನ್ನಡೆದರು. ಅವನು ಬದುಕಿದ್ದರೂ ಸತ್ತನೆಂದು ಹೊರಗೆ ಮಲಗಿಸಿದ್ದರು. ಆದರೆ ಅವನಿಗೆ ಹೃದಯಘಾತವಾಗಿತ್ತು. ಇದರಿಂದ ಏಳು ಗುರುಗಳು ತಮ್ಮ ಯೋಗ ಶಕ್ತಿ ಮತ್ತು ಜ್ಞಾನದಿಂದ ಶವವಾಗಿ ಮಲಗಿದ್ದವನು ದೇಹದಲ್ಲಿ ಚೈತನ್ಯ ಮೂಡಿಸಿ ಬದುಕಿದರು. ನಂತರದ ದಿನಗಳಲ್ಲಿ ಅವನು ಸ್ವಾಮಿಗಳ ಶಿಷ್ಯರಲ್ಲಿ ಪ್ರೀತಿ ಪಾತ್ರ ಶಿಷ್ಯನಾದನು.

ಶ್ರೀ ರಾಘವೇಂದ್ರ ಗುರುಗಳು ವಿದ್ಯಾದಾತರು ಜೀವದಾತರು ಆಗಿದ್ದರು. ಪ್ರಾಣ ಹೋಗುವ ಕಾಲದಲ್ಲಿ ಅವರ ಪವಾಡಗಳು ನಿತ್ಯ ಭಕ್ತರಿಗೆ ಮಾರ್ಗದರ್ಶನವಾಗಿದೆ.


ಯಾರು ಶುದ್ಧ ಭಕ್ತಿಯಿಂದ ಗುರುಗಳನ್ನು ಆರಾಧಿಸಿ ಪ್ರಾರ್ಥಿಸುತ್ತಾರೋ ಅವರ
ಪ್ರಾರ್ಥನೆಗೆ ಗುರುಗಳು ತಕ್ಷಣ ಸ್ಪಂದಿಸುತ್ತಾರೆ. ಇದೇ ಕಾರಣಕ್ಕೆ ರಾಘವೇಂದ್ರರನ್ನು ಭಕ್ತರ ಮೊರೆ ಆಲಿಸುವ ಗುರುವರ್ಯರು ಹಾಗೂ ಭಕ್ತರ ಭಕ್ತಿಗೆ ಬಹಳ ಬೇಗ ಒಲಿದು ಅವರ ಸಂಕಷ್ಟವನ್ನು ಪರಿಹರಿಸುವ ಕರುಣಾ ಸಾಗರರೇ ಎಂದು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.

ಶ್ರೀ ರಾಘವೇಂದ್ರ ಸ್ವಾಮಿಗಳು ಕೇವಲ ಮಠದ ತೇಜೋಮಯ ಗುರುಗಳು ಹಾಗೆ ಅವರು ಅಪಾರ ಭಕ್ತಿಯ ಪ್ರತಿರೂಪ. ಅವರ ಪಾದ ಕಮಲಗಳಲ್ಲಿ ತಲೆಬಾಗಿ ಪ್ರಾರ್ಥಿಸಿದ ಭಕ್ತರಿಗೆ ಅವರು ಧೈರ್ಯ, ಶಾಂತಿ ಮತ್ತು ಸಂಕಟ ಪರಿಹಾರ ಎಂಬ ಮೂರು ಅಮೂಲ್ಯವಾದ ವರಗಳನ್ನು ನೀಡುತ್ತಾರೆ. ನಮ್ಮ ನಂಬಿಕೆ ಪ್ರಬಲವಾದಾ ಗ ಅಜ್ಞಾತ ಶಕ್ತಿ ನಮ್ಮ ಬದುಕಿನಲ್ಲಿ ದಿವ್ಯತೆಯನ್ನು ತುಂಬುತ್ತದೆ ಗುರುರಾಯರ ಕೃಪಾ ದೃಷ್ಟಿ ದೊರೆತರೆ ನಮ್ಮ ಬದುಕು ಬಂಗಾರವಾಗುತ್ತದೆ.

ಓಂ ವೆಂಕಟನಾಥಾಯ ವಿದ್ಮಹೇ
ಸಚ್ಚಿದಾನಂದಾಯ ಧೀಮಹಿ
ತನ್ನು ರಾಘವೇಂದ್ರ: ಪ್ರಚೋದಯಾತ್!!

ಓಂ ವೆಂಕಟನಾಥ ವಿದ್ಮಹೇ
ತಿಮ್ಮಣ್ಣ ಪುತ್ರಾಯ ಧೀಮಹಿ
ತನ್ನೋ ರಾಘವೇಂದ್ರ: ಪ್ರಚೋದಯಾತ್!!

ಓಂ ಪ್ರಹಲ್ಲಾದಾಯ ವಿದ್ಮಹೇ
ವ್ಯಾಸ ರಾಜಾಯ ಧಮಹಿ
ತನ್ನೋ ರಾಘವೇಂದ್ರ: ಪ್ರಚೋದಯಾತ್ !!

--------------------- Hari Om --------------------




 
 



 

Friday, August 1, 2025

Sri Raghavendra Gayatri Mantra

 

                                                              Guru Raghavendra Swamy

 

ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರ


Sri Raghavendra Gayatri Mantra


ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ.ಇದು ಸತ್ಯ ..!ರಾಯರ ಮಹಿಮೆ ಇದು ನೇರವಾಗಿ ನೋಡಿ..!
ಮಹಾ ಮಹಿಮ ಗುರುಗಳು ಮತ್ತು ಜೀವಂತ ದೇವರು.ಗುರುರಾಘವೇಂದ್ರರ ಆರಾಧ್ಯ ದೈವ ಮೂಲರಾಮ ಅಂದರೆ ಮಹಾವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳೇ ಬಂದರು ಶ್ರೀ ಗುರುರಾಯರ ಸ್ಮರಣೆ ಮಾಡಿದ ತಕ್ಷಣವೇ ಕಷ್ಟವು ಮಂಜಿನಂತೆ ಕರಗುವುದು.


ಗುರುರಾಯರನ್ನು ನೆನೆಯಲು ಹಲವಾರು ಮಂತ್ರಗಳಿವೆ ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ.ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ,ಐದು ಬಾರಿ,ಒಂಭತ್ತು ಬಾರಿ,ಇಪ್ಪತೊಂದು ಬಾರಿ,ಸಾವಿರದ ಎಂಟು ಬಾರಿ ಜಪಿಸಬಹುದು.

ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ಕೆಲವು ನಿಯಮಗಳಿವೆ ಅವುಗಳನ್ನು ನೀವು ಪಾಲಿಸಿದರೆ ಶ್ರೀ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಸಂಕಷ್ಟಗಳನ್ನು ಕಳೆಯುತ್ತಾರೆ.ಆ ನಿಯಮಗಳು ಯಾವುವೆಂದರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ದಿನವೂ ಆಗಲಿಲ್ಲವಾದರು ಗುರುರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು.

 

                                                              Sri Raghavendra Swamy

  

ನೀವು ಇದನ್ನೇ ನಲವತ್ತೆಂಟು ದಿನಗಳು ಪಠಿಸಿದರೆ ಈ ಕೆಳಗಿನಂತೆ ಪಾಲಿಸಿ.
ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರದ ವ್ರತವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ಪುಷ್ಯ ನಕ್ಷತ್ರ ದಿನಗಳಲ್ಲಿ ತುಂಬಾ ವಿಶೇಷ ಶಕ್ತಿ ಇರುತ್ತದೆ ಆ ದಿನಗಳಲ್ಲಿ ಶುರು ಮಾಡಿದರೆ ನಿಮಗೆ ಒಳ್ಳೆಯದು.


ದಿನಕ್ಕೆ ಸತತ ಸಾವಿರದ ಎಂಟು ಬಾರಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರವನ್ನು ನಲವತ್ತೆಂಟು ದಿನಗಳವರೆಗೆ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷ ಭಕ್ತರ ಪಾಲಿನ ಆಪದ್ಬಾಂದವ ಶ್ರೀ ಗುರುರಾಘವೇಂದ್ರರು ನಿಮ್ಮ ಕನಸಿನಲ್ಲಿ ಬರುವುದು ಖಚಿತ.ಕನಸಿನಲ್ಲಿ ಅವರು ಬಂದರು ಎಂದರೆ ನಿಮ್ಮ ಸಕಲ ಸಂಕಷ್ಟಗಳು ಕೊನೆಗಾಣುವುದು ಖಚಿತ.

ಓಂ ವೆಂಕಟನಾಥಾಯ ವಿದ್ಮಹೇ
ಸಚಿದಾನಂಧಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ವೆಂಕಟನಾಥಾಯ ವಿದ್ಮಹೇ
ತಿಮ್ಮಣ್ಣ ಪುತ್ರಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ಪ್ರಹಲಾದಾಯ ವಿದ್ಮಹೇ
ವ್ಯಾಸ ರಾಜಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ಶ್ರೀ ಗುರು ರಾಘವೇಂದ್ರಾಯ ನಮಃ  
 
 
Rayara Avatharagalu
 
 
-------------- Hari Om ------------

 
 


Tuesday, July 29, 2025

Naga Panchami

 

ನಾಗ ಪಂಚಮಿಯ ಬಗ್ಗೆ ವಿಶೇಷ ಮಾಹಿತಿ:


Naga Panchami – its Importance

 


                                   Nagara Panchami Pooje

 

ದೇಶಾದ್ಯಂತ ಜನರು ಸರ್ಪಗಳು ಮತ್ತು ಹಾವುಗಳನ್ನು ಪೂಜಿಸುವ ಒಂದು ಆಚರಿಸಲಾಗುವ ಹಿಂದೂ ಹಬ್ಬ ಈ ಹಬ್ಬ. ಈ ಶುಭ ದಿನವು ಪಂಚಮಿ ತಿಥಿ ಅಥವಾ ಶುಕ್ಲ ಪಕ್ಷದ ಐದನೇ ದಿನದಂದು ಬರುತ್ತದೆ, ಇದು ಚಂದ್ರನ ಕ್ಷೀಣ ಹಂತವಾಗಿದೆ. ಸಾಂಪ್ರದಾಯಿಕ ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ತಿಂಗಳು ಹಿಂದೂ ಸಮುದಾಯವು ಅತ್ಯಂತ ಪವಿತ್ರವೆಂದು ಭಾವಿಸುತ್ತದೆ, ವಿಶೇಷವಾಗಿ ಸರ್ಪಗಳ ದೇವರು ಅಥವಾ ನಾಗ ದೇವತೆಯನ್ನು ಪೂಜಿಸಲು. ಈ ದಿನವು ಸಾಮಾನ್ಯವಾಗಿ ಹರಿಯಾಲಿ ತೀಜ್‌ನ ಸಂತೋಷದಾಯಕ ಘಟನೆಯ ಒಂದು ದಿನದ ನಂತರ ಬರುತ್ತದೆ.

ಮತ್ತೊಂದೆಡೆ, ಪಶ್ಚಿಮದ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ದಿನ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬರುತ್ತದೆ. ದೇಶಾದ್ಯಂತ ಮಹಿಳೆಯರು, ಈ ದಿನದಂದು, ಹಾವುಗಳಿಗೆ ಹಾಲು ಅರ್ಪಿಸುತ್ತಾರೆ ಮತ್ತು ನಾಗ ದೇವತೆಯನ್ನು ಪೂಜಿಸುತ್ತಾರೆ. ಅವರು ತಮ್ಮ ಕುಟುಂಬಗಳಿಗೆ, ವಿಶೇಷವಾಗಿ ತಮ್ಮ ಸಹೋದರರಿಗೆ ಆರೋಗ್ಯಕರ ಮತ್ತು ದೀರ್ಘಾಯುಷ್ಯಕ್ಕಾಗಿ ದೇವರ ಆಶೀರ್ವಾದವನ್ನು ಪಡೆಯಲು ಪ್ರಾರ್ಥಿಸುತ್ತಾರೆ.

                                                                            Pic -1

 
 

ನಾಗ ಪಂಚಮಿ ಪೂಜಾ ವಿಧಿ

ಈ ಶುಭ ದಿನವು ಬಹಳಷ್ಟು ಜನರಿಗೆ ಬಹಳ ಪ್ರಸ್ತುತತೆಯನ್ನು ಹೊಂದಿದೆ. ಈ ದಿನದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು, ಈ ಪವಿತ್ರ ದಿನದ ವಿವರವಾದ ಪೂಜಾ ವಿಧಿಯನ್ನು ನಾವು ಕೆಳಗೆ ಪಟ್ಟಿ ಮಾಡಿದ್ದೇವೆ:

1) ಬೆಳಿಗ್ಗೆ ಎದ್ದ ನಂತರ ಸ್ನಾನ ಮಾಡಿ.

2) ಪೂಜಾ ಕೊಠಡಿಯನ್ನು ಪವಿತ್ರ ನೀರಿನಿಂದ ಸ್ವಚ್ಛಗೊಳಿಸಿ.

3) ಮರದ ಸ್ಟೂಲ್ ಅಥವಾ ಚೌಕಿಯ ಮೇಲೆ ಸ್ವಚ್ಛವಾದ ಬಟ್ಟೆಯನ್ನು ಹರಡಿ.

ಅದರ ಮೇಲೆ ಸರ್ಪ ದೇವರ ವಿಗ್ರಹ ಅಥವಾ ಛಾಯಾಚಿತ್ರವನ್ನು ಎಚ್ಚರಿಕೆಯಿಂದ ಇರಿಸಿ.

4) ವಿಗ್ರಹದ ಬಲಭಾಗದಲ್ಲಿ ಎಣ್ಣೆ ಅಥವಾ ತುಪ್ಪದ ದೀಪವನ್ನು ಬೆಳಗಿಸಿ.

5) ಸಂಕಲ್ಪ ಮಾಡಿ ಅಥವಾ ಪೂಜಾ ವಿಧಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡುವುದಾಗಿ ಪ್ರತಿಜ್ಞೆ ಮಾಡಿ.

6) ವಿಗ್ರಹದ ಮೇಲೆ ಪವಿತ್ರ ನೀರು ಅಥವಾ ಗಂಗಾ ಜಲವನ್ನು ಸಿಂಪಡಿಸಿ.

7) ವಿಗ್ರಹಕ್ಕೆ ಚಂದನ, ಹಲ್ದಿ, ಅಕ್ಷತೆ, ಕುಂಕುಮ, ಹೂವುಗಳು, ಧೂಪ ಮತ್ತು ನೈವೇದ್ಯವನ್ನು ಅರ್ಪಿಸಿ.

ಈ ಶುಭ ದಿನದಂದು ನಾಗ ದೇವತೆಗೆ ಪ್ರಾರ್ಥಿಸಲು ನಿಮ್ಮ ಕೈಗಳನ್ನು ಒಟ್ಟಿಗೆ ಸೇರಿಸಿ ಮತ್ತು ನಿಮ್ಮ ಕಣ್ಣುಗಳನ್ನು ಮುಚ್ಚಿ.

ಕ್ಷಾಮ ಯಜ್ಞವನ್ನು ಮಾಡಿ, ಅಂದರೆ ಪೂಜೆಯ ಸಮಯದಲ್ಲಿ ಮಾಡಿದ ನಿಮ್ಮ ಪಾಪಗಳು ಮತ್ತು ತಪ್ಪುಗಳಿಗೆ ಕ್ಷಮೆಯನ್ನು ಪಡೆಯಿರಿ.

 

                                                     Nagaraja depicted by Parijatha Flowers

 

ಸರ್ಪ ದೇವರ ಆಶೀರ್ವಾದವನ್ನು ಪಡೆಯಲು ಕೆಳಗಿನ ನಾಗ ಪಂಚಮಿ ಮಂತ್ರವನ್ನು ಪಠಿಸಿ-


ಓಂ ಭುಜಂಗೇಶಾಯ ವಿದ್ಮಹೇ,
ಸರ್ಪರಾಜಾಯ ಧೀಮಹಿ,
ತನ್ನೋ ನಾಗಃ ಪ್ರಚೋದಯಾತ್ 

 

 

                                                         Nagara Kallu under Banyan Tree

 

ನಾಗರ ಪಂಚಮಿ ಹಬ್ಬದಲ್ಲಿ ಪಠಿಸಲು ಕೆಲವು ಮುಖ್ಯ ಮಂತ್ರಗಳು ಈ ರೀತಿ ಇವೆ:


ಓಂ ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ ನಮಃ” ಮತ್ತು “ಸರ್ಪೇಭ್ಯೋ ಹರಿಭ್ಯಶ್ಚ ಭುಜಂಗೇಭ್ಯೋ ನಮೋ ನಮಃ” ಎಂಬ ಮಂತ್ರಗಳನ್ನು ಪಠಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ


                                                                            Pic -2

 

ಸರ್ವೇ ನಾಗಾಃ ಪ್ರಿಯಂತಾಂ ಮೇ ಯೇ ಕೇಚಿತ್ ಪೃಥ್ವಿತಲೇ|
ಯೇ ಚ ಹೇಳಿಮರೀಚಿಸ್ಥಾ ಯೇ ನ್ತರೇ ದಿವಿ ಸಂಸ್ಥಿತಾಃ||
ಈ ನದಿಶು ಮಹಾನಾಗ ಯೇ ಸರಸ್ವತಿಗಾಮಿನಃ|
ಯೇ ಚ ವಾಪಿತಡಾಗೇಷು ತೇಷು ಸರ್ವೇಷು ವೈ ನಮಃ||

ಈ ಮಂತ್ರದ ಅರ್ಥ: ಇಡೀ ಆಕಾಶ, ಭೂಮಿ, ಸ್ವರ್ಗ, ಸರೋವರಗಳು, ಕೊಳವೆಬಾವಿಗಳು, ಸೂರ್ಯನ ಕಿರಣಗಳು ಇತ್ಯಾದಿಗಳಲ್ಲಿ ನಾಗದೇವರು ಇರುವಲ್ಲೆಲ್ಲಾ ಅವರು ನಮ್ಮ ಎಲ್ಲಾ ದುಃಖಗಳನ್ನು ತೊಡೆದುಹಾಕುತ್ತಾರೆ ಹಾಗೂ ನಮಗೆ ಸಂತೋಷ ಮತ್ತು ಶಾಂತಿಯುತ ಜೀವನವನ್ನು ನೀಡುತ್ತಾರೆ. ಇದಕ್ಕಾಗಿ ನಾನು ನಾಗದೇವರಿಗೆ ನಮಸ್ಕರಿಸುತ್ತೇನೆ.


                                                                            Pic -3

 

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ|
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಳೀಯಂ ತಥಾ||
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಂ|
ಸಾಯಂಕಾಲೇ ಪಠೇನಿತ್ಯಂ ಪ್ರಾತಃ ಕಾಲೇ ವಿಶೇಷತಃ|
ತಸ್ಮೈ ವಿಶಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್‌||

ಈ ಮಂತ್ರದ ಅರ್ಥ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಮಂತ್ರವನ್ನು ಜಪಿಸುವುದರಿಂದ, ವ್ಯಕ್ತಿಯು ವಿಷಕ್ಕೆ ಹೆದರುವ ಅವಶ್ಯಕತೆಯಿರುವುದಿಲ್ಲ ಮತ್ತು ನಾಲ್ಕು ದಿಕ್ಕುಗಳಿಂದಲೂ ಎಲ್ಲೆಡೆ ವಿಜಯವನ್ನು ಪಡೆಯುತ್ತಾನೆ ಎನ್ನುವ ಅರ್ಥವನ್ನು ಇದು ನೀಡುತ್ತದೆ.

 

                                                                            Pic -4
 

ಮಧ್ವ ಸಂಪ್ರದಾಯದಲ್ಲಿ ನಾಗರ ಪಂಚಮಿಯಂದು ಪಠಿಸಲು

ನಿರ್ದಿಷ್ಟವಾದ ಮಂತ್ರವಿದೆ.


ಅದು ಈ ರೀತಿ ಇದೆ:

"ಅನೇನ ಶ್ರೀ ನಾಗಾಂತರ್ಗತ ಭಾರತೀ ರಮಣ ಮುಖ್ಯಪ್ರಾಣಂತರ್ಗತ ಚತುರ್ಮೂರ್ತ್ಯಾದ್ಯನಂತ ಅವತಾರಾತ್ಮಕ ಜಯಪತಿ ಸಂಕರ್ಷಣ ಪ್ರೇರಣಾಯಾ ಜಯಪತಿ ಸಂಕರ್ಷಣ ಪ್ರೀಯತಂ ಪ್ರೀತೋ ವರದೋ ಭವತು."


ಈ ಮಂತ್ರದ ಅರ್ಥ: ಈ ಮಂತ್ರವನ್ನು ಪಠಿಸುವುದರಿಂದ ನಾಗರ ದೇವತೆಗಳು ಮತ್ತು ಶ್ರೀ ಹರಿಯು ಪ್ರಸನ್ನರಾಗುತ್ತಾರೆ ಎಂಬ ನಂಬಿಕೆಯಿದೆ.

 

-------------- Hari Om ------------ 




 

Monday, July 28, 2025

Nagara Chauthi & Panchami

 

ನಾಗರ ಚೌತಿ ಮತ್ತು ನಾಗರ ಪಂಚಮಿ ಆಚರಣೆ

 

                   

                    Naga Devathe
 

ಓಂ ಸರ್ಪರಾಜಾಯ ವಿದ್ಮಹೆ l
ನಾಗರಾಜಾ ದೀಮಹೇll
ತನ್ನೋ ಅನಂತ ಪ್ರಚೋದಯಾತ್l


ಈ ವರ್ಷ ಸೋಮವಾರ ನಾಗರ ಚೌತಿ, ಮಂಗಳವಾರ- ನಾಗರ ಪಂಚಮಿ ಅಥವಾ ಗರುಡ ಪಂಚಮಿ ಬಂದಿದೆ. ನಾಗರ ಪಂಚಮಿ ನಾಡಿಗೆ ದೊಡ್ಡದು” ಎಂಬಂತೆ ಈ ಹಬ್ಬವನ್ನು ಎಲ್ಲಾ ಜಾತಿ- ವರ್ಣ- ವರ್ಗ ಮತದವರು ಸರಳವಾಗಿಯಾದರೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ನಾಗನ ಹಬ್ಬ ಪ್ರತಿ ವರ್ಷ ಶ್ರಾವಣ ಮಾಸದ ಐದನೇ, ಪಂಚಮಿ ತಿಥಿ ದಿನ ಬರುತ್ತದೆ. ನಾಗದೇವರ ಆರಾಧನೆ ಮಾಡುವುದರಿಂದ ಸಕಲ ದೋಷಗಳು ಪರಿಹಾರ ವಾಗುತ್ತದೆ. ಸಂತಾನ ಭಾಗ್ಯ ಮತ್ತು ಮಕ್ಕಳ ಆರೋಗ್ಯ, ಕುಟುಂಬದ ಸೌಭಾಗ್ಯ ಸಂಪತ್ತು, ಶತ್ರು ನಾಶ, ವಂಶದ ಪೂರ್ವಜರಿಗೆ ಸರ್ಪ ದೋಷ ಅಥವಾ ಯಾವುದೇ ದೋಷ ಇದ್ದರೂ ನಾಗನ ಆರಾಧನೆಯಿಂದ ಮುಕ್ತಿ ದೊರೆಯುತ್ತದೆ.

ಏಕೆಂದರೆ ನಾಗ ದೇವತೆಗಳಿಗೆ ಕೋಪ ಹೆಚ್ಚು. ಆದರೆ ಅವರನ್ನು ನಂಬಿ ಪೂಜೆ ಮಾಡಿ ಪ್ರಾರ್ಥಿಸಿದರೆ ನಾಗದೇವ ಶಾಂತ ನಾದರೆ ಒಳ್ಳೆಯದಾಗುತ್ತದೆ ನಂಬಿಕೆ ಇದೆ. ಸೂರ್ಯದೇವನಂತೆ ಪ್ರತ್ಯಕ್ಷ ದೇವ ಎಂದರೆ ನಾಗ. ನಾಗನ ಬಗ್ಗೆ ಎಲ್ಲರಿಗೂ ಭಯ ಅವನ ಕೃಪೆಗೆ ಪಾತ್ರರಾಗಲು ಭಯ ಭಕ್ತಿಯಿಂದ ವ್ರತ ಪೂಜೆಗಳನ್ನು ಮಾಡುತ್ತಾರೆ. ಈ ಕಾರಣದಿಂದ ನಾಗಾರಾಧನೆ ಶ್ರೇಷ್ಠ ಹಾಗೂ ಪವಿತ್ರವಾದದ್ದು.

ನಾಗರ ಚೌತಿ:- ಶ್ರಾವಣ ಶುದ್ಧ 4ನೇ ದಿನ ಬರುವುದು ನಾಗರ ಚೌತಿ. ಈ ದಿನ ಮನೆಯಿಂದ ಹೊರಗಡೆ ಇರುವ ಅಂದರೆ ನಾಗರಕಟ್ಟೆ, ದೇವಸ್ಥಾನಗಳ ಮುಂದೆ ಅರಳಿ ಮರದ ಕೆಳಗೆ ಇರುವ ನಾಗರ ಕಲ್ಲುಗಳಿಗೆ ಪೂಜಿಸುತ್ತಾರೆ, ಮುಂಜಾನೆ ಎದ್ದು ಸ್ನಾನ ಮಾಡಿ ಮಡಿ ಉಟ್ಟು ಪೂಜಾ ಸಾಮಗ್ರಿಗಳೊಂದಿಗೆ ಹೋಗಿ ಪೂಜೆ ಮಾಡುವುದು ಶ್ರೇಷ್ಠ. ( ನಾಗರಕಟ್ಟೆ ಅಥವಾ ದೇವಸ್ಥಾನಕ್ಕೆ ಹೋಗಲು ಎಲ್ಲರಿಗೂ ಆಗುವುದಿಲ್ಲ ಅವರು ಮನೆಯೊಳಗೆ ನಾಗಪ್ಪನ ವಿಗ್ರಹ ಇಟ್ಟುಕೊಂಡು ಮಾಡ ಬಹುದು. ಮಣ್ಣಿನಿಂದ ಮಾಡಿದರೆ ನೀರಿನಲ್ಲಿ ವಿಸರ್ಜಿಸಬೇಕು.

ಚೌತಿ ನಾಗಪ್ಪ”ನಿಗೆ ಮುಖ್ಯವಾಗಿ ಬೇಕಾಗಿರುವುದು ಹಸಿ ಪದಾರ್ಥಗಳು. ಶುದ್ಧವಾದ ಹಸಿ ಹಾಲು, ನೆನೆಸಿದ ಇಡಿ ಕಡಲೆ, ಮತ್ತು ಹಸಿ ತುಂಬಿಟ್ಟುಂಡೆ ಮತ್ತು ಚಿಗಳಿ ಉಂಡೆ (ನೆನೆಸಿದ ಅಕ್ಕಿ- ಬೆಲ್ಲ ಹಾಕಿ ಕುಟ್ಟಿ ಉಂಡೆ ಮಾಡಿದರೆ ತಂಬಿಟ್ಟು ಮತ್ತು ಎಳ್ಳು ಬೆಲ್ಲ ಕುಟ್ಟಿ ಚಿಕ್ಕ ಉಂಡೆ ಮಾಡಿದ ಚಿಗಳಿ ಇವು ನಾಗನಿಗೆ ಪ್ರಿಯ ಎಂದು ಅರ್ಪಸುತ್ತಾರೆ. ಕಬ್ಬಿನ ಹಾಲಿನಿಂ ಅಭಿಷೇಕ ಮಾಡುತ್ತಾರೆ. ನೈವೇದ್ಯಕ್ಕೆ ತೆಂಗಿನಕಾಯಿ- ಬಾಳೆಹ ಣ್ಣು. ಅರಿಶಿನ ಹಚ್ಚಿದ ಗೆಜ್ಜೆ ವಸ್ತ್ರ ಇರಬೇಕು ( ಹಳದಿಯ ಹೆಡೆಯ ಬಿಚ್ಚೋ ಬೇಗ) ಅಂದು ತಲೆಗೆ ಎರೆದುಕೊಂಡು ಪೂಜೆ ಮಾಡಬೇಕು ಮನೆಯ ಹಿರಿಯರೊಬ್ಬರು ಮಡಿಯಲ್ಲಿ ಪೂಜೆ ಮಾಡಿದಾಗ ಉಳಿದವರೆಲ್ಲ ನಾಗರ ಕಲ್ಲನ್ನು ಮುಟ್ಟದೆ ಸ್ವಲ್ಪ ದೂರ ನಿಂತು ಹಾಲು- ನೀರು ಹೂವಿನಿಂದ ಪ್ರೋಕ್ಷಣೆ ಮಾಡಬೇಕು

 

                                                                    Nagara Kallu

  

ಪೂಜೆಯ ಸಮಯದಲ್ಲಿ ತೋರು ಬೆರಳು ತೋರಿಸುವುದು, ಉಗುರು ಕಚ್ಚುವುದು
ತಲೆ ಕೂದಲು ಕೈಗೆ ಬಂದರೆ ಅಲ್ಲೇ ಹಾಕುವುದು, ಹಲ್ಲಿಗೆ ಏನಾದರೂ ಸಿಕ್ಕಿಕೊಂಡಿ ದ್ದರೆ ಪಿನ್ನಿನಿಂದ ತೋಡಿಕೊಳ್ಳುವುದು. ಇಂಥ ಅಚಾತುರ್ಯಗಳನ್ನು ಮಾಡದೆ ಕೈಮುಗಿದು ಭಕ್ತಿಯಿಂದ ನಿಂತು ಪೂಜೆ ನೋಡಬೇಕು. ಚೌತಿ ದಿನ ( ಸಾಮಾನ್ಯ ವಾಗಿ ಹಿರಿಯರು) ಊಟ ಮಾಡುವುದಿಲ್ಲ.

ಮಧ್ಯಾಹ್ನ ಮತ್ತು ಸಂಜೆ ಮುಸರೆಯ ಲ್ಲದ ಲಘು ಉಪಹಾರ ಸೇವಿಸುತ್ತಾರೆ. (ಉಪ್ಪಿಟ್ಟು- ಅವಲಕ್ಕಿ- ಅರಳು, ಹೆಸರು ಬೇಳೆ ಪಾಯಸ) ನಾಗಾರಾಧನೆಯ ಪ್ರಮುಖ ಉದ್ದೇಶ ಮಕ್ಕಳಿಗೆ ಬರುವ ಬಾಲ ಗ್ರಹ ಪೀಡೆ, ಭಯ, ಕಿರುಚಿ ಅಳುವುದು, ನಿದ್ದೆ ಮಾಡದೆ ರಗಳೆ ಮಾಡುವುದು ಇಂಥ ದೋಷ ಪರಿಹಾರವಾಗುತ್ತದೆ. ಮನೆಯಲ್ಲಿ ಸಂತಾನ, ಸಂಪತ್ತು, ಕಲ್ಯಾಣ ಆರೋಗ್ಯ ಭಾಗ್ಯ, ಗೋ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ. (ಈ ದಿನದ ಅಡುಗೆ ಯಲ್ಲಿ ಕರಿಯುವುದು -ಹುರಿಯುವುದು- ಕಾವಲಿ ಇಟ್ಟು ಸುಡುವುದು ಇವು ಮಾಡಬಾರದು.

ನಾಗಪ್ಪನಿಗೆ ತಂಪು ಇಷ್ಟ ಹೀಗೆ ಮಾಡಿದರೆ ನಾಗಪ್ಪನಿಗೆ ಶಾಖ ಜಾಸ್ತಿಯಾಗುತ್ತದೆ ಎಂದು ಮಾಡುವುದಿಲ್ಲ) ನಾಗಪ್ಪನನ್ನು ರಂಗೋಲಿಯಲ್ಲಿ ಅಥವಾ ಅರಿಶಿನದಲ್ಲಿ ಬರೆಯುವಾಗ ನಾಗನ ಮುಖ ಮನೆ ಒಳಗೆ ಬರುವಂತೆ ಬರೆದು ಪೂಜಿಸಬೇಕು ಒಳ್ಳೆಯದು.

 

                                                                     another Picture

  

ನಾಗರ ಪಂಚಮಿ ಅಥವ ಗರುಡ ಪಂಚಮಿ:

 

ನಾಗರ ಪಂಚಮಿ ಅತ್ಯಂತ ಸಂಭ್ರಮ ತುಂಬಿದ ನಾಡಿಗೆ ದೊಡ್ಡ ಹಬ್ಬ. ಮುಂಜಾನೆ ಎದ್ದು ಹೊಸ್ತಿಲು ತೊಳೆದು, ಮುಂಬಾಗಿನ ಮುಂದೆ ನೀರು ಹಾಕಿ, ರಂಗೋಲಿ ಬರೆಯ ಬೇಕು. ಹೊಸಿಲಿನ ಬಲ ಮತ್ತು ಎಡ ಬದಿ ನಾಗಪ್ಪನ ಚಿತ್ರ ಬರೆಯಬೇಕು. ಹೆಡೆ ಬಿಚ್ಚಿದ ದೊಡ್ಡ ನಾಗಪ್ಪ ಕೆಳಗೆ ಅಥವಾ ಪಕ್ಕದಲ್ಲಿ ಮರಿ ನಾಗನ ಬರೆಯಬೇಕು ನಾಲ್ಕಾರು ಮರಿಗಳನ್ನು ಬರೆದರೆ ಇನ್ನೂ ಒಳ್ಳೆಯದು. ರಂಗೋಲಿಯಲ್ಲಿ ಬರೆದ ನಾಗಪ್ಪನಿಗೆ ಅರಿಶಿನ ತುಂಬಿ, ಕಣ್ಣುಗಳು, ಸೀಳು ನಾಲಿಗೆ, ಮತ್ತು ಹೆಡೆಯ ಚಿತ್ರ ಮೂಡುವಂತೆ ಬರೆಯಬೇಕು. ತಲೆಗೆ ಸ್ನಾನ ಮಾಡುವಾಗ, ಎಣ್ಣೆ ಸೀಗೆ ಬಳಸು ವಂತಿಲ್ಲ. ಹಾಗಂತ ಬರೀ ತಲೆಯಲ್ಲಿ ಮಾಡಬಾರದು ಪುಟ್ಟಬಟ್ಟಲಲ್ಲಿ ಹಾಲುಬೆಲ್ಲ ಬೆರೆಸಿಟ್ಟು ಇದನ್ನು ಹೂವಿನಿಂದ ನೆತ್ತಿಗೆ ಶಾಸ್ತ್ರಕ್ಕೆ ಒತ್ತಿಕೊಂಡು ( ಸಾಮಾನ್ಯವಾಗಿ ಎರೆದು ಕೊಳ್ಳುವ ಹಬ್ಬಗಳಲ್ಲಿ ದೇವರ ಮುಂದೆ ದೀಪ ಹಚ್ಚಿ, ಕೆಳಗೆ ಚಿಕ್ಕದಾಗಿ ಹಸೆ ಬರೆದು ಎರಡು ಮಣೆ ಹಾಕಿ ಹೊಸ ಜಮಖಾನ, ಪಂಚೆ, ಶಲ್ಯ ಏನಾದರೂ ಹಾಸಿ ಅದರ ಮೇಲೆ ಇಬ್ಬರನ್ನು ಕೂರಿಸಿ ಎಣ್ಣೆ ಶಾಸ್ತ್ರ (ಹಾಲು ಬೆಲ್ಲ) ಮಾಡುತ್ತಾರೆ, ಅವರವರೇ ಕೈಯಿಂದ ಹಚ್ಚಿಕೊಳ್ಳುವಂತಿಲ್ಲ) ಮನೆಯಲ್ಲಿ ಎಲ್ಲರೂ ತಲೆಗೆ ಸ್ನಾನ ಮಾಡಬೇಕು.


ಪಂಚಮಿ ಮನೆಯ ಹಿಂಭಾಗದ ನಾಗರಕಟ್ಟೆಗೆ ಹೋಗಿ ಹಿರಿಯರು ಪೂಜೆ ಮಾಡುವುದನ್ನು ನೋಡಿ ನಂತರ ಹಾಲು ನೀರು ನಾಗಪ್ಪನ ಬೆನ್ನಿಗೆ ಬರುವಂತೆ ತನಿ ಎರೆಯ ಬೇಕು. “ಸುಬ್ಬಾ ಸುಬ್ಬಾ ಗೋವಿಂದ, ಸುಬ್ರಹ್ಮಣ್ಯ ಗೋವಿಂದ ಕುಕ್ಕೆ ಲಿಂಗ ಗೋವಿಂದ ಸುಬ್ರಹ್ಮಣ್ಯ ಗೋವಿಂದ, ಸುಬ್ರಹ್ಮಣ್ಯ ಗೋವಿಂದ,‌ಎಂದು ಮೂರು ಸಲ ಹೇಳಿ ಸಲ ತನಿ ಎರೆಯಬೇಕು.

 
ಅವರವರ ಮನೆ ಪದ್ಧತಿಯಂತೆ ನಮ್ಮ ಮನೆಗಳಲ್ಲಿ ಚೌತಿ ದಿನ ಹಸಿಯಾದ ಪದಾರ್ಥವಾದರೆ, ಪಂಚಮಿ ದಿನ ಬಿಸಿ ಅಂತ ಶಾಸ್ತ್ರ. ತೊಳೆದು ಒಣಗಿಸಿದ ಇಡೀ ಕಡಲೆ, ಅಕ್ಕಿ ನುಚ್ಚ ನ್ನು ಚೆನ್ನಾಗಿ ಹುರಿದು ಅರಳು ಸೇರಿಸಿ ಮಿಶ್ರ ಮಾಡಿ ಅಕ್ಷತೆಯಂತೆ ಸ್ವಲ್ಪ ತೆಗೆದು ಕೊಂಡು ನಾಗಪ್ಪನಿಗೆ ಮೇಲೆ ಮೂರು ಸಲ ಹಾಕಬೇಕು ಕೊನೆಯಲ್ಲಿ ಸುಬ್ರಹ್ಮಣ್ಯ ನಿನ್ನ ಬೆನ್ನು ತಣ್ಣಗಿರಲಿ ನಮ್ಮ ಕುಟುಂಬದ ರಕ್ಷಣೆಯನ್ನು ಮಾಡೋ ತಂದೆ ಎಂದು ಪ್ರಾರ್ಥಿಸಬೇಕು. ಮನೆಯ ಒಳಗೆ ದೇವರ ಮುಂಭಾಗದ ಲ್ಲಿ ಮತ್ತು ಮುಂಭಾಗಿಲು ಮುಂದೆ ಬರೆದ ನಾಗಪ್ಪಗಳಿಗೆ ಮೂರು ಸಲ ಹೂವಿ ನಿಂದ ಹಾಲು ಪ್ರೋಕ್ಷಿಸಿ ಹೂವು ಏರಿಸಿ ಹುರುಕಲು ಹಾಕಿ ಕೈ ಮುಗಿಯ ಬೇಕು. ( ಅಕ್ಷತೆ ಹಾಕಬಾರದು)

 
ನಾಗನ ಹಬ್ಬದಲ್ಲಿ ಕರಿದ- ಹುರಿದ ತಿಂಡಿ ಮಾಡುವುದಿಲ್ಲ. ಹಬೆಯಲ್ಲಿ ಬೇಯಿಸಿದ ಸಿಹಿ- ಕಾರ ಕಡುಬಿನಂತ ಪದಾರ್ಥ ಹೊಯ್ಗಡುಬು, ಕೊಟ್ಟೆ ಕಡುಬು, ಅರಿಶಿನೆಲೆ ಕಡುಬು, ಕಾಯಿ ಬೆಲ್ಲ ಮತ್ತು ಕಾಯಿ ಮೆಣಸಿನ ಕಾಯಿ ತುಂಬಿದ ಉಕ್ಕರಿಸಿದ ಕಡುಬು ಮಾಡುತ್ತಾರೆ. ಬಿಸಿ ತಂಬಿಟ್ಟು ಅಂದರೆ ಅಕ್ಕಿ ಪುಟಾಣಿ ಇವುಗಳನ್ನೆಲ್ಲ ಹುರಿದು ಪುಡಿ ಮಾಡಿದ ಹಿಟ್ಟಿಗೆ. ಒಣ ಕೊಬ್ಬರಿ ಕಡಲೆ ಬೀಜ ಸೇರಿಸಿ ಬೆಲ್ಲದ ಪಾಕ ಹಾಕಿ ಕಟ್ಟಿದ ಉಂಡೆ ಮಾಡುತ್ತಾರೆ. ಮಧ್ಯಾಹ್ನ ಊಟ ಮುಗಿಸಿ, ಸೂರ್ಯ ಇಳಿ ಮುಖವಾಗುವ 4: 30- 5:00 ಸಮಯಕ್ಕೆ, ಕೈ ಕಾಲು ಮುಖ ತೊಳೆದು ತಲೆ ಬಾಚಿ, ಹೂ ಮುಡಿದು, ಹೆಣ್ಣು ಮಕ್ಕಳು ಅಲಂಕಾರ ಮಾಡಿ ಮಾಡಿಕೊಂಡು, ದೇವರ ಮುಂದೆ ದೀಪ ಹಚ್ಚಿ ಅಣ್ಣ ತಮ್ಮಂದಿರನ್ನು ಕೂರಿಸಿ (ನಾಗಪ್ಪನಿಗೆ ಅಭಿಷೇಕ ಮಾಡಿದ ತೀರ್ಥದಿಂದ) ಸಹೋದರರ ಬೆನ್ನು ತೊಳೆಯ ಬೇಕು

 

ಮಳೆಗಾಲವಾಗಿ ನದಿಗಳು ತುಂಬಿ ಹರಿಯುತ್ತಿದ್ದು ತೀರ್ಥದ ನೀರು ತಣ್ಣಗೆ ಇರುತ್ತದೆ. ತೀರ್ಥವನ್ನು ಹೂವಿನಿಂದ ಅದ್ದಿ ಬೆನ್ನಿನ ಮಧ್ಯ ಹುರಿ ಭಾಗಕ್ಕೆ ಒದ್ದೆ ಮಾಡಬೇಕು.( ಕುಂಡನಿ ಶಕ್ತಿ ಇರುವ ಜಾಗ) “ಅಣ್ಣಾ ನಿನ್ನ ಬೆನ್ನು ತಣ್ಣಗಿರಲಿ ಎಂದು ಹೇಳಿ ಮೂರು ಸಲ ಮಾಡಿ ಹರಸ ಬೇಕು. ತಿನ್ನಲು ಸಿಹಿ ತಂಬಿಟ್ಟಿನ ಉಂಡೆ ಕೊಡ ಬೇಕು. ನಂತರ ಅಣ್ಣ ತಮ್ಮಂದಿರು, ಅಕ್ಕ ತಂಗಿಯನ್ನು ಕೂರಿಸಿ, ಅರಿಶಿಣ ಕುಂಕುಮ ಹೂವು ಕೊಟ್ಟು ಸೀರೆ ಬ್ಲೌಸ್ ಬಟ್ಟೆ ಡ್ರೆಸ್ ಏನಾದರೂ ಸರಿ ಉಡುಗೊರೆಗಳನ್ನು ಕೊಟ್ಟು ಗಂಡನ ಮನೆಯಲ್ಲಿ ನೂರು ಕಾಲ ಸುಖವಾಗಿರು ಎಂದು ಆಶೀರ್ವದಿಸಬೇಕು ಎಲ್ಲರೂ ತಂಬಿಟ್ಟಿನ ಸವಿ ಸವಿದು ಖುಷಿಯಿಂದ ಜೋಕಾಲಿ ಆಡಬೇಕು, ಅಂತ್ಯಾಕ್ಷರಿ, ಹಾಸ್ಯ, ಹಾಡು ಹರಟೆಗಳಲ್ಲಿ ಕಳೆದ ಸಮಯ ತಿಳಿಯುವುದೇ ಇಲ್ಲ.

ಕತ್ತಲಾಗುವ ಹೊತ್ತಿಗೆ ಮಧ್ಯಾಹ್ನ ಮಾಡಿದ ಪುಳಿಯೋಗರೆ, ಕಡಬು, ಪಾಯಸ, ಉಂಡೆಗಳನ್ನು ಸವಿಯುತ್ತ ನೆನಪುಗಳ ಮೇಲುಕಿನೊಂದಿಗೆ ಖುಷಿ ಖುಷಿಯಾಗಿ ಒಂದಾಗಿ ದಿನ ಕಳೆಯುವುದು “ನಾಗರ ಪಂಚಮಿ” ಹಬ್ಬದ ಸಡಗರ ಸಂಭ್ರಮ

 

                                                              Naga Mantra - Very Powerful

 

ನವ ನಾಗ ಸ್ತೋತ್ರ:-

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ
ಕಂಬಲಮ್ ಶಂಖಪಾಲಂ ಧಾರ್ತರಾಷ್ಟ್ರಂ
ತಕ್ಷಕಂ ಕಾಲಿಯಂ ತಥಾ ಏತಾನಿ ನವ
ನಾಮಾನಿ ನಾಗನಾಂ ಯ: ಪಟೇನ್ನರ: ತಸ್ಯ
ನಾಗಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್!

 

-------------- Hari Om -----------