Thursday, December 4, 2025

ಸತ್ಯನಾರಾಯಣ ಪೂಜೆಯ ಮಹತ್ವವೇನು - Satyanarayana - Puja Significance

 

ಸತ್ಯನಾರಾಯಣ ಪೂಜೆಯನ್ನು ಮಾಡುವುದು ಹೇಗೆ - ಇದರ ಮಹತ್ವವೇನು..?


Satyanarayana Puja - its Significance..?


                                                                   Lord Satyanarayana

 

ಸ್ಕಂದ ಪುರಾಣದಿಂದಲೂ ಆಚರಿಸಿಕೊಂಡು ಬಂದಿರುವ ಶ್ರೀ ಸತ್ಯನಾರಾಯಣ ಪೂಜೆಯನ್ನು ಮನೆಯಲ್ಲಿ ಆಚರಿಸುವುದರಿಂದ ಯಾವೆಲ್ಲಾ ಲಾಭಗಳನ್ನು ಪಡೆಯಬಹುದು ಗೊತ್ತಾ..? ಕೇವಲ ಶುಭ ಸಮಾರಂಭಗಳಲ್ಲಿ ಮಾತ್ರವಲ್ಲ, ಮರಣದ ನಂತರ ಸೂತಕ ಕಳೆದ ಮೇಲೂ ಕೂಡ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸತ್ಯನಾರಾಯಣ ಪೂಜೆಯ ಮಹತ್ವ, ಮಾಡುವ ವಿಧಾನ ಮತ್ತು ಯಾವಾಗ ಮಾಡಬೇಕೆನ್ನುವುದರ ಮಾಹಿತಿ ಇಲ್ಲಿದೆ.


ಸತ್ಯನಾರಾಯಣ ಎನ್ನುವುದು ಶ್ರೀ ಮಹಾವಿಷ್ಣುವಿನ ಇನ್ನೊಂದು ಹೆಸರು. ಸತ್ಯನಾರಾಯಣ ಪೂಜೆ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುತ್ತದೆ. ಭಾರತದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಈ ಪೂಜೆಯನ್ನು ಆಚರಿಸಲಾಗುತ್ತದೆ. ಸತ್ಯನಾರಾಯಣ ಪೂಜೆಯನ್ನು ಸಾಮಾನ್ಯವಾಗಿ ತಿಂಗಳ ಹುಣ್ಣಿಮೆಯ ದಿನ ಹಿಂದೂ ಧರ್ಮದಲ್ಲಿ ಆಚರಿಸಲಾಗುತ್ತದೆ. ಸತ್ಯನಾರಾಯಣ ಪೂಜೆಗೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಕೂಡ ವಿಶೇಷ ಮಹತ್ವವಿದೆ.

ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ಅಥವಾ ಸಮೃದ್ಧಿ ನೆಲೆಯಾಗುತ್ತದೆ. ಪ್ರತೀ ಶುಭ ಕಾರ್ಯಕ್ಕೂ ಮುನ್ನ ಸತ್ಯನಾರಾಯಣ ಪೂಜೆಯಾಗಲಿ ಅಥವಾ ಕಥೆಯಾಗಲಿ ಹಮ್ಮಿಕೊಳ್ಳಲಾಗುತ್ತದೆ. ಅದೇ ರೀತಿ ಸತ್ಯನಾರಾಯಣ ಪೂಜೆಯನ್ನು ಅಥವಾ ಕಥೆಯನ್ನು ಮನೆಯಲ್ಲಿ ಯಾರಾದರೂ ಮರಣ ಹೊಂದಿದ ಬಳಿಕವೂ ಆಚರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ..? ಈ ಸತ್ಯನಾರಾಯಣ ಕಥೆಯನ್ನು ಶುಭ ಕಾರ್ಯದ ಆರಂಭದಲ್ಲೂ ಹಾಗೂ ವ್ಯಕ್ತಿ ಮರಣದ ನಂತರವೂ ಕೂಡ ಮಾಡಲಾಗುತ್ತದೆ. ಈ ಕಥೆಯನ್ನು ಏಕೆ ಮಾಡಲಾಗುತ್ತದೆ..? ಅದರ ಪ್ರಾಮುಖ್ಯತೆ ಏನು..? ಎಲ್ಲವೂ ಹೀಗಿದೆ:

 

                                                                     Satyanarayana God

 


ಸತ್ಯನಾರಾಯಣ ಪೂಜೆ ಮಾಡುವ ವಿಧಾನ

ಶಾಸ್ತ್ರಗಳ ಪ್ರಕಾರ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳುವವರು ಸತ್ಯನಾರಾಯಣ ಪೂಜೆಗೂ ಹಿಂದಿನ ದಿನ ಉಪವಾಸವನ್ನು ಮಾಡಬೇಕಾಗುತ್ತದೆ. ಸತ್ಯನಾರಾಯಣ ಪೂಜೆ ಮಾಡುವಾಗ ಪೂಜಾ ಸ್ಥಳವನ್ನು ಗೋಮೂತ್ರದ ಮೂಲಕ ಪವಿತ್ರಗೊಳಿಸಿಕೊಳ್ಳಬೇಕಾಗುತ್ತದೆ. ತದನಂತರ ಕುರ್ಚಿಯಾಗಿರಬಹುದು, ಮೇಜಾಗಿರಬಹುದು ಅಥವಾ ನೆಲದಿಂದ ಸ್ವಲ್ಪ ಎತ್ತರದಲ್ಲಿ ಯಾವುದಾದರೊಂದು ವಸ್ತುಗಳನ್ನಿಟ್ಟು ಆ ವಸ್ತುಗಳ ನಾಲ್ಕೂ ಬದಿಗಳಲ್ಲಿ ಬಾಳೆಗಿಡವನ್ನು ಕಟ್ಟಿ ಅಥವಾ ನೆಟ್ಟು ಆ ವಸ್ತುವಿನ ಮೇಲೆ ವಿಷ್ಟುವಿನ ಫೋಟೋ ವನ್ನಾಗಲಿ, ಪ್ರತಿಮೆಯನ್ನಾಗಲಿ ಇಡಬೇಕು.

ಸತ್ಯನಾರಾಯಣ ಪೂಜೆಯನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸಿ, ನಂತರ ಇಂದ್ರಾದಿ ದಶದಿಕ್ಪಾಲಕರನ್ನು, 5 ಲೋಕಪಾಲರನ್ನು, ರಾಮ, ಲಕ್ಷ್ಮಣ, ಸೀತೆಯನ್ನು ಸೇರಿದಂತೆ ರಾಧಾ, ಕೃಷ್ಣರನ್ನೂ, ದುರ್ಗೆಯನ್ನು ಕೂಡ ಪೂಜಿಸಬೇಕು. ತದನಂತರ ಸತ್ಯನಾರಾಯಣ ಸ್ವಾಮಿಯನ್ನು ಪೂಜಿಸಬೇಕು. ಸತ್ಯನಾರಾಯಣನನ್ನು ಪೂಜಿಸಿದ ನಂತರ ಲಕ್ಷ್ಮೀ ಮಾತೆಯನ್ನು ಹಾಗೂ ಪೂಜೆಯ ಕೊನೆಯಲ್ಲಿ ಪರಶಿವನನ್ನು ಮತ್ತು ಬ್ರಹ್ಮದೇವನನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಎಲ್ಲಾ ದೇವರಿಗೆ ಆರತಿ ಬೆಳಗಿ, ಚರಣಾಮೃತವನ್ನು ವಿತರಿಸಿ.

ಒಂದುವೇಳೆ ಸತ್ಯನಾರಾಯಣ ಪೂಜೆಯಲ್ಲಿ ಪುರೋಹಿತರು ಭಾಗಿಯಾಗಿದ್ದರೆ ಅವರಿಗೆ ವಾಯನ ದಾನ, ದಕ್ಷಿಣೆ ಮತ್ತು ವಸ್ತ್ರಗಳನ್ನು ದಾನ ಮಾಡುವುದರೊಂದಿಗೆ, ಎರಡು ತೆಂಗಿನಕಾಯಿ, ಐದೈದು ವೀಳ್ಯದೆಲೆ, ಅಡಿಕೆ, ಹಣ್ಣುಗಳು, ಅರ್ಧ ಸೇರು ಅಕ್ಕಿ, ಆಹಾರ ಪದಾರ್ಥಗಳನ್ನು ಎರಡು ಬಾಳೆ ಎಲೆ ಮುಚ್ಚಿ ನೀಡಬೇಕು. ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡವರು ತಾವು ಪ್ರಸಾದ ಮತ್ತು ಊಟವನ್ನು ಸ್ವೀಕರಿಸುವ ಮೊದಲು ಪುರೋಹಿತರ ಚರಣಗಳಿಗೆ ಎರಗಿ ಆಶೀರ್ವಾದವನ್ನು ಪಡೆಯಬೇಕು.

 

                                                         Old Photo of Lord Satyanarayana

  

ಸತ್ಯನಾರಾಯಣ ಪೂಜೆ ಅಥವಾ ಕಥೆಯ ಮಹತ್ವ: ‌

ಸತ್ಯನಾರಾಯಣ ಪೂಜೆಯನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡು ಬಂದ ಪೂಜೆಯಲ್ಲ, ಬದಲಾಗಿ ಇದನ್ನು ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದು 'ಸ್ಕಂದ ಪುರಾಣ'ದಲ್ಲಿ ಹೇಳಲಾಗಿದೆ. ನಾರದ ಮುನಿಗಳು ವಿಷ್ಣುವಿನಲ್ಲಿ ಭೂಮಿಯ ಮೇಲಿನ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ಯಾವುದಾದರೂ ಉತ್ತಮ ಮಾರ್ಗವಿದೆಯೇ ಎಂದು ಕೇಳಿದಾಗ ಮಹಾವಿಷ್ಣು ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಕಷ್ಟವು ದೂರಾಗುತ್ತದೆಂದು ಹೇಳುತ್ತಾರೆಂತೆ.

ಇದರ ಆಧಾರದ ಮೇಲೆ ಇಂದಿಗೂ ಕೂಡ ಸತ್ಯನಾರಾಯಣ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೊಂದು ಪವಿತ್ರ ಪೂಜೆಯೆಂದು ಪರಿಗಣಿಸಲಾಗಿದ್ದು, ಈ ಪೂಜೆಯನ್ನು ಮನೆಯಲ್ಲಿ ಮಗು ಜನಿಸಿದಾಗ, ವಿವಾಹ ಸಂದರ್ಭದಲ್ಲಿ, ಗೃಹ ಪ್ರವೇಶದ ಸಂದರ್ಭದಲ್ಲಿ ಸೇರಿದಂತೆ ಇನ್ನು ಹಲವಾರು ಸಂತಸದ ಸಮಯಗಳಲ್ಲಿ ಆಚರಿಸಲಾಗುತ್ತದೆ. ಜನರು ಅನಾರೋಗ್ಯದಿಂದ ಬಳಲುತ್ತಿದ್ದರೆ, ನಷ್ಟವನ್ನು ಅನುಭವಿಸುತ್ತಿದ್ದರೆ ಅಥವಾ ತಮ್ಮ ಆಸೆಗಳನ್ನು ಈಡೇರಿಸಕೊಳ್ಳಲು ಕೂಡ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾರೆ. ಈ ಪೂಜೆಯಿಂದ ದುಷ್ಟರನ್ನು ಶಿಕ್ಷಿಸಿ, ಸಿಷ್ಟರನ್ನು ರಕ್ಷಿಸಲು ಸಹಾಯಕವಾಗಿದೆ.

                                                                       another Photo
 

 ಯಾವಾಗ ಸತ್ಯನಾರಾಯಣ ಪೂಜೆಯನ್ನು ಮಾಡಬೇಕು..?


ಭಗವಾನ್‌ ಸತ್ಯನಾರಾಯಣನನ್ನು ಯಾವಾಗ ಬೇಕಾದರೂ ಪೂಜಿಸಬಹುದು. ಆದರೆ ಈ ಪೂಜೆಯನ್ನು ವಿಶೇಷವಾಗಿ ಹುಣ್ಣಿಮೆ, ಸಂಕ್ರಾಂತಿ, ಗುರುವಾರ ಅಥವಾ ಇನ್ನಿತರ ದೊಡ್ಡ ಕಷ್ಟದ ಸಮಯದಲ್ಲೂ ಮಾಡಬಹುದು. ಪೂಜೆಯಂದು ಮುಂಜಾನೆ ಸ್ನಾನ ಮಾಡಿ, ಶುಚಿಯಾದ ಬಟ್ಟೆಯನ್ನು ಅಥವಾ ಹೊಸ ಬಟ್ಟೆಯನ್ನು ಧರಿಸಿ, ಹಣೆಯ ಮೇಲೆ ತಿಲಕವನ್ನಿಟ್ಟು ಶುಭ ಸಮಯದಲ್ಲಿ ಪೂಜೆಯನ್ನು ಪ್ರಾರಂಭಿಸಿ. ಸತ್ಯನಾರಾಯಣ ಪೂಜೆಯ ವೇಳೆ ವಿಷ್ಣುವಿನ ಕಥೆಯನ್ನು ಓದಿ ಅಥವಾ ಕೇಳಿ.

 

                                                                            Prasada

 

ಸತ್ತ ನಂತರ ಮಾಡುವ ಸತ್ಯನಾರಾಯಣ ಪೂಜೆ :


ವ್ಯಕ್ತಿಯ ಮರಣದ ನಂತರ ಮನೆಯಲ್ಲಿ ಸೂತಕದ ವಾತಾವರಣ ತುಂಬಿಕೊಂಡಿರುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವಾಗಲಿ, ಪೂಜಾ ವಿಧಿ - ವಿಧಾನಗಳಾಗಲಿ ಹಮ್ಮಿಕೊಳ್ಳಲಾಗುವುದಿಲ್ಲ. ಹಾಗಾಗಿ ಶವಸಂಸ್ಕಾರ ಮುಗಿದು ಸೂತಕವು ಕಳೆದ ನಂತರ ಮನೆಯಲ್ಲಿ ಭಗವಾನ್‌ ವಿಷ್ಣುವಿನ ಆರಾಧನೆ ಅಥವಾ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಈ ಕಥೆಯನ್ನು ಆಯೋಜಿಸುವ ಮೂಲಕ ಮನೆಯನ್ನು ಮತ್ತೆ ಶುದ್ಧೀಕರಿಸಲಾಗುತ್ತದೆ ಮತ್ತು ಪೂಜೆಯ ಆಚರಣೆಗಳು ನಿಯಮಿತವಾಗಿ ಆರಂಭವಾಗುತ್ತದೆ.


---------------------- Hari Om -------------------


 

 


 

 

 


 

 

Wednesday, December 3, 2025

Brahmi or Brahma Muhurta

 

ಬ್ರಾಹ್ಮೀ ಮುಹೂರ್ತ Brahmi or Brahma Muhurta 

 

                                     Brahmi Muhurta

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರಸೂರ್ಯ ಕಿರಣ, ದಿಕ್ಕು ಮತ್ತುಭೂಮಿಯಚಲನೆಯನ್ನು ಆಧರಿಸಿವಾಸ್ತುಶಾಸ್ತ್ರರಚಿಸಲಾಗಿದೆ. ಸೂರ್ಯನ ಕಿರಣಗಳು ಏಳು ವಿಭಿನ್ನ ವಿಧಗಳನ್ನು ಒಳಗೊಂಡಿದೆ.


ಪ್ರತಿಯೊಂದು ಕಿರಣವೂ ದಿಕ್ಕನ್ನು ಅವಲಂಬಿಸಿ ನೆಗೆಟಿವ್‌ ಮತ್ತುಪೊಸೆಟಿವ್‌ಎನರ್ಜಿಯನ್ನು ತುಂಬುತ್ತವೆ. ಈ ಏಳು ಪ್ರಕಾರದ ಕಿರಣಗಳನ್ನು ಸಪ್ತದೇವತಾ ಎಂದೂ ಕೂಡ ಕರೆಯುತ್ತಾರೆ. ಆದ್ದರಿಂದ ಆಯಾ ಕಾಲದಲ್ಲಿ ಆಯಾ ಕೆಲಸಗಳನ್ನು ಪೂರೈಸಬೇಕು.


ನಸುಕಿನ 3.45 AM ರಿಂದ 4.45 AM ರೊಳಗಿನ ಅವಧಿಗೆ - ಬ್ರಾಹ್ಮಿಮುಹೂರ್ತಎನ್ನುತ್ತಾರೆ.


Ancient Indians measured time using different calculations. They called the smallest time unit ‘Nimisha,’ which is the smallest time frame conceivable by humans. Ancient Indians defined Nimisha as the wink of an eye. So one Nimisha is the time taken by a person to blink their eyes.

Further, the Ancient Indians classified the time as follows

15 Nimisha = one Kashta

15 Kashta = one Laghu

15 Laghu = one Ghatika

2 Ghatika (30 Laghu) = One muhurta

30 Muhurta = One day (of 24 hours)

One Muhurtha equals 48 minutes approximately.

Brahma Muhurta is the second-last Muhurta before Sunrise. While some believe it starts at 3:30 AM and ends at 5:30 AM, it is not true. Brahma Muhurta begins 1 hour 36 minutes before the Sunrise and ends 48 minutes before Sunrise, lasting for 48 minutes. The time of Sunrise will not be the same each day, and it varies every day based on the time of the year and geographical location. As a result, the exact time of Brahma Muhurta also will differ.

 

                                                          Lord Brahma

 

Another Version of Muhurta -- it is a time period of 48 minutes.

Brahma Muhurta starts 2 Muhurtas before sunrise and lasts for 1 Muhurta period.

For example, if sunrise is at 6 AM., then it starts 48+48 = 96 minutes before 6 AM.

That is, it starts at 4.24 AM. and lasts till 5:12 AM.

Time of Sunrise keeps changing within the range of 5.40 AM – 7 AM., so Brahma

Muhurta starting time ranges from 4.04 AM – 5.24 AM.

 

                                                                 Pic - 1

 

ನಿಖರವಾಗಿ ಬ್ರಾಹ್ಮಿಮುಹೂರ್ತವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ 1ಗಂಟೆ 36 ನಿಮಿಷಗಳು ಅಂದರೆ 96 ನಿಮಿಷಗಳು-2 ಮುಹೂರ್ತ ಅಥವಾ 4 ಘಟಿಕಾ.{ಒಂದು ಮುಹೂರ್ತದ ಅವಧಿ 48 ನಿಮಿಷಗಳು}


ಬೆಳಿಗ್ಗೆ 4.30amರಿಂದ 6:00am ಗಂಟೆಯೊಳಗಿನ ಅವಧಿ ಉಷಾಕಾಲ. ದೇವತಾ ಪ್ರಾರ್ಥನೆಗೆ ಅತ್ಯಂತ ಸೂಕ್ತ ಸಮಯ.ಈ ಬ್ರಾಹ್ಮಿಕಾಲ ಮತ್ತು ಉಷಾಕಾಲವು ಚೈತನ್ಯದಿಂದ ತುಂಬಿರುತ್ತದೆ.


ನಸುಕಿನ 3.45am ರಿಂದ 6:30am ರವರೆಗಿನ ಸಮಯಕ್ಕೆ ಪ್ರಾಚೀನ ಋಷಿಮುನಿಗಳು ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದಸತ್ಕರ್ಮಗಳನ್ನಾಚರಿಸಿದರೆ ಹೆಚ್ಚು ಫಲಪ್ರದ.


ಬೆಳಗಿನ ಹೊತ್ತು ನಮ್ಮ ಮನಸ್ಸು ಫ್ರೆಶ್ ಆಗಿರುತ್ತದೆ. ಆಯಾಸವೆಲ್ಲ ನಿದ್ದೆಯಲ್ಲಿ ಕಳೆದು ದೇಹನವಚೈತನ್ಯದಿಂದ ಕೂಡಿರುತ್ತದೆ. ಇನ್ನು ಬೆಳಗಿನ ಜಾವದಲ್ಲಿ ಮೆದುಳಿನ ನೆನಪಿನ ಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ ಎಂದು ವೈದ್ಯರು ಕೂಡ ಹೇಳುತ್ತಾರೆ,


ಪ್ರತಿನಿತ್ಯಬ್ರಹ್ಮಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ,ಬುದ್ಧಿಹಾಗೂಆರೋಗ್ಯವೃದ್ಧಿಸುತ್ತವೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರ ನಿಷಿದ್ಧ.
ವೈಜ್ಞಾನಿಕದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಮಹತ್ವವಿದೆ.


ಈ ಸಮಯದಲ್ಲಿ ವಾಯುಮಂಡಲಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ. ಆಮ್ಲಜನಕದ ಪ್ರಮಾಣ ಶೇಕಡಾ 41% ರಷ್ಟಿರುತ್ತದೆ.

ಇದರಿಂದ ನಮ್ಮಶ್ವಾಸಕೋಶಗಳು,ಶುದ್ಧಿಯಾಗುತ್ತದೆ.ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.

 

                                                                            Pic - 2
 

ಯಾರು ಬ್ರಹ್ಮಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.


ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂಬುದ್ಧಿಉಲ್ಲಸಿತವಾಗಿರುತ್ತವೆ.


ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿಮನವರಿಕೆಯಾಗುತ್ತದೆ,
ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ. ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ.ಕೆಲವುಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.


ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.


ಮನುಷ್ಯನ ಜ್ಞಾನ, ವಿವೇಕ,ಶಾಂತಿ,ಸುಖಮುಂತಾದಸದ್ಗುಣಗಳವೃದ್ಧಿಯಾಗುತ್ತದೆ
ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.


ಲೋಕಾಃ ಸಮಸ್ತಾಃ ಸುಖಿನೋ ಭವಂತು.


----------------- Hari Om ----------------


 



 

 



 


Friday, November 28, 2025

ನವ ಬೃಂದಾವನ –ಪಲ್ಲಿಪಾಳ್ಯಂ -ಒಡಪಲ್ಲಿ - ಈರೋಡ್

 

ನವ ಬೃಂದಾವನ –ಪಲ್ಲಿಪಾಳ್ಯಂ -ಒಡಪಲ್ಲಿ - ಈರೋಡ್

Nava Brindavanas -- Pallipalayam–Odapalli – Erode- T.Nadu

 

                               

                                 Main Entrance to Mutt


 

                            

                               Nava Brindavana  Map 

 

ತಮಿಳುನಾಡಿನ *ಈರೊಡ್ ನಗರದ ಓಡಪ್ಪಳ್ಲಿ ಎಂಬ ಕಾವೇರಿ ತೀರದ ಶ್ರೀಪಾದರಾಜರ 

ಮಠಕ್ಕೆ ಸೇರಿದ ಒಂಬತ್ತು ಯತಿಗಳ ವೃಂದಾವನ ಇರುವ ಪುಣ್ಯ ತಾಣ* ಇದೂ ನವ 

ವೃಂದಾವನವೆಂದೇ ಪ್ರಸಿದ್ದಿ.

ಇಲ್ಲಿ ಸಾಕ್ಷಾತ್ *ಶ್ರೀಮದಾಚಾರ್ಯರ ಕರ ಸ್ಪರ್ಶದ ಅವರದೇ ಮೂರ್ತಿಯ ವಿಶೇಷ 

ಸನ್ನಿಧಾನವುಳ್ಳ ಶಿಲಾಪ್ರತೀಕವಿದು

ಶ್ರೀಮಧ್ವಾಚಾರ್ಯರು ಮಧ್ವಮತದ ಸಂಚಾರಕ್ರಮವಾಗಿ ತಮಿಳುನಾಡಿನ *ಆಂಡಾಂ 

ಗೋಯಲ್ ಬಳಿ ತಂಗಿದ್ದರು, ಆಗ ಅಲ್ಲಿನ ಓರ್ವ ಶಿಲ್ಪಿ ಆಚಾರ್ಯರ ಅಪೂರ್ವ 

ವ್ಯಕ್ತಿತ್ವಕ್ಕೆ ಮಾರುಹೋಗಿ ಪ್ರತಿನಿತ್ಯ ಅವರ ಪಾಠ ಪ್ರವಚನದ ಭಂಗಿಯನ್ನೇ ಮೂರ್ತಿ 

ರೂಪದಲ್ಲಿ ಕೆತ್ತಿ ಅದನ್ನು ಶ್ರೀ ಮದಾಚಾರ್ಯರಿಗೆ ತೋರಿಸಿದಾಗ ಆಚಾರ್ಯರು ತಮ್

ಮ ಕರಸ್ಪರ್ಶದಿಂದಲೇ ವಿಗ್ರಹದಲ್ಲಿ ತಮ್ಮ ಸನ್ನಿದಾನವನ್ನು ತುಂಬಿ*ಮುಂದೆ ತಮ್ಮ 

ಪರಂಪರೆಯ ಯತಿಯೊಬ್ಬರು ಇಲ್ಲಿಗೆ ಬಂದು ಇದನ್ನು ಪ್ರತಿಷ್ಟಾಪಿಸುತ್ತಾರೆಂದು 

ಆತನನ್ನು ಆಶೀರ್ವಾದಿಸಿ ಹೊರಟುಬಿಟ್ಟರು.

ಸುಮಾರು ಮೂರು ಶತಮಾನದ ನಂತರ ಶ್ರೀ ಪದ್ಮನಾಭತೀರ್ಥರ* ( ಶ್ರೀ ಪಾದರಾಜರ 

ಮಠ) ಪರಂಪರೆಯಲ್ಲಿ ಬಂದ *ಶ್ರೀಲಕ್ಷ್ಮೀ ಮನೋಹರ ತೀರ್ಥರಿಗೆ*ಆ ಶಿಲ್ಪಿಯ 

ಕುಟುಂಬದವರಿಂದ ಆ ಮೂರ್ತಿಯನ್ನು ಪಡೆದು ಪ್ರತಿಷ್ಟಾಪಿಸುವಂತೆ *ಸಾಕ್ಷಾತ್ 

ಶ್ರೀಮದಾಚಾರ್ಯರಿಂದಲೇ ಸೂಚನೆಯಾಯಿತು.

ಸೋಜಿಗವೆಂದರೆ ಆ ಶಿಲ್ಪಿಯ ಕುಟುಂಬ*ದವರಿಗೂ ಅದೇ ರೀತಿಯ ಸೂಚನೆಯಾಗಿತ್ತು.

ಅತ್ಯಂತ *ಧನ್ಯತಾಭಾವದಿಂದ ಶ್ರೀ ಲಕ್ಷ್ಮೀಮನೋಹರತೀರ್ಥರು*


ಈ ಮೂರ್ತಿಯನ್ನು ಪಡೆದು *ಈರೋಡ್ ನಗರದ ಕಾವೇರಿ ತೀರದಲ್ಲಿ ಪ್ರತಿಷ್ಟಾಪನೆ 

ಮಾಡಿದರು*.ಈ ಕ್ಷೇತ್ರದಲ್ಲಿ ಇನ್ನೂ ಅನೇಕ ಮಹಿಮೆಗಳಿವೆ.

 

                                             Pallipalayam Brindavanas


 

                                             List of 9 ( Nine ) Brindavanas

 

The Nine Saints at Nava Brindavana in Erode are as follows:

 

  1. Sri Lakshmi Manohara Theertharu (1670-1708)

  2. Sri Lakshmipathi Theertharu(1700-1715)

  3. Sri Srinidhi Theertha(1781-1787)

  4. Sri Vidyanidhi Theertharu (1772-1795)

  5. Sri Sudhinidhi theertharu(1888-1908)

  6. Sri Sri Medhanidhi Theertharu(1908-1926)

  7. Sri Thejanidhi Theertharu(1770-1806)

  8. Sri Thaponidhi Theertharu(1806-1838)

  9. Sri Yashonidhi Theertharu (1840-1856)

     

                                                      Sri Laxmi Manohara Tirtharu

                                                         Sri Laxmipathy Tirtharu


                                                           Sri Sri Nidhi Tirtharu 

     

                                                        Sri Vidya Nidhi Tirtharu

     
                                                             Sri Sudhi Nidhi Tirtharu

     

                                                        Sri Medha Nidhi Tirtharu


                                                          Sri Theja Nidhi Tirtharu

     

                                                       Sri Thapo Nidhi Tirtharu

     

                                                            Sri Yasho Nidhi Tirtharu


    The Nava Brindavanas at Erode

    The Nava Brindavana at Hampi is so famous that there is no need to write about it or the Madhwa saints who entered Brindavana there.  The first Madhwa saint to enter Brindavana here is Padmanabha Theertha in 1324. The last saint who entered Brindavana here is Sudhindra Theertha, the Gurugalu of Raghavendra Swamy.

    Apart from the Nava Brindavana here there are three other similar Navan Brindavanas in India. These place are not as well known as the Nava Brindavana. The Sripadaraja Matha at Erode (Pallipalayam) has the Brindavana of Nine of its pontiffs. They all belong to the Sripadaraja Mutt. There are Nine Brindavanas of Madhwa Saints in Shenbakkam in Vellore.

    The Vyasaraja Mutt at Sosale near Mysore has also constructed a Nava Brindavana for Pontiffs of its Mutts. All the four Nava Brindavanas are located across rivers.

    1)The Nava Brindavana in Hampi in Karnataka is on the Tungabhadra River 2) Shenbakkam is across Palar River near Vellore in Tamil Nadu 3) Sosale Brindavana near Mysuru is at the confluence of the Cauvery and Shimsha 4) Pallipalayam in Erode Nava Brindavanas is at the confluence of Cauvery, Bhavani Sagar and an invisible river called Amudha. 

    The Nava Brindavanas at Pallipalayam in Erode it all belongs to Sripadaraja Mutt. This Mutt is is Head quartered at Mulabagal, near Kolar. It is 85 kms from Bangalore.

     Many pontiffs of this Mutt have spent time in Erode and other places. Some of them have their Brindavana here. The first to enter Brindavana here is Lakshmi Manohara Theertha in 1715.

    The Nine Saints are as follows:

    1 Sri Lakshmi Manohara Theertha (1670-1708)
    2. Sri Lakshmipathi Theertha (1700-1715)
    3. Sri Srinidhi Theertha(1781-1787)
    4. Sri Vidyanidhi Theertha (1772-1795)
    5. Sri Sudhinidhi theertha (1888-1908)
    6. Sri Sri Medhanidhi Theerth (1908-1926)
    7. Sri Thejanidhi  Theertha (1770-1806)
    8. Sri Thaponidhi Theertha  (1806-1838)
    9. Sri Yashonidhi  Theertha (1840-1856)

    Address :

    Nava Brindavana
    Pallipalyam, Odapalli
    Vasantha Nagar
    Erode
    Contact:- Sri. Krishna Murthy Achar
    Ph: (0424) 2223141

    One can Visit to this Nava Brindavanas belongs to Sripadaraja Mutt and there only can have Bathing in Cauvery – Bhavani River and have Darshan and Pooja but No staying facility , No Teertha Prasadam and No Apara Karyas would be conducted.

    Please Visit this Place and get Blessings from the Acharyas and there needs Lots of Development Facility to be done.

    ------------------ Hari Om --------------- 







     

     

     



Wednesday, November 26, 2025

ಶಿವ ಅಷ್ಟೋತ್ತರ ಶತನಾಮಾವಳಿಃ -- Shiva Astotara Shatanamavali

 

ಶಿವ ಅಷ್ಟೋತ್ತರ ಶತನಾಮಾವಳಿಃ - Shiva Astotara Shatanamavali

 


                                              Lord Shiva

  

ಓಂ ಶಿವಾಯ ನಮಃ |
ಓಂ ಮಹೇಶ್ವರಾಯ ನಮಃ |
ಓಂ ಶಂಭವೇ ನಮಃ |
ಓಂ ಪಿನಾಕಿನೇ ನಮಃ |
ಓಂ ಶಶಿಶೇಖರಾಯ ನಮಃ |
ಓಂ ವಾಮದೇವಾಯ ನಮಃ |
ಓಂ ವಿರೂಪಾಕ್ಷಾಯ ನಮಃ |
ಓಂ ಕಪರ್ದಿನೇ ನಮಃ |
ಓಂ ನೀಲಲೋಹಿತಾಯ ನಮಃ |

ಓಂ ಶಂಕರಾಯ ನಮಃ |
ಓಂ ಶೂಲಪಾಣಿನೇ ನಮಃ |
ಓಂ ಖಟ್ವಾಂಗಿನೇ ನಮಃ |
ಓಂ ವಿಷ್ಣುವಲ್ಲಭಾಯ ನಮಃ |
ಓಂ ಶಿಪಿವಿಷ್ಟಾಯ ನಮಃ |
ಓಂ ಅಂಬಿಕಾನಾಥಾಯ ನಮಃ |
ಓಂ ಶ್ರೀಕಂಠಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಭವಾಯ ನಮಃ | ೧೮

ಓಂ ಶರ್ವಾಯ ನಮಃ |
ಓಂ ತ್ರಿಲೋಕೇಶಾಯ ನಮಃ |
ಓಂ ಶಿತಿಕಂಠಾಯ ನಮಃ |
ಓಂ ಶಿವಾಪ್ರಿಯಾಯ ನಮಃ |
ಓಂ ಉಗ್ರಾಯ ನಮಃ |
ಓಂ ಕಪಾಲಿನೇ ನಮಃ |
ಓಂ ಕಾಮಾರಯೇ ನಮಃ |
ಓಂ ಅಂಧಕಾಸುರಸೂದನಾಯ ನಮಃ |
ಓಂ ಗಂಗಾಧರಾಯ ನಮಃ | ೨೭

ಓಂ ಲಲಾಟಾಕ್ಷಾಯ ನಮಃ |
ಓಂ ಕಾಲಕಾಲಾಯ ನಮಃ |
ಓಂ ಕೃಪಾನಿಧಯೇ ನಮಃ |
ಓಂ ಭೀಮಾಯ ನಮಃ |
ಓಂ ಪರಶುಹಸ್ತಾಯ ನಮಃ |
ಓಂ ಮೃಗಪಾಣಯೇ ನಮಃ |
ಓಂ ಜಟಾಧರಾಯ ನಮಃ |
ಓಂ ಕೈಲಾಸವಾಸಿನೇ ನಮಃ |
ಓಂ ಕವಚಿನೇ ನಮಃ | ೩೬

ಓಂ ಕಠೋರಾಯ ನಮಃ |
ಓಂ ತ್ರಿಪುರಾಂತಕಾಯ ನಮಃ |
ಓಂ ವೃಷಾಂಕಾಯ ನಮಃ |
ಓಂ ವೃಷಭಾರೂಢಾಯ ನಮಃ |
ಓಂ ಭಸ್ಮೋದ್ಧೂಳಿತವಿಗ್ರಹಾಯ ನಮಃ |
ಓಂ ಸಾಮಪ್ರಿಯಾಯ ನಮಃ |
ಓಂ ಸ್ವರಮಯಾಯ ನಮಃ |
ಓಂ ತ್ರಯೀಮೂರ್ತಯೇ ನಮಃ |
ಓಂ ಅನೀಶ್ವರಾಯ ನಮಃ | ೪೫

ಓಂ ಸರ್ವಜ್ಞಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ |
ಓಂ ಹವಿಷೇ ನಮಃ |
ಓಂ ಯಜ್ಞಮಯಾಯ ನಮಃ |
ಓಂ ಸೋಮಾಯ ನಮಃ |
ಓಂ ಪಂಚವಕ್ತ್ರಾಯ ನಮಃ |
ಓಂ ಸದಾಶಿವಾಯ ನಮಃ |
ಓಂ ವಿಶ್ವೇಶ್ವರಾಯ ನಮಃ | ೫೪

ಓಂ ವೀರಭದ್ರಾಯ ನಮಃ |
ಓಂ ಗಣನಾಥಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಹಿರಣ್ಯರೇತಸೇ ನಮಃ |
ಓಂ ದುರ್ಧರ್ಷಾಯ ನಮಃ |
ಓಂ ಗಿರೀಶಾಯ ನಮಃ |
ಓಂ ಗಿರಿಶಾಯ ನಮಃ |
ಓಂ ಅನಘಾಯ ನಮಃ |
ಓಂ ಭುಜಂಗಭೂಷಣಾಯ ನಮಃ | ೬೩

ಓಂ ಭರ್ಗಾಯ ನಮಃ |
ಓಂ ಗಿರಿಧನ್ವನೇ ನಮಃ |
ಓಂ ಗಿರಿಪ್ರಿಯಾಯ ನಮಃ |
ಓಂ ಕೃತ್ತಿವಾಸಸೇ ನಮಃ |
ಓಂ ಪುರಾರಾತಯೇ ನಮಃ |
ಓಂ ಭಗವತೇ ನಮಃ |
ಓಂ ಪ್ರಮಥಾಧಿಪಾಯ ನಮಃ |
ಓಂ ಮೃತ್ಯುಂಜಯಾಯ ನಮಃ |
ಓಂ ಸೂಕ್ಷ್ಮತನವೇ ನಮಃ | ೭೨

ಓಂ ಜಗದ್ವ್ಯಾಪಿನೇ ನಮಃ |
ಓಂ ಜಗದ್ಗುರುವೇ ನಮಃ |
ಓಂ ವ್ಯೋಮಕೇಶಾಯ ನಮಃ |
ಓಂ ಮಹಾಸೇನಜನಕಾಯ ನಮಃ |
ಓಂ ಚಾರುವಿಕ್ರಮಾಯ ನಮಃ |
ಓಂ ರುದ್ರಾಯ ನಮಃ |
ಓಂ ಭೂತಪತಯೇ ನಮಃ |
ಓಂ ಸ್ಥಾಣವೇ ನಮಃ |
ಓಂ ಅಹಿರ್ಬುಧ್ನ್ಯಾಯ ನಮಃ | ೮೧

ಓಂ ದಿಗಂಬರಾಯ ನಮಃ |
ಓಂ ಅಷ್ಟಮೂರ್ತಯೇ ನಮಃ |
ಓಂ ಅನೇಕಾತ್ಮನೇ ನಮಃ |
ಓಂ ಸಾತ್ತ್ವಿಕಾಯ ನಮಃ |
ಓಂ ಶುದ್ಧವಿಗ್ರಹಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಖಂಡಪರಶವೇ ನಮಃ |
ಓಂ ಅಜಾಯ ನಮಃ |
ಓಂ ಪಾಶವಿಮೋಚಕಾಯ ನಮಃ | ೯೦

ಓಂ ಮೃಡಾಯ ನಮಃ |
ಓಂ ಪಶುಪತಯೇ ನಮಃ |
ಓಂ ದೇವಾಯ ನಮಃ |
ಓಂ ಮಹಾದೇವಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಹರಯೇ ನಮಃ |
ಓಂ ಪೂಷದಂತಭಿದೇ ನಮಃ |
ಓಂ ಅವ್ಯಗ್ರಾಯ ನಮಃ |
ಓಂ ದಕ್ಷಾಧ್ವರಹರಾಯ ನಮಃ | ೯೯

ಓಂ ಹರಾಯ ನಮಃ |
ಓಂ ಭಗನೇತ್ರಭಿದೇ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಪದೇ ನಮಃ |
ಓಂ ಅಪವರ್ಗಪ್ರದಾಯ ನಮಃ |
ಓಂ ಅನಂತಾಯ ನಮಃ |
ಓಂ ತಾರಕಾಯ ನಮಃ |
ಓಂ ಪರಮೇಶ್ವರಾಯ ನಮಃ | ೧೦೮‌ ‌ ‌ ‌

 ‌ ‌ ‌ 

                                                 Shiva-Lord of Destroyer


|| ಇತಿ ಶ್ರೀ ಶಿವ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್ ||

---------------- Hari Om ---------------- 

Sunday, November 23, 2025

TriShakthi Peetas in Haridwar on the Banks of Holy Ganges River

 

ಗಂಗೆಯ ತಟದಲ್ಲಿ ಹರಿದ್ವಾರದ ತ್ರಿಶಕ್ತಿ ಪೀಠಗಳು


Trishakti ( 3 ) Peethas of Haridwar on the banks of Holy Ganges

 River

ಈ ಎಲ್ಲಾ ಶಕ್ತಿಗಳ ಒಟ್ಟು ರೂಪವೇ ಸತಿ ಶಕ್ತಿ ದೇವಿಯ ಪೀಠ.


ಹಿಮಾಲಯದ ಪಾದದ ಬಳಿ ಇರುವ ಪವಿತ್ರ ಕ್ಷೇತ್ರ. ಪ್ರಥಮ ಬಾರಿಗೆ ಈ ಸ್ಥಳದಲ್ಲಿ ಗಂಗಾ ದೇವಿ ಭೂಮಿಯ ಕಡೆ ಇಳಿದು ಬಂದಳು ಎಂದು ಭಾವಿಸಲಾಗಿದೆ. ಆದ್ದರಿಂದ ಇದನ್ನು ಮೋಕ್ಷದ್ವಾರ - ದೇವತೆಗಳ ಆಶೀರ್ವಾದಗಳ ಮಾರ್ಗ ಎನ್ನಲಾಗುತ್ತದೆ. ಈ ಪವಿತ್ರ ಕ್ಷೇತ್ರದಲ್ಲಿ ಮೂರು ರೂಪ ಗಳಿಂದ ಶಕ್ತಿ ದೇವಿಯಾಗಿ ನೆಲೆಸಿದ್ದಾಳೆ. ಆ ಶಕ್ತಿ ದೇವಿಯರು ಮಾಯಾ ದೇವಿ, ಮಾನಸಾ ದೇವಿ ಮತ್ತು ಚಂಡಿ ದೇವಿ.

 

                                                                      Maya Devi

 

                                                               Maya Devi Temple

 

                                                      another Picture of the Temple 

 

1) ಮಾಯಾ ದೇವಿ ಪೀಠ:


ಇದು ಶಕ್ತಿಯ ಮೂಲ ಪುರಾಣ ಕಥೆಗಳಂತೆ ಸತಿ ದೇವಿಯ ಹೃದಯ ಮತ್ತು ನಾಭಿ ಭಾಗ ಇಲ್ಲಿ ಬಿದ್ದವು. ಆ ಶಕ್ತಿಯೇ ಇಂದು ಮಾಯಾ ದೇವಿ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಇವಳಿಗೆ ಮೂರು ಮುಖಗಳು, ನಾಲ್ಕು ಹಸ್ತಗಳು. ಇವುಗಳನ್ನು ಶಾಂತಿ, ಸೃಷ್ಟಿ, ರಕ್ಷಣೆಯ ರೂಪಗಳು ಎಂದು ಕರೆಯುತ್ತಾರೆ.

ಈ ಶಕ್ತಿಪೀಠಗಳು ಹರಿದ್ವಾರದ ಮಧ್ಯ ಭಾಗದಲ್ಲಿದೆ, ಹರ್ ಕಿ ಪೌರಿ‌” ನಿಂದ ಸುಮಾರು ಎರಡು ಕಿಲೋಮೀಟರ್ ದೂರ. ಈ ಸ್ಥಳವನ್ನು “ಸಿದ್ಧ ಪೀಠ” ಎಂದು ಕರೆಯುತ್ತಾರೆ -ಭಕ್ತನ ಮನಸ್ಸು ಶುದ್ಧವಾದರೆ ದೇವಿಯ ಕೃಪೆ ನೇರವಾಗಿ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.

---------------------------------------------------------------------------------------------------------------------------

                                     

                                                                            Manasa Devi 

                                                                Manasa Devi Temple


 

                                                      another picture of the Temple

 

2) ಮಾನಸಾ ದೇವಿ ಪೀಠ:


ಶುದ್ಧ ಮನಸ್ಸಿನಿಂದ ಬೇಡಿದ ಬೇಡಿಕೆಗಳನ್ನು ಕರುಣಿಸುವ ದೇವಿ. ಬಿಲ್ವ ಪರ್ವತದ ಮೇಲಿರುವ ಮಾನಸಾ ದೇವಿ ದೇವಾಲಯಕ್ಕೆ ಹೋಗಲು ಎರಡು ಮಾರ್ಗಗಳಿವೆ. ಅದರಲ್ಲಿ ಮೆಟ್ಟಿಲು ಹತ್ತಿ ಹೋಗುವುದು ಅಥವಾ ಕೇಬಲ್ ಕಾರು ( ಟ್ರ್ಯಾಲಿ/ ಉಢಂಕಟೋಳ) ಮೂಲಕ ಏರುವುದು. ಭಕ್ತರು ತಮ್ಮ ಮನಸ್ಸಿನ ಬೇಡಿಕೆಯನ್ನು (ಮನಸ್ಸು = ಮಾನಸ) ದೇವಿಯಲ್ಲಿ ಹೇಳುತ್ತಾರೆ. ಈ ಕಾರಣದಿಂದ ದೇವಿಯ ಹೆಸರು ಮಾನಸ ದೇವಿ ಹಾಗೆ ಇನ್ನು ಕೆಲವರು ಮಂಸಾದೇವಿ ಎನ್ನುತ್ತಾರೆ, ಆದರೆ ಅದು “ಮಾನಸ” ಎಂಬ ಪದದಿಂದ ಬಂದಿದೆ.


ದೇವಿಯ ಮಂದಿರದ ಹೊರಗೆ ಒಂದು ಮರ ಇದೆ — ಅದಕ್ಕೆ ಭಕ್ತರು ತಮ್ಮ ಬೇಡಿಕೆಗಾಗಿ ದಾರ ಅಥವಾ ಶವಧಿ (ಅಂದರೆ ಶಪತದ ದಾರಿ / ಪ್ರತಿಜ್ಞಾ ದಾರ) ಕಟ್ಟಿ ಬರುತ್ತಾರೆ. ಅದು “ಶಪಥದ ದಾರಿ” ಅಥವಾ “ಬೇಡಿಕೆಯ ನಂಟು” ಎಂಬ ಅರ್ಥದಲ್ಲಿ ಬಂದಿದೆ. ಅವರ ಬೇಡಿಕೆ ನೆರವೇರಿದ ಮೇಲೆ ಬಂದು ದೇವಿಯಲ್ಲಿ ಪ್ರಾರ್ಥಿಸಿ ಆ ದಾರವನ್ನು ಬಿಚ್ಚುತ್ತಾರೆ. ಧನ್ಯತೆಯ ಸಂಕೇತವಾಗಿ ದೇವಿಗೆ ಅನೇಕ ಸೇವೆಗಳನ್ನು ಮಾಡುತ್ತಾರೆ.

---------------------------------------------------------------------------------------------------------------------------------



                                                                        Chandi Devi

 

                                                              Chandi Devi Temple

 

                                                             another Picture of the Temple

  

ಚಂಡಿ ದೇವಿ ಪೀಠ:


ಶೌರ್ಯದ ಶಕ್ತಿ:- ಹರಿದ್ವಾರದ “ನೀಲ್ ಪರ್ವತ ಶಿಖರ”ದ ಮೇಲೆ ನೆಲೆಸಿರುವ ಈ ದೇವಿ ರಾಕ್ಷಸರಾದ ಶುಂಭ ಮತ್ತು ನಿಶುಂಭರನ್ನು ಸಂಹರಿಸಿ ಲೋಕದಲ್ಲಿ ಶಾಂತಿ ನೆಲೆಸುವಂತೆ ಮಾಡಿದಳು. ನಂತರ ಅಲ್ಲಿಯೇ ಅವಳು ವಿಶ್ರಾಂತಿ ಪಡೆದಳು. ಆ ಸ್ಥಳವೇ ಇಂದಿನ “ಚಂಡಿ ದೇವಿ ಪೀಠ”. ಇಲ್ಲಿಗೆ ಕೇಬಲ್ ಕಾರ್ (ಚಂಡಿ ಉಢಂಕಟೋಳ) ಮೂಲಕ ಹೋಗಬಹುದು. ಪರ್ವತದ ಮೇಲೆ ನಿಂತು ಕಣ್ಣು ಹಾಯಿಸಿದರೆ ಪೂರ್ತಿ ಹರಿದ್ವಾರದ ಸುಂದರವಾದ ನೋಟ ಕಾಣುವುದು. ಇದು ದೇವಿಯ ದಿವ್ಯ ರೂಪವೆಂದೇ ಭಾಸವಾಗುತ್ತದೆ.

ಹರಿದ್ವಾರದ ಪರ್ವತಶ್ರೇಣಿಗಳು:- ಹರಿದ್ವಾರವು ಶಿವಾಲಿಕ್ ಪರ್ವತ ಶ್ರೇಣಿಯ ಭಾಗವಾಗಿದೆ - ಇದು ಹಿಮಾಲಯದ ಪಾದದ ಭಾಗದ ಮೊದಲ ಶ್ರೇಣಿ. ಮಾನಸಾ ದೇವಿ ಇರುವ ಬೆಟ್ಟ. ಹಾಗೆ “ಬಿಲ್ವ ಪರ್ವತ” ಚಂಡಿ ದೇವಿ ಇರುವ ಬೆಟ್ಟ, ಮತ್ತು “ನೀಲ್ ಪರ್ವತ”, ಮಾಯಾ ದೇವಿ ನಗರದ ಮಧ್ಯ ಭಾಗದ ನದಿ ತೀರದಲ್ಲಿ ಇರುವುದರಿಂದ ಈ ಮೂರು ಪೀಠಗಳೂ ಸೇರಿ “ತ್ರಿಶಕ್ತಿ ಪೀಠ” ವಾಗಿದ್ದು ಶಾಂತಿ, ಶಕ್ತಿ, ಮತ್ತು ಸಾಧನೆಯ ಸಂಕೇತವಾಗಿದೆ

 

ಕಥೆಯ ಸಾರ:


ಒಮ್ಮೆ ನಾರದ ಮಹರ್ಷಿಗಳು ಗಂಗಾ ತೀರಕ್ಕೆ ಬಂದರು. ಅವರು ಮೂರು ದೇವಿಯರಿಗೂ ನಮಸ್ಕರಿಸಿ ಕೇಳಿದರು- “ಯಾರು ನಿಮ್ಮಲ್ಲಿ ಶ್ರೇಷ್ಠರು?” ಎಂದಾಗ ಮೂವರು ದೇವಿಯರು ನಗುತ್ತಾ ಹೇಳಿದರು, “ನಮ್ಮಲ್ಲಿ ಬೇಧವಿಲ್ಲ, ಯಾರ ಮನಸ್ಸು ಶುದ್ಧವಾಗಿರುತ್ತದೆಯೋ ಅವರಿಗೆ ಮೂರು ಶಕ್ತಿ ದೇವಿಯರು ಒಲಿಯುತ್ತಾರೆ.”ಎಂದರು.


ಆ ಪ್ರಕಾರ ಅಲ್ಲಿಗೆ ಹೋದ ಯಾತ್ರಿಕ ಭಕ್ತನು ಹರಿದ್ವಾರದಲ್ಲಿ “ಮಾಯಾ ದೇವಿ”ಯ ಸಾನ್ನಿಧ್ಯದಲ್ಲಿ ಶಕ್ತಿಯನ್ನು ಪಡೆಯುತ್ತಾನೆ ಹಾಗೆ ಮಾನಸಾ ದೇವಿ ಯಿಂದ ಮನೋವಾಂಛೆಗಳನ್ನು ನೆರವೇರಿಸಿಕೊಳ್ಳುತ್ತಾನೆ ಮತ್ತು ಚಂಡಿದೇವಿ ಯಿಂದ ಧೈರ್ಯವನ್ನು ಪಡೆಯುತ್ತಾನೆ.

ಇಲ್ಲಿ ಶಕ್ತಿ ದೇವಿ ಬೇರೆ ಬೇರೆ ಹೆಸರು ಮತ್ತು ರೂಪದಿಂದ ನೆಲೆಸಿದ್ದರೂ ಅವರೆಲ್ಲರೂ ಒಂದೇ ದೇವಿಯ ಶಕ್ತಿಯಾಗಿದ್ದಾರೆ ಅಂದರೆ ಪಾರ್ವತಿ ದೇವಿಯ ಅಂಶಗಳು. ಒಬ್ಬಪ್ಪ ದೇವಿಯು ಬೇರೆ ಬೇರೆ ಹೆಸರಿನಿಂದ ನೆಲೆಸಿದ್ದು ಆಯಾ ಹೆಸರಿನಂತೆ ಮೂರು ವಿಧದ ಮಾಯೆಯಿಂದ ಶಕ್ತಿಯನ್ನು ಅಂದರೆ ಮಾಯದೇವಿಯಿಂದ “ಶಕ್ತಿ”ಯನ್ನು, ಮಾನಸಾ” ದೇವಿಯಿಂದ ಮನಸ್ಸಿನ ಆಶಯಗಳನ್ನು “ಚಂಡಿ” ದೇವಿಯಿಂದ ಧೈರ್ಯವನ್ನು ಪಡೆಯುತ್ತಾನೆ. ಈ ಎಲ್ಲಾ ಶಕ್ತಿಗಳ ಒಟ್ಟು ರೂಪವೇ ‘ಸತಿ’ ಶಕ್ತಿ ದೇವಿಯ ಪೀಠ.

ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ನಮಃ!


ನಾನು ದೇವಿಯ ಜ್ಞಾನ ಶಕ್ತಿ ಮತ್ತು ಕೀರ್ತಿಯ ತ್ರೀ ರೂಪವನ್ನು ಧ್ಯಾನಿಸುತ್ತೇನೆ ಆ ಶಕ್ತಿ ನನ್ನೊಳಗಿರುವ ಭಯ ಅಜ್ಞಾನ ಮತ್ತು ದುಃಖವನ್ನು ದೂರ ಮಾಡಲಿ.


------------- Hari Om --------------