Wednesday, April 22, 2026

ಗಾಯತ್ರೀ_ಮಂತ್ರದ_ಮಹತ್ವ-- ನೈಜ ಸಂಗತಿಗಳು -- Importance of Gayatri Mantra – Real Facts

 

                                                                 Sri Gayatri Devi

 

 

ಗಾಯತ್ರೀ_ಮಂತ್ರದ_ಮಹತ್ವ-- ನೈಜ ಸಂಗತಿಗಳು


Importance of Gayatri Mantra – Real Facts



ಮಕ್ಕಳಿಗೆ ಬ್ರಹ್ಮೋಪದೇಶದಲ್ಲಿ ತಂದೆ ಗುರಸ್ಥಾನದಲ್ಲಿ ಗಾಯತ್ರೀ ಮಂತ್ರೋಪದೇಶವನ್ನು ಮಾಡುತ್ತಾರೆ. ಗಾಯತ್ರೀ ಮಂತ್ರೋಪದೇಶ ಪಡೆಯದಿದ್ದರೆ ಯಾವದೇ ಪೂಜೆ ಪುನಸ್ಕಾರ , ಕರ್ಮ ಏನೂ ಮಾಡಲು ಅಧಿಕಾರವಿಲ್ಲ ಅದಕ್ಕಾಗಿಯೇ ಮೊದಲು ಏಂಟು ವರ್ಷಕ್ಕೆ ಮಕ್ಕಳಿಗೆ ಬ್ರಹ್ಮೋಪದೇಶ ಮಾಡುತ್ತಿದ್ದರು. ಆದರೆ ಈಗ ಬರೀ ಆಡಂಬರಕ್ಕೆ ಮಹತ್ವ , ಕೆಲವರಂತೂ ಮದುವೆ ಮುಂದೆ ಮಾಡಿದರಾಯಿತು ಅನ್ನುವವರು ಇದ್ದಾರೆ. ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಏನು ಸಂಸ್ಕಾರ ಕೊಡಬೇಕೊ ಅದನ್ನು ಕೊಡಬೇಕು.... ಮಕ್ಕಳಿಗೆ ಸರಿ ವಯಸ್ಸಿಗೆ ಉಪನಯನ ಮಾಡುವದರಿಂದ ಮತ್ತು ಪ್ರತಿ ದಿನ ಗಾಯತ್ರೀ ಮಂತ್ರ ಪಠಣೆ ದಿಂದ ದೈಹಿಕ ,ಮಾನಸಿಕ ವಿದ್ಯೆ ಬುದ್ಧಿ ಏಲ್ಲದರಲ್ಲೂ ತೆಜಸ್ಸನ್ನು ಪಡಿತಾರೆ.

ವಿಶ್ವಾಮಿತ್ರ ಮಹರ್ಷಿ ಗಳೇ ಹೇಳುವಂತೆ


ನಾಲ್ಕು ವೇದಗಳು ಹುಡುಕಿದರೂ ಈ ಮಂತ್ರಕ್ಕೆ ಸರಿ ಹೊಂದುವ ಬೇರೆ ಮಂತ್ರವಿಲ್ಲ , ಸಮಸ್ತ ವೇದಗಳು , ಯಜ್ಞಗಳೂ , ದಾನಗಳೂ, ವಿವಿಧ ತಪಸ್ಸುಗಳು ದಾನಗಳು ಸೇರಿಸಿದರೂ ಈ ಗಾಯತ್ರೀ ಮಂತ್ರದ ಮಹಾತ್ಮೆಗೆ ಸಮವಾಗಲಾರದು..

ಸ್ವತಃ ಬ್ರಹ್ಮನೇ ಗಾಯತ್ರೀ ಮಂತ್ರದ ಮಹಾತ್ಮೆ ಯನ್ನು ಹೀಗೆ ವರ್ಣಿಸಿದ್ದಾನೆ...

ಗಾಯತ್ರ್ಯಾಃ ನ ಪರಂಜಪ್ಯಂ
ಗಾಯತ್ರ್ಯಾಃ ನ ಪರಂ ತಪಃ l
ಗಾಯತ್ರ್ಯಾಃ ನ ಪರಂ ದ್ಯೇಯಂ
ಗಾಯತ್ರ್ಯಾಃ ನ ಪರಂ ಹುತಃ ll

ಅರ್ಥಾತ


ಗಾಯತ್ರೀ ಮಂತ್ರ ಜಪಕ್ಕಿಂತಲೂ ಹೆಚ್ಚಿನ ಮಂತ್ರ ಜಪ ಮತ್ತೊಂದಿಲ್ಲ, ಅದಕ್ಕಿಂತಲೂ ತಪಸ್ಸೂ ಬೇರೆ ಇಲ್ಲ . ಆ ಮಂತ್ರಕ್ಕಿಂತಲೂ ಧ್ಯೇಯವಾದುದು ಇನ್ನಿಲ್ಲ . ಗಾಯತ್ರೀ ಹೋಮಕ್ಕಿಂತಲೂ ಹಿರಿದಾದ ಬೇರೆ ಹೋಮವೇ ಇಲ್ಲ ..

#ಹಾಗಾದರೆ ಈ ಗಾಯತ್ರೀ ಮಂತ್ರದ ಮಹತ್ವ ಏನು .... ಸ್ನೇಹಿತರೇ ಅದನ್ನು ಬಿಡಿಸಿ ಹೇಳುತ್ತೇನೆ ಕೇಳಿ...

ಗಾಯತ್ರೀ ಮಹಾ ಮಂತ್ರ....

 

ಓಂ ಭೂರ್ಭುವಸ್ಸುವಃ


ತತ್ಸುವಿತುರ್ವರೇಣ್ಯಂ


ಭರ್ಗೋ ದೇವಸ್ಯ ಧೀಮಹಿ


ಧೀಯೋ ಯೋ ನಃ ಪ್ರಚೋದಯಾತ್

 

                                              Gayatri Devi


ಇದು ಗಾಯತ್ರೀ ಮಹಾ ಮಂತ್ರ.....ಈ ಮಹಾಮಂತ್ರದಲ್ಲಿ ಮಹಾಶಕ್ತಿ ಅಡಗಿದೆ . ಹೇಗೆ ಅಂದರೆ ಆ ಮಂತ್ರದ ಪ್ರತಿಯೊಂದು ಅಕ್ಷರವೂ ಒಂದೊಂದು ದೇವರ ಬೀಜಾಕ್ಷರವೇ ಆಗಿದೆ . ಈ ಇಪ್ಪತ್ತನಾಲ್ಕು ಅಕ್ಷರಗಳ ಸಮಷ್ಟೀ ಗಾಯತ್ರೀ ಮಂತ್ರ ದಲ್ಲಿ ಗಾಯತ್ರೀ ,ಸಾವಿತ್ರೀ , ಸರಸ್ವತೀ , ಮತ್ತು ಸಂದ್ಯಾ ದೇವತೆಗಳಲ್ಲದೇ ಗಣಪತಿ ಯಿಂದ ಆರಂಭಿಸಿ ತುಲಸಿವರೆಗೆ ಇಪ್ಪತ್ತನಾಲ್ಕು ಪ್ರಮುಖ ದೇವತೆಗಳ ಮತ್ತು ದೈವಿ ಶಕ್ತಿಯ ಉಪಾಸನೆ ಇದೆ. ಆದುದರಿಂದ ಶ್ರದ್ಧಾ ಭಕ್ತಿಯಿಂದ ಮಾಡಿದ ಗಾಯತ್ರೀ ಜಪದ ಪರಿಣಾಮ ವಾಗಿ ಸಾಧಕನಿಗೆ ಇಪ್ಪತ್ತನಾಲ್ಕು ದೇವತೆಗಳನ್ನು ಆರಾಧಿಸಿದ ಶಕ್ತಿಯು

ಸಮನ್ವಯವಾಗುತ್ತದೆ. ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರವನ್ನು ಬಿಡಿಸಿ ನೋಡಿದಾಗ...‌

12 ತ್ಸ 3 ವಿ 4 ತು 5 ರ್ವ 6 ರೇ 7 ಣಿ 8 ಯಂ 9 10 ರ್ಗೋ 11 ದೇ 12 13 ಸ್ಯ 14 ಧೀ 15 16 ಹೀ 17 ಧೀ 18 ಯೋ 19 ಯೋ 20 ನಃ 21 ಪ್ರ 22ಚೋ 23 24 ಯಾತ್.



ಹಾಗಾದರೆ ಈ ಇಪ್ಪತ್ತನಾಲ್ಕು ಅಕ್ಷಗಳಲ್ಲಿ ಇಪ್ಪತ್ತನಾಲ್ಕು ದೇವತೆಗಳ ಶಕ್ತಿ ಹೇಗೆ

 ಅಂತ ಬಿಡಿಸಿ ಹೇಳುತ್ತೇನೆ ಕೇಳಿ


So, let me explain to you how the power of
the twenty-four deities is expressed in
these twenty-four axes.


1) ಮೊದಲನೇ ಅಕ್ಷರ ತ ಕಾರ ಇದು ಅಂದಕಾರವನ್ನು ತೊಲಗಿಸುತ್ತದೆ. ಇದು ಗಣೇಶ ಗಾಯತ್ರೀ..

#ಓಂಏಕದಂತಾಯ_ವಿದ್ಮಹೇ_ವಕ್ರತುಂಡಾಯ_ಧಿಮಹೀ_ತನ್ನೋದಂತೀ_ಪ್ರಚೋದಯಾತ್

2) ಎರಡನೇಯ ಅಕ್ಷರ *ತ್ಸ * ಇದು ಉಪಪಾತಕವನ್ನು ಹೋಗಲಾಡಿಸುತ್ತದೆ. ಇದು ನೃಸಿಂಹ ಗಾಯತ್ರೀ

#ಓಂ_ಉಗ್ರನೃಸಿಂಹಾಯ_ವಿದ್ಮಹೇ_ವಜ್ರನಖಾಯ____ಧೀಮಹಿ_ತನ್ನೋ_ನೃಸಿಂಹ_ಪ್ರಚೋದಯಾತ್

3) ಮೂರನೇಯ ಅಕ್ಷರ *ವಿ * ಇದು ವಿಕಾರ ವಿಪತ್ತನ್ನು ಹೋಗಲಾಡಿಸುತ್ತದೆ. ವಿಷ್ಣು ಗಾಯತ್ರೀ

#ಓಂ_ನಾರಾಯಣಾಯ_ವಿದ್ಮಹೇ_ವಾಸುದೇವಾಯ___ಧೀಮಹಿ_ತನ್ನೋ_ವಿಷ್ಣುಃ_ಪ್ರಚೋದಯಾತ್

4) ನಾಲ್ಕು * ತು * ಕಾರ ದುಷ್ಟ ಗ್ರಹ ದೋಷವನ್ನು ಹೋಗಲಾಡಿಸುತ್ತದೆ. ಶಿವ ಗಾಯತ್ರೀ

#ತತ್ವುರುಷಾಯ_ವಿದ್ಮಹೇ_ಮಹಾದೇವಾಯ_ಧೀಮಹಿ_ತನ್ನೋ_ರುದ್ರಃ_ಪ್ರಚೋದಯಾತ್

5) ಐದು ಅಕ್ಷರ * ರ್ವ* ಕಾರ ಇದು ಭ್ರೂಣ ಹತ್ಯಾ ದೋಷ ಪರಿಹರಿಸುತ್ತದೆ. ಇದು ಕೃಷ್ಣ ಗಾಯತ್ರೀ.

#ದೇವಕಿನಂದಾಯ_ವಿದ್ಮಹೇ_ವಸುದೇವಾಯ_ಧೀಮಹಿ_ತನ್ನೋ_ಕೃಷ್ಣ_ಪ್ರಚೋದಯಾತ್

6) ಆರು ಅಕ್ಷರ * ರೇ * ಕಾರ ಆಗಮ್ಯಾಗಮನ ದೋಷ ಪರಿಹಾರ ಇದು ರಾಧಾ ಗಾಯತ್ರೀ

#ಓಂ_ವೃಷಭಾನುಜಾಯ_ವಿದ್ಮಹೇ_ಕೃಷ್ಣಪ್ರೀಯಾಯ_ಧೀಮಹಿ_ತನ್ನೋ_ರಾಧಾ_ಪ್ರಚೋದಯಾತ್

7) ಏಳು ಅಕ್ಷರ * ಣಿ * ಕಾರ ಅಭಕ್ಷ್ಯಾಭಕ್ಷಣ ದೋಷ ಪರಿಹಾರ ... ಇದು ಲಕ್ಷೀ ಗಾಯತ್ರೀ.

#ಓಂ_ಮಹಾಲಕ್ಷೀ__ವಿದ್ಮಹೇ_ವಿಷ್ಣುಪತ್ನಿ__ಧೀಮಹಿ_ತನ್ನೋ_ಲಕ್ಷೀ_ಪ್ರಚೋದಯಾತ್

8) ಏಂಟು ಅಕ್ಷರ * ಯಂ.* ಕಾರ ಇದು.ಬ್ರಹ್ಮ ಹತ್ಯಾಪಾತಕಗಳನ್ನು ಹೋಗಲಾಡಿಸುತ್ತದೆ
ಇದು ಅಗ್ನಿ ಗಾಯತ್ರೀ

#ಓಂ_ಮಹಾಜ್ವಾಲಾಯ_ವಿದ್ಮಹೇ_ಅಗ್ನಿಜ್ವಾಲಾಯಧೀಮಹಿ_ತನ್ನೋಅಗ್ನಿ_ಪ್ರಚೋದಯಾತ್

9) ಒಂಬತ್ತು ಅಕ್ಷರ * *ಕಾರ ಇದು ಪುರುಷ ಹತ್ಯಾಪಾತಕವನ್ನು ನಾಶಮಾಡುತ್ತದೆ..ಇದು ಇಂದ್ರ ಗಾಯತ್ರೀ

#ಓಂ_ಸಹಸ್ರನೇತ್ರಾಯ_ವಿದ್ಮಹೇ_ವಜ್ರನಖಾಯ__ಧೀಮಹಿ_ತನ್ನೋ_ಇಂದ್ರಃ_ಪ್ರಚೋದಯಾತ್

10) ಹತ್ತು ಅಕ್ಷರ *ರ್ಗೋ*ಕಾರ ಗೋಹತ್ಯಾ ದೋಷದಿಂದ ವಿಮುಕ್ತಿಗೊಳಿಸುತ್ತದೆ. ಇದು ಸರಸ್ವತೀ ಗಾಯತ್ರೀ

#ಓಂ_ಸರಸ್ವತ್ತೈ__ವಿದ್ಮಹೇ_ಬ್ರಹ್ಮಪತ್ನಿ__ಧೀಮಹಿತನ್ನೋ_ವಾಣಿ_ಪ್ರಚೋದಯಾತ್

11) ಹನ್ನೊಂದು * ದೇ * ಕಾರ ಇದು ಸ್ತ್ರೀ ಹತ್ಯಾದೋಷವನ್ನು ನಿವಾರಿಸುತ್ತದೆ. ಇದು ದುರ್ಗಾ ಗಾಯತ್ರೀ..


#ಓಂ_ಗಿರಿಜಾಯೈ_ವಿದ್ಮಹೇ_ಶಿವಪ್ರೀಯಾಯೈ____ಧೀಮಹಿ_ತನ್ನೋ_ದುರ್ಗಾ_ಪ್ರಚೋದಯಾತ್

12) ಹನ್ನೆರಡು ಅಕ್ಷರ * *ಕಾರ ಇದು ಕೂಡಾ ಸ್ತ್ರೀ ಹತ್ಯಾದೋಷವನ್ನು ಹೋಗಲಾಡಿಸುತ್ತದೆ. ಇದು ಹನುಮದ್ಗಾಯತ್ರೀ

#ಓಂ_ಅಂಜನಾಸುತಾಯ_ವಿದ್ಮಹೇ_ವಾಯುಪುತ್ರಾಯ_ಧೀಮಹಿ_ತನ್ನೋ_ಆಂಜನೇಯ_ಪ್ರಚೋದಯಾತ್

13) ಹದಿಮೂರು ಅಕ್ಷರ * * ಕಾರ ಇದು ಗುರುಹತ್ಯಾ ದೋಷದಿಂದ ಪಾರುಮಾಡುತ್ತದೆ. ಇದು ಪೃಥ್ವಿ ಗಾಯತ್ರೀ

#ಓಂ_ಪೃಥ್ವಿದೇವೈ_ವಿದ್ಮಹೇ_ಸಹಸ್ರಮೂರ್ತೈ___ಧೀಮಹೆ_ತನ್ನೋ_ಪೃಥ್ವಿ_ಪ್ರಚೋದಯಾತ್

14) ಹದಿನಾಲ್ಕು ಅಕ್ಷರ *ಧೀ * ಕಾರ ಮಾತೃ ಮತ್ತು ಪಿತೃ ನಿಂದಾ ಪಾಪವನ್ನು ನಾಶಮಾಡುತ್ತದೆ...
ಇದು ಸೂರ್ಯ ಗಾಯತ್ರೀ

#ಓಂಭಾಸ್ಕರಾಯವಿದ್ಮಹೇದಿವಾಕರಾಯಧೀಮಹಿತನ್ನೋಸೂರ್ಯಃಪ್ರಚೋದಯಾತ್

15) ಹದಿನೈದು ಅಕ್ಷರ * * ಕಾರ ಇದು ಪೂರ್ವ ಜನ್ಮಾರ್ಜಿತ ಪಾಪವನ್ನು ನಾಶಮಾಡುತ್ತದೆ. ಇದು ರಾಮ ಗಾಯತ್ರೀ.…


#ಓಂ_ದಾಶರಥಾಯ_ವಿದ್ಮಹೇ_ಸೀತಾವಲ್ಲಭಾಯ_ಧೀಮಹಿ_ತನ್ನೋರಾಮಃ_ಪ್ರಚೋದಯಾತ್

16) ಹದಿನಾರು ಅಕ್ಷರ * ಹಿ* ಕಾರ ಇದು ಅಶೇಷ ಪಾಪ ಸಮೂಹವನ್ನು ನಾಶಪಡಿಸುತ್ತದೆ.ಇದು ಸೀತಾ ಗಾಯತ್ರೀ


#ಓಂ_ಜನಕನಂದಿನ್ನೈ_ವಿದ್ಮಹೇ_ಭೂಮಿಜಾಯೈ__ಧೀಮಹಿ_ತನ್ನೋ_ಸೀತಾ_ಪ್ರಚೋದಯಾತ್

17) ಹದಿನೇಳು ಅಕ್ಷರ * ಧೀ* ಕಾರ . ಪ್ರಾಣಿ ವಧಾಪಾಪವನ್ನು ನಾಶಮಾಡುತ್ತದೆ. ಇದು ಚಂದ್ರ ಗಾಯತ್ರೀ

#ಓಂ_ಕ್ಷೀರಪುತ್ರಾಯ_ವಿದ್ಮಹೇ_ಅಮೃತತತ್ವಾಯ__ಧೀಮಹಿ_ತನ್ನೋ_ಚಂದ್ರಃ_ಪ್ರಚೋದಯಾತ್

18) ಹದಿನೆಂಟನೇಯ ಅಕ್ಷರ * ಯೋ* ಕಾರ ಇದು ಪ್ರತಿಗ್ರಹ ಪಾಪವನ್ನು ನಾಶಮಾಡುತ್ತದೆ...ಇದು ಯಮ ಗಾಯತ್ರೀ..

#ಓಂ_ಸೂರ್ಯಪುತ್ರಾಯ_ವಿದ್ಮಹೇ_ಮಹಾಕಾಲಾಯ_ಧೀಮಹಿ_ತನ್ನೋ_ಯಮಃ_ಪ್ರಚೋದಯಾತ್

19) ಹತ್ತೊಂಬತ್ತು ಅಕ್ಷರ * ಯೋ* ಕಾರ ಸರ್ವಪಾಪ ನಿವಾರಕ. ಇದು ಬ್ರಹ್ಮ ಗಾಯತ್ರೀ

#ಓಂ_ಚತುರ್ಮುಖಾಯ_ವಿದ್ಮಹೇ_ಹಂಸರೂಢಾಯಧೀಮಹಿ_ತನ್ನೋ_ಬ್ರಹ್ಮ_ಪ್ರಚೋದಯಾತ್

20) ಇಪ್ಪತ್ತನೇಯ ಅಕ್ಷರ * *ಕಾರ , ಇದರಿಂದ ಈಶ್ವರ ಪ್ರಾಪ್ತಿ ಇದು ವರುಣ್ ಗಾಯತ್ರೀ

#ಓಂ_ಜಲಬಿಂಬಾಯ_ವಿದ್ಮಹೇ_ನೀಲಪುರುಷಾಯಧೀಮಹಿ_ತನ್ನೋ_ವರುಣ_ಪ್ರಚೋದಯಾತ್

21) ಇಪ್ಪತ್ತೊಂದು ಅಕ್ಷರ * ಪ್ರ * ಕಾರ .ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಇದು ನಾರಾಯಣ ಗಾಯತ್ರೀ

#ಓಂ_ನಾರಾಯಣಾಯ_ವಿದ್ಮಹೇ_ವಾಸುದೇವಾಯಧೀಮಹಿ_ತನ್ನೋ_ನಾರಾಯಣ_ಪ್ರಚೋದಯಾತ್

22) ಇಪ್ಪತ್ತೇರಡು ಅಕ್ಷರ ಚೋ ಕಾರ

#ಓಂ_ವಾಗೀಶ್ವರಾಯ_ವಿದ್ಮಹೇ_ಹಯಗ್ರೀವಾಯ_ಧೀಮಹಿ_ತನ್ನೋ_ಹಯಗ್ರೀವಃ_ಪ್ರಚೋದಯಾತ್

23) ಇಪ್ಪತ್ತಮೂರು ಅಕ್ಷರ * * ಕಾರ ಬ್ರಹ್ಮ ಪದ ಪ್ರಾಪ್ತಿಗೆ ಸಹಾಯಕ. ಇದು ಹಂಸ ಗಾಯತ್ರೀ

#
ಓಂ_ಪರಮಹಂಸಾಯ_ವಿದ್ಮಹೇ_ಮಹಾಹಂಸಾಯಧೀಮಹಿ_ತನ್ನೋ_ಹಂಸಃ_ಪ್ರಚೋದಯಾತ್

24) ಇಪ್ಪತ್ತನಾಲ್ಕು ಅಕ್ಷರ * ಯಾತ್* ಕಾರ ತ್ರಿಮೂರ್ತಿಗಳ ಪ್ರಸಾರ ಸಿಧ್ದಿಯಾಗಲು ಇದು ಉಪಯುಕ್ತ . ಇದು ತುಲಸೀ ಗಾಯತ್ರೀ.‌‌‌

 

                                                                    another Picture
                                                          

 

#ಓಂ_ತುಲಸ್ಮೈ_ವಿದ್ಮಹೇ_ವಿಷ್ಣುಪ್ರೀಯಾಯೈ___ಧೀಮಹಿ_ತನ್ನೋಬೃಂದಾ_ಪ್ರಚೋದಯಾತ್

ಇವು ಇಪ್ಪತ್ತನಾಲ್ಕು ಅಕ್ಷರ ಗಾಯತ್ರೀ ಮಂತ್ರದಲ್ಲಿ ಇಡೀ ದೇವ ಸಮೂಹವನ್ನೇ ಆರಾದಿಸಿದ ಪುಣ್ಯ ಪ್ರಾಪ್ತಿ ಈ ಒಂದು ಗಾಯತ್ರೀ ಮಂತ್ರದಿಂದ ಇಪ್ಪತ್ತನಾಲ್ಕು ದೇವತೆಗಳು ಅನುಗ್ರಹಿಸುವ ಶಕ್ತಿ ಯ ಪ್ರಾಪ್ತಿ ಗಾಯತ್ರೀ ಮಂತ್ರ ಜಪ ಮಾಡುವವನಿಗೆ ಲಬ್ಯ ವಾಗುತ್ತದೆ.

ಇನ್ನು ಸಂದ್ಯಾವಂದನೆ ಸಮಯದ ಬಗ್ಗೆ ತಿಳಿಸಿ ಕೊಡುತ್ತೇನೆ

ಸಂಧ್ಯಾವಂದನೆ ಸಮಯ ಮತ್ತು ಮಹತ್ವ

ಶ್ಲೋಕ ll ಉತ್ತಮಾ ತಾರಕೋಪೇತಾ ಮಧ್ಯಮಾಲುಪ್ತತಾರಕಾಃ l

ಅಧಮಾ ಸೂರ್ಯಸಹಿತ ಪ್ರಾತಃ ಸಂಧ್ಯಾ ತ್ರಿಧಾಮತಾ ll

.ಅಂದರೆ ಪ್ರಾತಃಕಾಲದಲ್ಲಿ ಅರುಣೋದಯ ಮೊದಲು ನಕ್ಷತ್ರ ಗಳಿರುವಾಗಲೇ ಸಂಧ್ಯಾವಂದನೆ ಪ್ರಾರಂಭಮಾಡಿ ಸುರ್ಯೋದಯವಾಗುವವರೆಗೆ ಮುಗಿಸುವದು ಉತ್ತಮ ಪರ್ಯಾಯ . ಸಂಧೌಭವಾಸಂಧ್ಯಾ ಎಂಬ ಅವಯವಾರ್ಥದ ಪ್ರಕಾರ ‌ಸಂಧಿ ಕಾಲದಲ್ಲಿ ಉತ್ಪನ್ನವಾಗುವ ಪರಮೇಶ್ವರಿ ಶಕ್ತಿಯು * ಸಂಧ್ಯಾ* ಎನಿಸಿಕೊಳ್ಳುವದು. ಈ ಶಕ್ತಿಗೆ ವಂದನೆ ಮಾಡುವದಕ್ಕೆ ಸಂಧ್ಯಾವಂದನೆ ಎನ್ನುವರು.ಬೆಳಗಿನ ಝಾವ ನಾಲ್ಕು ಗಂಟೆಗಳ ಕಾಲ *ಸತ್ವಗುಣ * ಎನಿಸಿಕೊಳ್ಳುವದು.


ಈ ಕಾಲದಲ್ಲಿ ನಕ್ಷತ್ರಗಳು ಮುಳುಗುವದರೊಳಗಾಗಿ ಪ್ರಾತಃಸಂಧ್ಯಾವಂದನೆಯನ್ನು ಮಾಡುವದು ಉತ್ತಮ. ನಕ್ಷತ್ರಗಳು ಮುಳುಗಿ ಸೂರ್ಯನು ಉದಯಿಸುವದರೊಳಗಾಗಿ ಸಂಧ್ಯಾವಂದನೆ ಯನ್ನು ಪುರೈಸುವದು ಮಧ್ಯಮ. ಸೂರ್ಯನು ಹುಟ್ಟಿದ ಮೇಲೆ ಸಂಧ್ಯಾವಂದನೆ ಯನ್ನು ಸತ್ವಗುಣಕಾಲವು ಮುಗಿಯುವದರೊಳಗಾಗಿ ಮುಗಿಸುವದು ಅಧಮ ಪರ್ಯಾಯ..

ಮಧ್ಯಾಹ್ನಿಕ ಸಂಧ್ಯಾಕಾಲ

-------------------------------------------

ಸೂರ್ಯನು ನೆತ್ತಿಯ ಮೇಲೆ ಇರುವ ಕಾಲವೇ ಮಧ್ಯಾಹ್ನಿಕಕ್ಕೆ ಮುಖ್ಯವಾದ ಕಾಲ .ಇದಕ್ಕಿಂತ ಮುಂಚಿತವಾಗಲೀ ಅಥವಾ ಅನಂತರ ವೇ ಆಗಲಿ ಶ್ರೇಷ್ಠವಲ್ಲ...

ಸಾಯಂ ಸಾಂಧ್ಯಾಕಾಲ

----------------------------------

ಶ್ಲೋಕ ll ಉತ್ತಮ ಸೂರ್ಯ ಸಹಿತಾ ಮಧ್ಯಮಾಲುಪ್ತಸೂರ್ಯಕಾ l

ಅಧಮಾ ತಾರಕೋಪೇತಾ ಸಾಯಂಸಂಧ್ಯಾ ತ್ರಿಧಾಮತಾll

ಅಂದರೆ ಸೂರ್ಯನು ಅರ್ದ ಮುಳುಗುತ್ತಿರುವಾಗಲೇ ಸಂಧ್ಯಾವಂದನೆ ಮಾಡುವುದು ಉತ್ತಮ. ಸೂರ್ಯನು ಅಸ್ತಮಿತನಾಗಿ ನಕ್ಷತ್ರಗಳು ಹುಟ್ಟುವದಕ್ಕೆ ಮುಂಚೆಯೇ ಸಂಧ್ಯಾವಂದನೆ ಮಾಡುವದು ಮಧ್ಯಮ. ನಕ್ಷತ್ರಗಳು ಹುಟ್ಟಿದ ಮೇಲೆ ಮಾಡುವದು ಅಧಮ. ಮಧ್ಯಾಹ್ನ ನಾಲ್ಕು ಘಂಟೆ ಯಿಂದ ರಾತ್ರಿ ಎಂಟು ಘಂಟೆಯವರೆಗೆ *ಸಾತ್ವಿಕ ಕಾಲ * ಎನಿಸಿಕೊಳ್ಳುವದು. ನಿರ್ದಿಷ್ಟ ಕಾಲದಲ್ಲಿ ಪ್ರಾತಃ ಸಂಧ್ಯಾವಂದನೆ ಯನ್ನಾಗಲಿ, ಸಾಯಂಸಂಧ್ಯಾವಂದನೆಯನ್ನಾಗಲಿ ಸತ್ವಗುಣಕಾಲದ ಒಳಗಾಗಿ ಮಾಡಲು ಅಶಕ್ತರಾದ ಪಕ್ಷದಲ್ಲಿ ಕರ್ಮವನ್ನು ಖಂಡಿತ ವಾಗಿ ಬಿಡದೆ ಅಧಮ ಪಕ್ಷವಾದ ಸತ್ವಗುಣಕಾಲಾವಕಾಶ ನಂತರವಾದರೂ ಆಚರಿಸಬೇಕು.


ಸಂಧ್ಯಾಕರ್ಮವನ್ನು ಆಚರಿಸದೆ ಇತರ ಯಾವ ದೇವತಾ ಪೂಜೆಯನ್ನಾಗಲೀ , ದಾನ, ಧರ್ಮ ,ಪರೋಪಕಾರಗಳನ್ನಾಗಲಿ ಮಾಡಿದರೂ ಸಾರ್ಥಕವಾಗುವದಿಲ್ಲ . ಇಹಪರಗಳೆರಡಕ್ಕೂ ಸಾಧನವಾದ ಸಂಧ್ಯಾಕರ್ಮವನ್ನು ಪ್ರತಿ ನಿತ್ಯವೂ ಅವಶ್ಯಕವಾಗಿ ಆಚರಿಸಬೇಕು.


There is NO Mantra above Gayatri Mantra Please Recite with Full Devotion according to

 the above set of Process and it is the Ultimate Highest Revered Mantra and one will observe the 

Changes happening.



ಶ್ರೀಕೃಷ್ಣಾರ್ಪಣಮಸ್ತು


---------- Hari Om ----------




 

Sunday, April 19, 2026

ನೈವೇದ್ಯ ---- Offerings to God

 

ನೈವೇದ್ಯ ---- Offerings to God

 


                                      
 Naivadya

 

ನಿಮ್ಮ ದೇವರು ನೈವೇದ್ಯ ತಿಂತಾರ ?

ಒಂದು ಅದ್ಭುತ ವಿಚಾರದ ವಿಶ್ಲೇಷಣೆಯ ಸಂವಾದ ಈ ಕೆಳಗಿದೆ. ಓದಿ ಅನುಭವಿಸಿ ಮತ್ತು ಆನಂದಿಸಿ.

ನೈವೇದ್ಯ : ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು?

ಇದು ನಂಬಿಕೆಯಿಲ್ಲದವರ ಪ್ರಶ್ನೆ. ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ.

ಒಬ್ಬ ಗುರು ಮತ್ತು ಶಿಷ್ಯರ ಸಂವಾದ ಹೀಗೆ ನಡೆದಿತ್ತು.

ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ 

ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು 

ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ

 

ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ.

ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ ತಯಾರಾಗಲು ಆದೇಶಿಸಿದರು.

ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ

 ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ 

ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು

 

ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ ಕಂಠಸ್ಥ ಹೇಳಿ, ಒಪ್ಪಿಸಿದ.

ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ

                                                           Naivaidya1

 

" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.

ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.

"
ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ

 

                                                 Nava Vidha Bhakthi
 

 

ನಾವು ಉಣ್ಣುವ ಆಹಾರದಲ್ಲಿ 'ಭಕ್ತಿ' ಹೊಕ್ಕರೆ 

 
ಅದು ' ಪ್ರಸಾದ' ವಾಗುತ್ತದೆ.....

ನಮ್ಮ ಹಸಿವಿಗೆ 'ಭಕ್ತಿ' ಹೊಕ್ಕರೆ 

 
ಅದು ' ಉಪವಾಸ' ವಾಗುತ್ತದೆ......

ನಾವು 'ಭಕ್ತಿ' ಕುಡಿದರೆ 

 
ಅದು 'ಚರಣಾಮೃತ' ವಾಗುತ್ತದೆ......

ನಮ್ಮ ಪ್ರಯಾಣ ' ಭಕ್ತಿ' ಪೂರ್ಣವಾದರೆ

 
ಅದು ' ತೀರ್ಥಯಾತ್ರೆ' ಯಾಗುತ್ತದೆ.......

ನಾವು ಹಾಡುವ ಸಂಗೀತ' ಭಕ್ತಿ' ಮಯವಾದರೆ 

 
ಅದು 'ಕೀರ್ತನೆ'ಯಾಗುತ್ತದೆ......

ನಮ್ಮ ವಾಸದ ಮನೆಯೊಳಕ್ಕೆ' ಭಕ್ತಿ ' ತುಂಬಿದರೆ 

ನಮ್ಮ ಮನೆಯೇ ' ಮಂದಿರ ' ವಾಗುತ್ತದೆ.......

ನಮ್ಮ ಕ್ರಿಯೆ ' ಭಕ್ತಿ' ಪೂರಿತವಾದರೆ 

 
ನಮ್ಮ ಕಾರ್ಯಗಳು ' ಸೇವೆ' ಯಾಗುತ್ತದೆ.....

ನಾವು ಮಾಡುವ ಕೆಲಸದಲ್ಲಿ' ಭಕ್ತಿ ' ಇದ್ದರೆ

 
ಅದು ನಮ್ಮ ' ಕರ್ಮ ' ವಾಗುತ್ತದೆ.....

ನಮ್ಮ ಹೃದಯದಲ್ಲಿ ' ಭಕ್ತಿ ' ತುಂಬಿದರೆ 

ನಾವು ಮಾನವರಾಗುತ್ತೇವೆ.....

ನಮ್ಮ ವಿಚಾರವಿನಿಮಯದಲ್ಲಿ ' ಭಕ್ತಿ' ಇದ್ದರೆ

 
ಅದು ' ಸತ್ಸಂಗ' ವಾಗುತ್ತದೆ.

 

                                                          Types of Bhakthi
 


------------------ Hari Om ----------------

 



 


 

Sunday, April 12, 2026

ವೀಳ್ಯದೆಲೆ ---- ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು -- Betel Leaf – its Health Benefits

 

                                                                      Betel Leaf

 

ವೀಳ್ಯದೆಲೆ ---- ಆಶ್ಚರ್ಯಕರ ಆರೋಗ್ಯ 

ಪ್ರಯೋಜನಗಳು


Betel Leaf – its Health Benefits

 

ಜನರು ಊಟದ ನಂತರ ಪಾನ್ ತಿನ್ನಲು ಇಷ್ಟಪಡುತ್ತಾರೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ, ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ನೆಗಡಿ ಮತ್ತು ಕೆಮ್ಮಿಗೆ ವೀಳ್ಯದೆಲೆಯ ನೀರು ಒಳ್ಳೆಯದು. ಇದು ಕಫ ಮತ್ತು ಪಿತ್ತ ದೋಷಗಳನ್ನು ನಿವಾರಿಸುತ್ತದೆ. ಹಾಗೆಯೇ ವೀಳ್ಯದೆಲೆಯ ನೀರು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆ ಪ್ರಯೋಜನಗಳೇನು ಎಂದು ತಿಳಿಯಿರಿ.

1) ವೀಳ್ಯದೆಲೆಯ ನೀರು ಮಾಡುವ ವಿಧಾನ: 3-4 ವೀಳ್ಯದೆಲೆಗಳನ್ನು ತೊಳೆದು ಮೂರು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಮತ್ತು ಒಂದು ಲೋಟ ಉಳಿದಾಗ, ಅದು ತಣ್ಣಗಾದ ನಂತರ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ. ಇದು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

2) ಮಧುಮೇಹವನ್ನು ನಿಯಂತ್ರಿಸುತ್ತದೆ: ವೀಳ್ಯದೆಲೆಯ ನೀರು ಮಧುಮೇಹಿಗಳ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಈ ನೀರನ್ನು ಕುಡಿಯಬಹುದು.

3) ಮಲಬದ್ಧತೆಯಿಂದ ಪರಿಹಾರ ನೀಡುತ್ತದೆ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೀಳ್ಯದೆಲೆಯ ನೀರನ್ನು ಕುಡಿಯುವುದು ಮಲಬದ್ಧತೆಗೆ ತುಂಬಾ ಪ್ರಯೋಜನಕಾರಿ.

4) ಕಫ -ಪಿತ್ತ ತೆರವುಗೊಳಿಸುತ್ತದೆ: ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ, ವೀಳ್ಯದೆಲೆ ನೀರು ಕೆಮ್ಮು ಮತ್ತು ಪಿತ್ತ ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಗಂಟಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ತೆಗೆದುಹಾಕುತ್ತದೆ.

 

                                                              another Picture

 

5) ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ವಾಂತಿ, ಭೇದಿ, ವಾಕರಿಕೆ ಮುಂತಾದ ಸಮಸ್ಯೆಗಳಿದ್ದರೆ ವೀಳ್ಯದೆಲೆಯ ನೀರು ಸಹ ಪ್ರಯೋಜನಕಾರಿಯಾಗಿದೆ. ಈ ನೀರು ನಮ್ಮ ಜೀರ್ಣ ಶಕ್ತಿಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ನಮ್ಮ ಜೀರ್ಣಶಕ್ತಿಯನ್ನು ಸಹ ಆರೋಗ್ಯಕರವಾಗಿರಿಸುತ್ತದೆ.

6) ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ: ವೀಳ್ಯದೆಲೆಯಿಂದ ತಯಾರಿಸಿದ ನೀರು ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ. ಇದಲ್ಲದೆ, ಇದು ಹಲ್ಲುಗಳನ್ನು ಹೊಳಪು ಮಾಡಲು ಸಹಾಯ ಮಾಡುತ್ತದೆ.


7) ವೀಳ್ಯದೆಲೆಯು ಪ್ರಬಲವಾದ ಕ್ಯಾನ್ಸರ್ ವಿರೋಧಿ ಮತ್ತು ಆಂಟಿಮ್ಯುಟಾಜೆನಿಕ್ ಸಂಯುಕ್ತಗಳನ್ನು ಹೊಂದಿದೆ ಮತ್ತು ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಸೂಕ್ಷ್ಮಜೀವಿಯ ವಿರೋಧಿ ಗುಣಗಳನ್ನು ಹೊಂದಿದ್ದು ಸಣ್ಣ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಸುಟ್ಟ ಗಾಯಗಳು. ವೀಳ್ಯದೆಲೆಯು ಖಿನ್ನತೆಯನ್ನು ಎದುರಿಸಲು ಹೆಸರುವಾಸಿಯಾಗಿದೆ ಮತ್ತು ನಿಮ್ಮನ್ನು ಹಗುರವಾದ, ಸಂತೋಷದ ಮನಸ್ಥಿತಿಯಲ್ಲಿ ಇರಿಸಬಹುದು.


8) ವೀಳ್ಯದೆಲೆಯು ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ಇದು ನಿಮಗೆ ತುಂಬಾ ಒಳ್ಳೆಯದು. ಇದು ಯೋಗ್ಯ ಪ್ರಮಾಣದ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. 100 ಗ್ರಾಂಗೆ ವೀಳ್ಯದೆಲೆಯ ಪೌಷ್ಟಿಕಾಂಶದ ಅಂಶವನ್ನು ಪರಿಶೀಲಿಸೋಣ, 1.3 ಮೈಕ್ರೋಗ್ರಾಂ ಅಯೋಡಿನ್, 1.1-4.6 ಮೈಕ್ರೋಗ್ರಾಂ ಪೊಟ್ಯಾಸಿಯಮ್, 1.9-2.9 ಮೈಕ್ರೋಗ್ರಾಂ ವಿಟಮಿನ್ ಎ, 13-0 ಮೈಕ್ರೋಗ್ರಾಂ ವಿಟಮಿನ್ ಬಿ-1, 1.9-30 ಮೈಕ್ರೋಗ್ರಾಂ ವಿಟಮಿನ್ B-2, ಮತ್ತು ನಿಕೋಟಿನಿಕ್ ಆಮ್ಲದ 0.63-0.89 ಮೈಕ್ರೋಗ್ರಾಂಗಳು. ಬೀಟಲ್ ಎಲೆಗಳಲ್ಲಿ ಇರುವ ಈ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.


----------------- Hari Om -----------------




 

Monday, April 6, 2026

ರಾಮ ನಾಮ ಸ್ಮರಣೆ -- Power of Rama Nama Reciting

                                                                           Lord Rama


 

ರಾಮ -- Rama && ರಾಮ ನಾಮ ಸ್ಮರಣೆ


Power of Rama Nama Reciting


ರಾಮ ಎನ್ನುವ ಹೆಸರು ಧಾರ್ಮಿಕವಾಗಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.


ರಾಮ” ಕೇವಲ ಎರಡಕ್ಷರದ ಪದವಲ್ಲ.ಅಲೌಕಿಕ ಸಂತೋಷ,ಶಾಂತಿ,ಜೀವನ ಹಾಗೂ ಧರ್ಮ ಇವು “ರಾಮ” ಶಬ್ದಕ್ಕಿರುವ ಅರ್ಥಗಳು.ಓಂ ನಮೋ ನಾರಾಯಣಾಯ” ಎಂಬ ನಾರಾಯಣ ಮಂತ್ರದಲ್ಲಿರುವ “ರಾ” ಹಾಗೂ ”ಓಂ ನ”ಮ:” ಶಿವಾಯ ಎಂಬ ಪಂಚಾಕ್ಷರಿ ಮಂತ್ರದ “ಮ” ಅಕ್ಷರಗಳಿಂದ “ರಾಮ” ಶಬ್ದ ವ್ಯುತ್ಪನ್ನಗೊಂಡಿದೆ.ಹಾಗಾಗಿ “ರಾಮ” ಎಂಬುದು ನಾರಾಯಣ ಹಾಗೂ ಈಶ್ವರರ ಸ್ವರೂಪ.ಹಾಗಾಗಿ “ರಾಮ” ಎಂಬುದು ದಿವ್ಯಮಂತ್ರ.ವೇದಗಳ ಜ್ಞಾನವಿಲ್ಲದೆಯೂ ಮೋಕ್ಷವನ್ನು ತೋರಿಸುವ ಮಾರ್ಗ.ರಾಮನಾಮ ಜಪಿಸುವವನಿಗೆ ಸರ್ವದುಃಖಗಳಿಂದ ವಿಮೋಚನೆ.

ಹಿಂದಿನಕಾಲದಲ್ಲಿ ಪರಸ್ಪರರು ಭೇಟಿಯಾದಾಗ “ರಾಮ್ ರಾಮ್” ಎನ್ನುವ ಪದ್ಧತಿಯಿತ್ತು.”ರಾಮ” ಶಬ್ದವನ್ನು ಬಿಡಿಸಿದಾಗ ಮೂರು ಅಕ್ಷರಗಳು ಸಿಗುತ್ತವೆ.ರ್++ಮ್.. “ರ” ವ್ಯಂಜನಗಳಲ್ಲಿ ಇಪ್ಪತ್ತೇಳನೆಯದು. “ಆ” ಸ್ವರಗಳಲ್ಲಿ ಎರಡನೆಯದು. “ಮ್” ವ್ಯಂಜನಗಳಲ್ಲಿ ಇಪ್ಪತ್ತೈದನೆಯದು. ಇಪ್ಪತ್ತೇಳು+ಎರಡು+ಇಪ್ಪತ್ತೈದು = ಐವತ್ತನಾಲ್ಕು. ”ರಾಮ್ ರಾಮ್” ಎಂದರೆ ಐವತ್ತನಾಲ್ಕು + ಐವತ್ತನಾಲ್ಕು = ನೂರಾಎಂಟು. ನೂರಾಎಂಟು ನಮಗೆ ಪವಿತ್ರ ಸಂಖ್ಯೆ.ಜಪಮಾಲೆಯಲ್ಲಿರುವ ಮಣಿಗಳ ಸಂಖ್ಯೆ.ಜಪಮಾಲೆಯನ್ನು ಹಿಡಿದು ನೂರಾಎಂಟು ಬಾರಿ ಜಪ ಮಾಡಬೇಕಿಂದಿಲ್ಲ.


ರಾಮ ರಾಮ” ಎಂದರೆ ಸಾಕು, ಒಂದು ಮಾಲೆ ಜಪವನ್ನು ಮಾಡಿದ ಫಲ ಸಿಗುತ್ತದೆ..!!


ಏಹಿ ಮಹಂ ರಘುಪತಿ ನಾಮ ಉದಾರಾ ಅತಿಪಾವನ ಪುರಾನ ಶ್ರುತಿ ಸಾರಾ | ಮಂಗಲ ಭವನ ಅಮಂಗಲ ಹಾರೀ ಉಮಾ ಸಹಿತ ಜೇಹಿ ಜಪತ ಪುರಾರೀ ||


ರಾಮ” ಎಂಬುದು ರಘುಪತಿಯ ಉದಾರನಾಮ.ಅದು ಅತ್ಯಂತ ಪವಿತ್ರ ಹೆಸರು.ವೇದ-ಪುರಾಣಗಳ ಸಾರ.ಸಕಲ ಕಲ್ಯಾಣಗಳ ಭವನ.ಅಮಂಗಲಗಳ ಹರಣ.ಈ ರಾಮನಾಮವನ್ನು ಪಾರ್ವತಿ ಸಹಿತ ಪರಮೇಶ್ವರ ಸದಾ ಜಪಿಸುತ್ತಿರುತ್ತಾನೆ. “ರಾಮ”ವೆಂಬ ಪವಿತ್ರನಾಮ ಸದಾ ನಮ್ಮ ಮನದಲ್ಲಿರಲಿ.ಶ್ರೀರಾಮನ ಅನುಗ್ರಹ ಸದಾ ನಮಗಿರಲಿ.


"ರಾಮ ನಾಮ" ಜಪಿಸಿದರೆ ಈ ಅಚ್ಚರಿಯ ಬದಲಾವಣೆಗಳು ನಿಮ್ಮಲ್ಲಿ ಉಂಟಾಗುವುದು.

"
ರಾ" ಮತ್ತು "" ಎನ್ನುವ ಎರಡು ವಿಭಿನ್ನ ಅಕ್ಷರವನ್ನು ಒಟ್ಟಿಗೆ ಸೇರಿಸಿದಾದ ದೈವ ಪ್ರಜ್ಞೆಯ ಅರ್ಥವನ್ನು ನೀಡುತ್ತದೆ. ರಾಮ ಎನ್ನುವ ಎರಡಕ್ಷರವು ವಿಷ್ಣುವಿನ ಏಳನೇ ಅವತಾರದ ರೂಪ. ಜಗತ್ಪಾಲಕನ ಈ ಹೆಸರನ್ನು ಜಪಿಸಿದರೆ ಮನಸ್ಸು ಮತ್ತು ಹೃದಯ ಅಸಾಧಾರಣ ಸಂತೋಷಕ್ಕೆ ಒಳಗಾಗುವುದು.

ಜೊತೆಗೆ ಸಾಕಷ್ಟು ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುವುದು. ಅರಿಯದೆ ಮಾಡಿದ ತಪ್ಪುಗಳು ನಮ್ಮಿಂದ ದೂರವಾಗುತ್ತವೆ. ರಾಮ ಎನ್ನುವ ಹೆಸರು ಧಾರ್ಮಿಕವಾಗಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಹಾಗಾಗಿ ರಾಮ ನಾಮವನ್ನು ಜಪಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ವಿವರಿಸಲಾಗಿದೆ.

"ರಾಮ ನಾಮ" ಸ್ಮರಣೆ:


ದಶರಥ ಮತ್ತು ಕೌಸಲ್ಯೆಯ ಮಗನಾಗಿ ಜನಿಸಿದ ಸರ್ವೋಚ್ಚ ಮನೋಭಾವದ ಮಾನವನ ಅವತಾರವೇ "ಶ್ರೀರಾಮ"ನ ಅವತಾರ. ಪ್ರಕೃತಿಯಲ್ಲಿ ಎಲ್ಲೆಡೆ ರಾಮನು ಇರುತ್ತಾನೆ. ಆದರೆ ಅವನನ್ನು ನಾವು ತೆರೆದ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಆದರೆ ಆಂತರಿಕ ಕಣ್ಣುಗಳಿಂದ ರಾಮನನ್ನು ಕಾಣಬಹುದು.

ಆತ್ಮ ಶುದ್ಧಿಯಿಂದ ರಾಮನನ್ನು ಕಂಡರೆ ಜನ್ಮವು ಪಾವನವಾಗುವುದು. ನಿಸ್ವಾರ್ಥ ಭಾವನೆಯಿಂದ ರಾಮನ ನಾಮ ಸ್ಮರಣೆ ಮಾಡಿದರೆ ಜೀವನವು ಬೆಳಗುವುದು. ಅಜ್ಞಾನ ಹಾಗೂ ಅತಿ ಆಸೆಯಿಂದ ಕೂಡಿದ ನಮ್ಮ ಕತ್ತಲ ಬದುಕಿಗೆ ಶ್ರೀ ರಾಮನು ಜ್ಞಾನ ಹಾಗೂ ಅರಿವಿನ ಬೆಳಕು ಚೆಲ್ಲುವುದರ ಮೂಲಕ ಬದುಕನ್ನು ಬೆಳಗುವನು.

ಮಹಾನ್ ದೈವ ಪುರುಷ "ಶ್ರೀರಾಮ":


ಮಾನವನ ಅವತಾರವನ್ನು ತಾಳಿ, ಮನುಕುಲದ ನಡುವೆಯೇ ಇದ್ದು, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ ದೇವ ರೂಪ "ರಾಮ". ತನ್ನ ನಿಷ್ಕಲ್ಮಶವಾದ ಮನಸ್ಸಿನಿಂದ ಪಾಲಕರನ್ನು ಹಾಗೂ ಸಮಾಜವನ್ನು ಗೌರವಿಸಿದನು. ತನ್ನ ಪ್ರಜೆಗಳಿಗೆ ಸದಾ ಸಂತೋಷದ ಜೀವನವನ್ನು ಕರುಣಿಸಿದನು.

ದುಷ್ಟ ರಾವಣನನ್ನು ಸೋಲಿಸಿ, ಇತರರಿಗೆ ಕೆಟ್ಟದನ್ನು ಮಾಡಿದರೆ ಜೀವನದಲ್ಲಿ ಕೆಟ್ಟದ್ದೇ ಸಂಭವಿಸುವುದು ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ದೈವ ಪುರುಷ ಶ್ರೀರಾಮ. ಶ್ರೀರಾಮನ ನಾಮ ಸ್ಮರಣೆಯನ್ನು ಮಾಡಿದರೆ ಮನುಕುಲದ ಜೀವನವು ಹಸನಾಗುವುದು. ರಾಮನಲ್ಲಿ ಭಕ್ತಿ ಹಾಗೂ ನಂಬಿಕೆಯಿಟ್ಟು ನಡೆದರೆ ಜೀವನವು ಸದಾ ಸಂತೃಪ್ತಿಯಿಂದ ಕೂಡಿರುವುದು.

"
ರಾಮನು" ಸರ್ವಶಕ್ತನು:


ಭಗವಾನ್ ಶ್ರೀರಾಮನು ಸರ್ವಾಂತರ್ಯಾಮಿ. ಅವನಿಗೆ ಅನೇಕ ಹೆಸರುಗಳಿಂದ ಕರೆಯಲಾಗುವುದು. ರಾಮನ ಹೆಸರುಗಳು ಬ್ರಹ್ಮಾಂಡದಲ್ಲಿ ಅತ್ಯಂತ ಬಲವಾದ ಮತ್ತು ಸಕಾರಾತ್ಮಕ ಕಂಪನಗಳಿಂದ ಕೂಡಿದೆ. ರಾಮನ ನಾಮಗಳನ್ನು ಜಪಿಸಿದರೆ ನಮ್ಮಲ್ಲಿಯೂ ಸಕಾರಾತ್ಮಕ ಬದಲಾವಣೆಗಳು ಆಂತರಿಕವಾಗಿ ಉಂಟಾಗುತ್ತವೆ.

ಜೊತೆಗೆ ಮಾನಸಿಕವಾಗಿ ನಿರಾಳತೆ ಹಾಗೂ ನೆಮ್ಮದಿ ದೊರೆಯುವುದು. ರಾಮ ನಾಮದ ಧ್ಯಾನ ಮಾಡಿದರೆ ವ್ಯಕ್ತಿಯು ಜೀವನದಲ್ಲಿ ಸರ್ವೋಚ್ಚ ಮನೋಭಾವವನ್ನು ಪಡೆದುಕೊಳ್ಳುವನು. ಮನುಷ್ಯನಲ್ಲಿ ಸಾಮಾನ್ಯವಾಗಿ ಕೋಪ, ದ್ವೇಷ, ಸಿಟ್ಟು ಹಾಗೂ ವಿನಾಶದ ಪ್ರವೃತ್ತಿ ಇರುತ್ತದೆ. ಇವನ ಈ ಕೆಟ್ಟ ಗುಣಗಳೆ ಬಹುತೇಕ ಸಂದರ್ಭದಲ್ಲಿ ದಾರಿ ತಪ್ಪುವಂತೆ ಪ್ರೇರೇಪಿಸುತ್ತವೆ.

ಹಾಗಾಗಿ ಮನುಷ್ಯ ಮೊದಲು ತನ್ನ ಭಾವನೆ ಹಾಗೂ ಸಂವೇದನೆಗಳ ಮೇಲೆ ಹತೋಟಿಯನ್ನು ಹೊಂದಬೇಕು. ಆಗಲೇ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ರಾಮನ ನಾಮ ಜಪಿಸಿದರೆ ವ್ಯಕ್ತಿ ತನ್ನಲ್ಲಿರುವ ಕೆಟ್ಟ ಹಾಗೂ ವಿನಾಶಕಾರಿ ಶಕ್ತಿಯಿಂದ ಮುಕ್ತನಾಗಿ, ತನ್ನಲ್ಲಿ ರಚನಾತ್ಮಕ ಶಕ್ತಿಯ ಹರಿವನ್ನು ಪಡೆದುಕೊಳ್ಳುವನು.

ನಿತ್ಯವೂ ರಾಮ ನಾಮ ಜಪ ಮಾಡಿದರೆ ವ್ಯಕ್ತಿ ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವನು. ಅಲ್ಲದೆ ಆತಂಕ, ಖಿನ್ನತೆಯಂತಹ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ. ರಾಮನ ನಾಮವು ದೇಹದಲ್ಲಿ ಗಮನಾರ್ಹ ಕಂಪನ ಉಂಟಾಗುವುದು. ಇದು ನಿದ್ರೆಯ ನರ ಕೋಶಗಳನ್ನು ಪ್ರಚೋದಿಸುವುದು.

ಉಪ ಪ್ರಜ್ಞೆಯ ಮನಸ್ಸಿನ ಭಾಗವನ್ನು ಆಹ್ವಾನಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುವುದು. ಜೊತೆಗೆ ಹೆಚ್ಚು ಸೃಜನಶೀಲರಾಗಿ ಹಾಗೂ ಕಾರ್ಯ ಪ್ರವೃತ್ತರಾಗಿ ಇರಲು ಸಹಾಯ ಮಾಡುವುದು.

 

                                                                 Lord Anjaneya
 

 "ಹನುಮಂತನು" ಅಪಾರ ಶಕ್ತಿಯನ್ನು ಪಡೆದನು:


ಹನುಮಂತನು "ಶ್ರೀ ರಾಮನ" ಪರಮ ಭಕ್ತ. ಪುರಾಣ ಇತಿಹಾಸದಲ್ಲಿ ಹನುಮಂತನಿಗೆ ಸಂಬಂಧಿಸಿದಂತೆ ಅನೇಕ ಸಾಹಸ ಕಥೆಗಳು ಇರುವುದನ್ನು ನಾವು ಕಾಣಬಹುದು. ಹನುಮಂತನು "ರಾಮ ನಾಮ" ಜಪ ಮಾಡುವುದರಿಂದ ಅನೇಕ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದನು.

ದ್ರೋಣಗಿರಿ ಪರ್ವತವನ್ನು ಹಿಮಾಲಯದಿಂದ ಲಂಕೆಗೆ ಸ್ಥಳಾಂತರಿಸಲು ಸಹಾಯ ಮಾಡಿದ ಶಕ್ತಿ "ರಾಮ" ನಾಮದಿಂದ ಪಡೆದುಕೊಂಡಿದ್ದನ್ನು ಎಂದು ಹೇಳಲಾಗುವುದು. ಆತ್ಮ ಮತ್ತು ಕರ್ಮಗಳ ಶುದ್ಧಿಗೆ "ರಾಮ ನಾಮ" ಜಪವನ್ನು ಮಾಡುವುದು ಸುಲಭ ಮಾರ್ಗ ಎನ್ನಲಾಗುವುದು.


------------------ Hari Om ----------------