Sunday, July 5, 2026

ನೋವು ನಿವಾರಕ ಲೇಹ್ಯಾ ---- NOVU NIVARAKA LEYHYA

 

                                                                                Leyhya

 

 

ನೋವು ನಿವಾರಕ ಲೇಹ್ಯಾ ---- NOVU NIVARAKA LEYHYA

ರೆಸಿಪಿ ಹೆಸರು ನೋಡಿ ಆಶ್ಚರ್ಯ ಆಯ್ತಾ ಸದಸ್ಯರೆ?

ನಲವತ್ತು ದಾಟಿದ ಮಹಿಳೆಯರಲ್ಲಿ ಮೊಣ ಕಾಲು ನೋವು ಬಹಳ ಸಾಮಾನ್ಯ! ಋತುಬಂಧ (Menopause) ಆದ ಮೇಲೆ ಮಹಿಳೆಯರ ತೂಕ ಹೆಚ್ಚುತ್ತಾ ಹೋಗುತ್ತದೆ! ಜೊತೆಯಲ್ಲಿ ಮೊಣ ಕಾಲು, ಮುಂಗಾಲು ನೋವು ಸೇರಿ ಕೊಳ್ಳುತ್ತದೆ! ಪ್ರತಿದಿನ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವವರು ಎಷ್ಟೋ ಜನ!

ಈ ರೆಸಿಪಿ ನನಗೆ ನಮ್ಮ ಆಂಟಿ ಕೊಟ್ಟಿದ್ದು. ನಾನು ಕೂಡ ಈ ನೋವು ತುಂಬಾ ಅನುಭವಿಸಿದ್ದೇನೆ! ನನಗೆ ಕೂಡ ಸಂಧಿವಾತ ( Rheumatism) ಕಾಯಿಲೆ ಇದೆ! ಅಂದರೆ Joints pain! ಬೆಳಗ್ಗೆ ಎದ್ದೊಡನೆ ಕೈ ಬೆರಳು, ಮುಂಗಾಲಲ್ಲಿ ( Ankle) ನೋವು ಇರುತ್ತದೆ. ದಿನದ ಕೆಲಸ ಮಾಡಿಕೊಳ್ಳಲು, ತರಕಾರಿ ಹೆಚ್ಚಲು ಸಹ ಕಷ್ಟ ಆಗುತ್ತೆ! ಆದರೆ ನಾನು ಈ ಲೇಹ್ಯಾ ತಿನ್ನಲು ಪ್ರಾರಂಭ ಮಾಡಿದ ಮೇಲೆ ತುಂಬಾ ನೋವು ಕಡಿಮೆ ಆಗಿದೆ!

ಹಾಗಾದರೆ ಮೊದಲು ರೆಸಿಪಿ ನೋಡೋಣ!

ಮಾಡುವ ವಿಧಾನ:-

ಒಳ್ಳೆಯ ಕಂಪೆನಿಯ ಜೇನು ತುಪ್ಪ ( Honey ) - 200 ಗ್ರಾಂ
ಅಗಸೆ ಬೀಜ (Flax Seed) - 8 ಟೇಬಲ್ ಚಮಚ
ಬಿಳಿ ಎಳ್ಳು ( White Sesame ) - 4 ಟೇಬಲ್ ಚಮಚ
ಒಣ ದ್ರಾಕ್ಷಿ - ( Dried Raisins ) 3 ಟೇಬಲ್ ಚಮಚ
ಸಿಹಿ ಕುಂಬಳ ಕಾಯಿ ಬೀಜ - ( Pumpkin Seeds ) 3 ಟೇಬಲ್ ಚಮಚ

 

                                                              Honey


 

                                                                another Picture

 


                                                    Agase Bija or Flax Seeds

 


                                                       another Picture

 


                                                           White Til

 

                                                          another Picture

 


                                                     Dried Raisins or Dried Grapes

 

                                                         another Picture
 


 

                                                           Pumpkin Seeds

 


                                                      another Picture

 

 

ಮೊದಲು ಜೇನು ತುಪ್ಪ ಬಿಟ್ಟು ಮಿಕ್ಕ ಎಲ್ಲಾ ಸಾಮಗ್ರಿಗಳನ್ನು ಪುಡಿ ಮಾಡಿ (ಹುರಿಯುವ ಅಗತ್ಯವಿಲ್ಲ) ನಂತರ ಜೇನು ತುಪ್ಪ ಹಾಕಿ ಮತ್ತೊಮ್ಮೆ ರುಬ್ಬಿ , ನೀರು ಸೇರಿಸ ಕೂಡದು. ಅಳತೆ ಕೂಡ ಸರಿಯಾಗಿ ಇಷ್ಟೇ ಹಾಕಿ. ರುಬ್ಬಿದ ನಂತರ ಇದು ಅಂಟಾದ ಲೇಹ್ಯಾ ತರಹ ಆಗುತ್ತದೆ. ಇದನ್ನು ಒಂದು ಬಾಟಲ್ ನಲ್ಲಿ ಹಾಕಿ Fridge ನಲ್ಲಿ ಇಡಿ.

ಪ್ರತಿ ದಿನ ಬೆಳಗ್ಗೆ ತಿಂಡಿ ತಿನ್ನುವ ಮುಂಚೆ 1 ಟೀ ಚಮಚ, ಮತ್ತೆ ಮಧ್ಯಾನ್ಹ ಅಥವಾ ರಾತ್ರಿ ಊಟದ ಮುಂಚೆ ಒಂದು ಟೀ ಚಮಚ, ಹೀಗೆ ದಿನಕ್ಕೆ ಎರಡು ಬಾರಿ ತೆಗೆದು ಕೊಂಡರೆ ಮೊಣ ಕಾಲಿನ ನೋವು, ಮುಂಗಾಲಿನ ನೋವು ಕಡಿಮೆ ಆಗುತ್ತಾ ಬರುತ್ತದೆ!

ಇದನ್ನು ಗಂಡಸರು, ಹೆಂಗಸರು ಯಾರೂ ಬೇಕಾದರೂ ತಿನ್ನಬಹುದು. ವಯಸ್ಸಿನ ಅಂತರವಿಲ್ಲ! ತುಂಬಾ ರುಚಿಯಾಗಿರುತ್ತದೆ. ಹಾಗೆಂದು ಹೆಚ್ಚು ತಿನ್ನುವುದೂ ಬೇಡ. ಪ್ರತಿ ದಿನ ತಪ್ಪದೆ ಎರಡು ಬಾರಿ ತಿಂದರೆ ನಿಮಗೆ 1 ವಾರದಲ್ಲಿ ಫಲಿತಾಂಶ ಗೊತ್ತಾಗುತ್ತೆ! ಮೊಣ ಕಾಲಿನ ಮಾಂಸ ಖಂಡಗಳಿಗೆ ಹೊಸ ಶಕ್ತಿ ಬಂದ ಹಾಗೆ ಅನ್ನಿಸುತ್ತೆ.

ನಾನು ಈ ಲೇಹ್ಯಾ ತಿನ್ನಲು ಪ್ರಾರಂಭ ಮಾಡಿದ ಮೇಲೆ Pain killer Tablet ತೆಗೆದು ಕೊಂಡಿಲ್ಲ! ಮೊದಲೆಲ್ಲಾ ವಾರಕ್ಕೆ ಒಮ್ಮೆ, ಮೂರು ದಿನಕ್ಕೆ ಒಮ್ಮೆ ತೆಗೆದು ಕೊಳ್ಳುತ್ತಾ ಇದ್ದೆ. ನನಗಂತೂ ನೋವು ಕಡಿಮೆ ಆಗಿದೆ! ಈಗ No pain killers!

ಆಯುರ್ವೇದದ ಪ್ರಕಾರ ಜೇನು ತುಪ್ಪ ಮಧು ಮೇಹ ಹೆಚ್ಚು ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೂ ನೀವು Diabetes patients ಆಗಿದ್ದಲ್ಲಿ Sugar level ಮೇಲೆ ಕಣ್ಣಿರಲಿ.

ಟೇಬಲ್ ಚಮಚ, ಟೀ ಚಮಚ ಎರಡರ ಫೋಟೋ ಹಾಕಿದೆ.

ಸಿಹಿ ಕುಂಬಳದ ಬೀಜ ಅಂಗಡಿಯಲ್ಲಿ ಸಿಗುತ್ತೆ. ಆದರೆ ತುಂಬಾ ಜನ ಕಲ್ಲಂಗಡಿ ಹಣ್ಣಿನ ಬೀಜ ಕೊಡುತ್ತಾರೆ‌ ಕಲ್ಲಂಗಡಿ ಬೀಜ ಅಡಿಕೆ ಪುಡಿ, ಖಾರಾ ಚೌ ಚೌ ಗಳಲ್ಲಿ ಹಾಕಿರುತ್ತಾರೆ. ಕಲ್ಲಂಗಡಿ ಬೀಜ ಸಿಹಿ ಕುಂಬಳದ ಬೀಜ ಬೇರೆ ಬೇರೆ.

ಈ ಲೇಹ್ಯಾ ತಿನ್ನುವಾಗ Positive ಮನಸ್ಸಿನಿಂದ ತಿನ್ನಿ. ಮನಸ್ಸಿನಲ್ಲಿ ಅಳುಕಿದ್ದರೆ, ಸಂದೇಹವಿದ್ದರೆ ಇದು ಕೆಲಸ ಮಾಡುವುದಿಲ್ಲ! ಮತ್ತು ಇದರಲ್ಲಿರುವುದು ಎಲ್ಲಾ ಆರೋಗ್ಯಕರವಾದ ಅಂಶಗಳೇ! Pain killer tablet ನ ಹಾಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ! ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ ಅಲ್ಲವೇ?

ನೋವು ಬಹಳ ವರ್ಷದಿಂದ ಇದ್ದರೆ ಇದರ ಪರಿಣಾಮ ಸ್ವಲ್ಪ ನಿಧಾನವಾಗಿ ಆಗಬಹುದು, ಹಾಗೆಂದು ಪ್ರಯತ್ನ ಬಿಡಬೇಡಿ!


---------------------- Hari Om --------------------

Saturday, July 4, 2026

ಶ್ರೀ ಲಕ್ಷ್ಮೀ ನರಸಿಂಹ ಅಷ್ಟೋತ್ತರ ನಾಮಾವಳಿ -- Sri Lakshmi Narasimha Ashtothra Namavali

 

                                                                    Sri Laxmi Narasimha

ಶ್ರೀ ಲಕ್ಷ್ಮೀ ನರಸಿಂಹ ಅಷ್ಟೋತ್ತರ ನಾಮಾವಳಿ


Sri Lakshmi Narasimha Ashtothra Namavali


ಓಂ ನಾರಸಿಂಹಾಯ ನಮಃ
ಓಂ ಮಹಾಸಿಂಹಾಯ ನಮಃ
ಓಂ ದಿವ್ಯ ಸಿಂಹಾಯ ನಮಃ
ಓಂ ಮಹಾಬಲಾಯ ನಮಃ
ಓಂ ಉಗ್ರ ಸಿಂಹಾಯ ನಮಃ
ಓಂ ಮಹಾದೇವಾಯ ನಮಃ
ಓಂ ಸ್ತಂಭಜಾಯ ನಮಃ
ಓಂ ಉಗ್ರಲೋಚನಾಯ ನಮಃ
ಓಂ ರೌದ್ರಾಯ ನಮಃ
ಓಂ ಸರ್ವಾದ್ಭುತಾಯ ನಮಃ || 10 ||
ಓಂ ಶ್ರೀಮತೇ ನಮಃ
ಓಂ ಯೋಗಾನಂದಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ಹರಯೇ ನಮಃ
ಓಂ ಕೋಲಾಹಲಾಯ ನಮಃ
ಓಂ ಚಕ್ರಿಣೇ ನಮಃ
ಓಂ ವಿಜಯಾಯ ನಮಃ
ಓಂ ಜಯವರ್ಣನಾಯ ನಮಃ
ಓಂ ಪಂಚಾನನಾಯ ನಮಃ
ಓಂ ಪರಬ್ರಹ್ಮಣೇ ನಮಃ || 20 ||
ಓಂ ಅಘೋರಾಯ ನಮಃ
ಓಂ ಘೋರ ವಿಕ್ರಮಾಯ ನಮಃ
ಓಂ ಜ್ವಲನ್ಮುಖಾಯ ನಮಃ
ಓಂ ಮಹಾ ಜ್ವಾಲಾಯ ನಮಃ
ಓಂ ಜ್ವಾಲಾಮಾಲಿನೇ ನಮಃ
ಓಂ ಮಹಾ ಪ್ರಭವೇ ನಮಃ
ಓಂ ನಿಟಲಾಕ್ಷಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ದುರ್ನಿರೀಕ್ಷಾಯ ನಮಃ
ಓಂ ಪ್ರತಾಪನಾಯ ನಮಃ || 30 ||
ಓಂ ಮಹಾದಂಷ್ಟ್ರಾಯುಧಾಯ ನಮಃ
ಓಂ ಪ್ರಾಙ್ಞಾಯ ನಮಃ
ಓಂ ಚಂಡಕೋಪಿನೇ ನಮಃ
ಓಂ ಸದಾಶಿವಾಯ ನಮಃ
ಓಂ ಹಿರಣ್ಯಕ ಶಿಪುಧ್ವಂಸಿನೇ ನಮಃ
ಓಂ ದೈತ್ಯದಾನ ವಭಂಜನಾಯ ನಮಃ
ಓಂ ಗುಣಭದ್ರಾಯ ನಮಃ
ಓಂ ಮಹಾಭದ್ರಾಯ ನಮಃ
ಓಂ ಬಲಭದ್ರಕಾಯ ನಮಃ
ಓಂ ಸುಭದ್ರಕಾಯ ನಮಃ || 40 ||
ಓಂ ಕರಾಳಾಯ ನಮಃ
ಓಂ ವಿಕರಾಳಾಯ ನಮಃ
ಓಂ ವಿಕರ್ತ್ರೇ ನಮಃ
ಓಂ ಸರ್ವರ್ತ್ರಕಾಯ ನಮಃ
ಓಂ ಶಿಂಶುಮಾರಾಯ ನಮಃ
ಓಂ ತ್ರಿಲೋಕಾತ್ಮನೇ ನಮಃ
ಓಂ ಈಶಾಯ ನಮಃ
ಓಂ ಸರ್ವೇಶ್ವರಾಯ ನಮಃ
ಓಂ ವಿಭವೇ ನಮಃ
ಓಂ ಭೈರವಾಡಂಬರಾಯ ನಮಃ || 50 ||

 

                                                                      another Picture

ಓಂ ದಿವ್ಯಾಯ ನಮಃ
ಓಂ ಅಚ್ಯುತಾಯ ನಮಃ
ಓಂ ಕವಯೇ ನಮಃ
ಓಂ ಮಾಧವಾಯ ನಮಃ
ಓಂ ಅಧೋಕ್ಷಜಾಯ ನಮಃ
ಓಂ ಅಕ್ಷರಾಯ ನಮಃ
ಓಂ ಶರ್ವಾಯ ನಮಃ
ಓಂ ವನಮಾಲಿನೇ ನಮಃ
ಓಂ ವರಪ್ರದಾಯ ನಮಃ
ಓಂ ಅಧ್ಭುತಾಯ ನಮಃ
ಓಂ ಭವ್ಯಾಯ ನಮಃ
ಓಂ ಶ್ರೀವಿಷ್ಣವೇ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಅನಘಾಸ್ತ್ರಾಯ ನಮಃ
ಓಂ ನಖಾಸ್ತ್ರಾಯ ನಮಃ
ಓಂ ಸೂರ್ಯ ಜ್ಯೋತಿಷೇ ನಮಃ
ಓಂ ಸುರೇಶ್ವರಾಯ ನಮಃ
ಓಂ ಸಹಸ್ರಬಾಹವೇ ನಮಃ
ಓಂ ಸರ್ವಙ್ಞಾಯ ನಮಃ || 70 ||
ಓಂ ಸರ್ವಸಿದ್ಧ ಪ್ರದಾಯಕಾಯ ನಮಃ
ಓಂ ವಜ್ರದಂಷ್ಟ್ರಯ ನಮಃ
ಓಂ ವಜ್ರನಖಾಯ ನಮಃ
ಓಂ ಮಹಾನಂದಾಯ ನಮಃ
ಓಂ ಪರಂತಪಾಯ ನಮಃ
ಓಂ ಸರ್ವಮಂತ್ರೈಕ ರೂಪಾಯ ನಮಃ
ಓಂ ಸರ್ವತಂತ್ರಾತ್ಮಕಾಯ ನಮಃ
ಓಂ ಅವ್ಯಕ್ತಾಯ ನಮಃ
ಓಂ ಸುವ್ಯಕ್ತಾಯ ನಮಃ || 80 ||
ಓಂ ವೈಶಾಖ ಶುಕ್ಲ ಭೂತೋತ್ಧಾಯ ನಮಃ
ಓಂ ಶರಣಾಗತ ವತ್ಸಲಾಯ ನಮಃ
ಓಂ ಉದಾರ ಕೀರ್ತಯೇ ನಮಃ
ಓಂ ಪುಣ್ಯಾತ್ಮನೇ ನಮಃ
ಓಂ ದಂಡ ವಿಕ್ರಮಾಯ ನಮಃ
ಓಂ ವೇದತ್ರಯ ಪ್ರಪೂಜ್ಯಾಯ ನಮಃ
ಓಂ ಭಗವತೇ ನಮಃ
ಓಂ ಪರಮೇಶ್ವರಾಯ ನಮಃ
ಓಂ ಶ್ರೀ ವತ್ಸಾಂಕಾಯ ನಮಃ || 90 ||
ಓಂ ಶ್ರೀನಿವಾಸಾಯ ನಮಃ
ಓಂ ಜಗದ್ವ್ಯಪಿನೇ ನಮಃ
ಓಂ ಜಗನ್ಮಯಾಯ ನಮಃ
ಓಂ ಜಗತ್ಭಾಲಾಯ ನಮಃ
ಓಂ ಜಗನ್ನಾಧಾಯ ನಮಃ
ಓಂ ಮಹಾಕಾಯಾಯ ನಮಃ
ಓಂ ದ್ವಿರೂಪಭ್ರತೇ ನಮಃ
ಓಂ ಪರಮಾತ್ಮನೇ ನಮಃ
ಓಂ ಪರಜ್ಯೋತಿಷೇ ನಮಃ
ಓಂ ನಿರ್ಗುಣಾಯ ನಮಃ || 100 ||
ಓಂ ನೃಕೇ ಸರಿಣೇ ನಮಃ
ಓಂ ಪರತತ್ತ್ವಾಯ ನಮಃ
ಓಂ ಪರಂಧಾಮ್ನೇ ನಮಃ
ಓಂ ಸಚ್ಚಿದಾನಂದ ವಿಗ್ರಹಾಯ ನಮಃ
ಓಂ ಲಕ್ಷ್ಮೀನೃಸಿಂಹಾಯ ನಮಃ
ಓಂ ಸರ್ವಾತ್ಮನೇ ನಮಃ
ಓಂ ಧೀರಾಯ ನಮಃ
ಓಂ ಪ್ರಹ್ಲಾದ ಪಾಲಕಾಯ ನಮಃ
ಓಂ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ || 108 ||

 

                                                             Laxmi Narasimha Swamy


 

OM naarasiMhaaya namaH
OM mahaasiMhaaya namaH
OM divya siMhaaya namaH
OM mahaabalaaya namaH
OM ugra siMhaaya namaH
OM mahaadEvaaya namaH
OM staMbhajaaya namaH
OM ugralOcanaaya namaH
OM raudraaya namaH
OM sarvaadbhutaaya namaH || 10 ||
OM SreematE namaH
OM yOgaanaMdaaya namaH
OM trivikramaaya namaH
OM harayE namaH
OM kOlaahalaaya namaH
OM cakriNE namaH
OM vijayaaya namaH
OM jayavarNanaaya namaH
OM paMcaananaaya namaH
OM parabrahmaNE namaH || 20 ||
OM aghOraaya namaH
OM ghOra vikramaaya namaH
OM jvalanmukhaaya namaH
OM mahaa jvaalaaya namaH
OM jvaalaamaalinE namaH
OM mahaa prabhavE namaH
OM niTalaakShaaya namaH
OM sahasraakShaaya namaH
OM durnireekShaaya namaH
OM prataapanaaya namaH || 30 ||
OM mahaadaMShTraayudhaaya namaH
OM praagnyaaya namaH
OM caMDakOpinE namaH
OM sadaaSivaaya namaH
OM hiraNyaka SipudhvaMsinE namaH
OM daityadaana vabhaMjanaaya namaH
OM guNabhadraaya namaH
OM mahaabhadraaya namaH
OM balabhadrakaaya namaH
OM subhadrakaaya namaH || 40 ||
OM karaaLaaya namaH
OM vikaraaLaaya namaH
OM vikartrE namaH
OM sarvartrakaaya namaH
OM SiMSumaaraaya namaH
OM trilOkaatmanE namaH
OM eeSaaya namaH
OM sarvESvaraaya namaH
OM vibhavE namaH
OM bhairavaaDaMbaraaya namaH || 50 ||
OM divyaaya namaH
OM acyutaaya namaH
OM kavayE namaH
OM maadhavaaya namaH
OM adhOkShajaaya namaH
OM akSharaaya namaH
OM Sarvaaya namaH
OM vanamaalinE namaH
OM varapradaaya namaH
OM adhbhutaaya namaH
OM bhavyaaya namaH
OM SreeviShNavE namaH
OM puruShOttamaaya namaH
OM anaghaastraaya namaH
OM nakhaastraaya namaH
OM soorya jyOtiShE namaH
OM surESvaraaya namaH
OM sahasrabaahavE namaH
OM sarvagnyaaya namaH || 70 ||
OM sarvasiddha pradaayakaaya namaH
OM vajradaMShTraya namaH
OM vajranakhaaya namaH
OM mahaanaMdaaya namaH
OM paraMtapaaya namaH
OM sarvamaMtraika roopaaya namaH
OM sarvataMtraatmakaaya namaH
OM avyaktaaya namaH
OM suvyaktaaya namaH || 80 ||
OM vaiSaakha Sukla bhootOtdhaaya namaH
OM SaraNaagata vatsalaaya namaH
OM udaara keertayE namaH
OM puNyaatmanE namaH
OM daMDa vikramaaya namaH
OM vEdatraya prapoojyaaya namaH
OM bhagavatE namaH
OM paramESvaraaya namaH
OM Sree vatsaaMkaaya namaH || 90 ||
OM Sreenivaasaaya namaH
OM jagadvyapinE namaH
OM jaganmayaaya namaH
OM jagatbhaalaaya namaH
OM jagannaadhaaya namaH
OM mahaakaayaaya namaH
OM dviroopabhratE namaH
OM paramaatmanE namaH
OM parajyOtiShE namaH
OM nirguNaaya namaH || 100 ||
OM nRukE sariNE namaH
OM paratattvaaya namaH
OM paraMdhaamnE namaH
OM saccidaanaMda vigrahaaya namaH
OM lakShmeenRusiMhaaya namaH
OM sarvaatmanE namaH
OM dheeraaya namaH
OM prahlaada paalakaaya namaH
OM Sree LakShmee NarasiMhaaya namaH || 108 ||


Please Recite this Powerful Laxmi Narasimha Astothara regularly and Blessings will come to you automatically in many Forms.


----------------------- Hari Om -------------------




 

 

Friday, July 3, 2026

ದಾನದ ಆರು ಅಂಗಗಳು -- SIX Types of Charity

 

ದಾನದ ಆರು ಅಂಗಗಳು -- SIX Types of 

 Charity

 

                           Dana or Charity

 

ನಾರದನು ಧರ್ಮವರ್ಮ ರಾಜನಿಗೆ, "ದಾನದ ಆರು ಅಂಗಗಳಾವುದೆಂದರೆ.


1) ದಾನಕೊಡುವವನು (ದಾತ), 2) ಪ್ರತಿ ಗೃಹೀತ, (ದಾನ ಪಡೆಯುವವನು),

3) ಶುದ್ಧಿ ಮತ್ತು 4) ಧರ್ಮಯುಕ್ತವಾದ ದೇಯ,(ದಾನ ಕೊಡುವ ವಸ್ತು),

 5) ದೇಶ ಮತ್ತು 6) ಕಾಲ ------ ಇವು ಆರು ದಾನದ ಅಂಗಗಳು.

ರೋಗವಿಲ್ಲದವನು , ಧರ್ಮಾತ್ಮನು,ದಾನ ಕೊಡುವ ಅಪೇಕ್ಷೆ ಉಳ್ಳವನು, ಜೂಜು ಮುಂತಾದ 

ದುರ್ವ್ಯಸನಗಳಿಲ್ಲದವನು, ನಿಂದ್ಯವಲ್ಲದ ಜೀವನೋಪಾಯದ, ಸಾಧನೆಯ ಉದ್ಯೋಗ ಮಾಡುವವನು 

ಆದವನೇ ದಾನಮಾಡಲು ಉತ್ತಮನಾದವನು.


ಈ ಆರು ಗುಣಗಳಿಂದ ಕೂಡಿದವನು ಶ್ರೇಷ್ಠ ದಾನಿ ಎಂದು ಪರಗಣಿಸಲ್ಪಟ್ಟಿದ್ದಾನೆ.

ಸರಳವಾಗಿರದ ವಕ್ರ ಸ್ವಭಾವದವನು, ಶ್ರದ್ಧೆ ಇಲ್ಲದವನು, ಅಶಾಂತಿಯುಕ್ತನು, ವಿನಯವಿಲ್ಲದೆ 

ದುಡುಕಿನ ಸ್ವಭಾವದವನು,ಪುಕ್ಕಲನು,ಸತ್ಯಸಂಧನಲ್ಲದವನು,


ನಿದ್ರೆಯ ವಶವರ್ತಿಯಾದ ತಾಮಸಗುಣದ ದಾನಿಯು ಅಧಮನೆನಿಸುವನು.

ತ್ರಿಕರಣ (ಮನಸ್ಸು ಮಾತು, ಕಾರ್ಯ) ಶುದ್ಧಿ ಇರುವ ತ್ರಿಶುಕ್ಲನು,

ಆದಾಯ ಕಡಿಮೆ ಇರುವವನು, ದಯಾಪರನು, ಇಂದ್ರಿಯ ನಿಗ್ರಹ ಉಳ್ಳವನು, ಯೋನಿದೋಷ ವಿಲ್ಲದ

ಬ್ರಾಹ್ಮಣನು ದಾನಕ್ಕೆ ಸತ್ಪಾತ್ರನಾಗಿದ್ದಾನೆ.

ಪರರಿಗೆ ಬಾಧೆಯಾಗದಂತೆ, ಕ್ಲೇಶರಹಿತವಾಗಿ,ಸ್ವಪ್ರಯತ್ನದಿಂದ ಸಂಪಾದಿಸಿದ ಧನವು ಅಲ್ಪವೇ 

ಆಗಿದ್ದರೂ "ದೇಯ" (ದಾನಕ್ಕೆ ಯೋಗ್ಯ) ಎನಿಸಿಕೊಳ್ಳುತ್ತದೆ.


ಧರ್ಮಸಮ್ಮತವಾಗಿ ಕೊಡುವ ಉದ್ದೇಶದಿಂದ ಯಾವುದನ್ನೇ ದಾನ ಮಾಡಿದರೂ ಅದು "ಧರ್ಮ" 

ಯುಕ್ತವಾಗುವುದು.


ಒಂದು ಸ್ಥಳದಲ್ಲಿ (ದೇಶ), ಅಥವಾ ಕಾಲದಲ್ಲಿ ದುರ್ಲಭವಾದ ಧನವನ್ನು ನ್ಯಾಯವಾಗಿ 

ಕೊಡುವುದಾದರೆ,ಆ ದೇಶ, ಕಾಲಗಳೇ ದಾನಕ್ಕೆ ಅರ್ಹವಾದ ದೇಶ, ಕಾಲಗಳಾಗಿ,"ಶ್ರೇಷ್ಠ" ವಾಗುವುವು.



ಎರಡು ಪಾಕಗಳೆಂದರೆ ಪರಲೋಕದಲ್ಲಿ ಫಲಕೊಡುವುದು ಮತ್ತು ಇಹದಲ್ಲಿ ಫಲಕೊಡುವುದೇ

 ಎರಡು ಪಾಕಗಳು.


ಸತ್ಪುರುಷರಿಗೆ ಕೊಟ್ಟ ಅಲ್ಪದಾನವೂ ಕೂಡ ಪರಲೋಕದಲ್ಲಿ ಉತ್ತಮ ಫಲವನ್ನು ಕೊಡುತ್ತದೆ.


ಅಪಾತ್ರರಿಗೆ ಕೊಟ್ಟ ದಾನವು ಕೆಡುಕಿನಿಂದ ಕೂಡಿದ್ದು ಇಲ್ಲಿಯೇ (ಇಹದಲ್ಲಿ) ಅದರ ಫಲವನ್ನು 

ಅನುಭವಿಸಲ್ಪಡುತ್ತದೆ.

ನಾಲ್ಕು ಪ್ರಕಾಶಗಳೆಂದರೆ, ಧ್ರುವ,ಆಹುಸ್ತ್ರಿಕ,ಕಾಮ್ಯ,ಮತ್ತು ನೈಮಿತ್ತಿಕಗಳು.

 
ವೇದಗಳಲ್ಲಿ ಹೇಳಿರುವಂತೆ, ಅರವಟ್ಟಿಗೆ,ತೋಟ,ಕೆರೆ,ಮೊದಲಾದ ಸರ್ವಜನೋಪಯೋಗಿ ವಸ್ತುಗಳು 

 "ಧ್ರುವದಾನ".

ಮಕ್ಕಳು,ವಿಜಯ,ಐಶ್ವರ್ಯ ಇವುಗಳನ್ನು ಬಳಸಿಕೊಂಡು, ಸ್ತ್ರೀ ಮತ್ತು ಬಾಲಕರಿಗಾಗಿ ಮಾಡುವ 

ದಾನವೇ "ಆಹುಸ್ತ್ರಿಕ" ದಾನ.

ಮನಸ್ಸಿನಲ್ಲಿ ಯಾವುದಾದರೂ ಇಚ್ಛೆಯನ್ನಿಟ್ಟುಕೊಂಡು ಕೊಡುವ ದಾನಕ್ಕೆ "ಕಾಮ್ಯದಾನ" 

ಎನ್ನುತ್ತಾರೆ.



"ನೈಮಿತ್ತಿಕದಾನ" ದಲ್ಲಿ ಮೂರು ವಿಧಗಳಿವೆ.



ಒಂದು ನಿರ್ದಿಷ್ಟ ಕಾಲದಲ್ಲಿ ಕೊಡುವ ದಾನವು "ಕಾಲಾಪೇಕ್ಷ ದಾನ".

 
ಒಂದು ಕಾರ್ಯವನ್ನು ಅಪೇಕ್ಷಿಸಿ ಕೊಡುವ ದಾನವು "ಕ್ರಿಯಾಪೇಕ್ಷದಾನ".

 
ಮತ್ತೊಂದು "ಗುಣಾಪೇಕ್ಷದಾನ".


ಈ ನೈಮಿತ್ತಿಕ ದಾನಕರ್ಮಗಳಿಗೆ ಹೋಮಾದಿಗಳಿಲ್ಲ.


ಇವಲ್ಲದೆ "ಉತ್ತಮ, ಮಧ್ಯಮ, ಕನಿಷ್ಠ" ಎಂಬ "ತ್ರೈವಿಧ್ಯ" ದಾನಕರ್ಮವೂ ಇದೆ.


ಸ್ಕಾಂದ ಪುರಾಣದಿಂದ


------------------ Hari Om ------------------


Wednesday, July 1, 2026

ಗರುಡಾದ್ರಿಗಿರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ -- Garudadrigiri Venkateswara Swamy Temple

 

                                                         Garudadrigiri Venkataramana Swamy

 

                                                                  Padmavathi Devi

 

 ಗರುಡಾದ್ರಿಗಿರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ

Garudadrigiri Venkateswara Swamy Temple
 
Way to Temple 
Garuda Gamba 
 
ಇದು ತುಂಬಾ ಹಳೆಯದಾದ ವೆಂಕಟೇಶ್ವರ ದೇವಸ್ಥಾನ ಆದರೆ 
ಹಲವರಿಗೆ ತಿಳಿದಿಲ್ಲ. ಇದು ಒಂದು ಸಣ್ಣ ಬೆಟ್ಟದ ಮೇಲೆ ಬಹಳ
 ಶಾಂತವಾಗಿದ್ದು ವಿಶಾಲವಾದ ಜಾಗವನ್ನು ಹೊಂದಿದೆ.


ಇದು ಯಲಹಂಕ ಹೊಸ ಪಟ್ಟಣದಿಂದ (Yelahanka New Town ) ಕೇವಲ 3 ಕಿ.ಮೀ ಮತ್ತು ವಿದ್ಯಾರಣ್ಯಪುರದಿಂದ 1 ಕಿ.ಮೀ ದೂರದಲ್ಲಿದೆ.

 

ದಯವಿಟ್ಟು ಈ ದೇವಾಲಯಕ್ಕೆ ಭೇಟಿ ನೀಡಿ ದೇವರ
ಆಶೀರ್ವಾದವನ್ನು ಪಡೆಯಿರಿ; ವಿಶೇಷವಾಗಿ ಶನಿವಾರಗಳು 
ಮತ್ತು ಹಬ್ಬದ ದಿನಗಳಲ್ಲಿ ಇಲ್ಲಿ ಭಾರಿ ಜನಸಂದಣಿ ಇರುತ್ತದೆ.

 

ವಿಳಾಸ : ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ದೊಡ್ಡಬೆಟ್ಟಹಳ್ಳಿ, ಗರುಡಾದ್ರಿಗಿರಿ, ಯಲಹಂಕ ಹೋಬಳಿ- 560097.

 

                                       Anjaneya Swamy


 

                                         Pic-1

                                           Pic-2

 

                                            Pic-3

                                           Pic-4


 

                                           Pic-5

 

This is a very old Lord Venkateswara Temple but Unknown to

many. It is Situated on a small hill very Calm and has Vast

 Space.


It is Just 3 Kms from Yelahanka New Town and 1Kms from

Vidyaranyapura.


Address : Sri Venkateswara Swamy Temple,

Doddabettahalli , Garudadrigiri , Yelahanka Hobli- 560097

 

 

                                       

                                              Pic-6

 

                                          

                                              Pic-7

 

                                   

                                            Pic-8


 

                                                                         Pic-9

 

                                                                            Pic-10


 

                                                                              Pic-11


Please Visit this Temple and get Blessings from the Lord and 

there will be heavy Crowd on especially on Saturdays and 

Festival Days.

 

----------- Hari Om ----------- 

 

 


 
 
 

Monday, June 29, 2026

ತುಪ್ಪದ ಮಹತ್ವ – Importance & Power of Ghee

                                                                          GHEE

 

ತುಪ್ಪದ ಮಹತ್ವ – Importance & Power of 

Ghee

ಖಾಲಿ ಹೊಟ್ಟೆಯಲ್ಲಿ ‘ತುಪ್ಪ’ ತಿಂದರೆ ಏನಾಗುತ್ತದೆ ಗೊತ್ತೇ

 ತುಪ್ಪದ ಬಗ್ಗೆ ಇರುವ ಮಹತ್ವ ತಿಳಿಯಿರಿ.

ಒಂದು ನಿಮಿಷ ಸುಮ್ಮನೆ ಕುಳಿತುಕೊಳ್ಳಿ.ಜೊತೆಗೆ ಮುಂಜಾನೆ ಎದ್ದ ತಕ್ಷಣ ಏನು ಮಾಡುತ್ತೀರಾ?ಎನ್ನುವುದನ್ನು ಮೆಲುಕುಹಾಕಿ.ಸಾಮಾನ್ಯವಾಗಿ ಎಲ್ಲರ ಉತ್ತರ ಒಂದೇ ಆಗಿರಬಹುದು.ನೀರು ಕುಡಿಯುತ್ತೇವೆ,ಹಲ್ಲುಜ್ಜುತ್ತೇವೆ,ವ್ಯಾಯಾಮ ಮಾಡುತ್ತೇವೆ ಎನ್ನುವುದಾಗಿರಬಹುದು.

ಅದೇ ಯಾರಾದರೂ ತುಪ್ಪವನ್ನು ತಿನ್ನುತ್ತೇವೆ ಎಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು? ತುಪ್ಪ ಎಂದರೆ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಬರುವುದು.ಜಿಡ್ಡಿನ ಪದಾರ್ಥ, ಅತಿಯಾದ ಕೊಬ್ಬನ್ನು ಹೊಂದಿರುತ್ತದೆ,ಅದನ್ನು ಮಿತವಾಗಿ ಸೇವಿಸಬೇಕು,ಅತಿಯಾಗಿ ತಿಂದರೆ ಆರೋಗ್ಯ ಹಾಳಾಗುವುದು,ತೂಕ ಹೆಚ್ಚುವುದು ಸೇರಿದಂತೆ ಇನ್ನಿತರ ವಿಚಾರ ಮನಸ್ಸಿಗೆ ಬರಬಹುದು ಅಲ್ಲವೇ?

ಬರೀ ಒಂದೆರಡು ಚಮಚ ತುಪ್ಪದಲ್ಲಿದೆ ಹತ್ತಾರು ಲಾಭ ಆದರೆ ಈ ಲೇಖನದಲ್ಲಿ ತುಪ್ಪ ತಿಂದರೆ ಯಾವೆಲ್ಲಾ ರೋಗವನ್ನು ನಿವಾರಿಸಬಹುದು ಎನ್ನುವ ವಿವರಣೆಯನ್ನು ನೀಡಲಾಗಿದೆ.ಹೌದು, ತುಪ್ಪ ಎಂದರೆ ಅದು ಕೇವಲ ಕೊಬ್ಬಿನ ಪದಾರ್ಥ ಎನ್ನುವುದಕ್ಕೆ ಸೀಮಿತವಾಗಿಲ್ಲ.ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ.

ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು.ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

                                                            another Picture

 

ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಆದರೆ ಇದು ಸತ್ಯ.ತುಪ್ಪದ ಸೇವನೆಯಿಂದ ಯಾವೆಲ್ಲಾ ಸಮಸ್ಯೆಗಳಿಂದ ದೂರ ಇರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ…

ಜೀವಕೋಶದ ಚಟುವಟಿಕೆ ಹೆಚ್ಚುವುದು ಆಯುರ್ವೇದದ ಪ್ರಕಾರ ಖಾಳಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು.ಜೀವಕೋಶವನ್ನು ಪುನಃ ಶ್ಚೇತನಗೊಳಿಸಬೇಕು ಎಂದಾದರೆ ತುಪ್ಪವನ್ನು ಸೇವಿಸಬೇಕು.

ಅಲ್ಲದೆ ದೇಹಕ್ಕೆ ಉತ್ತಮವಾದ ಆರೈಕೆಯನ್ನು ನೀಡುವುದು.ಚರ್ಮದ ಕಾಂತಿ ಹೆಚ್ಚುವುದು ತುಪ್ಪ ಜೀವಕೋಶಗಳ ಪೋಷಣೆ ಮತ್ತು ಪುನರುಜ್ಜೀವನ ಗೊಳಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಆರೋಗ್ಯವನ್ನು ಪಡೆದುಕೊಳ್ಳುತ್ತದೆ.

ತ್ವಚೆಯಲ್ಲಿರುವ ಶುಷ್ಕತೆಯನ್ನು ಹೋಗಲಾಡಿಸಿ,ಸದಾ ಕಾಂತಿ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಸೋರಿಯಾಸಿಸ್‍ನಂತಹ ಚರ್ಮ ರೋಗಗಳನ್ನು ಇದು ತಡೆಯುವುದು.ಸಂಧಿವಾತವನ್ನು ತಡೆಯುತ್ತದೆ ತುಪ್ಪ ನೈಸರ್ಗಿಕವಾದ ಲುಬ್ರಿಕೆಂಟ್ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿದೆ.

 

                                                                           PIC-1


ಹಾಗಾಗಿ ಇದನ್ನು ಕೀಲುಗಳಿಗೆ ಉತ್ತಮ ಆರೈಕೆ ಮಾಡುವುದು.ಸಂಧುಗಳ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಅನಾರೋಗ್ಯಕ್ಕೆ ತುಪ್ಪದ ಲೇಪನವನ್ನು ಮಾಡಬಹುದು. ತುಪ್ಪದ ಸೇವನೆಯಿಂದ ಆಸ್ಟಿಯೊಪೊರೋಸಿಸ್ ಸೇರಿದಂತೆ ಅನೇಕ ಮೂಳೆ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮಿದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ನೆನಪಿನ ಶಕ್ತಿ,ಕಲಿಕೆ,ಜ್ಞಾನ ಗ್ರಹಣ,ಕಾರ್ಯಚಟುವಟಿಕೆಗಳನ್ನು ಸುಧಾರಿಸುತ್ತದೆ.

 

                                                                           PIC-2

 

ಅಲ್ಲದೆ ಬುದ್ಧಿಮಾಂಧ್ಯತೆ ಅಲ್ಝಮೈರ್ ನಂತಹ ಕಾಯಿಲೆ ಬರದಂತೆ ತಡೆಯುವುದು.ತೂಕ ಇಳಿಸುವುದು ಸಾಮಾನ್ಯವಾಗಿ ತೂಕ ಹೆಚ್ಚಿಸಲು ತುಪ್ಪ ಸೇವಿಸಬೇಕು ಎನ್ನುವುದನ್ನು ಕೇಳಿರುತ್ತೀರಿ.ಅದೇ ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ 5-10 ಮಿಲಿಯಷ್ಟು ತುಪ್ಪವನ್ನು ಸೇವಿಸಿದರೆ ನಿಮ್ಮ ಚಯಾಪಚಯ ಕ್ರಿಯೆ ಸುಧಾರಣೆ ಕಾಣುತ್ತದೆ.

ಅಲ್ಲದೆ ಗಣನೀಯವಾದ ತೂಕ ಇಳಿಕೆಯನ್ನು ನೀವು ನಿರೀಕ್ಷಿಸಬಹುದು.ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಅದು ಕೇಶರಾಶಿಯ ಸಂರಕ್ಷಣೆಗೆ ಸಹಾಯವಾಗುತ್ತದೆ.ಕೂದಲಿನ ಫೋಲಿಸೆಲ್ಸ್ ಗಳು ಆರೋಗ್ಯವಾಗಿರುವಂತೆ ಮಾಡುತ್ತದೆ.

 

                                                                           PIC-3

 

ಇದರಿಂದ ಹೊಳಪಿನಿಂದ ಕೂಡಿರುವ ದಟ್ಟವಾದ ಕೂದಲನ್ನು ನೀವು ಹೊಂದಬಹುದು. ಲ್ಯಾಕ್ಟೋಸ್‍ಗಳನ್ನು ಸುಧಾರಿಸುತ್ತದೆ ಕೆಲವರಿಗೆ ಹಾಲು ಅಥವಾ ಹಾಲಿನಿಂದ ತಯಾರಿಸಿರುವ ಉತ್ಪನ್ನಗಳನ್ನು ಸೇವಿಸದಾಗ ಸೂಕ್ತ ರೀತಿಯ ಜೀರ್ಣಕ್ರಿಯೆ ಉಂಟಾಗುವುದಿಲ್ಲ.

ಅದೇ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸ್ವೀಕರಿಸಿದರೆ ಲ್ಯಾಕ್ಟೋಸ್ ಸಮಸ್ಯೆಯು ಸುಧಾರಣೆ ಕಾಣುತ್ತದೆ.ಜೀರ್ಣ ಕ್ರಿಯೆಯೂ ಉತ್ತಮವಾಗಿ ನೆರವೇರುವುದು.ಕ್ಯಾನ್ಸರ್ ನಿಂದ ದೂರ ಇಡುವುದು ನೈಸರ್ಗಿಕವಾದ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನೇಕ ಬಗೆಯ ಕ್ಯಾನ್ಸರ್ ಕಾಯಿಲೆಯಿಂದ ದೂರ ಇರಬಹುದು.


---------- Hari Om ----------