Sunday, December 14, 2025

ಅಚಮನ - ಶುದ್ಧೀಕರಣ ಆಚರಣೆ ---- Achamana - The Purification Ritual

 

ಅಚಮನ - ಶುದ್ಧೀಕರಣ ಆಚರಣೆ

Achamana - The Purification Ritual



                            Achamana Vidhana

 

ಕೇಶವಾಯ ಸ್ವಾಹಾ
ನಾರಾಯಣಾಯ ಸ್ವಾಹಾ
ಮಾಧವಾಯ ಸ್ವಾಹಾ

ಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯಲು ಕಾರಣ. ಶಬ್ದವು ಗಂಟಲಿನಿಂದ ಬರುವ ಕಾರಣ ಅಲ್ಲಿರುವ ವಾಯುವು ಹೊರಕ್ಕೆ ಬಂದಾಗ ತೊಂದರೆಯಾಗದಿರಲಿ, ಶಬ್ದವು ಸುಗಮವಾಗಿ ಗಂಟಲಿನಿಂದ ಬರಲಿ ಎಂಬ ಉದ್ದೇಶದಿಂದ ನಮ್ಮ ಋಷಿ ಮುನಿಗಳು ನಮಗೆ ತೋರಿಸಿದ ಸರಳ ಮಾರ್ಗ.

ಕೇಶವಾಯ ಸ್ವಾಹಾ – ಈ ಮಂತ್ರವು ಗಂಟಲಿನಿಂದ ಹೊರಡುತ್ತದೆ. ಹೀಗೆ ಉಚ್ಚರಿಸುವಾಗ ಗಂಟಲಿಗೆ ಸಂಬಂಧಪಟ್ಟ ಸ್ನಾಯು ಮತ್ತು ನರಗಳಿಗೆ ವ್ಯಾಯಾಮ ಕೊಡುವುದೇ ಈ ಮಂತ್ರದ ಉದ್ದೇಶ.

ನಾರಾಯಣಾಯ ಸ್ವಾಹಾ – ಈ ಮಂತ್ರವು ನಾಲಗೆಯ ಸಹಾಯದಿಂದ ಹೊರಡುತ್ತದೆ.ಈ ಮಂತ್ರ ನಾಲಿಗೆಗೆ ಸಂಬಂಧಪಟ್ಟ ನರಗಳಿಗೆ ವ್ಯಾಯಾಮ ಕೊಡುತ್ತದೆ.

ಮಾಧವಾಯ ಸ್ವಾಹಾ – ಈ ಮಂತ್ರವು ತುಟಿಗಳ ಸಹಾಯದಿಂದ ಹೊರಡುತ್ತದೆ.

ಈ ಮೇಲಿನ ಮಂತ್ರಗಳನ್ನು ಅನೇಕ ಸಾರಿ ಉಚ್ಚಾರ ಮಾಡುವುದರಿಂದ, ಗಂಟಲು, ನಾಲಿಗೆ, ತುಟಿಗಳಿಗೆ ಸಂಬಂದಪಟ್ಟ ಸ್ನಾಯುಗಳಿಗೆ ಏಕಕಾಲದಲ್ಲಿ ವ್ಯಾಯಾಮ ಕೊಟ್ಟಂತಾಗುತ್ತದೆ. ಹೀಗೆ ಅನೇಕ ಸಾರಿ ಜಪಿಸುವುದರಿಂದ ಮುಂದೆ ಹೇಳಬೇಕಾದ

ಮಂತ್ರಗಳು ಶುದ್ದವಾಗಿ ಸ್ಪುಟವಾಗಿ ಹೊರಡುತ್ತದೆ. ಶರೀರಶಾಸ್ತ್ರವು ಏನು ಹೇಳುತ್ತದೋ ಅದನ್ನು ಒಂದು ಆಚರಣೆಯಂತೆ ಆಚರಿಸಲು ಧಾರ್ಮಿಕ ಕಾರಣ ಕೊಟ್ಟು ನಮ್ಮ ಹಿಂದಿನ ಋಷಿ ಮುನಿಗಳು ಕಡ್ಡಾಯವಾಗಿ ಮಾಡಲು ತಿಳಿಸಿದ್ದಾರೆ.

ಪೂಜೆಗೆ ಕುಳಿತ ಬ್ರಾಹ್ಮಣರು ಮಂತ್ರ ಮಾಡುವಾಗ ಪದೇ ಪದೇ ಅಂಗೈಯಲ್ಲಿ ನೀರನ್ನು ಹಾಕಿ ಇದೇ ಮಂತ್ರವನ್ನು ಹೇಳುತ್ತಾರೆ.


ಕಾರಣ ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.

ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯುವ ಕಾರಣ ಅಂಗೈಯಲ್ಲಿ ಇರುವ ವಿದುಚ್ಛಕ್ತಿಯ ಸ್ವಲ್ಪ ಭಾಗ ನೀರಿನಲ್ಲಿ ಬೆರೆಯುತ್ತದೆ, ಆ ನೀರನ್ನು ಕುಡಿದರೆ ಅದು ಹೊಟ್ಟೆಗೆ ಹೋಗಿ ಅಲ್ಲಿರುವ ವಿದ್ಯುತ್ತಿನ ಜೊತೆ ಬೆರೆತು ಶರೀರದಾದ್ಯಂತವೂ ಒಂದೇ ಸಮನೆ ಇರುವಂತೆ ಮಾಡುತ್ತದೆ. ಈ ಕಾರಣದಿಂದ ನೀರನ್ನು ಅಂಗೈಯಲ್ಲಿಯೇ ಹಾಕಿ ಕುಡಿಯಬೇಕು.

 

                                                                    another Picture

 

                                                        ChaturVimshati 24 Keshava Nama

 

Aachamana Vidhi – Keshavaadi 24 Namagalu ( 3 + 21 )


1) Take a Spoonful ( Uddarani ) of Water poured into the Cupped palm of the Right hand then Recite Kesavaaya Swaaha and then SIP it with palm tipped back slightly from the Base of the Thumb in the name of the Lord Keshava.


2) The Same act is Performed again for the second time reciting Narayana Swaaha in the name of Lord Narayana


3) Again the Same act is performed for the Third time reciting Madhavaya Swaaha in the name of Lord Madhava


After the above act is done then remaining 21 Names of Lord Vishnu must be Recited by Touching or Sparsha of various Sensory Organs and Other Parts of the Body which are given as below.


1) Govindaya Namaha ---- Left Hand is Washed

2) Vishnave Namaha ----- Right Hand is Washed

3) Madhusudhanaya Namaha ----- Upper Lip is touched with Right Hand Fingers

4) Trivikramaya Namaha ------ Lower Lip is touched

5) Vaamanaya Namaha ----- Left Cheek is touched

6) Sridharaya Namaha ----- Right Cheek is touched

7) Hrusheekeshaya Namaha ---- both the Hands are touched

8) Padmanabhaya Namaha ---- Sprinkle Water on the Feet

9) Damodaraya Namaha ----- Centre of the Head is touched with the Middle Finger

10) Sankarshanaya Namaha ----- Nose Edge is touched with the Fist

11) Vasudevaya Namaha ---- Right Nostril is touched

12) Pradhyumnaya Namaha ---- Left Nostril is touched

13) Aniruddhaya Namaha ---- Right Eye is touched

14) Purushottamaya Namaha ---- Left Eye is touched

15) Adhokshajaya Namaha ---- Right Ear is touched

16) Narasimhaya Namaha ---- Left Ear is touched

17) Achyuthaya Namaha ---- Navel portion is touched

18) Janardhanaya Namaha – Chest is touched

19) Upendaraya Namaha ---- Head is touched

20) Haraye Namaha ---- Right Shoulder is touched

21) Sri Krishnaya Namaha ---- Left Shoulder is touched

 

                                                              Panch Pela Uddarani

 

ಸಾಯಂ ಸಂಧ್ಯಾವಂದನಂ

ಸಾಯಂಕಾಲದ ಸಂಧ್ಯಾವಂದನೆಯನ್ನು ಉತ್ತರಾಭಿಮುಖವಾಗಿ ಕುಳಿತು ಮಾಡಬೇಕು. ಅರ್ಘ್ಯವನ್ನು ಪಶ್ಚಿಮಾಭಿಮುಖವಾಗಿ ಕೊಡಬೇಕು. ನದೀತೀರದಲ್ಲಿ ಮಾಡುವಾಗ ನೀರನ್ನು ಬಂಡಯಮೇಲೆ ಹಾಕಬೇಕು, ನೀರಿನಲ್ಲಿ ಹಾಕಬಾರದು. ಗಾಯತ್ರೀಜಪವನ್ನು ಪಶ್ಚಿಮಾಭಿಮುಖವಾಗಿ ಮಾಡಬೇಕು.
(ಅಚಮನ, ಪ್ರಾಣಾಯಾಮ, ಸಂಕಲ್ಪಗಳನ್ನು ಪ್ರಾತಃಸಂಧ್ಯಾವಂದನದಂತೆ ಮಾಡಬೇಕು) ……. ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಾಯಂಸಂಧ್ಯಾಮುಪಾಸಿಷ್ಯೇ

(ಆಪೋ ಹಿಷ್ಠಾ ಇತ್ಯಾದಿ ಮಂತ್ರಗಳಿಂದ ಪ್ರಾತಃಸಂಧ್ಯಾವಂದನದಂತೆ ಮಾರ್ಜನವನ್ನು ಮಾಡಬೇಕು)

ಜಲಾಭಿಮಂತ್ರಣಂ :

ಓಂ ಅಗ್ನಿಶ್ಚ ಮಾ ಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯಃ ಪಾಪೇಭ್ಯೋ ರಕ್ಷಂತಾಂ ಯದಹ್ನಾ ಪಾಪಮಕಾರ್ಷಂ ಮನಸಾ ವಾಚಾ ಹಸ್ತಾಭ್ಯಾಂ ಪದ್ಭ್ಯಾಮುದರೇಣ ಶಿಶ್ನಾ ಅಹಸ್ತದವಲುಂಪತು ಯತ್ಕಿಂಚ ದುರಿತಂ ಮಯಿ ಇದಮಹಂ ಮಾಮಮೃತಯೋನೌ ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ ! ಓಂ

(ಅನಂತರ ಪುನರ್ಮಾರ್ಜನಾದಿಗಳನ್ನು ಅರ್ಘ್ಯಪ್ರದಾನದವರೆಗೆ ಪ್ರಾತಃಸಂಧ್ಯೆಯಂತೆ ಆಚರಿಸಬೇಕು)



                                                                              Pic -1 

ಅರ್ಘ್ಯಪ್ರದಾನಂ – ಗಾಯತ್ರೀಜಪಃ :


(ಅಚಮನ, ಪ್ರಾಣಾಯಾಮಗಳನ್ನು ಮಾಡಿ) ಅದ್ಯ ಪೂರ್ವೋಕ್ತೈವಂಗುಣವಿಶೇಷಣ ವಿಶಿಷ್ಟಾಯಾಂ ಶುಭತಿಥೌ ….ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಾಯಂಸಂಧ್ಯಾರ್ಘ್ಯ ಪ್ರದಾನಮಹಂ ಕರಿಷ್ಯೇ (ಎಂದು ಸಂಕಲ್ಪಿಸಿ ಪ್ರಾತಃಸಂಧ್ಯೆಯಂತೆ ಮೂರು ಅರ್ಘ್ಯಗಳನ್ನು, ಕಾಲಾತಿಕ್ರಮವಾಗಿದ್ದಲ್ಲಿ ಪ್ರಾಯಶ್ಚಿತ್ತಾರ್ಘ್ಯವನ್ನೂ ಕೊಡಬೇಕು. ಅನಂತರ ಭೂತೋಚ್ಚಾಟನ, ಆಸನಶುದ್ಧಿ ಆಚರಿಸಿ ಪ್ರಾತಃಸಂಧ್ಯೆಯಂತೆ ಪ್ರಾಣಾಯಾಮ, ಅಂಗನ್ಯಾಸ, ಕರನ್ಯಾಸ, ಧ್ಯಾನ ಇತ್ಯಾದಿಗಳನ್ನು ಮಾಡಿ ಗಾಯತ್ರೀಜಪವನ್ನು ಶಕ್ತ್ಯನುಸಾರ ಮಾಡಬೇಕು.


ಸಂಧ್ಯೋಪಸ್ಥಾನ


ಪಶ್ಚಿಮಾಭಿಮುಖವಾಗಿ ನಿಂತು ಪ್ರಾತಃಸಂಧ್ಯೆಯಂತಯೇ ಕೆಳಗಿನ ಮಂತ್ರಗಳಿಂದ ಆಚರಿಸಬೇಕು.


ಇಮಂ ಮೇ ವರುಣ ಶ್ರುಧೀ ಹವಮದ್ಯಾ ಚ ಮೃಡಯ ತ್ವಾಮವಸ್ಯುರಾ ಚಕೇ
ತತ್ತ್ವಾಯಾಮಿ ಬ್ರಹ್ಮಣಾ ವಂದಮಾನಸ್ತದಾಶಾಸ್ತೇ ಯಜಮಾನೋ ಹವಿರ್ಭಿಃ ಅಹೇಡಮಾನೋ ವರುಣೇಹ ಬೋಧ್ಯುರುಶಂಸ ಮಾ ನ ಆಯುಃ ಪ್ರ ಮೋಷೀಃ ಯಚ್ಚಿದ್ಧಿ ತೇ ವಿಶೋ ಯಥಾ ಪ್ರ ದೇವ ವರುಣ ವ್ರತಂ ಮಿನೀಮಸಿ ದ್ಯವಿದ್ಯವಿ ಯತ್ಕಿಂಚೇದಂ ವರುಣ ದೈವ್ಯೇ ಜನೇಽಭಿದ್ರೋಹಂ ಮನುಷ್ಯಾ೩ಶ್ಚರಾಮಸಿ ಅಚಿತ್ತೀ ಯತ್ತವ ಧರ್ಮಾ ಯುಯೋಪಿಮ ಮಾ ನಸ್ತಸ್ಮಾದೇನಸೋ ದೇವ ರೀರಿಷಃ ಕಿತವಾಸೋ ಯದ್ರಿರಿಪುರ್ನ ದೀವಿ ಯದ್ವಾಘಾ ಸತ್ಯಮುತ ಯನ್ನ ವಿದ್ಮ ಸರ್ವಾ ತಾ ಏಷ್ಯ ಶಿಥಿರೇವ ದೇವಾ ಧಾ ತೇ ಸ್ಯಾಮ ವರುಣ ಪ್ರಿಯಾಸಃ ಓಂ.

ದಿಜ಼್ನಮಸ್ಕಾರ


ಓಂ ನಮಃ ಪ್ರತೀಚೈ ದಿಶೇ ಇತ್ಯಾದಿ ಮಂತ್ರಗಳಿಂದ ಪಶ್ಚಿಮದಿಕ್ಕಿನಿಂದಾರಂಭಿಸಿ ಕ್ರಮವಾಗಿ ದಿಜ಼್ನಮಸ್ಕಾರವನ್ನು ಮಾಡಬೇಕು. ಅನಂತರ ಓಂ ಸಂಧ್ಯಾಯೈ ನಮಃ ಇತ್ಯಾದಿಯಾಗಿ ಸಂಧ್ಯಾದಿದೇವತೆಗಳಿಗೆ ನಮಸ್ಕರಿಸಿ ಗೋತ್ರಾಭಿದಾನವನ್ನು ಮಾಡಬೇಕು.

 

                                                                   Pic -2

 

ಸಮಾಪನಂ :


ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಸಂಧ್ಯಾಕ್ರಿಯಾದಿಷು
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ
ಯತ್ ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ

ಅನೇನ ಸಾಯಂ ಸಂಧ್ಯಾವಂದನೇನ ಭಗವಾನ್ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರಿಯತಾಂ ಪ್ರೀತೋ ವರದೋ ಭವತು ಶ್ರೀ ಕೃಷ್ಣಾರ್ಪಣಮಸ್ತು.


(ಉದ್ಧರಿಣಿ ಯಿಂದ ನೀರನ್ನು ಬಿಟ್ಟು ಎರಡು ಸಲ ಆಚಮನ ಮಡಬೇಕು)


ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯಮಂತ್ರಜಪಂ ಕರಿಷ್ಯೇ


ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ (ಮೂರು ಸಲ) ಅಚ್ಯುತಾನಂತಗೋವಿಂದೇಭ್ಯೋ ನಮಃ

ಕಾಯೇನವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಅನುಸೃತ್ ಸ್ವಭಾವಂ
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ.



--------------------- Hari Om -------------------


 

 


 




 


 

No comments:

Post a Comment