ಆಷಾಢ ಮಾಸದಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸುವುದು ಬಹಳ
ವಿಶೇಷವೆಂದು
ಪರಿಗಣಿಸಲಾಗುತ್ತದೆ.
ಆಷಾಢ ಮಾಸ --- 26th June to 24th July 2025
Ashada Masa - Lord Vishnu
ಆಷಾಢ
ಮಾಸದ ಮಹತ್ವ:
ಜ್ಯೋತಿಷ್ಯದ
ಪ್ರಕಾರ ಇದು ಅಶುಭ ಮಾಸ.
ಹೀಗಾಗಿ,
ಆಷಾಢ ಮಾಸ
ಪ್ರಾರಂಭವಾದ ಬಳಿಕ ಮದುವೆ,
ಗೃಹಪ್ರವೇಶ,
ಉಪನಯನ,
ವಾಹನ ಮತ್ತು
ಜಮೀನು ಕೊಳ್ಳುವುದು, ಹೊಸ
ವ್ಯಾಪಾರ ಪ್ರಾರಂಭ ಮುಂತಾದ
ಕಾರ್ಯಗಳೆಲ್ಲಾ ನಿಷೇಧವಾಗುತ್ತದೆ.
ಇದಕ್ಕೆ ನೂರಾರು
ಕಾರಣಗಳು ಇವೆ. ಆಷಾಢ
ಮಾಸದಲ್ಲಿ ಮಳೆಯ ಆರ್ಭಟ
ಹೆಚ್ಚಿರುತ್ತಿತ್ತು. ಈ
ರೀತಿ ನಿರಂತರವಾದ ಮಳೆ,
ಗಾಳಿಯಿಂದ
ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು.
ಈ ಎಲ್ಲಾ
ಕಾರಣಗಳಿಂದ ಆಷಾಢಮಾಸದಲ್ಲಿ ಶುಭ
ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ
ಶುಭಕಾರ್ಯ ಮಾಡುವುದನ್ನು
ನಿಷೇಧಿಸಿದ್ದರು.
ಆಷಾಢ
ಮಾಸದ ಮಹತ್ವ;
ಆಷಾಢ
ಮಾಸದಲ್ಲಿ ಭಗವಾನ್ ವಿಷ್ಣುವನ್ನು
ಪೂಜಿಸುವುದು ಬಹಳ ವಿಶೇಷವೆಂದು
ಪರಿಗಣಿಸಲಾಗುತ್ತದೆ. ಆಷಾಢ
ಮಾಸದಲ್ಲಿ ಮಡಕೆ, ಕೊಡೆ,
ಉಪ್ಪು,
ನೆಲ್ಲಿಕಾಯಿ
ದಾನ ಮಾಡುವುದರಿಂದ ಅಕ್ಷಯ ಪುಣ್ಯ
ಸಿಗುತ್ತದೆ. ವರ್ಷದ
ಈ ಮಾಸದಲ್ಲಿ ಹೆಚ್ಚಿನ ಯಾಗವನ್ನು
ಮಾಡುವ ನಿಬಂಧನೆಯನ್ನು ಶಾಸ್ತ್ರಗಳಲ್ಲಿ
ಉಲ್ಲೇಖಿಸಲಾಗಿದೆ. ಆಷಾಢ
ಮಾಸದಿಂದ ಮಳೆಗಾಲ ಪ್ರಾರಂಭವಾಗುತ್ತದೆ,
ಅಂತಹ
ಪರಿಸ್ಥಿತಿಯಲ್ಲಿ, ಪರಿಸರದಲ್ಲಿ
ಸೋಂಕಿನ ಅಪಾಯ ಹೆಚ್ಚಾಗುತ್ತದೆ.
ಆದ್ದರಿಂದ ಈ ತಿಂಗಳಲ್ಲಿ ಯಾಗ ಅಥವಾ ಹವನವನ್ನು ಮಾಡುವುದರಿಂದ ಹಾನಿಕಾರಕ ಕೀಟಗಳು ಮತ್ತು ಗಾಳಿಯಿಂದುಂಟಾಗುವ ಸೋಂಕುಗಳು ನಾಶವಾಗುತ್ತವೆ.
ಈ ಮಾಸದಲ್ಲಿ ಗುರು ಪೂರ್ಣಿಮೆಯಂದು ಗುರುವಿನ ಆರಾಧನೆಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದರೊಂದಿಗೆ, ತಂತ್ರ ಮತ್ತು ಶಕ್ತಿಗಾಗಿ ಗುಪ್ತ ನವರಾತ್ರಿಯಲ್ಲಿ ದೇವಿಯ ಆರಾಧನೆಯನ್ನು ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ.
ಆಷಾಢ
ಮಾಸದ ಪೂಜಾ ವಿಧಿ;
ಈ
ಮಾಸದಲ್ಲೇ ಶಿವ ಪಾರ್ವತಿಗೆ
ಅಮರತ್ವದ ರಹಸ್ಯ ಹೇಳಿರುವುದು.
ಗಂಗೆ
ಭೂಮಿಗೆ ಉತ್ತರಾಭಿಮುಖವಾಗಿ
ಹರಿದು ಬಂದಿದ್ದು ಈ ಮಾಸದಲ್ಲಿ.
ಅನುಸೂಯದೇವಿ
ಎಂಬ ಮಹಾ ಪತಿವ್ರತೆ ಈ ಮಾಸದ ನಾಲ್ಕು
ಸೋಮವಾರ ಶಿವ ವ್ರತ ಮಾಡಿದ್ದಳು.
ಅಮರನಾಥನ
ಹಿಮಲಿಂಗ ದರ್ಶನ ಪ್ರತಿ ವರ್ಷ ಈ
ಸಮಯದಲ್ಲೇ ಆರಂಭವಾಗುತ್ತದೆ.
ಪ್ರಥಮ
ಏಕಾದಶಿ ವ್ರತ ಆರಾಧನೆ ಬರುವುದು
ಆಷಾಢದಲ್ಲಿ.
ಆಷಾಢದ
ಶುಕ್ರವಾರಗಳಲ್ಲಿ ಲಕ್ಷ್ಮೀ
ಪೂಜೆಯನ್ನು ವಿಶೇಷವಾಗಿ ಆಚರಿಸುವರು.
ಆ ದಿನ ಸಂಜೆ
ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ.
ಮೈಸೂರು
ಪ್ರಾಂತ್ಯಗಳಲ್ಲಿ ಈ ಆಚರಣೆ
ನಡೆಯುತ್ತದೆ.
ಆಷಾಢ
ಮಾಸದಲ್ಲಿ ಪಠಿಸಬೇಕಾದ ಸೂರ್ಯ
ಮಂತ್ರ;
1)
ಗ್ರಹಣಾಮಾದಿರಾದಿತ್ಯೋ
ಲೋಕ ಲಕ್ಷಣ ಕಾರಕಃ
ವಿಷಮ
ಸ್ಥಾನ ಸಂಭೂತಾಂ ಪೀಡಾಂ ದಹತು ಮೇ
ರವಿ
2) ಓಂ
ಆಕೃಷ್ಣೇನ ರಜಸಾ ವರ್ತಮಾನೋ
ನಿವೇಶಯನ್ನಮೃತಂ ಮರ್ತ್ಯಂಚ
ಹಿರಣ್ಯಯೇನ್
ಸವಿತಾ ರಥೇನ್ ದೇವೋ ಯಾತಿ ಭುವನಾನಿ
ಪಶ್ಯನ್.
------------- Hari Om ----------
No comments:
Post a Comment