Friday, August 1, 2025

Sri Raghavendra Gayatri Mantra

 

                                                              Guru Raghavendra Swamy

 

ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರ


Sri Raghavendra Gayatri Mantra


ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತಾರೆ.ಇದು ಸತ್ಯ ..!ರಾಯರ ಮಹಿಮೆ ಇದು ನೇರವಾಗಿ ನೋಡಿ..!
ಮಹಾ ಮಹಿಮ ಗುರುಗಳು ಮತ್ತು ಜೀವಂತ ದೇವರು.ಗುರುರಾಘವೇಂದ್ರರ ಆರಾಧ್ಯ ದೈವ ಮೂಲರಾಮ ಅಂದರೆ ಮಹಾವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳೇ ಬಂದರು ಶ್ರೀ ಗುರುರಾಯರ ಸ್ಮರಣೆ ಮಾಡಿದ ತಕ್ಷಣವೇ ಕಷ್ಟವು ಮಂಜಿನಂತೆ ಕರಗುವುದು.


ಗುರುರಾಯರನ್ನು ನೆನೆಯಲು ಹಲವಾರು ಮಂತ್ರಗಳಿವೆ ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರವು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ.ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ,ಐದು ಬಾರಿ,ಒಂಭತ್ತು ಬಾರಿ,ಇಪ್ಪತೊಂದು ಬಾರಿ,ಸಾವಿರದ ಎಂಟು ಬಾರಿ ಜಪಿಸಬಹುದು.

ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ಕೆಲವು ನಿಯಮಗಳಿವೆ ಅವುಗಳನ್ನು ನೀವು ಪಾಲಿಸಿದರೆ ಶ್ರೀ ಗುರುರಾಯರು ನಿಮ್ಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಸಂಕಷ್ಟಗಳನ್ನು ಕಳೆಯುತ್ತಾರೆ.ಆ ನಿಯಮಗಳು ಯಾವುವೆಂದರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ಪಠಿಸಲು ದಿನವೂ ಆಗಲಿಲ್ಲವಾದರು ಗುರುರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು.

 

                                                              Sri Raghavendra Swamy

  

ನೀವು ಇದನ್ನೇ ನಲವತ್ತೆಂಟು ದಿನಗಳು ಪಠಿಸಿದರೆ ಈ ಕೆಳಗಿನಂತೆ ಪಾಲಿಸಿ.
ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರದ ವ್ರತವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ಪುಷ್ಯ ನಕ್ಷತ್ರ ದಿನಗಳಲ್ಲಿ ತುಂಬಾ ವಿಶೇಷ ಶಕ್ತಿ ಇರುತ್ತದೆ ಆ ದಿನಗಳಲ್ಲಿ ಶುರು ಮಾಡಿದರೆ ನಿಮಗೆ ಒಳ್ಳೆಯದು.


ದಿನಕ್ಕೆ ಸತತ ಸಾವಿರದ ಎಂಟು ಬಾರಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರವನ್ನು ನಲವತ್ತೆಂಟು ದಿನಗಳವರೆಗೆ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷ ಭಕ್ತರ ಪಾಲಿನ ಆಪದ್ಬಾಂದವ ಶ್ರೀ ಗುರುರಾಘವೇಂದ್ರರು ನಿಮ್ಮ ಕನಸಿನಲ್ಲಿ ಬರುವುದು ಖಚಿತ.ಕನಸಿನಲ್ಲಿ ಅವರು ಬಂದರು ಎಂದರೆ ನಿಮ್ಮ ಸಕಲ ಸಂಕಷ್ಟಗಳು ಕೊನೆಗಾಣುವುದು ಖಚಿತ.

ಓಂ ವೆಂಕಟನಾಥಾಯ ವಿದ್ಮಹೇ
ಸಚಿದಾನಂಧಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ವೆಂಕಟನಾಥಾಯ ವಿದ್ಮಹೇ
ತಿಮ್ಮಣ್ಣ ಪುತ್ರಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ಪ್ರಹಲಾದಾಯ ವಿದ್ಮಹೇ
ವ್ಯಾಸ ರಾಜಾಯ ಧೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್

ಓಂ ಶ್ರೀ ಗುರು ರಾಘವೇಂದ್ರಾಯ ನಮಃ  
 
 
Rayara Avatharagalu
 
 
-------------- Hari Om ------------